Tag: Organisation

  • ಮಿಮಿಕ್ರಿ ಮಾಡಿಯೇ 70 ಕೋಟಿ ಲೂಟಿ- ಪತ್ನಿಗೆ ಬಿಡಿಗಾಸು, ಪ್ರೇಯಸಿಗೆ ಕೋಟಿ ಕೋಟಿ..!

    ಮಿಮಿಕ್ರಿ ಮಾಡಿಯೇ 70 ಕೋಟಿ ಲೂಟಿ- ಪತ್ನಿಗೆ ಬಿಡಿಗಾಸು, ಪ್ರೇಯಸಿಗೆ ಕೋಟಿ ಕೋಟಿ..!

    ಬೆಂಗಳೂರು: ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಮಾಲೀಕನಿಗೆ ಕೋಟಿ ಕೋಟಿ ವಂಚನೆ ಮಾಡಿ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ನೂರಾರು ಬ್ರಾಂಚ್‍ಗಳನ್ನು ಹೊಂದಿರುವ ಮಣಿಪಾಲ್ ಗ್ರೂಪ್‍ನಲ್ಲಿ ಇಂಥದ್ದೊಂದು ವಂಚನೆ ನಡೆದಿದೆ. ಸಂದೀಪ್ ಗುರುರಾಜ್ ಕಂಪನಿಯ ಹೈ ಸೆಕ್ಯೂರಿಟಿ ಬೇಧಿಸಿ ಕೋಟ್ಯಂತರ ರೂ. ವಂಚನೆ ಮಾಡಿದ ವ್ಯಕ್ತಿ. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯ ಜೆ.ಡಬ್ಲ್ಯು ಮೆರಿಯಟ್‍ನಲ್ಲಿರುವ ಮಣಿಪಾಲ್ ಇಂಟಿಗ್ರೇಟೆಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‍ನಲ್ಲಿ ಕಳೆದ ಹದಿನಾಲ್ಕು ವರ್ಷಗಳಿಂದ ಡಿಜಿಎಂ ಆಗಿ ಕೆಲಸ ಮಾಡುತ್ತಿದ್ದ ಈತನಿಗೆ ಕಂಪನಿಯ ಹಣದ ಮೇಲೆ ಕಣ್ಣು ಬಿದ್ದಿತ್ತು. ಆದರೆ ಹಣ ಹೊಡೆಯೋದು ಅಷ್ಟು ಸುಲಭವಾಗಿರಲಿಲ್ಲ.

    ಮಣಿಪಾಲ್ ಗ್ರೂಪ್‍ನ ಎಲ್ಲಾ ಹಣದ ವ್ಯವಹಾರಗಳು ನಡೆಯೋದು ಆಫ್ರಿಕಾ ದೇಶದ ಮಾರಿಷೆಸ್‍ನಲ್ಲಿ. ಅಲ್ಲಿನ ಬ್ಯಾಂಕ್‍ನಲ್ಲಿ ಯಾವುದೇ ಹಣ ವರ್ಗಾವಣೆ ಮಾಡಬೇಕಾದ್ರೂ ಮಣಿಪಾಲ್ ಎಂ.ಡಿ ರಂಜಿತ್ ಪೈ ವಾಯ್ಸ್ ಕೋಡ್ ಮ್ಯಾಚ್ ಆಗಬೇಕು. ವಾಯ್ಸ್ ಕೊಡ್ ಮ್ಯಾಚ್ ಆದಲ್ಲಿ ಮಾತ್ರ ಹಣ ವರ್ಗಾವಣೆ ಮಾಡಬಹುದು. ಈ ವಿಚಾರ ತಿಳಿದ ಡಿಜಿಎಂ ಸಂದೀಪ್ ಗುರುರಾಜ್, ವರ್ಷಗಳ ಕಾಲ ರಂಜಿತ್ ಪೈರವರ ವಾಯ್ಸ್ ಮಿಮಿಕ್ರಿ ಮಾಡೋದು ಕಲೀತಿದ್ದ. ಇದನ್ನೇ ಬಳಸಿಕೊಂಡು, ಇಂಡಿಯಾದಲ್ಲಿ ಹತ್ತು ಕೋಟಿ, ವಿದೇಶಗಳಲ್ಲಿ 60 ಕೋಟಿ ಸೇರಿದಂತೆ 70 ಕೋಟಿ ಹಣ ಹಣವನ್ನು ಅಕ್ರಮವಾಗಿ ಟಾನ್ಸ್ ಫರ್ ಮಾಡಿದ್ದನು.

    ಅಸಲಿಗೆ ಡಿಜಿಎಂ ಸಂದೀಪ್ ಗುರುರಾಜ್‍ಗೆ ಈ ರೀತಿಯ ಐಡಿಯಾ ಬಂದಿದ್ದು, ಅದೇ ಕಂಪನಿಯಲ್ಲಿ ಎಚ್‍ಆರ್ ಆಗಿ ಕೆಲಸ ಮಾಡ್ತಿದ್ದ ಅಮೃತಾಳ ಮೋಹದಿಂದ. ಅಮೃತಾಳಿಗೆ ಹಣದ ಆಸೆ ತೋರಿಸಿದ ಡಿಜಿಎಂ, ಮಾರಿಷಸ್‍ನಲ್ಲಿದ್ದ ಹೈ ಸೆಕ್ಯೂರಿಟಿ ಬ್ಯಾಂಕ್ ನಿಂದ ಮಾಲೀಕನ ವಾಯ್ಸ್, ಕೋಡ್ ವರ್ಡ್ಸ್ ಬಳಸಿ, ಹಂತ ಹಂತವಾಗಿ ಕೋಟಿ ಕೋಟಿ ಹಣವನ್ನು ಟಾನ್ಸ್‍ಫರ್ ಮಾಡಿಕೊಂಡಿದ್ದಾನೆ. ಅದರಲ್ಲಿ 52 ಕೋಟಿಯಷ್ಟು ಹಣವನ್ನು ಅಮೃತಾಳ ಅಕೌಂಟ್‍ಗೆ ಹಾಕಿದ್ರೆ, ತನ್ನ ಪತ್ನಿಯ ಅಕೌಂಟ್‍ಗೆ ಎಂಟು ಕೋಟಿ ಹಣ ವರ್ಗಾವಣೆ ಮಾಡಿದ್ದ. ಕೊನೆಗೆ ಇನ್ನು ಹತ್ತು ಕೋಟಿ ಹಣ ಟಾನ್ಸ್ ಫರ್ ಮಾಡುವ ವೇಳೆ ಮಾರಿಷಸ್ ಬ್ಯಾಂಕ್ ಅಧಿಕಾರಿಗಳಿಗೆ ಡೌಟ್ ಬಂದು ಎಂಡಿ ರಂಜಿತ್ ಪೈ ಗಮನಕ್ಕೆ ತಂದ ವೇಳೆ ಡಿಜಿಎಂ ಸಂದೀಪ್ ಗುರುರಾಜ್‍ನ ಅಸಲಿ ಮುಖವಾಡ ಬಯಲಾಗಿದೆ.

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು, ಪ್ರಮುಖ ಆರೋಪಿ ಡಿಜಿಎಂ ಸಂದೀಪ್ ಗುರುರಾಜ್, ಪತ್ನಿ ಚಾರು ಸ್ನೀತಾ, ಪ್ರೇಯಸಿ ಅಮೃತಾ ಮತ್ತು ಆಕೆಯ ತಾಯಿ ಮೀರಾ ಚಂಗಪ್ಪರನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಾಜ್ ಕುಮಾರ್, ಕಾವೇರಿ ನದಿ ಬಗ್ಗೆ ಮಾತಾನಾಡಿದ್ದಕ್ಕೆ ಗೇಟ್‍ಪಾಸ್- ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕೆಂದು ಮನವಿ

    ರಾಜ್ ಕುಮಾರ್, ಕಾವೇರಿ ನದಿ ಬಗ್ಗೆ ಮಾತಾನಾಡಿದ್ದಕ್ಕೆ ಗೇಟ್‍ಪಾಸ್- ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕೆಂದು ಮನವಿ

    ಬೆಂಗಳೂರು: ಡಾ. ರಾಜ್ ಕುಮಾರ್ ಬಗ್ಗೆ ಮಾತಾನಾಡಿದ್ದಕ್ಕೆ ತಮಿಳು ಚಿತ್ರರಂಗದಿಂದ ಕನ್ನಡ ನಟನನ್ನು ಬಹಿಷ್ಕಾರ ಮಾಡಿದನ್ನು ಖಂಡಿಸಿ ಕರ್ನಾಟಕ ಸಂಘಟನೆ ಒಕ್ಕೂಟಗಳು ವಾಣಿಜ್ಯ ಮಂಡಳಿಗೆ ದೂರು ನೀಡಿ ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡಿದೆ.

    ನಟ ಯೋಗೇಶ್ ತಮಿಳಿನ ‘ಪಾರ್ತಿಬನ್ ಕಾದಲ್’ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಯೋಗೇಶ್ ವರನಟ ಡಾ. ರಾಜ್ ಕುಮಾರ್ ಮತ್ತು ಕಾವೇರಿ ನದಿ ಬಗ್ಗೆ ಮಾತಾನಾಡಿದ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗ ಯೋಗೇಶ್‍ನನ್ನು ಹೊರದಬ್ಬಿದೆ.

    ಇದನ್ನು ಖಂಡಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟದಿಂದ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಇದು ವರನಟ ರಾಜ್ ಕುಮಾರ್ ಅವರಿಗೆ ಆಗಿರುವ ಅವಮಾನ. ಇನ್ನೂ ಮುಂದೆ ರಾಜ್ಯದಲ್ಲಿ ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡಿದೆ.

    ಏನಿದು ವಿವಾದ?
    ಕನ್ನಡ ನಟ ಯೋಗಿ ತಮಿಳಿನ ಪಾರ್ತಿಬನ್ ಕಾದಲ್ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಈ ಚಿತ್ರದ ಮೋಷನ್ ಪೋಸ್ಟರ್ ಕೂಡ ಚೆನ್ನೈಯಲೇ ಬಿಡುಗಡೆಯಾಗಿತ್ತು. ಆದೆ ಕಾರ್ಯಕ್ರಮ ಮುಗಿದ ಮೇಲೆ ತಮಿಳು ಪತ್ರಕರ್ತರು ಸಿನಿಮಾ ತಂಡವನ್ನು ಪ್ರಶ್ನೆ ಮಾಡಲು ಶುರು ಮಾಡಿದ್ದರು. ಸಿನಿಮಾದ ಬಗ್ಗೆ ಪ್ರಶ್ನೆ ಮುಗಿದ ಬಳಿಕ ಕಾವೇರಿ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಸಾರ್ ನಮ್ಗೆ ನೀರಿಲ್ಲ ನಿಮಗೆ ಬೇಕು ಅಂದ್ರೆ ಹೇಗೆ, ಮಂಡ್ಯ ಅಂತಾ ಊರಿದೆ ಅಲ್ಲಿ ಎಷ್ಟು ಕಷ್ಟಪಡ್ತಾರೆ ಜನ ಅಂತಾ ನೀವೇ ನೋಡಿ ಅಂತಾ ಯೋಗಿ ಉತ್ತರಿಸಿದ್ದರು. ಅಷ್ಟಕ್ಕೆ ಮುಗಿಸದೇ ಪ್ರರ್ತಕರ್ತರು ನಿಮಗೆ ರಾಜ್‍ಕುಮಾರ್ ಇಷ್ಟನೋ ಅಥವಾ ರಜನಿಕಾಂತ್ ಅನ್ನೋ ಪ್ರಶ್ನೆ ಕೇಳಿದ್ದರು. ಇದಕ್ಕೆ ಯೋಗಿ ನನಗೆ ಅಣ್ಣಾವ್ರೇ ಇಷ್ಟ ಎಂದು ಉತ್ತರಿಸಿದ್ದರು.

    ಯೋಗಿ ಅವರ ಈ ಮಾತುಗಳನ್ನು ಹಿಡಿದುಕೊಂಡು ಕನ್ನಡ ನಟನ ಅಭಿಪ್ರಾಯ ಬೇರೆ ಮಾಡಲು ಅಲ್ಲಿನ ಮಾಧ್ಯಮ ಪ್ರಯತ್ನಿಸಿತ್ತು. ಇದರ ಪರಿಣಾಮವಾಗಿ ಪಾರ್ತಿಬನ್ ಕಾದಲ್ ಸಿನಿಮಾದಿಂದ ಯೋಗಿ ಅವರನ್ನು ಗೇಟ್‍ಪಾಸ್ ನೀಡಿದ್ದರು. ಅಷ್ಟೇ ಅಲ್ಲದೇ ಈ ರೀತಿ ಮಾತಾನಾಡಬಾರದಿತ್ತು ಎಂದು ನಿರ್ಮಾಪಕರು ಬುದ್ಧಿ ಮಾತು ಹೇಳಿ ಯೋಗಿಯನ್ನು ಹೊರದಬ್ಬಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv