Tag: Online Class

  • ಪಿಯುಸಿವರೆಗೂ ಆನ್‍ಲೈನ್ ಶಿಕ್ಷಣ ರದ್ದಾಗಬೇಕು: ಸಿದ್ದರಾಮಯ್ಯ ಸಲಹೆ

    ಪಿಯುಸಿವರೆಗೂ ಆನ್‍ಲೈನ್ ಶಿಕ್ಷಣ ರದ್ದಾಗಬೇಕು: ಸಿದ್ದರಾಮಯ್ಯ ಸಲಹೆ

    ಮೈಸೂರು: ಪಿಯುಸಿವರೆಗೂ ಆನ್ ಲೈನ್ ಶಿಕ್ಷಣ ರದ್ದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಕ್ಕೆ ಸಲಹೆ ನಿಡಿದ್ದಾರೆ.

    ನಗರದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲಿನಿಂದಲೂ ಆನ್ ಲೈನ್ ಶಿಕ್ಷಣ ಪದ್ಧತಿಗೆ ವಿರೋಧ ಮಾಡುತ್ತಿದ್ದೇನೆ. ಇದೀಗ ಸರ್ಕಾರ 5ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ರದ್ದು ಮಾಡಿದೆ. ಇದು ಸರಿಯಾದ ಕ್ರಮ ಅಲ್ಲ. ನನ್ನ ಪ್ರಕಾರ ಪಿಯುಸಿವರೆಗೂ ಆನ್ ಲೈನ್ ಶಿಕ್ಷಣ ರದ್ದಾಗಬೇಕು ಎಂದರು.

    ಮಕ್ಕಳಿಗೆ ನೇರವಾಗಿ ತರಗತಿಯಲ್ಲೇ ಭೋದನೆ ಮಾಡಬೇಕು. ಆ ಕಾರಣಕ್ಕಾಗಿ ಅಕ್ಟೋಬರ್‍ವರೆಗೆ ಶಾಲೆ ತೆರೆಯಬಾರದು ಎಂದು ಸರ್ಕಾರಕ್ಕೆ ಸಲಹೆಯಿತ್ತರು. ಇದೇ ವೇಳೆ ಖಾಸಗಿ ಶಾಲೆಗಳ ಶುಲ್ಕ ಕಡಿಮೆ ಮಾಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರವನ್ನು ಸರ್ಕಾರ ತೀರ್ಮಾನ ಮಾಡಬೇಕು ಎಂದರು.

    ಪಬ್ಲಿಕ್ ಟಿವಿ ಕಳೆದ ಒಂದು ವಾರದಿಂದ ಆನ್‍ಲೈನ್ ಕ್ಲಾಸ್ ಸಮಸ್ಯೆಯ ಕುರಿತು ವಿಸ್ತೃತ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿ ನಿರ್ಧಾರ ಪ್ರಕಟಿಸಿದ್ದಾರೆ. ಎಲ್‍ಕೆಜಿ, ಯುಕೆಜಿ ಹಾಗೂ ಸಿಬಿಎಸ್‍ಸಿ ಸೇರಿದಂತೆ ಎಲ್ಲಾ ಮಾದರಿಯ ಶಾಲೆಗಳ 1ರಿಂದ 5ನೇ ತರಗತಿವರೆಗೂ ಆನ್‍ಲೈನ್ ಕ್ಲಾಸ್ ರದ್ದುಗೊಳಿಸಿ ಸರ್ಕಾರ ಮಹತ್ವದ ಆದೇಶ ನೀಡಿದೆ.

    ಇತ್ತ ಕೆಲ ಖಾಸಗಿ ಶಾಲೆಗಳು ಆನ್‍ಲೈನ್ ಕ್ಲಾಸ್ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದ ಬಗ್ಗೆಯೂ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದರಿಂದ ಕೂಡ ಎಚ್ಚೆತ್ತುಕೊಂಡ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಆನ್‍ಲೈನ್ ಕ್ಲಾಸ್ ಹೆಸರಿನಲ್ಲಿ ಹೆಚ್ಚು ಶುಲ್ಕ ತೆಗೆದುಕೊಳ್ಳುವ ಹಾಗಿಲ್ಲ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮೊಬೈಲ್ ಶಾಲೆಗೆ ಬ್ರೇಕ್, 1ರಿಂದ 5ನೇ ತರಗತಿಯ ಆನ್‍ಲೈನ್ ಕ್ಲಾಸ್ ರದ್ದು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಮೊಬೈಲ್ ಶಾಲೆಗೆ ಬ್ರೇಕ್, 1ರಿಂದ 5ನೇ ತರಗತಿಯ ಆನ್‍ಲೈನ್ ಕ್ಲಾಸ್ ರದ್ದು

    ಬೆಂಗಳೂರು: ಎಲ್‍ಕೆಜಿ, ಯುಕೆಜಿ ಹಾಗೂ ಸಿಬಿಎಸ್‍ಸಿ ಸೇರಿದಂತೆ ಎಲ್ಲಾ ಮಾದರಿಯ ಶಾಲೆಗಳ 1ರಿಂದ 5ನೇ ತರಗತಿವರೆಗೂ ಆನ್‍ಲೈನ್ ಕ್ಲಾಸ್ ರದ್ದುಗೊಳಿಸಿ ಸರ್ಕಾರ ಮಹತ್ವದ ಆದೇಶ ನೀಡಿದೆ.

    ‘ಪಬ್ಲಿಕ್ ಟಿವಿ’ ಕಳೆದ ಒಂದು ವಾರದಿಂದ ಆಲ್‍ಲೈನ್ ಕ್ಲಾಸ್ ಸಮಸ್ಯೆಯ ಕುರಿತು ವಿಸ್ತೃತ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿ ನಿರ್ಧಾರ ಪ್ರಕಟಿಸಿದ್ದಾರೆ.

    ಆನ್‍ಲೈನ್ ತರಗತಿ ರದ್ದುಗೊಳಿಸುವ ವಿಚಾರವಾಗಿ ಪಬ್ಲಿಕ್ ಟಿವಿ ಅಭಿಯಾನ ಆರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಸುರೇಶ್ ಕುಮಾರ್ ಅವರು ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಮಗ್ರ ಶಿಕ್ಷಣ ಕಚೇರಿಯಲ್ಲಿ ಇಲಾಖೆಯ ಅಧಿಕಾರಿಗಳು, ತಜ್ಞರು, ಖಾಸಗಿ ಶಾಲೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿದರು.

    ಸಭೆಯಲ್ಲಿ ಸಚಿವ ಸುರೇಶ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಜಗದೀಶ್, ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಸಮಗ್ರ ಶಿಕ್ಷಣ ಇಲಾಖೆ ನಿರ್ದೇಶಕ ರಿಜು, ಶಿಕ್ಷಣ ತಜ್ಞರು, ಚಿಂತಕ ಗುರುರಾಜ ಕರ್ಜಗಿ, ಶಿಕ್ಷಣ ತಜ್ಞರು ನಿರಂಜನ ಆರಾಧ್ಯ, ನಿಮ್ಹಾನ್ಸ್ ತಜ್ಞ ವೈದ್ಯರು ಹಾಗೂ ಖಾಸಗಿ ಶಾಲೆಗಳ ಸಂಘಟನೆ ಒಕ್ಕೂಟ (ಕ್ಯಾಮ್ಸ್) ಸಂಘಟನೆಯ ಕಾರ್ಯದರ್ಶಿ ಶಶಿಕುಮಾರ್ ಭಾಗವಹಿಸಿದ್ದರು.

    ಆನ್‍ಲೈನ್ ಕ್ಲಾಸ್‍ಗಳು ಮಕ್ಕಳ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಪಬ್ಲಿಕ್ ಟಿವಿ ಸ್ಪಷ್ಟಪಡಿಸಿತ್ತು. ಈ ಹಿಂದೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಬಂದಲ್ಲಿ ಹೋದಲ್ಲಿ, ಎಲ್‍ಕೆಜಿ, ಯುಕೆಜಿಗೆ ಆನ್‍ಲೈನ್ ಶಿಕ್ಷಣ ಒಳಿತಲ್ಲ. ಪ್ರಾಥಮಿಕ ಶಾಲಾ ಮಕ್ಕಳಿಗೂ ಇದು ಅಪಾಯಕಾರಿ. ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದರು. ಆದರೆ ಖಾಸಗಿ ಶಾಲೆಗಳು ನಡೆಸುತ್ತಿರುವ ಆನ್‍ಲೈನ್ ಕ್ಲಾಸ್‍ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ.

    ಪೋಷಕರಿಂದ ಭಾರೀ ದೂರುಗಳು ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಎಳೆಯ ಕಂದಮ್ಮಗಳ ಮೇಲೆ ಹೇರಲಾಗುತ್ತಿರುವ ಆನ್‍ಲೈನ್ ತರಗತಿಯ ವಿರುದ್ಧ ಮಹಾ ಅಭಿಯಾನ ಆರಂಭಿಸಿತ್ತು. ಈ ಅಭಿಯಾನಕ್ಕೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ತಜ್ಞರು, ಸಿನಿಮಾ ಕಲಾವಿರು ಸಾಥ್ ನೀಡಿದ್ದರು.

    ಆನ್‍ಲೈನ್ ಕ್ಲಾಸ್ ಏನು? ಎತ್ತ?
    1-5 ನೇ ತರಗತಿ ಮಕ್ಕಳಿಗೆ ದಿನಕ್ಕೆ 2 ಅವಧಿಯಲ್ಲಿ ಆನ್‍ಲೈನ್ ಕ್ಲಾಸ್ ನಡೆಯುತ್ತಿದೆ. ಬಹುತೇಕ ಶಾಲೆಗಳಲ್ಲಿ 9 ಗಂಟೆಯಿಂದ ಆನ್‍ಲೈನ್ ಕ್ಲಾಸ್ ಪ್ರಾರಂಭವಾದರೆ ಕೆಲವು ಶಾಲೆಗಳಲ್ಲಿ ಬೆಳಗ್ಗೆ 8 ರಿಂದಲೇ ಆನ್‍ಲೈನ್ ಕ್ಲಾಸ್ ಶುರುವಾಗುತ್ತಿದೆ. ಮಧ್ಯಾಹ್ನ 3 ರಿಂದ 4, 4 ರಿಂದ 5 ಗಂಟೆಗೆ ಮತ್ತೆ ತರಗತಿ ನಡೆಯುತ್ತಿದೆ.

    ಆನ್‍ಲೈನ್ ಕ್ಲಾಸ್‍ಗೆ ಮೊಬೈಲ್, ಲ್ಯಾಪ್ ಟ್ಯಾಬ್, ಟ್ಯಾಬ್, ಕಂಪ್ಯೂಟರ್ ಪೈಕಿ ಒಂದು ವಸ್ತು ಇರಬೇಕು. ಆನ್‍ಲೈನ್ ಕ್ಲಾಸ್ ಹಾಜರಾಗಲು ಇಂಟರ್ನೆಟ್ ಸೌಲಭ್ಯ ಇರಬೇಕು. ಆನ್‍ಲೈನ್ ತರಗತಿ ಆರಂಭಕ್ಕೆ 10 ನಿಮಿಷ ಮೊದಲು ವಿದ್ಯಾರ್ಥಿಗೆ ಪಾಸ್‍ವರ್ಡ್ ರವಾನೆಯಾಗುತ್ತದೆ. ಆ ಪಾಸ್‍ವರ್ಡ್ ಮೂಲಕ ವಿದ್ಯಾರ್ಥಿ ಲಾಗಿನ್ ಆಗಿ ಪಾಠ ಕೇಳಬೇಕು. ಬಹುತೇಕ ಟೀಚರ್‍ಗಳಿಗೆ ಪಾಠ ಮಾಡುವ ಸೌಲಭ್ಯ ಇರುತ್ತದೆ.

    ಶಿಕ್ಷೆ ಹೇಗೆ?
    ಆನ್‍ಲೈನ್ ಕ್ಲಾಸ್‍ನಿಂದ ಮಕ್ಕಳ ಶೋಷಣೆಯಾಗುತ್ತಿದೆ. 1-5 ತರಗತಿವರೆಗಿನ ಮಕ್ಕಳಿಗೆ ಆನ್‍ಲೈನ್ ಪಾಠ ಅರ್ಥ ಆಗುವುದಿಲ್ಲ. ಶಿಕ್ಷಕರು ಪಾಠ ಮಾಡೋದು ಬಹುತೇಕ ಮಕ್ಕಳಿಗೆ ಅರ್ಥವೇ ಆಗುತ್ತಿಲ್ಲ. ಈ ವಯಸ್ಸಿನ ಮಕ್ಕಳು ಆನ್‍ಕ್ಲಾಸ್‍ಗೆ ಗಮನ ನೀಡಲು ಸಾಧ್ಯವಿಲ್ಲ. ಆನ್‍ಲೈನ್ ಕ್ಲಾಸ್‍ನಲ್ಲಿ ಚಿತ್ರಗಳನ್ನು ತೋರಿಸಿದಾಗ ಮಾತ್ರ ಮಕ್ಕಳಿಂದ ಪ್ರತಿಕ್ರಿಯೆ ಸಿಗುತ್ತದೆ. ಉಳಿದ ವೇಳೆ ಆನ್‍ಲೈನ್ ಕ್ಲಾಸ್ ಎಂಬುದು ಮಕ್ಕಳಿಗೆ ಮೊಬೈಲ್, ಟ್ಯಾಬ್, ಲ್ಯಾಪ್ ಆಟದ ವಸ್ತು. ಆನ್‍ಲೈನ್ ಪಾಠ ಪ್ರಾರಂಭ ಹೇಗೆ ಮಾಡ್ತಾರೆ ಅನ್ನೋದೆ ಮಕ್ಕಳಿಗೆ ಗೊತ್ತಿಲ್ಲ. ಪೋಷಕರು ಮಗುವಿನ ಪಕ್ಕ ಕುಳಿತು ಮೊಬೈಲ್, ಟ್ಯಾಬ್ ಆನ್ ಮಾಡಿಕೊಡಬೇಕು. ಪೋಷಕರು ಕ್ಲಾಸ್ ಕೇಳಿಸಿಕೊಂಡು ಹೇಳಿದರೆ ಮಾತ್ರ ಮಕ್ಕಳಿಂದ ಪ್ರತಿಕ್ರಿಯೆ ಬರುತ್ತದೆ.

    ಆನ್‍ಲೈನ್ ‘ಶಿಕ್ಷೆ’ಣ ಬೇಡ ಯಾಕೆ?
    ಶಿಕ್ಷಣ ತಜ್ಞರು, ಮನಃಶಾಸ್ತ್ರಜ್ಞರ ಪ್ರಕಾರ ಈ ವಯಸ್ಸು ಸೂಕ್ಷ್ಮ ವಯಸ್ಸು. 10ರೊಳಗಿನ ಮಕ್ಕಳಿಗೆ ಆನ್ ಲೈನ್ ತರಗತಿ ಅಗತ್ಯವೇ ಇಲ್ಲ. ಆಟ ಆಡುವ ವಯಸ್ಸಿನ ಮಕ್ಕಳಿಗೆ ಇದು ಕಿರುಕುಳ ನೀಡಿದಂತಾಗುತ್ತದೆ. ಆನ್‍ಲೈನ್ ಪಾಠವನ್ನು ಗ್ರಹಿಸಲು ಮಕ್ಕಳಿಗೆ ಕಷ್ಟ ಆಗುತ್ತದೆ. ಶಾಲೆಯಲ್ಲಿ ಪ್ರತಿ ಮಗುವಿನ ಮೇಲೆ ಶಿಕ್ಷಕರು ಗಮನ ಕೊಡ್ತಾರೆ. ಆದರೆ ಆನ್‍ಲೈನ್‍ನಲ್ಲಿ ಇದು ಅಸಾಧ್ಯ. ಹೀಗಾಗಿ ಮಗುವಿಗೆ ಪಾಠವೇ ಅರ್ಥ ಆಗುವುದಿಲ್ಲ. ಇದು ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತದೆ.

    ಮಕ್ಕಳ ಮೇಲೆ ಆಗೋ ಪರಿಣಾಮ ಏನು?
    ಆನ್‍ಲೈನ್ ಕಲಿಕೆಯಿಂದ ಅನೇಕ ಗೊಂದಲ, ಸಮಸ್ಯೆ ಸೃಷ್ಟಿಯಾಗಿದೆ. ಆನ್‍ಲೈನ್ ಕ್ಲಾಸ್‍ಗೆ ಇಂಟರ್‍ನೆಟ್ ಸೌಲಭ್ಯ ಬೇಕೆಬೇಕು. ಆನ್‍ಲೈನ್ ಕ್ಲಾಸ್ ವೇಳೆ ಮಕ್ಕಳು ಕೈ ತಪ್ಪಿ ಬೇರೆ ಲಿಂಕ್ ಒತ್ತುವ ಸಾಧ್ಯತೆಯಿದೆ. ಅಶ್ಲೀಲ ವಿಡಿಯೋ ಸೇರಿದಂತೆ ಇನ್ನಿತರ ಲಿಂಕ್ ಓಪನ್ ಆಗಬಹುದು. ಇವು ಮಕ್ಕಳನ್ನ ಬೇರೆ ಹಾದಿಗೆ ತೆಗೆದುಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ. ಈ ವಯಸ್ಸಿನಲ್ಲೇ ಮೊಬೈಲ್, ಟ್ಯಾಬ್, ಲ್ಯಾಪ್‍ನಂತಹ ಪರಿಕರಗಳಿಗೆ ಅಡಿಕ್ಟ್ ಆಗೋ ಸಾಧ್ಯತೆ ಹೆಚ್ಚಿದೆ.

    ಆರೋಗ್ಯದ ಮೇಲೆ ಏನಾಗುತ್ತೆ?
    ಪದೇ ಪದೇ ಮಗು ಮೊಬೈಲ್, ಕಂಪ್ಯೂಟರ್ ನೋಡ್ತಿದ್ರೆ ಕಣ್ಣಿನ ಮೇಲೆ ಪರಿಣಾಮ ಬೀಳುತ್ತದೆ. ಆನ್‍ಲೈನ್ ಕ್ಲಾಸ್ ಒತ್ತಡದಿಂದ ಮಕ್ಕಳ ಮೆದುಳಿನ ಮೇಲೂ ಅಡ್ಡ ಪರಿಣಾಮವಾಗುತ್ತದೆ. ಆನ್‍ಲೈನ್ ಪಾಠ ಅರ್ಥ ಆಗದೇ, ಮಕ್ಕಳಿಗೆ ಕೋಪ, ಆವೇಶ, ಸಿಟ್ಟು ಬರಬಹುದು. ಪುಟ್ಟ ಪುಟ್ಟ ಮಕ್ಕಳು ಮಾನಸಿಕ ಖಿನ್ನತೆಗೆ ತುತ್ತಾಗಬಹುದು. ಪೋಷಕರು, ಶಿಕ್ಷರ ಮಾತು ಕೇಳದೇ ವಿಚಿತ್ರವಾಗಿ ವರ್ತಿಸಬಹುದು.

    ಪೋಷಕರಿಗೆ ಆನ್‍ಲೈನ್ ‘ಶಿಕ್ಷೆ’..!
    ಆನ್‍ಲೈನ್ ಕ್ಲಾಸ್‍ಗಳಿಂದ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ, ಪೋಷಕರಿಗೂ ತೊಂದರೆ ಆರಂಭವಾಗಿದೆ. ಇರುವ ಎಲ್ಲಾ ಕೆಲಸ ಕಾರ್ಯ ಬಿಟ್ಟು ಮಕ್ಕಳ ಮುಂದೆ ಕ್ಲಾಸ್ ಮುಗಿಯುವರೆಗೂ ಇರಬೇಕು. ಮಕ್ಕಳು ಮೊಬೈಲ್‍ನಲ್ಲಿ ಏನೇನು ಓಪನ್ ಮಾಡ್ತಾರೋ ಎಂಬ ಭಯ. ಆನ್‍ಲೈನ್ ಕ್ಲಾಸ್ ವೇಲೆ ಬೇರೆ ಯಾವುದೇ ಕೆಲಸ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿಯೂ ಎರಡೆರಡು, ಮೂರುಮೂರು ಮೊಬೈಲ್ ಇರಲ್ಲ (ಇದ್ದರೂ ಇಂಟರ್ನೆಟ್ ಸೌಲಭ್ಯ ಎಲ್ಲಾ ಮೊಬೈಲ್‍ಗಳಿಗೂ ಇರಲ್ಲ).

    ಈ ಹಿಂದೆ ಆಫೀಸಿಗೆ ತೆರಳಿದ್ದಾಗ ಮನೆಯಲ್ಲಿ ಮಕ್ಕಳನ್ನು ಹಿರಿಯರು ನೋಡುತ್ತಿದ್ದರು. ಆದರೆ ಈಗ ಅವರಿಗೆ ಕಂಪ್ಯೂಟರ್/ ಮೊಬೈಲ್ ಆಪರೇಟಿಂಗ್ ಮಾಡಲು ಬರುವುದಿಲ್ಲ. ಹೀಗಾಗಿ ಪೋಷಕರೇ ಮನೆಯಲ್ಲಿ ಇರಬೇಕಾಗುತ್ತದೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಕಂಪನಿ/ ಕಾರ್ಖಾನೆಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಆಫೀಸ್‍ನಲ್ಲಿ/ಕಾರ್ಖಾನೆಗಳಲ್ಲಿ ಲೇಟಾದ್ರೆ ಅಲ್ಲೂ ಬೈಸಿಕೊಳ್ಳಬೇಕು. ಆನ್‍ಲೈನ್ ಕ್ಲಾಸ್ ಹೆಸರೇಳಿ ಪೋಷಕರಿಂದ ದುಬಾರಿ ಶುಲ್ಕ ವಸೂಲಿಯಾಗುತ್ತಿದೆ. ಟ್ಯಾಬ್, ಲ್ಯಾಪ್‍ಟಾಪ್ ತೆಗೆದುಕೊಳ್ಳಿ ಅಂತ ಆಡಳಿತ ಮಂಡಳಿಗಳಿಂದ ಒತ್ತಡ. ಅವಿದ್ಯಾವಂತ ತಂದೆ-ತಾಯಿಯರಿಗೆ ಆನ್‍ಲೈನ್ ಶಿಕ್ಷಣ ಎಂಬುದು ನರಕಯಾತನೆಯಾಗಿದೆ.

  • ಕೊರೊನಾ ಹೊತ್ತಲ್ಲಿ ಪೋಷಕರ ಲೂಟಿಗೆ ನಿಂತಿವೆ ಖಾಸಗಿ ಶಾಲೆಗಳು

    ಕೊರೊನಾ ಹೊತ್ತಲ್ಲಿ ಪೋಷಕರ ಲೂಟಿಗೆ ನಿಂತಿವೆ ಖಾಸಗಿ ಶಾಲೆಗಳು

    – ಫೀಸ್ ಟಾರ್ಚರ್ ವಿರುದ್ಧ ಸಮರ

    ಬೆಂಗಳೂರು: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸ್ಕೂಲ್ ಫೀಸ್ ಹೆಸರಲ್ಲಿ ವಸೂಲಿಗಿಳಿದಿವೆ. ಸರ್ಕಾರದ ನಿಯಮಗಳನ್ನ ಗಾಳಿಗೆ ತೂರಿ ದುಪ್ಪಟ್ಟು ಫೀಸನ್ನು ಕಟ್ಟಿಸಿಕೊಳ್ಳುತ್ತಿದ್ದು, ದುಬಾರಿ ಶುಲ್ಕ ಪಾವತಿಸಲಾಗದೇ ಪೋಷಕರು ಕಂಗಲಾಗಿದ್ದಾರೆ.

    ಧನದಾಹಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದ್ದು, ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಅಂತ ಒತ್ತಾಯಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಶುಲ್ಕ ಹೆಚ್ಚಳ ಮಾಡದೆ, ಹಿಂದಿನ ವರ್ಷದ ಶುಲ್ಕ ಪಡೆಯಲು ಏಪ್ರಿಲ್ 28 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಖಾಸಗಿ ಶಾಲೆಗಳು ಈ ಆದೇಶವನ್ನ ಲೆಕ್ಕಿಸದೆ ಮನಸೋ ಇಚ್ಛೆ ಶುಲ್ಕ ಹೆಚ್ಚಳ ಮಾಡುತ್ತಿವೆ. ಶೇ.20, 30, 40, 50ವರೆಗೂ ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಹಿಂಸೆ ಕೊಡುತ್ತಿವೆ.

    ಶಾಲೆಗಳು ಇದೀಗ ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಕಟ್ಟಬೇಕು ಅಂತ ಮೆಸೇಜ್ ಕಳುಹಿಸುತ್ತಿವೆ. ರಾಜ್ಯದ ಸುಮಾರು ಶೇ.80 ಖಾಸಗಿ ಶಾಲೆಗಳಿಂದ ಸರ್ಕಾರದ ಆದೇಶ ಮೀರಿ ಶುಲ್ಕ ಹೆಚ್ಚಳ ಮಾಡಿದೆ. ಪ್ರತಿಷ್ಠಿತ ಶಾಲೆಗಳಲ್ಲಿ ಸಾವಿರಾರು ರೂಪಾಯಿ ಶುಲ್ಕ ಹೆಚ್ಚಳ ಮಾಡಿ ಪೋಷಕರಿಗೆ ಹಿಂಸೆ ನೀಡಲಾಗುತ್ತಿದೆ.

    ರಾಜ್ಯದಲ್ಲಿ ಸುಮಾರು 23 ಸಾವಿರ ಖಾಸಗಿ ಶಾಲೆಗಳು ಇವೆ. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ 23, 502 ಖಾಸಗಿ ಶಾಲೆಗಳು ಇವೆ. ಬೆಂಗಳೂರಿನಲ್ಲಿ ಸುಮಾರು 6-7 ಸಾವಿರ ಖಾಸಗಿ ಶಾಲೆಗಳಿಗೆವೆ. ಬಹುತೇಕ ಶಾಲೆಗಳು ವಿವಿಧ ರೂಪದಲ್ಲಿ ಮಕ್ಕಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಟ್ಯೂಷನ್ ಫೀಸ್, ಆನ್‍ಲೈನ್ ಕಂಪ್ಯೂಟರ್ ಫೀಸ್, ಬುಕ್ಸ್, ಸಮವಸ್ತ್ರ, ಲೈಬ್ರರಿ, ಗೇಮ್ ಫೀಸ್ ಅಂತ ಸಾವಿರಾರು ರೂಪಾಯಿ ಶುಲ್ಕವನ್ನು ಹೆಚ್ಚಳ ಮಾಡಿದೆ. ಈ ಕೊರೊನಾ ವರ್ಷದಲ್ಲೂ ಶಾಲೆಗಳ ಮಾತ್ರ ಶುಲ್ಕ ಕಡಿತ ಮಾಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಪೋಷಕರ ಪರದಾಟ:
    ಫೀಸ್ ಕಟ್ಟಿಲ್ಲ ಅಂದರೆ ಆನ್‍ಲೈನ್ ಲಾಗೀನ್ ಐಡಿ ಕೊಡಲ್ಲ ಅಂತಾರೆ, ಎಲ್ಲರಿಗೂ ವರ್ಕ್ ಫ್ರಂ ಇರಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಾಲಸೋಲ ಮಾಡಿ ಹಣ ಕಟ್ಟುತ್ತಿದ್ದೀವಿ. ಮನೆ ಕಡೆಗೂ ಕಷ್ಟ ಆಗುತ್ತೆ. ಖಾಸಗಿ ಶಾಲೆಗಳು ಮಾಡೋದು ತಪ್ಪು ಎಂದು ಕೆಂಗೇರಿ ನಿವಾಸಿ ಪ್ರಿಯ ಹೇಳಿದ್ದಾರೆ.

    ನಾಲ್ಕನೇ ತರಗತಿಗೆ ಒಟ್ಟು 1 ಲಕ್ಷ ಶುಲ್ಕ. ಈಗಾಗಲೇ 60 ಸಾವಿರ ಕಟ್ಟುವಂತೆ ಮಸೇಜ್ ಬಂದಿತ್ತು. ನಾವು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೀವಿ. ತಿಂಗಳಲ್ಲಿ ಐದು ದಿನದ ಸಂಬಳ ಕಟ್ ಮಾಡಿದ್ದಾರೆ. ಫೀಸ್‍ಗೆ ಅಂತಾನೇ ವರ್ಷದಿಂದ ಸೇವ್ ಮಾಡಿಕೊಂಡು ಬಂದಿದ್ದೀವಿ. ಹಾಗಾಗಿ ಅರ್ಧ ಹಣ ವನ್ನು ಕಟ್ಟಿದ್ದೀವಿ. ಆನ್ ಲೈನ್ ಕ್ಲಾಸಸ್ ಅಂತ ಫೀಸ್ ತಗೊಂಡ್ರು. ಅದರಲ್ಲಿ ವಿಷ್ಯೂಯಲ್ಸ್ ಕ್ಲಾರಿಟಿ ಇರಲ್ಲ, ನೆಟ್ವರ್ಕ್ ಇರಲ್ಲ, ಹಳ್ಳಿ ಭಾಗದ ಜನರು ಏನು ಮಾಡಬೇಕು. ಆಗಷ್ಟ್ ಗೆ ಶಾಲೆ ಆರಂಭ ಅಂದರೆ ಅರ್ಧ ವರ್ಷ ಮುಗೀತು. ಆದರೆ ಸ್ಕೂಲ್‍ನವರು ಪೂರ್ತಿ ಹಣ ತಗೋತಿದ್ದಾರೆ ಎಂದು ಪೋಷಕರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

     

    ನನ್ನ ಮಗು ಫ್ರೀ ನರ್ಸರಿಗೆ ಹೋಗುತ್ತಿದೆ. ಮೂರು ತಿಂಗಳನಿಂದ ಮೂರು ದಿನಕ್ಕೆ, ವಾರಕ್ಕೆ ಫೀಸ್ ಕಟ್ಟಿ ಅಂತ ಮಸೇಜ್‍ಗಳು ಬರುತ್ತಿವೆ. ವ್ಯಾನ್ ಫೀಸ್, ಡ್ರೆಸ್‍ಗೆ ಅಂತ ಮತ್ತೆ ಹಣ ಕೇಳುತ್ತಿದ್ದಾರೆ. ಖಾಸಗಿ ಶಾಲೆಗಳು ಒಂದು ರೂಪಾಯಿ ಕೂಡ ಕಮ್ಮಿ ಮಾಡುತ್ತಿಲ್ಲ. ಸರ್ಕಾರದಿಂದ ವಿನಾಯಿತಿ ಯಾಕೆ ಕೊಡಬೇಕು ಇವರಿಗೆ. ನಮ್ಮ ಕೆಲಸಗಳಿಗೆ ಭದ್ರತೆ ಇಲ್ಲ, ನಮ್ಮ ಬದುಕು ಕೂಡ ಕಷ್ಟ ಆಗಿದೆ ಎಂದು ಯಶವಂತ್ ಹೇಳಿದರು.

    ಜನ ಹೊಟ್ಟೆಗೆ ಬಟ್ಟೆಗೆ ಹೊಂದಿಸಿ ಕೊಂಡರೆ ಸಾಕಾಗಿದೆ. ಬಾಡಿಗೆ ಕಟ್ಟುವುದಕ್ಕೆ ಹಣವಿಲ್ಲ. ಇವರಿಗೆ ಎಲ್ಲಿಂದ ಫೀಸ್ ಕಟ್ಟುವುದು. ಕೆಲಸ ಕಾರ್ಯ ಇಲ್ಲದ ವೇಳೆಯಲ್ಲಿ ಇವರು ಹಣ ಕಟ್ಟಿ ಅಂದರೆ ಎಲ್ಲಿ ಕಟ್ಟುವುದು? ಖಾಸಗಿ ಶಾಲೆಗಳು ವಸೂಲಿಗೆ ಇಳಿದಿರೋದು ಸರಿಯಿಲ್ಲ. ಸರ್ಕಾರ ಗಮನ ಹರಿಸಬೇಕು ಎಂದು ಸವಿತಾ ಹೇಳಿದ್ದಾರೆ.

  • ಚಿಕ್ಕಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಮಾಡಲು ನಾನು ಬಿಡಲ್ಲ: ಸುರೇಶ್ ಕುಮಾರ್

    ಚಿಕ್ಕಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಮಾಡಲು ನಾನು ಬಿಡಲ್ಲ: ಸುರೇಶ್ ಕುಮಾರ್

    – ಚಿಕ್ಕ ಮಕ್ಕಳ ಆಟ ಆಡಿ ಬೆಳೆಯಬೇಕು

    ಬಳ್ಳಾರಿ: ಯಾವುದೇ ಕಾರಣಕ್ಕೂ ಚಿಕ್ಕಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಮಾಡಲು ನಾ ಬಿಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

    ಬಳ್ಳಾರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಎಸ್‍ಎಸ್‍ಎಲ್‍ಸಿ ಪೂರ್ವ ಸಿದ್ಧತೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಆನ್‍ಲೈನ್ ಕ್ಲಾಸ್ ನಡೆಸಲು ಸರ್ಕಾರ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಈ ಬಗ್ಗೆ ಸೋಮವಾರ ಅಂತಿಮ ತೀರ್ಮಾನ ಮಾಡಲಾಗುವುದು. ಆದರೆ ಚಿಕ್ಕ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆನ್‍ಲೈನ್ ಕ್ಲಾಸ್ ನಡೆಸಲ್ಲ ಎಂದಿದ್ದಾರೆ.

    ಜುಲೈ ನಾಲ್ಕಕ್ಕೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮುಗಿಯಲಿದ್ದು, ಜುಲೈ ಕೊನೆಯ ವಾರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಕೊಡಲು ವ್ಯವಸ್ಥೆ ಮಾಡಲಾಗುವುದು. ವಲಸೆ ಕಾರ್ಮಿಕರ ಮಕ್ಕಳಿಗೆ ಹತ್ತಿರದ ಸೆಂಟರ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಲಾಗಿದೆ. ಒಂದು ವೇಳೆ ಮಕ್ಕಳು ಫೇಲ್ ಆದರೆ ಪ್ರತಿ ವರ್ಷದಂತೆ ಈ ವರ್ಷವೂ ಪೂರಕ ಪರೀಕ್ಷೆ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

    ಶಾಲೆ ಸದ್ಯಕ್ಕೆ ಆರಂಭ ಮಾಡಲು ಕೇಂದ್ರ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಶಾಲೆ ಆರಂಭ ಸದ್ಯಕ್ಕೆ ಇಲ್ಲ. ಆನ್‍ಲೈನ್ ಕ್ಲಾಸ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಆನ್‍ಲೈನ್ ಕ್ಲಾಸ್ ಮಾಡಲು ಮೊದಲ ಎಸ್‍ಡಿಎಮ್‍ಸಿ ಸದಸ್ಯರು, ಪಾಲಕರ ಸಭೆ ನಡೆಸಿ ಅವರ ಅಭಿಪ್ರಾಯ ಪಡೆದು ಶಾಲೆ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

    ಮಕ್ಕಳ ಮೇಲೆ ದುಷ್ಟ ಪರಿಮಾಣ ಆಗುತ್ತೆ ಎಂಬುದು ಎಲ್ಲರ ಅಭಿಪ್ರಾಯ ಇದೆ. ಎಲ್‍ಕೆಜಿ ಕ್ಲಾಸ್‍ಗಳನ್ನು ಆರಂಭ ಮಾಡಲು ಮಕ್ಕಳ ಮತ್ತು ಪೋಷಕರ ವಿರೋಧ ಇದೆ. ಹಾಗೆಯೇ ಈ ಚಿಂತನೆ ಶಿಕ್ಷಣ ಇಲಾಖೆಯಲ್ಲೂ ಇದೆ. ಹೀಗಾಗಿ ಲೋಯರ್ ಕ್ಲಾಸ್‍ನಲ್ಲಿ ಆನ್‍ಲೈನ್ ಶಿಕ್ಷಣ ನೀಡಲು ನಾವೂ ಒಪ್ಪಲ್ಲ. ಆದರೆ ಯಾರಿಗೆ ಆನ್‍ಲೈನ್ ಕ್ಲಾಸ್ ಕೊಡಬಹುದು ಎಂಬದರ ಬಗ್ಗೆ ಚರ್ಚೆ ನಡೆಸಿ ಸೋಮವಾರ ಆನ್‍ಲೈನ್ ಕುರಿತಾದ ಶಿಕ್ಷಣದ ಬಗ್ಗೆ ಆದೇಶ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದರು.

  • ಆನ್‍ಲೈನ್ ತರಗತಿಗೆ ಹಾಜರಾಗಲು ಸ್ಮಾರ್ಟ್ ಫೋನ್ ಇಲ್ಲ- ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

    ಆನ್‍ಲೈನ್ ತರಗತಿಗೆ ಹಾಜರಾಗಲು ಸ್ಮಾರ್ಟ್ ಫೋನ್ ಇಲ್ಲ- ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

    – ಆರ್ಥಿಕ ಸಂಕಷ್ಟದಲ್ಲಿ ಕುಟುಂಬ
    – ಬೆಂಕಿ ಹಚ್ಚಿಕೊಂಡು 14ರ ಹುಡುಗಿ ಆತ್ಮಹತ್ಯೆ

    ತಿರುವನಂತಪುರಂ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಿಂದ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಹೀಗಾಗಿ ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಆದರೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ವಾಲಂಚೇರಿ ಪಟ್ಟಣದ ನಿವಾಸಿ 14 ವರ್ಷದ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಮೃತ ವಿದ್ಯಾರ್ಥಿನಿ ಕುಟುಂಬದವರು ಬಡವರಾಗಿದ್ದು, ಯಾವುದೇ ಟಿವಿ ಅಥವಾ ಸ್ಮಾರ್ಟ್ ಫೋನ್ ಅವರ ಬಳಿ ಇರಲಿಲ್ಲ. ಹೀಗಾಗಿ ನೊಂದ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೋಮವಾರ ಮಧ್ಯಾಹ್ನದಿಂದ ವಿದ್ಯಾರ್ಥಿನಿ ಕಾಣೆಯಾಗಿದ್ದಳು. ಆದರೆ ಆಕೆಯ ಶವ ಮನೆಯ ಸಮೀಪವಿರುವ ಪ್ರತ್ಯೇಕ ಜಮೀನಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    “ನಮ್ಮ ಮನೆಯಲ್ಲಿ ಟೆಲಿವಿಷನ್ ಇದೆ. ಅದು ರಿಪೇರಿಗೆ ಬಂದಿದೆ. ಬೇಗ ರಿಪೇರಿ ಮಾಡಿಸುವಂತೆ ಮಗಳು ಹೇಳಿದ್ದಳು. ಆದರೆ ನಾನು ಟಿವಿ ರಿಪೇರಿ ಮಾಡಿಸಲು ಸಾಧ್ಯವಾಗಲಿಲ್ಲ. ನನಗೆ ಸ್ಮಾರ್ಟ್ ಫೋನ್ ಸಹ ಖರೀದಿ ಮಾಡಲು ಸಾಧ್ಯವಾಗಲಿಲ್ಲ” ಎಂದು ವಿದ್ಯಾರ್ಥಿನಿಯ ತಂದೆ ತಿಳಿಸಿದರು.

    ಕುಟುಂಬವು ಆರ್ಥಿಕವಾಗಿ ತುಂಬಾ ತೊಂದರೆಗೀಡಾಗಿದೆ. ಆಕೆಯ ಬಳಿ ಯಾವುದೇ ಸ್ಮಾರ್ಟ್ ಫೋನ್ ಕೂಡ ಇರಲಿಲ್ಲ. ಇದರಿಂದ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ ಎಂದು ಆಕೆ ಆತಂಕಗೊಂಡಿದ್ದಳು. ಅಲ್ಲದೇ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ್ದಕ್ಕೆ ಬೇಸರ ಮಾಡಿಕೊಂಡಿದ್ದಳು. ಸದ್ಯಕ್ಕೆ ಈ ಕುರಿತು ತನಿಖೆ ಮಾಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಎಸ್‍ಪಿ ಯು.ಅಬ್ದುಲ್ ಕರೀಮ್ ಹೇಳಿದರು.

    ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾರ್ಚ್ 25 ರಿಂದ ದೇಶಾದ್ಯಂತ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಿವೆ. ಸದ್ಯಕ್ಕೆ ಮೇ 31 ರವರೆಗೆ ಸತತ ನಾಲ್ಕು ಹಂತದ ಲಾಕ್‍ಡೌನ್ ನಂತರ ದೇಶದಲ್ಲಿ ಲಾಕ್‍ಡೌನ್ ರಿಲೀಫ್ ಸಿಕ್ಕಿದೆ. ಆದರೆ ಶಾಲೆಗಳು ಮತ್ತು ಕಾಲೇಜುಗಳನ್ನು ಪುನಃ ತೆರೆಯುವ ನಿರ್ಧಾರವನ್ನು ಜುಲೈನಲ್ಲಿ ತೀರ್ಮಾನಿಸಲಾಗುತ್ತದೆ.

     

  • ಸರ್ಕಾರಿ ಶಾಲಾ ಮಕ್ಕಳ ಗೋಳು ಕೇಳೋವರು ಯಾರು?

    ಸರ್ಕಾರಿ ಶಾಲಾ ಮಕ್ಕಳ ಗೋಳು ಕೇಳೋವರು ಯಾರು?

    -ಪಾಠವಿಲ್ಲದೆ ಕಂಗಾಲಾದ ಸರ್ಕಾರಿ ಶಾಲಾ ಮಕ್ಕಳು

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಎಫೆಕ್ಟ್ ಸರ್ಕಾರಿ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಪಾಠ ಕೇಳುವ ಸಮಯದಲ್ಲಿ ಪಾಠದಿಂದ ವಂಚನೆಗೆ ಒಳಗಾಗ್ತಿವೆ. ಖಾಸಗಿ ಶಾಲೆಗಳಿಗೆ ಪ್ರೀತಿ ತೋರಿರುವ ಸರ್ಕಾರ, ಸರ್ಕಾರಿ ಶಾಲೆಗಳನ್ನೆ ಮರೆತಿದೆ.

    ಮಹಾ ಮಾರಿ ಕೊರೊನಾ ಹೊಡೆತ ಸರ್ಕಾರಿ ಶಾಲಾ ಮಕ್ಕಳಿಗೆ ಎಫೆಕ್ಟ್ ಜೋರಾಗಿಯೇ ಬಿದ್ದಿದೆ. ಮಕ್ಕಳ ಭವಿಷ್ಯದ ಮೇಲೆ ಕರಿನೆರಳು ಮೂಡುವಂತೆ ಮಾಡಿದೆ. ಶೈಕ್ಷಣಿಕ ವರ್ಷ ಪ್ರಾರಂಭ ಮಾಡಿ ಪಾಠ ಕೇಳಬೇಕಿದ್ದ ಮಕ್ಕಳು, ಮನೆಯಲ್ಲಿ ಕುಳಿತುಕೊಳ್ಳುವ ಸ್ಥಿತಿ ಬಂದಿದೆ. ಸರ್ಕಾರ ಮಾತ್ರ ಇದರ ಬಗ್ಗೆ ಮಾತ್ರ ಚಿಂತೆ ಮಾಡಿದಂತೆ ಕಾಣಿಸುತ್ತಿಲ್ಲ. ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದ್ದ ಶಿಕ್ಷಣ ಇಲಾಖೆ ಸುಮ್ಮನೆ ಕುಳಿತಿದ್ದು, ನಮಗೂ ನ್ಯಾಯ ಕೊಡಿ ಎಂದು ಸರ್ಕಾರಿ ಶಾಲೆಯ ಮಕ್ಕಳು ಕೇಳುತ್ತಿದ್ದಾರೆ.

    ಖಾಸಗಿ ಶಾಲೆಗಳಿಗೂ ಈ ಕೊರೊನಾ ಎಫೆಕ್ಟ್ ತಟ್ಟಿದೆ. ಆದರೆ ಸರ್ಕಾರ ಆನ್‍ಲೈನ್‍ನಲ್ಲಿ ಪಾಠ ಮಾಡಲು ಅವಕಾಶ ಕೊಟ್ಟಿದೆ. ಹೀಗಾಗಿ ಈಗಾಗಲೇ ಖಾಸಗಿ ಶಾಲೆಗಳು ಆನ್‍ಲೈನ್ ತರಗತಿ ಪ್ರಾರಂಭ ಮಾಡಿವೆ. ಇಷ್ಟು ಹೊತ್ತಿಗಾಗಲೇ ಸರ್ಕಾರಿ ಶಾಲೆಗಳು ಪ್ರಾರಂಭ ಆಗಬೇಕಿತ್ತು. ಇನ್ನು ಶಾಲೆ ಯಾವಾಗ ಪ್ರಾರಂಭ ಆಗುತ್ತೆ ಅಂತ ಗೊತ್ತಿಲ್ಲ. ಹೀಗಿರುವಾಗಿ ಪಾಠ ಮಾಡೋದು ಎಲ್ಲಿ? ಖಾಸಗಿ ಶಾಲೆಗಳಂತೆ ಆನ್‍ಲೈನ್ ತರಗತಿ ಸಾಧ್ಯವಿಲ್ಲ. ಹಳ್ಳಿ ಪ್ರದೇಶಗಳಲ್ಲಿ ಇಂಟರ್ ನೆಟ್ ಸೌಲಭ್ಯ ಇರೋದಿಲ್ಲ. ಮೊಬೈಲ್, ಲ್ಯಾಪ್‍ಟಾಪ್ ವ್ಯವಸ್ಥೆ ಇಲ್ಲ. ಹೀಗಿರುವಾಗ ಆನ್‍ಲೈನ್ ತರಗತಿ ಸಾಧ್ಯವಿಲ್ಲ. ಹೀಗಾಗಿ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎಂದು ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಹೇಳುತ್ತಾರೆ.

    ರಾಜ್ಯದಲ್ಲಿ ಸುಮಾರು 50 ರಿಂದ 60 ಸಾವಿರ ಸರ್ಕಾರಿ ಶಾಲೆಗಳಿಗೆ. ಲಕ್ಷದಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಇವರಿಗೆಲ್ಲ ನ್ಯಾಯ ಕೊಡಬೇಕಾದದ್ದು ಸರ್ಕಾರದ ಕೆಲಸವಾಗಿದೆ.