Tag: paaru

  • BBK 11: ‘ಪಾರು’ನ ಕೆಣಕಿದ ಭವ್ಯಾ- ದೊಡ್ಮನೆಯಲ್ಲಿ ನಾಮಿನೇಷನ್‌ ಬಿಸಿ

    BBK 11: ‘ಪಾರು’ನ ಕೆಣಕಿದ ಭವ್ಯಾ- ದೊಡ್ಮನೆಯಲ್ಲಿ ನಾಮಿನೇಷನ್‌ ಬಿಸಿ

    ಅಂತೂ ಇಂತೂ ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಭುಡಕ್ಕೆ ಬೆಂಕಿ ಬಿದ್ದಾಗಲೇ ಅಲ್ವಾ? ಎಚ್ಚೆತ್ತಿಕೊಳ್ಳೋದು. ಹಾಗೆಯೇ ನಾಮಿನೇಷನ್ ಪ್ರಕ್ರಿಯೆ ಬಂದಾಗಲೇ ತಾವು ಸೇಫ್ ಆಗೋಕೆ ಸ್ಪರ್ಧಿಗಳ ಮೈಂಡ್‌ ಗೇಮ್‌ ಶುರುವಾಗೋದು. ಇಲ್ಲೂ ಹಾಗೇ ಆಗಿದೆ. ಸೈಲೆಂಟ್ ಆಗಿರೋ ‘ಪಾರು’ ಮೋಕ್ಷಿತಾರನ್ನು (Mokshitha Pai) ಭವ್ಯಾ ಗೌಡ ಕೆಣಸಿದ್ದಾರೆ.

    ದೊಡ್ಮನೆಯಲ್ಲಿ (Bigg Boss Kannada 11) ಮೊದಲ ಎಲಿಮಿನೇಷನ್‌ಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಇಡೀ ಮನೆ ಚೈತ್ರಾ ಕುಂದಾಪುರ ಅನ್ನ ನಾಮಿನೇಟ್ ಮಾಡಿದ್ರೆ, ಇತ್ತ ಭವ್ಯ ಗೌಡ ಅದ್ಯಾಕೋ ಏನೋ? ಮೋಕ್ಷಿತಾ ಪೈ ಹಿಂದೆ ಬಿದ್ದಿದ್ದಾರೆ. ಆದರೆ, ನಾಮಿನೇಟ್ ಮಾಡಿರೋದಕ್ಕೆ ಕೊಟ್ಟ ಕಾರಣ ಏನು ಗೊತ್ತಾ? ಮೋಕ್ಷಿತಾ ಪೈ ಮಾತು ಆಡೋದಿಲ್ಲ. ತುಂಬಾನೆ ಸೈಲೆಂಟ್ ಆಗಿದ್ದಾರೆ ಅನ್ನೋದೇ ಭವ್ಯಾರ ವಾದ. ಅದನ್ನೇ ಗುರಿಯಾಸಿಕೊಂಡು ಮೋಕ್ಷಿತಾರನ್ನು ನಾಮಿನೇಟ್‌ ಮಾಡಿದ್ದಾರೆ ಭವ್ಯಾ. ಇದನ್ನೂ ಓದಿ:4ನೇ ಮದುವೆಗೆ ಸಜ್ಜಾದ ತಮಿಳು ನಟಿ ವನಿತಾ ವಿಜಯ್ ಕುಮಾರ್

    ಮೋಕ್ಷಿತಾ ನೀವು ತುಂಬಾನೇ ಸೈಲೆಂಟ್ ಆಗಿದ್ದೀರಿ. ಯಾರ ಜೊತೆಗೂ ನೀವು ಇನ್ನೂ ಬರೆಯುತ್ತಿಲ್ಲ. ನಾನು ನೋಡ್ತಾನೇ ಇದ್ದೇನೆ. ನನ್ನ ಜೊತೆಗೆ ಕೂಡ ಮಾತನಾಡುತ್ತಿಲ್ಲ. ನೀವು ಸೈಲೆಂಟ್ ಆಗಿರೋದ್ದಕ್ಕೆ ನಾನು ನಿಮ್ಮ ಹೆಸರು ನಾಮಿನೇಟ್ ಮಾಡುತ್ತಿದ್ದೇನೆ ಅಂತಲೇ ಭವ್ಯಾ ನೇರವಾಗಿ ಹೇಳಿದ್ದಾರೆ.

    ಭವ್ಯಾ (Bhavya Gowda) ಮಾತಿಗೆ ಮೋಕ್ಷಿತಾ ಕೂಡ ಪ್ರತಿಯುತ್ತರ ನೀಡಿದ್ದಾರೆ. ನಾನು ಎಲ್ಲರ ಜೊತೆಗೆ ಮಾತನಾಡುತ್ತೇನೆ. ಸ್ವರ್ಗದಲ್ಲಿರೋರ ಜೊತೆಗೂ ಮಾತನಾಡಿದ್ದೇನೆ. ಆದರೆ, ನೀವೇ ನನ್ನ ಎದುರು ಬಂದಿಲ್ಲ. ಬರದೇ ಹೇಗೆ ಮಾತನಾಡೋಕೆ ಸಾಧ್ಯ ಆಗುತ್ತದೆ ಹೇಳಿ? ಹೀಗೆ ಪ್ರಶ್ನೆ ಮಾಡಿರೋ ಮೋಕ್ಷಿತಾ ನಾಮಿನೇಷನ್ ಮಾಡಿದಕ್ಕೆ ಬೇಸರ ಏನೂ ಇಲ್ಲ. ಅದು ನಿಮ್ಮ ಅಭಿಪ್ರಾಯವೇ ಆಗಿದೆ. ಅದನ್ನು ನಾನು ಗೌರವಿಸುತ್ತೇನೆ ಅಂತಲೂ ಮೋಕ್ಷಿತಾ ಪೈ ಹೇಳಿಕೊಂಡಿದ್ದಾರೆ. ಇದನ್ನೆಲ್ಲ ನೋಡಿದ್ರೆ, ಈ ಸ್ಪರ್ಧಿಗಳು ಒಳ್ಳೆಯ ಫ್ರೆಂಡ್ಸ್ ಆಗುತ್ತಾರಾ? ದೊಡ್ಮನೆ ಕಿಚ್ಚು ಹೆಚ್ಚಾಗುತ್ತಾ? ಎಂದು ಕಾದುನೋಡಬೇಕಿದೆ.

    ಅಂದಹಾಗೆ, ಮೋಕ್ಷಿತಾ ಪೈ ಅವರು ‘ಪಾರು’ ಸೀರಿಯಲ್‌ (Paaru Serial) ಮೂಲಕ ಕರ್ನಾಟಕದ ಮನೆ ಮಾತಾಗಿದ್ದರು. ಭವ್ಯಾ ಗೌಡ ಅವರು ‘ಗೀತಾ’ (Geetha Serial) ಸೀರಿಯಲ್‌ನಲ್ಲಿ ನಟಿಸಿದ್ದರು.

  • ಬಾಲಿ ಬ್ಯೂಟಿಗೆ ಬೆರಗಾದ ‘ಪಾರು’ ನಟಿ

    ಬಾಲಿ ಬ್ಯೂಟಿಗೆ ಬೆರಗಾದ ‘ಪಾರು’ ನಟಿ

    ನ್ನಡ ಕಿರುತೆರೆ ಜನಪ್ರಿಯ ಸೀರಿಯಲ್ ‘ಪಾರು’ (Paaru) ನಟಿ ಮೋಕ್ಷಿತಾ ಪೈ (Mokshitha Pai) ಬಾಲಿಗೆ ಹಾರಿದ್ದಾರೆ. ಬಾಲಿ ಪ್ರಕೃತಿ ನೋಡಿ ಮೈಮರೆತಿದ್ದಾರೆ. ವೆಕೇಷನ್‌ನ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ದೆವ್ವದ ಪಾತ್ರ ಮಾಡಲು ಒಪ್ಪಿಕೊಂಡ್ರಾ ಪೂಜಾ ಹೆಗ್ಡೆ?

     

    View this post on Instagram

     

    A post shared by Mokshitha Pai (@mokshitha22)


    ಮೋಕ್ಷಿತಾಗೆ ಟ್ರಾವೆಲಿಂಗ್ ಎಂದರೆ ತುಂಬಾ ಇಷ್ಟ. ಸದಾ ಹೊಸ ಜಾಗಗಳಿಗೆ ನಟಿ ಭೇಟಿ ಕೊಡುತ್ತಲೇ ಇರುತ್ತಾರೆ. ಇದೀಗ ಬಾಲಿ ಪ್ರಕೃತಿ ಸೌಂದರ್ಯಕ್ಕೆ ನಟಿ ಫಿದಾ ಆಗಿದ್ದಾರೆ. ಸಹೋದರಿ ಜೊತೆ ಇಂಡೋನೇಷ್ಯಾ ಬಾಲಿಗೆ (Bali) ನಟಿ ಭೇಟಿ ನೀಡಿದ್ದು, ವಿವಿಧ ಸ್ಥಳಕ್ಕೆ ತೆರಳಿ ಖುಷಿಪಟ್ಟಿದ್ದಾರೆ. ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಫಸ್ಟ್ ನೈಟ್ CD ಕಳೆದುಕೊಂಡ ತೃಪ್ತಿ ದಿಮ್ರಿ- ಸಖತ್ ಆಗಿದೆ ಹೊಸ ಚಿತ್ರದ ಟ್ರೈಲರ್

    ಅಂದಹಾಗೆ, ಇತ್ತೀಚೆಗೆ ದುಬೈ, ಮನಾಲಿ, ಊಟಿಗೂ ಭೇಟಿ ನೀಡಿದ್ದರು. ಊಟಿ ಪ್ರವಾಸಿಗರು ನೋಡಲೇಬೇಕಾದ ಪ್ರವಾಸಿಗರ ಸ್ಥಳ. ತಮಿಳುನಾಡಿನ ನೀಲಗಿರಿ ಪರ್ವತದ ತಪ್ಪಲಿನಲ್ಲಿದೆ. ಈ ಮಳೆಗಾಲದ ಸಮಯದಲ್ಲಿ ಕೊರೆವ ಚಳಿಯಲ್ಲಿ ಪಾರು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.

    ‘ಪಾರು’ ಸೀರಿಯಲ್ ಬಳಿಕ ಮೋಕ್ಷಿತಾ ಪೈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ಶುರು ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಹೊಸ ಫೋಟೋಶೂಟ್‌ಗಳ ಮೂಲಕ ಪಡ್ಡೆಹುಡುಗರ ನಿದ್ದೆಕೆಡಿಸಿರುವ ಪಾರು, ಈ ಹೊಸ ಪಾತ್ರಗಳ ಹುಡುಕಾಟದಲ್ಲಿದ್ದಾರೆ. ಅವಕಾಶಗಳಿಗೆ ಕೊರತೆಯಿಲ್ಲ. ಆದರೆ ಚಾಲೆಂಜಿಂಗ್ ಎನಿಸುವಂತಹ ಕಥೆಯಲ್ಲಿ ಕಾಣಿಸಿಕೊಳ್ಳಲು ನಟಿ ಎದುರು ನೋಡ್ತಿದ್ದಾರೆ. ಅದು ಸೀರಿಯಲ್ ಅಥವಾ ಸಿನಿಮಾನಾ? ಎಂದು ಕಾದುನೋಡಬೇಕಿದೆ.

  • ಊಟಿಯಲ್ಲಿ ಮೋಕ್ಷಿತಾ ಪೈ- ಪ್ರಕೃತಿಯ ಮಡಿಲಲ್ಲಿ ‘ಪಾರು’

    ಊಟಿಯಲ್ಲಿ ಮೋಕ್ಷಿತಾ ಪೈ- ಪ್ರಕೃತಿಯ ಮಡಿಲಲ್ಲಿ ‘ಪಾರು’

    ಕಿರುತೆರೆಯ ಮುದ್ದು ಮೊಗದ ಚೆಲುವೆ ಮೋಕ್ಷಿತಾ ಪೈ (Mokshitha Pai) ಸದ್ಯ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ. ಸ್ನೇಹಿತೆಯರ ಊಟಿಯಲ್ಲಿ ಮಸ್ತ್ ಆಗಿ ಸಮಯ ಕಳೆದಿದ್ದಾರೆ. ಪ್ರವಾಸದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಹಾರರ್ ಸಿನಿಮಾದಲ್ಲಿ ‘ಹಗ್ಗ’ ಹಿಡಿದು ಸೂಪರ್‌ ಹೀರೋ ಆದ ಅನು ಪ್ರಭಾಕರ್

    ಕಳೆದ 5 ವರ್ಷಗಳಿಂದ ‘ಪಾರು’ (Paaru) ಸೀರಿಯಲ್ ಮೂಲಕ ರಂಜಿಸಿದ್ದ ಕುಡ್ಲದ ಬೆಡಗಿ ಮೋಕ್ಷಿತಾ ಪೈ ಸದಾ ಒಂದಲ್ಲಾ ಒಂದು ಹೊಸ ತಾಣಗಳಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ಇತ್ತೀಚೆಗೆ ದುಬೈ, ಮನಾಲಿಗೆ ಭೇಟಿ ನೀಡಿದ್ದರು. ಈಗ ಪ್ರಕೃತಿಯ ಮಡಲಲ್ಲಿ ನಟಿ ಸಮಯ ಕಳೆದಿದ್ದಾರೆ.

    ಊಟಿ ಪ್ರವಾಸಿಗರು ನೋಡಲೇಬೇಕಾದ ಪ್ರವಾಸಿಗರ ಸ್ಥಳ. ತಮಿಳುನಾಡಿನ ನೀಲಗಿರಿ ಪರ್ವತದ ತಪ್ಪಲಿನಲ್ಲಿದೆ. ಈ ಮಳೆಗಾಲದ ಸಮಯದಲ್ಲಿ ಕೊರೆವ ಚಳಿಯಲ್ಲಿ ಪಾರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    ಅಂದಹಾಗೆ, ‘ಪಾರು’ ಸೀರಿಯಲ್ ಬಳಿಕ ಮೋಕ್ಷಿತಾ ಪೈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ ಕೂಡ ಶುರು ಮಾಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಸದ್ಯ ಹೊಸ ಫೋಟೋಶೂಟ್‌ಗಳ ಮೂಲಕ ಪಡ್ಡೆಹುಡುಗರ ನಿದ್ದೆಕೆಡಿಸಿರುವ ಪಾರು, ಈ ಹೊಸ ಪಾತ್ರಗಳ ಹುಡುಕಾಟದಲ್ಲಿದ್ದಾರೆ. ಅವಕಾಶಗಳಿಗೆ ಕೊರತೆಯಿಲ್ಲ. ಆದರೆ ಚಾಲೆಂಜಿಂಗ್ ಎನಿಸುವಂತಹ ಕಥೆಯಲ್ಲಿ ಕಾಣಿಸಿಕೊಳ್ಳಲು ನಟಿ ಎದುರು ನೋಡ್ತಿದ್ದಾರೆ. ಅದು ಸೀರಿಯಲ್ ಅಥವಾ ಸಿನಿಮಾನಾ? ಎಂದು ಕಾದುನೋಡಬೇಕಿದೆ.

  • ‘ಅಭಿರಾಮಚಂದ್ರ’ನಿಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್

    ‘ಅಭಿರಾಮಚಂದ್ರ’ನಿಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್

    ಥ ಕಿರಣ್, ಸಿದ್ದು ಮೂಲಿಮನಿ, ಮತ್ತು ನಾಟ್ಯ ರಂಗ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಅಭಿರಾಮಚಂದ್ರ’ (Abhiramachandra) ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಚಿತ್ರದ ಟೀಸರ್ ರಿಲೀಸ್ ಮಾಡಿಕೊಡುವ ಮೂಲಕ ಶಿವಣ್ಣ ಸಿನಿಮಾ ತಂಡಕ್ಕೆ ಸಾಥ್ ನೀಡಿದ್ದಾರೆ.  ಟೀಸರ್ ನೋಡಿ ಚಿತ್ರತಂಡಕ್ಕೆ ಭೇಷ್ ಎಂದಿದ್ದಾರೆ.

    ‘ಅಭಿರಾಮಚಂದ್ರ’ ಟೀಸರ್ ರಿಲೀಸ್ ಮಾಡಿದ್ದು, ಬಹಳ ಖುಷಿಯಾಯ್ತು. ನಾಗೇಂದ್ರ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ. ತುಂಬಾ ಬ್ಯೂಟಿಫುಲ್ ವಿಷ್ಯೂವಲ್ಸ್ ಇತ್ತು. ಬರೀ ಮಕ್ಕಳ ಕಥೆ ಇದೆ. ಸ್ಟೋರಿಯಲ್ಲಿ ಬೇರೆ ಬೇರೆ ತಿರುವು ಕಾಣುತ್ತಿದೆ. ಅದನ್ನು ನಾವು ಹೇಳೋದಕ್ಕಿಂತ ಡೈರೆಕ್ಟರ್ ಹೇಳಿದರೆ ಒಳ್ಳೆಯದು. ಟೀಸರ್ ನೋಡ್ತಿದ್ರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೆನಪಾಯ್ತು. ಆ ಸಿನಿಮಾ ಥರ ಹಿಟ್ ಆಗಲಿ, ಟೈಟಲ್ ತುಂಬಾ ಪಾಸಿಟಿವ್ ಆಗಿದೆ. ಸಿನಿಮಾ ಮೇ ನಲ್ಲಿ ರಿಲೀಸ್ ಆಗ್ತಿದ್ದು, ನಾನು ನೋಡ್ತೇನೆ. ನೀವು ನೋಡಿ, ರವಿಬಸ್ರೂರ್ ಮ್ಯೂಸಿಕ್ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶಿವಣ್ಣ (Shivanna) ಹಾರೈಸಿದ್ದಾರೆ.

    ಶಾಲಾ ದಿನಗಳ ಪ್ರೀತಿ, ತುಂಟಾಟ, ಮುಗ್ದ ಸ್ನೇಹ, ಸುಂದರ ನೋಟ ಅಭಿರಾಮಚಂದ್ರ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ನಾಗೇಂದ್ರ ಗಾಣಿಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾ. ರಥ ಕಿರಣ, ಸಿದ್ದು ಮೂಲಿಮನಿ, ನಾಟ್ಯರಂಗ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಶಿವಾನಿ ರೈ ನಾಯಕಿ ಆಗಿ ನಟಿಸಿದ್ದಾರೆ.

     

    View this post on Instagram

     

    A post shared by Siddu Moolimani (@sidmoolimani)

    ಕುಂದಾಪುರ, ಬೆಂಗಳೂರು, ಮೈಸೂರು ಭಾಗದಲ್ಲಿ ಶೂಟಿಂಗ್ ನಡೆಸಲಾಗಿದ್ದು, ರವಿ ಬಸ್ರೂರು (Ravi basrur) ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರವಿ ಬಸ್ರೂರು ಮೂವೀಸ್ ನಡಿ ಸಿನಿಮಾವನ್ನು ಪ್ರಸ್ತುತ ಪಡಿಸಲಾಗುತ್ತಿದೆ. ರವಿ ಬಸ್ರೂರು ಪುತ್ರ ಪವನ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ವೀಣಾ ಸುಂದರ್, ಸುಂದರ್, ಎಸ್.ನಾರಾಯಣ್, ಪ್ರಕಾಶ್ ತೂಮಿನಾಡು ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

    AGS Entertainment ಹಾಗೂ ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್ ಬ್ಯಾನರ್‌ನಲ್ಲಿ ಎ.ಜಿ.ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸುರೇಶ್ ಆರುಮುಗಂ ಸಂಕಲನ ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೊನೆ ಹಂತದಲ್ಲಿರುವ ‘ಅಭಿರಾಮಚಂದ್ರ’ ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

  • `ಗಟ್ಟಿಮೇಳ’ ನಟಿ ಪ್ರಿಯಾ ಜೊತೆ ಸಿದ್ದು ಮದುವೆ ಡೇಟ್ ಫಿಕ್ಸ್

    `ಗಟ್ಟಿಮೇಳ’ ನಟಿ ಪ್ರಿಯಾ ಜೊತೆ ಸಿದ್ದು ಮದುವೆ ಡೇಟ್ ಫಿಕ್ಸ್

    ಹಿರಿತೆರೆ ಮಾತ್ರವಲ್ಲ ಕಿರುತೆರೆಯಲ್ಲೂ ಮದುವೆ ದಿಬ್ಬಣದ ಸೌಂಡ್ ಜೋರಾಗಿದೆ. ಇತ್ತೀಚಿಗೆ `ಪಾರು’ ಸೀರಿಯಲ್ ಹೀರೋ ಶರತ್ ಪದ್ಮನಾಭ್ ಹಸೆಮಣೆ ಏರಿದ್ದರು. ಈಗ ಇದೇ ಸೀರಿಯಲ್‌ನ ಸಿದ್ದು ಮೂಲಿಮನಿ (Siddu Moolimani) ಮತ್ತು `ಗಟ್ಟಿಮೇಳ’ (Gattimela) ನಟಿ ಪ್ರಿಯಾ (Priya) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ಕಿರುತೆರೆಯ ಲವ್ ಬರ್ಡ್ಸ್ ಪ್ರಿಯಾ ಮತ್ತು ಸಿದ್ದು ಮದುವೆಗೆ (Wedding) ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ವಾಹಿನಿಯ ರಿಯಾಲಿಟಿ ಶೋನಲ್ಲಿ ಶುರುವಾದ ಸ್ನೇಹ, `ಧಮಾಕ’ (Dhamaka) ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಜೋಡಿಹಕ್ಕಿಗಳಾದರು. ಈ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಈಗ ಹಿರಿಯರ ಒಪ್ಪಿಗೆಯ ಮೇರೆಗೆ ಪ್ರಿಯಾ- ಸಿದ್ದು ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ: ಅಣ್ಣನ ಮದುವೆಯಲ್ಲಿ ಮಿಂಚಿದ ನಟಿ ಪೂಜಾ ಹೆಗ್ಡೆ

     

    View this post on Instagram

     

    A post shared by Priya j achar???? (@priya_j_achar)

    ಕಳೆದ ನವೆಂಬರ್‌ನಲ್ಲಿ ಪ್ರಿಯಾ ಮತ್ತು ಸಿದ್ದು ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಸರ್ಪ್ರೈಸ್ ನೀಡಿದ್ದರು. ಈಗ ಮದುವೆಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಗಟ್ಟಿಮೇಳ ನಟಿ ಪ್ರಿಯಾ ಜೊತೆ ಇದೇ ಫೆಬ್ರವರಿಯಲ್ಲಿ ಖಾಸಗಿ ರೆಸಾರ್ಟ್‌ವೊಂದರಲ್ಲಿ ಸಿದ್ದು ಮದುವೆಯಾಗುತ್ತಿದ್ದಾರೆ.

     

    View this post on Instagram

     

    A post shared by Priya j achar???? (@priya_j_achar)

    ಇನ್ನೂ ಸಿದ್ದು ಮೂಲಿಮನಿ, ರಂಗಿತರಂಗ, ವಿಕ್ರಾಂತ್ ರೋಣ, ಧಮಾಕ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಪ್ರಿಯಾ ʻಗಟ್ಟಿಮೇಳʼ ಸೀರಿಯಲ್ ಜೊತೆ ಹೊಸ ಸಿನಿಮಾ ಕೂಡ ಮಾಡ್ತಿದ್ದಾರೆ. ಸದ್ಯದಲ್ಲೇ ಈ ಕುರಿತು ಅಪ್‌ಡೇಟ್ ಹೊರಬೀಳಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ತಮಿಳು ಕಿರುತೆರೆಯತ್ತ `ಪಾರು’ ಖ್ಯಾತಿಯ ಮೋಕ್ಷಿತಾ ಪೈ

    ನ್ನಡ ಕಿರುತೆರೆಯ ಬ್ಯೂಟಿ ಪಾರು ಮೋಕ್ಷಿತಾ ಪೈ ತಮ್ಮ ವೃತ್ತಿ ಬದುಕಿನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದೀಗ `ಪಾರು’ ಸೀರಿಯಲ್ ನಾಯಕಿ ಮೋಕ್ಷಿತಾ ಪೈ ತಮಿಳು ಕಿರುತೆರೆಯತ್ತ ಮುಖ ಮಾಡಿದ್ದಾರೆ.ನಟಿಯಾಗಬೇಕು ಎಂಬ ಕನಸು ಕಾಣದ ಮಧ್ಯಮ ವರ್ಗದ ಹುಡುಗಿ ಮೋಕ್ಷಿತಾ ಪೈ, ತಮಗೆ ಸಿಕ್ಕ `ಪಾರು’ ಧಾರಾವಾಹಿ ಅವಕಾಶವನ್ನ ಸರಿಯಾಗಿ ಸದುಪಯೋಗಪಡಿಸಿಕೊಂಡು ಕನ್ನಡಿಗರ ಮನದಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಂಡರು. ಅಂದಿನಿಂದ ಇಂದಿನವರೆಗೂ ಟಿವಿ ಪರದೆಯಲ್ಲಿ ತಮ್ಮ ಅಭಿಮಾನಿಗಳಿಗೆ ಮೋಡಿ ಮಾಡುತ್ತಲೇ ಬಂದಿದ್ದಾರೆ. ಇದೀಗ ತಮ್ಮ ವೃತ್ತಿ ಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತಮಿಳು ಕಿರುತೆರೆಯಲ್ಲಿ ಮಿಂಚಲು ಪಾರು ರೆಡಿಯಾಗಿದ್ದಾರೆ.

    `ಮೀನಾಕ್ಷಿ ಪೊಣ್ಣು’ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಅವರಿಗೆ ಪ್ರಮುಖ ಪಾತ್ರ ಲಭಿಸಿದೆ. ಸೀರಿಯಲ್‌ನಲ್ಲಿ ರೆಬೆಲ್ ಹುಡುಗಿಯ ಪಾತ್ರದಲ್ಲಿ ಮೋಕ್ಷಿತಾ ಪೈ ಕಾಣಿಸಿಕೊಳ್ಳಲಿದ್ದಾರೆ. ಮೀನಾಕ್ಷಿಯ ಎರಡನೇ ಪುತ್ರಿಯಾಗಿ ಶಕ್ತಿ ಪಾತ್ರದಲ್ಲಿ ಮೋಕ್ಷಿತಾ ಪೈ ಅಭಿನಯಿಸಲಿದ್ದಾರೆ. ಸದ್ಯದಲ್ಲಿಯೇ ತಮಿಳಿನ ಖಾಸಗಿ ವಾಹಿನಿಯಲ್ಲಿ `ಮೀನಾಕ್ಷಿ ಪೊಣ್ಣು’ ಧಾರಾವಾಹಿ ಪ್ರಸಾರವಾಗಲಿದೆ. ಈ ಧಾರಾವಾಹಿಯ ಮತ್ತೊಂದು ಪ್ಲಸ್ ಪಾಯಿಂಟ್ ಅಂದ್ರೆ ಕನ್ನಡ ಮತ್ತು ತಮಿಳಿನಲ್ಲಿ ಈಗಾಗಲೇ ಗಮನ ಸೆಳೆದಿರುವ ಹಿರಿಯ ನಟಿ ಅರ್ಚನಾ ಮೋಕ್ಷಿತಾ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ಇಸ್ಮಾರ್ಟ್ ಜೋಡಿಗೆ ಜೊತೆಯಾಗಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್

    ಕನ್ನಡದ `ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ರೀಮೇಕ್ ಈ `ಮೀನಾಕ್ಷಿ ಪೊಣ್ಣು’ ಧಾರಾವಾಹಿಯಾಗಿದೆ. ಮುಗ್ಧ ಹುಡುಗಿ ಪಾರು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೋಕ್ಷಿತಾ ತಮಿಳಿನಲ್ಲಿ ಸಖತ್ ರಗಡ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೀರಿಯಲ್ ಕಥೆ ಕೇಳಿದ ಕೂಡಲೇ ಈ ಪ್ರಾಜೆಕ್ಟ್ ತಾನು ಮಾಡಲೇಬೇಕು ಎಂದು ಖುಷಿಯಿಂದ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಇನ್ನು ಮುಗ್ಧ ಪಾರುಗೂ ರಗಡ್ ಶಕ್ತಿ ಪಾತ್ರಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸವಿದ್ದು, ನೆಚ್ಚಿನ ನಟಿ ಪಾರು ಅವರ ಹೊಸ ಅವತಾರ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಸೀರಿಯಲ್ ಜತೆ ಸಾಕಷ್ಟು ಸಿನಿಮಾಗಳು ನಟಿಯ ಕೈಯಲ್ಲಿದೆ. ಇನ್ನು ತಮಿಳು ಕಿರುತೆರೆಯಲ್ಲಿ ಮೋಕ್ಷಿತಾ ಹೇಗೆಲ್ಲಾ ಕಮಾಲ್ ಮಾಡಬಹುದು ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]