Tag: Pandit

  • ಪಂಡಿತರಿಗಿಂತ ಹೆಚ್ಚಾಗಿ ಮುಸ್ಲಿಮರು ಕಾಶ್ಮೀರದಲ್ಲಿ ಹತ್ಯೆಯಾಗಿದ್ದಾರೆ: ಕೇರಳ ಕಾಂಗ್ರೆಸ್‌

    ಪಂಡಿತರಿಗಿಂತ ಹೆಚ್ಚಾಗಿ ಮುಸ್ಲಿಮರು ಕಾಶ್ಮೀರದಲ್ಲಿ ಹತ್ಯೆಯಾಗಿದ್ದಾರೆ: ಕೇರಳ ಕಾಂಗ್ರೆಸ್‌

    ತಿರುವನಂತಪುರಂ: ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ ಫೈಲ್ಸ್‌ ಚಿತ್ರ ಈಗ ಬಾಕ್ಸ್‌ ಆಫೀಸ್‌ನಲ್ಲಿ ದೂಳು ಎಬ್ಬಿಸುತ್ತಿದ್ದಂತೆ ಕಾಶ್ಮೀರ ಪಂಡಿತರಿಗೆ ಸಂಬಂಧಿಸಿದಂತೆ ಕೇರಳ ಕಾಂಗ್ರೆಸ್‌ ಮಾಡಿರುವ ಟ್ವೀಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.

    ಕೇರಳ ಕಾಂಗ್ರೆಸ್‌ ಆರೋಪ ಏನು?
    1990 ರಿಂದ 2007ರವರೆಗೆ 399 ಪಂಡಿತರನ್ನು ಉಗ್ರರು ಕೊಂದಿದ್ದಾರೆ. ಈ 17 ವರ್ಷಗಳಲ್ಲಿ ಉಗ್ರರಿಂದ ಹತ್ಯೆಯಾದ ಮುಸ್ಲಿಮರ ಸಂಖ್ಯೆ 15,000

    ಕಾಶ್ಮೀರಿ ಪಂಡಿತರ ವಲಸೆಗೆ ಕಾರಣವಾಗಿದ್ದು ಅಂದಿನ ಗೌರ್ನರ್ ಜಗ್‍ಮೋಹನ್. ಆರ್‌ಎಸ್‍ಎಸ್ ಮೂಲದ ಜಗ್‍ಮೋಹನ್ ಸೂಚನೆ ಮೇಲೆ ಪಂಡಿತರು ಕಾಶ್ಮೀರ ತ್ಯಜಿಸಿದ್ದರು.

    ಬಿಜೆಪಿ ಬೆಂಬಲಿತ ವಿಪಿ ಸಿಂಗ್ ನೇತೃತ್ವದ ಸರ್ಕಾರ ಇದ್ದಾಗ ಪಂಡಿತರ ವಲಸೆ ನಡೆದಿದ್ದು. 1989ರ ಡಿಸೆಂಬರ್‌ನಲ್ಲಿ ಬಿಜೆಪಿ ಬೆಂಬಲಿತ ವಿಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಕಾಶ್ಮೀರದಿಂದ ಪಂಡಿತರ ವಲಸೆ ಶುರುವಾಗಿದ್ದು 1990ರ ಜನವರಿಯಲ್ಲಿ ಆಗ ಪಂಡಿತರಿಗೆ ಭದ್ರತೆ ಒದಗಿಸಲು ಜಗ್‍ಮೋಹನ್‍ಗೆ ಬಿಜೆಪಿ ಸೂಚನೆ ನೀಡಿರಲಿಲ್ಲ. ಇದನ್ನೂ ಓದಿ: ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ಮಹಾ ವಲಸೆಗೆ ಸೂಚನೆ ನೀಡಿದಾಗ ಬಿಜೆಪಿ ಏನು ಮಾಡುತ್ತಿತ್ತು?. ಕೇಂದ್ರದಲ್ಲಿ 2 ಬಾರಿ, ಕಾಶ್ಮೀರದಲ್ಲಿ ಒಮ್ಮೆ ಅಧಿಕಾರಕ್ಕೇರಿದ್ದ ಬಿಜೆಪಿ ಏಕೆ ಸುಮ್ಮನಿತ್ತು? ಕಾಶ್ಮೀರಿ ಪಂಡಿತರನ್ನು ಕಾಶ್ಮೀರಕ್ಕೆ ಮತ್ತೆ ಏಕೆ ಕರೆತರಲಿಲ್ಲ? ಭದ್ರತೆ ಏಕೆ ಒದಗಿಸಲಿಲ್ಲ?

    ಬಿಜೆಪಿ ದೇಶದಲ್ಲಿ ಹಿಂದೂ-ಮುಸ್ಲಿಮರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಕಾಶ್ಮೀರಿ ಪಂಡಿತರ ವಲಸೆ ವೇಳೆ ಬಿಜೆಪಿ ಮಾಡಿದ್ದು ಅಯೋಧ್ಯೆ ರಥಯಾತ್ರೆ. ಪಂಡಿತರ ವಿಚಾರದಲ್ಲಿ ಬಿಜೆಪಿ ವಿಷ-ಸುಳ್ಳು ಬಿತ್ತಲು ಪ್ರಯತ್ನಿಸುತ್ತಿದೆ. ಈ ಮೂಲಕ ಮುಂದಿನ ಚುನಾವಣೆ ಗೆಲ್ಲಲು ಬಿಜೆಪಿ ಷಡ್ಯಂತ್ರ್ಯ ನಡೆಸಿದೆ.

    ಟ್ವೀಟ್‌ ಡಿಲೀಟ್‌:
    1990 ರಿಂದ 2007ರವರೆಗೆ 399 ಪಂಡಿತರನ್ನು ಉಗ್ರರು ಕೊಂದಿದ್ದಾರೆ. ಈ 17 ವರ್ಷಗಳಲ್ಲಿ ಉಗ್ರರಿಂದ ಹತ್ಯೆಯಾದ ಮುಸ್ಲಿಮರ ಸಂಖ್ಯೆ 15,000 ಎಂಬ ಟ್ವೀಟ್‌ ಅನ್ನು ಕೇರಳ ಕಾಂಗ್ರೆಸ್‌ ಡಿಲೀಟ್‌ ಮಾಡಿದೆ. ಈಗ ಟ್ವೀಟ್‌ ಡಿಲೀಟ್‌ ಮಾಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿ ನೆಟ್ಟಿಗರು ಕೇರಳ ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

  • ನಾನು ಕಾಶ್ಮೀರಿ ಪಂಡಿತ, ನಮ್ಮದು ಕಾಶ್ಮೀರಿ ಪಂಡಿತರ ಕುಟುಂಬ: ರಾಹುಲ್ ಗಾಂಧಿ

    ನಾನು ಕಾಶ್ಮೀರಿ ಪಂಡಿತ, ನಮ್ಮದು ಕಾಶ್ಮೀರಿ ಪಂಡಿತರ ಕುಟುಂಬ: ರಾಹುಲ್ ಗಾಂಧಿ

    ಶ್ರೀನಗರ: ನಾನು ಕಾಶ್ಮೀರಿ ಪಂಡಿತ, ನಮ್ಮದು ಕಾಶ್ಮೀರಿ ಪಂಡಿತರ ಕುಟುಂಬ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    ಎರಡು ದಿನಗಳ ಜಮ್ಮುವಿಗೆ ಭೇಟಿ ನೀಡಿರುವ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಬೆಳಿಗ್ಗೆ ಕಾಶ್ಮೀರಿ ಪಂಡಿತರ ನಿಯೋಗವು ನನ್ನನ್ನು ಭೇಟಿ ಮಾಡಿತು. ಕಾಂಗ್ರೆಸ್ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಬಿಜೆಪಿ ಏನೂ ಮಾಡಿಲ್ಲ ಎಂದು ಅವರು ನನಗೆ ತಿಳಿಸಿದರು ಎಂದರು.

    ನಾನು ಮನೆಗೆ ಬಂದಿದ್ದೇನೆ ಎಂದು ಅನಿಸುತ್ತಿದೆ. ನನ್ನ ಕುಟುಂಬವು ಜಮ್ಮು ಮತ್ತು ಕಾಶ್ಮೀರದೊಂದಿಗೆ ಸುದೀರ್ಘ ಸಂಬಂಧ ಹೊಂದಿದೆ ಎಂದು ತಿಳಿಸಿದರು. ಈ ವೇಳೆ ಕಾಶ್ಮೀರಿ ಪಂಡಿತ ಸಹೋದರರಿಗೆ ನಾನು ಏನಾದರೂ ಮಾಡುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

    ಜಮ್ಮು ಕಾಶ್ಮೀರಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದ್ದು, ಈಗ ನನಗೆ ನೋವಾಗಿದೆ. ಇಲ್ಲಿ ಸಹೋದರತ್ವವಿದೆ. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಆ ಸಹೋದರತ್ವದ ಬಂಧವನ್ನು ಮುರಿಯಲು ಪ್ರಯತ್ನಿಸುತ್ತಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

    ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜಮ್ಮು ಮತ್ತು ಕಾಶ್ಮೀರವನ್ನು ಬಿಜೆಪಿ ದುರ್ಬಲಗೊಳಿಸಿದೆ. ರಾಜ್ಯ ಸ್ಥಾನಮಾನವನ್ನು ಕಾಶ್ಮೀರಿಗಳಿಂದ ಕಿತ್ತುಕೊಳ್ಳಲಾಗಿದೆ. ಈ ಸ್ಥಾನಮಾನವನ್ನು ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಈಗ ಬಿಡುಗಡೆಯಾಗಲ್ಲ, ದೀಪಾವಳಿಗೂ ಮೊದಲು ಬರಲಿದೆ ಜಿಯೋ ಫೋನ್

    ಗುರುವಾರ ರಾಹುಲ್ ಗಾಂಧಿ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕತ್ರಾ ಬೇಸ್‍ಕ್ಯಾಂಪ್‍ನಿಂದ ತ್ರಿಕೂಟ ಬೆಟ್ಟಗಳ ಮೂಲಕ ಕಾಲ್ನಡಿಗೆಯಲ್ಲಿ 13 ಕಿ.ಮೀ ಯಾತ್ರೆ ನಡೆಸಿ ದೇಗುಲವನ್ನು ತಲುಪಿದ್ದರು. ಜಮ್ಮು ಕಾಶ್ಮೀರದ ನಂತರ ಅವರು ಲಡಾಖ್‍ಗೆ ಭೇಟಿ ನೀಡಲಿದ್ದಾರೆ.

  • ದುರ್ಗೆಗೆ ಮಾಸ್ಕ್ ತೊಡಿಸಿದ ಅರ್ಚಕ – ಪ್ರಸಾದವಾಗಿ ಮಾಸ್ಕ್ ವಿತರಣೆ

    ದುರ್ಗೆಗೆ ಮಾಸ್ಕ್ ತೊಡಿಸಿದ ಅರ್ಚಕ – ಪ್ರಸಾದವಾಗಿ ಮಾಸ್ಕ್ ವಿತರಣೆ

    ಲಕ್ನೋ: ಭಾರತಾದ್ಯಂತ ಕೊರೊನಾ ಎರಡನೇ ಅಲೆ ಅಪ್ಪಳಿಸಿದೆ. ವೈರಸ್‍ನನ್ನು ತಡೆಗಟ್ಟಲು ಜನರಿಗೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಹಲವಾರು ಸಲಹೆಗಳನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಈ ಮಧ್ಯೆ ಕೊರೊನಾ ಸಮಯದಲ್ಲಿ ಮಾಸ್ಕ್ ಧರಿಸುವುದು ಎಷ್ಟು ಮುಖ್ಯ ಎಂಬುವುದರ ಬಗ್ಗೆ ಜನರಿಗೆ ತಿಳಿ ಹೇಳಲು ಉತ್ತರ ಪ್ರದೇಶದ ಅರ್ಚಕರೊಬ್ಬರು ದೇವಾಲಯದಲ್ಲಿರುವ ದುರ್ಗ ದೇವಿ ದೇವರ ವಿಗ್ರಹಕ್ಕೆ ಮಾಸ್ಕ್ ಹಾಕಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು, ಚೈತ್ರ ನವರಾತ್ರಿಯ ಎರಡನೇ ದಿನವಾದ ಬುಧವಾರದಂದು, ಭಕ್ತಾದಿಗಳು ದೇವಾಲಯಕ್ಕೆ ಬಂದಾಗ ದುರ್ಗ ದೇವಿ ಮಾಸ್ಕ್ ಧರಿಸಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಅಷ್ಟೇ ಅಲ್ಲದೇ ಅರ್ಚಕರು ಭಕ್ತರಿಗೆ ಪ್ರಸಾದವಾಗಿ ಮಾಸ್ಕ್‌ನನ್ನು ವಿತರಿಸಿದ್ದು ವಿಶೇಷವಾಗಿತ್ತು.

    ಈ ಕುರಿತಂತೆ ಪ್ರತಿಕ್ರಿಯಿಸಿದ ದೇವಾಲಯದ ಅರ್ಚಕ ಮನೋಜ್ ಶರ್ಮ, ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ, ಅವರಿಗೆ ಒಂದು ಬಲವಾದ ಸಂದೇಶವನ್ನು ಸಾರುವ ಸಲುವಾಗಿ ದೇವಿಯ ವಿಗ್ರಹಕ್ಕೆ ಮಾಸ್ಕ್ ತೊಡಿಸಬೇಕೆಂದು ನಿರ್ಧರಿಸಿದೆ. ಭಕ್ತರಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ನಾವು ಮಾಸ್ಕ್‌ಗಳನ್ನು ಪ್ರಸಾದಂತೆ ವಿತರಿಸುತ್ತಿದ್ದೇವೆ ಎಂದರು.

    ದೇವಾಲಯಕ್ಕೆ ಬರುವ ಭಕ್ತರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಿದ್ದೇವೆ. ದೇವಾಲಯದ ಆವರಣದಲ್ಲಿ ಕೋವಿಡ್ ಕುರಿತಂತೆ ಹಲವರು ಸಲಹಾ ಪಟ್ಟಿಯನ್ನು ಅಳವಡಿಸಿದ್ದೇವೆ. ಬೆಳಗ್ಗೆ ಹಾಗೂ ಸಂಜೆ ಮಾತ್ರ ದೇವಿಗೆ ಆರತಿ ಮಾಡಲಾಗುತ್ತದೆ. ಒಂದು ಬಾರಿಗೆ ದೇವಾಲಯದ ಒಳಗೆ 5 ಮಂದಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.