ಬೆಂಗಳೂರು: ಪತಿಬೇಕು.ಕಾಮ್ ಸಿನಿಮಾದ ನಿರ್ದೇಶಕ ರಾಕೇಶ್ ಮೇಲೆ ಪ್ರಕರಣವೊಂದು ದಾಖಲಾಗಿ ಸುದ್ದಿಯಾಗಿತ್ತು. ಸಹ ನಿರ್ಮಾಪಕರಿಗೆ ರಾಕೇಶ್ ವಂಚನೆ ಮಾಡಿದ್ದಾರೆ ಅಂತ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಆದರೆ ಈ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ.
ವಿಜಯನಗರದ ಮನೆಯಿಂದ ಅಕ್ಟೋಬರ್ 21ರಂದು ರಾಕೇಶ್ ಅವರನ್ನು ಎಳೆದೊಯ್ದ ನೆಲಮಂಗಲ ಪೊಲೀಸ್ ಕೇಶವ್ ಅಂಡ್ ಟೀಂ ಸೆಟ್ಲ್ ಮೆಂಟ್ ಮಾಡಿಕೊಳ್ಳುವಂತೆ ಧಮ್ಕಿ ಹಾಕಿದ್ದರಂತೆ. ಈ ಹಿಂದೆಯೇ ಚಂದ್ರಾ ಲೇಔಟ್ನಲ್ಲಿ ಹಣಕಾಸು ವಿಚಾರವಾಗಿ ನಿರ್ಮಾಪಕ ಮಂಜುನಾಥ್ಗೆ ರಾಕೇಶ್ 10 ಲಕ್ಷ ರೂ. ಕೊಟ್ಟಿದ್ದು, ಯಾವುದೇ ಹಣ ಕೊಡಬೇಕಾಗಿಲ್ಲ ಅಂದಿದ್ದರು. ಚಂದ್ರಾ ಲೇಔಟ್ ಕೇಸ್ನಲ್ಲಿ ಬೇಲ್ ಪಡೆದಿದ್ದ ಮಂಜುನಾಥ್, ನೆಲಮಂಗಲದಲ್ಲಿ ದೂರು ದಾಖಲಿಸಿದ್ದರು.
ರಾಕೇಶ್ ಅವರನ್ನ ಕರೆದೊಯ್ದಿದ್ದ ನೆಲಮಂಗಲ ಪೊಲೀಸರು ಮನೆಯವರಿಗೆ ಯಾವುದೇ ವಿಚಾರ ತಿಳಿಸಿರಲಿಲ್ಲ. ಕೊನೆಗೆ ರಾಕೇಶ್ ಸಂಬಂಧಿಕರು ಚಂದ್ರಾ ಲೇಔಟ್ ಠಾಣೆಯ ಪೊಲೀಸರ ಮೊರೆ ಹೋಗಿದ್ದರು. ಆಗ ಚಂದ್ರಾ ಲೇಔಟ್ ಠಾಣೆಯ ಪೊಲೀಸರು ನೆಲಮಂಗಲ ಪೊಲೀಸರಿಗೆ ಕರೆ ಮಾಡಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಇದರಿಂದಾಗಿ ನೆಲಮಂಗಲ ಪೊಲೀಸರು ರಾಕೇಶ್ ಅವರಿಂದ ಚೆಕ್ಗೆ ಸೈನ್ ಮಾಡಿಸಿಕೊಂಡು ಬಿಟ್ಟು ಕಳಿಸಿದ್ದರು. ಇದೀಗ ಅಕ್ರಮವಾಗಿ ಕೂಡಿಟ್ಟು, ರೌಡಿ ಶೀಟ್ ಓಪನ್ ಮಾಡುದಾಗಿ ಬೆದರಿಸಿದ್ದ ಎಸ್.ಐ.ಮಂಜುನಾಥ್ ಹಾಗೂ ಪೇದೆ ಕೇಶವ್ ಮೇಲೆ ನಿರ್ದೇಶಕ ರಾಕೇಶ್, ಎಸ್ಪಿ, ಐಜಿ, ಡಿಜಿ, ಐಜಿಪಿ ಅವರಿಗೆ ಹಾಗೂ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಬೆಂಗಳೂರು: ನ್ಯೂಸ್ ಆ್ಯಂಕರ್ ಆಗಿ ಕನ್ನಡಿಗರ ಮನ ಗೆದ್ದಿದ್ದ ಶೀತಲ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಿದ `ಪತಿ ಬೇಕು ಡಾಟ್ ಕಾಮ್’ ಸಿನಿಮಾ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯೊಂದಿಗೆ ಶೀತಲ್ ಶೆಟ್ಟಿ ತಮ್ಮ ಸಿನಿ ಜರ್ನಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ಜೀವನಕ್ಕೆ ನಾನೇ ಸಾರಥಿ
ಖಾಸಗಿ ವಾಹಿನಿಯ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರೂ ಜೀವನದಲ್ಲಿ ಭಿನ್ನ ಅನುಭವ ಪಡೆಯಲು ಹೊಸ ಆಯ್ಕೆ ಮಾಡಬೇಕಾಯ್ತು. ಮೊದಲು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ಅವಕಾಶ ಲಭಿಸಿದ್ದು ನನ್ನ ಅದೃಷ್ಟ. ನಿರೂಪಕಿಯಾಗಿ ವೃತ್ತಿ ಜೀವನದಲ್ಲಿ ತಕ್ಕಮಟ್ಟಿಗೆ ಹೆಸರು ಪಡೆದು, ಬಳಿಕ ಸಿನಿಮಾ ರಂಗಕ್ಕೆ ಪ್ರವೇಶದ ಮಾಡಿದೆ. ಆದರೆ ಎರಡು ರಂಗಗಳು ಉತ್ತಮವಾಗಿದ್ದು, ಜನರು ತಮ್ಮನ್ನು ಸ್ವೀಕರಿಸಿ ನಡೆದರೆ ಮಾತ್ರ ನಮ್ಮ ಯಶಸ್ಸು ನಿರ್ಧಾರವಾಗುತ್ತದೆ. ನನ್ನ ಜೀವನಕ್ಕೆ ನಾನೇ ಸಾರಥಿಯಾಗಿದ್ದು, ನನ್ನ ವೃತ್ತಿ ಜೀವನದ ಬದಲಾವಣೆಯಲ್ಲೂ ನನ್ನ ನಿರ್ಧಾರ ಅಂತಿಮವಾಗಿತ್ತು. ಇದಕ್ಕೆ ಕುಟುಂಬ ಬೆಂಬಲವೂ ಇದೆ. ಸದ್ಯ ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ ಎಂದ್ರು.
ಟೈಟಲ್ ನಂದೇ ಐಡಿಯಾ
ಪತಿಬೇಕು ಡಾಟ್ ಕಾಮ್ ಸಿನಿಮಾ ಟೈಟಲ್ ಕೊಟ್ಟಿದ್ದು ನಾನೇ. ಸಿನಿಮಾ ಕುರಿತು ಯೋಚನೆ ಮಾಡುವ ವೇಳೆ ಕೆಲ ಟೈಟಲ್ಗಳು ಹೊಳೆಯಿತು. ಇದನ್ನು ನಿರ್ದೇಶಕರಿಗೆ ತಿಳಿಸಿದೆ. ಅವ್ರು ಕೇಳಿದ ಕೂಡಲೇ ಒಪ್ಪಿಕೊಂಡ್ರು. ಉಳಿದಂತೆ ಎರಡು ಮೂರು ಸಿನಿಮಾಗಳಿಗೆ ಟೈಟಲ್ ನೀಡಿದ್ದು ಮುಂದಿನ ದಿನಗಳಲ್ಲಿ ಟೈಟಲ್ ಶೀತಲ್ ಅಂತಾನೇ ಕರೆಯಬಹುದು ಎಂದು ಹೇಳಿ ನಸುನಕ್ಕರು.
ಸಿನಿಮಾ ಕ್ಷೇತ್ರಕ್ಕೆ ಪ್ರವೇಶದ ಮಾಡಿದ ಬಳಿಕ ಕೆಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದೆ. ಆದರೆ ಇಷ್ಟು ಬೇಗ ಇಂತಹ ಮಹಿಳಾ ಪ್ರಧಾನ ಚಿತ್ರದಲ್ಲಿ ಅವಕಾಶ ಲಭಿಸುತ್ತದೆ ಎಂದುಕೊಂಡಿರಲಿಲ್ಲ. ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ. ಪತಿ ಬೇಕು ಡಾಟ್ ಕಾಮ್ ಸಿನಿಮಾ ಟೈಟಲ್ ಕೇಳುಗರಿಗೆ ನಗು ತಂದರೂ ಸಿನಿಮಾದಲ್ಲಿ ಒಂದು ಉತ್ತಮ ಸಂದೇಶ ಇದೆ. ಪ್ರತಿಯೊಂದು ಮನೆಯಲ್ಲೂ ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎಂಬ ಅಂಶ ಪ್ರಮುಖವಾದದ್ದು, ಇದರ ಹಿನ್ನೆಲೆಯಲ್ಲಿ ಕಥೆ ಸಿದ್ಧವಾಗಿದ್ದು, ಮದುವೆಯೇ ಅಂತಿಮ ಎಂಬ ಭಾವನೆ ಹೊಂದಿರುವ ಯುವಕ ಅಥವಾ ಯುವತಿಯರು ನೋಡಲೇಬೇಕು ಎಂದರು.
ಚಿತ್ರದ ‘ಯಾಕಪ್ಪ ದೇವ್ರೇ’ ಹಾಡು ಹಾಗೂ ನನ್ನ ಡೈಲಾಗ್ ಜನರಿಗಿಷ್ಟವಾಗಿ ಎಲ್ಲೆಡೆ ಹರಿದಾಡುತ್ತಿದೆ. ಚಿತ್ರದ ಈ ಅಂಶಗಳು ಭರಪೂರ ಪ್ರಚಾರ ನೀಡುತ್ತಿದ್ದು, ನಾನು ಸಹ ಸಿನಿಮಾ ನೋಡುವ ವೇಳೆ ಎಷ್ಟು ಮನರಂಜನೆಯಿದೆ? ಖುಷಿ ಕೊಡುತ್ತಾ ಎಂದು ನೋಡುತ್ತೇನೆ. ನಮ್ಮ ಸಿನಿಮಾದಲ್ಲೂ ಯಾವುದೇ ಬೋರ್ ಹೊಡೆಸುವ ಅಂಶಗಳಲಿಲ್ಲ. ಚಿತ್ರ ಕಥೆಯೇ ಅದ್ಭುತವಾಗಿದ್ದು, ಧೈರ್ಯದಿಂದ ಎಲ್ಲ ಸಮಸ್ಯೆಗಳನ್ನು ಎದುರಿಸಿ ಜೀವನ ನಡೆಸುತ್ತಿರುವ ಪ್ರತಿ ಹೆಣ್ಣು ಮಕ್ಕಳು ಸಿನಿಮಾದಲ್ಲಿದ್ದಾರೆ. ಅದ್ದರಿಂದ ಸಿನಿಮಾ ಬಂದು ನೋಡಿ ಎಂದು ಆತ್ಮವಿಶ್ವಾಸದಿಂದ ಹೇಳುತ್ತೇನೆ ಎಂದು ಮನವಿ ಮಾಡಿದ್ರು.
ಬೆಳಗಾಗುವ ಮುನ್ನ ಟಿಫನ್ ಬಾಕ್ಸ್ ಕಟ್ಟಿ ಗಾರ್ಮೆಂಟ್ಸ್ ಹೊರಡುವ, ಮನೆಯ ಜವಾಬ್ದಾರಿ ನಿರ್ವಹಿಸುವ ಮಹಿಳೆಯರು, ಮಾತು ಆಡದೇ ಸಮಾಜದಲ್ಲಿ ನಗುತ್ತಲೇ ಸಾಗುವ ಎಲ್ಲಾ ಹೆಣ್ಣುಮಕ್ಕಳಿಗೆ ಈ ಸಿನಿಮಾ ಖುಷಿ ನೀಡುತ್ತದೆ. ಖಂಡಿತ ನಮ್ಮ ಸಿನಿಮಾದಲ್ಲಿ ಸಿನಿ ವೀಕ್ಷಕರು ಸ್ವೀಕರಿಸುವ ನಿರೀಕ್ಷೆ ಇದೆ. ಕಾಮಿಡಿ ಜೊತೆ ಕಮರ್ಷಿಲ್ ಅಂಶಗಳು ಮೂಡಿಬಂದಿದೆ. ಇದಕ್ಕೆ ನನ್ನ ಡೈಲಾಗ್ ಸಾಥ್ ನೀಡಿದ್ದು, ಆದ್ರೆ ಸಿನಿಮಾದಲ್ಲಿ ಯಾವುದೇ ಡೈಲಾಗ್ ಡಬಲ್ ಮಿನಿಂಗ್ ಅರ್ಥ ನೀಡುವುದಿಲ್ಲ. ಕುಟುಂದ ಎಲ್ಲಾ ಸದಸ್ಯರು ಕುಳಿತು ನೋಡುವ ಸಿನಿಮಾವಾಗಿದೆ. ಮುಂದೇ ಅಭಿಜ್ಞಾನ, ಚೇಸ್, ಗೂಢಾಚಾರಿ ಧರಮಣಿ, ಕಥಾ ಸಂಗಮ ಸೇರಿದಂತೆ ಸಾಲು ಸಾಲು ಸಿನಿಮಾಗಳು ಕೈಲಿದೆ. ಆದ್ರೆ ಜನರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದುನೋಡಬೇಕಿದೆ ಎಂದ್ರು.
ನೇರ ನುಡಿಯಾದ್ರು ಹಸನ್ಮುಖಿಯಾಗಿ ಕಾಣಿಕೊಳ್ಳುವ ನಟಿ ಶೀತಲ್ ಶೆಟ್ಟಿ ಆ್ಯಕರಿಂಗ್ಗೆ ಗುಡ್ ಬೈ ಹೇಳಿದ ಬಳಿಕ ಮತ್ತೊಮ್ಮೆ ತಮ್ಮದೇ ನಟನೆಯ ಪತಿಬೇಕು ಡಾಟ್ ಕಾಮ್ ಚಿತ್ರದ ನಿರ್ದೇಶಕರನ್ನು ಸಂದರ್ಶನ ಮಾಡಿದ್ದಾರೆ. ಪಬ್ಲಿಕ್ ಟಿವಿಯ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಕೇಶ್ ಅವರನ್ನು ಶೀತಲ್ ಮಾತನಾಡಿಸಿ ಚಿತ್ರದ ಇಂಟ್ರೆಸ್ಟಿಂಗ್ ಕಥೆಯನ್ನು ರಿವಿಲ್ ಮಾಡಿಸಿದ್ದಾರೆ.
ವಿಭಿನ್ನ ಟೈಟಲ್ ಮೂಲಕವೇ ಗಮನ ಸೆಳೆದಿರುವ ಪತಿಬೇಕು ಡಾಟ್ಕಮ್ ಸಿನಿಮಾ ನಿರ್ದೇಶಕನಾಗಿರುವುದು ನನಗೆ ಹೆಮ್ಮೆಯ ಅಂಶವಾಗಿದ್ದು, ಕುಟುಂಬ ಪ್ರಧಾನ ಸಿನಿಮಾ ಮಾಡಿದ ಗೌರವ ಈ ಸಿನಿಮಾ ನೀಡುವ ವಿಶ್ವಾಸವಿದೆ. ಏಕೆಂದರೆ ಈ ಹಿಂದಿನ ಸಿನಿಮಾ ನನ್ನ ತಾಯಿ, ಕುಟುಂಬದೊಂದಿಗೆ ನೋಡಲು ಸಾಧ್ಯವಾಗಿರಲಿಲ್ಲ. ಅದ್ದರಿಂದ ಕುಟುಂಬದ ಎಲ್ಲರೊಟ್ಟಿಗೆ ಕುಳಿತು ನೋಡುವಂತಹ ಯೋಚನೆಯಿಂದ ಸಿನಿಮಾ ಕಥೆ ಮೂಡಿ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು ನಿರ್ದೇಶಕ ರಾಕೇಶ್.
ಪತಿಬೇಕು ಡಾಟ್ ಕಮ್ ಕಥೆಯೇ ಸಿನಿಮಾಗೆ ಜೀವ:
ಸಿನಿಮಾ ಪ್ರಮುಖ ಪಾತ್ರದ ಕುರಿತು ಯಾರ ಆಯ್ಕೆ ಎಂಬ ಯೋಚನೆ ಬಂದ ಕೂಡಲೇ ನನಗೆ ಮೊದಲು ನೆನಪು ಬಂದಿದ್ದು ಶೀತಲ್ ಅವ್ರು, ಏಕೆಂದರೆ ಕರ್ನಾಟಕದ ಮನೆ ಹುಡುಗಿಯಾಗಿ ಶೀತಲ್ ಹೆಸರು ಪಡೆದಿದ್ದಾರೆ. ಕಥೆಗೂ ಅವರ ಆಯ್ಕೆ ಸೂಕ್ತ ಎನಿಸಿದ್ದರಿಂದ ಸಿನಿಮಾ ಜರ್ನಿ ಆರಂಭವಾಯ್ತು. ಚಿತ್ರಕಥೆಯೇ ಸಿನಿಮಾದ ಹೀರೋ ಆಗಿದ್ದು, ಎಲ್ಲ ಪಾತ್ರಗಳು ಉತ್ತಮವಾಗಿ ಮೂಡಿಬಂದಿದೆ. ಸದ್ಯ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ನಿರ್ದೇಶಕನಾಗಿ ಕಥೆಯ ಮೇಲಿನ ಭರವಸೆಯೇ ಇಷ್ಟು ಬೇಗ ಚಿತ್ರ ಮೂಡಿಬರಲು ಕಾರಣ. ಸಿನಿಮಾ ಅಭಿಮಾನಿಗಳು ಚಿತ್ರ ನೋಡಿ ಹೊಸ ಪ್ರಯತ್ನಕ್ಕೆ ಬೆಂಬಲ ನೀಡುವ ನಂಬಿಕೆ ಎಂದು ಅನುಭವ ಹಂಚಿಕೊಂಡರು.
ಚಿತ್ರದ ಟೀಸರ್, ಹಾಡು ಈಗಾಗಲೇ ಜನರಿಗೆ ಇಷ್ಟವಾಗಿದ್ದು, ಎಲ್ಲೆಡೆ ಕೇಳಿ ಬರುತ್ತದೆ. ಚಿತ್ರದ ಕ್ಯಾಮೆರಾಮನ್ ಯೋಗಿ ಪ್ರತಿಯೊಂದು ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ. ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನೀಡಿದ್ದು, ವಿಜಯ್ ಎಂ ಕುಮಾರ್ ಸಂಕಲನವಿದೆ. ಚಿತ್ರ ಪ್ರಮುಖ ಪಾತ್ರದಲ್ಲಿರುವ ಕೃಷ್ಣ ಅಡಿಗ, ಅರುಣ್ ಗೌಡ ಅನುಭವಿ ತಂಡವಿದೆ. ಅಲ್ಲದೇ ಸೆನ್ಸರ್ ಬೋರ್ಡ್ನಲ್ಲಿ ಸಿನಿಮಾದ ಒಂದು ದೃಶ್ಯಕ್ಕೂ ಕತ್ತರಿ ಪ್ರಯೋಗ ಮಾಡದೆ, ಒಂದು ಮ್ಯೂಟ್ ಮಾಡದೇ ಪ್ರಮಾಣ ಪತ್ರ ನೀಡಿ ಹೆಗ್ಗಳಿಕೆಯೂ ಚಿತ್ರತಂಡಕ್ಕಿದೆ.
ನಮ್ಮ ಹೊಸ ಪ್ರಯತ್ನದ ಸಿನಿಮಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಅವರು ಹಾಡು, ಟೀಸರ್ ಬಿಡುಗಡೆ ಮಾಡಿ ಬೆಂಬಲ ನೀಡಿದ್ದಾರೆ. ಇಂತಹ ಸ್ಟಾರ್ಗಳು ಚಿತ್ರದ ಬಗ್ಗೆ ವಿಶ್ವಾಸ ಮಾತು ಆಡಿದ್ದು ಹೆಚ್ಚಿನ ಸ್ಫೂರ್ತಿ ನೀಡಿದೆ ಎಂದರು.