Tag: owner

  • ಬೆಂಗ್ಳೂರಲ್ಲಿದ್ದ ಪ್ರತಿಷ್ಠಿತ ಕರಾಚಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು

    ಬೆಂಗ್ಳೂರಲ್ಲಿದ್ದ ಪ್ರತಿಷ್ಠಿತ ಕರಾಚಿ ಬೇಕರಿ ಬೋರ್ಡ್ ಮುಚ್ಚಿಸಿದ ಯುವಕರು

    ಬೆಂಗಳೂರು: ಪುಲ್ವಾಮಾದಲ್ಲಿ ಯೋಧರ ಮೇಲೆ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿದ್ದ ಪ್ರತಿಷ್ಠಿತ ಕರಾಚಿ ಬೇಕರಿ ಬೋರ್ಡ್ ಅನ್ನು ಯುವಕರು ಮುಚ್ಚಿಸಿದ್ದಾರೆ.

    ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಈ ಬೇಕರಿ ಇದೆ. ಈ ಬೇಕರಿಯ ಹೆಸರು ಕರಾಚಿ ಆಗಿದ್ದು, ಈ ಹೆಸರನ್ನು ತೆಗೆಯುವಂತೆ ಯುವಕರು ಗಲಾಟೆ ಮಾಡಿದ್ದಾರೆ.

    ನಮ್ಮ ಯೋಧರ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ನಗರದ ಹೆಸರಲ್ಲಿ ಇಲ್ಲಿ ವ್ಯಾಪಾರ ಮಾಡುವುದು ಸರಿಯಲ್ಲ. ಇದು ನಮಗೆ ಇಷ್ಟವಾಗುತ್ತಿಲ್ಲ. ನೀವು ವ್ಯಾಪಾರ ಬೇಕಾದರೆ ಮಾಡಿಕೊಳ್ಳಿ. ಆದರೆ ಕರಾಚಿ ಹೆಸರು ತೆಗೆಯಿರಿ ಎಂದು ಯುವಕರ ಗಲಾಟೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಮಾಲೀಕ ಖಾನ್ ಚೆಂದ್ ರಾಮಾನಿ ಯುವಕರ ಮಾತಿನಂತೆ ಕರಾಚಿ ಹೆಸರಿಗೆ ಪ್ಲೆಕ್ಸ್ ಕಟ್ಟಿ ಮುಚ್ಚಿದ್ದಾರೆ.

    1953ರಲ್ಲಿ ಈ ಬೇಕರಿ ಸ್ಥಾಪನೆಯಾಗಿದ್ದು, ಪಾಕಿಸ್ತಾನದ ರಾಜಧಾನಿ ಕರಾಚಿ ಹೆಸರಿನಲ್ಲಿ ಬೇಕರಿಯನ್ನು ನಡೆಸಲಾಗುತ್ತಿದೆ. ಇದೇ ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಬೇಕರಿ ನಡೆಯುತ್ತಿದೆ. ಅಲ್ಲದೆ ಇಂದಿರಾನಗರ ಪೊಲೀಸರು ಬೇಕರಿಯಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

    1947ರಲ್ಲಿ ಭಾರತ ಮತ್ತು ಪಾಕಿಸ್ತಾನ ಬೇರೆಯಾದ ವೇಳೆ ಖಾನ್ ಚೆಂದ್ ರಾಮಾನಿ ಪಾಕಿಸ್ತಾನದಿಂದ ಹೈದರಾಬಾದ್‍ಗೆ ಬಂದು ನೆಲೆಸಿದ್ದರು. ಹೈದರಾಬಾದ್‍ನಲ್ಲಿ ಮೊದಲ ಬಾರಿಗೆ ಕರಾಚಿ ಬೇಕರಿ ಓಪನ್ ಮಾಡಿದ್ದಾರೆ. ಬಳಿಕ ಬೆಂಗಳೂರಿನ ಇಂದಿರಾ ನಗರ ಮತ್ತು ಮಹದೇವಪುರದಲ್ಲಿ ಬೇಕರಿ ಓಪನ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಆಗ್ರಾ ಸೇರಿದಂತೆ ಹತ್ತಾರು ಬ್ರಾಂಚ್ ಗಳನ್ನು ಹೊಂದಿದ್ದಾರೆ.

    ಈ ಸಂಬಂಧ ಬೇಕರಿ ಮಾಲೀಕ ಖಾನ್ ಚೆಂದ್ ರಾಮಾನಿ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಯುವಕರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಯೂಸ್‍ಮೆಂಟ್ ಪಾರ್ಕ್ ವಿಚಾರದಲ್ಲಿ ಕಿತ್ತಾಟ – ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಮಾಲೀಕ ಯತ್ನ

    ಅಮ್ಯೂಸ್‍ಮೆಂಟ್ ಪಾರ್ಕ್ ವಿಚಾರದಲ್ಲಿ ಕಿತ್ತಾಟ – ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಮಾಲೀಕ ಯತ್ನ

    ಚಿಕ್ಕಬಳ್ಳಾಪುರ: ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ವಿಚಾರದಲ್ಲಿ ಇಬ್ಬರು ಮಾಲೀಕರುಗಳ ನಡುವಿನ ಗಲಾಟೆ, ಗೊಂದಲ, ಮನಸ್ತಾಪದಿಂದ ಓರ್ವ ಮಾಲೀಕ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರದ ಚಿತ್ರಾವತಿ ಜಾತ್ರೆಯಲ್ಲಿ ನಡೆದಿದೆ.

    ಅಮ್ಯೂಸ್‍ಮೆಂಟ್ ಪಾರ್ಕಿನ ಮಾಲೀಕ ಶ್ರೀನಿವಾಸ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆಗಳಲ್ಲಿ, ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಮಾಡುವುದರ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿ ಶ್ರೀನಿವಾಸ್ ಹಾಗೂ ಬೆಂಗಳೂರು ಮೂಲದ ರಾಜೇಶ್ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಎಂದಿನಂತೆ ಈ ಬಾರಿ ಜಿಲ್ಲೆಯ ಚಿತ್ರಾವತಿ ಬಳಿ ಇರುವ ಶ್ರೀ ಸುಬ್ರಮ್ಮಣ್ಯಶ್ವರ ಜಾತ್ರೆಯಲ್ಲಿ ಸ್ಪರ್ಧೆಗಿಳಿದು ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಿದ್ದರು.

    ಆದರೆ ಒಂದೇ ಜಾಗದಲ್ಲಿ ಎರಡೆರಡು ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣ ಮಾಡಿದ ಕಾರಣ ಇಬ್ಬರಿಗೂ ನಷ್ಟವಾಗಿದೆ. ಮತ್ತೊಂದೆಡೆ ರಾಜೇಶ್ ಕಡೆಯವರು ತನಗೆ ಪ್ರಾಣ ಬೆದರಿಕೆ ಹಾಕಿ ಪದೆ ಪದೆ ತನಗೆ ತೊಂದರೆ ನಿಡುತ್ತಿದ್ದಾರೆ ಎಂದು ಆರೋಪಿಸಿ ಶ್ರೀನಿವಾಸ್ ಇಂದು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ, ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಕಂಡ ಸ್ಥಳಿಯರು ಶ್ರೀನಿವಾಸ್ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

    ಮತ್ತೊಂದೆಡೆ ಶ್ರೀನಿವಾಸ್ ಆರೋಪ ಅಲ್ಲಗಳೆದಿರುವ ರಾಜೇಶ, ತಾವು ಜಾತ್ರೆ ಆರಂಭವಾಗುವುದಕ್ಕೂ ಮುನ್ನ ಚಿತ್ರಾವತಿಯಲ್ಲಿ ತಾತ್ಕಾಲಿಕ ಅಮ್ಯೂಸ್‍ಮೆಂಟ್ ಪಾರ್ಕ್ ಹಾಗೂ ವಸ್ತು ಪ್ರದರ್ಶನ ಏರ್ಪಡಿಸಿದ್ದೆ, ನಂತರ ಬಂದ ಶ್ರೀನಿವಾಸ್, ಹಠಕ್ಕೆ ಬಿದ್ದವರಂತೆ ತಮ್ಮ ಎದರುಗಡೆಯೇ ಅಮ್ಯೂಸ್‍ಮೆಂಟ್ ಪಾರ್ಕ್ ನಿರ್ಮಾಣ ಮಾಡಿದ್ದರು. ಅವರ ವ್ಯಾಪಾರ ಅವರದು ನಮ್ಮ ವ್ಯಾಪಾರ ನಮ್ಮದು, ಶ್ರೀನಿವಾಸ್ ಮೈತುಂಬ ಸಾಲ ಮಾಡಿಕೊಂಡು ಸಾಲಗಾರರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುವುದೇ ಆತನ ಕಾಯಕ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಮೊಬೈಲ್ ಕರೆಗೆ ರಾಜೇಶ್ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಚ್ಚಲು ಬಂದ ನಾಯಿಗೆ ಕಲ್ಲು ಹೊಡೆದಿದ್ದಕ್ಕೆ ಕೊಂದೇ ಬಿಟ್ಟ ಮಾಲೀಕ..!

    ಕಚ್ಚಲು ಬಂದ ನಾಯಿಗೆ ಕಲ್ಲು ಹೊಡೆದಿದ್ದಕ್ಕೆ ಕೊಂದೇ ಬಿಟ್ಟ ಮಾಲೀಕ..!

    ನವದೆಹಲಿ: ತನ್ನ ಮನೆಯ ನಾಯಿಗೆ ಕಲ್ಲು ಹೊಡೆದಿದ್ದಕ್ಕೆ ವ್ಯಕ್ತಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಲೆಗೈದ ಅಮಾನವೀಯ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ವ್ಯಕ್ತಿಯನ್ನು ಅಫಾಖ್(30) ಎಂದು ಗುರುತಿಸಲಾಗಿದೆ. ಈ ಘಟನೆ ಉತ್ತರ ದೆಹಲಿಯ ವೆಲ್‍ಕಮ್ ಕಾಲೊನಿಯಲ್ಲಿ ನಡೆದಿದೆ.

    ಘಟನೆ ವಿವರ:
    ಅಫಾಖ್ ವೆಲ್ ಕಮ್ ಕಾಲೋನಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅವರನ್ನು ನೋಡಿ ನಾಯಿಯೊಂದು ಜೋರಾಗಿ ಬೊಗಳಿದೆ. ಅಲ್ಲದೇ ಕಚ್ಚಲು ಕೂಡ ಪ್ರಯತ್ನಿಸುತ್ತಿತ್ತು. ಇದರಿಂದ ಭಯಗೊಂಡ ಅಫಶಖ್ ತನ್ನ ರಕ್ಷಣೆಗಾಗಿ ಅಲ್ಲೇ ಇದ್ದ ಕಲ್ಲನ್ನು ಎತ್ತಿ ನಾಯಿ ಕಡೆ ಎಸದಿದ್ದಾರೆ. ಇವೆಲ್ಲವನ್ನು ಮನೆಯೊಳಗಿಂದ ಮಾಲೀಕ ಮೆಹ್ತಾಬ್ ಗಮನಿಸಿದ್ದಾನೆ.

                                            ಸಾಂದರ್ಭಿಕ ಚಿತ್ರ

    ತನ್ನ ಮನೆಯ ನಾಯಿಗೆ ಕಲ್ಲು ಹೊಡೆದಿದ್ದರಿಂದ ಸಿಟ್ಟುಗೊಂಡ ಮೆಹ್ತಾಬ್ ಮನೆಯೊಳಗಿಂದ ಪಿಸ್ತೂಲ್ ತಂದು ನೇರವಾಗಿ ಅಫಾಖ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅತುಲ್ ಥಾಕೂರ್ ವಿವರಿಸಿದ್ದಾರೆ.

    ಈ ಮೊದಲು ಅಫಾಖ್ ಮತ್ತು ಮೆಹ್ತಾಬ್ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅಫ್ತಾಖ್ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ ಅದಾಗಲೇ ಅಫ್ತಾಖ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯ ಬಳಿಕ ಮಾಲೀಕ ಮೆಹ್ತಾಬ್ ಸ್ಥಳದಿಂದ ಕಾಲ್ಕಿತ್ತಿದ್ದು, ಸದ್ಯ ಪೊಲೀಸರ ಆತನ ಪತ್ತೆಗೆ ಬಲೆ ಬೀಸಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ನಾಯಿ ಮರಿಯ ವಿಚಾರವಾಗಿಯೇ ನಾಲ್ವರು ದುಷ್ಕರ್ಮಿಗಳು ಇಬ್ಬರು ಹುಡುಗರ ಮೇಲೆ ಕೋಲಿನಿಂದ ಹಿಗ್ಗಾಮುಗ್ಗವಾಗಿ ಥಳಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಫಿ ಶಾಪ್ ಮಾಲೀಕ ಅಂದರ್ – ಜನ್ರಿಗೆ ವಂಚಿಸಿ ಬರೋಬ್ಬರಿ 100 ಕೋಟಿ ಆಸ್ತಿ ಮಾಡ್ದ!

    ಕಾಫಿ ಶಾಪ್ ಮಾಲೀಕ ಅಂದರ್ – ಜನ್ರಿಗೆ ವಂಚಿಸಿ ಬರೋಬ್ಬರಿ 100 ಕೋಟಿ ಆಸ್ತಿ ಮಾಡ್ದ!

    ಬೆಂಗಳೂರು: ಪ್ರತಿಷ್ಠಿತ ಕಲ್ಮನೆ ಕಾಫಿ ಶಾಪ್ ಗಳ ಮಾಲೀಕ, ಜೊತೆಗೆ ನೂರಾರು ಕೋಟಿ ಆಸ್ತಿಯ ಒಡೆಯ. ಆದರೆ ಇಷ್ಟೆಲ್ಲಾ ಆಸ್ತಿಯನ್ನ ಈತ ಜನರಿಗೆ ವಂಚಿಸಿ ಮಾಡಿದ್ದಾನೆ.

    ಅವಿನಾಶ್ ಪ್ರಭು ಜನರಿಗೆ ವಂಚಿಸಿದ ಉದ್ಯಮಿ. ಬೆಂಗಳೂರು ನಗರದಲ್ಲೇ ಈತನ 11 ಕಾಫಿ ಶಾಪ್ ಗಳಿವೆ. ಇದ್ಯಾವುದನ್ನು ಆತ ಸಂಪಾದನೆ ಮಾಡಿಲ್ಲ. ಅರ್ಧಂಬರ್ಧ ಫ್ಲ್ಯಾಟ್ ಗಳನ್ನ ಕಟ್ಟಿ ಜನರಿಂದ ನೂರಾರು ಕೋಟಿ ಆಸ್ತಿ ಮಾಡಿದ್ದಾನೆ.

    ಬೆಂಗಳೂರಿನ ವಿವಿಧೆಡೆ ಸ್ಕೈ ಲೈನ್ ಔರಾ, ಸ್ಕೈ ಲೈನ್ ರಿಟ್ರೀಟ್, ಸ್ಕೈ ಲೈನ್ ಅಕೇಶಿಯಾ ಸೇರಿದಂತೆ ಹಲವಾರು ಪ್ರಾಜೆಕ್ಟ್ ಗಳ ಹೆಸರಲ್ಲಿ ವಂಚಿಸಿದ್ದಾನೆ. ಫ್ಲ್ಯಾಟ್ ಗಳನ್ನು ಕೇವಲ 10% ಅಷ್ಟು ಕಟ್ಟಿ ಜನರಿಂದ 90% ಹಣ ವಸೂಲಿ ಮಾಡಿದ್ದಾನೆ ಎಂದು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹೇಳಿದ್ದಾರೆ.

    200 ಜನರಿಗೆ ಸುಮಾರು ನೂರು ಕೋಟಿಯಷ್ಟು ಹಣ ವಂಚಿಸಿದ್ದಾನೆ. ಈತನ ಲ್ಯಾವೆಲ್ಲೆ ರಸ್ತೆಯ ಮನೆ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಖತರ್ನಾಕ್ ವಂಚಕ ಅವಿನಾಶ್ ಪ್ರಭುವನ್ನ ಅರೆಸ್ಟ್ ಮಾಡಿದ್ದಾರೆ. ಜನರ ದುಡ್ಡಲ್ಲಿ ತುಂಬಾ ಆಸ್ತಿ ಮಾಡಿದ್ದಾನೆ.

    14 ಬ್ಯಾಂಕ್ ಗಳಲ್ಲಿ ಬ್ಯಾಲೆನ್ಸ್, ಅಲ್ಲದೇ ಕೆಂಗೇರಿಯಲ್ಲಿ 5 ಎಕರೆ ಜಮೀನು, ಅಲ್ಲಾಳಸಂದ್ರದಲ್ಲಿ 3 ಎಕರೆ ಜಮೀನು, ಹೆಣ್ಣೂರಿನಲ್ಲಿ ಮೂರು ಎಕರೆ, ಕನಕಪುರ ಬಳಿ 7 ಎಕರೆ, ಮಂಗಳೂರಿನಲ್ಲಿ 8.5 ಎಕರೆ, ಚೆನ್ನೈನ ಮಾಣಿಕ್ಯ ರಸ್ತೆಯಲ್ಲಿ ಅರ್ಧ ಎಕರೆ ಜಮೀನು ಮಾಡಿದ್ದಾನೆ. ಸದ್ಯ ಈತನ ಮನೆಯಲ್ಲಿದ್ದ ರೇಂಜ್ ರೋವರ್ ಮತ್ತು ಆಡಿ ಕಾರ್ ಸಮೇತ ಎಲ್ಲವನ್ನೂ ಸೀಜ್ ಮಾಡಿದ್ದಾರೆ ಸಿಸಿಬಿ ಪೊಲೀಸರು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂಬಿಕಾ ಮನೆ ಬಾಡಿಗೆಯಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಇಮ್ಮಡಿ ಮಹದೇವ ಸ್ವಾಮೀಜಿ

    ಅಂಬಿಕಾ ಮನೆ ಬಾಡಿಗೆಯಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಇಮ್ಮಡಿ ಮಹದೇವ ಸ್ವಾಮೀಜಿ

    ಚಾಮರಾಜನಗರ: ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯ ವಿಷ ಪ್ರಸಾದ ಪ್ರಕರಣದ ಎ2 ಆರೋಪಿ ಅಂಬಿಕಾ ನಾಲ್ಕು ವರ್ಷದಿಂದ ಮನೆಯ ಬಾಡಿಗೆಯನ್ನ ಕಟ್ಟದ ಮನೆಯ ಮಾಲೀಕನಿಗೂ ವಂಚನೆ ಮಾಡಿದ್ದಾಳೆ.

    ಮಾರ್ಟಳ್ಳಿ ಗ್ರಾಮದಲ್ಲಿರುವ ಗೋವಿಂದ ಎಂಬವರ ಮನೆಯನ್ನ ಅಂಬಿಕಾ ಬಾಡಿಗೆ ಪಡೆದುಕೊಂಡಿದ್ದಳು. ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವ ಸ್ವಾಮೀಜಿಯ ಮಧ್ಯಸ್ಥಿಕೆಯಲ್ಲಿ ಬಾಡಿಗೆ ಪಡೆದಿದ್ದಳು. ಆದರೆ ಸುಮಾರು ನಾಲ್ಕು ವರ್ಷದಿಂದ ಮನೆ ಬಾಡಿಗೆ ಕೊಡದೆ ಮಾಲೀಕರಿಗೆ ವಂಚನೆ ಮಾಡಿದ್ದಾಳೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಮನೆ ಮಾಲೀಕ, ಮೊದಲಿಗೆ 1 ಲಕ್ಷ ಹಣ ಅಡ್ವಾನ್ಸ್ ನೀಡಿದ್ದಾಳೆ. ನಾವು ಪ್ರತಿ ತಿಂಗಳು 1 ಸಾವಿರ ಮನೆಯ ಬಾಡಿಗೆ ಕೇಳಿದೆ. ಆದರೆ ಅವರು 1 ಸಾವಿರ ಬಾಡಿಗೆ ನೀಡಲು ಸಾಧ್ಯವಿಲ್ಲ, 500 ರೂಪಾಯಿ ಕೊಡುತ್ತೇನೆ ಎಂದು ಇಮ್ಮಡಿ ಮಹದೇವ ಸ್ವಾಮೀಜಿ ಹೇಳಿದ್ದರು. ನಾನು 500 ರೂಪಾಯಿ ಆಗುವುದಿಲ್ಲ 1 ಸಾವಿರ ಬಾಡಿಗೆ ಕೊಡಬೇಕು ಎಂದಿದ್ದೆ. ಕೊನೆಗೆ ನನ್ನ ಷರತ್ತಿಗೆ ಒಪ್ಪಿ ಇಮ್ಮಡಿ ಮಹದೇವಸ್ವಾಮೀಜಿ ಮನೆ ಬಾಡಿಗೆ ಕೊಡಿಸಿದ್ದರು ಎಂದು ಹೇಳಿದ್ದಾರೆ.

    ಇದಾದ ಬಳಿಕ ನಾಲ್ಕು ವರ್ಷಗಳ ಕಾಲ ಅಂಬಿಕಾ ಮನೆಯ ಬಾಡಿಗೆ ನೀಡಲಿಲ್ಲ. ಇಮ್ಮಡಿ ಮಹದೇವಸ್ವಾಮೀಜಿಯ ಮೇಲೆ ಇದ್ದ ನಂಬಿಕೆಯಿಂದ ಮಾಲೀಕ ಗೋವಿಂದ ಅಂಬಿಕಾಳಿಂದ ಮನೆಯ ಬಾಡಿಗೆ ಕೇಳಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ಅಂಬಿಕಾ ನಾಲ್ಕು ವರ್ಷ ಬಾಡಿಗೆ ನೀಡದೆ ಮಾಲೀಕನಿಗೆ ವಂಚನೆ ಮಾಡಿದ್ದಾಳೆ. ಇತ್ತ ಬಾಡಿಗೆಯೂ ಇಲ್ಲ, ಮನೆ ಖಾಲಿಯೂ ಇಲ್ಲ. ಈಗ ಮನೆ ಖಾಲಿ ಮಾಡಿಸಿಕೊಡುವಂತೆ ಪೊಲೀಸರ ಮೊರೆ ಹೋಗಲು ಮಾಲೀಕ ನಿರ್ಧರಿಸಿದ್ದಾರೆ.

    ಹಗಲಲ್ಲೇ ಈ ಮನೆಗೆ ಇಮ್ಮಡಿ ಮಹದೇವಸ್ವಾಮೀಜಿ ಹೋಗುತ್ತಿದ್ದನು. ಇದನ್ನು ಕಂಡು ಕಾಣದಂತೆ ಮನೆಯ ಮಾಲೀಕ ಗೋವಿಂದ ಇದ್ದರು. ಈಗ ತಮ್ಮ ಮನೆ ಅನೈತಿಕ ತಾಣವಾಗಿದ್ದಕ್ಕೆ ಬೇಸರ ವ್ಯಕ್ಯ ಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಕಂಟೈನರ್ ಆಕ್ಸಿಡೆಂಟ್ ಮಾಡಿದ್ದಕ್ಕೆ ಚಾಲಕನನ್ನ ಕೊಂದ ಮಾಲೀಕ!

    ಕಂಟೈನರ್ ಆಕ್ಸಿಡೆಂಟ್ ಮಾಡಿದ್ದಕ್ಕೆ ಚಾಲಕನನ್ನ ಕೊಂದ ಮಾಲೀಕ!

    – ಅನ್ನ ನೀರು ಕೊಡದೇ ಕಂಟೈನರ್ ನಲ್ಲಿ ಕೂಡಿಟ್ಟು ಚಿತ್ರ ಹಿಂಸೆ

    ತುಮಕೂರು: ಕಂಟೈನರ್ ಆಕ್ಸಿಡೆಂಟ್ ಮಾಡಿದ್ದಕ್ಕೆ ಮಾಲೀಕನೊಬ್ಬ ಇಬ್ಬರು ಚಾಲಕರಿಗೆ ಚಿತ್ರಹಿಂಸೆ ನೀಡಿ, ಓರ್ವನನ್ನು ಕೊಲೆಗೈದ ಘಟನೆ ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದಿದೆ.

    ಬೆಳಗಾವಿ ಜಿಲ್ಲೆ ಬೈಲಹೊಂಗಲದ ಬಸಪ್ಪ(38) ಚಿತ್ರಹಿಂಸೆಗೆ ಬಲಿಯಾದ ಚಾಲಕ. ಮತ್ತೊಬ್ಬ ಚಾಲಕ ಸೋಮಪ್ಪ(35) ಅಸ್ವಸ್ಥಗೊಂಡಿದ್ದಾನೆ. ಕಂಟೈನರ್ ಲಾರಿ ಮಾಲೀಕ ಬಾಳಪ್ಪ ಹಾಗೂ ಆತನ ಸಹಚರರು ಸೇರಿ ಕೃತ್ಯ ಎಸಗಿದ್ದಾರೆ ಆರೋಪಿಸಿ ಬಸಪ್ಪನ ಪತ್ನಿ ಮತ್ತು ಹಲ್ಲೆಗೆ ಒಳಗಾದ ಸೋಮಪ್ಪ ಶಿರಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಗಂಭೀರವಾಗಿ ಗಾಯಗೊಂಡು ಅಸ್ವಸ್ಥಗೊಂಡಿರುವ ಸೋಮಪ್ಪ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ದೂರಿನಲ್ಲಿರುವ ಆರೋಪ ಏನು?
    ಕಂಟೈನರ್ ಮಾಲೀಕ ಬಾಳಪ್ಪ ಕೂಡ ಬೈಲಹೊಂಗಲದ ನಿವಾಸಿಯಾಗಿದ್ದು ಅದೇ ಪಟ್ಟಣದ ನಿವಾಸಿಗಳಾದ ಬಸಪ್ಪ ಹಾಗೂ ಸೋಮಪ್ಪ ಅವರನ್ನು ಚಾಲಕರನ್ನಾಗಿ ನೇಮಿಸಿದ್ದ. ಕಂಟೈನರ್ ಡಿಸೆಂಬರ್ 11ರಂದು ಶಿರಾ ತಾಲೂಕಿನಲ್ಲಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿತ್ತು.

    ಈ ಕುರಿತು ಮಾಹಿತಿ ಪಡೆದ ಬಾಳಪ್ಪ ಘಟನಾ ಸ್ಥಳಕ್ಕೆ ಬಂದಿದ್ದ. ಈ ವೇಳೆ ಚಾಲಕರ ಮೇಲೆ ಕೋಪಗೊಂಡು ತನ್ನ ಸಹಚರರ ಜೊತೆಗೆ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಳಿಕ ರಸ್ತೆ ಪಕ್ಕದಲ್ಲಿ ನಿಂತಿದ್ದ ಕಂಟೈನರ್ ನಲ್ಲಿ ಮೂರು ದಿನಗಳ ಕಾಲ ಅನ್ನ, ನೀರು ಕೊಡದೆ ಕೂಡಿ ಹಾಕಿದ್ದ. ಇಬ್ಬರನ್ನೂ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದ ಬಾಳಪ್ಪ, ಬಸಪ್ಪನನ್ನು ಕಾಲಿನಿಂದ ಒದ್ದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಲಸ ಮಾಡುವಾಗ ತುಂಡಾಯ್ತು ಕಾರ್ಮಿಕನ ಬೆರಳುಗಳು- ಚಿಕಿತ್ಸೆಗೆ ಹಣ ಕೇಳಿದಕ್ಕೆ ಕೊಲೆ ಬೆದರಿಕೆ

    ಕೆಲಸ ಮಾಡುವಾಗ ತುಂಡಾಯ್ತು ಕಾರ್ಮಿಕನ ಬೆರಳುಗಳು- ಚಿಕಿತ್ಸೆಗೆ ಹಣ ಕೇಳಿದಕ್ಕೆ ಕೊಲೆ ಬೆದರಿಕೆ

    ಬೆಂಗಳೂರು: ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಬರಿಗೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೊಬ್ಬನ ಬೆರಳುಗಳು ಮಷಿನ್‍ಗೆ ಸಿಲುಕಿ ತುಂಡಾದ ಘಟನೆ ಕಾಮಾಕ್ಷಿಪಾಳ್ಯದಲ್ಲಿ ಇಂದು ನಡೆದಿದೆ.

    ಕಾಮಾಕ್ಷಿಪಾಳ್ಯದ ತಿಮ್ಮೇಗೌಡ ಎಂಬ ವ್ಯಕ್ತಿಗೆ ಸೇರಿದ ಪ್ಲ್ಯಾಸ್ಟಿಕ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅನಂತ್ ಬರ್ಮನ್ ಎಂಬ ಯುವಕ ನಾಲ್ಕು ಬೆರಳಗಳನ್ನು ಕಳೆದುಕೊಂಡಿದ್ದಾನೆ. ಈ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಗೆ ತಿಮ್ಮೇಗೌಡ ಸುರಕ್ಷತಾ ವಸ್ತ್ರ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಅನಂತ್ ಬರಿಗೈಯಲ್ಲಿ ಪ್ಲಾಸ್ಟಿಕ್ ಅನ್ನು ಮೆಷಿನ್‍ಗೆ ಹಾಕುವ ವೇಳೆ ಆತನ ಬೆರಳುಗಳು ಸಿಲುಕಿ ತುಂಡಾಗಿದೆ. ಕೂಡಲೆ ಗಾಯಗೊಂಡ ಅನಂತ್‍ನನ್ನು ಸ್ಥಳೀಯ ಆಸ್ಪತ್ರೆಗೆ ಸಹೋದರ ಹೇಮಂತ್ ದಾಖಲಿಸಿದ್ದಾನೆ.

    ಈ ಸಂದರ್ಭದಲ್ಲಿ ಸಹೋದರನ ಚಿಕಿತ್ಸಾ ವೆಚ್ಚಕ್ಕಾಗಿ ಹೇಮಂತ್ ಮಾಲೀಕನ ಬಳಿ ಹಣ ಕೇಳಲು ಹೋದಾಗ, ಮಾಲೀಕ ಆತನಿಗೆ ಬಾಯಿಗೆ ಬಂದಂತೆ ಬೈದು, ಚಿಕಿತ್ಸಾ ವೆಚ್ಚ ಭರಿಸಲು ನಿರಾಕರಿಸಿದ್ದಾನೆ. ಬಳಿಕ ಮಾಲೀಕ ಹಾಗೂ ಹೇಮಂತ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಚಿಕಿತ್ಸಾ ವೆಚ್ಚ ಭರಿಸದಿದ್ದರೆ ಪೊಲೀಸರಿಗೆ ದೂರು ನೀಡೋದಾಗಿ ಹೇಮಂತ್ ಹೇಳಿದ್ದಾರೆ. ಈ ವೇಳೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಮಾಲೀಕ ಬೆದರಿಕೆ ಹಾಕಿದ್ದಾನೆ ಎಂದು ಹೇಮಂತ್ ಆರೋಪಿಸಿದ್ದಾರೆ.

    ಇದ್ಯಾವುದಕ್ಕು ಹೆದರದ ಹೇಮಂತ್ ನ್ಯಾಯ ಕೊಡಿಸುವಂತೆ ಕಾಮಾಕ್ಷಿಪಾಳ್ಯದ ಪೊಲೀಸ್ ಠಾಣೆಯಲ್ಲಿ ತಿಮ್ಮೇಗೌಡ ವಿರುದ್ಧ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯರಿಗೆ ಮನೆ ಬಾಡಿಗೆ ನೀಡಿ ರೂಮಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಮಾಲೀಕ ಅರೆಸ್ಟ್

    ಮಹಿಳೆಯರಿಗೆ ಮನೆ ಬಾಡಿಗೆ ನೀಡಿ ರೂಮಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಮಾಲೀಕ ಅರೆಸ್ಟ್

    ಚೆನ್ನೈ: ಮಹಿಳೆಯರಿಗೆ ಬಾಡಿಗೆ ನೀಡಿದ್ದ ಮನೆಯ ಕೋಣೆಗಳಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ್ದ ಮಾಲೀಕನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

    ಕೇರಳ ಮೂಲದ ಸಂಪತ್ ಕುಮಾರ್ ಅಲಿಯಾಸ್ ಸಂಜಯ್ ಬಂಧಿತ ಮಾಲೀಕ. ಸಂಜಯ್ ಚೆನ್ನೈನ ಆಡಂಬಾಕಂನಲ್ಲಿ ಅಪಾರ್ಟ್ ಮೆಂಟ್‍ ಒಂದನ್ನು ಹೊಂದಿದ್ದು, ಮಹಿಳೆಯರಿಗೆ ಬಾಡಿಗೆ ನೀಡಿದ್ದ ಮನೆಯಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ ಸಿಕ್ಕಿಬಿದ್ದಿದ್ದಾನೆ.

    ಆಗಿದ್ದೇನು?:
    ಏಳು ಜನ ಉದ್ಯೋಗಸ್ಥ ಮಹಿಳೆಯರು ಸಂಜಯ್ ಅಪಾರ್ಟ್ ಮೆಂಟ್‍ನಲ್ಲಿ ಮನೆಯೊಂದನ್ನು ಸೆಪ್ಟೆಂಬರ್ ನಲ್ಲಿ ಬಾಡಿಗೆ ಪಡೆದಿದ್ದರು. ಮನೆಯಲ್ಲಿ ವಾಸವಿದ್ದವರಲ್ಲಿ ಓರ್ವ ಮಹಿಳೆ ತನ್ನ ಹೇರ್ ಡ್ರೈಯರ್ ದುರಸ್ತಿಯಾಗಿದ್ದರಿಂದ ಪವರ್ ಪ್ಲಗ್‍ನ ಸಾಕೇಟ್ ತೆರೆದಿದ್ದಾಳೆ. ಈ ವೇಳೆ ಅದರಲ್ಲಿ ಸಣ್ಣ ಕ್ಯಾಮೆರಾ ಇರುವುದು ತಿಳಿದುಬಂದಿದೆ. ಮಾಲೀಕನ ಮೇಲೆ ಅನುಮಾನ ವ್ಯಕ್ತಪಡಿಸಿದ ಮಹಿಳೆಯರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡು, ಮಹಿಳೆಯರು ವಾಸವಿದ್ದ ಮನೆಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬೆಡ್ ರೂಮ್, ಬೆಡ್ ಲ್ಯಾಂಪ್ಸ್ ಹಾಗೂ ಸ್ನಾನದ ಕೊಣೆಯಲ್ಲಿ ಬಟ್ಟೆ ಹಾಕುವ ರಾಡ್ ಸೇರಿದಂತೆ ಹಲವು ಕಡೆಗಳಲ್ಲಿ ಹಿಡನ್ ಕ್ಯಾಮೆರಾಗಳು ಪತ್ತೆಯಾಗಿವೆ. ತಕ್ಷಣವೇ ಅಪಾರ್ಟ್ ಮೆಂಟ್ ಮಾಲೀಕ ಸಂಜಯ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ಮಹಿಳೆಯರು ಕೆಲಸಕ್ಕೆ ಹೋದಾಗ ದುರಸ್ತಿ ಕೆಲಸ ನೆಪ ಹೇಳಿ ಸಂಜಯ್ ಮನೆಯೊಳಗೆ ಹೋಗುತ್ತಿದ್ದ ಎಂದು ಮಹಿಳೆಯರು ದೂರಿನಲ್ಲಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಬೈಲ್‍ನಲ್ಲಿ ಕೊಲೆ ದೃಶ್ಯ ಸೆರೆ ಹಿಡಿಯುತ್ತ ನಿಂತ್ರೇ ಹೊರತು ಬಿಡಿಸಲಿಲ್ಲ

    ಮೊಬೈಲ್‍ನಲ್ಲಿ ಕೊಲೆ ದೃಶ್ಯ ಸೆರೆ ಹಿಡಿಯುತ್ತ ನಿಂತ್ರೇ ಹೊರತು ಬಿಡಿಸಲಿಲ್ಲ

    ಹೈದರಾಬಾದ್: ಜಗಳದ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆಹಿಡಿಯುತ್ತ ಜನರು ನಿಂತಿದ್ದು, ಯಾರೊಬ್ಬರೂ ಹಲ್ಲೆಯನ್ನು ತಡೆಯಲು ಮುಂದಾಗದೆ ಅಮಾನವೀಯತೆ ಮೆರದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

    ಹೈದರಾಬಾದ್‍ನ ಜನನಿಬಿಡ ಪ್ರದೇಶವಾಗಿರುವ ನಯಾಪೌಲ್ ಸಮೀಪದ ಮೀರ್ ಚೌಕ್ ಎಂಬಲ್ಲಿ ಅಮಾನವೀಯ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆಟೋ ಮಾಲೀಕ ಹಾಗೂ ಚಾಲಕ ಪರಸ್ಪರ ಜಗಳವಾಡಿ, ಮಾರಾಮಾರಿ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.

    ಆಟೋ ಚಾಲಕ ಶಾಕೀರ್ ಖುರೇಷಿ (30) ಕೊಲೆಯಾದ ವ್ಯಕ್ತಿ. ಮಾಲೀಕ ಅಬ್ದುಲ್ (29) ಹತ್ಯೆ ಮಾಡಿದ ಆರೋಪಿ. ಅಬ್ದುಲ್‍ನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ಘಟನೆಯ ವಿವರ: ಆರೋಪಿ ಅಬ್ದುಲ್ ತನ್ನ ಬಳಿ ಇರುವ ಆಟೋಗಳನ್ನು ಬೇರೆಯವರಿಗೆ ಬಾಡಿಗೆ ನೀಡುತ್ತಿದ್ದ. ಆದರೆ ಇಂದು ಶಾಕೀರ್ ಖುರೇಷಿ ಮತ್ತು ಅಬ್ದುಲ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಪರಿಣಾಮ ಇಬ್ಬರೂ ಹೊಡೆದಾಡಿ ಕೊಂಡಿದ್ದಾರೆ. ಬಳಿಕ ಅಬ್ದುಲ್ ತನ್ನ ಬಳಿಯಿದ್ದ ಚಾಕುವಿನಿಂದ ಶಾಕೀರ್ ಗೆ ಇರಿದು ಕೊಲೆ ಮಾಡಿದ್ದಾನೆ.

    ಘಟನಾ ಸ್ಥಳದಲ್ಲಿ ಸಾವಿರಾರು ಜನರು ಸೇರಿದ್ದು, ಯಾರೊಬ್ಬರು ಹತ್ಯೆಯನ್ನು ತಡೆಯಲು ಮುಂದಾಗಲಿಲ್ಲ. ಹೊರತಾಗಿ ದೂರದಲ್ಲಿ ನಿಂತು ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚಾಕುವಿನಿಂದ ಕತ್ತು ಕೊಯ್ದು ಚಿನ್ನದಂಗಡಿ ಮಾಲೀಕನ ಬರ್ಬರ ಹತ್ಯೆ

    ಚಾಕುವಿನಿಂದ ಕತ್ತು ಕೊಯ್ದು ಚಿನ್ನದಂಗಡಿ ಮಾಲೀಕನ ಬರ್ಬರ ಹತ್ಯೆ

    ಚಿತ್ರದುರ್ಗ: ಚಾಕುವಿನಿಂದ ಕತ್ತು ಕೊಯ್ದು ಕೊಲೆ ಚಿನ್ನದಂಗಡಿ ಮಾಲೀಕನನ್ನು ಬರ್ಬರವಾಗಿ ಕೊಲೆಗೈದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಕಲ್ಯಾಣ್ ಸಿಂಗ್ (54) ಬರ್ಬರವಾಗಿ ಕೊಲೆಯಾದ ಚಿನ್ನದಂಗಡಿ ಮಾಲೀಕ. ಈ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ರಾಮಗಿರಿ ಗ್ರಾಮದಲ್ಲಿ ನಡೆದಿದೆ.

    ವ್ಯಾಪಾರ ವಹಿವಾಟಿಗೆ ಸ್ನೇಹಿತರ ನಡುವೆ ಗಲಾಟೆ ನಡೆದು, ಗೊತ್ತಿಲ್ಲದ ಊರಿಗೆ ಬಂದು ಕಲ್ಯಾಣ್ ಸಿಂಗ್ ಹೆಣವಾಗಿದ್ದಾರೆ. ಕೊಲೆಗೈದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಸದ್ಯ ಸ್ಥಳಕ್ಕೆ ಸ್ಥಳೀಯ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv