Tag: Parishath

  • ರಾಜ್ಯಸಭೆಗೆ ನ್ಯಾ.ಗೊಗೋಯ್ ನೇಮಕ – ಬಿಜೆಪಿ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ

    ರಾಜ್ಯಸಭೆಗೆ ನ್ಯಾ.ಗೊಗೋಯ್ ನೇಮಕ – ಬಿಜೆಪಿ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ

    ಬೆಂಗಳೂರು: ರಾಜ್ಯಸಭೆಗೆ ನಿವೃತ್ತಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇಮಕ ವಿಚಾರ ವಿಧಾನ ಪರಿಷತ್‍ನಲ್ಲಿ ಗದ್ದಲ ಗಲಾಟೆ ಕಾರಣವಾಯಿತು. ನ್ಯಾ.ಗೊಗೋಯ್ ನೇಮಕವನ್ನ ಬಿಜೆಪಿ ಸದಸ್ಯರು ಸಮರ್ಥನೆ ಮಾಡಿಕೊಂಡರೆ, ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದರು. ಮಾತು ಮಾತಿಗೆ ಬೆಳೆದು ಸದನದಲ್ಲಿ ಗದ್ದಲ ಗಲಾಟೆಗೆ ಕಾರಣವಾಯಿತು.

    ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸಂವಿಧಾನದ ಚರ್ಚೆ ವೇಳೆ ಮಾತನಾಡುತ್ತಾ, ಇವತ್ತಿನ ಆಡಳಿತ ವ್ಯವಸ್ಥೆ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಇವತ್ತು ಐಟಿ, ಸಿಬಿಸಿ, ಇಡಿ, ಚುನಾವಣೆ ಆಯೋಗದ ಮೇಲೆ ರಾಜಕೀಯ ಹಸ್ತಕ್ಷೇಪ ಆಗುತ್ತಿದೆ. ಇದು ಸರಿಯಾದ ವ್ಯವಸ್ಥೆ ಅಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಇದಲ್ಲದೆ RBI ಗವರ್ನರ್ ಕೂಡ ವ್ಯವಸ್ಥೆ ವಿರುದ್ಧ ಅಸಮಾಧಾಗೊಂಡು ರಾಜೀನಾಮೆ ಕೊಟ್ಟು ಹೋದರು ಅಂತ ವ್ಯವಸ್ಥೆ ವಿರುದ್ಧ ಕಿಡಿಕಾರಿದರು. ಈಗ ನಿವೃತ್ತ ಸಿಜೆಯೊಬ್ಬರಿಗೆ ರಾಜ್ಯ ಸಭಾ ಸದಸ್ಯ ಸ್ಥಾನ ನೀಡಿದ್ದಾರೆ. ಇದು ಯಾವ ಸಂದೇಶ ಜನರಿಗೆ ಹೋಗುತ್ತೆ ಎಂದ ಅಸಮಾಧಾನ ಹೊರ ಹಾಕಿದರು.

    ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತಿಗೆ ಕಾನೂನು ಮಂತ್ರಿ ಮಾಧುಸ್ವಾಮಿ ವಿರೋಧ ವ್ಯಕ್ತಪಡಿಸಿದರು. RBI ಗವರ್ನರ್ ರನ್ನ ದೇಶದ ಪ್ರಧಾನಿ ಮಾಡಲಿಲ್ಲವಾ? ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ನಿವೃತ್ತ ಅಧಿಕಾರಿಗಳು, ನ್ಯಾಯಮೂರ್ತಿಗಳನ್ನ ರಾಜ್ಯಸಭೆಗೆ ನೇಮಕ ಮಾಡದಂತೆ ನಿಯಮ ಇದೆಯಾ? ಕೊಟ್ಟರೆ ಏನು ತಪ್ಪಿದೆ. ಕಾನೂನಿನ ಅನ್ವಯ ನೇಮಕವಾಗಿದ್ದಾರೆ. ಚೆನ್ನಾಗಿ ಓದಿರೋರು ರಾಜ್ಯಸಭೆಗೆ ಬರೋದು ತಪ್ಪಾ? ಅಂತ ಗೊಗೋಯ್ ನೇಮಕವನ್ನ ಸಮರ್ಥನೆ ಮಾಡಿಕೊಂಡರು.

    ಬಿಜೆಪಿ ಸದಸ್ಯರ ಸಮರ್ಥನೆಗೆ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿದರು. ಈ ನ್ಯಾಯಮೂರ್ತಿಗಳು ಹಿಂದೆ ಅನೇಕ ತೀರ್ಪು ಕೊಟ್ಟಿದ್ದಾರೆ. ಈಗ ಅವರನ್ನ ರಾಜ್ಯಸಭೆಗೆ ನೇಮಕ ಮಾಡಿರೋದು ಎಷ್ಟು ಸರಿ ಅಂತ ಆಕ್ರೋಶ ಹೊರ ಹಾಕಿದರು. ಈ ವಿಚಾರವಾಗಿ ಸದನದಲ್ಲಿ ಗದ್ದಲ ಗಲಾಟೆ ಆಯಿತು.

    ಕಾಂಗ್ರೆಸ್‍ನ ಸಿಎಂ ಇಬ್ರಾಹಿಂ ನ್ಯಾ.ಗೊಗೊಯ್ ನೇಮಕವನ್ನ ವಿಧವೆ ವಿವಾಹಕ್ಕೆ ಹೋಲಿಸಿ ಲೇವಡಿ ಮಾಡಿದರು. ವಿಧವೆ ಪುನರ್ ಮದುವೆ ಆಗೋದು ಸರಿ. ಆದರೆ ನಿನ್ನೆ ಮೊನ್ನೆ ಸತ್ತ ಗಂಡನ ಹೆಂಡತಿ ಮದುವೆ ಆಗೋದು ಎಷ್ಟು ಸರಿ. ನಿವೃತ್ತಿಯಾಗಿ 4 ತಿಂಗಳು ಆಗಿಲ್ಲ. ಆಗಲೇ ರಾಜ್ಯಸಭೆಗೆ ಅಯ್ಕೆ ಆದರೆ ಹೇಗೆ. ಇದು ಸುಪ್ರೀಂಕೋರ್ಟ್ ಸ್ಥಾನಕ್ಕೆ ಚ್ಯುತಿ ತಂದ ಹಾಗೆ ಅನ್ನಿಸುತ್ತೆ ಅಂತ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮತ್ತೆ ವಿಪಕ್ಷ- ಆಡಳಿತ ಪಕ್ಷದ ನಡುವೆ ಗಲಾಟೆ ಆಯಿತು.

  • ‘ಮಾನ್ಯತಾ ಟೆಕ್ ಪಾರ್ಕಿಗೆ ರಜೆ ನೀಡಿ’- ಸದನದಲ್ಲಿ ಚರ್ಚೆ, ಶ್ರೀರಾಮುಲು ಸ್ಪಷ್ಟನೆ

    ‘ಮಾನ್ಯತಾ ಟೆಕ್ ಪಾರ್ಕಿಗೆ ರಜೆ ನೀಡಿ’- ಸದನದಲ್ಲಿ ಚರ್ಚೆ, ಶ್ರೀರಾಮುಲು ಸ್ಪಷ್ಟನೆ

    ಬೆಂಗಳೂರು: ವಿಧಾನ ಪರಿಷತ್‍ನಲ್ಲಿ ಕೊರೊನಾ ಕುರಿತ ಚರ್ಚೆಯ ವೇಳೆ ಹಲವು ಟೆಕ್ ಕಂಪನಿಗಳಿರುವ ಮಾನ್ಯತಾ ಟೆಕ್ ಪಾರ್ಕಿಗೆ ರಜೆ ನೀಡುವ ಆಗ್ರಹ ಕೇಳಿ ಬಂತು.

    ಮಾನ್ಯತಾ ಟೆಕ್ ಪಾರ್ಕಿನಲ್ಲಿ ಒಂದು ಪಾಸಿಟಿವ್ ಕೇಸ್ ಬಂದಿದೆ. ಹೀಗಿದ್ದರೂ ಮಾನ್ಯತಾ ಟೆಕ್ ಪಾರ್ಕಿಗೆ ರಜೆ ಘೋಷಣೆ ಮಾಡಿಲ್ಲ. ಕೂಡಲೇ ಟೆಕ್ ಪಾರ್ಕಿಗೆ ರಜೆ ಘೋಷಿಸಿ ಎಂದು ರಮೇಶ್ ಗೌಡ ಒತ್ತಾಯ ಮಾಡಿದರು.

    ಮಾನ್ಯತಾ ಟೆಕ್ ಪಾರ್ಕಿನಲ್ಲಿ ಪಾಸಿಟಿವ್ ಆಗಿದೆ ಅನ್ನೋದು ಸುಳ್ಳು ಸುದ್ದಿ. ಭಯ ಹುಟ್ಟಿಸುವ ಕೆಲಸ ಮಾಡಬೇಡಿ. ವರದಿ ಬಂದ ನಂತರ ಬೇಕಾದರೆ ನೋಡೋಣ. ಮಾನ್ಯತಾ ಟೆಕ್ ಪಾರ್ಕಿನಲ್ಲಿ ಯಾವುದೇ ಕೇಸ್ ಪಾಸಿಟಿವ್ ಬಂದಿಲ್ಲ ಎಂದು ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದರು.

    ಕೊರೊನಾ ಬಗ್ಗೆ ಪರಿಷತ್‍ನಲ್ಲಿ ಮಾತನಾಡಿದ ಶ್ರೀರಾಮುಲು, ಇವತ್ತು ಒಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಇವತ್ತಿಗೆ 15 ಕೊರೊನಾ ಪ್ರಕರಣ ದೃಢಪಟ್ಟಿದೆ. ಕೊರೊನಾ ಸಂಬಂಧ ಈಗಾಗಲೇ ಟಾಸ್ಕ್ ಫೋರ್ಸ್ ರಚನೆ ಆಗಿದೆ. ಕೊರೊನಾ ವಿರುದ್ಧ ಕೆಲಸ ಮಾಡಲು ಎನ್‍ಸಿಸಿ, ಎನ್‍ಎಸ್‍ಎಸ್ ಸ್ವಯಂ ಸೇವಕರು ಸೇರಿದಂತೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಲಯನ್ಸ್ ಕ್ಲಬ್ ಸದಸ್ಯರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದೇವೆ. ಪಬ್‍ಗಳು ಬಂದ್ ಮಾಡದಿದ್ದರೆ ಅವರ ಪರವಾನಗಿ ರದ್ದು ಮಾಡುತ್ತೇವೆ ಎಂದು ತಿಳಿಸಿದರು.

  • ಸದನದಲ್ಲಿ ಮೊಬೈಲ್ ಬಳಕೆ- ಮಾಜಿ ಸಚಿವ ಎನ್.ಮಹೇಶ್ ಸ್ಪಷ್ಟನೆ

    ಸದನದಲ್ಲಿ ಮೊಬೈಲ್ ಬಳಕೆ- ಮಾಜಿ ಸಚಿವ ಎನ್.ಮಹೇಶ್ ಸ್ಪಷ್ಟನೆ

    ಬೆಳಗಾವಿ: ಕೊಳ್ಳೆಗಾಲ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ಕೆಲ ವಸ್ತುಗಳು ಅಗತ್ಯವಿತ್ತು. ಈ ಮಾಹಿತಿ ವಾಟ್ಸಾಪ್‍ನಲ್ಲಿ ಬಂದ ಕಾರಣ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದೆ ಎಂದು ಮಾಜಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ಸ್ಪಷ್ಟನೆ ನೀಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಎನ್ ಮಹೇಶ್ ಅವರು, ನಾನು ಸುಮ್ಮನೆ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿಲ್ಲ. ಇವತ್ತು ಸದನದಲ್ಲಿ ಕೆಲ ವಿಚಾರಗಳ ಬಗ್ಗೆ ಮಾಹಿತಿ ನೀಡಬೇಕಿತ್ತು. ಕೊಳ್ಳೆಗಾಲ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೇರಿದಂತೆ ಕೆಲ ವಸ್ತುಗಳು ಅಗತ್ಯವಿತ್ತು. ಈ ಮಾಹಿತಿ ವಾಟ್ಸಾಪ್‍ನಲ್ಲಿ ಬಂದ ಕಾರಣ ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದೆ. ಆದರೆ ಯಾವುದೇ ಕಾರಣವಿದ್ದರು ಮೊಬೈಲ್ ತಂದಿದ್ದು ನನ್ನ ತಪ್ಪು ಅಂತಾ ಹೇಳಿದರು.

    ಇದೇ ವೇಳೆ ವಾಟ್ಸಾಪ್ ನಲ್ಲಿ ಯುವತಿಯ ಫೋಟೋ ವಿಕ್ಷೀಸಿದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮಗನಿಗೆ ಮದುವೆ ಸಿದ್ಧತೆಯಲ್ಲಿದ್ದು, ಈ ಬಗ್ಗೆ ಸೂಕ್ತ ವಧುವಿನ ಬಗ್ಗೆ ಮಾಹಿತಿ ನೀಡಲು ನನ್ನ ಸ್ನೇಹಿತ ಶಿವಕುಮಾರ್ ಎಂಬವರಿಗೆ ಮಾಹಿತಿ ನೀಡಿದ್ದೆ. ಅವರು ಕಳುಹಿಸಿದ ಫೋಟೋಗಳನ್ನೆ ನಾನು ನೋಡಿದ್ದು. ಆದರೆ ಅದನ್ನು ಪ್ರಸಾರ ಮಾಡಿದ್ದು, ವೃತ್ತಿ ಧರ್ಮ ಅಲ್ಲ ಎಂದರು. ಇದನ್ನೂ ಓದಿ: ಸದನದಲ್ಲಿ ಕದ್ದು ಮುಚ್ಚಿ ಯುವತಿ ಫೋಟೋ ನೋಡಿದ ಮಾಜಿ ಸಚಿವ ಎನ್ ಮಹೇಶ್!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv