Tag: Parameshwar Nayak

  • ಜಾತ್ರೆಯ ವೇಳೆ ಸಚಿವ ಕಾರಿಗೆ ಅಪ್ಪಳಿಸಿದ ತೇರು!

    ಜಾತ್ರೆಯ ವೇಳೆ ಸಚಿವ ಕಾರಿಗೆ ಅಪ್ಪಳಿಸಿದ ತೇರು!

    ಬಳ್ಳಾರಿ: ಕೌಶಲಾಭಿವೃದ್ದಿ ಹಾಗೂ ಮುಜರಾಯಿ ಸಚಿವ ಪರಮೇಶ್ವರ ನಾಯ್ಕ್ ಸಚಿವರಾದ ಬಳಿಕ ಪಡೆದಿದ್ದ ಕಾರು ಜಾತ್ರೆಯ ರಥ ಎಳೆಯುವ ವೇಳೆ ರಥದ ಚಕ್ರಕ್ಕೆ ಸಿಕ್ಕಿ ಹಾಕಿಕೊಂಡ ಪರಿಣಾಮ ಭಾಗಶಃ ಜಖಂಗೊಂಡಿದೆ.

    ಜಿಲ್ಲೆಯ ಹೂವಿನಹಡಗಲಿಯ ಮಾನ್ಯರ ಮಸಲವಾಡ ಗ್ರಾಮದಲ್ಲಿ ಇಂದು ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ನಡೆದಿತ್ತು. ಆದರೆ ರಥ ಎಳೆಯುವ ರಸ್ತೆಯಲ್ಲೇ ಸಚಿವರ ಕಾರು ನಿಲ್ಲಿಸಿದ್ದರು. ಹೀಗಾಗಿ ರಥ ಎಳೆಯುವ ವೇಳೆ ಆಯ ತಪ್ಪಿದ ಪರಿಣಾಮ ಸಚಿವರ ಕಾರಿಗೆ ರಥ ಅಪ್ಪಳಿಸಿದೆ.

    ತೇರು ಎಳೆಯವ ವೇಳೆ ರಥಕ್ಕೆ ಕಾರು ಅಡ್ಡಿಯಾಗಿ ಹಲವರು ಕಾರಿನ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಜನರ ಜೀವಹಾನಿ ತಪ್ಪಿಸುವುದು ಬಿಟ್ಟು ಸಚಿವರ ಕಾರು ಉಳಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಗರಂ ಆದ ಕೆಲವರು ಸಚಿವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ಸಚಿವ ಪರಮೇಶ್ವರ ನಾಯ್ಕ್ ತಮ್ಮ ಖಾಸಗಿ ಕಾರಿನ ಚಾಲಕನನ್ನೇ ಸರ್ಕಾರಿ ಕಾರು ಚಾಲನೆ ಮಾಡಿಸಿದ್ದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತವಾಗಿದೆ. ಚಾಲಕನ ನಿರ್ಲಷ್ಯದಿಂದಲೇ ಅವಘಡ ಸಂಭವಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಪ್ರಸಾದ ಪ್ರಕರಣ- ದೇವಸ್ಥಾನದ ಆವರಣದಲ್ಲಿ ಭಕ್ತೆಯ ಗೋಳಾಟ

    ವಿಷ ಪ್ರಸಾದ ಪ್ರಕರಣ- ದೇವಸ್ಥಾನದ ಆವರಣದಲ್ಲಿ ಭಕ್ತೆಯ ಗೋಳಾಟ

    ಚಾಮರಾಜನಗರ: ಸುಳ್ವಾಡಿ ವಿಷ ದುರಂತದ ಪ್ರಕರಣದ ಹಿನ್ನೆಲೆಯಲ್ಲಿ ದೇವರ ದರ್ಶನ ಸಿಗದೇ ಭಕ್ತರು ದೇವಸ್ಥಾನದ ಆವರಣದಲ್ಲಿ ಕಣ್ಣೀರು ಹಾಕುತ್ತಿದ್ದಾರೆ.

    ಕಳೆದ 20 ದಿನಗಳಿಂದ ಮಾರಮ್ಮ ದೇವಸ್ಥಾನ ಬಂದ್ ಆಗಿದ್ದು, ಯಾವುದೇ ಭಕ್ತರಿಗೆ ದೇವರ ದರ್ಶನಕ್ಕೆ ಅನುಮತಿ ನೀಡುತ್ತಿಲ್ಲ. ಇಷ್ಟು ದಿನ ಸಾವಿರಾರು ಭಕ್ತರು ನಿನ್ನ ಅಂಗಳದಲ್ಲಿ ತುಂಬಿ ತುಳುಕುತ್ತಿದ್ದರು. ನಿನ್ನ ಪ್ರಸಾದಕ್ಕೆ ವಿಷ ಹಾಕಿ ನಿನಗೆ ಕೆಟ್ಟ ಹೆಸರು ತಂದರಲ್ಲವ್ವಾ ತಾಯಿ. ವಿಷ ಹಾಕುವಾಗಲೇ ಆ ವಿಷ ನುಂಗಿ ಅವರಿಗೆ ಕಚ್ಚಬಾರದಿತ್ತಾ ತಾಯಿ ಎಂದು ಮಾರಮ್ಮ ದೇವಸ್ಥಾನದ ಆವರಣದಲ್ಲಿ ಭಕ್ತೆ ಕಣ್ಣೀರಿಡುತ್ತಿದ್ದಾರೆ.

    ಇತ್ತ ಸುಳ್ವಾಡಿಗೆ ಮುಜರಾಯಿ ಸಚಿವ ಪರಮೇಶ್ವರ್ ನಾಯಕ್ ಭೇಟಿ ನೀಡಿ, ಸುಳ್ವಾಡಿ ಮಾರಮ್ಮ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಶೀಘ್ರದಲ್ಲೇ ತೀರ್ಮಾನ ಮಾಡಲಗುವುದು. ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ದೇವಸ್ಥಾನದ ಟ್ರಸ್ಟಿಗಳು ಪತ್ರ ಬರೆದಿದ್ದಾರೆ ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳ ಸಹಮತವೂ ಇದೆ. ಇದೆಲ್ಲವನ್ನು ಕ್ರೋಢೀಕರಿಸಿ ಸಚಿವ ಸಂಪುಟದಲ್ಲಿಟ್ಟು ತೀರ್ಮಾನ ಕೈಗೊಳ್ಳತ್ತದೆ. ರಾಜ್ಯದ ಇತರ ದೇವಸ್ಥಾನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv