Tag: Oxygen Container

  • ಸದ್ದಿಲ್ಲದೆ ಸರ್ಕಾರಕ್ಕೆ ಸಾಥ್ ನೀಡುತ್ತಿರುವ ಮಾಜಿ ಸಚಿವ ನಾಗರಾಜ್ ಶೆಟ್ಟಿ

    ಸದ್ದಿಲ್ಲದೆ ಸರ್ಕಾರಕ್ಕೆ ಸಾಥ್ ನೀಡುತ್ತಿರುವ ಮಾಜಿ ಸಚಿವ ನಾಗರಾಜ್ ಶೆಟ್ಟಿ

    – ಗಣೇಶ್ ಶಿಪ್ಪಿಂಗ್ ಮೂಲಕ ಉಚಿತವಾಗಿ ಆಕ್ಸಿಜನ್ ಕಂಟೈನರ್ ಸಾಗಾಟ

    ಮಂಗಳೂರು: ಕಿಲ್ಲರ್ ಕೊರೊನಾ ಹಾವಳಿಯಿಂದ ಇಡೀ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿದೆ. ಎಲ್ಲೆಡೆ ಅಸಹಾಯಕತೆ ತಾಂಡವವಾಡುತ್ತಿದೆ. ಈ ನಡುವೆ ಸರ್ಕಾರಗಳು ಜನರ ಪ್ರಾಣರಕ್ಷಣೆಗೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅನೇಕ ಉದ್ಯಮಿಗಳು, ಜನಪ್ರತಿನಿಧಿಗಳು ಸರ್ಕಾರಗಳ ಪ್ರಯತ್ನಕ್ಕೆ ಸದ್ದಿಲ್ಲದೆ ವ್ಯಾಪಕವಾಗಿ ನೆರವಾಗುವ ಕೆಲಸ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಪೈಕಿ ಒಬ್ಬರು ದ.ಕ. ಜಿಲ್ಲೆಯ ಮಾಜಿ ಸಚಿವ ಬಿ.ನಾಗರಾಜ್ ಶೆಟ್ಟಿ.

    ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶೇಷ ಪ್ರಯತ್ನದಿಂದ ವಿದೇಶದಲ್ಲಿರುವ ಭಾರತೀಯರು ಮತ್ತು ವಿದೇಶಿ ಸರ್ಕಾರಗಳು ವಿಶೇಷವಾಗಿ ಗಲ್ಫ್ ದೇಶಗಳು ದಾನದ ರೂಪದಲ್ಲಿ ಟ್ಯಾಂಕರ್ ಮತ್ತು ಸಿಲಿಂಡರ್ ಗಳಲ್ಲಿ ಆಕ್ಸಿಜನ್ ಪೂರೈಕೆ ಮಾಡುತ್ತಾ ಬರುತ್ತಿದ್ದಾರೆ.

    ಕಳೆದ ಒಂದು ತಿಂಗಳಲ್ಲಿ ಸುಮಾರು 5 ಇಂಡಿಯನ್ ನೇವಿ ಶಿಪ್ ಗಳಲ್ಲಿ ನಿರಂತರವಾಗಿ ಆಮ್ಲಜನಕ ಕಂಟೈನರ್ಸ್ ಬರುತ್ತಿವೆ. ಇವುಗಳನ್ನು ಮಂಗಳೂರು ಮತ್ತು ನವಮಂಗಳೂರು ಬಂದರಿನ ಸಹಕಾರದೊಂದಿಗೆ ಇಂಡಿಯನ್ ನೇವಿಗೆ ಸಂಬಂಧಪಟ್ಟ ಹಡಗುಗಳಿಂದ ಧರ್ಮಾರ್ಥವಾಗಿ ಅನ್ ಲೋಡ್ ಮಾಡಿ ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸುವ ಜವಾಬ್ದಾರಿಯನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐ.ಒ.ಸಿ) ಪರವಾಗಿ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸಂಬಂಧಪಟ್ಟ ರಾಜ್ಯ ಮತ್ತು ಜಿಲ್ಲೆಗಳಿಗೆ ಅಂದರೆ ಎಲ್ಲೆಲ್ಲಿ ಆಮ್ಲಜನಕದ ಕೊರತೆ ಇದೆಯೋ ಅಲ್ಲಲ್ಲಿಗೆ ಕಳುಹಿಸುವ ಜವಾಬ್ದಾರಿಯನ್ನು ಮಾಜಿ ಸಚಿವ ನಾಗರಾಜ ಶೆಟ್ಟಿಯವರು ಮಾಲಕತ್ವದ ಶ್ರೀ ಗಣೇಶ್ ಶಿಪ್ಪಿಂಗ್ ಏಜೆನ್ಸಿಯು ವಹಿಸಿಕೊಂಡಿದೆ. ಈ ಮೂಲಕ ಧರ್ಮಾರ್ಥವಾಗಿ ಕಂಟೈನರ್ ಗಳನ್ನು ಸಾಗಾಟ ಮಾಡಲಾಗುತ್ತಿದೆ.

    ಈ ಮೂಲಕ ಒಬ್ಬ ಮಾಜಿ ಜನಪ್ರತಿನಿಧಿಯಾಗಿ ಸೇವಾರ್ಥವಾಗಿ ಆಕ್ಸಿಜನ್ ತಲುಪಿಸಿ ಅನೇಕ ಜನರ ಪ್ರಾಣವನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ತಿಂಗಳಿಂದ ಈ ಎಲ್ಲಾ ಕೆಲಸವನ್ನು ಯಾವುದೇ ಪ್ರಚಾರ ಬಯಸದೆ ಮಾಡುವ ಮೂಲಕ ಬಿ. ನಾಗರಾಜ್ ಶೆಟ್ಟಿ ಯವರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

  • ಜಿಲ್ಲಾಡಳಿತದ ನಿರ್ಲಕ್ಷ್ಯ – ವಾರದಿಂದ ಅನ್‍ಲೋಡ್ ಆಗದೇ ಊರೂರು ಸುತ್ತಿರುವ ಆಕ್ಸಿಜನ್ ಟ್ಯಾಂಕರ್

    ಜಿಲ್ಲಾಡಳಿತದ ನಿರ್ಲಕ್ಷ್ಯ – ವಾರದಿಂದ ಅನ್‍ಲೋಡ್ ಆಗದೇ ಊರೂರು ಸುತ್ತಿರುವ ಆಕ್ಸಿಜನ್ ಟ್ಯಾಂಕರ್

    ಹುಬ್ಬಳ್ಳಿ: ಕೊರೊನಾ ಮಹಾಮಾರಿಗೆ ದೇಶವೇ ತಲ್ಲಣಗೊಂಡಿದೆ. ಆಕ್ಸಿಜನ್ ಬೆಡ್ ಸಿಗದೇ ರೋಗಿಗಳು ಪ್ರಾಣ ಬಿಡುತ್ತಿದ್ದಾರೆ. ಆದ್ರೆ ಧಾರವಾಡ ಜಿಲ್ಲಾಡಳಿತದ ಹೊಣೆಗೇಡಿತನದಿಂದ ಆಕ್ಸಿಜನ್ ಸರಬರಾಜು ಮಾಡಲು ಬಂದ ಕಂಟೇನರ್ ವಾರದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಊರೂರು ಸುತ್ತುವಂತಾಗಿದೆ.

    ಹೌದು. ಒಂದು ಕಡೆ ಆಕ್ಸಿಜನ್ ಇಲ್ಲದೆ ರೋಗಿಗಳು ಸತ್ತರೆ, ಇನ್ನೊಂದು ಕಡೆ ಬಂದ ಆಕ್ಸಿಜನ್ ಉಪಯೋಗ ಮಾಡಕೊಳ್ಳದೇ ಅಧಿಕಾರಿಗಳು ನಿಷ್ಕಾಳಜಿ ತೋರಿಸಿದ್ದಾರೆ. ಒಂದು ವಾರದೆ ಹಿಂದೆ ಮಧ್ಯಪ್ರದೇಶದಿಂದ ಹುಬ್ಬಳ್ಳಿಗೆ ಆಕ್ಸಿಜನ್ ತುಂಬಿದ ಕಂಟೇನರ್ ಬಂದಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ನಿಂತರು ಆಕ್ಸಿಜನ್ ಅನ್ ಲೋಡ್ ಮಾಡಲೇ ಇಲ್ಲ. ಈ ವಾಹನ ಇಲ್ಲಿ ಏತಕ್ಕೆ ಬಂದಿದೆ ಎಂದು ಯಾರು ಕೇಳಿಲ್ಲ. ಮೂರು ದಿನಗಳ ನಂತರ ಬೆಳಗಾವಿಗೆ ಆಕ್ಸಿಜನ್ ಕಂಟೇನರ್ ಕಳುಹಿಸಿಕೊಡಲಾಗಿತ್ತು. ಆದ್ರೆ ಅಲ್ಲಿಯೂ ಎರಡೂ ದಿನ ನಿಂತು ನಿಂತು ಟ್ಯಾಂಕರ್ ಮರಳಿ ಧಾರವಾಡದ ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಎರಡೂ ದಿನ ನಿಂತ ವಾಹನ ನಿಂತಿದೆ. ಅಲ್ಲಿಯೂ ಆಕ್ಸಿಜನ್ ಡಂಪ್ ಮಾಡಿಲ್ಲ. ಆಕ್ಸಿಜನ್ ಖಾಲಿ ಆಗದ ಕಾರಣ ಈಗ ಧಾರವಾಡದ ನವಲೂರ ಗ್ರಾಮಕ್ಕೆ ಬಂದು ವಾಹನ ನಿಂತಿದೆ.

    ಅಧಿಕಾರಿಗಳ ಬೇಜವಾಬ್ದಾರಿತನದಿಂದ ಒಂದು ವಾರದಿಂದ 40 ಟನ್ ಸಾಮರ್ಥ್ಯದ ಆಕ್ಸಿಜನ್ ಖಾಲಿ ಮಾಡಲು ಎರಡು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಇದರ ಮಧ್ಯೆ ಕಂಟೇನರ್ ಮಾತ್ರ ಅತ್ತಿಂದಿತ್ತ ಸುತ್ತಾಡುತ್ತಿದೆ. ಒಂದು ಮಾಹಿತಿ ಪ್ರಕಾರ ಆಕ್ಸಿಜನ್ ವಾಹನ ಹುಬ್ಬಳ್ಳಿ ಕಿಮ್ಸ್ ಹಾಗೂ ಬೆಳಗಾವಿ ಬಿಮ್ಸ್ ಆಸ್ಪತ್ರೆ ಒಳಗೆ ಹೋಗಲು ಸ್ಥಳಾವಕಾಶದ ಕೊರತೆ ಕಾರಣ ಎನ್ನಲಾಗಿದೆ. ಇದಕ್ಕೆ ಪರ್ಯಾಯವಾಗಿ ಬೇಲೂರು ಕೈಗಾರಿಕಾ ಪ್ರದೇಶದಲ್ಲಿಯೂ ಆಕ್ಸಿಜನ್ ತೆರವುಗೊಳಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದ್ದು, ಇದು ಎರಡು ಜಿಲ್ಲಾಡಳಿತಗಳ ಅಸಮರ್ಥ ಕಾರ್ಯವೈಖರಿಗೆ ಹಿಡಿದ ಕೈನ್ನಡಿಯಾಗಿದೆ.