Tag: pakisthan

  • ಮೋದಿಯನ್ನು ರಾವಣ, ದುರ್ಯೋಧನನಿಗೆ ಹೋಲಿಸಿದ ಸಿಎಂ ಇಬ್ರಾಹಿಂ

    ಮೋದಿಯನ್ನು ರಾವಣ, ದುರ್ಯೋಧನನಿಗೆ ಹೋಲಿಸಿದ ಸಿಎಂ ಇಬ್ರಾಹಿಂ

    ಬಾಗಲಕೋಟೆ: ಈ ಪುಣ್ಯ ಭೂಮಿ ಮೇಲೆ ಪಾಪಿಗಳು ನಿಲ್ಲೋದಿಲ್ಲ. ರಾವಣನೂ ನಿಂತಿಲ್ಲ, ದುರ್ಯೋಧನನೂ ನಿಂತಿಲ್ಲ ಎನ್ನುವ ಮೂಲಕ ಮೋದಿಯನ್ನು ರಾವಣ ಹಾಗೂ ದುರ್ಯೋಧನನಿಗೆ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಹೋಲಿಸಿ ಟೀಕಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೇನೆಯನ್ನು ಮೋದಿ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಈಗ ಏನೇ ಇದ್ದರೂ ಕಾಲಾಯ ತಸ್ಮೈ ನಮಃ. ಈ ಪುಣ್ಯ ಭೂಮಿ ಮೇಲೆ ಪಾಪಿಗಳು ನಿಲ್ಲೋದಿಲ್ಲ. ರಾವಣನೂ ನಿಂತಿಲ್ಲ ದುರ್ಯೋಧನನೂ ನಿಂತಿಲ್ಲ ಎನ್ನುವ ಮೂಲಕ ಮೋದಿಯನ್ನು ರಾವಣ ಹಾಗೂ ದುರ್ಯೋಧನನಿಗೆ ಹೋಲಿಸಿ ಟೀಕಿಸಿದರು.

    ಮತ್ತೊಮ್ಮೆ ಮೋದಿ ಪ್ರಧಾನಿಯಾದರೆ ಪಾಕ್ ಸಮಸ್ಯೆ ಬಗೆಹರಿಯುತ್ತದೆ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ, ಪಾಕಿಸ್ತಾನಕ್ಕೂ ಮೋದಿಗೂ ಬಹಳ ಗಾಢವಾದ ಸಂಬಂಧವಿದೆ. ಅದಕ್ಕೆ ಕರೆಯದಿದ್ದರೂ ಮೋದಿ ನವಾಜ್ ಷರೀಫ್ ಮನೆಗೆ ಹೋಗಿದ್ದರು. ಕರೆಯದಿದ್ದರೂ ಯಾಕೆ ಹೋಗಿದ್ದರು ಎಂದು ಅವರು ಪ್ರಶ್ನಿಸಿ ಪ್ರತಿಕ್ರಿಯಿಸಿದರು.

    ಇಮ್ರಾನ್ ಖಾನ್ ಇದೇ ಮಾತನ್ನು ರಾಹುಲ್ ಗಾಂಧಿ ಪ್ರಧಾನಿಯಾಗಲಿ ಅಂದಿದ್ದರೆ ಬೇರೆಯಾಗಿರುತ್ತಿತ್ತು. ಅಮಿತ್ ಶಾ ಥಕ ಥೈ, ಥಕ ಥೈ ಎಂದು ಕುಣಿಯೋಕೆ ಶುರು ಮಾಡುತ್ತಿದ್ದರು ಎಂದು ವ್ಯಂಗ್ಯವಾಡಿದರು. ಹಾಗೆಯೇ ಒಳ್ಳೆಯವರು ಹುಟ್ಕೊತಾರೆ, ಸಮಯವೇ ಇದಕ್ಕೆ ಉತ್ತರ ಕೊಡುತ್ತೆ. ಈಶ್ವರಪ್ಪ ಮುಸಲ್ಮಾನರಿಗೆ ಟಿಕೆಟ್ ಕೊಡಲ್ಲ ಅಂದಿದ್ದಾರೆ. ಆದ್ರೆ ಅವರಿಗೆ ಕುರುಬರಿಗೆ ಟಿಕೆಟ್ ಕೊಡಿಸಲು ಆಗಿಲ್ಲ ಎಂದು ಹೇಳಿ ಟಾಂಗ್ ಕೊಟ್ಟರು.

  • 360 ಭಾರತೀಯ ಮೀನುಗಾರರ ಬಿಡುಗಡೆಗೆ ನಿರ್ಧರಿಸಿದ ಪಾಕ್!

    360 ಭಾರತೀಯ ಮೀನುಗಾರರ ಬಿಡುಗಡೆಗೆ ನಿರ್ಧರಿಸಿದ ಪಾಕ್!

    – ಭಾರತ ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ!

    ಇಸ್ಲಮಾಬಾದ್: ಪಾಕಿಸ್ತಾನದ ಸೆರೆಮನೆಯಲ್ಲಿ ಬಂಧಿಯಾಗಿರುವ 360 ಭಾರತೀಯ ಮೀನುಗಾರರನ್ನು ಇದೇ ತಿಂಗಳು ಬಿಡುಗಡೆಗೊಳಿಸಲಿದ್ದೇವೆ ಎಂದು ಪಾಕ್ ವಿದೇಶಾಂಗ ಕಚೇರಿ ಶುಕ್ರವಾರದಂದು ತಿಳಿಸಿದೆ.

    ಅರೇಬಿಯನ್ ಸಮುದ್ರದಲ್ಲಿ ಪಾಕ್ ಪ್ರದೇಶಿಕ ಜಲ ಭಾಗದಲ್ಲಿ, ಕಾನೂನು ಬಾಹಿರವಾಗಿ ಮೀನುಗಾರಿಕೆ ಮಾಡಿದ ಆರೋಪದಡಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿತ್ತು. ಆದರೆ ಸದ್ಯ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಕ್ ವಿದೇಶಾಂಗ ಕಚೇರಿ ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಘೋಷಿಸಿದೆ.

    ಏಪ್ರಿಲ್ 15 ರಂದು ಭಾರತೀಯ ಕೈದಿಗಳನ್ನು ನಾಲ್ಕು ಬ್ಯಾಚ್ ಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಪಾಕಿಸ್ತಾನ ಮತ್ತು ಭಾರತೀಯ ಕಡಲ ಏಜೆನ್ಸಿಗಳು ಪರಸ್ಪರರ ಮೀನುಗಾರರನ್ನು ಅಕ್ರಮ ಮೀನುಗಾರಿಕೆಯ ಆರೋಪದಲ್ಲಿ ಬಂಧಿಸಿವೆ. ಈ ಸಂಬಂಧ ಸೌಹಾರ್ದ ಸನ್ನೆಗಳು ಎರಡೂ ರಾಷ್ಟ್ರಗಳಿಂದ ಬರುವವರೆಗೂ ಬಂಧನಕ್ಕೊಳಗಾದವರನ್ನು ಜೈಲಿನಲ್ಲಿ ಸಾಮಾನ್ಯ ಕೈದಿಗಳನ್ನಾಗಿ ಇರಿಸಲಾಗುತ್ತದೆ.

    ಫೆ. 14ರಂದು ಪುಲ್ವಾಮದಲ್ಲಿ ನಡೆದ ಜೈಷ್ ಉಗ್ರರ ಆತ್ಮಾಹುತಿ ದಾಳಿಗೆ ಭಾರತೀಯ ಸಿಆರ್‍ಪಿಎಫ್‍ನ 40ಕ್ಕೂ ಹೆಚ್ಚು ಮಂದಿ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪತ್ಯುತ್ತರವಾಗಿ ಭಾರತೀಯ ವಾಯುಪಡೆ ಪಾಕ್ ಗಡಿಯ ಬಾಲಾಕೋಟ್‍ನಲ್ಲಿ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿ 200ಕ್ಕೂ ಹೆಚ್ಚು ಮಂದಿ ಉಗ್ರರನ್ನು ಸದೆಬಡಿದಿದ್ದರು. ಆ ಬಳಿಕ ಭಾರತ- ಪಾಕ್ ಗಡಿಯಲ್ಲಿ ಗುಂಡಿನ ಸದ್ದು ಜೋರಾಗಿಯೇ ಇದ್ದು, ಎರಡು ರಾಷ್ಟ್ರಗಳಲ್ಲಿಯೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

    ಶುಕ್ರವಾರದಂದು ಕೂಡ ಕಾಶ್ಮೀರ ಗಡಿಯಲ್ಲಿ ಎರಡು ರಾಷ್ಟ್ರಗಳ ನಡುವೆ ಗುಂಡಿನ ದಾಳಿ ನಡೆದಿದೆ. ಈ ವೇಳೆ ಭಾರತೀಯ ಸೇನೆಯ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ಕು ಮಂದಿ ಮಕ್ಕಳು ಸೇರಿದಂತೆ ಓಟ್ಟು ಆರು ಮಂದಿ ಅಮಾಯಕ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಪಾಕ್ ಸೇನೆ ಆರೋಪಿಸಿದೆ.

  • 121 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರೋ ಮರ!

    121 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರೋ ಮರ!

    ಇಸ್ಲಮಾಬಾದ್: ತಪ್ಪು ಮಾಡಿದರೇ ಮನುಷ್ಯರಿಗೆ ಶಿಕ್ಷೆ ಕೊಡುತ್ತಾರೆ, ಬಂಧನದಲ್ಲಿ ಇಡುತ್ತಾರೆ. ಆದ್ರೆ ಪಾಕಿಸ್ತಾನದಲ್ಲಿ ಒಂದು ಆಲದ ಮರಕ್ಕೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಸುಮಾರು 121 ವರ್ಷದಿಂದ ಆ ಮರ ಶಿಕ್ಷೆ ಅನುಭವಿಸುತ್ತಿದೆ.

    ಹೌದು, ವಿಚಿತ್ರ ಅನಿಸಿದರೂ ಇದು ಸತ್ಯ. ಪಾಕಿಸ್ತಾನದ ಖೆಬರ್ ಏಜೆನ್ಸಿಯಲ್ಲಿರುವ ಆಲದ ಮರಕ್ಕೆ ಶತಮಾನದ ಹಿಂದೆ ಇದ್ದ ಒಬ್ಬ ಬ್ರಿಟಿಷ್ ಅಧಿಕಾರಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಬ್ರಿಟಿಷ್ ಸೇನಾಧಿಕಾರಿ ಮಾಡಿದ ಎಡವಟ್ಟಿನಿಂದ ಇಂದಿಗೂ ಆ ಆಲದ ಮರಕ್ಕೆ ಸರಪಳಿಗಳನ್ನು ಕಟ್ಟಿ ಬಂಧಿಸಿಡಲಾಗಿದೆ. ಸುಮಾರು 121 ವರ್ಷಗಳಿಂದ ಈ ಮರವನ್ನು ಬಂಧಿಸಿಡಲಾಗಿದ್ದು, ಅದರ ಮುಂದೆ “ಐ ಯಮ್ ಅಂಡರ್ ಅರೆಸ್ಟ್” ಎಂಬ ಬೋರ್ಡ್ ನ್ನು ಕೂಡ ನೇತು ಹಾಕಲಾಗಿದೆ.

    ಇದನ್ನು ನೋಡಿದಾಗ ವಿಚಿತ್ರ ಅನಿಸೋದು ಸಾಮಾನ್ಯ. ತಪ್ಪು ಮಾಡಿದ ಮನುಷ್ಯರಿಗೆ ಜೀವಾವಧಿ ಶಿಕ್ಷೆ ನೀಡುತ್ತಾರೆ. ಆದ್ರೆ ಯಾವ ತಪ್ಪಿಗೆ ಮರಕ್ಕೆ ಈ ಶಿಕ್ಷೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. 1898ನೇ ವರ್ಷದಲ್ಲಿ ಈ ಮರ ಇನ್ನೂ ಗಿಡವಾಗಿತ್ತು. ಆಗ ಜೇಮ್ಸ್ ಸಕ್ವಿಡ್ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ಒಂದು ದಿನ ಕುಡಿದ ನಶೆಯಲ್ಲಿ ಗಿಡದ ಮುಂದು ಹೋಗುತ್ತಿದ್ದಾಗ, ಆತನಿಗೆ ಗಿಡ ತನ್ನ ಕಡೆಗೆ ನಡೆದು ಬರುತ್ತಿದಂತೆ ಕಾಣಿಸಿದೆ. ಆದರಿಂದ ತನ್ನ ಮೇಲೆ ಈ ಗಿಡ ದಾಳಿ ಮಾಡಲು ಯತ್ನಿಸುತ್ತಿದೆ ಎಂದು ತಕ್ಷಣ ಅದನ್ನು ಬಂಧಿಸಿ ಅಂತ ಸೈನಿಕರಿಗೆ ಆದೇಶಿಸಿದ. ಆದರಿಂದ ಅಂದಿನಿಂದಲೂ ಈ ಮರ ಪಾಕ್ ಸೇನಾ ಕಂಟೋನ್ಮೆಂಟ್‍ನಲ್ಲಿ ಬಂಧನದಲ್ಲಿದೆ.

    ಕಬ್ಬಿಣದ ಸರಪಳಿಗಳಿಂದ ಮರವನ್ನು ಬಂಧಿಸಿಟ್ಟಿರುವುದನ್ನು ನೋಡಿದ ಜನರು ಇದು ತುಂಬಾ ಅನ್ಯಾಯ, ಆ ಮರಕ್ಕೆ ಬಿಡುಗಡೆ ಕೊಡಿ ಎಂದು ಪಾಕ್ ಸೇನಾ ಕಂಟೋನ್ಮೆಂಟ್‍ನಲ್ಲಿರುವ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಮಾತ್ರ ಬ್ರಿಟಿಷ್ ಅಧಿಕಾರಿಯ ಮೂರ್ಖತನದ ಸಾಕ್ಷಿಯಾನ್ನಾಗಿ ಅದನ್ನು ಹಾಗೆಯೇ ಬಂಧನದಲ್ಲಿ ಇಟ್ಟಿದ್ದಾರೆ.

  • ನೀವು ಶಾಂತಿಪ್ರಿಯರಾಗಿದ್ದರೆ ಮಸೂದ್‍ನನ್ನು ಒಪ್ಪಿಸಿ: ಪಾಕ್ ಪಿಎಂಗೆ ಸುಷ್ಮಾ ಸ್ವರಾಜ್ ಸವಾಲು

    ನೀವು ಶಾಂತಿಪ್ರಿಯರಾಗಿದ್ದರೆ ಮಸೂದ್‍ನನ್ನು ಒಪ್ಪಿಸಿ: ಪಾಕ್ ಪಿಎಂಗೆ ಸುಷ್ಮಾ ಸ್ವರಾಜ್ ಸವಾಲು

    – ಭಾರತ ಬದಲಾಗಿದೆ, ಯೋಚಿಸಲಾಗದ ಉತ್ತರ ನೀಡುತ್ತೆ
    – ಭಯೋತ್ಪಾದನೆ, ಶಾಂತಿ ಮಾತುಕತೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ

    ನವದೆಹಲಿ: ನೀವು ಶಾಂತಿ ಪ್ರಿಯರು ಆಗಿದ್ದರೆ ಮಸೂದ್ ಅಜರ್‍ನನ್ನು ಭಾರತಕ್ಕೆ ಒಪ್ಪಿಸಿ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ಗೆ ಸವಾಲು ಎಸೆದಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳದೆ, ಭಯೋತ್ಪಾದನೆಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ ಸರ್ಕಾರದ ವಿರುದ್ಧ ಸುಷ್ಮಾ ಸ್ವರಾಜ್ ಹರಿಹಾಯ್ದಿದ್ದಾರೆ. ಕೆಲವರು ಪಾಕ್ ಪ್ರಧಾನಿ ಉದಾರಿ, ಗೌರವಾನ್ವಿತ ರಾಜಕಾರಣಿ ಎನ್ನುತ್ತಾರೆ. ಹಾಗಾದರೆ ಅವರಿಗೆ ಅಷ್ಟೊಂದು ಉದಾರತನವಿದ್ದರೆ ಜೈಷ್-ಇ-ಮೊಹಮ್ಮದ್ ಮುಖ್ಯಸ್ಥ ಮಜೂರ್ ಅಜರ್‍ನನ್ನು ಭಾರತಕ್ಕೆ ಒಪ್ಪಿಸಲಿ ಎಂದು ಸವಾಲು ಹಾಕಿದ್ದಾರೆ. ಹಾಗೆಯೇ ಎಲ್ಲಿಯವರೆಗೆ ಪಾಕ್ ಸರ್ಕಾರ ಭಯೋತ್ಪಾದನೆ ಹಾಗೂ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲವೋ ಅಲ್ಲಿವರೆಗೆ ಪಾಕ್ ಜೊತೆ ಭಾರತದ ಶಾಂತಿ ಮಾತುಕತೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುವ ಮೂಲಕ ಸುಷ್ಮಾ ಸ್ವರಾಜ್ ಪಾಕ್‍ಗೆ ಖಡಕ್ ಸಂದೇಶ ನೀಡಿದ್ದಾರೆ.

    ಮೊದಲು ಭಯೋತ್ಪಾದನೆಗೆ ಪಾಕ್ ಸರ್ಕಾರ ಕಡಿವಾಣ ಹಾಕಲಿ. ನಂತರ ಪಾಕ್ ಜೊತೆ ಶಾಂತಿ ಮಾತುಕತೆ ನಡೆಯುತ್ತದೆ. ಭಯೋತ್ಪಾದನೆ ನಡುವೆ ಶಾಂತಿ ಮಾತುಕತೆ ಅಸಾಧ್ಯ. ಭಾರತೀಯ ವಾಯುಪಡೆ ಜೆಇಎಂ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮಾಡಿದೆ. ಆದ್ರೆ ಜೆಇಎಂ ಉಗ್ರರ ಪ್ರತಿದಾಳಿ ಬದಲು ಪಾಕ್ ಸೇನೆ ಯಾಕೆ ನಮ್ಮ ವಿರುದ್ಧ ದಾಳಿ ಮಾಡುತ್ತಿದೆ ಎಂದು ಸುಷ್ಮ ಸ್ವರಾಜ್ ಪ್ರಶ್ನಿಸಿದ್ದಾರೆ.

    ನೀವು ಕೇವಲ ಉಗ್ರರಿಗೆ ನಿಮ್ಮ ಮಣ್ಣಿನಲ್ಲಿ ಜಾಗ ಕೊಟ್ಟಿಲ್ಲ, ಅವರನ್ನೂ ನೀವು ಸಾಕುತ್ತಿದ್ದೀರಿ. ಅಲ್ಲದೆ ಉಗ್ರರ ವಿರುದ್ಧ ಸಂತ್ರಸ್ತ ರಾಷ್ಟ್ರಗಳು ಬಂದರೆ, ಉಗ್ರರ ಪರವಾಗಿ ನೀವು ದಾಳಿ ಮಾಡುತ್ತಿರಿ. ಪಾಕ್ ಸರ್ಕಾರ ಅಲ್ಲಿನ ಸೇನೆ ಹಾಗೂ ಉಗ್ರರನ್ನು ನಿಯಂತ್ರಿಸುವ ಅಗತ್ಯವಿದೆ. ಇಲ್ಲವಾದರೆ ದ್ವೀಪಕ್ಷೀಯ ಸಂಬಂಧಗಳು ನಾಶವಾಗುವ ಸಮಯ ಮತ್ತೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

    ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಯೋಧರು ಹುತಾತ್ಮರಾದ ಬಗ್ಗೆ ಮಾತನಾಡುತ್ತ, ಪುಲ್ವಾಮಾ ದಾಳಿ ನಡೆದಾಗ ಹಲವು ರಾಷ್ಟ್ರಗಳು ಭಾರತದ ಪರವಾಗಿ ನಿಂತಿದ್ದವು. ಹಾಗೆಯೇ ಯೋಧರ ಸಾವಿಗೆ ಸಂತಾಪ ಸೂಚಿಸಿ, ಭಾರತ ಈ ಪರಿಸ್ಥತಿಯನ್ನು ಹೇಗೆ ನಿಭಾಯಿಸುತ್ತೆ ಎಂದಿದ್ದವು. ಅವರಿಗೆ ನಾನು ಕೊಟ್ಟ ಉತ್ತರ ಒಂದೇ. ಅದು ಭಾರತ ಬದಲಾಗಿದೆ. ಮತ್ತೊಮ್ಮೆ ಈ ರೀತಿ ದಾಳಿ ಮಡಿದರೇ ಭಾರತ ಸುಮ್ಮನೆ ಕೂರುವುದಿಲ್ಲ. ಯೋಚಿಸಲಾಗದ ಉತ್ತರ ನೀಡುತ್ತದೆ ಎಂದು ಹೇಳಿ ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಪಾಕಿಸ್ತಾನದ ಕಂತ್ರಿ ಬುದ್ಧಿಯನ್ನು ಎಳೆಎಳೆಯಾಗಿ ವಿವರಿಸಿದ ಮಾಜಿ ಅಧ್ಯಕ್ಷ ಮುಷರಫ್

    ಪಾಕಿಸ್ತಾನದ ಕಂತ್ರಿ ಬುದ್ಧಿಯನ್ನು ಎಳೆಎಳೆಯಾಗಿ ವಿವರಿಸಿದ ಮಾಜಿ ಅಧ್ಯಕ್ಷ ಮುಷರಫ್

    ನವದೆಹಲಿ: ಮುಂದೆ ಶಾಂತಿ ಮಂತ್ರ, ಹಿಂದೆ ಕುತಂತ್ರ ಮಾಡುತ್ತಿರುವ ಪಾಕಿಸ್ತಾನದ ಅಸಲಿ ಬಣ್ಣವನ್ನು ಅಲ್ಲಿನ ಮಾಜಿ ಅಧ್ಯಕ್ಷರೇ ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್‍ಐ ಭಾರತದ ಮೇಲೆ ದಾಳಿ ನಡೆಸಲು ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯನ್ನು ಬಳಸಿಕೊಳ್ಳುತ್ತಿತ್ತು ಎಂದು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನೀಡಿರುವ ಹೇಳಿಕೆ ಈಗ ಭಾರಿ ಸದ್ದು ಮಾಡುತ್ತಿದೆ.

    ಹೌದು, ಬುಧವಾರದಂದು ಪಾಕಿಸ್ತಾನದ ಪತ್ರಕರ್ತರೊಬ್ಬರು ದೂರವಾಣಿ ಮೂಲಕ ಪರ್ವೇಜ್ ಮಷರಫ್ ಅವರ ಸಂದರ್ಶನ ನಡೆಸಿದ್ದರು. ಈ ವೇಳೆ ಮುಷರಫ್ ಅವರು ಪಾಕಿಸ್ತಾನದ ನಿಜ ಸ್ವರೂಪವನ್ನು ಬಯಲು ಮಾಡಿದ್ದಾರೆ. “ನನ್ನ ಅಧಿಕಾರವಧಿಯಲ್ಲಿ ಪಾಕ್‍ನ ಗುಪ್ತಚರ ಇಲಾಖೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಸಹಾಯ ಪಡೆದು ಭಾರತದ ಮೇಲೆ ದಾಳಿ ನಡೆಸುತ್ತಿತ್ತು. ಈಗ ಈ ಉಗ್ರ ಸಂಘಟನೆಯ ವಿರುದ್ಧ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ” ಎಂದು ಹೇಳಿದ್ದಾರೆ.

    1999-2008ರ ಅವಧಿಯಲ್ಲಿ ನೀವು ಅಧ್ಯಕ್ಷರಾಗಿದ್ದೀರಿ. ನಿಮ್ಮ ಅಧಿಕಾರದಲ್ಲಿ ನೀವು ಯಾಕೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ ಅಂತ ಪ್ರಶ್ನಿಸಿದಕ್ಕೆ, ಆಗಿನ ಚಿತ್ರಣವೇ ಬೇರೆಯಾಗಿತ್ತು. ಆಗ ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಒಬ್ಬರ ಮೇಲೊಬ್ಬರು ರಹಸ್ಯವಾಗಿ ದಾಳಿ ನಡೆಯುತಿತ್ತು. ನಮ್ಮ ದೇಶದ ಗುಪ್ತಚರ ಇಲಾಖೆಗಳು ಕೂಡ ಭಾಗಿಯಾಗಿತ್ತು. ಆದರಿಂದ ಜೈಷ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆಗಲಿಲ್ಲ ಎಂದು ಉತ್ತರಿಸಿದ್ದಾರೆ.

    ಫೆ. 14ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಭಾರತೀಯ ಯೋಧರು ಮೃತಪಟ್ಟಿದ್ದರು. ಈ ದಾಳಿಯನ್ನು ಮೌಲಾನ ಮಸೂದ್ ಅಜಾರ್ ಮುಖ್ಯಸ್ಥನಾಗಿರು ಜೈಷ್ ಉಗ್ರ ಸಂಘಟನೆಯೇ ನಡೆಸಿರುವುದಾಗಿ ಒಪ್ಪಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ವದಲ್ಲೇ ಭಾರತದಲ್ಲಿ ಮೊಬೈಲ್ ಡೇಟಾ ದರ ಅಗ್ಗ: ಯಾವ ದೇಶದಲ್ಲಿ ಎಷ್ಟು?

    ವಿಶ್ವದಲ್ಲೇ ಭಾರತದಲ್ಲಿ ಮೊಬೈಲ್ ಡೇಟಾ ದರ ಅಗ್ಗ: ಯಾವ ದೇಶದಲ್ಲಿ ಎಷ್ಟು?

    ನವದೆಹಲಿ: ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಬಂದ ಮೇಲೆ ದೇಶದಲ್ಲಿ ಡೇಟಾ ಕ್ರಾಂತಿ ನಡೆದಿದ್ದು ನಿಮಗೆ ಗೊತ್ತೇ ಇದೆ. ಈಗ ಈ ಕ್ರಾಂತಿಯಿಂದ ಏನಾಯ್ತು ಎನ್ನುವ ಪ್ರಶ್ನೆಗೆ ಉತ್ತರ ಎಂಬಂತೆ ವಿಶ್ವದಲ್ಲಿಯೇ ಭಾರತದಲ್ಲಿ ಮೊಬೈಲ್ ಡೇಟಾ ದರ ಅತಿ ಕಡಿಮೆ ಎಂದು ಅಧ್ಯಯನವೊಂದು ತಿಳಿಸಿದೆ.

    ಭಾರತದಲ್ಲಿ ಒಂದು ಜಿಬಿ ಮೊಬೈಲ್ ಡೇಟಾಕ್ಕೆ ಸರಾಸರಿ 18.50 ರೂ. ಇದ್ದರೆ ವಿಶ್ವದಲ್ಲಿ 1 ಜಿಬಿ ಡೇಟಾ ದರ ಸರಾಸರಿ 600 ರೂ. ಇದೆ ಎಂದು ಕೇಬಲ್ ಕೊ ಡಾಡ್ ಯುಕೆ ಸಂಸ್ಥೆ ತಿಳಿಸಿದೆ. ಒಟ್ಟು 232 ದೇಶಗಳನ್ನು ಅಧ್ಯಯನಕ್ಕೆ ಪರಗಣಿಸಿ ಈ ವರದಿಯನ್ನು ಸಿದ್ದಪಡಿಸಲಾಗಿದೆ.

    ಭಾರತದಲ್ಲಿ ಒಂದು ಜಿಬಿ ಡೇಟಾಕ್ಕೆ ಕನಿಷ್ಟ ದರ 1.75 ರೂ. ಇದ್ದರೆ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ಇದೆ. ಇಲ್ಲಿ 1 ಜಿಬಿ ಡೇಟಾಗೆ 0.26 ಡಾಲರ್(18.22 ರೂ.) ದರ ಇದೆ. ಮೂರನೇ ಸ್ಥಾನದಲ್ಲಿ ಚೀನಾ(60.97 ರೂ.), ನಾಲ್ಕನೇಯ ಸ್ಥಾನದಲ್ಲಿ ಅಮೆರಿಕ ಮತ್ತು ಬ್ರೆಜಿಲ್(105.14 ರೂ.) ಇದೆ. ಒಂದು ಜಿಬಿಗೆ ಅತಿ ಹೆಚ್ಚು ಹಣವನ್ನು ಜಿಂಬಾಬ್ವೆ ಜನ ಪಾವತಿಸುತ್ತಿದ್ದಾರೆ. ಇಲ್ಲಿ 1 ಜಿಬಿ ಡೇಟಾ ದರ 525.72 ರೂ. ಇದೆ. ಭಾರತದ ಮೇಲೆ ಉಗ್ರರನ್ನು ಕಳುಹಿಸಿ ದಾಳಿ ನಡೆಸುವ ಪಾಕಿಸ್ತಾನದಲ್ಲಿ 1 ಜಿಬಿ ಡೇಟಾ ಕನಿಷ್ಟ ದರ 40 ಪಾಕಿಸ್ತಾನ ರೂ. ಇದೆ.

    ಭಾರತದಲ್ಲಿ ಭಾರೀ ವೇಗದಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆ ಬೆಳವಣಿಗೆಯಾಗುತ್ತಿದೆ. ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಕಡಿಮೆ ದರದಲ್ಲಿ ಡೇಟಾವನ್ನು ನೀಡುತ್ತಿವೆ ಎಂದು ಅಧ್ಯಯನ ತಿಳಿಸಿದೆ.

    ವಿಶ್ವದ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡೇಟಾ ದರ ಕಡಿಮೆ ಎನ್ನುವುದು ಹೊಸ ಸುದ್ದಿಯಲ್ಲ. ಈ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಜಿಯೋಗೆ ಸಂಬಂಧಿಸಿದ ಹೊಸ ಪ್ಲಾನ್ ಬಿಡುಗಡೆ ಮಾಡುವಾಗಲೇ ಈ ವಿಚಾರವನ್ನು ತಿಳಿಸಿದ್ದರು. 2015ರ ಸೆಪ್ಟೆಂಬರ್ 5 ರಂದು ಜಿಯೋ ಎಂಟ್ರಿ ಕೊಟ್ಟ ಬಳಿಕ ದೇಶದಲ್ಲಿ ಡೇಟಾ ಸಮರ ಆರಂಭಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಂದ ಸೊಳ್ಳೆಗಳನ್ನು ಎಣಿಸುತ್ತಾ ಕೂರಬೇಕೇ: ಪ್ರತಿಪಕ್ಷಗಳಿಗೆ ವಿ.ಕೆ ಸಿಂಗ್ ಟಾಂಗ್

    ಕೊಂದ ಸೊಳ್ಳೆಗಳನ್ನು ಎಣಿಸುತ್ತಾ ಕೂರಬೇಕೇ: ಪ್ರತಿಪಕ್ಷಗಳಿಗೆ ವಿ.ಕೆ ಸಿಂಗ್ ಟಾಂಗ್

    ನವದೆಹಲಿ: ಸುಮ್ಮನೆ ಕಾಟಕೊಡುವ ಸೊಳ್ಳೆಗಳನ್ನು ಹಿಟ್ ಸ್ಪ್ರೇನಿಂದ ಸಾಯಿಸಿದ ಬಳಿಕ ಅದನ್ನು ಏಣಿಸುತ್ತಾ ಕೂರಬೇಕೇ ಎಂದು ಟ್ವೀಟ್ ಮಾಡುವ ಮೂಲಕ ಏರ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸಿದ ಪ್ರತಿಪಕ್ಷಗಳಿಗೆ ರಕ್ಷಣಾ ಖಾತೆ ರಾಜ್ಯ ಸಚಿವ ವಿ.ಕೆ ಸಿಂಗ್ ಟಾಂಗ್ ಕೊಟ್ಟಿದ್ದಾರೆ.

    ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ಪಾಕ್‍ನ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು. ಈ ಏರ್ ಸ್ಟ್ರೈಕ್‍ನಲ್ಲಿ ಸುಮಾರು 250 ಮಂದಿ ಉಗ್ರರು ಮೃತಪಟ್ಟಿದ್ದಾರೆ ಎಂದು ವಿ.ಕೆ ಸಿಂಗ್ ಹೇಳಿದ್ದರು.

    ಆದರೆ ಪ್ರತಿಪಕ್ಷಗಳು ಮಾತ್ರ ಇದನ್ನು ನಂಬದೆ ಉಗ್ರರು ಸಾವನ್ನಪ್ಪಿದ್ದಕ್ಕೆ ಸಾಕ್ಷಿ ಕೊಡಿ. ಎಷ್ಟು ಮಂದಿ ಉಗ್ರರು ಮೃತಪಟ್ಟಿದ್ದಾರೆ ಅಂತ ನಿಖರ ಮಾಹಿತಿ ನೀಡಿ ಅಂತ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ಅಲ್ಲದೆ ಏರ್ ಸ್ಟ್ರೈಕ್ ಮುಂದಿಟ್ಟುಕೊಂದು ಮೋದಿ ಸರ್ಕಾರ ರಾಜಕೀಯ ಮಾಡುತ್ತಿದೆ ಅಂತ ಪ್ರತಿಪಕ್ಷಗಳು ಆರೋಪಗಳನ್ನು ಕೂಡ ಮಾಡುತ್ತಿವೆ. ಇದನ್ನೂ ಓದಿ:ಏರ್ ಸ್ಟ್ರೈಕ್‍ನಲ್ಲಿ ಸುಮಾರು 250 ಉಗ್ರರು ಬಲಿ: ಕೇಂದ್ರ ಸಚಿವ ವಿಕೆ ಸಿಂಗ್

    ಈ ಆರೋಪಗಳಿಗೆ ವಿಕೆ ಸಿಂಗ್, ಸೊಳ್ಳೆಗಳನ್ನು ಕೊಂದಾಗ ನಾವು ಅದನ್ನು ಲೆಕ್ಕ ಹಾಕಲ್ಲ ಎನ್ನುವ ಮೂಲಕ ಉಗ್ರರನ್ನು ಸೊಳ್ಳೆಗೆ ಹೋಲಿಸಿದ್ದಾರೆ. ಹಿಟ್ ಬಳಸಿ ಸೊಳ್ಳೆಯನ್ನು ಕೊಲ್ಲುವ ಹಾಗೆ ವಾಯುಪಡೆ ಏರ್ ಸ್ಟ್ರೈಕ್ ಮಾಡಿ ಉಗ್ರರನ್ನು ಮಟ್ಟಹಾಕಿದೆ ಎಂದು ಹೇಳಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಬೆಳಗ್ಗೆ 3.30ರ ಹೊತ್ತಿಗೆ ತುಂಬಾ ಸೊಳ್ಳೆಗಳು ಇತ್ತು. ಅದಕ್ಕೆ ನಾನು ಹಿಟ್ ಬಳಸಿ ಅವುಗಳನ್ನು ಕೊಂದೆ. ಈಗ ನಾನು ಎಷ್ಟು ಸೊಳ್ಳೆಗಳು ಸತ್ತಿವೆ ಅಂತ ಲೆಕ್ಕ ಹಾಕುತ್ತಾ ಕೂರಬೇಕಾ? ಅಥವಾ ನೆಮ್ಮದಿಯಿಂದ ನಿದ್ರೆ ಮಾಡಬೇಕಾ? ಅಂತ ಬರೆದು ಟ್ವೀಟ್ ಮಾಡುವ ಮೂಲಕ ತಮ್ಮದೇ ಶೈಲಿಯಲ್ಲಿ ವಿರೋಧ ಪಕ್ಷಗಳಿಗೆ ಉತ್ತರ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಫೇಲ್ ಬಗ್ಗೆ ಮಾತನಾಡುವಾಗ ಕಾಮನ್ ಸೆನ್ಸ್ ಬಳಸಿ: ಮೋದಿ

    ರಫೇಲ್ ಬಗ್ಗೆ ಮಾತನಾಡುವಾಗ ಕಾಮನ್ ಸೆನ್ಸ್ ಬಳಸಿ: ಮೋದಿ

    ನವದೆಹಲಿ: ರಫೇಲ್ ಒಪ್ಪಂದದ ಬಗ್ಗೆ ಪ್ರತಿಪಕ್ಷ ನಾಯಕರು ಮಾತನಾಡುವ ಮುನ್ನ ಕಾಮನ್ ಸೆನ್ಸ್ ಬಳಸಿ. ಸುಮ್ಮನೆ ಮನಬಂದಂತೆ ಮಾತನಾಡಬೇಡಿ ಅಂತ ಪ್ರಧಾನಿ ನರೇಂದ್ರ ಮೋದಿ ಅವರು ವಿಪಕ್ಷ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

    ನಾನು ಹೇಳಿದ್ದು ನಮ್ಮ ವಾಯುಪಡೆ ಬಳಿ ರಫೇಲ್ ಜೆಟ್ ಇದ್ದಿದ್ದರೇ, ಶತ್ರುಗಳ ಮೇಲೆ ನಡೆಸಿದ ದಾಳಿಯಲ್ಲಿ ನಾವು ಯಾವ ಜೆಟ್‍ಗಳನ್ನು ಕಳೆದುಕೊಳ್ಳುತ್ತಿರಲಿಲ್ಲ. ಹಾಗೆಯೇ ಉಗ್ರರು ಉಳಿಯಲು ಬಿಡುತ್ತಿರಲಿಲ್ಲ ಅಂತ. ಆದ್ರೆ ವಿರೋಧ ಪಕ್ಷಗಳು ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು ಸುಮ್ಮನೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇನ್ಮುಂದೆ ರಫೇಲ್ ಬಗ್ಗೆ ಮಾತನಾಡುವ ಮುನ್ನ ದಯವಿಟ್ಟು ಸ್ವಲ್ಪ ಕಾಮನ್ ಸೆನ್ಸ್ ಬಳಸಿ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ನಾಚಿಕೆಯಾಗಲ್ವೇ, ರಫೇಲ್ ಖರೀದಿ ವಿಳಂಬಕ್ಕೆ ನೀವೇ ನೇರ ಹೊಣೆ: ಪ್ರಧಾನಿ ವಿರುದ್ಧ ರಾಹುಲ್ ಕಿಡಿ

    ನಾವು ಸೇನೆಯನ್ನು ನಂಬಿ ಅದರ ಬಗ್ಗೆ ಹೆಮ್ಮೆ ಪಡುವುದು ಸಹಜ. ಆದ್ರೆ ಸೇನೆಯ ಮೇಲೆಯೇ ಯಾಕೆ ಕೆಲವರು ಶಂಕಿಸುತ್ತಿದ್ದಾರೆ ಅಂತ ಗೊತ್ತಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಹಾಗೆಯೆ ಉಗ್ರರು ಹಾಗೂ ಭಯೋತ್ಪಾದನೆಯನ್ನು ಮಟ್ಟಹಾಕಲು ಭಾರತ ಪ್ರಯತ್ನಿಸುತ್ತಿದೆ. ಅದನ್ನು ಹೇಗೆ ಮಾಡಬೇಕು ಅಂತ ಯೋಚಿಸುತ್ತಿದೆ. ಭಯೋತ್ಪಾದನೆ ವಿಚಾರದಲ್ಲಿ ಭಾರತ ಸುಮ್ಮನೆ ಕೂರಲ್ಲ. ಭಯೋತ್ಪಾದನೆಯನ್ನು ಬುಡದಿಂದ ಕಿತ್ತೆಸೆಯುವ ಕೆಲಸ ನಾವು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಸ್ಟ್ರೈಕ್ ಮಾಡಿದ್ದು ಉಗ್ರರ ಮೇಲೋ? ಮರಗಳ ಮೇಲೋ?: ಸಿಧು ಟಾಂಗ್

    ಏರ್ ಸ್ಟ್ರೈಕ್ ಮಾಡಿದ್ದು ಉಗ್ರರ ಮೇಲೋ? ಮರಗಳ ಮೇಲೋ?: ಸಿಧು ಟಾಂಗ್

    ನವದೆಹಲಿ: ದಿನದಿಂದ ದಿನಕ್ಕೆ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಉಗ್ರರ ನೆಲೆ ಮೇಲೆ ಭಾರತೀಯ ವಾಯುಪಡೆ ದಾಳಿ ಮಾಡಿರುವ ವಿಚಾರ ರಾಜಕೀಯವಾಗುತ್ತಿದೆ. ಈ ಮಧ್ಯೆ ಏರ್ ಸ್ಟ್ರೈಕ್ ಮಾಡಿರೋದು ಉಗ್ರರ ಮೇಲೋ? ಅಥವಾ ಮರಗಳ ಮೇಲೋ? ಅಂತ ಪಂಜಾಬ್ ಸರ್ಕಾರದ ಮಂತ್ರಿ ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, ರಾಜಕೀಯಕ್ಕೆ ಸೇನೆಯನ್ನು ಬಳಸಲಾಗುತ್ತಿದೆ. ಇದನ್ನು ನಿಲ್ಲಿಸಿ, ನೀವು ಚುನಾವಣಾ ತಂತ್ರವಾಗಿ ಏರ್ ಸ್ಟ್ರೈಕ್ ಬಳಸಿಕೊಳ್ಳತ್ತಿದ್ದಿರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಸರ್ಜಿಕಲ್ ಸ್ಟ್ರೈಕ್ 2.0 ಅಲ್ಲಿ ನಿಜವಾಗಿಯೂ 300 ಉಗ್ರರು ಮೃತಪಟ್ಟಿದ್ದಾರಾ? ದಾಳಿ ಉಗ್ರ ಮೇಲೆ ನಡೆದಿದೆಯೋ ಅಥವಾ ಮರಗಳ ಮೇಲೋ? ಅಂತ ವ್ಯಂಗ್ಯವಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    300 ಮಂದಿ ಉಗ್ರರು ಮೃತಪಟ್ಟಿದ್ದಾರೆ ಎಂಬುದು ನಿಜಾನಾ ಅಥವಾ ಸುಳ್ಳಾ? ಇದರ ಉದ್ದೇಶವೇನು? ಏರ್ ಸ್ಟ್ರೈಕ್ ಮೂಲಕ ಉಗ್ರರನ್ನು ನೆಲಸಮ ಮಾಡಿದ್ದಿರೋ ಅಥವಾ ಮರಗಳನ್ನು ಉರುಳಿದ್ದಿರೋ? ಇದು ಚುನಾವಣಾ ತಂತ್ರನಾ? ಶತ್ರುಗಳ ವಿರುದ್ಧ ಹೋರಾಡುವಲ್ಲಿ ನಮ್ಮ ದೇಶಕ್ಕೆ ಮೋಸವಾಗಿದೆ. ದಯವಿಟ್ಟು ಸೈನಿಕರನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಸೇನೆಯೂ ಕೂಡ ನಾಡಿನಷ್ಟೇ ಪವಿತ್ರವಾದದ್ದು ಎಂದು ಬರೆದು ಬಿಜೆಪಿ ನಾಯಕರ ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಒಂದು ಕಡೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ದಾಳಿಯಲ್ಲಿ 250ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದ್ದರು. ಇನ್ನೊಂದೆಡೆ ಕೇಂದ್ರ ಸಚಿವ ದಾಳಿಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಈಗಾಗಲೇ ಪ್ರತಿಪಕ್ಷ ನಾಯಕರು ಏರ್ ಸ್ಟ್ರೈಕ್ ಬಗ್ಗೆ ಮಾಹಿತಿ ನೀಡಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಅಲ್ಲದೆ ಕೆಲವು ವಿರೋಧ ಪಕ್ಷ ನಾಯಕರು ಏರ್ ಸ್ಟ್ರೈಕ್ ಒಂದು ರಾಜಕೀಯ ಗಿಮಿಕ್ ಎಂದು ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಇದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಕ್ಷಿ ಕೇಳುವವರನ್ನು ಏರ್ ಸ್ಟ್ರೈಕ್ ನಡೆದ ಸ್ಥಳಕ್ಕೆ ಒಯ್ದು ಒಗೆಯಿರಿ: ಯತ್ನಾಳ್ ಕಿಡಿ

    ಸಾಕ್ಷಿ ಕೇಳುವವರನ್ನು ಏರ್ ಸ್ಟ್ರೈಕ್ ನಡೆದ ಸ್ಥಳಕ್ಕೆ ಒಯ್ದು ಒಗೆಯಿರಿ: ಯತ್ನಾಳ್ ಕಿಡಿ

    ವಿಜಯಪುರ: ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮಾಡಿರುವುದಕ್ಕೆ ಸಾಕ್ಷಿ ಕೇಳುತ್ತಿರುವ ಪ್ರತಿಪಕ್ಷ ನಾಯಕರನ್ನು ಹೆಲಿಕಾಪ್ಟರ್ ನಲ್ಲಿ ಕರೆದೊಯ್ದು, ದಾಳಿ ನಡೆದ ಸ್ಥಳಕ್ಕೆ ಬಿಟ್ಟುಬನ್ನಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಪಕ್ಷ ನಾಯಕರಿಗೆ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಹಾಗೂ ಭಾರತೀಯ ವಾಯುಪಡೆಯು ಒಂದು ದಿಟ್ಟ ನಿರ್ಧಾರ ತೆಗೆದುಕೊಂಡು ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಆದ್ರೆ ಈ ಏರ್ ಸ್ಟ್ರೈಕ್‍ಗೆ ಸಾಕ್ಷಿ ಕೇಳುವವರನ್ನು ದಾಳಿ ನಡೆದ ಸ್ಥಳದಲ್ಲಿ ಒಯ್ದು ಒಗೆಯಿರಿ. ಅವರು ಅಲ್ಲಿಯೇ ಭಾರತೀಯ ಸೇನೆಯ ಪರಾಕ್ರಮ ವೀಕ್ಷಿಸಲಿ. ಅಲ್ಲಿಯೇ ಎಷ್ಟು ಜನ ಮೃತಪಟ್ಟರು, ಯಾವ ಬಾಂಬ್ ಹಾಕಲಾಗಿದೆ ಅಂತ ನೋಡಿ ಬರಲಿ ಎಂದು ಏರ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸಿದ ದೆಹಲಿ ಸಿಎಂ ಕೇಜ್ರೀವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಬಿಎಸ್‍ಪಿ ನಾಯಕಿ ಮಾಯಾವತಿ ಹೆಸರು ಹೇಳಿ ಪ್ರತಿಪಕ್ಷ ನಾಯಕರ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ ಸಂಭ್ರಮಾಚರಣೆ ಕುರಿತು ಸಿಎಂ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ಭಾರತೀಯರು ಆಟದಲ್ಲಿ ಗೆದ್ದಾಗ ಅಥವಾ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಸಂಭ್ರಮಿಸಬಾರದಾ? ಸೀತಾರಾಮ ಕಲ್ಯಾಣ ಸಿನಿಮಾ ನೋಡಿ ಸಂಭ್ರಮಿಸಬೇಕಾ? ಎಂದು ಸಿಎಂಗೆ ತಿರುಗೇಟು ನೀಡಿದರು.

    ಈಗ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ. ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಲಿದ್ದಾರೆ. ನೋಡುತ್ತಿರಿ ಕಾಂಗ್ರೆಸ್ ಜೆಡಿಎಸ್ ಮನೆ ಖಾಲಿಯಾಗಲಿವೆ ಎಂದು ಮೈತ್ರಿ ಸರ್ಕಾರದ ಬಗ್ಗೆ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv