Tag: Oyo Room

  • ಪ್ರಿಯಕರ ಸ್ನೇಹಿತೆಯೊಟ್ಟಿಗೆ ಓಯೋ ರೂಂನಲ್ಲಿ ಇದ್ದಿದ್ದನ್ನ ಕಂಡು ಮನನೊಂದು ಮಹಿಳೆ ಆತ್ಮಹತ್ಯೆ

    ಪ್ರಿಯಕರ ಸ್ನೇಹಿತೆಯೊಟ್ಟಿಗೆ ಓಯೋ ರೂಂನಲ್ಲಿ ಇದ್ದಿದ್ದನ್ನ ಕಂಡು ಮನನೊಂದು ಮಹಿಳೆ ಆತ್ಮಹತ್ಯೆ

    ಬೆಂಗಳೂರು: ಪ್ರಿಯತಮ ಬೇರೊಂದು ಮಹಿಳೆಯೊಟ್ಟಿಗೆ ಲಾಡ್ಜ್‌ನಲ್ಲಿರುವುದನ್ನು ಕಂಡು ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಯಶೋಧ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆಗೂ ಮುನ್ನ ತನ್ನ ಪ್ರಿಯತಮ ಬೇರೊಂದು ಮಹಿಳೆಯೊಂದಿಗೆ ಇದ್ದ ಓಯೋ ರೂಂ ಮೇಲೆ ದಾಳಿ ಮಾಡಿ ಗಲಾಟೆ ಮಾಡಿದ್ದಳು. ಗಲಾಟೆಗೆ ಪ್ರಿಯತಮ ವಿಶ್ವನಾಥ್ ಸರಿಯಾಗಿ ರೆಸ್ಪಾನ್ಸ್ ಮಾಡಿದಿದ್ದಾಗ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: Belagavi | ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ – ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ

    ಆತ್ಮಹತ್ಯೆಗೆ ಶರಣಾದ ಯಶೋಧಗೆ ಗಂಡ ಇದ್ದು ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ, ಆಕೆ ಪಕ್ಕದ ಏರಿಯಾದ ಮನೆಯಲ್ಲಿ ಆಡಿಟರ್‌ ಆಗಿದ್ದ ವಿಶ್ವನಾಥ್‌ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಕಳೆದ 9 ವರ್ಷಗಳಿಂದ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು. ಆದರೆ, ಇತ್ತೀಚೆಗೆ ಯಶೋಧ ತನ್ನ ಸ್ನೇಹಿತೆಯೊಬ್ಬರನ್ನು ಪ್ರಿಯಕರನಿಗೆ ಪರಿಚಯಿಸಿದ್ದರು. ಪ್ರಿಯಕರ ಯಶೋಧ ಸ್ನೇಹಿತೆ ಜೊತೆ ಸಲುಗೆ ಬೆಳೆಸಿ ಪ್ರೇಮದ ಬಲೆಗೆ ಬೀಳಿಸಿದ್ದಾನೆ. ಅಲ್ಲದೇ, ಆಕೆಯನ್ನು ಓಯೋ ರೂಂಗೆ ಕರೆದುಕೊಂಡು ಹೋಗಿದ್ದಾನೆ.

    ಈ ವಿಚಾರ ಯಶೋಧ ಕಿವಿಗೆ ಬಿದ್ದಿದೆ. ಪ್ರಿಯಕರ ಸ್ನೇಹಿತೆಯೊಟ್ಟಿಗೆ ಇರುವ ಲಾಡ್ಜ್‌ಗೆ ಹೋಗಿ ಗಲಾಟೆ ಮಾಡಿದ್ದಾಳೆ. ಆಗ ಪ್ರಿಯಕರ ಸರಿಯಾಗಿ ಸ್ಪಂದಿಸದೇ ಇದ್ದಾಗ, ಮನನೊಂದು ಅಲ್ಲೇ ಪಕ್ಕದ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ಸಂಬಂಧ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು

  • ಜಾತ್ರೆಯಲ್ಲಿ ಲವ್‌… ಓಯೋ ರೂಮಲ್ಲಿ ಕೆಲಸ ಮುಗಿದ್ಮೇಲೆ ಆಂಟಿಯನ್ನ ಇರಿದು ಕೊಂದ ಟೆಕ್ಕಿ

    ಜಾತ್ರೆಯಲ್ಲಿ ಲವ್‌… ಓಯೋ ರೂಮಲ್ಲಿ ಕೆಲಸ ಮುಗಿದ್ಮೇಲೆ ಆಂಟಿಯನ್ನ ಇರಿದು ಕೊಂದ ಟೆಕ್ಕಿ

    – ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರ್ದು ಅಂತ ಸೈಕೋ ವರ್ತನೆ
    – ಅಂದಕ್ಕೂ ಐಶ್ವರ್ಯಕ್ಕೂ ಕಡಿಮೆಯಿಲ್ಲದ ಸುಂದ್ರಿ ಟೆಕ್ಕಿ ಪ್ರೀತಿ ಆಸೆಗೆ ಬಿದ್ದು ಹೆಣವಾದ್ಲು

    ಬೆಂಗಳೂರು: ಸೌಂದರ್ಯದ ಖನಿ ಅವಳು… ರೂಪ ಲಾವಣ್ಯದಲ್ಲಾಗಲಿ.. ಅಂದ – ಐಶ್ವರ್ಯದಲ್ಲಾಗಲಿ ಯಾರಿಗೇನು ಕಡಿಮೆ ಇರಲಿಲ್ಲ. ಗಂಡ ಇಬ್ಬರು ಹೆಣ್ಣುಮಕ್ಕಳಿದ್ದ ಸುಂದರ ಸಂಸಾರದಲ್ಲಿ ಯುವಕನೊಂದಿಗೆ ಪ್ರೇಮ, ದೈಹಿಕ ಸಂಪರ್ಕ ಬೆಳೆಸಿ ಕೊನೆಗೆ ಪ್ರಿಯಕರನಿಂದಲೇ (Lover) ಮಂಚದ ಮೇಲೆ ಹೆಣವಾದಳು ಸುಂದ್ರಿ.. ಏನಿದು ಥ್ರಿಲ್ಲಿಂಗ್‌ ಸ್ಟೋರಿ ಅಂತೀರಾ ಮುಂದೆ ಓದಿ…

    ಹೌದು… ಬೆಂಗಳೂರಿನ (Bengaluru) ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿ ಓಯೋ ರೂಮಿನಲ್ಲಿ ಹತ್ಯೆಗೀಡಾದ ಗೃಹಿಣಿ ಹರಿಣಿ ವಯಸ್ಸು 35 ಆದ್ರೂ ನೋಡೋಕೆ ರೂಪವತಿ. ಮನೆ ಕಡೆಯೂ ಸಾಕಷ್ಟು ಸ್ಥಿತಿವಂತರಾಗಿದ್ರು. ಕೋಟಿ ಕೋಟಿ ಆಸ್ತಿ ಇರೋ ಈ ಹರಿಣಿಗೆ ಊರ ಜಾತ್ರೆಯಲ್ಲಿ 25 ವರ್ಷದ ಟೆಕ್ಕಿ ಯಶಸ್ ಪರಿಚಯವಾಗಿದ್ದ. ಇದೇ ವೇಳೆ ಇಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಜಾತ್ರೆಯಲ್ಲೇ ನಂಬರ್‌ ಎಕ್ಸ್‌ಚೇಂಜ್‌ ಮಾಡಿಕೊಂಡು ಚಾಟಿಂಗ್‌, ಡೇಟಿಂಗ್‌ ಶುರು ಮಾಡಿದ್ರು. ಇವರಿಬ್ಬರ ಪ್ರೀತಿ (Love) ಮಂಚದವರೆಗೂ ತಲುಪಿತ್ತು. ಹೆಮ್ಮಿಗೆಪುರದ ಹರಿಣಿಯ ಗಂಡ ಸ್ಥಳೀಯ ಜಮಿನ್ದಾರ. ಹಣಕಾಸಿಗೆ ಕೊರತೆ ಇರ್ಲಿಲ್ಲ. ಇಬ್ಬರು ಹೆಣ್ಣು ಮಕ್ಕಳನ್ನ ಓದಿಸಿಕೊಂಡು ಹೆಂಡತಿಯನ್ನ ಚೆನ್ನಾಗಿ ನೋಡಿಕೊಂಡಿದ್ದನಂತೆ. ಇತ್ತಿಚೇಗೆ ದೊಡ್ಡ ಮನೆ ಕಟ್ಟಲು ಪಾಯ ಪೂಜೆ ಸಹ ಮಾಡಿದ್ರಂತೆ.  ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

    ಸಿಕ್ಕ ಕೂಡಲೇ ಮುಗಿಸಿಬಿಡಬೇಕೆಂದು ಸ್ಕೆಚ್‌
    ಹೀಗಿರುವಾಗಲೇ ಪತ್ನಿ ಹರಿಣಿ ಹಾಗೂ ಯಶಸ್ ನಡುವಿನ ಅನೈತಿಕ ಸಂಬಂಧ ಗಂಡನಿಗೆ ಗೊತ್ತಾಗಿದೆ. ಗಂಡ ಪತ್ನಿಗೆ ಬುದ್ಧಿ ಹೇಳಿ ಹರಿಣಿಯ ಫೋನ್‌ ಕೂಡ ಕಿತ್ಕೊಂಡು ಮನೆಯಲ್ಲೇ ಕೂಡಿ ಹಾಕಿದ್ದರಂತೆ ಪತಿ ದಾಸೇಗೌಡ. ಇದಾದ ನಂತರ ಪತ್ನಿ ಸರಿ ಹೋಗ್ತಾಳೆ ಅಂತ ಹೊರಗಡೆ ಬಿಟ್ಟಿದ್ದಾನೆ. ಈ ವೇಳೆ ಹರಿಣಿ ತನ್ನ ಬಾಯ್‌ಫ್ರೆಂಡ್‌ ಯಶಸ್‌ನ ಮತ್ತೆ ಸಂಪರ್ಕಿಸಿದ್ದಾಳೆ. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತಾಗಿದ್ದ ಯಶಸ್, ಹರಿಣಿ ಸಿಕ್ಕರೇ ಸಾಯಿಸಲು ನಿರ್ಧಾರ ಮಾಡಿದ್ನಂತೆ. ಕೊಲೆ ಮಾಡೋ ಉದ್ದೇಶದಿಂದ ಚಾಕು ಕೂಡ ಖರೀದಿ ಮಾಡಿದ್ನಂತೆ.  ಇದನ್ನೂ ಓದಿ: Bengaluru | ಅನೈತಿಕ ಸಂಬಂಧ ಆರೋಪ – ಮಹಿಳೆ ದೇಹ ಬೆತ್ತಲೆಗೊಳಿಸಿ ಹತ್ಯೆಗೈದ ಪಾಗಲ್‌ ಪ್ರೇಮಿ

    ಎಲ್ಲಾ ಮುಗಿದ್ಮೇಲೆ ಸೈಕೋ ವರ್ತನೆ ತಾಳಿದ್ದ ಟೆಕ್ಕಿ
    ಇದೇ ಸಮಯಕ್ಕೆ ಹರಿಣಿ ಯಶಸ್‌ಗೆ ಕಾಲ್ ಮಾಡಿದ್ದು ಇಬ್ಬರು ಓಯೋ ರೂಮ್‌ನಲ್ಲಿ ಸೇರೋದಾಗಿ ಮಾತು ಕತೆ ನಡೆಸಿದ್ದಾರೆ. ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯ ಓಯೊ ರೂಂ ನಲ್ಲಿ (Oyo Room) ಕಳೆದ ಶುಕ್ರವಾರ ಇಬ್ಬರೂ ಸೇರಿದ್ದಾರೆ. ಲೈಗಿಂಕ ಸಂಪರ್ಕ ಮುಗಿಸಿದ ಬಳಿಕ ಯಶಸ್‌ ಸೈಕೋ ವರ್ತನೆ ತಾಳಿದ್ದಾನೆ. ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಅಂತ ಮೊದಲೇ ಪ್ಲಾನ್ ಮಾಡಿದಂತೆ ಚಾಕುನಿಂದ ಬರ್ಬರವಾಗಿ ಇರಿದು ಕೊಂದೇಬಿಟ್ಟಿದ್ದಾನೆ. ನಂತರ ಟೆಕ್ಕಿ ತಾನೂ ಕೂಡ ಎದೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ. ಆದ್ರೆ ನೋವಾಯ್ತು ಅಂತ ಚಾಕು ಅಲ್ಲೆ ಬಿಟ್ಟು ನೇರವಾಗಿ ಕೆಂಗೇರಿ ಠಾಣೆಗೆ ಹೋಗಿ ಕೊಲೆ ವಿಚಾರ ಹೇಳಿದ್ದಾನೆ.

    ಕೊನೆಗೆ ಕೆಂಗೇರಿ ಪೊಲೀಸ್ರು ಕೊಲೆ ನಡೆದ ಸ್ಥಳ ಸುಬ್ರಹ್ಮಣ್ಯಪುರ ಠಾಣಾವ್ಯಾಪ್ತಿಗೆ ಬರೋದಾಗಿ ಟೆಕ್ಕಿ ಯಶಸ್‌ನ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

  • Bengaluru | ಅನೈತಿಕ ಸಂಬಂಧ ಆರೋಪ – ಮಹಿಳೆ ದೇಹ ಬೆತ್ತಲೆಗೊಳಿಸಿ ಹತ್ಯೆಗೈದ ಪಾಗಲ್‌ ಪ್ರೇಮಿ

    Bengaluru | ಅನೈತಿಕ ಸಂಬಂಧ ಆರೋಪ – ಮಹಿಳೆ ದೇಹ ಬೆತ್ತಲೆಗೊಳಿಸಿ ಹತ್ಯೆಗೈದ ಪಾಗಲ್‌ ಪ್ರೇಮಿ

    – ಆಂಟಿ ಸಿಗದೇ ತಲೆ ಕೆಡಿಸಿಕೊಂಡು ಹುಚ್ಚನಂತಾಗಿದ್ದ ಪ್ರೇಮಿ
    – ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌

    ಬೆಂಗಳೂರು: ಅನೈತಿಕ ಸಂಬಂಧಕ್ಕೆ ಬಿದ್ದು ವಿವಾಹಿತ ಮಹಿಳೆಯೊಬ್ಬಳು (Married Women) ಭೀಕರ ಹತ್ಯೆಗೀಡಾಗಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಆರೋಪಿ ಸಹ ಬಂಧನವಾಗಿದ್ದು, ಪೊಲೀಸ್‌ ತನಿಖೆ ವೇಳೆ ಆರೋಪಿಯ ವಿಕೃತಿ, ಕ್ರೌರ್ಯ ಬಯಲಾಗಿದೆ.

    ಹರಿಣಿ (36) ಕೊಲೆಯಾದ ಪ್ರಿಯತಮೆ, ಟೆಕ್ಕಿ ಯಶಸ್ (25) ಕೊಲೆ ಆರೋಪಿ. ಬಹಳ ದಿನಗಳಿಂದ ಪ್ರಿಯತಮೆಯನ್ನ (Lovers) ಮೀಟ್‌ ಮಾಡದೇ ತಲೆ ಕೆಡಿಸಿಕೊಂಡಿದ್ದ ಟೆಕ್ಕಿ ಆಕೆ ಸಿಗುತ್ತಿದ್ದಂತೆ ಮುಗಿಸಿಬಿಡಬೇಕೆಂದು ಪ್ಲ್ಯಾನ್‌ ಮಾಡಿಕೊಂಡಿದ್ದ. ಅದರಂತೆ ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿ ಓಯೋ ರೂಮಿಗೆ (Oyo Room) ಕರೆದೊಯ್ದು, ಹರಿಣಿಗೆ ಬರೋಬ್ಬರಿ 17 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆಕೆಯ ದೇಹವನ್ನ ಬೆತ್ತಲೆಗೊಳಿಸಿ ಹರಿಣಿಯ ಕತ್ತು, ಎದೆ ಭಾಗ, ಹೊಟ್ಟೆ ಸೇರಿ ದೇಹದ ಹಲವು ಭಾಗಗಳಿಗೆ ಇರಿದಿದ್ದಾನೆ.

    ತಾನೂ ಆತ್ಮಹತ್ಯೆಗೆ ಯತ್ನ
    ಹರಿಣಿಯನ್ನ ಬೆತ್ತಲೆಗೊಳಿಸಿ ಭೀಕರವಾಗಿ ಹತ್ಯೆಗೈದಿದ್ದ ಆರೋಪಿ ಯಶಸ್ ಕೊಲೆ ಮಾಡಿದ ಬಳಿಕ ಮನೆಗೆ ತೆರಳಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ತಾನೇ ಕೆಂಗೇರಿ ಪೊಲೀಸ್‌ (Kengeri Police) ಠಾಣೆಗೆ ಹೋಗಿ ಶರಣಾಗಿದ್ದಾನೆ. ಆದ್ರೆ ಕೆಂಗೇರಿ ಪೊಲೀಸರು ನಮ್ಮ ಠಾಣೆ ವ್ಯಾಪ್ತಿಗೆ ಬರಲ್ಲ ಅಂತ ಹೇಳಿ, ಆರೋಪಿಯನ್ನ ಕರೆತಂದು ಸುಬ್ರಮಣ್ಯಪುರ ಪೊಲೀಸರಿಗೆ (Subramanyapura Police) ಒಪ್ಪಿಸಿದ್ದಾರೆ.

    ಆಂಟಿ-ಯುವಕನ ಲವ್‌ಸ್ಟೋರಿ – ಕೊಲೆಯಲ್ಲಿ ಅಂತ್ಯ
    ಕೆಂಗೇರಿ ಮೂಲದ ಹರಿಣಿ, ದಾಸೇಗೌಡ ಎಂಬವರ ಪತ್ನಿ. ಕೆಲ ತಿಂಗಳ ಹಿಂದೆ ಏರಿಯಾದಲ್ಲಿ ಜಾತ್ರೆ ಇತ್ತು, ಗೃಹಿಣಿ ಹರಿಣಿ ಇದ್ದ ಏರಿಯಾಗೆ ಜಾತ್ರೆಗೆ ಹೋಗಿದ್ದ ಟೆಕ್ಕಿ ಯಶಸ್, ಅಲ್ಲದೇ ಆಕೆಯನ್ನ ಪರಿಚಯ ಮಾಡಿಕೊಂಡಿದ್ದ. ಕೊನೆಗೆ ಇಬ್ಬರು ಫೋನ್‌ ನಂಬರ್‌ ಕೂಡ ಪರಸ್ಪರ ಪಡೆದುಕೊಂಡಿದ್ರು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಚಾಟಿಂಗ್‌, ಡೇಟಿಂಗ್‌ ಶುರು ಮಾಡಿಕೊಂಡಿದ್ರು. ಹೀಗಾಗಿ ಇಬ್ಬರ ನಡುವೆ ಅನೈತಿಕ ಸಂಬಂಧ ಇತ್ತಂತೆ.

    ಕ್ರಮೇಣ ಹರಿಣಿ ಗಂಡ ದಾಸೇಗೌಡನಿಗೆ ಪತ್ನಿಯ ಅನೈತಿಕ ಸಂಬಂಧದ ಗೊತ್ತಾಗಿತ್ತು. ನಂತರ ಹೆಂಡ್ತಿಯ ಫೋನ್ ಕಿತ್ಕೊಂಡು ಮನೆಯಲ್ಲೇ ಕೂಡಿ ಹಾಕಿದ್ದ. ಕೆಲ ತಿಂಗಳ ಬಳಿಕ ಮತ್ತೆ ಹೊರ ಬಂದಿದ್ದ ಹರಿಣಿ, ತನ್ನ ಬಾಯ್ ಫ್ರೆಂಡ್ ಯಶಸ್‌ನ ಸಂಪರ್ಕಿಸಿದ್ಲು. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದ ಯಶಸ್, ಸಿಕ್ಕ ಕೂಡಲೇ ಮುಗಿಸಿಬಿಡಬೇಕೆಂದು ನಿರ್ಧಾರ ಮಾಡಿಕೊಂಡಿದ್ದ. ಹೀಗಾಗಿ ಚಾಕು ಕೂಡ ಖರೀದಿಸಿ ಇಟ್ಟಿದ್ದ. ಮತ್ತೆ ಹರಿಣಿಯನ್ನು ಮೀಟ್ ಮಾಡಿ ಮಾತುಕತೆ ಮಾಡಿಕೊಂಡು ಓಯೋ ರೂಮ್‌ಗೆ ಕರೆದೊಯ್ದ ಯಶಸ್‌, ಅವಳು ಬೇರೆ ಯಾರಿಗೂ ಸಿಗಬಾರ್ದು ಅಂತ ಇರಿದು ಕೊಂಡಿದ್ದಾನೆ.

    ಯಶಸ್‌ ಶುಕ್ರವಾರ ಕೊಲೆ ಮಾಡಿ ಪರಾರಿಯಾಗಿದ್ದ. ನಂತರ ಸುಬ್ರಹ್ಮಣ್ಯಪುರ ಇನ್ಸ್‌ಪೆಕ್ಟರ್‌ ರಾಜು ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಬಳಿಕ ಎಫ್‌ಎಸ್‌ಎಲ್‌ ತಂಡ ಕರೆಸಿ ಎಲ್ಲಾ ಸಾಕ್ಷ್ಯ ಸಂಗ್ರಹಿಸಿದ ಬಳಿಕ ಆರೋಪಿಯನ್ನ ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ನನಗೂ ಆಕೆಗೂ ಅನೈತಿಕ ಸಂಬಂಧ ಇತ್ತು. ನನ್ನನ್ನ ಅವಾಯ್ಡ್‌ ಮಾಡ್ತಾ ಇದ್ಲು, ಹೀಗಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇಂದು ಮಧ್ಯಾಹ್ನ 3 ಗಂಟೆಗೆ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ .

  • ಓಯೋ ರೂಮ್‍ಗೆ ಬರೋ ಜೋಡಿಗಳ ಖಾಸಗಿ ವೀಡಿಯೋ ರೆಕಾರ್ಡ್ – ನಾಲ್ವರು ಅರೆಸ್ಟ್

    ಓಯೋ ರೂಮ್‍ಗೆ ಬರೋ ಜೋಡಿಗಳ ಖಾಸಗಿ ವೀಡಿಯೋ ರೆಕಾರ್ಡ್ – ನಾಲ್ವರು ಅರೆಸ್ಟ್

    ಲಕ್ನೋ: ಓಯೋ (OYO) ಹೋಟೆಲ್ ರೂಮ್‍ಗಳಲ್ಲಿ ಸಿಕ್ರೇಟ್ ಕ್ಯಾಮೆರಾ ಅಳವಡಿಸುವ ಮೂಲಕ ರೂಮ್‍ಗೆ ಬರುವ ಜೋಡಿಗಳ ಖಾಸಗಿ ವೀಡಿಯೋವನ್ನು ರೆಕಾರ್ಡ್ ಮಾಡಿದ ಆರೋಪದಡಿ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ನೋಯ್ಡಾದಲ್ಲಿ  (Noida)ನಡೆದಿದೆ.

    ಓಯೋ ರೂಮ್‍ಗೆ ಬರುವ ಜೋಡಿಗಳ ಖಾಸಗಿ ವೀಡಿಯೋವನ್ನು ರೆಕಾರ್ಡ್ ಮಾಡಿ, ಕೇಳಿದಷ್ಟು ಹಣ ನೀಡದಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಪೋಸ್ಟ್ ಮಾಡುವುದಾಗಿ ಖದೀಮರ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಆದರೆ ಈ ದಂಧೆಯಲ್ಲಿ ಹೋಟೆಲ್ ಸಿಬ್ಬಂದಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ವೇದಿಕೆ ಮೇಲೆಯೇ ನೃತ್ಯಗಾರ್ತಿಯೊಂದಿಗೆ ರೊಮ್ಯಾನ್ಸ್ – ಪುರಸಭೆ ಕಾರ್ಯಕರ್ತ ಅಮಾನತು

    ಕಿಡಿಗೇಡಿಗಳ ಗ್ಯಾಂಗ್ ಮೊದಲಿಗೆ ಓಯೋ ರೂಮ್ ಅನ್ನು ತಮಗೆಂದು ಬುಕ್ ಮಾಡಿಕೊಂಡು ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಕೆಲವು ದಿನಗಳ ನಂತರ ಅಳವಡಿಸಿದ್ದ ಕ್ಯಾಮೆರಾಗಳನ್ನು ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸುತ್ತಾರೆ. ನಂತರ ಜೋಡಿಗಳನ್ನು ಸಂಪರ್ಕಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಇದನ್ನೂ ಓದಿ: ಸ್ಟುಡಿಯೋ ಕ್ಲೀನ್ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಫೋಟೋಗ್ರಾಫರ್‌ಗಳಿಬ್ಬರ ದುರ್ಮರಣ

    ಆರೋಪಿಗಳನ್ನು ವಿಷ್ಣು ಸಿಂಗ್, ಅಬ್ದುಲ್ ವಹಾವ್, ಪಂಕಜ್ ಕುಮಾರ್ ಮತ್ತು ಅನುರಾಗ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ನೋಯ್ಡಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ವಿಭಿನ್ನ ಗ್ಯಾಂಗ್‍ನ ಸದಸ್ಯರಾಗಿದ್ದಾರೆ. ಈ ಗ್ಯಾಂಗ್ ಅನಧಿಕೃತ ಕಾಲ್ ಸೆಂಟರ್‌ಗಳು, ಅಕ್ರಮ ಚಟುವಟಿಕೆಗಳಿಗೆ ನಕಲಿ ಸಿಮ್ ಕಾರ್ಡ್ ಒದಗಿಸುವುದು ಸೇರಿದಂತೆ ಹಲವು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೋಡಿಗಳ ಖಾಸಗಿ ವೀಡಿಯೋವನ್ನು ಅವರ ಫೋನ್‍ಗೆ ಕಳುಹಿಸಿ ವಿಷ್ಣು ಮತ್ತು ಅಬ್ದುಲ್ ವಹಾವ್ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು. ಆದರೆ ಹಣ ನೀಡಲು ನಿರಾಕರಿಸದರೆ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದರು. ಅನುರಾಗ್ ಕುಮಾರ್ ಸಿಂಗ್ ಹಾಗೂ ಪಂಕಜ್ ಹಣ ಸುಲಿಗೆ ಮಾಡಲು ನೋಂದಾಯಿತ ಸಿಮ್ ಮತ್ತು ಇತರ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಲಾದ ಖಾತೆಯನ್ನು ಒದಗಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಸಾದ್ ಮಿಯಾನ್ ಖಾನ್ ಹೇಳಿದ್ದಾರೆ.

    ಇದೀಗ ಆರೋಪಿಗಳಿಂದ ಪೊಲೀಸರು 11 ಲ್ಯಾಪ್‍ಟಾಪ್‍ಗಳು, 7 ಸಿಪಿಯುಗಳು, 21 ಮೊಬೈಲ್‍ಗಳು ಮತ್ತು ವಿವಿಧ ಬ್ಯಾಂಕ್‍ಗಳ 22 ಎಟಿಎಂ ಕಾರ್ಡ್‍ಗಳು, ಒಂದು ಪ್ಯಾನ್ ಕಾರ್ಡ್, ಒಂದು ಆಧಾರ್ ಕಾರ್ಡ್, 14 ನಕಲಿ ಐ ಫಾರ್ಮಾ ಮತ್ತು ಐ ಕಾರ್ಡ್, ಸಿಮ್ ಕಾರ್ಡ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಓಯೋ ರೂಂಗೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ – ಆರೋಪಿಗಳ ಬಂಧನ

    ಓಯೋ ರೂಂಗೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ – ಆರೋಪಿಗಳ ಬಂಧನ

    ಹೈದರಾಬಾದ್: ಓಯೋ ರೋಮಿಗೆ ಕರೆದೊಯ್ದು 17 ವರ್ಷದ ಬಾಲಕಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರವೆಸಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಸೆಪ್ಟೆಂಬರ್ 13ರ ಮಂಗಳವಾರದಂದು ಈ ಘಟನೆ ನಡೆದಿದ್ದು, ಸಂತ್ರಸ್ತೆ ಮತ್ತು ಆರೋಪಿಗಳು ಒಂದೇ ಏರಿಯಾದವರಾಗಿದ್ದು, ಪರಸ್ಪರ ಪರಿಚಯ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 5.47 ಕೋಟಿ ಮೌಲ್ಯದ 2.43 ಲಕ್ಷ ಎಣ್ಣೆ ಬಾಟ್ಲಿಗಳ ಮೇಲೆ ಹರಿಯಿತು ರೋಡ್ ರೋಲರ್!

    ಆರೋಪಿಗಳನ್ನು 18 ಮತ್ತು 26 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದ್ದು, ಸಂತ್ರಸ್ತೆಯನ್ನು ಓಯೋ ರೂಮಿಗೆ ಕರೆದೊಯ್ದು, ಆಕೆಗೆ ಮಾದಕ ವಸ್ತು ನೀಡಿ ಎರಡು ದಿನಗಳ ಕಾಲ ಅತ್ಯಾಚಾರವೆಸಗಿದ್ದಾರೆ. ಇದೀಗ ಈ ಸಂಬಂಧ ಸಂತ್ರಸ್ತೆ ಪೋಷಕರು ದೂರು ದಾಖಲಿಸಿದ್ದು, ದಬೀರ್‍ಪುರ ಪೊಲೀಸರು ಪ್ರಕರಣದ ಕುರಿತಂತೆ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಸೀಟ್ ಬೆಲ್ಟ್ ಕಡ್ಡಾಯ – ಧರಿಸದಿದ್ದರೆ 1,000ರೂ. ದಂಡ

    ಈ ಬಗ್ಗೆ ಪ್ರತಿಕ್ರಿಯಿಸಿದ ದಬೀರಪುರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಕೋಟೇಶ್ವರ ರಾವ್ ಅವರು, ಪೋಷಕರು ನೀಡಿದ ದೂರು ಮತ್ತು ಬಾಲಕಿಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]