Tag: Om Prakash Rajbhar

  • ನಿಮ್ಮ ಸಂಪುಟದ ಮುಸ್ಲಿಂ ಸಚಿವರ ಹೆಸರನ್ನೂ ಬದಲಾಯಿಸ್ತಿರಾ: ಯೋಗಿ ಆದಿತ್ಯನಾಥ್ ಗೆ ಸಚಿವರಿಂದಲೇ ಪ್ರಶ್ನೆ

    ನಿಮ್ಮ ಸಂಪುಟದ ಮುಸ್ಲಿಂ ಸಚಿವರ ಹೆಸರನ್ನೂ ಬದಲಾಯಿಸ್ತಿರಾ: ಯೋಗಿ ಆದಿತ್ಯನಾಥ್ ಗೆ ಸಚಿವರಿಂದಲೇ ಪ್ರಶ್ನೆ

    ನವದೆಹಲಿ: ದೇಶದ ಪ್ರಮುಖ ನಗರಗಳ ಹೆಸರನ್ನು ಬದಲಾಯಿಸಲು ಬಿಜೆಪಿಯವರು ಮುಂದಾಗುತ್ತಿದ್ದಾರೆ. ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೈತ್ರಿ ಪಕ್ಷದ ಸಚಿವ ಓಂ ಪ್ರಕಾಶ್ ರಾಜ್‍ಭಾರ್ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೊಘಲರು ಅನೇಕ ಪಟ್ಟಣಗಳ ಹೆಸರನ್ನು ಬದಲಾಯಸಿದ್ದಾರೆ ಎನ್ನುವುದು ಬಿಜೆಪಿಯವರ ವಾದವಾಗಿದೆ. ಈಗ ಅವುಗಳಿಗೆ ಪೂರ್ವದ ಹೆಸರನ್ನು ಇಡುತ್ತಿದ್ದೇವೆ ಎನ್ನುತ್ತಿದ್ದಾರೆ. ಹಾಗಾದರೆ ಅವರು ರಾಷ್ಟ್ರೀಯ ಬಿಜೆಪಿ ವಕ್ತಾರ ಶಾನವಾಜ್ ಹುಸೇನ್, ಕೇಂದ್ರ ಸಚಿವ ಮುಕ್ತರ್ ಅಬ್ಬಾಸ್ ನಕ್ವಿ, ಉತ್ತರ ಪ್ರದೇಶದ ಸಚಿವ ಮೋಸಿನ್ ರಾಜ್ ಅವರ ಹೆಸರನ್ನು ಬದಲಾಯಿಸುತ್ತಾರಾ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಹಿಂದುಳಿದ ಹಾಗೂ ತುಳಿತಕ್ಕೆ ಒಳಗಾದ ಜನರಿಂದ ಮತ ಗಿಟ್ಟಿಸಿಕೊಳ್ಳಲು ಹೀಗೆ ಮಾಡಲಾಗುತ್ತಿದೆ. ಮುಸ್ಲಿಂ ರಾಜ ಮನೆತನಗಳು ಕೊಡುಗೆ ನೀಡಿದಷ್ಟು ಉಳಿದವರು ನೀಡಿಲ್ಲ. ನಾವು ಓಡಾಡುವ ಜಿ.ಟಿ.ರಸ್ತೆ, ಕೆಂಪುಕೋಟೆ, ತಾಜ್ ಮಹಲ್ ನಿರ್ಮಿಸಿದ್ದು ಯಾರು ಎಂದು ಪ್ರಶ್ನಿಸಿ ಕುಟುಕಿದ್ದಾರೆ.

    ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು, ಫೈಜಿಯಾಬಾದ್ ಅನ್ನು ಶ್ರೀ ಅಯ್ಯೋಧ್ಯ ಅಂತಾ ಹೆಸರು ಬದಲಾಯಿಸಲಾಗುತ್ತಿದೆ. ಇದೇ ರೀತಿ, ಅಹಮದಾಬಾದ್, ಔರಂಗಾಬಾದ್, ಹೈದರಾಬಾದ್ ಮತ್ತು ಆಗ್ರಾ ನಗರಗಳ ಹೆಸರು ಬದಲಾಯಿಸಲು ಬೇಡಿಕೆಗಳು ಕೇಳಿಬಂದಿದ್ದು, ಇದಕ್ಕೆ ಬಿಜೆಪಿ ನಾಯಕರು ಸಾಥ್ ನೀಡುತ್ತಿದ್ದಾರೆ ಎಂದು ಗುಡುಗಿದರು.

    ಆಗ್ರಾ ನಗರವನ್ನು ಅಗ್ರವನ ಅಂತಾ ಮರು ನಾಮಕರಣ ಮಾಡಬೇಕು ಎಂದು ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಅಗ್ರವನ ಮಹಾಭಾರತದ ಹೆಸರು. ಅದನ್ನು ಮೊಗಲ್ ಅರಸ ಅಕ್ಬರ್ ಬಲಾಯಿಸಿ ಆಗ್ರಾ ಎಂದು ಕರೆಯುವಂತೆ ಸೂಚಿಸಿದ. ಹೀಗಾಗಿ ಆಗ್ರಾ ನಗರಕ್ಕೆ ಮೂಲ ಹೆಸರನ್ನು ಇಡಬೇಕು ಅಂತಾ ಪತ್ರದಲ್ಲಿ ಜಗನ್ ಪ್ರಸಾದ್ ಗರ್ಗ್ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews