Tag: Onake

  • ಚಾಮರಾಜನಗರದಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಗೋಚರ

    ಚಾಮರಾಜನಗರದಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಗೋಚರ

    – ಗ್ರಹಣ ವೇಳೆ ಒನಕೆ ನಿಲ್ಲಿಸಿದ ಜನರು

    ಚಾಮರಾಜನಗರ: ಕಂಕಣ ಸೂರ್ಯಗ್ರಹಣ ಗಡಿ ಜಿಲ್ಲೆಯಲ್ಲಿ ಗರಿಷ್ಠ ಶೇ. 37 ರಷ್ಟು ಮಾತ್ರ ಗೋಚರವಾಗಿದೆ. ಬೆಳಗ್ಗೆ 10.11ಕ್ಕೆ ಆರಂಭವಾದ ಗ್ರಹಣ 11.44 ನಿಮಿಷಕ್ಕೆ ಗರಿಷ್ಠ ಪ್ರಮಾಣದಲ್ಲಿ ಗೋಚರವಾಯಿತು.

    ಆರಂಭದಲ್ಲಿ ಮೋಡಕವಿದ ವಾತಾವರಣ ಇದ್ದು, ಜನರಲ್ಲಿ ನಿರಾಶೆ ಮೂಡಿಸಿತ್ತು. ಆದರೆ 11 ಗಂಟೆಯ ಬಳಿಕ ಮೋಡಗಳು ಸರಿದು ಪಾರ್ಶ್ವ ಸೂರ್ಯಗ್ರಹಣ ಸ್ಪಷ್ಟವಾಗಿ ಗೋಚರಿಸಿತು. ಈ ಮೂಲಕ ಶೇ.37 ರಷ್ಟು ಗ್ರಹಣ ಗೋಚರವಾಗಿದ್ದು, ಮಧ್ಯಾಹ್ನ 1.27ಕ್ಕೆ ಸೂರ್ಯ ಗ್ರಹಣ ಕೊನೆಗೊಂಡಿತು.

    ಗ್ರಾವಿಟಿ ಸೈನ್ಸ್ ಫೌಂಡೇಶನ್ ಸಂಸ್ಥೆಯಿಂದ ಗ್ರಹಣ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಹೊರತುಪಡಿಸಿದರೆ ಇತರ ಕಡೆಗಳಲ್ಲಿ ಸಾರ್ವಜನಿಕವಾಗಿ ಸೂರ್ಯಗ್ರಹಣ ವೀಕ್ಷಣೆಗೆ ಯಾವುದೇ ವ್ಯವಸ್ಥೆ ಇರಲಿಲ್ಲ. ಹಾಗಾಗಿ ಜನರು ತಮ್ಮ ತಮ್ಮ ಮನೆಗಳ ಟೆರೇಸ್‍ಗಳ ಮೇಲೆ ನಿಂತು, ಸೌರ ಕನ್ನಡಕಗಳ, ಪಿನ್ ಹೋಲ್ ಕ್ಯಾಮೆರಾಗಳ ಮೂಲಕ ಹಾಗೂ ಟೆಲಿಸ್ಕೋಪ್‍ಗಳ ಮೂಲಕ ಸೂರ್ಯಗ್ರಹಣ ವೀಕ್ಷಣೆ ಮಾಡಿದರು.

    ಒನಕೆ ನಿಲ್ಲಿಸಿದ ಜನರು:
    ಗ್ರಹಣಗಳು ಬಂತೆಂದೆರೆ ಜನರು ಮೂಢನಂಬಿಕೆಗಳ ಮೊರೆಹೋಗುವುದು ಸಾಮಾನ್ಯ. ಅದೇ ರೀತಿ ಚಾಮರಾಜನಗರದಲ್ಲಿ ಸೂರ್ಯಗ್ರಹಣದ ವೇಳೆ ತಟ್ಟೆಯಲ್ಲಿ ಒನಕೆ ನಿಲ್ಲಿಸುವ ಮೂಲಕ ಗ್ರಹಣ ಖಚಿತಪಡಿಸಿಕೊಂಡರು.

    ನಗರದ ಶಂಕರಪುರ ಬಡಾವಣೆಯಲ್ಲಿ ಗ್ರಹಣದ ವೇಳೆ ತಟ್ಟೆಯೊಂದರಲ್ಲಿ ಒನಕೆ ನಿಲ್ಲಿಸಿದರು. ಅದು ಯಾವುದೇ ಸಪೋರ್ಟ್ ಇಲ್ಲದೆ ನೇರವಾಗಿ ನಿಂತಿದ್ದನ್ನು ನೋಡಿ ಖುಷಿಪಟ್ಟರು. ಗ್ರಹಣ ಹಿಡಿಯುವಾಗ ನೇರವಾಗಿ ಒನಕೆ ನಿಲ್ಲುತ್ತದೆ. ಗ್ರಹಣ ಬಿಟ್ಟಾಗ ಒನಕೆ ಬಿದ್ದು ಹೋಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

  • ರಾಜ್ಯಾದ್ಯಂತ ಪಾತ್ರೆಯಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಣೆ

    ರಾಜ್ಯಾದ್ಯಂತ ಪಾತ್ರೆಯಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಣೆ

    ಬೆಂಗಳೂರು: ಇಂದು ಕೇತುಗ್ರಸ್ಥ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೀರಿನಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಲಾಯಿತು.

    ಚಾಮರಾಜನಗರ ತಾಲೂಕಿನ ಮೂಡ್ಲುಪುರದಲ್ಲಿ ಸೂರ್ಯಗ್ರಹಣ ವೇಳೆ ತಾಮ್ರದ ಪಾತ್ರೆಯ ನೀರಿನಲ್ಲಿ ಒನಕೆ ಇಟ್ಟು ಪರೀಕ್ಷೆ ನಡೆಸಲಾಗಿದೆ. ಗ್ರಹಣದ ವೇಳೆ ತಾಮ್ರದ ಪಾತ್ರೆಯ ನೀರಿನಲ್ಲಿ ನಿಂತು ಗ್ರಹಣ ಮೋಕ್ಷವಾಗುತ್ತಿದ್ದಂತೆ ಕೆಳಕ್ಕೆ ಬಿದ್ದು ಅಚ್ಚರಿ ಮೂಡಿಸಿದೆ. ಗ್ರಹಣದ ವೇಳೆ ಗುರುತ್ವಾಕರ್ಷಣೆ ಹೆಚ್ಚಾಗಿರುವುದರಿಂದ ಒನಕೆ ನೇರವಾಗಿ ನಿಲ್ಲುತ್ತದೆಂಬುದು ಪೂರ್ವಜರ ನಂಬಿಕೆಯಾಗಿದೆ. ಇದನ್ನು ಪರೀಕ್ಷೆಗೆ ಒಳಪಡಿಸಿ ಗ್ರಾಮಸ್ಥರು ಖಚಿತಪಡಿಸಿಕೊಂಡಿದ್ದಲ್ಲದೇ ಅಚ್ಚರಿಗೊಳಗಾಗಿದ್ದರೆ.

    ಗ್ರಾಮದ ನಂದೀಶ್ ಎಂಬವರ ಮನೆಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿ ಪರೀಕ್ಷೆ ನಡೆಸಿದರು, ಗ್ರಹಣದ ವೇಳೆ ಗುರುತ್ವಾಕರ್ಷಣೆ ಹೆಚ್ಚಾಗಿರುವುದರಿಂದ ಒನಕೆ ನೀರಿನಲ್ಲಿ ನಿಂತಿದ್ದು ಗ್ರಹಣ ಮೋಕ್ಷದ ನಂತರ ಬಿದ್ದ ಹೋಗಿದೆ. ಇದರಿಂದ ಮನೆಯವರು, ಗ್ರಾಮಸ್ಥರು ಅಚ್ಚರಿಗೊಳಗಾಗಿದ್ದಾರೆ.

    ಬಾಗಲಕೋಟೆ ನಗರ ಹಾಗೂ ತೇರದಾಳ ಪಟ್ಟಣದಲ್ಲೂ ತಾಮ್ರದ ತಟ್ಟೆಯ ತಳಭಾಗದಲ್ಲಿ ನೀರು ಹಾಕಿ, ಒನಕೆಯನ್ನು ನೇರವಾಗಿ ಆ ತಟ್ಟೆಯ ಮೇಲಿಟ್ಟು ಪರೀಕ್ಷೆ ಮಾಡಲಾಯಿತು. ತಾಮ್ರದ ಪ್ಲೇಟ್‍ನಿಂದ ಒನಕೆ ನೇರವಾಗಿ ನಿಲ್ಲುವ ತನಕ ಗ್ರಹಣ ಇರುತ್ತದೆ. ಗ್ರಹಣ ಮೋಕ್ಷಗೊಂಡ ಕಾಲಕ್ಕೆ ಒನಕೆ ಕೆಳಗಡೆ ಬೀಳುತ್ತೆ ಎಂಬುದು ಜನರ ನಂಬಿಕೆ. ಹಾಗಾಗಿ ಇಂದು ತೇರದಾಳ ಪಟ್ಟಣದ ಅಮೀತ್ ಮಾಳೇದ್ ಹಾಗೂ ಬಾಗಲಕೋಟೆ ನಗರದ ಸುರೇಶ್ ಮಜ್ಜಗಿ ಅವರ ಮನೆಯಲ್ಲಿ ಈ ಪ್ರಯೋಗ ಮಾಡಲಾಯಿತು.

    ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಮತ್ತು ಹಿರೇಕೆರೂರು ತಾಲೂಕಿನ ಬೋಗಾವಿ ಗ್ರಾಮದ ನಿವಾಸಿಗಳು ಗ್ರಹಣ ಹಿಡಿದಾಗ ಬುಟ್ಟಿಯಲ್ಲಿ ನೀರು ಹಾಕಿ ಒನಕೆ ನಿಲ್ಲಿಸಿಟ್ಟಿದರು. ಒನಕೆ ನಿಲ್ಲಿಸಿದ ನಂತರ ಗ್ರಹಣ ವೀಕ್ಷಣೆ ಮಾಡಿದರು.

    ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲೂ ತಾಮ್ರದ ಪಾತ್ರೆಯಲ್ಲಿ ಒನಕೆ ನಿಲ್ಲಿಸಿ ಪರೀಕ್ಷಿಸಲಾಯಿತು. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮೇಟಿ ಎಂಬವರ ಮನೆಯಲ್ಲಿ ಈ ಪರೀಕ್ಷೆ ನಡೆಸಲಾಯಿತು. ಸೂರ್ಯ ಗ್ರಹಣ ಮುಕ್ತಾಯದ ವರೆಗೆ ತಾಮ್ರದ ಪಾತ್ರೆಯಲ್ಲಿ ಒನಕೆ ನಿಲ್ಲಿಸಲಾಗಿತ್ತು.

  • ನೀರಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಿದ ಗ್ರಾಮಸ್ಥರು

    ನೀರಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಿದ ಗ್ರಾಮಸ್ಥರು

    ಹಾವೇರಿ: ಇಂದು ಕೇತುಗ್ರಸ್ಥ ಸೂರ್ಯಗ್ರಹಣದ ಹಿನ್ನೆಲೆ ಹಾವೇರಿ ಜನರು ನೀರಲ್ಲಿ ಒನಕೆ ನಿಲ್ಲಿಸಿ ಗ್ರಹಣ ವೀಕ್ಷಿಸಿದ್ದು ವಿಶೇಷವಾಗಿತ್ತು.

    ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಮತ್ತು ಹಿರೇಕೆರೂರು ತಾಲೂಕಿನ ಬೋಗಾವಿ ಗ್ರಾಮದ ನಿವಾಸಿಗಳು ಗ್ರಹಣ ಹಿಡಿದಾಗ ಬುಟ್ಟಿಯಲ್ಲಿ ನೀರು ಹಾಕಿ ಒನಕೆ ನಿಲ್ಲಿಸಿಟ್ಟಿದ್ದಾರೆ. ಒನಕೆ ನಿಲ್ಲಿಸಿದ ನಂತರ ಗ್ರಹಣ ವೀಕ್ಷಣೆ ಮಾಡಿದ್ದಾರೆ.

    ಕೇತುಗ್ರಸ್ಥ ಸೂರ್ಯಗಹ್ರಣ ಈಗಾಗಲೇ ಆರಂಭವಾಗಿದ್ದು, ಸೂರ್ಯನಲ್ಲಿ ಆಗುವ ಬದಲಾವಣೆಗಳನ್ನು ವೀಕ್ಷಿಸುವ ಕಾತುರದಲ್ಲಿ ಜನರು ಇದ್ದಾರೆ. ಈಗಾಗಲೇ ಬಹಳಷ್ಟು ವಿದ್ಯಾರ್ಥಿಗಳು, ಸಾರ್ವಜನಿಕರು ಸೂರ್ಯಗ್ರಹಣದ ವೀಕ್ಷಣೆಯಲ್ಲಿ ಬ್ಯುಸಿಯಾಗಿದ್ದಾರೆ.

    ಉಡುಪಿ, ಹುಬ್ಬಳ್ಳಿ, ಬಳ್ಳಾರಿ, ಮಂಗಳೂರು, ಧಾರವಾಡ, ಮಂಡ್ಯ, ಕಾರವಾರ, ಶಿವಮೊಗ್ಗ, ಬೆಳಗಾವಿ, ಮೈಸೂರು ಇನ್ನೂ ಅನೇಕ ಜಿಲ್ಲೆಗಳಲ್ಲಿ ಸ್ಪಷ್ಟವಾಗಿ ಸೂರ್ಯಗ್ರಹಣ ಗೋಚರವಾಗುತ್ತಿದೆ. ಆದರೆ ಬೆಂಗಳೂರಿನ ಕೆಲ ಭಾಗಗಳಲ್ಲಿ ಮೋಡಕವಿದ ವಾತಾವರಣವಿದ್ದು ಸೂರ್ಯ ಗ್ರಹಣ ಸರಿಯಾಗಿ ಗೋಚರವಾಗುತ್ತಿಲ್ಲ. ಕೆಲವು ಭಾಗದಲ್ಲಿ ಗ್ರಹಣ ಸ್ಪಷ್ಟವಾಗಿ ಗೋಚರಿಸುತ್ತಿದೆ.

    ಕೇತುಗ್ರಸ್ಥ ಸೂರ್ಯಗ್ರಹಣ ಕಾಲ:
    ಸೂರ್ಯಗ್ರಹಣ ಸ್ಪರ್ಶಕಾಲ – ಬೆಳಗ್ಗೆ 8:04 ಗಂಟೆ
    ಸೂರ್ಯಗ್ರಹಣ ಮಧ್ಯಕಾಲ – ಬೆಳಗ್ಗೆ 9:26 ಗಂಟೆ
    ಸೂರ್ಯಗ್ರಹಣ ಮೋಕ್ಷಕಾಲ – ಬೆಳಗ್ಗೆ 11:04 ಗಂಟೆ
    ಗ್ರಹಣ ನಕ್ಷತ್ರ – ಮೂಲ
    ಗ್ರಹಣ ಸಮಯ – 2 ಗಂಟೆ 59 ನಿಮಿಷ

  • ಸೊಳ್ಳೆ ಕಚ್ಚಿದ್ದಕ್ಕೆ ಪತಿಯನ್ನ ಒನಕೆಯಿಂದ ಥಳಿಸಿದ ಪತ್ನಿ

    ಸೊಳ್ಳೆ ಕಚ್ಚಿದ್ದಕ್ಕೆ ಪತಿಯನ್ನ ಒನಕೆಯಿಂದ ಥಳಿಸಿದ ಪತ್ನಿ

    -ಅಮ್ಮನಿಗೆ ಸಾಥ್ ನೀಡಿದ ಮಗಳು

    ಅಹಮದಾಬಾದ್: ಸೊಳ್ಳೆ ಕಚ್ಚಿದ್ದಕ್ಕೆ ಮಹಿಳೆ ತನ್ನ ಮಗಳೊಂದಿಗೆ ಸೇರಿ ಪತಿಯನ್ನು ಥಳಿಸಿರುವ ವಿಚಿತ್ರ ಘಟನೆಯೊಂದು ಗುಜರಾತಿನ ಅಹಮದಾಬಾದ್ ನಗರದ ನರೋದಾದಲ್ಲಿ ನಡೆದಿದೆ. ಹಲ್ಲೆಗೊಳಗಾದ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಭೂಪೇಂದ್ರ ಲೆವಾ ಹಲ್ಲೆಗೊಳಗಾದ ಪತಿ. ಗಂಭೀರವಾಗಿ ಗಾಯಗೊಂಡಿರುವ ಭೂಪೇಂದ್ರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದಾರೆ.

    ಭೂಪೇಂದ್ರ ಕಳೆದ ಕೆಲವು ತಿಂಗಳಿನಿಂದ ಕಾರಿನಲ್ಲಿ ಎಲ್‍ಇಡಿ ಲೈಟ್ ಗಳ ಮಾರಾಟ ಮಾಡಿಕೊಂಡಿದ್ದರು. ವ್ಯಾಪಾರದಲ್ಲಿ ಚೆನ್ನಾಗಿ ಆದಾಯ ಬಾರದ ಕಾರಣ ಎರಡು ತಿಂಗಳಿನಿಂದ ಮನೆಯ ವಿದ್ಯುತ್ ಬಿಲ್ ತುಂಬಿರಲಿಲ್ಲ. ಹೀಗಾಗಿ ಅಧಿಕಾರಿಗಳು ಮನೆಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಮಂಗಳವಾರ ರಾತ್ರಿ ಮಲಗಿದ್ದಾಗ ಫ್ಯಾನ್ ಇಲ್ಲದ ಕಾರಣ ಸೊಳ್ಳೆಗಳು ಕಚ್ಚುತ್ತಿದ್ದವು.

    ಬುಧವಾರ ಬೆಳಗ್ಗೆ ಆಗುತ್ತಿದ್ದಂತೆ ಪತ್ನಿ ಸಂಗೀತಾ ರಾತ್ರಿಯೆಲ್ಲ ಸೊಳ್ಳೆ ಕಚ್ಚಿವೆ ಎಂದು ದೂರಿದ್ದಾಳೆ. ಪತಿ ಭೂಪೇಂದ್ರ ನಗುತ್ತಾ ನನ್ನ ಜೊತೆ ಮಲಗಿದ್ದರೆ ಚೆನ್ನಾಗಿ ನಿದ್ದೆ ಬರುತ್ತಿತ್ತು ಎಂದು ಪತ್ನಿಯ ಕಾಲೆಳೆದಿದ್ದಾರೆ. ಇದರಿಂದ ಕೋಪಗೊಂಡ ಸಂಗೀತಾ ಅಡುಗೆ ಮನೆಗೆ ತೆರಳಿ ಒನಕೆ ತಂದು ಪತಿಯನ್ನು ಕೆಳಗೆ ಹಾಕಿ ಥಳಿಸಿದ್ದಾಳೆ. ಅಮ್ಮನಿಗೆ ಪುತ್ರಿ ಚಿತಲ್ ಸಹ ಸಾಥ್ ನೀಡಿದ್ದಾಳೆ.

    ಭೂಪೇಂದ್ರ ಚೀರಾಟ ಕೇಳಿ ಮನೆಗೆ ಆಗಮಿಸಿದ ನೆರೆಹೊರೆಯವರು ಆತನನ್ನು ರಕ್ಷಿಸಿದ್ದಾರೆ. ಕೂಡಲೇ ಭೂಪೇಂದ್ರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಭೂಪೇಂದ್ರ ಎಡ ಕಣ್ಣಿನ ಭಾಗದಲ್ಲಿ ಏಳು ಹೊಲಿಗೆ ಹಾಕಲಾಗಿದೆ.