Tag: Online Fraud

  • Bengaluru | ಮಗುವನ್ನು ನೋಡಿಕೊಳ್ಳಲು ಬಂದ ಯುವತಿ 30 ನಿಮಿಷದಲ್ಲಿ 32,000 ರೂ. ಪಡೆದು ಎಸ್ಕೇಪ್

    Bengaluru | ಮಗುವನ್ನು ನೋಡಿಕೊಳ್ಳಲು ಬಂದ ಯುವತಿ 30 ನಿಮಿಷದಲ್ಲಿ 32,000 ರೂ. ಪಡೆದು ಎಸ್ಕೇಪ್

    ಬೆಂಗಳೂರು: ಮಗುವನ್ನು ನೋಡಿಕೊಳ್ಳಲು ಬಂದ ಯುವತಿಯೊಬ್ಬಳು ಕೇವಲ 30 ನಿಮಿಷದಲ್ಲಿ 32,000 ಪಡೆದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ (Bengaluru) ಕುಂಬಳಗೋಡಿನಲ್ಲಿ (Kumbalagodu) ನಡೆದಿದೆ.

    ಇಲ್ಲಿನ ನಿವಾಸಿಯಾದ ರಶ್ಮಿ ಸೇಲ್ಸ್ ಮ್ಯಾನೇಜರ್ ಆಗಿದ್ದು, ಪತಿ ಅನೂಪ್ ಖಾಸಗಿ ಕಾಲೇಜಿನಲ್ಲಿ ಪ್ರೋಫೆಸರ್ ಆಗಿದ್ದಾರೆ. ಈ ದಂಪತಿಗೆ ಒಂದೂವರೆ ವರ್ಷದ ಮಗುವಿದೆ. ಮನೆಯಲ್ಲಿ ನೋಡಿಕೊಳ್ಳಲು ಯಾರೂ ಇಲ್ಲ ಎಂದು ‘ಸುಲೇಖಾ’ ಆಪ್ ಮೂಲಕ ಸಮೀಕ್ಷ ಮೇಡ್ ಸರ್ವಿಸ್‌ನಲ್ಲಿ ಮನೆ ಕೆಲಸದವರನ್ನು ಹುಡುಕಿದ್ದರು. ಈ ವೇಳೆ ಆಪ್‌ನಲ್ಲಿ ಸಚಿನ್ ಎಂಬಾತ ಸಂಪರ್ಕಕ್ಕೆ ಬಂದು ಬಿಮಲಾ ಎಂಬ ಯುವತಿಯನ್ನು ಕೆಲಸಕ್ಕೆ ಕಳುಹಿಸಿ ಕೊಡೋದಾಗಿ ಹೇಳಿದ್ದರು. ಅದರಂತೆ ಯುವತಿ ಬಿಮಲಾ, ಆ ದಂಪತಿಗಳ ಮನೆಗೆ ಬಂದು ಅರ್ಧ ಗಂಟೆ ಮನೆಯೆಲ್ಲಾ ಸಂಪೂರ್ಣವಾಗಿ ನೋಡಿಕೊಂಡು ಎರಡು ತಿಂಗಳ ಸಂಬಳ ಅಡ್ವಾನ್ಸ್ ಎಂದು 32,000 ಪಡೆದು ಫೋನ್‌ನಲ್ಲಿ ಮಾತಾಡುವಂತೆ ನಟಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: ಇಂದು ಪಂಜಾಬ್‌-ಮುಂಬೈ ನಡ್ವೆ ಕ್ವಾಲಿಫೈಯರ್‌-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!

    ಯುವತಿ ವಾಪಸ್ ಬರದೇ ಇದ್ದಾಗ ಅನುಮಾನಗೊಂಡು ಪರಿಶೀಲನೆ ನಡೆಸಿದ ವೇಳೆ ಮೋಸ ಹೋಗಿರುವುದು ಗೊತ್ತಾಗಿದೆ. ಒಂದು ವೇಳೆ ಮಗುವನ್ನು ಆರೈಕೆಗೆ ಆಕೆಯ ಕೈಗೆ ಕೊಟ್ಟು ಹೋಗಿದ್ದರೆ ಏನಾಗುತ್ತಿತ್ತು? ಮನೆಯಲ್ಲಿದ್ದ ಹಣ, ಚಿನ್ನಾಭರಣದ ಗತಿಯೇನು ಎಂದು ರಶ್ಮಿ ದಂಪತಿಗಳು ನಿಟ್ಟಿಸಿರು ಬಿಟ್ಟಿದ್ದಾರೆ. ಈ ಬಗ್ಗೆ ಕುಂಬಳಗೂಡು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆನ್‌ಲೈನ್ ಮೂಲಕ ಅಪರಿಚಿತ ವ್ಯಕ್ತಿಗಳನ್ನು ಕೆಲಸಕ್ಕೆ ಕರೆದುಕೊಳ್ಳುವ ಮುನ್ನ ಎಚ್ಚರವಹಿಸಿ ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಚಿತ್ರ ಬಿಡುಗಡೆಯಾದರಷ್ಟೇ ಪ್ರದರ್ಶನ: ವಿಕ್ಟರಿ ಥಿಯೇಟರ್ ಯೂ ಟರ್ನ್

  • ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಮೈಸೂರಿನ ಉದ್ಯಮಿಗೆ 2.96 ಕೋಟಿ ವಂಚನೆ

    ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಮೈಸೂರಿನ ಉದ್ಯಮಿಗೆ 2.96 ಕೋಟಿ ವಂಚನೆ

    ಮೈಸೂರು: ಆನ್‌ಲೈನ್ ಟ್ರೇಡಿಂಗ್ (Online Trading) ಹೆಸರಿನಲ್ಲಿ ಉದ್ಯಮಿಗೆ 2.96 ಕೋಟಿ ರೂ. ವಂಚಿಸಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

    30 ವರ್ಷ ವಯಸ್ಸಿನ ವ್ಯಾಪಾರಿಗೆ ಖದೀಮರು ಪಂಗನಾಮ ಹಾಕಿದ್ದಾರೆ. ವಂಚನೆಗೆ ಒಳಗಾದ ವ್ಯಾಪಾರಿ ಆನ್‌ಲೈನ್ ಟ್ರೇಡಿಂಗ್, ಷೇರ್ ಮಾರ್ಕೆಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು. ಮೊಬೈಲ್‌ಗೆ ಬಂದ ಮೆಸೇಜ್ ನೋಡಿ ಒಂದು ತಿಂಗಳಿಗೆ ದ್ವಿಗುಣ ಲಾಭದ ಆಸೆ ಹೊಂದಿದ್ದರು. ಆನ್‌ಲೈನ್‌ನಲ್ಲಿ ಅವರು ಕೇಳಿದ ಎಲ್ಲಾ ಬ್ಯಾಂಕ್ ಡಿಟೇಲ್ಸ್, ಎಟಿಎಂ ಕೋಡ್, ಆಧಾರ್ ನಂಬರ್ ಮತ್ತಿತರ ಮಾಹಿತಿಗಳನ್ನ ಅಪ್‌ಲೋಡ್ ಮಾಡಿದ್ದರು. ಇದನ್ನೂ ಓದಿ: ಸೂರಜ್ ರೇವಣ್ಣ ಬಂಧನ ಕೇಸ್‌ – ಇವೆಲ್ಲ ವಿಚಿತ್ರ, ವಿಕೃತ, ಅಸಹ್ಯಪಡುವ ಪ್ರಕರಣ: ಪ್ರಿಯಾಂಕ್‌ ಖರ್ಗೆ

    ಸತತ ನಾಲ್ಕು ದಿನಗಳ ಕಾಲ ಆನ್‌ಲೈನ್ ಬ್ಯಾಂಕ್‌ಗೆ ಸಂಬಂಧಪಟ್ಟ ಮಾಹಿತಿ ಹಂಚಿಕೊಂಡಿದ್ದರು. ಕಳೆದ ಶುಕ್ರವಾರ ತಮ್ಮ ಬ್ಯಾಂಕ್ ಖಾತೆಯಿಂದ ಏಕಾಏಕಿ 2.96 ಕೋಟಿ ವರ್ಗಾವಣೆ ಆಗಿದೆ. ಯಾವುದೇ ವಹಿವಾಟು ನಡೆಸದಿದ್ದರೂ ಬ್ಯಾಂಕ್ ಅಕೌಂಟ್‌ನಿಂದ ಹಣ ಡೆಬಿಟ್ ಆಗಿರುವದನ್ನು ಕಂಡು ವ್ಯಾಪಾರಿ ಶಾಕ್‌ಗೆ ಒಗೊಳಗಾಗಿದ್ದಾರೆ. ಪ್ರಕರಣ ಸಂಬಂಧ ನಜರಾಬಾದ್‌ನಲ್ಲಿರುವ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ತನಿಖೆ ಆರಂಭಿಸಿದ ಪೊಲೀಸರಿಗೆ ಅಚ್ಚರಿಯ ಸಂಗತಿ ಗೊತ್ತಾಗಿದೆ. ಒಬ್ಬನೇ ವ್ಯಕ್ತಿಯಿಂದ ಒಂದೇ ದಿನ 2.96 ಕೋಟಿ ಹಣ ಟ್ರಾನ್ಸಫರ್ ಆಗಿದೆ. ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದರೂ ಇನ್ನಷ್ಟು ಹಣ ಸಂಪಾದನೆ ಮಾಡಲು ಹೋಗಿ ವ್ಯಾಪಾರಿ ಕೈ ಸುಟ್ಟುಕೊಂಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರೆಸಿರುವ ಸೆನ್ ಪೊಲೀಸರು. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಮೊದಲ ದಿನ ಕಳೆದ ದರ್ಶನ್‌ – ʻದಾಸʼನ ಜೈಲು ದಿನಚರಿ ಹೇಗಿದೆ?

  • ಆನ್‌ಲೈನ್ ಜಾಬ್ ಹೆಸ್ರಲ್ಲಿ ವಂಚನೆ – 1.69 ಲಕ್ಷ ಹಣ ಕಳೆದುಕೊಂಡ ವ್ಯಕ್ತಿ

    ಆನ್‌ಲೈನ್ ಜಾಬ್ ಹೆಸ್ರಲ್ಲಿ ವಂಚನೆ – 1.69 ಲಕ್ಷ ಹಣ ಕಳೆದುಕೊಂಡ ವ್ಯಕ್ತಿ

    ದಾವಣಗೆರೆ: ಮೋಸ ಹೋಗುವವರು ಇರೋ ವರೆಗೂ ಮೋಸ ಮಾಡುವವರು ಇದ್ದೇ ಇರ್ತಾರೆ. ಅದರಲ್ಲೂ ಈಗ ಆನ್‌ಲೈನ್‌ನಲ್ಲೇ ಮೋಸಗಳು (Online Fraud) ಹೆಚ್ಚಾಗಿದ್ದು, ಎಷ್ಟೇ ಓದಿಕೊಂಡಿದ್ದರೂ ಕೂಡ ಜನರು ಯಾಮಾರುವುದು ಜಾಸ್ತಿ. ಹಾಗೇಯೇ ಇಲ್ಲೊಬ್ಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಬಂದ ಜಾಬ್ ಮೆಸೇಜ್ ನಂಬಿ 1.69 ಲಕ್ಷ ರೂ. ಹಣ ಕಳೆದುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಜಗಳೂರು ತಾಲೂಕಿನ ನಿವಾಸಿ ಪ್ರದೀಪ್ ಕುಮಾರ್ ಹೆಚ್‌ಎಂ ಹಣ ಕಳೆದುಕೊಂಡ ವ್ಯಕ್ತಿ. ಪ್ರದೀಪ್ ಕುಮಾರ್ ಫೇಸ್‌ಬುಕ್‌ನಲ್ಲಿ ಉದ್ಯೋಗಕ್ಕೆ ಸಂಪರ್ಕಿಸಿ ಎಂಬ ಸಂದೇಶದೊಂದಿಗೆ ಮೊಬೈಲ್ ನಂಬರ್ ನೋಡಿದ್ದ. ಅದಕ್ಕೆ ಮೆಸೇಜ್ ಮಾಡಿದಾಗ ಮನೆಯಲ್ಲೇ ಕೆಲಸ ಎಂದು ಅಪರಿಚಿತ ವ್ಯಕ್ತಿಯಿಂದ ವಾಟ್ಸಪ್ ಮೂಲಕ ಒಂದು ಲಿಂಕ್ ಬಂದಿದೆ. ಪ್ರದೀಪ್ ಕುಮಾರ್ ಆ ಲಿಂಕ್ ಅನ್ನು ತೆರೆದಾಗ ಪ್ರಾಡಕ್ಟ್‌ಗಳನ್ನು ಖರೀದಿಸಿದರೆ ಕಮಿಷನ್ ನೀಡುವುದಾಗಿ ಆಮಿಷ ತೋರಿಸಿದ್ದಾರೆ.

    ಇದನ್ನು ನಂಬಿದ ಪ್ರದೀಪ್ ಕಳುಹಿಸಿದ ಲಿಂಕ್‌ನಿಂದ ಅಕೌಂಟ್ ಓಪನ್ ಮಾಡಿದ್ದಾನೆ. ಅಪರಿಚಿತ ಹೇಳಿದ ನಂಬರ್‌ಗೆ 300 ರೂ. ಕಳುಹಿಸಿದಾಗ ವಾಪಸ್ 638 ರೂ. ಬಂದಿದೆ. ಇದೇ ರೀತಿ ಪ್ರದೀಪ್ ವಿವಿಧ ಹಂತಗಳಲ್ಲಿ 1.09 ಲಕ್ಷ ರೂ. ಆತನ ಅಕೌಂಟ್‌ನಿಂದ ಹಾಗೂ ಪತ್ನಿಯ ಅಕೌಂಟ್‌ನಿಂದ 60 ಸಾವಿರ ರೂ. ಕಳುಹಿಸಿದ್ದಾನೆ. ನಂತರ ಯಾವುದೇ ಕಮಿಷನ್ ಬಾರದಿದ್ದಾಗ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ಇದನ್ನೂ ಓದಿ: ಬಿಲ್ ಕೇಳಲು ಬಂದ ಲೈನ್‍ಮೆನ್ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿ ಅರೆಸ್ಟ್

    ಈ ಬಗ್ಗೆ ಪ್ರದೀಪ್ ಸಿಐಎನ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಯಾವುದೇ ಕಮಿಷನ್ ಆಸೆಗೆ ಇಲ್ಲವೇ ಹಣ ದುಪ್ಪಟ್ಟು ಮಾಡುವುದಾಗಿ ಹೇಳಿ ನಂಬಿಸಿ ಮೋಸ ಮಾಡುವ ಜಾಲದಿಂದ ಎಚ್ಚರಿಕೆಯಿಂದ ಇರಿ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಜನರು ಮಾತ್ರ ದುಪ್ಪಟ್ಟು ಹಣದ ಆಸೆಗೆ ಬಿದ್ದು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಶುರುವಾಯ್ತು ಬಿಜೆಪಿ ಕಾಲದ ಅಕ್ರಮದ ತನಿಖೆ – ಮೊದಲ ಎಫ್‌ಐಆರ್‌ ದಾಖಲು

  • 1957ರ ನಾಣ್ಯ ಮಾರಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ – ಆನ್‍ಲೈನ್ ವಂಚನೆಯಿಂದ ವ್ಯಕ್ತಿ ಆತ್ಮಹತ್ಯೆ

    1957ರ ನಾಣ್ಯ ಮಾರಲು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ – ಆನ್‍ಲೈನ್ ವಂಚನೆಯಿಂದ ವ್ಯಕ್ತಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಒಂದು ರೂಪಾಯಿ ಹಳೆಯ ಕಾಯಿನ್ ಮಾರಲು ಹೋದ ವ್ಯಾಪಾರಿಯೋರ್ವ ಆನ್‍ಲೈನ್ ವಂಚಕನಿಂದ ಮೋಸ ಹೋಗಿ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಚಿಕ್ಕಬಳ್ಳಾಪುರ ನಗರದ ಶಂಕರಮಠ ಏರಿಯಾದ ನಿವಾಸಿ ಅರವಿಂದ್ ಎಂದು ಗುರುತಿಸಲಾಗಿದ್ದು, ನಗರದ ಬಜಾರ್ ರಸ್ತೆಯಲ್ಲಿ ಗಿಫ್ಟ್ ಸೆಂಟರ್ ಅಂಗಡಿ ಇಟ್ಟುಕೊಂಡಿದ್ದರು. ಹಳೆಯ 1 ರೂಪಾಯಿ ಕಾಯಿನ್ ಕೊಟ್ಟರೆ, 58 ಲಕ್ಷ ರೂಪಾಯಿ ಕೊಡುತ್ತೇವೆ ಎಂಬ ಆನ್‍ಲೈನ್ ವಂಚಕನ ಮಾತು ನಂಬಿದ ಅರವಿಂದ್ ತಮ್ಮ ಬಳಿ ಇದ್ದ ಹಳೆ ಕಾಲದ 1 ರೂಪಾಯಿಯ ಕಾಯಿನ್ ಮಾರಾಟ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:  ದೇಶದ ಪರಿಸ್ಥಿತಿ ಚೆನ್ನಾಗಿಲ್ಲ, ಭಯಪಡಬೇಡಿ, ಹೋರಾಟ ಮುಂದುವರೆಸಿ: ಮಮತಾ ಬ್ಯಾನರ್ಜಿ

    ಸ್ವತಃ ಅರವಿಂದ್ ಅವರೇ ತಮ್ಮ ಬಳಿ ಇದ್ದ ಒಂದು ರೂಪಾಯಿಯ ಹಳೆಯ ಕಾಯಿನ್‍ಗಳ ಮಾರಾಟ ಮಾಡುವ ಐಡಿಯಾ ಮಾಡಿ, ಆನ್‍ಲೈನ್‍ನಲ್ಲಿ ಹಳೆಯ ಕಾಯಿನ್‍ಗಳನ್ನು ಖರೀದಿ ಮಾಡುವವರ ಮೊಬೈಲ್ ನಂಬರ್‍ಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಮೂರ್ನಾಲ್ಕು ನಂಬರ್‍ಗಳಿಗೆ ಕರೆ ಮಾಡಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಹಳೆಯ ಕಾಯಿನ್ ಖರೀದಿ ಮಾಡುತ್ತೇನೆ ಎಂದು ವಾಟ್ಸಾಪ್ ಮುಖಾಂತರ ಕಾಯಿನ್ ಫೋಟೋ ಕಳುಹಿಸಿಕೊಂಡು, ಈ ಕಾಯಿನ್‍ಗೆ 58 ಲಕ್ಷದ 38 ಸಾವಿರದ 808 ರೂಪಾಯಿ ಕೊಡುವುದಾಗಿ ಹೇಳಿದ್ದಾನೆ.

    ಇದನ್ನು ನಂಬಿದ ಅರವಿಂದ್ ಕಾಯಿನ್ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ ಇದಕ್ಕೆ ಪ್ರೊಸೆಸಿಂಗ್ ಫೀಸ್, ಆ ಫೀಸ್, ಈ ಫೀಸ್ ಕೊಡಬೇಕು ಅಂತ ಅರವಿಂದ್ ಬಳಿಯೇ ಆನ್‍ಲೈನ್ ವಂಚಕ ಸರಿಸುಮಾರು ಆಗಷ್ಟು, ಈಗಷ್ಟು ಅಂತ 26 ಲಕ್ಷ ವಸೂಲಿ ಮಾಡಿದ್ದಾರೆ. ಅಲ್ಲದೇ ಆನ್‍ಲೈನ್ ವಂಚಕನಿಗೆ ಹಣ ನೀಡುವುದಕ್ಕೆ ಅರವಿಂದ್ ತಮ್ಮ ಮನೆಯಲ್ಲಿದ್ದ ಚಿನ್ನಾಭರಣಗಳನ್ನೆಲ್ಲಾ ಅಡವಿಟ್ಟಿದ್ದಾರೆ. ಸಾಲದು ಅಂತ ಹಲವರ ಬಳಿ ಕೈ ಸಾಲ ಸಹ ಮಾಡಿದ್ದಾರೆ. ಆದರೆ ಇತ್ತ ಹಣ ಪಡೆದ ಆನ್‍ಲೈನ್ ವಂಚಕ ಮಾತ್ರ ಪಡೆದ ಹಣ ವಾಪಾಸ್ ಮಾಡಿಲ್ಲ. ಬದಲಾಗಿ ಮತ್ತಷ್ಟು ಹಣ ಕೊಡುವಂತೆ ಅರವಿಂದ್‍ಗೆ ಒತ್ತಡ ಹಾಕಿದ್ದಾನೆ. ಇದನ್ನೂ ಓದಿ: ಇಲಿ ಕಚ್ಚಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಯುಪಿ ಸಚಿವ – ಚಿಕಿತ್ಸೆ ಬಳಿಕ ಡಿಸ್ಚಾರ್ಜ್

    ಇದರಿಂದ ಏನು ಮಾಡಬೇಕೆಂದು ದಿಕ್ಕು ತೋಚದೇ ಅರವಿಂದ್ ಚಿಕ್ಕಬಳ್ಳಾಪುರ ನಗರದಿಂದ ಗೌರಿಬಿದನೂರು ಮಾರ್ಗದ ಕಣಿವೆ ಪ್ರದೇಶದ ಬಳಿ ನಿರ್ಜನ ಜಾಗಕ್ಕೆ ತೆರಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿನ ಕಾರಣ ಎಲ್ಲವನ್ನೂ ಸಹ ಡೆತ್ ನೋಟ್ ಬರೆದಿಟ್ಟಿದ್ದು, ಡೆತ್ ನೋಟ್‍ನಿಂದ ಅರವಿಂದ್ ಸಾವಿನ ಸತ್ಯ ಬಯಲಾಗಿದೆ. ಸದ್ಯ ಈ ಸಂಬಂಧ ಇದೀಗ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಆನ್‍ಲೈನ್ ವಂಚನೆ ಮೂಲಕ 1.37 ಲಕ್ಷ ರೂ. ಎಗರಿಸಿದ ಖದೀಮ

    ಆನ್‍ಲೈನ್ ವಂಚನೆ ಮೂಲಕ 1.37 ಲಕ್ಷ ರೂ. ಎಗರಿಸಿದ ಖದೀಮ

    ದಾವಣಗೆರೆ: ಟವರ್ ಕಂಪನಿಯ ಪ್ರಧಾನ ವ್ಯವಸ್ಥಾಪಕರನ್ನು ನಂಬಿಸಿ ಆತನ ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷಕ್ಕೂ ಅಧಿಕ ಹಣವನ್ನು ಆನ್‍ಲೈನ್ ಮೂಲಕ ದೋಚಿರುವ ಬಗ್ಗೆ ದಾವಣಗೆರೆಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ನಗರದ ಕರೂರಿನಲ್ಲಿರುವ ಷಾ ಇನ್ಫ್ರಾ ಟವರ್ಸ್‍ನ ಪ್ರಧಾನ ವ್ಯವಸ್ಥಾಪಕ ದಿರೇಂದ್ರ ಪ್ರತಾಪ್ ಸಿಂಗ್ ಹಣ ಕಳೆದುಕೊಂಡವರು. ಪ್ರತಾಪ್ ಸಿಂಗ್ ಎಸ್‍ಬಿಐ ಕ್ರೆಡಿಟ್ ಕಾರ್ಡ್ ಹೊಂದಿದ್ದು, ಮಹಾರಾಷ್ಟ್ರ ರಾಜ್ಯದ ಪುಣೆ ನಗರದಲ್ಲಿನ ಹೆಚ್‍ಡಿಎಫ್‍ಸಿ ಬ್ಯಾಂಕ್‍ನಲ್ಲಿಯೂ ಖಾತೆಯನ್ನು ಹೊಂದಿದ್ದಾರೆ. ಇವರು ದೈನಂದಿನ ವ್ಯವಹಾರವನ್ನು ಆನ್‍ಲೈನ್ ಮೂಲಕವೇ ನಡೆಸುತ್ತಿದ್ದರು. ಸೋಮವಾರ ಅವರ ಮೊಬೈಲ್ ನಂಬರಿಗೆ ಕರೆ ಮಾಡಿದ ಅಪರಿಚಿತ, ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ ಅಧಿಕಾರಿ ಎಂದು ನಂಬಿಸಿದ್ದಾನೆ.

    ನಿಮ್ಮ ಖಾತೆ ಅವಧಿ ಮುಕ್ತಾಯವಾಗಿದೆ ಪರಿಣಾಮ ಕೆವೈಸಿ ಆಪ್ ಡೇಟ್ ಮಾಡುವಂತೆ ತಿಳಿಸಿದ್ದಾನೆ. ಅಪರಿಚಿತನ ಮಾತು ಮಾತು ನಂಬಿದ್ದ ಅವರು ಆಪ್ ಡೇಟ್ ಮಾಡಲು ವಂಚಕನಿಗೆ ತಿಳಿಸಿದ್ದಾನೆ. ಈ ವೇಳೆ ಅಪರಿಚಿತ ಫೋನ್‍ನಲ್ಲಿ ಕೆಲ ಆ್ಯಪ್‍ಗಳನ್ನು ಇನ್‍ಸ್ಟಾಲ್ ಮಾಡಿಕೊಳ್ಳಲು ತಿಳಿಸಿದ್ದಾನೆ. ಇದರಂತೆ ಪ್ರತಾಪ್ ಸಿಂಗ್ ಅವರು ಇನ್‍ಸ್ಟಾಲ್ ಮಾಡಿದ್ದು, ಕೆಲ ಸಮಯದ ನಂತರ ಹೆಚ್‍ಡಿಎಫ್‍ಸಿ ಬ್ಯಾಂಕ್ ಖಾತೆಯಿಂದ 7 ಬಾರಿ 54,500 ರೂ. ಕಡಿತವಾದ ಬಗ್ಗೆ ಫೋನ್‍ಗೆ ಮೆಸೇಜ್ ಬಂದಿದೆ. ಈ ವೇಳೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿರುವ ಬಗ್ಗೆ ಮತ್ತೆ ಅಪರಿಚಿತ ಕರೆ ಮಾಡಿ ಹಣ ವಾಪಸ್ ಕಳುಹಿಸುವುದಾಗಿ ತಿಳಿಸಿದ್ದಾನೆ.

    ಆ ಬಳಿಕ ಎಸ್‍ಬಿಐ ಕ್ರೆಡಿಟ್ ಕಾರ್ಡ್ ಖಾತೆಗಳಿಂದ ಒಟಿಪಿ ಬಳಸಿಕೊಂಡು 82,797 ರೂ. ಹಣ ಡ್ರಾ ಮಾಡಿರುವ ಮೆಸೇಜ್‍ಗಳು ಪ್ರತಾಪ್ ಸಿಂಗ್ ಫೋನ್‍ಗೆ ಬಂದಿದೆ. ಆ ಬಳಿಕ ತಾವು ಮೋಸ ಹೋಗುತ್ತಿರುವುದಾಗಿ ತಿಳಿದಿ ಪ್ರತಾಪ್ ಸಿಂಗ್ ಅವರು ತಕ್ಷಣ ಬ್ಯಾಂಕ್ ಕಸ್ಟಮರ್ ಸಂಖ್ಯೆಗೆ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಖಾತೆಗಳನ್ನು ಬ್ಲಾಕ್ ಮಾಡಿಸಿದ್ದಾರೆ. ಆದರೆ ಅಷ್ಟರಲ್ಲಿ ವಂಚಕ ಎರಡು ಖಾತೆಗಳಿಂದ ಒಟ್ಟು 1,37,297 ರೂ.ಗಳನ್ನು ದೋಚಿದ್ದ. ಸದ್ಯ ಪ್ರತಾಪ್ ಸಿಂಗ್ ಅವರು ದಾವಣಗೆರೆಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಒಎಲ್‍ಎಕ್ಸ್ ದೋಖಾ – ಓಮ್ನಿ ಆಸೆಗೆ ಬಿದ್ದ ಕಾರ್ಮಿಕರಿಗೆ ಪಂಗನಾಮ

    ಒಎಲ್‍ಎಕ್ಸ್ ದೋಖಾ – ಓಮ್ನಿ ಆಸೆಗೆ ಬಿದ್ದ ಕಾರ್ಮಿಕರಿಗೆ ಪಂಗನಾಮ

    ಚಿಕ್ಕಬಳ್ಳಾಪುರ: ಒಎಲ್‍ಎಕ್ಸ್ ಹಳೆಯ ಹಾಗೂ ಬೇಡವಾದ ಗೃಹಬಳಕೆ ವಸ್ತುಗಳನ್ನ ಮಾರಾಟ ಮಾಡುವುದಕ್ಕೆ ಇರುವ ಆನ್‍ಲೈನ್ ತಾಣವಾಗಿದೆ. ಆದರೆ ಅದೇ ಆನ್‍ಲೈನ್ ತಾಣವನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲ ಸೈಬರ್ ಕಳ್ಳರು, ಸುಲಭವಾಗಿ ಅಮಾಯಕ ಗ್ರಾಹಕರ ಬಳಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿ ವಂಚನೆ ಮಾಡುತ್ತಿದ್ದಾರೆ.

    ಒಎಲ್‌ಎಕ್ಸ್‌ನಲ್ಲಿ ಓಮ್ನಿ ಕಾರು ನೋಡಿದ ಬಳ್ಳಾರಿ ಮೂಲದ ದೊಡ್ಡನಾಯಕ್ ಹಾಗೂ ಕೃಷ್ಣನಾಯಕ್ ಅವರು ಖದೀಮರ ಕೃತ್ಯಕ್ಕೆ ಈಗ ಕಣ್ಣೀರು ಹಾಕುವಂತಾಗಿದೆ. ಹೌದು. ಒಎಲ್‌ಎಕ್ಸ್‌ನಲ್ಲಿ ಕೆಎ 17 ಬಿ 5946 ನಂಬರಿನ ಒಮ್ನಿ ಕಾರು ಕಂಡಿದ್ದೇ ತಡ ಕಾರು ಚೆನ್ನಾಗಿದೆ ಅಂತ ರೇಟ್ ನೋಡಿದ್ದಾರೆ. ಅಲ್ಲಿ ಓಮ್ನಿ ಕಾರಿಗೆ ಕೇವಲ 60 ಸಾವಿರ ರೂಪಾಯಿ ಅಂತ ಹಾಕಲಾಗಿತ್ತು. ಓಮ್ನಿ ಕಾರು ನೋಡೋಕೆ ಚೆನ್ನಾಗಿದೆ ಅಂತ ಅದರಲ್ಲಿದ್ದ ಕಾಂಟಾಕ್ಟ್ ನಂಬರಿಗೆ ದೊಡ್ಡನಾಯಕ್, ಕೃಷ್ಣನಾಯಕ್ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದವನು ನಾನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್‍ಎಫ್ ಆಫೀಸರ್ ವಿಜಯ್ ಕುಮಾರ್, ಕಾರಿನ ರೇಟ್ 60 ಸಾವಿರ ಅಂದಿದ್ದಾನೆ. ಈ ಕಡೆಯಿಂದ ಚರ್ಚೆಗಿಳಿದ ದೊಡ್ಡನಾಯಕ್ ಅಷ್ಟೊಂದು ಜಾಸ್ತಿ ಸರ್.. 35 ಸಾವಿರ ಕೊಡ್ತೀನಿ ಅಂದಿದ್ದಾರೆ. ಅಷ್ಟೇ ಮರುಮಾತನಾಡದೆ ವಿಜಯ್ ಕುಮಾರ್ ಒಪ್ಪಿಕೊಂಡಿದ್ದನು.

    ಹಣ ಗೂಗಲ್ ಪೇ ಮಾಡಿ, ಗಾಡಿ ನಿಮ್ಮ ಜಾಗಕ್ಕೆ ನಾನೇ ಕಳಿಸಿಕೊಡ್ತೀನಿ ಸುಮ್ನೆ ಯಾಕ್ ನೀವು ಇಲ್ಲಿಗೆ ಬರೋದು ಅಂತ ಹೇಳಿದ್ದಾನೆ. ಅಲ್ಲದೆ ಮೊದಲು 5,100 ರೂ. ಹಾಕಿ ಸಾಕು ಅಮೇಲೆ ಉಳಿದ ಹಣ ಗಾಡಿ ಬಂದ ಮೇಲೆ ಹಾಕಿ ಎಂದು ವಿಜಯ್ ಕುಮಾರ್, ದೊಡ್ಡನಾಯಕ್ ಮತ್ತು ಕೃಷ್ಣನಾಯಕ್ ಬಳಿ ಹೇಳಿದ್ದಾನೆ. ಹೀಗೆ ಮೊದಲು 5,100 ರೂಪಾಯಿ ಆನ್‍ಲೈನ್ ಟ್ರಾನ್ಸ್‌ಫರ್ ಮಾಡಿಸಿಕೊಂಡ ಖದೀಮ, ಇನ್ನೇನು ಕಾರು ನಿಮ್ಮ ಊರು ಕಡೆ ಬರ್ತಿದೆ ಅಂತ ಒಂದು ಕೊರಿಯರ್‍ನಲ್ಲಿ ವಾಹನದ ದಾಖಲೆ ಪತ್ರ ಜೊತೆಗೆ ಬರೆದು ಅದನ್ನ ವಾಟ್ಸಾಪ್ ಮಾಡಿದ್ದಾನೆ. ಉಳಿದ ಹಣವನ್ನ ನಮ್ಮ ಸೀನಿಯರ್ ಆಫೀಸರ್ ನವೀನ್ ಸಿಂಗ್ ಅಕೌಂಟ್‍ಗೆ ಹಾಕಿ ಅಂದಿದ್ದಾನೆ.

    ಆದರೆ ಆ ಕಡೆಯಿಂದ ದೊಡ್ಡನಾಯಕ್ ಗಾಡಿ ಬಂದ ಮೇಲೆ ಹಣ ಕಳಿಸ್ತೀವಿ ಅಂದಾಗ, ಇಲ್ಲ..ಇಲ್ಲ.. ಈಗಲೇ ಹಾಕಿ ಇಲ್ಲ ಅಂದರೆ ಗಾಡಿ ವಾಪಾಸ್ ಕರೆಸಿಕೋತೀವಿ ಅಂತ ಹೆದರಿಸಿದ್ದಾರು. ಹೀಗಾಗಿ ದೊಡ್ಡನಾಯಕ್, ಕೃಷ್ಣನಾಯಕ್ ಒಮ್ಮೆ 15 ಸಾವಿರ, ಬಳಿಕ ಐದೈದು ಸಾವಿರ ಎರಡು ಮೂರು ಸಲ ಕಳುಹಿಸಿದ್ದಾರೆ. ಹೀಗೆ ಒಟ್ಟು 35 ಸಾವಿರ ಹಣವನ್ನ ಆನ್‍ಲೈನ್ ಮೂಲಕ ಟ್ರಾನ್ಸ್‌ಫರ್ ಮಾಡಿದ್ದಾರೆ. ಆದರೆ ಕೊನೆಗೆ ಗಾಡಿ ಬರಲಿಲ್ಲ ಯಾಕೆ ಎಂದು ಫೋನ್ ಮಾಡಿದರೆ ಇನ್ನೂ ದುಡ್ಡು ಹಾಕಿ ಅಂತ ಖದೀಮರು ಕೇಳುತ್ತಿದ್ದಾರೆ. ಹೀಗಾಗಿ ತಾವು ವಂಚನೆಗೆ ಒಳಗಾಗಿರೋದು ಗೊತ್ತಾಗಿ ಹಣ ಕಳೆದುಕೊಂಡ ದೊಡ್ಡನಾಯಕ್, ಕೃಷ್ಣನಾಯಕ್ ಸದ್ಯ ಕಣ್ಣೀರು ಸುರಿಸುವಂತಾಗಿದೆ.

    ಈ ಇಬ್ಬರು ಬಳ್ಳಾರಿಯಿಂದ ಬಂದು ಮಂಡ್ಯದ ಬಳಿ ಕಬ್ಬು ಕಟಾವು ಕೆಲಸ ಮಾಡುತ್ತಾ ಒಂದಷ್ಟು ಹಣ ಕೂಡಿಟ್ಟುಕೊಂಡಿದ್ದರು. ಉಳಿದ ಹಣವನ್ನ 10 ರೂಪಾಯಿ ಬಡ್ಡಿಯಂತೆ ಸಾಲ ಪಡೆದು ಈ ಆನ್‍ಲೈನ್ ವಂಚಕರಿಗೆ ಹಾಕಿದ್ದರು. ಹೀಗಾಗಿ ಹಣ ಕಳೆದುಕೊಂಡು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಬಳಿ ಹೋದರೆ ಏನೂ ಉಪಯೋಗವಾಗಲಿಲ್ಲ. ಅಯ್ಯೋ ಹೋಗಿ ದಿನ ಈ ಥರ ಹತ್ತಾರು ಕೇಸು ಬರುತ್ತೆ. ನೀವು ಮೋಸ ಹೋಗಿದ್ದೀರಾ ಆ ಥರ ಸಿಐಎಸ್‍ಎಫ್‍ನವರು ಯಾರೂ ಇಲ್ಲಿಲ್ಲ ಎಂದು ವಿಮಾನ ನಿಲ್ದಾಣದ ಸಿಬ್ಬಂದಿ ಹೇಳಿ ಕಳುಹಿಸಿದ್ದಾರೆ. ಆದರೆ ಪೊಲೀಸರ ನೆರವು ಸಿಗುತ್ತೇನೋ ಅಂತ ಆಸೆಗಣ್ಣಿನಿಂದ ಬಂದಿದ್ದ ಯುವಕರು ಕೊನೆಗೆ ಅಳುತ್ತಲೇ ವಾಪಾಸ್ ಹೋಗಿದ್ದಾರೆ.

    ಕಳೆದ 3 ತಿಂಗಳಲ್ಲಿ ಇದೇ ತರ ಒಂದಲ್ಲ ಎರಡಲ್ಲ ನೂರಾರು ಕೇಸ್‍ಗಳು ನಡೆದಿದ್ದು, ಹಣ ಕಳೆದುಕೊಳ್ಳುತ್ತಿರುವವರು ಕೆಐಎಎಲ್ ಪೊಲೀಸ್ ಠಾಣೆ ಬಳಿ ಬರುತ್ತಿದ್ದಾರೆ. ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಒಎಲ್‍ಎಕ್ಸ್ ವಂಚನೆ ಪ್ರಕರಣಗಳಿಗಂತಲೇ ದೊಡ್ಡದಾದ ಹೊಸ ಫೈಲ್ ಇಡಲಾಗಿದೆ. ಅದೆಲ್ಲೋ ಕೂತು ಆನ್‍ಲೈನ್ ಮೂಲಕ ನಯವಂಚಕ ಮಾತುಗಳಿಂದ ವಂಚನೆ ಮಾಡೋ ಈ ಖದೀಮರ ಕೃತ್ಯಕ್ಕೆ ಬ್ರೇಕ್ ಹಾಕಬೇಕಾದ ಪೊಲೀಸರು ಮಾತ್ರ ತಮ್ಮ ಕೈಲಾಗಲ್ಲ ಅಂತ ಕೈ ಕಟ್ಟಿ ಕುಳಿತಿದ್ದು, ಖದೀಮರ ಆಟ ಮುಂದುವರಿಯುತ್ತಲೇ ಇದೆ. ಹೀಗಾಗಿ ಆನ್‍ಲೈನ್‍ನಲ್ಲಿ ವ್ಯವಹರಿಸೋ ಮುನ್ನ ಹತ್ತು ಬಾರಿ ಯೋಚಿಸಿಬೇಕಿದೆ.