Tag: parishat

  • ಪರಿಷತ್ ಆಯ್ಕೆಗೆ ದೆಹಲಿಯಲ್ಲಿ ಮಾನದಂಡ ನಿಗದಿ: ಡಿಕೆಶಿ

    ಪರಿಷತ್ ಆಯ್ಕೆಗೆ ದೆಹಲಿಯಲ್ಲಿ ಮಾನದಂಡ ನಿಗದಿ: ಡಿಕೆಶಿ

    ಬೆಂಗಳೂರು: ಪರಿಷತ್ ಆಯ್ಕೆಗೆ ಯಾವ ಮಾನದಂಡ, ಏನು ಎಂಬುದು ದೆಹಲಿಯಲ್ಲಿ ನಿಗದಿ ಆಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಹೇಳಿದ್ದಾರೆ.

    ಇಂದು ಸಿಎಂ-ಡಿಸಿಎಂ ದೆಹಲಿಗೆ ತೆರೆಳುತ್ತಿರುವ ಬಗ್ಗೆ ತಮ್ಮ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, 300ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ. ಎಲ್ಲಾ ವರ್ಗಕ್ಕೂ ಅವಕಾಶ ಮಾಡಿಕೊಡಲು ಆಗಲ್ಲ. ಹಾಲಿ ಸದಸ್ಯರು ಕೆಲವರಿದ್ದಾರೆ. ಎಲ್ಲರೂ ಪಕ್ಷಕ್ಕಾಗಿ ದುಡಿದಿದ್ದಾರೆ ಎಂದರು.

    ಎಲ್ಲಾ ವರ್ಗದಲ್ಲೂ ಇದ್ದಾರೆ. ಕೆಲವರಿಗೆ ಬ್ಲಾಕ್ ಮಟ್ಟದಲ್ಲಿ ಅಧಿಕಾರ ಸಿಕ್ಕಿದೆ. ಕೆಲವರಿಗೆ ಜಿಲ್ಲಾ ಮಟ್ಟದಲ್ಲಿ ಸಿಕ್ಕಿದೆ ನೋಡೋಣ. ಇರುವ 7 ಸೀಟಲ್ಲಿ ಎಲ್ಲರೂ ಕೇಳ್ತಿದ್ದಾರೆ. ಕರಾವಳಿಯವರು ಕೇಳ್ತಿದ್ದಾರೆ, ಮಲ್ನಾಡವ್ರು ಕೇಳ್ತಾರೆ, ಹಳೇ ಮೈಸೂರು ಭಾಗದವರು ಕೇಳ್ತಿದ್ದಾರೆ. ಮುಂಬೈ ಕರ್ನಾಟಕ ಕೇಳ್ತಿದ್ದಾರೆ. ಬಹಳ ಕಷ್ಟಕರವಾದಂತಹ ಪರಿಸ್ಥಿತಿಯಲ್ಲಿ ಇದ್ದೇವೆ. ಯಾವ ಮಾನದಂಡದ ಮೇಲೆ ಆಯ್ಕೆ ಮಾಡಬೇಕು ಎಂಬುದನ್ನು ದೆಹಲಿಯಲ್ಲಿ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.

    ಇದೇ ವೇಳೆ ಪರಮೇಶ್ವರ್ (G Parameshwar) ಅಸಮಾಧಾನದ ಬಗ್ಗೆ ಮಾತನಾಡಿದ ಡಿಕೆಶಿ, ಖಂಡಿತವಾಗಿಯೂ ಅವರ ಮಾತನ್ನ ಕೇಳುತ್ತೇವೆ. ನಗುತ್ತಲೇ ಉತ್ತರಿಸಿದರು. ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಚರ್ಚೆಯಾಗುವ ಬಗ್ಗೆ ನಿಮ್ಮ ಹತ್ರ ಏನಾದ್ರೂ ಮಾಹಿತಿ ಇರಬಹುದು ನೋಡಿ ಎಂದಿದ್ದಾರೆ.

  • ಇಂದು ‘ಸಭಾಪತಿ’ ಸಂಬಂಧ ಮೇಲ್ಮನೆ ಫೈಟ್- ಪ್ರತಾಪ್‍ಚಂದ್ರ ಶೆಟ್ಟಿ ಪದಚ್ಯುತಿನಾ..?

    ಇಂದು ‘ಸಭಾಪತಿ’ ಸಂಬಂಧ ಮೇಲ್ಮನೆ ಫೈಟ್- ಪ್ರತಾಪ್‍ಚಂದ್ರ ಶೆಟ್ಟಿ ಪದಚ್ಯುತಿನಾ..?

    ಬೆಂಗಳೂರು: ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ ನಂತರ ಇದೇ ಮೊದಲ ಬಾರಿಗೆ ಕಲಾಪವನ್ನು ಮತ್ತೆ ನಡೆಸುವ ಮೂಲಕ ವಿಧಾನ ಪರಿಷತ್ ಇತಿಹಾಸ ಸೃಷ್ಟಿಸ್ತಿದೆ.

    ಇಂದು ಕಲಾಪ ಆರಂಭವಾದ ಕೂಡಲೇ ಸಭಾಪತಿ ಪೀಠದಲ್ಲಿ ಉಪಸಭಾಪತಿ ಧರ್ಮೇಗೌಡರನ್ನು ಕೂರಿಸಲು ಬಿಜೆಪಿ ಪ್ಲಾನ್ ಮಾಡಿದೆ. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮೊದಲೇ ಬಂದು ಪೀಠದಲ್ಲಿ ಕುಳಿತರೆ ಪಕ್ಕದಲ್ಲೇ ಮತ್ತೊಂದು ಪೀಠ ಹಾಕಿ ಧರ್ಮೇಗೌಡರನ್ನು ಕೂರಿಸಲು ಸಹ ಪ್ಲಾನ್ ಮಾಡ್ಕೊಂಡಿದೆ.

    ಅವಿಶ್ವಾಸ ನೊಟೀಸ್ ಹಿನ್ನೆಲೆಯಲ್ಲಿ ಪ್ರತಾಪ್ ಚಂದ್ರ ಶೆಟ್ಟಿಗೆ ಪೀಠದ ಮೇಲೆ ಕೂರೋದಕ್ಕೆ ಅವಕಾಶ ಕೊಡದೇ ಬಿಜೆಪಿ ಗದ್ದಲ ನಡೆಸುವ ಸಂಭವ ಇದೆ. ಸಭಾಪತಿ ಬದಲಾದಲ್ಲಿ ಗೋಹತ್ಯೆ ತಡೆ ಬಿಲ್‍ಗೆ ಅಂಗೀಕಾರ ಪಡೆಯಲು ಚಿಂತನೆ ನಡೆಸಿದೆ. ಸಭಾಪತಿ ವಿಚಾರದಲ್ಲಿ ಜೆಡಿಎಸ್ ಬೆಂಬಲ ಸಿಗುವ ವಿಶ್ವಾಸದಲ್ಲಿ ಬಿಜೆಪಿ ಇದೆ.

    ಸಭಾಪತಿ ಸ್ಥಾನಕ್ಕೆ ಕೋಟಾ ಶ್ರೀನಿವಾಸ ಪೂಜಾರಿ, ಸುಶೀಲ್ ನಮೋಶಿ, ಮಹಾಂತೇಶ ಕವಟಗಿಮಠ, ಅರುಣ್ ಶಹಾಪೂರ ಹೆಸರು ಕೇಳಿಬರ್ತಿವೆ.