Tag: Paddehuli

  • ʻಪಡ್ಡೆಹುಲಿʼ ಶ್ರೇಯಸ್‌ಗೆ ಪ್ರಿಯಾಂಕಾ ಕುಮಾರ್‌ ನಾಯಕಿ

    ʻಪಡ್ಡೆಹುಲಿʼ ಶ್ರೇಯಸ್‌ಗೆ ಪ್ರಿಯಾಂಕಾ ಕುಮಾರ್‌ ನಾಯಕಿ

    ಸ್ಯಾಂಡಲ್‌ವುಡ್‌ನಲ್ಲಿ (Sandalwood) `ಪಡ್ಡೆಹುಲಿ’, ರಾಣಾ, ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟ ಶ್ರೇಯಸ್ (Shreyas) ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ರಾಣಾ ಶ್ರೇಯಸ್‌ಗೆ ಜೋಡಿಯಾಗಿ `ಬ್ಯಾಡ್ ಮ್ಯಾನರ್ಸ್’ (Bad Manners) ನಾಯಕಿ ಪ್ರಿಯಾಂಕಾ ಕುಮಾರ್ (Priyanka Kumar) ಸಾಥ್ ನೀಡ್ತಿದ್ದಾರೆ. ಇದನ್ನೂ ಓದಿ:ನನಗೆ ಮಕ್ಕಳು ಇಲ್ಲದಿರಬಹುದು, ಶ್ವಾನಗಳೇ ನನಗೆ ಮಕ್ಕಳ ಸಮಾನ: ರಮ್ಯಾ

     

    View this post on Instagram

     

    A post shared by Shreyas k manju (@shreyaskmanju5)

    ಕಣ್ಸನೆ ಬೆಡಗಿ ಪ್ರಿಯಾ ವಾರಿಯರ್ (Priya Varrier) ಜೊತೆಗಿನ `ವಿಷ್ಣುಪ್ರಿಯ’ (Vishnu Priya) ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ನಿರ್ಮಾಪಕ ಕೆ.ಮಂಜು (K.Manju) ಸುಪುತ್ರ ಶ್ರೇಯಸ್ ಇದೀಗ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ದುರ್ಗ, ನೀಲಿ ಸೀರಿಯಲ್ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವಿರುವ ಮಧು ಗೌಡ ಗಂಗೂರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

    ಮಾಸ್ ಎಂಟರ್ ಟೈನರ್ ಹಾಗೂ ಕಾಲೇಜ್ ಲವ್ ಸ್ಟೋರಿಯಾಗಿರುವ ಈ ಸಿನಿಮಾಗೆ ಪ್ರಿಯಾಂಕಾ ಕುಮಾರ್ ನಾಯಕಿಯಾಗಿದ್ದಾರೆ. ಅಭಿಷೇಕ್ ಅಂಬರೀಷ್ ನಟನೆಯ `ಬ್ಯಾಡ್ ಮ್ಯಾನರ್ಸ್’ ಮತ್ತು ವಿರಾಟ್ ನಟನೆಯ `ಅದ್ಧೂರಿ ಲವರ್’ (Adduri Lover) ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿರುವ ಪ್ರಿಯಾಂಕಾಗೆ ಇದು ಮೂರನೇ ಚಿತ್ರವಾಗಿದೆ. ಏಷ್ಯಾನೆಟ್ ಮೂವೀ ಬ್ಯಾನರ್ ಕಡೆಯಿಂದ ಆರ್.ಸಂತೋಷ್ ಕುಮಾರ್ ಈ ಚಿತ್ರ ನಿರ್ಮಾಣ ಮಾಡ್ತಿದ್ದು, ಅರ್ಜುನ್ ಜನ್ಯ ಸಂಗೀತ, ಗಗನ್ ಗೌಡ ಛಾಯಾಗ್ರಹಣ, ರವಿವರ್ಮಾ ಸಾಹಸ, ರಾಜೇಶ್ ಸಾಲುಂಡಿ ಸಂಭಾಷಣೆ ಚಿತ್ರಕ್ಕಿದೆ.

    ಇದೇ 31ಕ್ಕೆ ಮುಹೂರ್ತ ನೆರವೇರಲಿದ್ದು, ಏಪ್ರಿಲ್ ತಿಂಗಳಿಂದ ಶೂಟಿಂಗ್‌ಗೆ ಕಿಕ್ ಸ್ಟಾರ್ಟ್ ಸಿಗಲಿದೆ. ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಕೇರಳದಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  • ‘ಪಡ್ಡೆಹುಲಿ’ ‘ವಿಷ್ಣು ಪ್ರಿಯ’ನಿಂದ ಹುಟ್ಟು ಹಬ್ಬದ ಶುಭಾಶಯಗಳು!

    ‘ಪಡ್ಡೆಹುಲಿ’ ‘ವಿಷ್ಣು ಪ್ರಿಯ’ನಿಂದ ಹುಟ್ಟು ಹಬ್ಬದ ಶುಭಾಶಯಗಳು!

    ‘ಪಡ್ಡೆ ಹುಲಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೇಯಸ್ ಮೊದಲ ಸಿನಿಮಾದಲ್ಲೇ ಎಲ್ಲರ ಮನಸ್ಸನ್ನ ಗೆದ್ದಿದ್ರು. ‘ಪಡ್ಡೆ ಹುಲಿ’ ಮೂಲಕ ಸ್ಯಾಂಡಲ್‍ವುಡ್ ಒಬ್ಬ ಒಳ್ಳೆ ನಟನ ಪರಿಚಯ ಆಗಿದ್ದು, ಉತ್ತಮ ನಟನಾಗುವ ಎಲ್ಲಾ ಭರವಸೆಯನ್ನು ಶ್ರೇಯಸ್ ಮೂಡಿಸಿದ್ರು. ಹಾಗಾಗಿ ಎರಡನೇ ಸಿನಿಮಾವೂ ಬಲು ಬೇಗನೇ ಸೆಟ್ಟೇರಿತು. ‘ಪಡ್ಡೆಹುಲಿ’ಯಾಗಿ ಮಿಂಚಿದ್ದ ಶ್ರೇಯಸ್ ಇದೀಗ ‘ವಿಷ್ಣು ಪ್ರಿಯ’ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ.

    ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್. ‘ಪಡ್ಡೆಹುಲಿ’ಯಲ್ಲಿ ಲವ್ವರ್ ಬಾಯ್ ಆಗಿ ಹೆಂಗಳೆಯರ ಮನಸ್ಸನ್ನು ಕದ್ದಿದ್ರು. ಇವರ ಎರಡನೇ ಸಿನಿಮಾ ‘ವಿಷ್ಣು ಪ್ರಿಯ’ ಚಿತ್ರವನ್ನು ಮಲೆಯಾಳಂನ ವಿ.ಕೆ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ಇಂದು ಲವ್ವರ್ ಬಾಯ್ ಶ್ರೇಯಸ್ ಮಂಜುಗೆ ಹುಟ್ಟು ಹಬ್ಬದ ಸಂಭ್ರಮ. ಇಡೀ ಚಿತ್ರತಂಡ ಶ್ರೇಯಸ್‍ಗೆ ಶುಭ ಹಾರೈಸಿದೆ. ಹೊಸ ಎರಡು ಪೋಸ್ಟರ್ ರಿಲೀಸ್ ಮಾಡುವ ಮೂಲಕ, ಅದ್ಭುತವಾದ ಗಿಫ್ಟ್ ನ್ನು ಶ್ರೇಯಸ್‍ಗೆ ನೀಡಿದ್ದಾರೆ.

    ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಶ್ರೇಯಸ್ ಪಾತ್ರ ಹೇಗಿರಲಿದೆ ಎಂಬುದು ಸ್ಪಷ್ಟವಾಗುತ್ತಿದೆ. ಒಂದು ಪೋಸ್ಟರ್ ನಲ್ಲಿ ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಇನ್ನೊಂದು ಪೋಸ್ಟರ್ ನಲ್ಲಿ ಮಾಸ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಫೈಟ್ ಮಾಡೋಕು ಸೈ, ಡ್ಯೂಯೆಟ್ ಹಾಡೋಕು ಜೈ ಅಂತಿದ್ದಾರೆ ನಮ್ಮ ಹೀರೋ ಶ್ರೇಯಸ್.

    ಶ್ರೇಯಸ್‍ಗೆ ನಾಯಕಿಯಾಗಿ ಮಲೆಯಾಳಂ ಬೆಡಗಿ, ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್ ಜೊತೆಯಾಗಿದ್ದಾರೆ. ಮಲೆಯಾಳಂ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರಂ ಸಂಗೀತ ನೀಡಲಿದ್ದಾರೆ. ಕೆ. ಮಂಜು ನಿರ್ಮಾಣದಲ್ಲಿ, ವಿನೋದ್ ಭಾರತೀ ಛಾಯಾಗ್ರಹಣ, ಸುರೇಶ್ ಯುಆರ್‍ಎಸ್ ಸಂಕಲನ ಇರಲಿದೆ. ಚಿತ್ರೀಕರಣ ಕಡೆ ಹಂತದಲ್ಲಿದ್ದು, ಸದ್ಯದಲ್ಲೇ ರಿಲೀಸ್ ಆಗಲಿದೆ.

  • ಪಡ್ಡೆಹುಲಿ: ಇಂದು ಬಿಡುಗಡೆಯಾಗಲಿದೆ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್!

    ಪಡ್ಡೆಹುಲಿ: ಇಂದು ಬಿಡುಗಡೆಯಾಗಲಿದೆ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್!

    ಬೆಂಗಳೂರು: ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಗುರು ದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಪ್ರೇಕ್ಷಕರಿಗೆ ಹತ್ತಿರವಾದದ್ದೇ ಹಾಡುಗಳ ಮೂಲಕ. ಈ ವಿಚಾರದಲ್ಲಿ ಈ ಚಿತ್ರದ ದಾಖಲೆಯನ್ನು ಯಾರೂ ಸದ್ಯಕ್ಕೆ ಮುರಿಯೋದು ಕಷ್ಟವಿದೆ. ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲು ಚಿತ್ರ ತಂಡ ಮುಂದಾಗಿದೆ!

    ಬದುಕು ಜಟಕಾ ಬಂಡಿ ಎಂಬ ಈ ಹಾಡು ಇಂದು ರಾತ್ರಿ ಒಂಬತ್ತು ಘಂಟೆಗೆ ಪಿಆರ್ ಕೆ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಲಿದೆ. ಹೀಗೆ ಹೊರ ಬರಲಿರೋ ಲಿರಿಕಲ್ ವೀಡಿಯೋ ಕೂಡಾ ಪಡ್ಡೆಹುಲಿಯ ಹಿಟ್ ಲಿಸ್ಟಿಗೆ ಸೇರಿಕೊಳ್ಳೋದರಲ್ಲಿ ಯಾವ ಸಂಶಯವೂ ಇಲ್ಲ.

    ಹಲವಾರು ವಿಚಾರಗಳಲ್ಲಿ ಪಡ್ಡೆಹುಲಿ ಮುಖ್ಯವಾಗುತ್ತದಾದರೂ ಶ್ರೇಯಸ್ ನಾಯಕನಾಗಿ ಲಾಂಚ್ ಆಗುತ್ತಿರೋ ಈ ಚಿತ್ರದ ಬಗ್ಗೆ ಹೇಳ ಹೊರಟರೆ ಮೊದಲು ಕಾಣಸಿಗೋದೇ ಹಾಡುಗಳ ಮೆರವಣಿಗೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಮಾಡಿರೋ ಹನ್ನೊಂದು ಹಾಡುಗಳೂ ಈಗ ಟ್ರೆಂಡಿಂಗ್‍ನಲ್ಲಿವೆ. ಅದರಲ್ಲಿ ಐದು ಹಾಡುಗಳಂತೂ ನಿಜಕ್ಕೂ ವಿಶೇಷವಾದವುಗಳು. ಅದರಲ್ಲಿ ಈಗ ಬಿಡುಗಡೆಯಾಗಲಿರೋ ಬದುಕು ಜಟಕಾಬಂಡಿ ಕೂಡಾ ಸೇರಿಕೊಂಡಿದೆ.

    ಬಹುಶಃ ಪ್ರೇಮಲೋಕದ ನಂತರದಲ್ಲಿ ಪಡ್ಡೆಹುಲಿಯೇ ಹಾಡುಗಳ ವಿಚಾರದಲ್ಲಿ ಫಸ್ಟ್. ಇಷ್ಟು ಸಂಖ್ಯೆಯ ಹಾಡುಗಳು ಯಾವ ಚಿತ್ರದಲ್ಲಿಯೂ ಇರಲಿಲ್ಲ. ಅಷ್ಟು ಸಂಖ್ಯೆಯ ಹಾಡುಗಳೆಲ್ಲವೂ ಹಿಟ್ ಆಗಿವೆ ಅನ್ನೋದು ಪಡ್ಡೆಹುಲಿಯ ನಿಜವಾದ ಹೆಗ್ಗಳಿಕೆ.

  • ಆರ್‌ಸಿಬಿ ಸೋತ್ರೂ ಲವ್ವಲ್ಲಿ ಕಪ್ ನಮ್ದೇ ಅಂತು ಪಡ್ಡೆಹುಲಿ!

    ಆರ್‌ಸಿಬಿ ಸೋತ್ರೂ ಲವ್ವಲ್ಲಿ ಕಪ್ ನಮ್ದೇ ಅಂತು ಪಡ್ಡೆಹುಲಿ!

    ಕೆಲ ದಿನಗಳ ಹಿಂದಷ್ಟೇ ಪಡ್ಡೆ ಹುಲಿ ಚಿತ್ರದ ಹಾಡುಗಳ ಜ್ಯೂಕ್ ಬಾಕ್ಸ್ ಬಿಡುಗಡೆಯಾಗಿದೆ. ಪ್ರೇಕ್ಷಕರು ಅಷ್ಟೂ ಹಾಡುಗಳನ್ನ ಒಟ್ಟೊಟ್ಟಿಗೇ ಕೇಳಿ ಸಂಭ್ರಮಿಸುತ್ತಾ ಪಡ್ಡೆಹುಲಿಯನ್ನು ಟ್ರೆಂಡಿಂಗ್ ನಲ್ಲಿಟ್ಟಿದ್ದಾರೆ. ಈ ಜ್ಯೂಕ್ ಬಾಕ್ಸ್ ನಲ್ಲಿ ಬರೋಬ್ಬರಿ ಹತ್ತು ಹಾಡುಗಳಿವೆ. ಅದಾಗಲೇ ಅದಕ್ಕೆ ಮತ್ತೊಂದು ಹಾಡನ್ನು ಚಿತ್ರತಂಡ ಸೇರಿಸಿ ಬಿಟ್ಟಿದೆ!

    ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿಗೆ ನೆನ್ನೆ ನಡೆದ ಐಪಿಎಲ್ ಲೀಗ್ ನಲ್ಲಿ ಆರ್‌ಸಿಬಿ ಸೋತು ಸುಣ್ಣವಾಗಿದ್ದೇ ಸ್ಫೂರ್ತಿಯಾಗಿ ಹೊಸ ಹಾಡೊಂದನ್ನು ರೂಪಿಸಲಾಗಿದೆ. ಈ ಹಾಡು ಇದೀಗ ಭರ್ಜರಿಯಾಗಿಯೇ ಬಿಡುಗಡೆಯಾಗಿದೆ.

    ಐಪಿಎಲ್ ಹೋಗಲಿ ಆರ್‌ಸಿಬಿ ಬೀಳಲಿ ಈ ಸಲ ಲವ್ವಲ್ಲಿ ಕಪ್ ನಮ್ದೆ… ಎಂಬ ವೀಡಿಯೋ ಹಾಡೀಗ ಬಿಡುಗಡೆಯಾಗಿದೆ. ಚೂರ್ ಚೂರಾಗಿದೆ ಅನ್ನೋ ಶೀರ್ಷಿಕೆಯ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಜನೀಶ್ ಮತ್ತು ಸಿಆರ್ ಬಾಬ್ಬಿ ಈ ಹಾಡನ್ನು ಹಾಡಿದ್ದಾರೆ.

    ಎನರ್ಜಿಟಿಕ್ ಆಗಿ ಮೂಡಿ ಬಂದಿರೋ ಈ ವೀಡಿಯೋ ಸಾಂಗ್ ನಲ್ಲಿ ನಾಯಕ ಶ್ರೇಯಸ್ ಕೂಡಾ ಎಂದಿನಂತೆ ಎನರ್ಜಿಟಿಕ್ ಆಗಿಯೇ ಸ್ಟೆಪ್ಸ್ ಹಾಕಿದ್ದಾರೆ. ಸಮ್ಮೋಹಕವಾಗಿ ಮೂಡಿ ಬಂದಿರೋ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವವರು ಜಾನಿ ಮಾಸ್ಟರ್. ರಾಜಕುಮಾರ ಚಿತ್ರದ ಅಪ್ಪು ಡ್ಯಾನ್ಸ್ ಮತ್ತು ನಟಸಾರ್ವಭೌಮ ಚಿತ್ರದ ಓಪನ್ ದ ಬಾಟಲ್ ಮುಂತಾದ ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದು ಇದೇ ಜಾನಿ ಮಾಸ್ಟರ್. ಅಲ್ಲು ಅರ್ಜುನ್, ಪ್ರಭಾಸ್ ಮುಂತಾದವರ ಚಿತ್ರಗಳಿಗೂ ನೃತ್ಯ ಸಂಯೋಜನೆ ಮಾಡಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ಹೊಂದಿರೋ ಜಾನಿ ಮಾಸ್ಟರ್ ಪಡ್ಡೆಹುಲಿ ಹಾಡಿಗೆ ಚೆಂದದ ನೃತ್ಯ ಸಂಯೋಜನೆ ಮಾಡಿದ್ದಾರೆ.

    ಇಂದು ಹನ್ನೊಂದು ಘಂಟೆಗೆ ಬಿಡುಗಡೆಯಾಗಿರೋ ಈ ಹಾಡೂ ಕೂಡಾ ಪಡ್ಡೆಹುಲಿಯ ಹಿಟ್ ಲಿಸ್ಟಿಗೆ ಸೇರಿಕೊಳ್ಳಲಿರೋದು ಪಕ್ಕಾ. ಇದೀಗ ಎಲ್ಲೆಡೆ ಐಪಿಎಲ್ ಜ್ವರ ಏರಿಕೊಂಡಿದೆ. ಆರ್‍ಸಿಬಿ ಸೋತಿರೋದು ಎಲ್ಲರಿಗೂ ನಿರಾಸೆ ತಂದಿದೆ. ಇದೇ ಹೊತ್ತಿನಲ್ಲಿ ಬಿಡುಗಡೆಯಾಗಿರೋ ಈ ಹಾಡು ಪಡ್ಡೆಹುಲಿಯನ್ನು ಮತ್ತಷ್ಟು ಜನರಿಗೆ ತಲುಪಿಸೋದರಲ್ಲಿ ಯಾವುದೇ ಸಂಶಯಗಳಿಲ್ಲ.

  • ಪಡ್ಡೆಹುಲಿಯ ಬಾಯಲ್ಲಿ ಬಸವಣ್ಣನ ವಚನ!

    ಪಡ್ಡೆಹುಲಿಯ ಬಾಯಲ್ಲಿ ಬಸವಣ್ಣನ ವಚನ!

    ಬೆಂಗಳೂರು: ಎಂ. ರಮೇಶ್ ರೆಡ್ಡಿ ನಿರ್ಮಾಣ ಮಾಡಿರೋ ಪಡ್ಡೆಹುಲಿ ಚಿತ್ರ ಹಾಡುಗಳ ಮೂಲಕವೇ ಹುಟ್ಟಿಸಿರೋ ಕ್ರೇಜ್ ಸಣ್ಣದ್ದೇನಲ್ಲ. ಆದರೆ ನಿರ್ದೇಶಕ ಗುರುದೇಶಪಾಂಡೆ ಒಂದರ ಹಿಂದೊಂದರಂತೆ ಹೊಸ ಪ್ರಯೋಗದ, ಎಲ್ಲರನ್ನೂ ಸೆಳೆಯುವಂಥಾ ಹಾಡುಗಳನ್ನು ರೂಪಿಸುತ್ತಲೇ ಇದ್ದಾರೆ. ಇದೀಗ ಮಹಾಶಿವರಾತ್ರಿಯ ಕೊಡುಗೆಯೆಂಬಂತೆ ಬಸವಣ್ಣನವರ ಪ್ರಸಿದ್ಧ ವಚನವೊಂದನ್ನು ಹಾಡಾಗಿಸಿ ಬಿಡುಗಡೆಗೊಳಿಸಿದ್ದಾರೆ.

    ಅಜನೀಶ್ ಲೋಕನಾಥ್ ಈ ಮೂಲಕ ಮತ್ತೊಂದು ಕಮಾಲ್ ಸೃಷ್ಟಿಸಿದ್ದಾರೆ. ಬಸವಣ್ಣನವರ ಜನಪ್ರಿಯ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ’ ಎಂಬ ವಚನಕ್ಕೆ ಯುವ ಸಮುದಾಯವನ್ನು ಆವರಿಸಿಕೊಳ್ಳುವಂಥಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೀವನದ ಅಸಲಿ ಮೌಲ್ಯ ಸಾರುವ ಈ ವಚನವನ್ನು ಯುವ ಸಮುದಾಯಕ್ಕೂ ದಾಟಿಸುವಂಥಾ ಈ ಪ್ರಯತ್ನಕ್ಕೆ ನಾರಾಯಣ ಶರ್ಮಾ ಅದ್ಭುತವಾಗಿಯೇ ಧ್ವನಿಯಾಗಿದ್ದಾರೆ. ಈ ಹಾಡಿನ ಮೂಲಕವೇ ನಾರಾಯಣ ಶರ್ಮಾ ಕನ್ನಡದ ಭರವಸೆಯ ಗಾಯಕರಾಗಿಯೂ ಹೊರ ಹೊಮ್ಮಿದ್ದಾರೆ.

    ಇದು ಈಗಿನ ಕಾಲಕ್ಕೆ ತುರ್ತಾಗಿ ಬೇಕಾಗಿದ್ದ ಪ್ರಯತ್ನ. ಇದರ ಮೂಲಕವೇ ಕೆ.ಮಂಜು ಅವರ ಪುತ್ರ ಶ್ರೇಯಸ್ ಮತ್ತೊಂದು ಅಚ್ಚರಿದಾಯಕ ಶೇಡಿನಲ್ಲಿಯೂ ಗಮನ ಸೆಳೆದಿದ್ದಾರೆ. ಈ ಹಾಡು ಮೂಡಿ ಬಂದಿರೋ ರೀತಿಯೇ ಶ್ರದ್ಧೆಗೆ ಯಾವತ್ತಿಗೂ ಸೋಲಿಲ್ಲ ಎಂಬುದಕ್ಕೂ ತಾಜಾ ಉದಾಹರಣೆ. ಒಂದೇ ಗುಕ್ಕಿನಲ್ಲಿ ಒಳಗಿಳಿದು ಬಿಡುವಂತಿರೋ ಈ ಹಾಡು ಬಸವಣ್ಣನವರ ವಚನಗಳನ್ನು ಈ ಪೀಳಿಗೆಗೂ ಪರಿಣಾಮಕಾರಿಯಾಗಿಯೇ ದಾಟಿಸಿರೋದು ನಿಜವಾದ ವಿಶೇಷ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಡ್ಡೆಹುಲಿ ಹಾಡು ಕೇಳಿ ಭೇಷ್ ಅಂದ್ರು ಡಿ ಬಾಸ್!

    ಪಡ್ಡೆಹುಲಿ ಹಾಡು ಕೇಳಿ ಭೇಷ್ ಅಂದ್ರು ಡಿ ಬಾಸ್!

    ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದ ಹಾಡೀಗ ಎಲ್ಲೆಂದರಲ್ಲಿ ಹರಿದಾಡುತ್ತಾ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ. ವಿಷ್ಣುವರ್ಧನ್ ಅವರಿಗೆ ಅರ್ಪಿಸಿರೋ ನಾ ತುಂಬಾ ಹೊಸಬ ಬಾಸು ಎಂಬ ಹಾಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಲಕ್ಷ ಲಕ್ಷ ವೀವ್ಸ್ ಪಡೆದುಕೊಂಡು ಟ್ರೆಂಡಿಂಗ್ ನಲ್ಲಿದೆ. ಇದೇ ಖುಷಿಯಲ್ಲಿ ಮಿಂದೇಳುತ್ತಿದ್ದ ಚಿತ್ರತಂಡಕ್ಕೆ ಮತ್ತೊಂದು ಸಂತಸವೂ ಕೈ ಹಿಡಿದಿದೆ. ಅದಕ್ಕೆ ಕಾರಣವಾಗಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಈ ಹಾಡಿನ ಬಗ್ಗೆ ವ್ಯಕ್ತಪಡಿಸಿರೋ ಮೆಚ್ಚುಗೆ!

    ಅತ್ತ ಯೂಟ್ಯೂಬ್ ನಲ್ಲಿ ಸದರಿ ಹಾಡು ಟ್ರೆಂಡ್ ಕ್ರಿಯೇಟ್ ಮಾಡುತ್ತಲೇ ಇತ್ತ ದರ್ಶನ್ ಅವರು ಇದನ್ನು ಕೊಂಡಾಡಿದ್ದಾರೆ. ನಾಯಕನಾಗಿ ಶ್ರೇಯಸ್ ಹಾಕಿರೋ ಎಫರ್ಟ್ ಬಗ್ಗೆಯೂ ಮನದುಂಬಿ ಮೆಚ್ಚುಗೆ ಸೂಚಿಸಿದ್ದಾರೆ.

    ಈ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಂದಿರೋ ದರ್ಶನ್, ಚಿತ್ರರಂಗಕ್ಕೆ ಅನೇಕರು ಬರುತ್ತಾರೆ. ಆದರೆ ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡು ಅಖಾಡಕ್ಕಿಳಿಯುವವರು ಕಡಿಮೆ. ಆದರೆ ಕೆ.ಮಂಜು ಅವರ ಪುತ್ರ ಶ್ರೇಯಸ್ ಸಂಪೂರ್ಣ ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಅದು ಈಗಾಗಲೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಶ್ರೇಯಸ್, ನಿರ್ದೇಶಕರಾದ ಗುರುದೇಶಪಾಂಡೆ ಸೇರಿ ಇಡೀ ಚಿತ್ರ ತಂಡಕ್ಕೆ ಒಳ್ಳೇದಾಗಲಿ. ಪಡ್ಡೆಹುಲಿ ಚಿತ್ರ ದೊಡ್ಡ ಮಟ್ಟದ ಯಶ ದಾಖಲಿಸಲಿ ಅಂತ ದರ್ಶನ್ ಹಾರೈಸಿದ್ದಾರೆ.

    ನಾ ತುಂಬಾ ಹೊಸಬ ಬಾಸು ಹಾಡಂತೂ ಈಗ ಎಲ್ಲ ಪ್ರೇಕ್ಷಕರನ್ನೂ ಮೋಡಿ ಮಾಡಿ ಮಾಡಿದೆ. ಯೂಟ್ಯೂಬ್‍ನಲ್ಲಂತೂ ಟ್ರೆಂಡಿಂಗ್ ಅನ್ನು ಈ ಕ್ಷಣದವರೆಗೂ ಕಾಯ್ದುಕೊಂಡಿದೆ. ಶ್ರೇಯಸ್ ಎನರ್ಜಿ, ಅಭಿನಯ ಮತ್ತು ಸಾಹಿತ್ಯದ ಖದರ್ ಸೇರಿದಂತೆ ಎಲ್ಲವೂ ಜನಮನ ಸೆಳೆದುಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಡ್ಡೆಹುಲಿ: ಬಿಡುಗಡೆಯಾಯ್ತು ಮತ್ತೊಂದು ಜಬರ್ದಸ್ತ್ ಹಾಡು!

    ಪಡ್ಡೆಹುಲಿ: ಬಿಡುಗಡೆಯಾಯ್ತು ಮತ್ತೊಂದು ಜಬರ್ದಸ್ತ್ ಹಾಡು!

    ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ ಮೇಲಿನ ಅತೀವ ಪ್ರೀತಿಯಿಂದ ತಯಾರಾಗಿರೋ ಪಡ್ಡೆ ಹುಲಿಯ ಸಾಂಗು ಹೊರ ಬಂದಿದೆ. ಪಿಆರ್‍ಕೆ ಸಂಸ್ಥೆಯ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡು ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ಪ್ರೇಕ್ಷಕರು, ವಿಷ್ಣು ಅಭಿಮಾನಿಗಳು ಈ ಹಾಡನ್ನು ಭರ್ಜರಿಯಾಗಿಯೇ ಸ್ವಾಗತಿಸಿದ್ದಾರೆ.

    ನಾ ತುಂಬಾ ಹೊಸಬ ಬಾಸು ಎಂಬ ಈ ಹಾಡನ್ನು ನಿರ್ಮಾಪಕ ಕೆ.ಮಂಜು ವಿಷ್ಣುವರ್ಧನ್ ಅವರಿಗೆ ಅರ್ಪಿಸಿದ್ದಾರೆ. ಮೊನ್ನೆ ತಾನೇ ವಿಷ್ಣು ಅಭಿಮಾನಿಗಳಿಗೆಂದೇ ಈ ಹಾಡಿನ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಇದನ್ನು ಕಂಡು ಅಭಿಮಾನಿಗಳೆಲ್ಲ ಕುಣಿದು ಕುಪ್ಪಳಿಸಿದ್ದರು. ಈ ಹಾಡೀಗ ಪ್ರೇಕ್ಷಕರನ್ನೂ ತಲುಪಿಕೊಂಡಿದೆ.

    ಕೆ.ಮಂಜು ಒಂದು ಕಾಲದಲ್ಲಿ ವಿಷ್ಣು ವರ್ಧನ್ ಅವರ ಆಪ್ತ ವಲಯದಲ್ಲಿದ್ದವರು. ಅಷ್ಟಕ್ಕೂ ಪಡ್ಡೆಹುಲಿಯ ಕಥೆ ಕೂಡಾ ಸ್ವತಃ ವಿಷ್ಣು ಅವರೇ ಹೇಳಿದ್ದ ಒಂದೆಳೆಯನ್ನ ಆಧರಿಸಿದೆ. ನಿರ್ದೇಶಕ ಗುರು ದೇಶಪಾಂಡೆ ಅದನ್ನು ಬಲು ಆಸ್ಥೆಯಿಂದಲೇ ಚಿತ್ರೀಕರಿಸಿದ್ದಾರೆ. ಪಡ್ಡೆಹುಲಿಯ ಪ್ರತಿಯೊಂದು ವಿಚಾರದಲ್ಲಿಯೂ ಕೂಡಾ ಮಂಜು ವಿಷ್ಣು ಮೇಲಿನ ತಮ್ಮ ಪ್ರೀತಿ ಮತ್ತು ಅಭಿಮಾನವನ್ನ ತೋರ್ಪಡಿಸಿಕೊಳ್ಳುತ್ತಿದ್ದಾರೆ.

    ಇಂಥಾ ಗಾಢವಾದ ಪ್ರೀತಿಯಿಂದಲೇ ಈಗ ಹೊರ ಬಂದಿರೋ ಹಾಡು ಕೂಡಾ ರೂಪಿಸಲ್ಪಟ್ಟಿದೆ. ಇದು ಪಡ್ಡೆಹುಲಿ ಚಿತ್ರದಲ್ಲಿ ನಾಯಕನನ್ನು ಪರಿಚಯಿಸೋ ಹಾಡು. ನಿಜಕ್ಕೂ ಇದು ಜಬರ್ದಸ್ತಾಗಿ ಮೂಡಿ ಬಂದಿದೆ. ಬಿಡುಗಡೆಯಾದಾಕ್ಷಣವೇ ಅದ್ಧೂರಿ ಸ್ವಾಗತವೂ ಸಿಕ್ಕಿದೆ.

  • ಪಡ್ಡೆಹುಲಿಯಿಂದ ಬಂತು ಇಂಟ್ರಸ್ಟಿಂಗ್ ಸುದ್ದಿ- ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿಚ್ಚ, ಅಪ್ಪು, ರಕ್ಷಿತ್ ಶೆಟ್ಟಿ!

    ಪಡ್ಡೆಹುಲಿಯಿಂದ ಬಂತು ಇಂಟ್ರಸ್ಟಿಂಗ್ ಸುದ್ದಿ- ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕಿಚ್ಚ, ಅಪ್ಪು, ರಕ್ಷಿತ್ ಶೆಟ್ಟಿ!

    ಬೆಂಗಳೂರು: ಪಡ್ಡೆಹುಲಿ ಕೆ. ಮಂಜು ಪುತ್ರ ಶ್ರೇಯಸ್ ನಟನೆಯ ಚೊಚ್ಚಲ ಸಿನಿಮಾ. ರಾಜಾಹುಲಿ ಖ್ಯಾತಿಯ ಗುರುದೇಶ್‍ಪಾಂಡೆ ನಿರ್ದೇಶನದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬರುತ್ತಿದೆ. ಇಂಟ್ರೆಸ್ಟಿಂಗ್ ಸುದ್ದಿ ಎಂದರೆ ಪಡ್ಡೆಹುಲಿಯನ್ನು ಪರಿಚಯ ಮಾಡಿಕೊಡೋದಕ್ಕೆ ಹೆಬ್ಬುಲಿ ಮನಸ್ಸು ಮಾಡಿದ್ದಾರೆ.

    ಶ್ರೇಯಸ್ ಪರಿಚಯದ ದೃಶ್ಯಕ್ಕೆ ಕಿಚ್ಚ ಸುದೀಪ್ ಧ್ವನಿಯಾಗಲಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ಶೂಟಿಂಗ್‍ನಲ್ಲಿ ಪಾಲ್ಗೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೂಡ ಈ ಸಿನಿಮಾದಲ್ಲಿ ಇರುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

    ಪಡ್ಡೆಹುಲಿ ಮುಹೂರ್ತ ಸಮಾರಂಭದಲ್ಲಿ ಭಾಗಿಯಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಕಿಚ್ಚ ಸುದೀಪ್ ಈ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಕಿಚ್ಚ ಸುದೀಪ್ ಕ್ಲಾಪ್ ಮಾಡಿ ಶುಭಾಶಯ ತಿಳಿಸಿದರೆ, ಪುನೀತ್ ರಾಜ್‍ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ದರು.

    ಅದೆಷ್ಟೇ ಒತ್ತಡವಿದ್ದರೂ ಸುದೀಪ್ ಹೊಸ ಪ್ರಯತ್ನಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾರೆ. ಹಾಗೆಯೇ ಆಕರ್ಷಕವಾದ ಪಡ್ಡೆಹುಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆಗೊಳಿಸಿದ್ದರು. ಪೋಸ್ಟರಿನಲ್ಲಿ ಹೊಸತನವನ್ನು ಹೊಮ್ಮಿಸುವಂತಿರೋ ಈ ಚಿತ್ರ ಅಂಥಾದ್ದೇ ಹೊಸತನದೊಂದಿಗೆ ಮೂಡಿ ಬಂದು ಗೆಲುವು ಕಾಣಲಿ ಅಂತ ಶುಭ ಹಾರೈಸಿದ್ದರು.

  • ನಾಳೆ ‘ಪಡ್ಡೆ ಹುಲಿ’ ಸಾಂಗ್ ಪ್ರೋಮೋ ರಿಲೀಸ್

    ನಾಳೆ ‘ಪಡ್ಡೆ ಹುಲಿ’ ಸಾಂಗ್ ಪ್ರೋಮೋ ರಿಲೀಸ್

    ಬೆಂಗಳೂರು: ಪಡ್ಡೆ ಹುಲಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ತನ್ನದೇ ಆದ ವಿಭಿನ್ನ ಚಾಪನ್ನು ಸ್ಯಾಂಡಲ್‍ವುಡ್ ನಲ್ಲಿ ಮೂಡಿಸಿದೆ. ಸಿನಿಮಾದ ಫೋಟೋಶೂಟ್ ನಿಂದ ಹಿಡಿದು ಇಂದಿನವರೆಗೂ ಸಿನಿ ಪ್ರೇಕ್ಷಕರಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಕಾರಣ ಆರಂಭದಿಂದಲೂ ತಾನು ಎಲ್ಲರಗಿಂತ ಡಿಫರೆಂಟ್ ಎಂಬುದನ್ನು ಪಡ್ಡೆ ಹುಲಿ ತೋರಿಸುತ್ತಾ ಬರುತ್ತಿದೆ.

    ಬುಧವಾರ ಪಡ್ಡೆ ಹುಲಿ ಸಿನಿಮಾ ಹಾಡೊಂದರ ಪ್ರೋಮೋ ರಿಲೀಸ್ ಆಗಲಿದೆ. ಬುಧವಾರ (4-4-2018) ರಂದು ಪಡ್ಡೆ ಹುಲಿಯಾಗಿ ಕಾಣಿಸಿಕೊಳ್ಳುತ್ತಿರುವ ನಟ ಶ್ರೇಯಸ್ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಚಿತ್ರತಂಡ ಸಾಂಗ್ ಪ್ರೋಮೋ ರಿಲೀಸ್ ಮಾಡುವ ಉದ್ದೇಶವನ್ನು ಹೊಂದಿದೆ. ತೇಜಸ್ವಿನಿ ಎಂಟರ್‍ಪ್ರೈ ಸಸ್ ಬ್ಯಾನರಿನಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ನಿಮಾ9ಪಕ ಕೆ.ಮಂಜುರವರ ಪುತ್ರ ಶ್ರೇಯಸ್ ನಾಯಕ ನಟನಾಗಿ ಸ್ಯಾಂಡಲ್ ವುಡ್ ಅಂಗಳಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

    ಚಿತ್ರಕ್ಕೆ ಎಂ.ರಮೇಶ್ ರೆಡ್ಡಿ(ನಂಗ್ಲಿ) ಬಂಡವಾಳ ಹೂಡಿದ್ದು, ಗುರು ದೇಶಪಾಂಡೆ ನಿರ್ದೇಶನವಿದೆ. ಬಹದ್ದೂರ್ ಚೇತನ್ ಅವರ ಸಾಹಿತ್ಯವಿದೆ. ಅಜನೀಷ್ ಲೋಕನಾಥ್ ಪಡ್ಡೆ ಹುಲಿಗೆ ಸಂಗೀತ ನೀಡಿದ್ದಾರೆ. ಇತ್ತ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಕಂಠದಲ್ಲಿ ಹಾಡುಗಳು ಮೂಡಿಬಂದಿವೆ. ಸಿನಿಮಾದಲ್ಲಿ ಶ್ರೇಯಸ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ.

  • ಪುನೀತ್, ಸುದೀಪ್ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು ‘ಪಡ್ಡೆಹುಲಿ’ ಮುಹೂರ್ತ!

    ಪುನೀತ್, ಸುದೀಪ್ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು ‘ಪಡ್ಡೆಹುಲಿ’ ಮುಹೂರ್ತ!

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಖ್ಯಾತ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ `ಪಡ್ಡೆಹುಲಿ’ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನೆರವೇರಿದೆ.

    ಬೆಂಗಳೂರಿನ ಬನಶಂಕರಿ ಬಳಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ `ಪಡ್ಡೆಹುಲಿ’ ಚಿತ್ರದ ಶುಭ ಮುಹೂರ್ತ ನಡೆಯಿತು. `ರಾಜಹುಲಿ’, `ಜಾನ್ ಜಾನಿ ಜನಾರ್ದನ್’ ಹಾಗೂ `ಸಂಹಾರ’ ಖ್ಯಾತಿಯ ಗುರು ದೇಶ್‍ಪಾಂಡೆ ಕಲ್ಪನೆಯಲ್ಲಿ ಚಿತ್ರ ಮೂಡಿಬರಲಿದೆ. ಚಿತ್ರದಲ್ಲಿ ಶ್ರೇಯಸ್ ಗೆ ಜೊತೆಯಾಗಿ ನಿಶ್ವಿಕಾ ನಟಿಸಲಿದ್ದಾರೆ. ಇದನ್ನೂ ಓದಿ: ಪಡ್ಡೆಹುಲಿ ನಾಯಕಿ ನಿಶ್ವಿಕಾ ಯಾರು ಗೊತ್ತೆ?

    ಮುಹೂರ್ತ ಸಮಾರಂಭದಲ್ಲಿ ಭಾಗಿಯಾದ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ಕಿಚ್ಚ ಸುದೀಪ್ ಈ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಕಿಚ್ಚ ಸುದೀಪ್ ಕ್ಲಾಪ್ ಮಾಡಿ ಶುಭಾಶಯ ತಿಳಿಸಿದರೆ, ಪುನೀತ್ ರಾಜ್‍ಕುಮಾರ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದ್ರು. ಇದನ್ನೂ ಓದಿ: ಪಡ್ಡೆ ಹುಲಿಯ ಫಸ್ಟ್ ಲುಕ್ ರಿಲೀಸ್ ಮಾಡಿದ ಹೆಬ್ಬುಲಿ ಹೀಗಂದ್ರು! 

    ನಿರ್ಮಾಪಕ ಕೆ. ಮಂಜು ಅವರ ಆರಾಧ್ಯ ದೈವ ಸಾಹಸ ಸಿಂಹ ವಿಷ್ಣುವರ್ಧನ್ ಮಡದಿ ಭಾರತಿ ವಿಷ್ಣುವರ್ಧನ್ ದೀಪ ಹಚ್ಚಿ ಚಿತ್ರತಂಡಕ್ಕೆ ಶುಭಸಂದೇಶ ಕೊಟ್ಟರು. ಚಿತ್ರರಂಗದ ಅನೇಕ ಗಣ್ಯರು ಪಡ್ಡೆಹುಲಿ ಚಿತ್ರದ ಮುಹೂರ್ತಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಡ್ಯೂಪ್ ಗಳಿಲ್ಲದೇ ಬೆಂಕಿಯಲ್ಲಿ ಫೋಟೋ ಶೂಟ್ ಮಾಡಿದ ಪಡ್ಡೆ ಹುಲಿ ಶ್ರೇಯಸ್! ಫೋಟೋಗಳಲ್ಲಿ ನೋಡಿ