Tag: Panchyat

  • ಕಾಮಗಾರಿ ನಡೆಯುವುದಕ್ಕೂ ಮುನ್ನವೇ ಹಣ ಬಿಡುಗಡೆ

    ಕಾಮಗಾರಿ ನಡೆಯುವುದಕ್ಕೂ ಮುನ್ನವೇ ಹಣ ಬಿಡುಗಡೆ

    – ನೀರಿನಲ್ಲಿ ಕೊಚ್ಚಿ ಹೋಯ್ತು 22 ಲಕ್ಷ ರೂ.

    ಮಡಿಕೇರಿ: ಕಾಮಗಾರಿ ಮುಗಿದ ಮೇಲೆ ಹಣ ಬಿಡುಗಡೆ ಸಹಜ. ಆದರೆ ಇಲ್ಲಿ ಮಾತ್ರ ಕಾಮಗಾರಿ ನಡೆಯುವುದಕ್ಕೂ ಮುನ್ನವೇ ಹಣ ಬಿಡುಗಡೆ ಮಾಡುವ ಮೂಲಕ ಅವ್ಯವಹಾರ ನಡೆಸಿರುವುದು ಬಯಲಾಗಿದೆ. ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಪೈಪ್ ಲೈನ್ ಅಳವಡಿಸುವುದಕ್ಕೆ ಪಂಚಾಯ್ತಿ ಅನುದಾನದಿಂದ 22 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಆದರೆ ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಪಂಚಾಯ್ತಿ ಮಾತ್ರ ವರಸೆ ಬದಲಾಯಿಸಿದೆ.

    ಕೊಡಗು ಜಿಲ್ಲೆಯಲ್ಲಿ ಕಾವೇರಿ ಹುಟ್ಟಿ ಹರಿಯುತ್ತಾಳೆ ಆದರೂ ಇಂದಿಗೂ ಎಷ್ಟೋ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿಯೇ ಮಡಿಕೇರಿ ತಾಲೂಕಿನ ಮೂರ್ನಾಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಾಂಧಿನಗರದ ಪರಿಶಿಷ್ಟ ಜಾತಿ ವಾರ್ಡ್‍ಗೆ ಉಪ್ಪುಗುಂಡಿ ಬಳಿಯ ಕಾವೇರಿ ಹೊಳೆಯಿಂದ ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಸಿ, ನೀರಿನ ಟ್ಯಾಂಕ್ ನಿರ್ಮಾಣಕ್ಕೆ 2018-19 ಸಾಲಿನ ಪಂಚಾಯ್ತಿ ನಿಧಿಯ ಅನುಮೋದಿತ ಕ್ರಿಯಾ ಯೋಜನೆ ಅಡಿ 22 ಲಕ್ಷ ರೂ. ಮಂಜೂರು ಮಾಡಲಾಗಿತ್ತು.

    ಕಾಮಗಾರಿ ಜವಾಬ್ದಾರಿಯನ್ನು ಹುಣುಸೂರಿನ ಕೆಆರ್‍ಐಡಿಎಲ್ ಸಂಸ್ಥೆಗೆ ನೀಡಲಾಗಿತ್ತು. ಆದರೆ ಸಂಸ್ಥೆಯೂ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿಯೇ ಇಲ್ಲ. ಬದಲಾಗಿ, ಹಳೆ ಟ್ಯಾಂಕ್‍ಗೆ ಪೈಪ್‍ಗಳನ್ನು ಜೋಡಿಸಿದೆ. ಕಾವೇರಿ ನದಿಯಿಂದ ನೀರು ಲಿಫ್ಟ್ ಮಾಡಲು 30 ಹೆಚ್‍ಪಿ ಮೋಟರ್ ಮತ್ತು 4 ಇಂಚಿನ ಪೈಪ್ ಅಳವಡಿಸಲು ಪ್ಲಾನ್ ಮಾಡಲಾಗಿದೆ. ಆದರೆ ಇದೆಲ್ಲವನ್ನೂ ಗಾಳಿಗೆ ತೂರಿ ಕಡಿಮೆ ಇಂಚಿನ ಪೈಪ್ ಅಳವಡಿಸಿರುವುದರಿಂದ ಇದೀಗ ಪೈಪ್‍ಗಳು ಹೊಡೆದು ಹೋಗಿವೆ.

    ಇಷ್ಟೆಲ್ಲಾ ಸಮಸ್ಯೆಗಳಿದರೂ ಡಿ. 26, 2018ರಂದು 10 ಲಕ್ಷ ಮತ್ತು ಮಾರ್ಚ್ 6, 2019ರಂದು ಎರಡನೇ ಕಂತಿನಲ್ಲಿ 12 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಹೀಗಾಗಿ ಕಾಮಗಾರಿ ಪೂರ್ಣಗೊಳಿಸಿ ಬಿಲ್ ಸಲ್ಲಿಕೆಯಾಗುವುದಕ್ಕೂ ಮೊದಲೇ ಹಣ ಬಿಡುಗಡೆ ಮಾಡಿರುವ ಪಂಚಾಯ್ತಿ ನಡೆ ಬಗ್ಗೆ ಸಂಶಯ ಮೂಡಿಸಿದೆ. ಈ ಕುರಿತು ಜಿಲ್ಲಾ ಪಂಚಾಯ್ತಿಗೆ ದೂರು ನೀಡಲಾಗಿದೆ.

  • ಪಾಳುಬಿದ್ದ ಪುಷ್ಕರಣಿಯನ್ನು ಸಾರ್ವಜನಿಕರ ಜೊತೆ ಸೇರಿ ಸ್ವಚ್ಛಗೊಳಿಸಿದ್ರು ದಾವಣಗೆರೆ ಸಿಇಒ ಅಶ್ವತಿ

    ಪಾಳುಬಿದ್ದ ಪುಷ್ಕರಣಿಯನ್ನು ಸಾರ್ವಜನಿಕರ ಜೊತೆ ಸೇರಿ ಸ್ವಚ್ಛಗೊಳಿಸಿದ್ರು ದಾವಣಗೆರೆ ಸಿಇಒ ಅಶ್ವತಿ

    ದಾವಣಗೆರೆ: ಪಾಳು ಬಿದ್ದ ಪುಷ್ಕರಣಿಯನ್ನು ಅಧಿಕಾರಿಗಳೊಂದಿಗೆ ಸೇರಿ ಸ್ವಚ್ಛತೆ ಮಾಡಿ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಅಶ್ವತಿ ತೋರಿಸಿಕೊಟ್ಟಿದ್ದಾರೆ.

    ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ಕೊಣಚಗಲ್ಲು ಗ್ರಾಮದ ಐತಿಹಾಸಿಕ ಪುಷ್ಕರಣಿಯು ಹಲವು ವರ್ಷಗಳಿಂದ ಪಾಳು ಬಿದ್ದು, ಯಾವುದಕ್ಕೂ ಉಪಯೋಗವಾಗುವುದಿಲ್ಲ ಎನ್ನುವಂತಿತ್ತು. ಇದನ್ನ ಅರಿತ ಸಿಇಒ ಅಶ್ವತಿ ಮಂಗಳವಾರ ಬೆಳ್ಳಂಬೆಳಗ್ಗೆ ಸ್ವತಃ ಅವರೇ ಕೈಯಲ್ಲಿ ಪೆÇರಕೆ, ಕುಡಗೋಲು ಹಿಡಿದುಕೊಂಡು ತನ್ನ ಸಿಬ್ಬಂದಿ ಹಾಗೂ ಗ್ರಾಮಸ್ಥರನ್ನು ಜೊತೆಗೂಡಿಸಿಕೊಂಡು ಪುಷ್ಕರಣಿ ಸ್ವಚ್ಛ ಮಾಡಿದ್ದಾರೆ.

    ಸ್ವಚ್ಛಗೊಳಿಸಿದ ನಂತರ ಸ್ವಚ್ಛತೆಯ ಬಗ್ಗೆ ಜನರಿಗೆ ತಿಳುವಳಿಕೆಯನ್ನು ಸಹ ನೀಡಿ, ಸ್ವಚ್ಛತೆಯನ್ನು ಕಾಪಾಡುವಂತೆ ಮನವಿಯನ್ನು ಮಾಡಿಕೊಂಡರು. ಇದೇ ವೇಳೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರು ಇನ್ನು ಮುಂದೆ ಪುಷ್ಕರಣಿಯನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುತ್ತೇವೆ ಎಂದು ಭರವಸೆಯನ್ನು ಸಹ ನೀಡಿದರು.

    ಅಶ್ವತಿ ಅವರು ಈ ರೀತಿಯ ಹಲವು ಜನಪ್ರಿಯ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದರಿಂದ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ಶೌಚಾಲಯಕ್ಕಾಗಿ ಗುದ್ದಲಿ ಹಿಡಿದಿದ್ರು ಜಿ.ಪಂ. CEO- ಗ್ರಾ.ಪಂ. ಸಿಬ್ಬಂದಿಯಿಂದಲೇ ಗೋಲ್ಮಾಲ್ !