Tag: Open defecation

  • ಬಹಿರ್ದೆಸೆ ಹೋದಾಗ ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ- ಕುಟುಂಬದಲ್ಲಿ ನಿಲ್ಲದ ಬಯಲು ಮಲವಿಸರ್ಜನೆ

    ಬಹಿರ್ದೆಸೆ ಹೋದಾಗ ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ- ಕುಟುಂಬದಲ್ಲಿ ನಿಲ್ಲದ ಬಯಲು ಮಲವಿಸರ್ಜನೆ

    ಚಿತ್ರದುರ್ಗ: ಬಹಿರ್ದೆಸೆಗೆ ತೆರಳಿದ್ದ ವೇಳೆ 13 ವರ್ಷದ ಅಪ್ರಾಪ್ತೆ ಮೇಲೆ ಕಿಡಿಗೇಡಿಗಳು ಜುಲೈ 23 ರಂದು ಅತ್ಯಾಚಾರವೆಸಗಿ, ಕೊಲೆ ಮಾಡಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಕುಟುಂಬಸ್ಥರು, ಶೌಚಾಲಯ ನಿರ್ಮಿಸಿಕೊಳ್ಳದೆ, ಇನ್ನೂ ಬಹಿರ್ದೆಸೆಗೆ ತೆರಳುತ್ತಿದ್ದಾರೆ.

    ಅಪ್ರಾಪ್ತೆ ಮೇಲೆ ನಡೆದ ದುಶ್ಕ್ರತ್ಯದ ಬೆನ್ನತ್ತಿದ ಚಿತ್ರದುರ್ಗ ಪೊಲೀಸರು, ಪ್ರಕರಣ ನಡೆದು ಕೇವಲ 14 ದಿನಗಳಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆದರೆ ಈ ಕುಟುಂಬಕ್ಕೆ ಸಾಂತ್ವಾನಹೇಳುವ ನೆಪದಲ್ಲಿ ನಿತ್ಯವೂ ರಾಜಕಾರಣಿಗಳು, ಅಧಿಕಾರಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಸಚಿವ ಶ್ರೀರಾಮುಲು ಸಂತ್ರಸ್ತೆಯ ತಂದೆ, ತಾಯಿಯನ್ನು ಭೇಟಿಯಾಗಿ ಎರಡು ಲಕ್ಷ ರೂಪಾಯಿ ವೈಯಕ್ತಿಕ ಪರಿಹಾರ ನೀಡಿ ಸಾಂತ್ವಾನ ಹೇಳಿದ್ದಾರೆ.

    ಬಾಲಕಿಯ ಕುಟುಂಬಸ್ಥರು ಆಶ್ರಯ ಯೋಜನೆಯಡಿ ನೂತನ ಮನೆ ನಿರ್ಮಿಸಿದ್ದಾರೆ. ಸ್ವಂತ ಖರ್ಚಿನಲ್ಲಿ ಶೌಚಾಲಯವನ್ನೂ ಕಟ್ಟಿಸಿಕೊಂಡಿದ್ದಾರೆ. ಆದರೆ ಮಗಳನ್ನು ಕಳೆದುಕೊಂಡ ನೋವಿನಲ್ಲಿರುವ ಕುಟುಂಬ ನೂತನ ಮನೆಯನ್ನು ಉದ್ಘಾಟಿಸಿಲ್ಲ. ಹೀಗಾಗಿ ಇಂತಹ ಅಮಾನವೀಯ ಕೃತ್ಯ ನಡೆದರೂ ಸಂತ್ರಸ್ತೆಯ ಕುಟುಂಬದವರು ಬಯಲು ಶೌಚಕ್ಕೆ ತೆರಳುತ್ತಿದ್ದಾರೆ.

    ಸರ್ಕಾರದಿಂದ ಹಳ್ಳಿಗಳಲ್ಲಿ ಬಯಲು ಶೌಚಾಲಯ ಮುಕ್ತವಾಗಿಸಲು ಗ್ರಾಮ ಪಂಚಾಯಿತಿಯಿಂದಲೇ ಶೌಚಾಲಯ ನಿರ್ಮಿಸುವ ಯೋಜನೆಯಿದ್ದರೂ ಈ ಗ್ರಾಮದಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿಲ್ಲ. ಶೌಚಾಲಯ ನಿರ್ಮಿಸುವ ಯೋಜನೆಯ 12,000ರೂ. ಹಣವೂ ಗ್ರಾಮ ಪಂಚಾಯಿತಿ ಪಿಡಿಓ ಹಾಗೂ ಇತರೆ ಅಧಿಕಾರಿಗಳ ಜೇಬು ಸೇರುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ. ಈ ಬಗ್ಗೆ ಗ್ರಾಮಪಂಚಾಯಿತಿ ಪಿಡಿಒ ವೀರೇಶ್ ಅವರನ್ನು ಕೇಳಿದರೆ, ಅವರೇ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೆ ಇನ್ನೂ ಬಳಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

    ಘಟನೆಯಿಂದ ಮನನೊಂದಿರುವ ಸಂತ್ರಸ್ತೆಯ ಕುಟುಂಬಸ್ಥರು ಸಹ ಆರೋಪಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಕುಟುಂಬಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳಾದ ನೀರು, ಶೌಚಾಲಯದ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ.

  • ಜಮೀನಿನಲ್ಲಿ ಶೌಚ ಮಾಡಿದಕ್ಕೆ ಕೊಲೆಗೈದ್ರು!

    ಜಮೀನಿನಲ್ಲಿ ಶೌಚ ಮಾಡಿದಕ್ಕೆ ಕೊಲೆಗೈದ್ರು!

    ರಾಂಚಿ: ಜಮೀನಿನಲ್ಲಿ ಶೌಚ ಮಾಡಿದ ಅಂತಾ 45 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ, ಕೊಲೆಗೈದಿರುವ ಅಮಾನವೀಯ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

    ಪಲಮು ಜಿಲ್ಲೆಯ ಸುಕ್ರಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಘಟನೆ ನಡೆದಿದೆ. ಮೃತ ವ್ಯಕ್ತಿಯ ಪುತ್ರ ಶುಕ್ರವಾರ ಸುಕ್ರಾ ಬಜಾರ್ ಠಾಣೆಯಲ್ಲಿ ದೂರ ದಾಖಲಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಮಹೇಂದ್ರ ಮತ್ತು ಚೋಟುಕುಮಾರ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?:
    ಮೃತ ವ್ಯಕ್ತಿ ಹಾಗೂ ಕೊಲೆಗೈದ ಆರೋಪಿಗಳು ಸಂಬಂಧಿಕರಾಗಿದ್ದು, ಇಬ್ಬರ ನಡುವೆ ಜಮೀನು ವಾಜ್ಯದ ವಿಚಾರವಾಗಿ ಈ ಹಿಂದೆಯೂ ಜಗಳವಾಗಿತ್ತು. ಶೌಚಕ್ಕೆಂದು ವ್ಯಕ್ತಿ ಗುರುವಾರ ಜಮೀನಿಗೆ ಹೋಗಿದ್ದ. ಇದನ್ನು ನೋಡಿ, ಅಲ್ಲಿಗೆ ಬಂದ ಆರೋಪಿಗಳು ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ಸಹಾಯ ಮಾಡಿದ್ದ ಮಹಿಳೆಯೊಬ್ಬಳು ಘಟನೆಯಲ್ಲಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಯಲಿನಲ್ಲಿ ಶೌಚ ಮಾಡಿದ್ರೆ ಇನ್ಮುಂದೆ ಬೀಳುತ್ತೆ ಭಾರೀ ದಂಡ!

    ಬಯಲಿನಲ್ಲಿ ಶೌಚ ಮಾಡಿದ್ರೆ ಇನ್ಮುಂದೆ ಬೀಳುತ್ತೆ ಭಾರೀ ದಂಡ!

    ಮುಂಬೈ: ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಬಯಲಿನಲ್ಲಿ ಶೌಚ ಮಾಡಿದರೆ 500 ರೂ. ದಂಡ ವಿಧಿಸಲು ರಾಜ್ಯ ಸರ್ಕಾರ ನಿಯಮವನ್ನು ಜಾರಿ ಮಾಡಿದೆ.

    ಮಹಾರಾಷ್ಟ್ರ ಸರ್ಕಾರ ಬಯಲಿನಲ್ಲಿ ಶೌಚ ಮಾಡೋದು, ಉಗುಳುವುದು, ಮೂತ್ರ ವಿಸರ್ಜನೆ, ರಸ್ತೆ ಬದಿ ಕಸ ಹಾಕೋದು ಸೇರಿದಂತೆ ಎಲ್ಲ ಗಲೀಜು ಕೆಲಸಗಳಿಗೆ ದಂಡವನ್ನು ವಿಧಿಸುವಂತೆ ನಗರ ಅಭಿವೃದ್ಧಿ ಇಲಾಖೆ ಹೊಸ ನಿಯಮವನ್ನು ಜಾರಿಗೆ ತಂದಿದೆ.

    ನಗರ ಪ್ರದೇಶ ಸೇರಿದಂತೆ ಎ, ಬಿ, ಸಿ ಮತ್ತು ಡಿ ಕೆಟಗಿರಿಯ ಸ್ಥಳಗಳಲ್ಲಿಯೂ ದಂಡದ ಪ್ರಮಾಣ ಒಂದೇ ಆಗಿರಲಿದೆ. ಇಂದಿನಿಂದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಿದರೆ ಸ್ಥಳದಲ್ಲಿಯೇ 150 ರೂ. ದಿಂದ 180 ರೂ.ನಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.

    ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ಮೂಲಕ ಗಲೀಜು ಮಾಡಿದರೆ 100 ರಿಂದ 150 ರೂ. ದಂಡ ಕಟ್ಟಬೇಕಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜಿಸಿದರೆ 150 ರಿಂದ 200 ರೂ.ವರೆಗೆ ದಂಡವನ್ನು ಪಾವಸಿಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

    ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಅಭಿಯಾನವನ್ನ ಆರಂಭಿಸಿದ ರೀತಿಯಲ್ಲಿಯೇ ಮಹಾರಾಷ್ಟ್ರ ಸರ್ಕಾರ ಕೂಡ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ. 2017ರ ಅಕ್ಟೋಬರ್ 1 ರಂದು ಭೇಟಿ ನೀಡಿದ್ದ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಹಾರಾಷ್ಟ್ರದ ಎಲ್ಲ ನಗರ ಪ್ರದೇಶಗಳು ಬಯಲು ಶೌಚಾಲಯದಿಂದ ಮುಕ್ತವಾಗಿದೆ ಅಂತಾ ಘೋಷಿಸಿದ್ದರು.