Tag: Padaraya

  • ಗಾಯಕಿ ಮಂಗ್ಲಿಗೆ ನಾಯಕಿಯಾಗುವ ಕನಸು ಭಗ್ನ: ಅದಕ್ಕೆ ಕಾರಣ ಯಾರು?

    ಗಾಯಕಿ ಮಂಗ್ಲಿಗೆ ನಾಯಕಿಯಾಗುವ ಕನಸು ಭಗ್ನ: ಅದಕ್ಕೆ ಕಾರಣ ಯಾರು?

    ತೆಲುಗು ಚಿತ್ರರಂಗದ ಹೆಸರಾಂತ ಗಾಯಕಿ, ಕನ್ನಡದಲ್ಲೂ ಹಲವಾರು ಗೀತೆಗಳನ್ನು ಹಾಡಿರುವ ಮಂಗ್ಲಿ (Mangli), ‘ಪಾದರಾಯ’ (Padaraya) ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಬೇಕಿತ್ತು. ನಟ, ನಿರ್ದೇಶಕ ನಾಗಶೇಖರ್ (Nagasekhar) ನಾಯಕನಾಗಿ ನಟಿಸಲಿರುವ ಪಾದರಾಯ ಚಿತ್ರಕ್ಕೆ ಮಂಗ್ಲಿ ನಾಯಕಿಯಾಗಿ ಆಯ್ಕೆ ಕೂಡ ಆಗಿದ್ದರು. ಈ ಮಾಹಿತಿಯನ್ನು ಚಿತ್ರತಂಡ ಮತ್ತು ಸ್ವತಃ ಮಂಗ್ಲಿ ಕೂಡ ಹೇಳಿಕೊಂಡಿದ್ದರು. ಚಿತ್ರತಂಡದಲ್ಲಿ ಹಲವು ಬೆಳವಣಿಗೆಗೆಳು ನಡೆದಿವೆ. ಹಾಗಾಗಿ ಮಂಗ್ಲಿ ನಟನೆಯ ಮೊದಲ ಸಿನಿಮಾ ನಿಂತಿದೆ.

    ನಾಗಶೇಖರ್ ಮೇಲೆ ಹಲವು ಆರೋಪಗಳನ್ನು ಮಾಡಿರುವ ನಿರ್ದೇಶಕ ಡಿ.ಜೆ ಚಕ್ರವರ್ತಿ, ನಾಗಶೇಖರ್ ಜೊತೆ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಪಾದರಾಯ ಸಿನಿಮಾವನ್ನು ಬೇರೆಯವರ ಜೊತೆ ಮಾಡುವ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಹಂಚಿಕೊಂಡಿದ್ದಾರೆ. ‘ಪಾದರಾಯ ಸಿನಿಮಾವನ್ನು ನಾಗಶೇಖರ್ ಜೊತೆ ಮಾಡುವುದಿಲ್ಲ. ಹಾಗಾಗಿ ಮಂಗ್ಲಿ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ತಗೆದುಕೊಂಡಿಲ್ಲ. ನಿರ್ಮಾಪಕರು ಕೂಡ ಬದಲಾಗಲಿದ್ದಾರೆ. ನಾಯಕ ಯಾರು ಅನ್ನುವುದರ ಮೇಲೆ ನಾಯಕಿಯ ನಿರ್ಧಾರ ಆಗಲಿದೆ’ ಎಂದಿದ್ದಾರೆ ಚಕ್ರವರ್ತಿ. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

    ಪಾದರಾಯ ಚಿತ್ರಕ್ಕೆ ನಾಯಕ ಯಾರು ಎನ್ನುವುದರ ಮೇಲೆ ನಾಯಕಿಯ ತೀರ್ಮಾನ ಆಗುವುದಾಗಿ ಸ್ವತಃ ನಿರ್ದೇಶಕರೇ ಹೇಳಿರುವುದರಿಂದ ಮಂಗ್ಲಿ ಮುಂದಿನ ದಿನಗಳಲ್ಲಿ ಈ ಚಿತ್ರದಲ್ಲಿ ಇರುತ್ತಾರಾ ಎನ್ನುವುದು ಯಕ್ಷಪ್ರಶ್ನೆ. ಹಾಗಾಗಿ ಮಂಗ್ಲಿಗೆ ಪಾದರಾಯ ಮೊದಲ ಚಿತ್ರ ಆಗುವುದು ಬಹುತೇಕ ಅನುಮಾನ. ಕನ್ನಡದಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಹಾಡಿರುವ ಅವರು, ಕನ್ನಡ ಚಿತ್ರೋದ್ಯಮದ ಮೂಲಕ ನಾಯಕಿಯೂ ಆಗಲಿದ್ದರು. ಸಹಜವಾಗಿಯೇ ಅದು ಅವರಿಗೆ ಖುಷಿ ತಂದಿತ್ತು.

    ನಾಗಶೇಖರ್ ಮತ್ತು ಚಕ್ರವರ್ತಿ ನಡುವೆ ಹಲವು ಬೆಳವಣಿಗೆಗಳು ನಡೆದಿವೆ. ಸ್ವತಃ ಚಕ್ರವರ್ತಿ ಚಂದ್ರಚೂಡ ಅವರೇ ಎರಡ್ಮೂರು ದಿನಗಳ ಹಿಂದೆ ಇದೇ ಸಿನಿಮಾದ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದ್ದರು. ಅದರಲ್ಲೂ ಕೂಡ ನಾಗಶೇಖರ್ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಆ ಎಲ್ಲ ಆರೋಪಗಳಿಗೂ ನಾನು ಈಗಲೂ ಬದ್ಧನಾಗಿದ್ದೇನೆ ಎನ್ನುವುದು ಅವರ ಮಾತು. ಹಾಗಂತ ಈ ಸಿನಿಮಾ ನಿಲ್ಲುವುದಿಲ್ಲ, ಬೇರೆ ನಿರ್ಮಾಪಕರೊಟ್ಟಿಗೆ ಸಿನಿಮಾ ಮಾಡುತ್ತೇನೆ ಎನ್ನುವುದು ಅವರ ಸ್ಪಷ್ಟನೆ. ಈ ಸಿನಿಮಾದಲ್ಲಿ ಮಂಗ್ಲಿ ಇರುತ್ತಾರಾ ಎನ್ನುವ ಕುತೂಹಲವೂ ಇದೆ.

  • Breaking- ಪಾದರಾಯ ಸಿನಿಮಾ: ಫಿಲ್ಮ್ ಚೇಂಬರ್ ಮೆಟ್ಟಿಲು ಏರಿದ ನಿರ್ದೇಶಕ ಡಿ.ಜೆ.ಚಕ್ರವರ್ತಿ

    Breaking- ಪಾದರಾಯ ಸಿನಿಮಾ: ಫಿಲ್ಮ್ ಚೇಂಬರ್ ಮೆಟ್ಟಿಲು ಏರಿದ ನಿರ್ದೇಶಕ ಡಿ.ಜೆ.ಚಕ್ರವರ್ತಿ

    ತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ (DJ Chakraborty) ಮತ್ತು ನಟ, ನಿರ್ದೇಶಕ ನಾಗಶೇಖರ್ (Nagasekhar) ಒಟ್ಟಾಗಿ ‘ಪಾದರಾಯ’ (Padaraya) ಸಿನಿಮಾ ಘೋಷಣೆ ಮಾಡಿದ್ದರು. ಈ ಸಿನಿಮಾಗೆ ಗಾಯಕಿ ಮಂಗ್ಲಿ (Mangli) ನಾಯಕಿಯನ್ನಾಗಿಯೂ ಆಯ್ಕೆ ಮಾಡಿದ್ದರು. ಈ ಸಿನಿಮಾ ಮಾಡುವುದಕ್ಕಾಗಿ ನಾಗಶೇಖರ್ ವ್ರತ ಕೂಡ ಮಾಡುತ್ತಿದ್ದರು. ಇದೀಗ ಎಲ್ಲವೂ ಆದಂತೆ ನಡೆಯುತ್ತಿಲ್ಲ. ಹಣಕಾಸಿನ ಅವ್ಯವಹಾರದ ಕಾರಣದಿಂದಾಗಿ ನಿರ್ದೇಶಕ ಡಿ.ಜೆ.ಚಕ್ರವರ್ತಿ ಸಿನಿಮಾದಿಂದ ಹೊರ ನಡೆದಿದ್ದಾರೆ. ತಾವು ನಾಗಶೇಖರ್ ಜೊತೆ ಸಿನಿಮಾ ಮಾಡುತ್ತಿಲ್ಲ ಎಂದು ಘೋಷಿಸಿದ್ದಾರೆ.

    ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಮಾತನಾಡಿದ ಚಕ್ರವರ್ತಿ, ‘ಪಾದರಾಯ ಸಿನಿಮಾ ಮಾಡುವ ಎಲ್ಲ ತಯಾರಿ ಮಾಡಿಕೊಂಡಿದ್ದೆ. ಯಾರಿಗೂ ಅಡ್ವಾನ್ಸ್ ಕೊಡದೇ ಇದ್ದರೂ, ಎಲ್ಲರನ್ನೂ ಒಟ್ಟಾಗಿಸಿಕೊಂಡು ಸಿನಿಮಾ ಕೆಲಸ ಶುರು ಮಾಡಿದ್ದೆ. ಆದರೆ, ನಾಗಶೇಖರ್ ಮತ್ತು ಅವರಿಗೆ ಗೊತ್ತಿರುವ ಕೆಲವರು ಸಿನಿಮಾ ಹೆಸರಿನಲ್ಲಿ ಹಣ ಮಾಡಲು ಶುರು ಮಾಡಿರುವ ವಿಷಯ ಗಮನಕ್ಕೆ ಬಂತು. ಈ ಸಿನಿಮಾ ಹೆಸರಿನಲ್ಲಿ ಅವರು ಸಾಲ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಯಿತು. ಒಬ್ಬ ನಿರ್ದೇಶಕನ ಗಮನಕ್ಕೆ ಬಾರದೇ ಏನೆಲ್ಲ ವ್ಯವಹಾರಗಳು ಆಗುತ್ತಿರುವುದು ಗಮನಿಸಿ, ನಾನು ಆ ಸಿನಿಮಾದಿಂದ ಆಚೆ ಬಂದೆ’ ಎನ್ನುತ್ತಾರೆ.

    ‘ಪಾದರಾಯ ಸಿನಿಮಾ ಹೆಸರಿನಲ್ಲಿ ಏನೆಲ್ಲ ವ್ಯವಹಾರಗಳು ಆಗಿವೆ ಮತ್ತು ನಾಗಶೇಖರ್ ಮತ್ತು ತಂಡ ಮಾಡಿರುವ ಕೆಲಸಗಳ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಿನ್ನೆ ದೂರು ನೀಡಿದ್ದೇನೆ. ಅವರು ಮಾಡಿರುವ ವ್ಯವಹಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವುದನ್ನು ನಾನು ಸ್ಪಷ್ಟ ಪಡಿಸಬೇಕಿತ್ತು. ಅಲ್ಲದೇ, ನಾನು ನನ್ನ ಕಥೆಯನ್ನು ಭದ್ರಪಡಿಸಿಕೊಳ್ಳಬೇಕಿತ್ತು. ಹಾಗಾಗಿ ದೂರು ಕೊಟ್ಟಿದ್ದೇನೆ’ ಎನ್ನುತ್ತಾರೆ ಚಕ್ರವರ್ತಿ.

    ಸ್ವತಃ ಚಕ್ರವರ್ತಿ ಚಂದ್ರಚೂಡ ಅವರೇ ಎರಡ್ಮೂರು ದಿನಗಳ ಹಿಂದೆ ಇದೇ ಸಿನಿಮಾದ ಕುರಿತಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಪತ್ರವೊಂದನ್ನು ಬರೆದಿದ್ದರು. ಅದರಲ್ಲೂ ಕೂಡ ನಾಗಶೇಖರ್ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು. ಆ ಎಲ್ಲ ಆರೋಪಗಳಿಗೂ ನಾನು ಈಗಲೂ ಬದ್ಧನಾಗಿದ್ದೇನೆ ಎನ್ನುವುದು ಅವರ ಮಾತು. ಹಾಗಂತ ಈ ಸಿನಿಮಾ ನಿಲ್ಲುವುದಿಲ್ಲ, ಬೇರೆ ನಿರ್ಮಾಪಕರೊಟ್ಟಿಗೆ ಸಿನಿಮಾ ಮಾಡುತ್ತೇನೆ ಎನ್ನುವುದು ಅವರ ಸ್ಪಷ್ಟನೆ.

  • ‘ಪಾದರಾಯ’ ಸಿನಿಮಾ ಹೆಸರಿನಲ್ಲಿ ಹಣದ ದಂಧೆ: ಎಚ್ಚರಿಕೆ ಕೊಟ್ಟ ನಿರ್ದೇಶಕ ಡಿ.ಜೆ.ಚಕ್ರವರ್ತಿ

    ‘ಪಾದರಾಯ’ ಸಿನಿಮಾ ಹೆಸರಿನಲ್ಲಿ ಹಣದ ದಂಧೆ: ಎಚ್ಚರಿಕೆ ಕೊಟ್ಟ ನಿರ್ದೇಶಕ ಡಿ.ಜೆ.ಚಕ್ರವರ್ತಿ

    ನಾಗಶೇಖರ್ (Nagasekhar) ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ (Chakraborty Chandrachuda) ಕಾಂಬಿನೇಷನ್ ನಲ್ಲಿ ‘ಪಾದರಾಯ’ (Padaraya) ಸಿನಿಮಾ ಮೂಡಿ ಬರಲಿದೆ ಎನ್ನುವುದು ದೊಡ್ಡ ಸುದ್ದಿ ಆಗಿತ್ತು. ಈ ಸಿನಿಮಾಗೆ ಜಾಕ್ ಮಂಜು (Jack Manju) ಅವರೇ ನಿರ್ಮಾಪಕರು ಎನ್ನಲಾಗಿತ್ತು. ಈ ಸಿನಿಮಾಗಾಗಿ ನಾಗಶೇಖರ್ ಅಂಜನಾದ್ರಿ ಬೆಟ್ಟ ಹತ್ತಿ, ವ್ರತ ಮಾಡಿ ತಯಾರಿ ಆಗುತ್ತಿದ್ದಾರೆ ಎನ್ನುವ ವಿಚಾರವೂ ತಿಳಿದು ಬಂದಿತ್ತು. ಆದರೆ, ಈ ಎಲ್ಲ ಸನ್ನಿವೇಶಗಳು ಬದಲಾದಂತೆ ಕಾಣುತ್ತಿದೆ. ಪಾದರಾಯ ಹೆಸರಿನಲ್ಲಿ ಹಲವರು ಹಣ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ಮಾಡಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅದರ ಸಾರಾಂಶ ಹೀಗಿದೆ..

    ಓವರ್ ಟು ಡೈರೆಕ್ಟರ್ ಚಕ್ರವರ್ತಿ ಚಂದ್ರಚೂಡ..

    ನಾಲ್ಕು ತಿಂಗಳ ಹಿಂದೆ “ಪಾದರಾಯ “ಎಂಬ ಶೀರ್ಷಿಕೆ ಅಡಿ ಒಂದು ಸಿನಿಮಾ ಘೋಷಣೆಯಾಯ್ತು.ಇದು ಕೇವಲ ಘೋಷಣೆಯಾಗಿಯೇ ಉಳಿಯಿತು, ಛಾಯಾಗ್ರಹಣ ಸತ್ಯ ಹೆಗಡೆ ಸಂಗೀತ ಅಜನೀಶ್ ಲೋಕನಾಥ್ ಎಡಿಟರ್ ಆಂಟೋನಿ ನಾಯಕಿಯಾಗಿ ತೆಲುಗಿನ ಗಾಯಕಿ ಮಂಗ್ಲಿ, ನಾಯಕ ನಟರಾಗಿ ನಿರ್ದೇಶಕ, ನಟ ನಾಗಶೇಖರ್ ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಚಕ್ರವರ್ತಿ ಡಿಜೆ ಎಂಬ ನಾನು ಎಂದು ನಿಕ್ಕಿಯಾಗಿತ್ತು. ಇವಿಷ್ಟೂ ಘೋಷಣೆಯ ಹಂತದಲ್ಲೇ ಉಳಿದವು. ಮೇಲ್ಕಂಡ ಯಾರೊಬ್ಬರಿಗೂ ಈ ಸಿನಿಮಾ ಕುರಿತಂತೆ ಯಾವುದೇ ಒಪ್ಪಂದಗಳಾಗಲಿ. ಹಣಕಾಸಿನ ಮುಂಗಡವಾಗಲಿ ನಿರ್ದೇಶಕನಾದ ನನ್ನ ಅರಿವಿಗೆ ಬಂದಂತೆ ಆಗಿರುವುದಿಲ್ಲ. ಈ ನಡುವೆ ನಾಗಶೇಖರ್ ಹಾಗೂ ಜಾಕ್ ಮಂಜು ಅವರು ನಿರ್ಮಾಪಕರೆಂದು ಹೇಳಲಾಗಿತ್ತು. ಅಲ್ಲದೇ ಎರಡೂವರೆ ತಿಂಗಳ ಹಿಂದೆಯೇ ನಿರ್ಮಾಪಕರಾದ ಜಾಕ್ ಮಂಜು ಅವರು ನಾನು ಈ ಸಿನಿಮಾ ನಿರ್ಮಿಸುತ್ತಿಲ್ಲವೆಂದು ಮೌಖಿಕವಾಗಿ ಅವರ ಜೆಪಿ ನಗರದ ಕಛೇರಿಯಲ್ಲಿ ನನಗೂ ಹಾಗೂ ನಾಗಶೇಖರ್ ಅವರಿಗೂ ವ್ಯವಹಾರಿಕ ಕಾರಣಗಳ ನೀಡಿ  ಸ್ಪಷ್ಟಪಡಿಸಿದರು.

    ಈ ನಡುವೆ ನಿರ್ಮಾಪಕ – ನಿರ್ದೇಶಕರಾದ ಆರ್.ಚಂದ್ರು ಅವರು ನಿರ್ಮಾಣ ಮಾಡುತ್ತೇನೆಂದು ಮೌಖಿಕವಾಗಿ ಹೇಳಿದರಾದರೂ ಯಾವುದೇ ಒಪ್ಪಂದ ಮಾಡಿಕೊಂಡಿರುವುದಿಲ್ಲ. ರಚನೆಕಾರ ನಿರ್ದೇಶಕನಾದ ನನಗೆ ಈವರೆಗೂ ಈ ಮೇಲ್ಕಂಡ ಯಾವುದೇ ತಂತ್ರಜ್ಞರು, ನಿರ್ಮಾಪಕರಿಂದ ಯಾವುದೇ ಒಪ್ಪಂದ ಪತ್ರ, ಮುಂಗಡ ಹಣ, ಸಿನಿಮಾ ತಯಾರಿ ಯಾವುದರ ಕುರಿತಾಗಿ ಯಾವೊಂದು ವಿಷಯವೂ ನಡೆದಿರುವುದಿಲ್ಲ. ಈ ನಡುವೆ ಸಿನಿಮಾಗೆ ಸಂಬಂಧವಿಲ್ಲದ ವ್ಯಕ್ತಿಯೊಬ್ಬರು ನಾಗಶೇಖರ್ ಅವರಿಗೆ ಅವರ ವೈಯಕ್ತಿಕವಾಗಿ ಎರಡೂ ಲಕ್ಷದ ನಲವತ್ತು ಸಾವಿರ ರುಪಾಯಿ ಹಣ ಕೊಟ್ಟಿರುವ ದಾಖಲಾತಿ ಹಿಡಿದುಕೊಂಡು ನಾನೇ ಈ ಸಿನಿಮಾದ ನಿರ್ಮಾಪಕ. ಆರ್ ಚಂದ್ರು ಅವರಿಂದ ನಾಗಶೇಖರ್ ಗೆ ಐದುಕೋಟಿ ರುಪಾಯಿ ಹಣದ ಒಪ್ಪಂದ ಈ ಸಿನಿಮಾದ ಕಥೆಯ ಮೇಲಾಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ.

    ಅಲ್ಲದೇ ನಾಗಶೇಖರ್ ಅವರು ಆಡಿಯೋ ರೈಟ್ಸ್ ಮಾರಾಟ ಮಾಡಿದ್ದಾರೆ. ಯಾರೂ ಈ ಸಿನಿಮಾ ಮಾಡಬೇಡಿ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಓರ್ವ ನಿರ್ದೇಶಕನ ಗಮನಕ್ಕೇ ಬಾರದೇ ಆಡಿಯೋ ರೈಟ್ಸ್ ಮಾರಾಟ, ಐದು ಕೋಟಿ ಒಪ್ಪಂದ ಅಥವಾ ಯಾವುದೇ ಹಣದ ವ್ಯವಹಾರ ಮಾಡುವುದು ಅಕ್ಷಮ್ಯ ಅಪರಾಧ. ಈ ಕುರಿತು ವಿಚಾರಿಸಲಾಗಿ ಈ ಬಗೆಯ ಪ್ರಯತ್ನಗಳು ನಡೆಯಿತು. ಆದರೆ ಸಫಲವಾಗಿಲ್ಲವೆಂದು ತಿಳಿದು ಬಂತು. ಈ ಕಥೆಯನ್ನೂ ನಾನು ಚಿತ್ರಕಥೆಯ ಸಹಿತ 2019 ರಲ್ಲೇ the cinematograph act 1952 ಪ್ರಕಾರ ನೊಂದಾಯಿಸಿ ಸಮಸ್ತ ದಾಖಲಾತಿ ಮಾಡಿಟ್ಟಿದ್ದೆ. (ನನ್ನ ಪುಣ್ಯ ) ಈ ಕಥೆ ಅಂಜನಾದ್ರಿ ಸುತ್ತಮುತ್ತಲಿನ ಭಾಗದ ಚಪ್ಪಲಿ ಕಳ್ಳ ಮತ್ತವನ ಹೆಂಡತಿಯ ಕಥೆಯಾಗಿರುತ್ತದೆ. ಇದನ್ನು ರೂಪಿಸಲು ಮೂರೂವರೆ ವರ್ಷದಲ್ಲಿ ಏಳು ರಾಜ್ಯ ಸುತ್ತಿದ್ದೇನೆ. ಹಲವಾರು ಗ್ರಂಥ ಓದಿದ್ದೇನೆ. ನನ್ನ ಹಣ, ಬೆವರು, ಹಸಿವು ಕಟ್ಟಿ ಕನಸುಗಣ್ಣುಗಳಿಂದ ಬರೆದಿಟ್ಟುಕೊಂಡಿದ್ದೇನೆ. ಹೊಟ್ಟೆಗೆ ಸಿನಿಮಾ ಸೆಟ್ ನ ಇಡ್ಲಿಯೋ ಅನ್ನವನ್ನೊ ತಿಂದಿರುವ ಯಾವೊಬ್ಬ ವ್ಯಕ್ತಿಯೂ ಕಂಡವರ ಕಣ್ಣಿಂದ ಉದುರಿದ ಕನಸುಗಳನ್ನು ಕಣ್ಣೀರಾಗಿಸುವುದಿಲ್ಲ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ

    ಈ ಕಥೆ ಮತ್ತು ಸಿನಿಮಾದ ಹಕ್ಕು ಸಂಪೂರ್ಣ ಡಿ ಜೆ ಚಕ್ರವರ್ತಿ (ಚಂದ್ರಚೂಡ್ ) ಎಂಬ ನನ್ನದೇ ಆಗಿರುತ್ತದೆ. ಯಾರಾದರೂ ಈ ವಿಷಯದಲ್ಲಿ ಯಾರಿಗೇ ಹಣಕೊಟ್ಟಿದ್ದರೂ ನಾನು ಹೊಣೆಯಲ್ಲ. ನಾನು ಮುಂದಿನ ದಿನಗಳಲ್ಲಿ ಪಾದರಾಯ ಎಂದು ನಾಮಕರಣ ಮಾಡಿದ ಈ ಚಿತ್ರವನ್ನು ನಾನೇ ನಟಿಸಿ ನಿರ್ದೇಶಿಸಲಿದ್ದೇನೆ ಅಥವಾ ನನ್ನ ವಿವೇಚನೆಗೆ ತಕ್ಕಂತಹ ತಂಡದೊಂದಿಗೆ ಮಾಡಬಹುದು. ಈ ಕುರಿತಾಗಿ ದೂರವಾಣಿ ಸಂಭಾಷಣೆಯ ಮುಖಾಂತರ ಆರ್.ಚಂದ್ರು ಅವರಲ್ಲಿ ಚರ್ಚಿಸಲಾಗಿ ನಾನು ನಾಗಶೇಖರ್ ಅವರಿಗೆ ಯಾವುದೇ ಮಾತುಕೊಟ್ಟಿಲ್ಲ. ಐದು ಕೋಟಿ ಕೊಟ್ಟು ಸಿನಿಮಾ ಮಾಡುತ್ತೇನೆಂದು ಯಾವುದೇ ರೀತಿಯಲ್ಲಿ ಮುಂದಾಗಿಲ್ಲವೆಂದು ಸ್ಪಷ್ಟನೆ ಕೊಟ್ಟಿರುತ್ತಾರೆ.

    ಕೆಲವು ದುಷ್ಕರ್ಮಿಗಳು ವಿಕೃತರು ಈ ಕಥೆಯನ್ನೇ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ನಾನು ಕಥೆಯನ್ನು ನಿರ್ಮಾಪಕರಿಗೆ ತಂತ್ರಜ್ಞರಿಗೆ ಚರ್ಚೆಯಲ್ಲಿ ರೀಡಿಂಗ್ ಕೊಡುವ ಧ್ವನಿ ಮುದ್ರಿಸಿ ಹೊರತಂದು ಸಿನಿಮಾ -ಮಾನವೀಯತೆಗೆ ದ್ರೋಹ ಬಗೆಯುವ ಪ್ರಯತ್ನ ಪಡುವುದೂ ಗಮನಕ್ಕೆ ಬಂದಿದೆ, ಅಂಥದ್ದೇನಾದರೂ ಕಂಡು ಬಂದರೆ ಉಗ್ರ ಕಾನೂನು ಕ್ರಮಕ್ಕೂ ಮುಂದಾಗಲು ಈಗಾಗಲೇ ಸರ್ವ ತಯಾರಿ ನಡೆದಿದೆ. ಈ ಕುರಿತಾಗಿ ಯಾರೂ ಯಾವುದೇ ಹಣಕಾಸಿನ ವ್ಯವಹಾರಗಳನ್ನು ಮಾಡಿ ತೊಂದರೆಗೀಡಾಗಬಾರದೆಂದು ಮತ್ತು ಈ ಬಗೆಯ ಪ್ರಯತ್ನಗಳು ನಡೆದರೆ ನನ್ನ ಗಮನಕ್ಕೆ ತರಲು ವಿನಂತಿಸುತ್ತೇನೆ.

  • ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಗಾಯಕಿ ಮಂಗ್ಲಿ

    ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಗಾಯಕಿ ಮಂಗ್ಲಿ

    ತೆಲುಗು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಹೇಳಿರುವ ಮಂಗ್ಲಿ, ಇದೀಗ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಗಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಈ ಗಾಯಕಿ, ಮೊದಲ ಬಾರಿಗೆ ನಾಯಕಿಯಾಗಿ ಪ್ರವೇಶ ಮಾಡುತ್ತಿದ್ದಾರೆ. ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ನಿರ್ದೇಶನದಲ್ಲಿ ಮೂಡಿ ಬರಲಿರುವ ಪಾದರಾಯ ಚಿತ್ರಕ್ಕೆ ಇವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    ಸದ್ಯ ವೇದ ಸಿನಿಮಾದ ‘ಗಿಲ್ಲಕ್ಕೋ’ ಹಾಡಿನ ಮೂಲಕ ಮನೆಮಾತಾಗಿರುವ ಮಂಗ್ಲಿ, ತ್ರಿಬಲ್ ರೈಡಿಂಗ್, ವಿಕ್ರಾಂತ್ ರೋಣ, ದಿಪ್ ಪಸಂದ್, ರಾಬರ್ಟ್ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳ ಹಾಡಿಗೆ ದನಿಯಾಗಿದ್ದಾರೆ. ಅಷ್ಟೂ ಹಾಡುಗಳು ಸೂಪರ್ ಹಿಟ್ ಎನ್ನುವುದು ವಿಶೇಷ. ಇದೇ ಮೊದಲ ಬಾರಿಗೆ ಅವರು ನಾಯಕಿಯಾಗಿ ನಟಿಸುತ್ತಿದ್ದು, ನಾಗಶೇಖರ್ ಈ ಸಿನಿಮಾದ ನಾಯಕ. ಇದನ್ನೂ ಓದಿ: ಸಂಕ್ರಾಂತಿ ಹಾಡಿಗೆ ಸುಂದರಿಯರ ಜೊತೆ ಕುಣಿದ ರಮೇಶ್ ಅರವಿಂದ್

    ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, 2013-14ರಲ್ಲಿ ನಡೆದ ಘಟನೆಯನ್ನು ಚಿತ್ರವಾಗಿಸುತ್ತಿದ್ದಾರೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ. ಈ ಘಟನೆಯು ಆರು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದ್ದು, ಅದನ್ನು ಹೊಸ ರೀತಿಯಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದಾರಂತೆ. ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿರುವ ಅವರು, ಈ ಚಿತ್ರಕ್ಕೆ ಪಾದರಾಯ ಎಂದು ಹೆಸರಿಡುವುದಕ್ಕೂ ಕಾರಣವಿದೆಯಂತೆ. ಅದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುತ್ತಾರೆ.

    ಈಗಾಗಲೇ ಪಾತ್ರಕ್ಕಾಗಿ ನಾಗಶೇಖರ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ತಯಾರಿಗಾಗಿಯೇ ಅವರು ಹಲವು ದಿನಗಳಿಂದ ಅಂಜನಾದ್ರಿ ಬೆಟ್ಟದಲ್ಲಿ ಬೀಡುಬಿಟ್ಟಿದ್ದಾರಂತೆ. ಈ ಬೆಟ್ಟದಲ್ಲಿ ನಡೆಯುವ ಪೂಜ ಪುನಸ್ಕಾರಗಳಲ್ಲೂ ಅವರು ಭಾಗಿಯಾಗಿದ್ದಾರೆ. ಅಲ್ಲದೇ, ಹನುಮನ ಮಾಲೆಯನ್ನೂ ಧರಿಸಿ, ಅಲ್ಲಿನ ಆಚಾರ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಪಾದರಾಯ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅತಿಥಿ ಪಾತ್ರ? ನೈಜ ಘಟನೆಯೇ ಚಿತ್ರದ ಜೀವಾಳ

    ‘ಪಾದರಾಯ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅತಿಥಿ ಪಾತ್ರ? ನೈಜ ಘಟನೆಯೇ ಚಿತ್ರದ ಜೀವಾಳ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಜಾಕ್ ಮಂಜು ಇದೀಗ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸುದೀಪ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕ, ನಟ ನಾಗಶೇಖರ್ ಈ ಸಿನಿಮಾದ ನಾಯಕನಾಗಿದ್ದು, ಚಕ್ರವರ್ತಿ ಚಂದ್ರಚೂಡ ಇದರ ನಿರ್ದೇಶಕರು.

    ಕನ್ನಡ, ತಮಿಳು, ತೆಲುಗು, ಮಲಯಾಳಂ  ಹಾಗೂ ಹಿಂದಿ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾಗೆ ಪಾದರಾಯ ಎಂಬ ಟೈಟಲ್ ಇಡಲಾಗಿದ್ದು, ಕಾಂತಾರ ನಂತರ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಸತ್ಯ ಹೆಗಡೆ ಛಾಯಾಗ್ರಹಣ, ತಮಿಳನ ಖ್ಯಾತ ಸಂಕಲನಕಾರ ಆಂಟೋನಿ ಮುಂತಾದ ಖ್ಯಾತನಾಮರು ಕಾರ್ಯ ನಿರ್ವಹಿಸುತ್ತಿರುವುದು ಸಿನಿಮಾದ ಮತ್ತೊಂದು ವಿಶೇಷ. ಇದನ್ನೂ ಓದಿ: `ಅವತಾರ್ 2′ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ: 2 ಕೋಟಿ ಟಿಕೆಟ್ ಸೋಲ್ಡ್ ಔಟ್

    ಚಕ್ರವರ್ತಿ ಚಂದ್ರಚೂಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದರೆ, ಖ್ಯಾತ ನಿರ್ದೇಶಕ ಹಾಗೂ ನಟ ನಾಗಶೇಖರ್ ನಾಯಕ ನಟನಾಗುವ ಜೊತೆಗೆ ನಿರ್ಮಾಪಕರೂ ಆಗಿದ್ದಾರೆ. ದೇಶ ವ್ಯಾಪಿ ಸುದ್ದಿ ಮಾಡಿದ ನೈಜ ಘಟನೆಯೊಂದರ ಆಧಾರಿತ ಈ ಸಿನಿಮಾ ಹಲವು ಜೀವಂತ ಘಟ್ಟಗಳಿಂದ ಕೂಡಿದ್ದು, ಹಾಗಾಗಿ ಹನುಮ ಜಯಂತಿಯಂದೇ ಶೀರ್ಷಿಕೆ ಬಿಡುಗಡೆ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ ಜನವರಿಯಿಂದ ಚಿತ್ರೀಕರಣ ಆರಂಭಿಸಲಿದೆ.

    ಸಿನಿಮಾದ ವಿಶೇಷ ಅಂದರೆ, 2016ರಲ್ಲಿ ಸಮಯದಲ್ಲಿ ನಡೆದ ಒಂದು ನೈಜ ಘಟನೆಯನ್ನು ಸಿನಿಮಾಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅಂಜನಾದ್ರಿಯ ಸುತ್ತಾಮುತ್ತಾ ತುಂಬಾ ಬ್ಯಾಕ್ ವಾಟರ್ ನಲ್ಲಿ ಕಥೆ ನಡೆಯಲಿದೆ. ಪಾದರಾಯ ಕಥೆಯಗೂ ಮತ್ತು ಆಂಜನೇಯ ಪಾದಕ್ಕೂ ನಂಟಿದೆ. ಜೊತೆಗೆ ಅಯೋಧ್ಯೆಯಿಂದ ಬೆಂಗಳೂರಿನವರೆಗೂ ಕಥೆ ಸಾಗಿ ಬರಲಿದೆ ಎನ್ನುವುದು ಕುತೂಹಲದ ಅಂಶಗಳಾಗಿವೆ.

    Live Tv
    [brid partner=56869869 player=32851 video=960834 autoplay=true]