Tag: olle huduga pratham

  • ‘ಬಿಗ್ ಬಾಸ್’ ಪ್ರಥಮ್‌ಗೆ ಬೆದರಿಕೆ ಕರೆ- ದೂರು ದಾಖಲಿಸಿದ ನಟ

    ‘ಬಿಗ್ ಬಾಸ್’ ಪ್ರಥಮ್‌ಗೆ ಬೆದರಿಕೆ ಕರೆ- ದೂರು ದಾಖಲಿಸಿದ ನಟ

    ʻಅಂಧಾಭಿಮಾನಿಗಳೇ ಯಾರಿಗೋಸ್ಕರವೋ ಜೀವನ ಹಾಳುಮಾಡಿಕೊಳ್ಳಬೇಡಿʼ

    ‘ಬಿಗ್ ಬಾಸ್’ ಕನ್ನಡ 4’ರ (Bigg Boss Kannada 4) ವಿನ್ನರ್ ಪ್ರಥಮ್‌ಗೆ ( Actor Pratham) ಕೆಲ ಕಿಡಿಗೇಡಿಗಳಿಂದ ನಿರಂತರ ಕರೆ ಬಂದ ಬೆನ್ನಲ್ಲೇ ಠಾಣೆ ಮೆಟ್ಟಿಲೇರಿದ್ದಾರೆ. ಬೆದರಿಕೆ ಕರೆ ಮಾಡಿದವರ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ದಾಖಲಿಸಿದ್ದಾರೆ.

    ಅಂಧಾಭಿಮಾನಿಗಳಿಂದ ನಿರಂತರ ಕರೆಗಳು ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ಪ್ರಥಮ್ ದೂರು ನೀಡಿದ್ದಾರೆ. ಬಳಿಕ ದೂರಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಥಮ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕನ್ನಡಿಗನ ಕಥೆಯಲ್ಲಿ ಅಕ್ಷಯ್ ಕುಮಾರ್- ‘ಸರ್ಫಿರಾ’ ಟ್ರೈಲರ್ ಔಟ್

    ಜೀವನ ಬಹಳ ದೊಡ್ಡದು, ಯಾರಿಗೋಸ್ಕರವೋ ನೀವು ಅದನ್ನು ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ, ನೀವು ಅತಿಯಾಗಿ ನಮ್ಮ ಕರ್ನಾಟಕ ಅಳಿಯ ತಂಡದ ಆಫೀಸ್ ನಂಬರ್‌ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೇ ಬಂದಿದ್ದೀರಾ. ಇನ್ಮೇಲೆ ನನಗೆ ಬರುವ ಕಾಲ್ ಮತ್ತು ಮೆಸೇಜ್ ಸೋಷಿಯಲ್ ಮೀಡಿಯಾ ವಾರ್ನಿಂಗ್ಸ್ ಎಲ್ಲವೂ ಪೊಲೀಸರೇ ನೋಡಿಕೊಳ್ತಾರೆ ಎಂದು ಪ್ರಥಮ್ ಬರೆದುಕೊಂಡಿದ್ದಾರೆ.

    ಬದುಕು ಸುಂದರವಾದದ್ದು, ಅಂಧಾಭಿಮಾನಿಗಳೇ ನಿಮ್ಮ ತಂದೆ ತಾಯಿಗೆ ಮೀಸಲಿಡಿ. ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ. ಕನ್ನಡಕ್ಕಾಗಿ, ಕಾವೇರಿಗಾಗಿ, ಸಂಸ್ಕೃತಿ ಉಳಿಸೋಕೆ ಬೇಕಾದ್ರೆ ಜೈಲಿಗೆ ಹೋಗಿ. ಆದರೆ ಯಾರಿಗೋಸ್ಕರವೋ ಲೈಫು ಹಾಳುಮಾಡಿಕೊಳ್ಳಬೇಡಿ ಎಂದು ಪ್ರಥಮ್ ಹೇಳಿದ್ದಾರೆ.

  • ಈ ಚಿತ್ರದಲ್ಲಿ ಹಾರು ಜನ ಅಲ್ಲ ಆರು ಜನ ಹೀರೋಗಳಿದ್ದಾರೆ

    ಈ ಚಿತ್ರದಲ್ಲಿ ಹಾರು ಜನ ಅಲ್ಲ ಆರು ಜನ ಹೀರೋಗಳಿದ್ದಾರೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಥಮ್ ಮೆಂಟಲಿ ಟಾರ್ಚರ್ ಮಾಡುತ್ತಿದ್ದರು- ಬಿಗ್ ಬಾಸ್ ವಿನ್ನರ್ ಮೇಲೆ ಕಿಡಿಕಾರಿದ ಅಮೂಲ್ಯ

    ಪ್ರಥಮ್ ಮೆಂಟಲಿ ಟಾರ್ಚರ್ ಮಾಡುತ್ತಿದ್ದರು- ಬಿಗ್ ಬಾಸ್ ವಿನ್ನರ್ ಮೇಲೆ ಕಿಡಿಕಾರಿದ ಅಮೂಲ್ಯ

    ಕಿರುತೆರೆ ನಟಿಯಾಗಿ ಅಪಾರ ಅಭಿಮಾನಿಗಳ ಮನ ಗೆದ್ದಿರುವ ನಟಿ ಅಮೂಲ್ಯ ಗೌಡ(Amulya Gowda) ಇದೀಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸೀರಿಯಲ್ ಮೂಲಕ ಮೋಡಿ ಮಾಡಿದ್ದ ಬೆಡಗಿ ಅಮೂಲ್ಯ ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ ಒಳ್ಳೆಯ ಹುಡುಗ ಪ್ರಥಮ್ (Olle Huduga Pratham)ಮೇಲೆ ಕಿಡಿಕಾರಿದ್ದಾರೆ.

    ಟಿವಿ ಲೋಕದಲ್ಲಿ ಮೋಡಿ ಮಾಡಿರುವ ಚೆಲುವೆ ಅಮೂಲ್ಯ, ಬಿಗ್ ಬಾಸ್ ಮನೆಗೆ(Bigg Boss House) ಎಂಟನೇ ಸ್ಪರ್ಧಿಯಾಗಿ ಬಂದಿದ್ದಾರೆ. ಈ ವೇಳೆ ಬಿಗ್ ಬಾಸ್ ಈ ಹಿಂದಿನ ಸೀಸನ್‌ನ ನೀವು ನೋಡಿದ್ದೀರಾ ಯಾವ ಸ್ಪರ್ಧಿ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿದೆ ಎಂದು ಸುದೀಪ್( Kiccha Sudeep) ಕೇಳಿದ್ದಾರೆ. ನಿಜ ಹೇಳಬೇಕೆಂದ್ರೆ ನನಗೆ ಪ್ರಥಮ್ ಅವರ ಮೇಲೆ ಪ್ರತಿದಿನ ಕೋಪ ಬಂದಿದೆ. ಅವರು ನಡೆದುಕೊಳ್ಳುತ್ತಿದ್ದ ರೀತಿ ಇಷ್ಟವಾಗುತ್ತಿರಲಿಲ್ಲ, ಪ್ರಥಮ್ ಮೆಂಟಲಿ ಟಾರ್ಚರ್ ಮಾಡ್ತಿದ್ದರು ಎಂದು ಅಮೂಲ್ಯ ಮಾತನಾಡಿದ್ದಾರೆ. ಇದನ್ನೂ ಓದಿ:`ಕಮಲಿ’ ಖ್ಯಾತಿಯ ಅಮೂಲ್ಯಗೌಡರ ಹಾಟ್ ಫೋಟೋ ವೈರಲ್

    ಅಮೂಲ್ಯ ಮಾತಿಗೆ ಸುದೀಪ್ ಕೂಡ ಪ್ರತಿಕ್ರಿಯಿಸಿ, ನಿಮಗೆ ಮನೆಯಲ್ಲಿ ಕೂತು ಅಷ್ಟು ಮೆಂಟಲಿ ಟಾರ್ಚರ್ ಆಗುತ್ತಿತ್ತು. ನಾನು ವೇದಿಕೆಯ ಮೇಲಿದ್ದೆ ಎಂದು ಸುದೀಪ್ ತಮಾಷೆ ಮಾಡಿದ್ದಾರೆ. ಹಾಗಾದ್ರೆ ಯಾವ ಸ್ಪರ್ಧಿನ ನೋಡಿ, ನಿಮಗೆ ತುಂಬಾ ಇಷ್ಟ ಆಗುತ್ತಿತ್ತು ಎಂದು ಕೇಳಿದಾಗ, ನನಗೆ ವೈಷ್ಣವಿ (Vaishnavi) ಮತ್ತು ದೀಪಿಕಾ ದಾಸ್ (Deepika Das) ಅವರು ಇಷ್ಟ ಎಂದು ಹೇಳಿದ್ದಾರೆ. ಅಂದ್ಹಾಗೆ, ದೊಡ್ಮನೆಗೆ ದೀಪಿಕಾ ದಾಸ್ ಕೂಡ ಎಂಟ್ರಿ ಕೊಟ್ಟಿದ್ದಾರೆ.

    ಒಟ್ನಲ್ಲಿ ಮಾಜಿ ಸ್ಪರ್ಧಿ ಪ್ರಥಮ್ ಕ್ಲಾಸ್ ತೆಗೆದುಕೊಂಡು ನಟಿ ಅಮೂಲ್ಯ ದೊಡ್ಮನೆಗೆ ಕಾಲಿಟ್ಟಿದ್ದಾರೆ. 18 ಜನ ಸ್ಪರ್ಧಿಗಳ ಮಧ್ಯೆ ಅಮೂಲ್ಯ ಗೌಡ ಮೋಡಿ ಮಾಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]