Tag: panna

  • ಅಂಬುಲೆನ್ಸ್‌ನ  ಡೀಸೆಲ್ ಖಾಲಿ – ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

    ಅಂಬುಲೆನ್ಸ್‌ನ  ಡೀಸೆಲ್ ಖಾಲಿ – ರಸ್ತೆ ಬದಿಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

    ಭೋಪಾಲ್: ಗರ್ಭಿಣಿಯೊಬ್ಬರನ್ನು (Pregnant) ಅಂಬುಲೆನ್ಸ್‌ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಅಂಬುಲೆನ್ಸ್‌ನ (Ambulance) ಡೀಸೆಲ್ ಖಾಲಿಯಾದ್ದರಿಂದ ಮಹಿಳೆ (Woman) ರಸ್ತೆ ಬದಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ (Delivery) ಘಟನೆ ಮಧ್ಯಪ್ರದೇಶದ (Madhya Pradesh) ಪನ್ನಾ (Panna) ಜಿಲ್ಲೆಯಲ್ಲಿ ನಡೆದಿದೆ.

    ರೇಷ್ಮಾ ಎಂದು ಗುರುತಿಸಲಾದ ಬುಡಕಟ್ಟು ಸಮುದಾಯದ ಮಹಿಳೆ ರಸ್ತೆ ಬದಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾಳೆ. ಮಹಿಳೆಗೆ ಹೆರಿಗೆ ನಡೆಸಲು ಆರೋಗ್ಯ ಕಾರ್ಯಕರ್ತರು ಸಹಾಯ ಮಾಡಿರುವ ವೀಡಿಯೋ ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಯಮುನಾ ಜಲ ಶುದ್ಧವಾಗಿದೆ ಎಂದು ನಿರೂಪಿಸಲು ಅದೇ ನೀರಿನಲ್ಲಿ ಸ್ನಾನ ಮಾಡಿದ ಜಲಮಂಡಳಿ ನಿರ್ದೇಶಕ

    ವರದಿಗಳ ಪ್ರಕಾರ ರಾತ್ರಿಯ ವೇಳೆ ಮಹಿಳೆಯನ್ನು ಅಂಬುಲೆನ್ಸ್ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಅಂಬುಲೆನ್ಸ್ ಸ್ಥಗಿತಗೊಂಡಿದ್ದು, ಬಳಿಕ ಅಂಬುಲೆನ್ಸ್ನ ಡ್ರೈವರ್ ಮಹಿಳೆಯ ಕುಟುಂಬದವರಿಗೆ ಇಂಧನ ಖಾಲಿಯಾಗಿರುವುದಾಗಿ ತಿಳಿಸಿದ್ದಾನೆ. ಇದನ್ನೂ ಓದಿ: 8 ಗಂಡಂದಿರಿಂದ 11 ಮಕ್ಕಳು, ಇನ್ನೂ 19 ಮಕ್ಕಳಿಗಾಗಿ ಪ್ಲ್ಯಾನಿಂಗ್‌ ಮಾಡಿದ್ದಾಳೆ ಈ ಮಹಿಳೆ

    ಕೊನೆಗೆ ಯಾವುದೇ ದಾರಿ ಕಾಣದೇ ತೀವ್ರವಾಗಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ರಸ್ತೆ ಬದಿಯಲ್ಲಿ ಮಲಗಿಸಿ ಹೆರಿಗೆ ಮಾಡಿಸಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿರುವ ವೀಡಿಯೋದಲ್ಲಿ ಅಂಬುಲೆನ್ಸ್ನ ಬಾಗಿಲನ್ನು ತೆರೆದು, ಅದರ ದೀಪದ ಬೆಳಕಿನಲ್ಲಿ ರಸ್ತೆ ಬದಿಯಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿರುವುದು ಕಂಡುಬಂದಿದೆ. ಮಹಿಳೆಗೆ ಹೆರಿಗೆ ನಡೆಸಲು ಅಂಬುಲೆನ್ಸ್‌ನ ಆರೋಗ್ಯ ಕಾರ್ಯಕರ್ತರು ಹಾಗೂ ಕೆಲ ಸ್ಥಳೀಯ ಮಹಿಳೆಯರು ಸಹಾಯ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಟ್ಟಿಗೆ ವ್ಯಾಪಾರಿಗೆ ಸಿಕ್ತು 1.20 ಕೋಟಿ ಬೆಲೆ ಬಾಳುವ ವಜ್ರ

    ಇಟ್ಟಿಗೆ ವ್ಯಾಪಾರಿಗೆ ಸಿಕ್ತು 1.20 ಕೋಟಿ ಬೆಲೆ ಬಾಳುವ ವಜ್ರ

    ಭೋಪಾಲ್: ಕೆಲವೊಮ್ಮೆ ಅದೃಷ್ಟ ಹೇಗೆ ಬದಲಾಗುತ್ತದೆ ಎಂದು ಊಹಿಸಲು ಅಸಾಧ್ಯ. ಇಲ್ಲೊಬ್ಬ ಗಣಿ ಕಾರ್ಮಿಕನಿಗೆ ಅಮೂಲ್ಯವಾದ ವಜ್ರ ಸಿಕ್ಕು ಆತನ ಅದೃಷ್ಟವೇ ಬದಲಾಗಿದೆ. ಸಣ್ಣ ಪ್ರಮಾಣದ ಇಟ್ಟಿಗೆ ವ್ಯವಹಾರ ನಡೆಸುತ್ತಿರುವ ವ್ಯಕ್ತಿಯೊಬ್ಬರು ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಗಣಿಯೊಂದರಲ್ಲಿ 26.11 ಕ್ಯಾರೆಟ್ ವಜ್ರ ಸಿಕ್ಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ವಜ್ರದ ಗಣಿಯಾಗಿರುವ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಕಳೆದ ವರ್ಷ 30 ಲಕ್ಷದಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳನ್ನು ಹೊರ ತೆಗೆದ ಕಾರ್ಮಿಕರೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾದರು. ಇದೀಗ ಪನ್ನಾದಲ್ಲಿ ಕಿಶೋರ್‌ಗಂಜ್‌ನ ನಿವಾಸಿ ಸುಶೀಲ್ ಶುಕ್ಲಾ  ಅವರಿಗೆ ಕೃಷ್ಣ ಕಲ್ಯಾಣಪುರ ಪ್ರದೇಶದ ಬಳಿ ಇರುವ ಗಣಿಯಲ್ಲಿ ಅಮೂಲ್ಯವಾದ ಕಲ್ಲನ್ನು ಕಂಡುಕೊಂಡಿದ್ದಾರೆ. ಇಲ್ಲಿನ ವಜ್ರದ ಅಧಿಕಾರಿ ರವಿ ಪಟೇಲ್ ಇದರ ಬೆಲೆ 1.20 ಕೋಟಿ ರೂಪಾಯಿ ಎಂದಿದ್ದಾರೆ. ಇದನ್ನೂ ಓದಿ :  ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

    BRIBE

    ಸುಶಿಲ್ ಶುಕ್ಲಾ ಕಿಶೋರ್‌ಗಂಜ್‌ನಲ್ಲಿ ಸಣ್ಣ ಇಟ್ಟಿಗೆ ಗೂಡು ವ್ಯಾಪಾರವನ್ನು ನಡೆಸುತ್ತಿದ್ದರು. ಇನ್ನು ಗಣಿ ಕಾರ್ಮಿಕನಾಗಿಯೂ ಕೆಲಸ ಮಾಡುತ್ತಿದ್ದವನಿಗೆ ಅದೃಷ್ಟ ಲಕ್ಷ್ಮಿ ವಜ್ರದ ರೂಪದಲ್ಲಿ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಂತಾಗಿದೆ. ಒಂದೆರಡು ದಿನಗಳಲ್ಲಿ ರತ್ನವನ್ನು ಹರಾಜಿಗೆ ಇಡಲಾಗುವುದು ಮತ್ತು ಸರ್ಕಾರದ ತೆರಿಗೆಯನ್ನು ಕಡಿತಗೊಳಿಸಿದ ನಂತರ ಗಣಿಗಾರರಿಗೆ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ : ಸಿಂಪಲ್ಲಾಗೊಂದ್ ಲವ್ ಸ್ಟೋರಿಯಲ್ಲಿ ನಟಿಸಿದ್ದ ಆರ್.ಜೆ ರಚನಾ

    ಶುಕ್ಲಾ ಮಾತನಾಡಿ, ಬಾಡಿಗೆ ಜಮೀನಿನಲ್ಲಿ ಸಣ್ಣ ಪ್ರಮಾಣದ ಇಟ್ಟಿಗೆ ವ್ಯಾಪಾರ ನಡೆಸುತ್ತಿದ್ದೇನೆ. ಕಳೆದ 20 ವರ್ಷಗಳಿಂದ ವಜ್ರದ ಗಣಿಗಾರಿಕೆಯಲ್ಲಿ ತಾನು ಮತ್ತು ತನ್ನ ಕುಟುಂಬವೂ ತೊಡಗಿಸಿಕೊಂಡಿದೆ. ಇಷ್ಟು ದೊಡ್ಡ ರತ್ನವನ್ನು ನಾನು ಹೊರತೆಗೆಯುವುದು ಇದೇ ಮೊದಲು ಎಂದಿದ್ದಾರೆ.