Tag: online shoping

  • ರಾಮಮಂದಿರ ಪ್ರಸಾದ ಅಂತಾ ಸ್ವೀಟ್‌ ಮಾರಾಟ – ಆನ್‌ಲೈನ್‌ ಶಾಪಿಂಗ್‌ ಸಂಸ್ಥೆಗೆ ನೋಟಿಸ್‌

    ರಾಮಮಂದಿರ ಪ್ರಸಾದ ಅಂತಾ ಸ್ವೀಟ್‌ ಮಾರಾಟ – ಆನ್‌ಲೈನ್‌ ಶಾಪಿಂಗ್‌ ಸಂಸ್ಥೆಗೆ ನೋಟಿಸ್‌

    ನವದೆಹಲಿ: ‘ಶ್ರೀರಾಮ ಮಂದಿರ ಅಯೋಧ್ಯೆ ಪ್ರಸಾದ’ ಹೆಸರಿನಲ್ಲಿ ಸ್ವೀಟ್ಸ್‌ ಮಾರಾಟ ಮಾಡುತ್ತಿರುವ ಆರೋಪದ ಮೇಲೆ ಆನ್‌ಲೈನ್‌ ಶಾಪಿಂಗ್‌ ಸಂಸ್ಥೆಯೊಂದಕ್ಕೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ.

    ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಇನ್ನೂ ಆಗಿಲ್ಲ. ಈ ಹೊತ್ತಿನಲ್ಲಿ ರಾಮಮಂದಿರದ ಪ್ರಸಾದ ಎಂದು ಹೇಳಿಕೊಂಡು ಸ್ವೀಟ್ಸ್‌ ಮಾರಾಟ ಮಾಡುವ ಮೂಲಕ ಗ್ರಾಹಕರ ದಾರಿ ತಪ್ಪಿಸಲಾಗುತ್ತಿದೆ ಎಂದು ಆನ್‌ಲೈನ್‌ ಶಾಪಿಂಗ್‌ ಸಂಸ್ಥೆಯೊಂದರ ವಿರುದ್ಧ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ದೂರು ನೀಡಿತ್ತು. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಕಣ್ತುಂಬಿಕೊಳ್ಳಲು ರಾಜ್ಯದಲ್ಲಿ ಸೋಮವಾರ ರಜೆ ಘೋಷಿಸಿ: ಸಿಎಂಗೆ ತೇಜಸ್ವಿ ಸೂರ್ಯ ಮನವಿ

    ಈ ಸಂಬಂಧ ಸಂಸ್ಥೆಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದೆ. ಇಂತಹ ಕ್ರಮಗಳು ಗ್ರಾಹಕರನ್ನು ತಪ್ಪುದಾರಿಗೆಳೆಯುತ್ತವೆ. ಗ್ರಾಹಕರ ಖರೀದಿ ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತವೆ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಎಚ್ಚರಿಸಿದೆ.

    ಆನ್‌ಲೈನ್‌ ಶಾಪಿಂಗ್‌ ಸಂಸ್ಥೆಗೆ ಸಿಸಿಪಿಎ ನೋಟಿಸ್‌ ನೀಡಿದ್ದು, 7 ದಿನಗಳ ಒಳಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ. ಇಲ್ಲದಿದ್ದರೆ, ಗ್ರಾಹಕ ಸಂರಕ್ಷಣಾ ಕಾಯ್ದೆ,-2019 ರ ನಿಬಂಧನೆಗಳ ಅಡಿಯಲ್ಲಿ ಕಂಪನಿಯ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ತಲೆ ಎತ್ತಿದೆ 15 ಅಡಿ ರಾಮನ ಮೂರ್ತಿ!

    ಜನವರಿ 22 ರಂದು ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಜರುಗಲಿದೆ. ಈ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ರಾಮಜಪ, ಶ್ರೀರಾಮ ಭಜನೆ ಮಾಡಲಾಗುತ್ತಿದೆ. ದೇಶದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.

  • ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಬಂದಿದ್ದು ಆಲೂಗಡ್ಡೆ- ಗ್ರಾಹಕ ಕಕ್ಕಾಬಿಕ್ಕಿ!

    ಆರ್ಡರ್ ಮಾಡಿದ್ದು ಡ್ರೋನ್ ಕ್ಯಾಮೆರಾ, ಬಂದಿದ್ದು ಆಲೂಗಡ್ಡೆ- ಗ್ರಾಹಕ ಕಕ್ಕಾಬಿಕ್ಕಿ!

    ಪಾಟ್ನಾ: ಸಾಮಾನ್ಯವಾಗಿ ಹಬ್ಬಗಳಿಗೆ ಆನ್‍ಲೈನ್ ಶಾಪಿಂಗ್‍ (Online Shopping) ನಲ್ಲಿ ಗ್ರಾಹಕರನ್ನು ಆಕರ್ಷಿಸಲು ಭರ್ಜರಿ ರಿಯಾಯಿತಿಗಳನ್ನು ಕೊಡಲಾಗುತ್ತಿದೆ. ಇದರಿಂದ ಕೆಲವರು ಮೋಸ ಕೂಡ ಹೋಗುತ್ತಾರೆ. ಇತ್ತೀಚೆಗಷ್ಟೇ ದೆಹಲಿಯ ವ್ಯಕ್ತಿಯೊಬ್ಬರು ಲ್ಯಾಪ್‍ಟಾಪ್ (Laptop) ಬದಲಿಗೆ ಡಿಟರ್ಜೆಂಟ್ ಬಾರ್ ಗಳನ್ನು ರಿಸೀವ್ ಮಾಡಿಕೊಳ್ಳುವ ಮೂಲಕ ಭಾರೀ ಸುದ್ದಿಯಾಗಿತ್ತು. ಇದೀಗ ಇಂಥದ್ದೇ ಮತ್ತೊಂದು ಘಟನೆ ನಡೆದಿದೆ.

    ಬಿಹಾರ ನಳಂದದ ಪರ್ವಾಲ್‍ಪುರದ ವ್ಯಕ್ತಿಯೊಬ್ಬ ಮೀಶೋದಲ್ಲಿ ಡ್ರೋನ್ ಕ್ಯಾಮೆರಾ (Drone Camera) ಆರ್ಡರ್ ಮಾಡಿದ್ದಾರೆ. ಆದರೆ ಇದೀಗ ಅವರ ಮನೆ ಬಾಗಿಲಿಗೆ ಡ್ರೋನ್ ಬದಲಿಗೆ ಒಂದು ಕೆ.ಜಿ ಆಲೂಗಡ್ಡೆ ಬಂದಿದ್ದು, ಅಚ್ಚರಿ ಪಡುವಂತೆ ಮಾಡಿದೆ. ಸದ್ಯ ಪಾರ್ಸೆಲ್ ಅನ್‍ಬಾಕ್ಸ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ವೀಡಿಯೊದಲ್ಲಿ, ಗ್ರಾಹಕ ತನಗೆ ಬಂದ ಪಾರ್ಸೆಲ್ ಅನ್ನು ಅನ್‍ಬಾಕ್ಸ್ ಮಾಡಲು ಮೀಶೋ ಡೆಲಿವರಿ ಎಕ್ಸಿಕ್ಯೂಟಿವ್ ಬಳಿ ಹೇಳುತ್ತಾರೆ. ಡೆಲಿವರಿ ಬಾಯ್ ಪಾರ್ಸೆಲ್ ತೆರೆದಾಗ ಅದರಲ್ಲಿ ಡ್ರೋನ್ ಕ್ಯಾಮೆರಾ ಬದಲಿಗೆ 10 ಆಲೂಗಡ್ಡೆ (Potato) ಇರುವುದು ಬಯಲಾಗಿದೆ. ಇದರಿಂದ ಸಿಟ್ಟಿಗೆದ್ದ ಗ್ರಾಹಕ ಡೆಲಿಬಾಯ್ ಯನ್ನು ಬೈದಾಗ, ಆತ ಇದರಲ್ಲಿ ನನ್ನದೇನೂ ತಪ್ಪಿಲ್ಲ. ಬಾಕ್ಸ್ ಮಾಡಿ ವಿಳಾಸ ಹಾಕಿಟ್ಟಿದ್ದ ಪಾರ್ಸೆಲ್ ನಾನು ತಂದು ನಿಮಗೆ ತಲುಪಿಸಿದ್ದೇನೆ ಅಷ್ಟೇ ಎಂದು ಹೇಳಿದ್ದಾನೆ.

    ಮೀಶೋದಲ್ಲಿ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಕೊಂಡುಕೊಳ್ಳಬಹುದಾದ ಆಫರ್ ಬಿಟ್ಟಿದ್ದರು. ಹೀಗಾಗಿ ನಾನು ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದ್ದೇನೆ ಎಂದು ಗ್ರಾಹಕ ಚೈತನ್ಯ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ:  ಪುರೋಹಿತರ ಮಾತಿಗೆ ಮರುಳಾಗಿ ಸಮಾಧಿಯಾಗಿದ್ದವನ ರಕ್ಷಿಸಿದ ಪೊಲೀಸರು

    ಚೈತನ್ಯ ಅವರು ಆರ್ಡರ್ ಮಾಡಿದ ಡ್ರೋನ್ ಕ್ಯಾಮೆರಾದ ಮಾರುಕಟ್ಟೆ ಮೌಲ್ಯ 84,999 ರೂ. ಇದೆ. ಆದರೆ ಮೀಶೋನಲ್ಲಿ 10, 212 ರೂ. ಗೆ ಪಡೆದುಕೊಳ್ಳುವ ಅಂತ ಆಫರ್ ಬಿಟ್ಟಿದ್ದರು. ಮೊದಲು ಅನುಮಾನಗೊಂಡ ಚೈತನ್ಯ ನಂತರ ಅದನ್ನು ಕಂಪನಿಯೊಂದಿಗೆ ಸ್ಪಷ್ಟಪಡಿಸಲು ನಿರ್ಧರಿಸಿದರು. ಈ ವೇಳೆ ಮೀಶೋ ಕಂಪನಿಯವರು, ಆಫರ್ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯ್ಲಲಿ ಚೈತನ್ಯ ಅವರು ಸಂಪೂಣ್ ಹಣ ಪಾವತಿ ಮಾಡಿ ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದ್ದರು.

    ಚೈತನ್ಯ ಕುಮಾರ್ ಅವರ ದೂರಿನ ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪರ್ವಲಪುರ ಎಸ್‍ಎಚ್‍ಒ ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • 2ನೇ ಬಾರಿ ಮೋಸ ಹೋದ ಗ್ರಾಹಕ- ಮೊಬೈಲ್ ಬುಕ್ ಮಾಡಿದ್ರೆ ಬಂದಿದ್ದು ಬರೀ ಬಾಕ್ಸ್ ಮಾತ್ರ!

    2ನೇ ಬಾರಿ ಮೋಸ ಹೋದ ಗ್ರಾಹಕ- ಮೊಬೈಲ್ ಬುಕ್ ಮಾಡಿದ್ರೆ ಬಂದಿದ್ದು ಬರೀ ಬಾಕ್ಸ್ ಮಾತ್ರ!

    ಬೆಳಗಾವಿ: ಪ್ರತಿಷ್ಠಿತ ಆನ್ ಲೈನ್ ಕಂಪನಿಯಿಂದ ವ್ಯಕ್ತಿಯೊಬ್ಬರು ಎರಡನೇ ಬಾರಿ ಮೋಸ ಹೋದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ನಡೆದಿದೆ.

    ಕುಡಚಿ ಪಟ್ಟಣ ನಿವಾಸಿ ವರ್ಧಮಾನ ಬಾಲೋಜಿ ಎಂಬವರು ಫ್ಲಿಪ್‍ಕಾರ್ಟ್ ಮೂಲಕ್ ಲೆನೊವೊ ನೋಟ್ ಮೊಬೈಲ್ ಫೋನ್ ಬುಕ್ ಮಾಡಿದ್ದರು. ಆದ್ರೆ ಇದೀಗ ಅವರಿಗೆ ಕಂಪೆನಿಯಿಂದ ಮೊಬೈಲ್ ಬದಲು ಖಾಲಿ ಇರುವ ಲೆನೊವೊ ಕಂಪನಿಯ ಬಾಕ್ಸ್ ಮಾತ್ರ ಬಂದಿದೆ.

    ಈ ಮೊದಲು ವರ್ಧಮಾನ ಅವರು ಮೊಬೈಲ್ ಬುಕ್ ಮಾಡಿ ಇದೇ ರೀತಿ ಮೋಸ ಹೋಗಿದ್ದರು. ಹೀಗಾಗಿ ಈ ಬಾರಿ ಅವರು ಆನ್ ಲೈನ್ ಮೂಲಕ ಬಂದಿದ್ದ ಪ್ಯಾಕ್ ತೆರೆಯುವಾಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಪ್ಯಾಕ್ ಬಿಚ್ಚಿದಾಗ ಪಾರ್ಸೆಲ್ ನಲ್ಲಿ ಕೇವಲ ಖಾಲಿ ಬಾಕ್ಸ್ ಮಾತ್ರ ಇದ್ದಿದ್ದು ಕಂಡುಬಂದಿದೆ.

    ಹಣ ನೀಡಿಯೇ ಪಾರ್ಸೆಲ್ ಪಡೆದಿದ್ದ ವರ್ಧಮಾನ ಅವರು ಈ ಬಾರಿಯೂ ಮೊಬೈಲ್ ಸಿಗದೇ ಮೋಸ ಹೋಗಿದ್ದಾರೆ. ಸದ್ಯ ಆನ್‍ಲೈನ್ ಕಂಪನಿ ಮಾಡಿರುವ ಮೋಸಕ್ಕೆ ವರ್ಧಮಾನ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.