Tag: ox

  • ಯುಜಿಡಿ ಕಾಮಗಾರಿ ಗುಂಡಿಗೆ ಬಿದ್ದು ನರಳಿ ನರಳಿ ಪ್ರಾಣ ಬಿಟ್ಟ ಬಸವ

    ಯುಜಿಡಿ ಕಾಮಗಾರಿ ಗುಂಡಿಗೆ ಬಿದ್ದು ನರಳಿ ನರಳಿ ಪ್ರಾಣ ಬಿಟ್ಟ ಬಸವ

    ಮೈಸೂರು: ಯುಜಿಡಿ ಕಾಮಗಾರಿಯ ಗುಂಡಿಗೆ ಬಿದ್ದು ಬೀದಿ ಎತ್ತು ನರಳಿ ನರಳಿ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಟಿ.ನರಸೀಪುರ ವಿನಾಯಕ ಕಾಲೋನಿಯಲ್ಲಿ ನಡೆದಿದೆ.

    ಯುಜಿಡಿ ಕಾಮಗಾರಿ ನಡೆಸಲು ಪುರಸಭೆಯಿಂದ ಮಧ್ಯ ರಸ್ತೆಯಲ್ಲಿ ಗುಂಡಿ ತೆರೆಯಲಾಗಿತ್ತು. ಮಧ್ಯ ರಸ್ತೆಯಲ್ಲಿದ್ದ ಗುಂಡಿಗೆ ಅರಿವಿಲ್ಲದೇ ಬೀದಿ ಬಸವ ಬಿದ್ದಿದ್ದಾನೆ. ಗುಂಡಿಯಿಂದ ಮೇಲಕ್ಕೆ ಬರಲಾರದೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ.

    ಕಾಮಗಾರಿ ನಡೆಸುತ್ತಿರುವ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಸವ ಪ್ರಾಣ ಕಳೆದುಕೊಂಡಿದ್ದಾನೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಪುರಸಭೆ ಯಾವುದೇ ತಾತ್ಕಲಿಕ ತಡೆಗೋಡೆಯನ್ನು ನಿರ್ಮಿಸಿರಲಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೆ ಸ್ಥಳೀಯರೇ ಸಾವನ್ನಪ್ಪಿದ ಬಸವನನ್ನು ಹೊರ ತೆಗೆದಿದ್ದಾರೆ.

  • ಎತ್ತುಗಳ ಬಾಡಿಗೆಗೆ ಹಣವಿಲ್ದೆ ಹೆಗಲ ಮೇಲೆ ನೊಗ ಹೊತ್ತು ಉಳುಮೆ ಮಾಡಿದ ರೈತರು

    ಎತ್ತುಗಳ ಬಾಡಿಗೆಗೆ ಹಣವಿಲ್ದೆ ಹೆಗಲ ಮೇಲೆ ನೊಗ ಹೊತ್ತು ಉಳುಮೆ ಮಾಡಿದ ರೈತರು

    ರಾಯಚೂರು: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಿದ ಬರಗಾಲದ ಪರಿಣಾಮ ಎಷ್ಟು ಘೋರವಾಗಿದೆ ಅಂದ್ರೆ ಈಗ ಮಳೆ ಬಂದರೂ ಹೊಲದಲ್ಲಿ ಬಿತ್ತನೆ ಮಾಡಲು ರೈತರಲ್ಲಿ ಹಣವಿಲ್ಲ. ಸಿಂಧನೂರು ತಾಲೂಕಿನ 4ನೇ ಮೈಲ್ ಕ್ಯಾಂಪ್‍ನಲ್ಲಿ ರೈತರು ಎತ್ತುಗಳ ಬಾಡಿಗೆ ಕೊಡಲು ಹಣವಿಲ್ಲದೆ ಸ್ವತಃ ತಾವೇ ಎತ್ತುಗಳಾಗಿ ನೋಗ ಹೊತ್ತು ಉಳುಮೆ ಮಾಡಿದ್ದಾರೆ.

    ಮೂರು ಜನ ರೈತರು ಎರಡು ಎಕರೆ ಜಮೀನನ್ನ ಹರಗಿ, ಹತ್ತಿ ಕಾಳು ಬಿತ್ತನೆ ಮಾಡಿದ್ದಾರೆ. ಗ್ರಾಮದ ರಾಮಲಿಂಗಪ್ಪ, ಪ್ರದೀಪ್ ಹಾಗೂ ವಿರೇಶ್ ತಾವೇ ನೊಗ ಹೊತ್ತು ಜಮೀನನ್ನ ಉಳುಮೆ ಮಾಡಿದ್ದಾರೆ.

    ಸತ್ಯನಾರಾಯಣ ಸ್ವಾಮಿ ಎಂಬವರ ಜಮೀನನ್ನ ಗುತ್ತಿಗೆ ಪಡೆದಿದ್ದ ಇವರು ಎತ್ತುಗಳಿಂದ ಉಳುಮೆ ಮಾಡಿದ್ರೆ ಒಂದು ದಿನಕ್ಕೆ ಒಂದು ಸಾವಿರ ರೂಪಾಯಿ ಬಾಡಿಗೆ ಕೊಡಬೇಕಾಗುತ್ತದೆ ಅಂತ ಎರಡು ದಿನ ಕಾಲ ತಾವೇ ನೊಗ ಹೊತ್ತು ಉಳುಮೆ ಮಾಡಿದ್ದಾರೆ.

    ಕಳೆದ ವರ್ಷ ಜೋಡಿ ಎತ್ತುಗಳನ್ನ ಹೊಂದಿದ್ದ ಪ್ರದೀಪ್ ಬರಗಾಲ ಹೊಡೆತಕ್ಕೆ ಸಾಲ ತೀರಿಸಲು ಎತ್ತು ಮಾರಿದ್ದರು. ಈಗ ಸ್ವತಃ ತಾವೇ ಎತ್ತುಗಳಾಗಿ ದುಡಿಯುತ್ತಿರುವುದು ರೈತನ ನಿಕೃಷ್ಠ ಬದುಕಿಗೆ ಹಿಡಿದ ಕೈಗನ್ನಡಿಯಂತಿದೆ.

  • ನಾಯಿಗಳಿಗೆ ಹೆದರಿ ನೇಗಿಲು ಸಹಿತ 30 ಅಡಿ ಪಾಳು ಬಾವಿಗೆ ಬಿದ್ದ ಎತ್ತುಗಳು

    ನಾಯಿಗಳಿಗೆ ಹೆದರಿ ನೇಗಿಲು ಸಹಿತ 30 ಅಡಿ ಪಾಳು ಬಾವಿಗೆ ಬಿದ್ದ ಎತ್ತುಗಳು

    ಕೋಲಾರ: ಉಳುಮೆ ಮಾಡುವ ವೇಳೆ ನಾಯಿಗಳಿಗೆ ಬೆದರಿದ ಎತ್ತುಗಳು ನೇಗಿಲು ಸಹಿತ 30 ಅಡಿ ಆಳದ ಪಾಳು ಬಾವಿಗೆ ಬಿದ್ದ ಘಟನೆ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಜೀಡಮಾಕನಪಲ್ಲಿ ಗ್ರಾಮದ ನಿವಾಸಿ ರೈತ ಮುನಿಯಪ್ಪ ಎಂಬವರ ಎತ್ತುಗಳು ಪಾಳು ಬಾವಿಗೆ ಬಿದ್ದು ಗಾಯಗೊಂಡಿವೆ. ಕೆಲವು ದಿನಗಳಿಂದ ಗ್ರಾಮದಲ್ಲಿ ಮಳೆಯಾಗಿದ್ದು, ರೈತ ಮುನಿಯಪ್ಪ ಅವರು ಉಳುಮೆ ಮಾಡಲು ತಮ್ಮ ಎತ್ತುಗಳ ಜೊತೆಗೆ ಹೊಲಕ್ಕೆ ಆಗಮಿಸಿದ್ದರು.

    ಎತ್ತುಗಳಿಗೆ ನೇಗಿಲು ಕಟ್ಟಿ ಉಳುಮೆ ಮಾಡುವಷ್ಟರಲ್ಲಿ ನಾಯಿಗಳನ್ನು ಕಂಡು ಬೆದರಿದ ಎತ್ತುಗಳು ಓಡಿ ಹೋಗಿ ಹತ್ತಿರದ 30 ಅಡಿ ಪಾಳು ಬಾವಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿವೆ. ಬಾವಿಗೆ ಬಿದ್ದ ಎತ್ತುಗಳನ್ನು ಸ್ಥಳೀಯರ ನೆರವಿನಿಂದ ಮೇಲೆತ್ತಲು ಸಿದ್ಧತೆ ನಡೆಸಿದ್ದಾರೆ.

     

  • ಹೊಂಡದಲ್ಲಿ ಬಿದ್ದು ಒದ್ದಾಡಿದ ಗೂಳಿ – ಅಗ್ನಿಶಾಮಕ ದಳ, ಸ್ಥಳೀಯರಿಂದ ರಕ್ಷಣೆ

    ಹೊಂಡದಲ್ಲಿ ಬಿದ್ದು ಒದ್ದಾಡಿದ ಗೂಳಿ – ಅಗ್ನಿಶಾಮಕ ದಳ, ಸ್ಥಳೀಯರಿಂದ ರಕ್ಷಣೆ

    ಮಡಿಕೇರಿ: ಬೇಸಿಗೆಯ ಬಿಸಿ ಎಲ್ಲರನ್ನ ಕಾಡೋಕೆ ಶುರುವಾಗಿದೆ. ಸೂರ್ಯನ ತಾಪಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಪ್ರಾಣಿಗಳೂ ಕೂಡ ಬಿಸಿಲಿನಿಂದ ಬಚಾವಾಗೋಕೆ ಪರದಾಡುತ್ತಿವೆ. ಹೀಗೆ ಬಿಸಿಲಿನ ಬೇಗೆಯಿಂದ ಬಳಲಿ ನೀರು ಕುಡಿಯಲೆಂದು ಬಾವಿಯ ಬಳಿ ತೆರಳಿದ ಗೂಳಿಯೊಂದು ಆಯತಪ್ಪಿ ಬಾವಿಗೆ ಬಿದ್ದು ನರಳಾಡಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ದಾಹ ನೀಗಿಸಿಕೊಳ್ಳಲು ಹೋಗಿ ನೀರಿನಲ್ಲಿ ಮುಳುಗುತ್ತಿದ್ದ ಮೂಕ ಪ್ರಾಣಿಯನ್ನು ಅಗ್ನಿಶಾಮಕ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ರಕ್ಷಿಸಿ ಅದರ ಜೀವ ಉಳಿಸಿದ್ದಾರೆ.

    ಭಾನುವಾರ ಸಂಜೆ ನಗರದ ರಾಜಾಸೀಟ್ ಬಳಿಯಿರೋ ತೋಟಗಾರಿಕೆ ಇಲಾಖೆಯ ಸಸ್ಯಕ್ಷೇತ್ರದಲ್ಲಿರೋ 25 ರಿಂದ 30 ಅಡಿ ಆಳದ ಬಾವಿಯ ಸನಿಹ ಬಂದ ಗೂಳಿ ಬಾವಿಗೆ ಬಿದ್ದಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬಾವಿಗೆ ಇಳಿದು ಗೂಳಿಯ ದೇಹಕ್ಕೆ ಎರಡು ಕಡೆ ಬೆಲ್ಟ್ ಕಟ್ಟಿ, ತಲೆಯ ಭಾಗಕ್ಕೆ ಹಗ್ಗ ಕಟ್ಟಿಕೊಂಡು ಸ್ವಲ್ಪ ಸ್ವಲ್ಪವೇ ಮೇಲಕ್ಕೆತ್ತಿ ಕಡೆಗೂ ಅಮಾಯಕ ಗೂಳಿಯನ್ನು ರಕ್ಷಿಸಿದ್ದಾರೆ.

    ಸತತ ಒಂದೂವರೆ ತಾಸು ನಡೆದ ಕಾರ್ಯಾಚರಣೆಯ ಬಳಿಕ ಗೂಳಿಯನ್ನು ಮೇಲಕ್ಕೆತ್ತಲಾಗಿದ್ದು, ಕೂಡಲೇ ಗೂಳಿ ಸ್ಥಳದಿಂದ ಓಡಿಹೋಗಿದೆ. ಭಾರೀ ಗಾತ್ರದ ಗೂಳಿ ನೀರಿನಲ್ಲಿ ಬಿದ್ದಿದ್ದರಿಂದ ಅದನ್ನು ಮೇಲೆತ್ತುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದ್ರೆ ಅಗ್ನಿಶಾಮಕಲ ಸಿಬ್ಬಂದಿ ಚಾಣಾಕ್ಷತೆಯಿಂದ ಗೂಳಿಯ ದೇಹಕ್ಕೆ ಹಗ್ಗ ಕಟ್ಟಿ ಬಹಳ ಬುದ್ಧಿವಂತಿಕೆಯಿಂದ ಅದನ್ನು ಮೇಲಕ್ಕೆತ್ತುವ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದ್ದಾರೆ.

    https://www.youtube.com/watch?v=W3rvGSNNCbc&feature=youtu.be