Tag: Parliamentary Meeting

  • ಪಾರ್ಟಿ ಹೆಸರಿನಲ್ಲಿ ಗೆಲ್ಲುವ ಭ್ರಮೆ ಬಿಟ್ಟು ಬಿಡಿ: ನೂತನ ಸಂಸದರಿಗೆ ಮೋದಿ ಪಾಠ

    ಪಾರ್ಟಿ ಹೆಸರಿನಲ್ಲಿ ಗೆಲ್ಲುವ ಭ್ರಮೆ ಬಿಟ್ಟು ಬಿಡಿ: ನೂತನ ಸಂಸದರಿಗೆ ಮೋದಿ ಪಾಠ

    – ಸೇವಾ ಭಾವನೆಯಿದ್ದರೆ ಮಾತ್ರ ಜನರು ನಮ್ಮನ್ನು ಸ್ವೀಕರಿಸುತ್ತಾರೆ
    – ನನ್ನ ರೆಕಾರ್ಡ್ ಅನ್ನು ನಾನೇ ಮುರಿದಿದ್ದೇನೆ
    – ಅಹಂಕಾರದಿಂದ ದೂರವಿದ್ರೆ ಅಧಿಕಾರ

    ನವದೆಹಲಿ: ಪಾರ್ಟಿ ಹೆಸರಿನಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ಭ್ರಮೆಯಲ್ಲಿ ಇದ್ದಾರೆ. ಇದು ಬಹಳ ದಿನಗಳವರೆಗೆ ನಡೆಯಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಗೆಲ್ಲುತ್ತೇನೆ ಎನ್ನುವು ಬೇಡ. ನೀವು ಹೀಗೆ ನಿರ್ಲಕ್ಷ್ಯವಹಿಸಿದರೆ ಜನರು ಗೆಲುವು ಸಾಧಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

    ದೆಹಲಿ ಸಂಸತ್ ಹಾಲ್‍ನಲ್ಲಿ ನಡೆದ ಎನ್‍ಡಿಎ ಸೂತನ ಸಂಸದರ ಸಭೆಯಲ್ಲಿ ಮಾತನಾಡಿದ ಅವರು, ಅಹಂಕಾರದಿಂದ ದೂರ ಇರುತ್ತೇವೆಯೋ ಅಲ್ಲಿಯವರೆಗೂ ಗೆಲುವು ಸಾಧಿಸುತ್ತೇವೆ. ಎಲ್ಲರೂ ಒಮ್ಮತದಿಂದ ನನ್ನನ್ನು ಪ್ರಧಾನಿಯಾಗಿ ಮತ್ತು ಎನ್‍ಡಿಎ ಸಂಸದೀಯ ನಾಯಕನಾಗಿ ಆಯ್ಕೆ ಮಾಡಿದ್ದೀರಿ. ನಿಮಗೆ ನನ್ನ ಧನ್ಯವಾದಗಳು ಎಂದು ಸಭೆಯಲ್ಲಿ ಸೇರಿದ್ದ ನಾಯಕರಿಗೆ ತಿಳಿಸಿದರು.

    ಎನ್‍ಡಿಎಗೆ ಪ್ರಚಂಡ ಬಹುಮತ ಸಿಕ್ಕಿದೆ. ಮತದಾರರ ಆಶೀರ್ವಾದದಿಂದ ನಾವು ಮುನ್ನಡೆಯಬೇಕು. ದಿನದಿಂದ ದಿನಕ್ಕೆ ಭಾರತದ ರಾಜಕೀಯ ಪ್ರಭುದ್ಧವಾಗುತ್ತಿದೆ. ಸೇವಾ ಭಾವನೆಯಿದ್ದರೆ ಮಾತ್ರ ನಮ್ಮನ್ನು ಜನರು ಸ್ವೀಕರಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಸೆಂಟ್ರಲ್ ಹಾಲ್‍ನಲ್ಲಿ ಸೇರಿರುವುದು ಸಾಮಾನ್ಯ ವಿಷಯಕ್ಕಲ್ಲ. ನಾವು ನವ ಭಾರತ ನಿರ್ಮಾಣಕ್ಕೆ ಮುಂದಾಗಬೇಕಿದೆ. ಈ ಯಾತ್ರೆ ಇಲ್ಲಿಂದಲೇ ಆರಂಭವಾಗಬೇಕಿದೆ. ದೇಶ ರಾಜಕೀಯದಲ್ಲಿ ಬದಲಾವಣೆ ಬರುತ್ತವೆ. ಇಂತಹ ಬದಲಾವಣೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ ಎಂದು ತಿಳಿಸಿದರು.

    ಭಾರತದ ಚುನಾವಣೆಯ ಮೇಲೆ ವಿಶ್ವದ ಅನೇಕ ದೇಶಗಳು ಗಮನ ಕೇಂದ್ರಿಕರಿಸಿದ್ದವು. ಚುನಾವಣೆ ಯಶಸ್ವಿಯಾಗಿ ನಡೆಸಲು ಚುನಾವಣಾ ಅಧಿಕಾರಿಗಳು, ಸೈನಿಕರು, ಸಿಬ್ಬಂದಿ ಶ್ರಮಿಸಿದರು. ಇದಕ್ಕೆ ಸಾಕ್ಷಿಯಾದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

    ಈ ಹಿಂದೆ ನಡೆದ ಅನೇಕ ಚುನಾವಣೆಯಲ್ಲಿ ಸೋಲು, ಗೆಲುವು ನೋಡಿದ್ದೇನೆ. ಆದರೆ ಈ ಬಾರಿ ನಡೆದ ಚುನಾವಣೆ ಬಳಿಕ ನಾನು ತೀರ್ಥಯಾತ್ರೆ ಮಾಡಿದೆ. ಸ್ವಾತಂತ್ರ್ಯ ಭಾರತ ನಂತರ ಭಾರೀ ಪ್ರಮಾಣದಲ್ಲಿ ಮತದಾನವಾಗಿದೆ. ಮಹಿಳೆಯರು, ತಾಯಂದಿರೂ ತಮ್ಮ ಜವಾಬ್ದಾರಿ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    2014ರ ಫಲಿತಾಂಶಕ್ಕಿಂತ ಈ ಬಾರಿ ಮತ್ತಷ್ಟು ಹೆಚ್ಚಿನ ಸಾಧನೆ ಮಾಡಿದ್ದೇವೆ. ಈ ಮೂಲಕ ನನ್ನ ರೆಕಾರ್ಡ್ ಅನ್ನು ನಾನೇ ಮುರಿದಿದ್ದೇನೆ. ಹಿಂದಿನಿಗಿಂತ 2014ರಲ್ಲಿ ಮಹಿಳಾ ಸಂಸದರ ಸಂಖ್ಯೆ ಹೆಚ್ಚಾಗಿತ್ತು. ಈ ಬಾರಿ ಅವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಇಂತಹ ಅನೇಕ ಮಹತ್ವದ ಬದಲಾವಣೆಗೆ ನಾವು ಸಾಕ್ಷಿಯಾಗಿದ್ದೇವೆ ಎಂದು ತಿಳಿಸಿದರು.

    ಮಹಾಮೈತ್ರಿ ವಿರುದ್ಧ ಗುಡುಗಿದ ಪ್ರಧಾನಿ ಮೋದಿ, ನಮ್ಮ ವಿರುದ್ಧ ಮೈತ್ರಿಯ ನಿರ್ಮಾಣವಾದರೂ ಸಮರ್ಥವಾಗಿ ಎದುರಿಸಿದ್ದೇವೆ. ಹೀಗೆ ಎನ್‍ಡಿಎನ ಎಲ್ಲಾ ಪಕ್ಷಗಳು ಒಟ್ಟಾಗಿ ಸಾಗಬೇಕು. ದೇಶದ ವಿಕಾಸಕ್ಕೆ ಶ್ರಮಿಸಬೇಕು ಎಂದರು.

    ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೂ ಮುನ್ನ ಎನ್‍ಡಿಎ ಮೈತ್ರಿ ಪಕ್ಷಗಳ ನಾಯಕರು ನೂತನ ಸಂಸದರು ಮೋದಿ ಪರ ಜೈಕಾರ ಕೂಗಿದರು.

  • ಇಂದಿರಾಗಾಂಧಿ ಅವಧಿಯನ್ನು ಪ್ರಸ್ತಾಪಿಸಿ ಸಂಸದೀಯ ಸಭೆಯಲ್ಲಿ ಭಾವುಕರಾದ ಮೋದಿ

    ಇಂದಿರಾಗಾಂಧಿ ಅವಧಿಯನ್ನು ಪ್ರಸ್ತಾಪಿಸಿ ಸಂಸದೀಯ ಸಭೆಯಲ್ಲಿ ಭಾವುಕರಾದ ಮೋದಿ

    ನವದೆಹಲಿ: ವಿರೋಧಿಗಳ ನಕಾರತ್ಮಕ ಟೀಕೆಗಳನ್ನು ನಿರ್ಲಕ್ಷಿಸಿ, ಯುವ ಮತದಾರರನ್ನು ಪಕ್ಷದತ್ತ ಸೆಳೆಯಲು ಗಮನಹರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸದರಲ್ಲಿ ಕೇಳಿಕೊಂಡಿದ್ದಾರೆ.

    ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಪ್ರಕಟವಾದ ಎರಡು ದಿನದ ಬಳಿಕ ಪಕ್ಷದ ಸಂಸದೀಯ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಆರಂಭದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು. ಈ ಗೆಲುವು ಬಿಜೆಪಿ ಪಕ್ಷಕ್ಕೆ ಅತಿದೊಡ್ಡ ಗೆಲುವಾಗಿದೆ ಎಂದು ಹೇಳಿ ಮುಂದಿನ ಗೆಲುವುಗಳ ಬಗ್ಗೆ ಗಮನಹರಿಸಿ ಎಂದು ಬಿಜೆಪಿ ನಾಯಕರಿಗೆ ಸೂಚಿಸಿದ್ದಾರೆ.

    ಅಲ್ಲದೇ ಈ ಗೆಲುವಿನೊಂದಿಗೆ ನಾವು 19 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಇಂದಿರಾ ಗಾಂಧಿ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ 18 ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿತ್ತು. ಇದೀಗ ನಾವು ಆದನ್ನೂ ಮೀರಿದ ಸಾಧನೆ ಮಾಡಿದ್ದು, 19 ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದ್ದೇವೆ. 1984ರಲ್ಲಿ ಭಾರತೀಯ ಜನತಾ ಪಕ್ಷ ಕೇವಲ 2 ಸ್ಥಾನಗಳಲ್ಲಿ ಮಾತ್ರ ಜಯಿಸಿತ್ತು. ಅಂದಿನಿಂದ ಇಂದಿನವರೆಗೂ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಗಳಾಗಿದೆ. 2 ಸ್ಥಾನಗಳಿಂದ ಆರಂಭಿಸಿದ ನಾವು ಇಂದು 19 ರಾಜ್ಯಗಳಲ್ಲಿ ಅಧಿಕಾರ ಪಡೆದಿದ್ದೆವೆ ಎಂದು ಹೇಳಿದರು. ಈ ರೀತಿ ಮಾತನಾಡುವಾಗ ಪ್ರಧಾನಿ ಭಾವುಕರಾಗಿದ್ದರು ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ.

    ಪಕ್ಷ ಸಂಸದೀಯ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಜೆಪಿ ಹಿರಿಯ ನಾಯಕ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಆನಂತ್ ಕುಮಾರ್, ವಿರೋಧಿ ಪಕ್ಷಗಳ ಟೀಕೆ, ಹಾಗೂ ಅಭಿಪ್ರಾಯಗಳಿಂದ ಪಕ್ಷದ ಕಾರ್ಯಕರ್ತರು ಹಿಂಜರಿಯಬಾರದು. ದೇಶದ ತಳ ಮಟ್ಟದ ಕಾರ್ಯಕರ್ತರ ನಡುವೆ ಕಾರ್ಯನಿರ್ವಹಿಸಿ, ಯುವ ಸಮುದಾಯವನ್ನು ಪ್ರೇರೇಪಿಸುವ ಕಾರ್ಯ ನಡೆಯಬೇಕು. 2012 ರ ನಂತರ ಜನಿಸಿದ ಯುವ ಸಮೂಹ ಮುಂದಿನ ವರ್ಷದಲ್ಲಿ 18 ವರ್ಷಗಳನ್ನು ಪೂರ್ಣಗೊಳಿಸಲಿದ್ದಾರೆ. ಹೊಸ ಪೀಳಿಗೆ ದೇಶ, ಸಮಾಜ ಹಾಗೂ ಅಭಿವೃದ್ಧಿಗಾಗಿ ಸೇವೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿದ್ದಾರೆ ಎಂದು ಹೇಳಿದರು.

    ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಹಲವು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ ಸಭೆಯಲ್ಲಿ ಪಕ್ಷದ ಮುಂದಿನ ಹಲವು ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಯಾವುದೇ ಮಾಹಿತಿ ಬಹಿರಂಗೊಂಡಿಲ್ಲ.

    2014ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿ 7 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ, 13 ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಆದರೆ ಮೂರೇ ವರ್ಷದಲ್ಲಿ ಬಿಜೆಪಿ 12 ರಾಜ್ಯದಲ್ಲಿ ಗೆಲ್ಲುವ ಮೂಲಕ ಒಟ್ಟು 19 ರಾಜ್ಯದಲ್ಲಿ ಈಗ ಆಡಳಿತ ವಿಸ್ತರಣೆ ಮಾಡಿಕೊಂಡಿದೆ. ಕಾಂಗ್ರೆಸ್ 9 ರಾಜ್ಯಗಳನ್ನು ಕಳೆದುಕೊಂಡು ಈಗ ಕೇವಲ ಕರ್ನಾಟಕ, ಮಿಜೋರಾಂ, ಪಂಜಾಬ್, ಮೇಘಾಲಯದಲ್ಲಿ ಅಧಿಕಾರಲ್ಲಿದೆ.

    ಅರುಣಾಚಲ ಪ್ರದೇಶ್, ಅಸ್ಸಾಂ, ಆಂಧ್ರ ಪ್ರದೇಶ, ಬಿಹಾರ, ಛತ್ತೀಸ್‍ಗಡ, ಗೋವಾ, ಗುಜರಾತ್, ಜಾರ್ಖಂಡ್, ಜಮ್ಮುಮತ್ತು ಕಾಶ್ಮೀರ, ಹರ್ಯಾಣ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್, ರಾಜಸ್ತಾನ, ಸಿಕ್ಕಿಂ, ಉತ್ತರಾಖಂಡ್, ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿದೆ.

    ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಜಯಗಳಿಸಿದ ಬಳಿಕ ಬಿಜೆಪಿ, ಬಿಜೆಪಿ ಮೈತ್ರಿಕೂಟ ಇಲ್ಲದೇ ಇರುವುದು ಕೇವಲ 10 ರಾಜ್ಯಗಳು ಮಾತ್ರ. ಕರ್ನಾಟಕ(ಕಾಂಗ್ರೆಸ್), ತಮಿಳುನಾಡು(ಎಐಎಡಿಎಂಕೆ), ಕೇರಳ(ಸಿಪಿಐಎಂ), ಪಶ್ಚಿಮ ಬಂಗಾಳ(ತೃಣಮೂಲ ಕಾಂಗ್ರೆಸ್), ಒಡಿಶಾ(ಬಿಜು ಜನತಾ ದಳ) ಮೇಘಾಲಯ(ಕಾಂಗ್ರೆಸ್), ತೆಲಂಗಾಣ(ತೆಲಂಗಾಣ ರಾಷ್ಟ್ರೀಯ ಸಮಿತಿ), ಮಿಜೋರಾಂ( ಕಾಂಗ್ರೆಸ್) ದೆಹಲಿ(ಆಮ್ ಆದ್ಮಿ ಪಾರ್ಟಿ), ತ್ರಿಪುರಾ(ಸಿಪಿಐ-ಎಂ).