Tag: Onion prices

  • ಇನ್ನೂ ಎರಡು ತಿಂಗಳು ಕಣ್ಣೀರು ತರಿಸಲಿದೆ ಈರುಳ್ಳಿ

    ಇನ್ನೂ ಎರಡು ತಿಂಗಳು ಕಣ್ಣೀರು ತರಿಸಲಿದೆ ಈರುಳ್ಳಿ

    ಮಂಗಳೂರು: ಈರುಳ್ಳಿ ದರ ಏರಿಕೆಯಿಂದಾಗಿ ಜನ ಈಗಾಗಲೇ ಕಣ್ಣೀರು ಸುರಿಸುತ್ತಿದ್ದಾರೆ. ಆದರೆ ಇನ್ನೂ ಎರಡು ತಿಂಗಳ ಕಾಲ ಇದೇ ರೀತಿ ಈರುಳ್ಳಿ ಖರೀದಿಸುವಾಗ ಗ್ರಾಹಕರು ಕಣ್ಣೀರು ಸುರಿಸಬೇಕಾಗ ಅನಿವಾರ್ಯತೆ ಎದುರಾಗಿದೆ.

    ಈರುಳ್ಳಿ ದರ ಇಳಿಯೋದಿಲ್ವಾ ಎಂದು ಕರಾವಳಿ ಜನ ಟೆನ್ಷನ್ ಆಗಿದ್ದಾರೆ. ಮಂಗಳೂರಿನಲ್ಲಿ ಈರುಳ್ಳಿ ದರ ದಿನದಿಂದ ದಿನಕ್ಕೆ ಏರುತ್ತಿದ್ದು, ಪ್ರತಿ ಕೇಜಿಗೆ 120 ಇದ್ದ ಈರುಳ್ಳಿ ದರ ಇದೀಗ 140ರಿಂದ 150 ರೂ.ಗೆ ಬಂದು ನಿಂತಿದೆ. ಈ ದರ ಇನ್ನೂ ಎರಡು ತಿಂಗಳ ಕಾಲ ಮುಂದುವರಿಯುತ್ತದೆ ಎನ್ನುವುದೇ ಕರಾವಳಿಗರಿಗೆ ತಲೆ ನೋವಾಗಿದೆ. ಇದನ್ನೂ ಓದಿ: ‘ಈರುಳ್ಳಿ ದರ ಏರಿಕೆ ಬಗ್ಗೆ ಯೋಚಿಸಿದ ಕೊಹ್ಲಿ, ಪೋಲಾರ್ಡ್’

    ಸಗಟು ವ್ಯಾಪಾರಿಗಳಿಗೆ ಈರುಳ್ಳಿ ಸಾಕಷ್ಟು ಪೂರೈಕೆಯಾಗದೆ ದರ ಹೆಚ್ಚಿದ್ದರೂ ಗ್ರಾಹಕರಿಗೆ ಬೇಕಾದಷ್ಟು ಈರುಳ್ಳಿ ಪೂರೈಸಲು ಸಾಧ್ಯವಾಗುತ್ತಿಲ್ಲ. ನಾನ್‍ವೆಜ್ ಪ್ರಿಯರಾದ ಕರಾವಳಿ ಮಂದಿಗೆ ನಿತ್ಯದ ಬಳಕೆಗೆ ಈರುಳ್ಳಿ ಅನಿವಾರ್ಯ ಆಗಿದ್ದು, ಪೂರೈಕೆ ಕಡಿಮೆಯಾದರೂ ಬಳಕೆ ಮಾಡದೇ ಬಿಡಲ್ಲ. ಹೀಗಾಗಿ ಬೆಲೆ ಜಾಸ್ತಿಯಾಗಿದ್ದರಿಂದ ಈರುಳ್ಳಿ ಖರೀದಿಯನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಇದನ್ನೂ ಓದಿ: ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ

    ಕಳೆದ ವಾರದ ಹಿಂದೆ ಒಂದು ಕೆಜಿ ಈರುಳ್ಳಿಗೆ 100 ರೂಪಾಯಿ ಇತ್ತು. ಬಳಿಕ ಮೂರು ದಿನಗಳ ಹಿಂದೆ ಈರುಳ್ಳಿ ದರ, 120 ರೂ. ಆಗಿದ್ದು ಈಗ 140ಕ್ಕೆ ಏರಿಕೆಯಾಗಿದೆ. ಇದೇ ರೀತಿ ದಿನದಿಂದ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಇನ್ನೂ ಎರಡು ತಿಂಗಳ ಕಾಲ ಇದೇ ರೀತಿ ಇರಲಿದೆ ಎಂದು ಮಂಗಳೂರಿನ ಈರುಳ್ಳಿ ವ್ಯಾಪಾರಸ್ಥ ಸುರೇಶ್ ಹೇಳಿದ್ದಾರೆ.

    ಮಂಗಳೂರಿಗೆ ಮಹಾರಾಷ್ಟ್ರದ ಪೂನಾ, ಬೆಂಗಳೂರು, ಹಾಸನದಿಂದ ಈರುಳ್ಳಿ ಪೂರೈಕೆಯಾಗುತ್ತಿದ್ದು, ಇದನ್ನೇ ಅವಲಂಬಿಸಿ ವ್ಯಾಪಾರ ಮಾಡಬೇಕಾಗಿದೆ. ಇದೀಗ ಪೂರೈಕೆ ಕಡಿಮೆಯಾಗಿದ್ದರಿಂದ ವ್ಯಾಪಾರಸ್ಥರು ಈರುಳ್ಳಿ ಬೆಲೆ ಕಡಿಮೆ ಮಾಡುತ್ತಿಲ್ಲ.

    https://www.youtube.com/watch?v=bcPxJ_UqTCg

  • ‘ಈರುಳ್ಳಿ ದರ ಏರಿಕೆ ಬಗ್ಗೆ ಯೋಚಿಸಿದ ಕೊಹ್ಲಿ, ಪೋಲಾರ್ಡ್’

    ‘ಈರುಳ್ಳಿ ದರ ಏರಿಕೆ ಬಗ್ಗೆ ಯೋಚಿಸಿದ ಕೊಹ್ಲಿ, ಪೋಲಾರ್ಡ್’

    ನವದೆಹಲಿ: ಈರುಳ್ಳಿ ದರ ಬಗ್ಗೆ ಕರ್ನಾಟಕ ಅಷ್ಟೇ ಅಲ್ಲದೆ, ದೇಶದಲ್ಲಿ ಭಾರೀ ಚರ್ಚೆಯಾಗುತ್ತಿದೆ. ದರ ಏರಿಕೆ ವಿಚಾರವಾಗಿ ವಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡುತ್ತಿವೆ. ಈ ಬೆನ್ನಲ್ಲೇ ಟಿ20 ಸರಣಿಯಲ್ಲಿ ಬ್ಯುಸಿ ಆಗಿರುವ ವೆಸ್ಟ್ ಇಂಡೀಸ್ ನಾಯಕ ಕಿರಾನ್ ಪೋಲಾರ್ಡ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈರುಳ್ಳಿ ದರದ ಬಗ್ಗೆ ಯೋಜಿಸಿದ್ದಾರಂತೆ.

    ಹೈದರಾಬಾದ್‍ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲವು ಸಾಧಿಸಿದೆ. ಪಂದ್ಯಕ್ಕೂ ಮುನ್ನ ನಡೆದ ಟಾಸ್ ವೇಳೆ ಪೋಲಾರ್ಡ್ ಹಾಗೂ ಕೊಹ್ಲಿ ಏನನ್ನೋ ಯೋಚಿಸುತ್ತಿದ್ದಂತೆ ನಿಂತಿದ್ದರು. ನಿಂತಿದ್ದ ಫೋಟೋವನ್ನು ಐಸಿಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಇದಕ್ಕೆ ಶೀರ್ಷಿಕೆ (ಕ್ಯಾಪ್ಶನ್) ಕೊಡಿ ಎಂದು ಬರೆದುಕೊಂಡಿತ್ತು. ಇದನ್ನೂ ಓದಿ: ಮೊಬೈಲ್ ಕೊಂಡ್ರೆ 1 ಕೆ.ಜಿ ಈರುಳ್ಳಿ ಫ್ರೀ

    ಐಸಿಸಿ ಟ್ವೀಟ್‍ಗೆ ಅನೇಕ ನೆಟ್ಟಿಗರು ತಮ್ಮದೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ವಿಜೇತ ತಂಡವು 25 ಕೆಜಿ ಈರುಳ್ಳಿಯನ್ನು ಪಡೆಯುತ್ತದೆ ಎಂದು ಉಭಯ ನಾಯಕರು ಯೋಚಿಸುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಮತ್ತೆ ಈರುಳ್ಳಿ ದುಬಾರಿ- ಕೆ.ಜಿಗೆ 200 ರೂ. ದಾಟಲಿದೆ ಬೆಲೆ

    ಇನ್ನು ಕೆಲವರು ಹೇಗೆ ಇಷ್ಟು ರನ್ ಸಾಕೇ ಎಂದು ಪೊಲಾರ್ಡ್ ಕೇಳಿದರೆ ಇನ್ನು 6 ರನ್ ಬೇಕಿತ್ತು ಎಂದು ಕೊಹ್ಲಿ ಉತ್ತರ ನೀಡುವಂತೆ ಬರೆದುಕೊಂಡಿದ್ದಾರೆ. ಮತ್ತೆ ಕೆಲವರು, ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಂಭ್ರಮಿಸಿದ ವಿಡಿಯೋ ಹಾಗೂ ಫೋಟೋಗಳನ್ನು ರಿಟ್ವೀಟ್ ಮಾಡಿದ್ದಾರೆ.