Tag: orderly system

  • ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದ್ಧತಿ ಜೀವಂತ – ಮಾಹಿತಿ ಆಯೋಗದಿಂದ ಗೃಹ ಇಲಾಖೆಗೆ ನೋಟಿಸ್

    ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದ್ಧತಿ ಜೀವಂತ – ಮಾಹಿತಿ ಆಯೋಗದಿಂದ ಗೃಹ ಇಲಾಖೆಗೆ ನೋಟಿಸ್

    ಬೆಂಗಳೂರು: ಶಿಸ್ತಿನ ಪೊಲೀಸ್ ಇಲಾಖೆಯಲ್ಲೇ ಅಶಿಸ್ತು ತಾಂಡವವಾಡ್ತಿದೆ. ಪೊಲೀಸ್ ಮಹಾನಿರ್ದೇಶಕರಿಂದ ಹಿಡಿದು ಇನ್ಸ್‍ಪೆಕ್ಟರ್ ಮನೆವರೆಗೂ ಪೊಲೀಸ್ ಜೀತದಾಳುಗಳಿದ್ದಾರೆ. ಬೆಳಗ್ಗೆ ಕಸ ಹೊಡೆಯೋದ್ರಿಂದ ಹಿಡಿದು ಹೆಂಡತಿ ಮಕ್ಕಳ ಬಟ್ಟೆ ಒಗೆಯೋಕು ಪೊಲೀಸ್ರೇ ಬೇಕು. ಕೇವಲ ಪೊಲೀಸ್ ಅಧಿಕಾರಿಗಳು ಮಾತ್ರವಲ್ಲ, ಸಚಿವ ಕೆ.ಜೆ ಜಾರ್ಜ್ ಮನೆಯಲ್ಲಿಯೇ ಪೊಲೀಸ್ ಜೀತದಾಳುಗಳಿದ್ದಾರೆ.

    ಮಾಹಿತಿ ಆಯೋಗವೇ ಕೇಳಿದ ಮಾಹಿತಿಯಲ್ಲಿ 100ಕ್ಕೂ ಹೆಚ್ಚು ಆರ್ಡರ್ಲಿ ಇದ್ದಾರೆ ಅಂತ ಸ್ವತಃ ಗೃಹ ಇಲಾಖೆಯೇ ಒಪ್ಪಿಕೊಂಡಿದೆ. ಈ ಸಂಬಂಧ ಗೃಹ ಇಲಾಖೆಗೆ ಮಾಹಿತಿ ಆಯೋಗ ನೊಟೀಸ್ ನೀಡಿದೆ. ಮಾಹಿತಿ ಆಯೋಗದ ಮುಖ್ಯ ಆಯುಕ್ತರು ನೋಟಿಸ್ ನೀಡಿದ್ದು, ಸರ್ಕಾರದ ಆದೇಶ ಪಾಲನೆ ಮಾಡಿ. ಆದೇಶ ಅನುಷ್ಠಾನಗೊಳಿಸಿ ಒಂದು ತಿಂಗಳೊಳಗೆ ವಾಸ್ತವ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ.

    ಶಿಸ್ತು ಪಾಲಿಸಬೇಕಾದ ಇಲಾಖೆಯಲ್ಲಿ ಅಶಿಸ್ತು ಇದೆ. ಆರ್ಡರ್ಲಿ ರದ್ದು ಮಾಡಿ ಸರ್ಕಾರ ಆದೇಶಿಸಿದೆ. ಆದರೂ ಮೌಖಿಕ ಆದೇಶದ ಮೂಲಕ ಆರ್ಡರ್ಲಿ ಪದ್ದತಿ ಮುಂದುವರಿದಿದೆ. ಇದು ಸರ್ಕಾರದ ಆದೇಶದ ಸ್ಪಷ್ಟ ಉಲ್ಲಂಘನೆ ಎಂದು ಮಾಹಿತಿ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.

    ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾದ ಬೆನ್ನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಇಂದಿನಿಂದಲೇ ರಾಜ್ಯಾದ್ಯಂತ ಆರ್ಡರ್ಲಿ ಇರಲ್ಲ ಅಂತ ಹೇಳಿದ್ರು. ಈಗಾಗಲೇ ರಾಜ್ಯದಲ್ಲಿ ಮೂರು ಸಾವಿರ ಆರ್ಡರ್ಲಿ ಇದ್ದಾರೆ. ಅದಕ್ಕೆ ಇರುವ ಅಧಿಕಾರಿಗಳಿಗೆ ಬೇರೆಯವರ ನೇಮಕ ಮಾಡಿಕೊಡಲಾಗುತ್ತೆ. ಅವರನ್ನೆಲ್ಲಾ ಇನ್ಮುಂದೆ ಮುಕ್ತಿಗೊಳಿಸುತ್ತೇವೆ. ಸದ್ಯ ಪ್ರೋಸಸ್ ನಡೆಯುತ್ತಿದ್ದು, ಸದ್ಯದಲ್ಲೇ ಎಲ್ಲಾ ಆರ್ಡರ್ಲಿ ಇರಲ್ಲ ಅಂದ್ರು.

  • ಗೃಹ ಇಲಾಖೆಯಿಂದ ಆರ್ಡರ್ಲಿ ಪದ್ದತಿ ರದ್ದು

    ಗೃಹ ಇಲಾಖೆಯಿಂದ ಆರ್ಡರ್ಲಿ ಪದ್ದತಿ ರದ್ದು

    ಬೆಂಗಳೂರು: ಪೊಲೀಸರಿಗೆ ಸಿಹಿ ಸುದ್ದಿ. ಬ್ರಿಟೀಷರ ಬಳುವಳಿ ಎಂಬಂತೆ ಪೊಲೀಸ್ ಇಲಾಖೆಯಲ್ಲಿ ಬಂದಿದ್ದ ಆರ್ಡರ್ಲಿ ಪದ್ಧತಿಗೆ ತಿಲಾಂಜಲಿ ಇಡಬೇಕು ಅನ್ನೋ ಕೂಗಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಶೇ.50 ರಷ್ಟು ಸಿಬ್ಬಂದಿಯನ್ನು ಈ ಕೂಡಲೇ ಎಲ್ಲಾ ಅಧಿಕಾರಿಗಳು ವಾಪಸ್ ಕಳುಹಿಸುವಂತೆ ಸೂಚಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

    ಬಿಡುಗಡೆಗೊಂಡ ಸಿಬ್ಬಂದಿಯ ಸ್ಥಳದಲ್ಲಿ ಖಾಸಗಿ ಅನುಯಾಯಿಗಳನ್ನು ನೇಮಿಸಿಕೊಳ್ಳುವಂತೆ ಸೂಚಿಸಿದ್ದು, ಭತ್ಯೆ ರೂಪದಲ್ಲಿ ಹಣ ಪಾವತಿ ಮಾಡುವುದಾಗಿ ಗೃಹ ಇಲಾಖೆ ಕೂಡ ಆದೇಶದಲ್ಲಿ ತಿಳಿಸಿದೆ. ಬೆಂಗಳೂರೊಂದರಲ್ಲೇ ವಿವಿಧ ದರ್ಜೆ ಅಧಿಕಾರಿಗಳ ಮನೆಗಳಲ್ಲಿ 1239 ಮಂದಿ ಸಿಎಆರ್ ಸಿಬ್ಬಂದಿ ಆರ್ಡರ್ಲಿ ಪದ್ಧತಿಯ ಅಡಿಯಲ್ಲಿ ಕೆಲಸ ಮಾಡ್ತಿದ್ದಾರೆ.

    ಸಾಕಷ್ಟು ಖರ್ಚು ಮಾಡಿ ತರಬೇತಿ ನೀಡಿರೋ ಪೊಲೀಸ್ ಸಿಬ್ಬಂದಿಯನ್ನು ಮನೆಗಳ ಕೆಲಸಕ್ಕೆ ಬಳಕೆ ಮಾಡೋದು ಎಷ್ಟು ಸರಿ ಅನ್ನೋ ಕೂಗು ಹತ್ತಾರು ವರ್ಷಗಳಿಂದಲೂ ಕೇಳಿಬರ್ತಿತ್ತು. ಈಗ ರಾಜ್ಯ ಸರ್ಕಾರ ಅರ್ಧದಷ್ಟು ಸಿಬ್ಬಂದಿಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.