Tag: Old Note

  • 3 ವರ್ಷ ಕಳೆದ್ರೂ ನಿಂತಿಲ್ಲ ಹಳೆ ನೋಟುಗಳ ಬದಲಾವಣೆ – ಇಬ್ಬರ ಬಂಧನ

    3 ವರ್ಷ ಕಳೆದ್ರೂ ನಿಂತಿಲ್ಲ ಹಳೆ ನೋಟುಗಳ ಬದಲಾವಣೆ – ಇಬ್ಬರ ಬಂಧನ

    – 40 ಲಕ್ಷ ಹಳೆ ನೋಟು ಜಪ್ತಿ

    ಬೆಂಗಳೂರು: ಹಳೆ ನೋಟುಗಳನ್ನ ಬ್ಯಾನ್ ಮಾಡಿ ಸರ್ಕಾರ ಮೂರು ವರ್ಷಗಳೇ ಉರುಳಿಹೋಗಿವೆ. ಹಳೆ ನೋಟುಗಳ ಎಕ್ಸ್ ಚೇಂಜ್‍ಗೆ ಇದ್ದ ಗಡುವು ಮುಗಿದು ವರ್ಷಗಳೇ ಉರುಳಿ ಹೋಗಿವೆ. ಹೀಗಿದ್ದರೂ ಕೂಡ ಸಿಲಿಕಾನ್ ಸಿಟಿಯಲ್ಲಿ ಹಳೆ ನೋಟುಗಳ ಎಕ್ಸ್ ಚೇಂಜ್ ದಂಧೆ ನಿಂತಿಲ್ಲ.

    ಕಮಿಷನ್ ಆಧಾರದಲ್ಲಿ ನೋಟು ಪಡೆದು ಹೊಸ ನೋಟುಗಳ ಬದಲಾವಣೆಗೆ ಯತ್ನ ನಿಂತಿಲ್ಲ. ಹೀಗೆ ಹಳೆ ನೋಟುಗಳನ್ನ ವಿನಿಮಯ ಮಾಡುತ್ತಿದ್ದ ಆರೋಪದ ಮೇಲೆ ಜಾಲಹಳ್ಳಿ ಠಾಣಾ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ರಾಜೇಂದ್ರನ್ ಹಾಗೂ ಮಹಾಂತೇಶ್ ಬಂಧಿತ ಆರೋಪಿಗಳು. ಬಂಧಿತರಿಂದ 500 ಹಾಗೂ 1000 ಮುಖ ಬೆಲೆಯ 40 ಲಕ್ಷ ರೂ. ಹಳೆ ನೋಟುಗಳನ್ನು ಜಪ್ತಿ ಮಾಡಲಾಗಿದೆ.

    ಜಾಲಹಳ್ಳಿ ವ್ಯಾಪ್ತಿಯ ಗೋಕುಲ ಬಳಿ ಸಾರ್ವಜನಿಕರೊಂದಿಗೆ ವ್ಯವಹಾರದಲ್ಲಿ ತೊಡಗಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ದಾಳಿ ನೆಡೆಸಿ ಅರೋಪಿಗಳನ್ನ ಬಂಧನ ಮಾಡಲಾಗಿದೆ. ಇದೊಂದು ಬೋಗಸ್ ಅಷ್ಟೆ ಆರ್.ಬಿ.ಐ ಯಾವುದೇ ಕಾರಣಕ್ಕೂ ಹಳೆಯ ನೋಟುಗಳನ್ನು ಎಕ್ಸ್ ಚೇಂಜ್ ಮಾಡುವುದಿಲ್ಲ. 50%, 60% ಕಮಿಷನ್ ಕೊಡಬೇಕು ಎಂಬ ನಿಟ್ಟಿನಲ್ಲಿ ನಿಮ್ಮಿಂದ ಹೊಸ ನೋಟುಗಳನ್ನ ಪಡೆದು ವಂಚಿಸುತ್ತಾರೆ. ಹೀಗಾಗಿ ಯಾರೂ ಕೂಡ ಇಂಥಹ ದಂಧೆಗೆ ಕೈ ಹಾಕಬಾರದು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  • ಪ್ರಿಯತಮೆಗೆ ರಕ್ತದಲ್ಲಿ ಪತ್ರ ಬರೆದು ದೇವ್ರ ಹುಂಡಿಗೆ ಹಾಕ್ದ!

    ಪ್ರಿಯತಮೆಗೆ ರಕ್ತದಲ್ಲಿ ಪತ್ರ ಬರೆದು ದೇವ್ರ ಹುಂಡಿಗೆ ಹಾಕ್ದ!

    – ಸರ್ಕಾರದ ಮುಖ್ಯಕಾರ್ಯದರ್ಶಿಗೂ ಪತ್ರ

    ಚಿಕ್ಕಬಳ್ಳಾಪುರ: ಪ್ರಿಯಕರನೊಬ್ಬ ರಕ್ತದಲ್ಲಿ ತನ್ನ ಪ್ರೇಮಿಗೆ ಪತ್ರ ಬರೆದು ಅದನ್ನು ದೇವರ ಹುಂಡಿಗೆ ಹಾಕಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಶ್ರೀ ಭೋಗನಂಧೀಶ್ವರಸ್ವಾಮಿ ದೇವಸ್ಥಾನ ತುಂಬಾ ಪ್ರಸಿದ್ಧ. ಅಲ್ಲದೇ ಪುರಾಣ ಪ್ರಸಿದ್ಧ ಮುಜರಾಯಿ ಇಲಾಖೆಯ ಪ್ರಥಮ ದರ್ಜೆ ದೇವಸ್ಥಾನ ಕೂಡ ಆಗಿದೆ. ಹೀಗಾಗಿ ಇಲ್ಲಿಗೆ ಬಂದು ಭಕ್ತಿಯಿಂದ ಪ್ರಾರ್ಥಿಸಿ ಇಷ್ಟಾರ್ಥ ಕೋರಿಕೆಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಇದರಿಂದ ಪ್ರಿಯಕರನೊಬ್ಬ ರಕ್ತದಲ್ಲಿ ಪತ್ರ ಬರೆದು, ತನ್ನ ಪ್ರಿಯತಮೆಗೆ ಹುಟ್ಟು ಹಬ್ಬದ ಶುಭ ಕೋರಿ ಹುಂಡಿಗೆ ಹಾಕಿದ್ದಾನೆ.

    ಮತ್ತೊಬ್ಬ ಭಕ್ತನೊಬ್ಬ ದೇವರ ಹುಂಡಿ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಗೆ ಇಂಗ್ಲಿಷ್ ನಲ್ಲಿ ಪತ್ರ ಬರೆದು ಮನವಿ ಮಾಡಿದ್ದಾನೆ.

    ಪತ್ರದಲ್ಲಿ ಏನಿದೆ?
    ವಿಷಯ: ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ತಾಲೂಕಿಗೆ ಮೂಲಭೂತ ಸೌಲಭ್ಯಗಳನ್ನ ಓದಗಿಸುವಂತೆ ಕೋರಿ.

    22 ವರ್ಷದ ನಾನು ಹೆಸರು ವಿಳಾಸವನ್ನ ಬಹಿರಂಗಪಡಿಸುವುದಿಲ್ಲ. ಜಿಲ್ಲೆಯ ಬಾಗೇಪಲ್ಲಿ ಶಿಡ್ಲಘಟ್ಟ, ಚಿಂತಾಮಣಿ ತಾಲೂಕಿನಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ರಸ್ತೆಗಳ ಸಮಸ್ಯೆಯಿದೆ. ಜಿಲ್ಲಾಡಳಿತದ ಅಧಿಕಾರಿಗಳ ಮೂಲಕ ಈ ಸಮಸ್ಯೆಗಳಿಗೆ ಮುಕ್ತಿ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾನೆ.

    ಹುಂಡಿಯಲ್ಲಿ ಮಕ್ಕಳು ಆಟ ಆಡಲು ಬಳಸುವ ಎರಡು ಸಾವಿರ ಮುಖ ಬೆಲೆಯ ನಕಲಿ ನೋಟುಗಳು ಹಾಗೂ ಅಮಾನ್ಯ ಮಾಡಲಾದ ಚಲಾವಣೆ ಇಲ್ಲದ 500 ಮುಖ ಬೆಲೆಯ ನೋಟುಗಳು ಕೂಡ ಕಂಡು ಬಂದಿದೆ. ಈ ರೀತಿಯ ಚಿತ್ರ ವಿಚಿತ್ರ ಹರಕೆಗಳಿಗೆ ಹಾಕಿರೋದಕ್ಕೆ ದೇವಸ್ಥಾನದ ಅರ್ಚಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಹುಂಡಿಯಲ್ಲಿ 15 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸಂಗ್ರಹವಾಗಿದೆ.

  • ಬಿಳಿಗಿರಿರಂಗನಿಗೆ ಈ ಬಾರಿಯೂ ಹಳೇನೋಟಿನ ಕಾಣಿಕೆ

    ಬಿಳಿಗಿರಿರಂಗನಿಗೆ ಈ ಬಾರಿಯೂ ಹಳೇನೋಟಿನ ಕಾಣಿಕೆ

    ಚಾಮರಾಜನಗರ: ಹಸಿರ ಕಾನನದಲ್ಲಿ ನೆಲೆನಿಂತಿರುವ ಯಳಂದೂರು ತಾಲೂಕಿನ ಬಿಳಿಗಿರರಂಗನಾಥನಿಗೆ 5 ತಿಂಗಳಿನಲ್ಲಿ 25 ಲಕ್ಷ ರೂ. ಕಾಣಿಕೆ ಹರಿದುಬಂದಿದೆ. ಆದರೆ ಇದರಲ್ಲಿ 60,500 ಚಲಾವಣೆಯಾಗದ ಹಳೇ ನೋಟುಗಳು ದೊರೆತಿವೆ.

    ಸೋಮವಾರ ತಡರಾತ್ರಿವರೆಗೆ ನಡೆದ ದೇಗುಲ ಹುಂಡಿ ಎಣಿಕೆಯಲ್ಲಿ 25,29,383 ರೂ. ಸಂಗ್ರಹವಾಗಿದ್ದು, ಈ ಬಾರಿಯೂ ಚಲಾವಣೆಯಾಗದ ಕಂತೆ – ಕಂತೆ ಹಣ ರಂಗಪ್ಪನ ಪಾಲಾಗಿದೆ. 500 ರೂ. ನೋಟಿನ ಕಂತೆಗಳಲ್ಲಿ ಒಟ್ಟು 60,500 ರೂ. ಹಳೇ ನೋಟ್‍ಗಳನ್ನು ಭಕ್ತನೊಬ್ಬ ಹಾಕಿದ್ದಾನೆ. ಈ ಹಿಂದೆ ಸೆಪ್ಟೆಂಬರ್ ನಲ್ಲಿ ನಡೆದ ಹುಂಡಿ ಎಣಿಕೆಯಲ್ಲೂ 55 ಸಾವಿರ ರೂ. ಚಲಾವಣೆಯಾಗದ ನೋಟುಗಳು ಹುಂಡಿಯಲ್ಲಿ ಸಿಕ್ಕಿದ್ದವು.

    ಒಟ್ಟು ಎರಡು ಬಾರಿ ಹುಂಡಿ ಎಣಿಕೆಯಿಂದ 1,15,000 ಹಳೇ ನೋಟುಗಳನ್ನು ಗಿರಿಜನರ ಆರಾಧ್ಯದೈವ ರಂಗನಾಥ ಪಡೆದಿದ್ದಾನೆ. ಒಟ್ಟಿನಲ್ಲಿ ಕೂಡಿಟ್ಟ ಕಪ್ಪು ಹಣವನ್ನು ಭಕ್ತರು ಗೋವಿಂದನ ಪಾದಕ್ಕೆ ಸಮರ್ಪಿಸುತ್ತಿದ್ದಾರೆ.

  • ಒಂದೂವರೆ ತಿಂಗ್ಳಲ್ಲಿ 96 ಲಕ್ಷಕ್ಕೂ ಅಧಿಕ ಹಣ ಸಂಗ್ರಹ – ನಿಷೇಧಿತ ನೋಟುಗಳು ಪತ್ತೆ

    ಒಂದೂವರೆ ತಿಂಗ್ಳಲ್ಲಿ 96 ಲಕ್ಷಕ್ಕೂ ಅಧಿಕ ಹಣ ಸಂಗ್ರಹ – ನಿಷೇಧಿತ ನೋಟುಗಳು ಪತ್ತೆ

    ಮೈಸೂರು: ನೋಟ್ ಬ್ಯಾನ್ ಆಗಿ ಮೂರು ವರ್ಷ ಕಳೆದರೂ ಜನರು ಮಾತ್ರ ಹಳೆಯ ನೋಟನ್ನು ದೇವರ ಹುಂಡಿಗೆ ಹಾಕುವುದನ್ನು ನಿಲ್ಲಿಸುತ್ತಿಲ್ಲ. ತಮ್ಮ ಬಳಿ ಇಟ್ಟುಕೊಂಡಿರುವ ಹಳೆಯ 500 ಹಾಗೂ 1 ಸಾವಿರ ರೂ. ಮುಖ ಬೆಲೆಯ ನೋಟ್‍ಗಳನ್ನು ಕಾಣಿಕೆ ರೂಪವಾಗಿ ದೇವರ ಹುಂಡಿಗೆ ಹಾಕಿದ್ದಾರೆ.

    ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀ ನಂಜುಂಡೇಶ್ವರನ ದೇವಸ್ಥಾನದ ಹುಂಡಿಯಲ್ಲಿ 20 ಸಾವಿರ ರೂಪಾಯಿಗಳ ಹಳೆಯ ನೋಟುಗಳು ಸಿಕ್ಕಿವೆ. ನಂಜನಗೂಡು ದೇವಸ್ಥಾನದ ಹುಂಡಿ ಹಣದ ಎಣಿಕೆ ನಡೆದಿದೆ. ಹುಂಡಿಯಲ್ಲಿ 96 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಇದರಲ್ಲಿ ನಿಷೇಧಿತ ನೋಟುಗಳು ಇವೆ.

    ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಸಂಗ್ರಹವಾದ ಹಣವಿದು. ಹಣದ ಜೊತೆಗೆ 34 ಗ್ರಾಂ ಚಿನ್ನ, 1 ಕೆಜಿ 800 ಗ್ರಾಂ ಬೆಳ್ಳಿ ಹಾಗೂ 8 ವಿದೇಶಿ ಕರೆನ್ಸಿಗಳು ಕೂಡ ಸಂಗ್ರಹವಾಗಿವೆ.

  • ಬೆಂಗ್ಳೂರಿನಲ್ಲಿ 500, 1 ಸಾವಿರ ಮುಖಬೆಲೆಯ 1 ಕೋಟಿ ಹಣ ವಶ

    ಬೆಂಗ್ಳೂರಿನಲ್ಲಿ 500, 1 ಸಾವಿರ ಮುಖಬೆಲೆಯ 1 ಕೋಟಿ ಹಣ ವಶ

    ಬೆಂಗಳೂರು: 500 ರೂ. ಮತ್ತು 100 ಮುಖಬೆಲೆ ಹಳೆ ನೋಟು ಬ್ಯಾನ್ ಆಗಿ ಎರಡು ವರ್ಷ ಕಳೆದರೂ ಸಿಲಿಕಾನ್ ಸಿಟಿಯಲ್ಲಿ ಬ್ಲಾಕ್ ಅಂಡ್ ವೈಟ್ ದಂಧೆ ಇನ್ನೂ ನಿಂತಿಲ್ಲ.

    ನಗರದಲ್ಲಿ ಹಳೆಯ ನೋಟುಗಳನ್ನು ಹೊಸ ನೋಟುಗಳಾಗಿ ಪರಿವರ್ತನೆ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸದಾಶಿವನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರ ಬಳಿಕ ಇದ್ದ ಬರೋಬ್ಬರಿ ಒಂದು ಕೋಟಿ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಒಂದು ಕೋಟಿ ಪೂರ್ತಿ ಹಳೆಯ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳಾಗಿವೆ. ಆರೋಪಿಗಳು ಮತ್ತೆ ಅದೇ ನೋಟುಗಳ ಚಲಾವಣೆಗೆ ಬರುತ್ತೆ ಎಂದು ಜನರಿಗೆ ವಂಚನೆ ಮಾಡುತ್ತಿದ್ದರು.

    ವಂಚನೆ ಹೇಗೆ?
    ಆರೋಪಿಗಳ ಗ್ಯಾಂಗ್ ಮತ್ತೆ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳು ಚಲಾವಣೆಗೆ ಬರುತ್ತವೆ ಎಂದು ಮೊದಲು ಹೇಳಿ ಸಾರ್ವಜನಿಕರನ್ನು ನಂಬಿಸುತ್ತಿದ್ದರು. ನೀವು ನಮಗೆ 25 ಲಕ್ಷ ರೂ. ಹಣವನ್ನು ಕೊಡಿ. ನಾವು ನಿಮಗೆ 1 ಕೋಟಿ ಹಳೆಯ ನೋಟನ್ನು ಕೊಡುತ್ತೇವೆ. ಮುಂದಿನ ಸರ್ಕಾರದಲ್ಲಿ ಹಳೆಯ ನೋಟು ಚಲಾವಣೆಗೆ ಬಂದಾಗ ನಿಮಗೆ 75 ಲಕ್ಷ ರೂ. ಲಾಭವಾಗುತ್ತದೆ ಎಂದು ಹೇಳುವ ಮೂಲಕ ತಮ್ಮ ಬಳಿ ಇದ್ದ ಹಳೆಯ ನೋಟನ್ನು ಬದಲಾವಣೆ ಮಾಡಲು ಮುಂದಾಗಿದ್ದರು.

    ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಇಂದು ವಿನೋದ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಹಣ ಎಲ್ಲಿಂದ ಬಂದಿದ್ದು, ಯಾರಿಗಾಗಿ ಹಳೆ ನೋಟು ಬದಲಾವಣೆ ಮಾಡುತ್ತಿದ್ದೀರ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಬ್ಯಾನ್ ಆಗಿ 2 ವರ್ಷವಾದ್ರೂ ಮಂಡ್ಯದಲ್ಲಿ ಹಳೆಯ ನೋಟುಗಳು ಪತ್ತೆ

    ಬ್ಯಾನ್ ಆಗಿ 2 ವರ್ಷವಾದ್ರೂ ಮಂಡ್ಯದಲ್ಲಿ ಹಳೆಯ ನೋಟುಗಳು ಪತ್ತೆ

    ಮಂಡ್ಯ: ನೋಟ್ ಬ್ಯಾನ್ ಆಗಿ ಎರಡು ವರ್ಷ ಕಳೆದರೂ ಭಕ್ತರು ಮಾತ್ರ ತಮ್ಮಲ್ಲಿರುವ ಹಳೆಯ ನೋಟುಗಳನ್ನು ದೇವಾಲಯದ ಹುಂಡಿಗೆ ಹಾಕುತ್ತಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದ ಹುಂಡಿಯಲ್ಲಿ ಹಳೆಯ ನೋಟುಗಳು ಪತ್ತೆಯಾಗಿದೆ. ಶ್ರೀರಂಗಪಟ್ಟಣದ ನಿಮಿಷಾಂಭ ದೇವಾಲಯದಲ್ಲಿ ಶುಕ್ರವಾರ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿದೆ. ಹುಂಡಿಯಲ್ಲಿ ಸುಮಾರು 39 ಲಕ್ಷ ಹಣ ಸಂಗ್ರಹವಾಗಿತ್ತು.

    ಚಿನ್ನ, ಬೆಳ್ಳಿ ಸೇರಿದಂತೆ, ಅಮೆರಿಕ, ಮಲೇಷಿಯ ಹಾಗೂ ವಿವಿಧ ದೇಶಗಳ ಕರೆನ್ಸಿ ಕೂಡ ಸಂಗ್ರಹವಾಗಿತ್ತು. ಈ ವೇಳೆ ಹುಂಡಿಯಲ್ಲಿ 500 ರೂಪಾಯಿಯ 12 ಹಳೇ ನೋಟುಗಳು ಮತ್ತು ಸಾವಿರ ರೂಪಾಯಿಯ ಮೂರು ಹಳೇ ನೋಟುಗಳು ಪತ್ತೆಯಾಗಿವೆ.

    ಹಳೆಯ 500 ಮತ್ತು 1000 ರೂಪಾಯಿಯ ನೋಟುಗಳು ನಿಷೇಧವಾಗಿ ಎರಡು ವರ್ಷ ಕಳೆದರೂ ದೇವರ ಹುಂಡಿಯಲ್ಲಿ ಮಾತ್ರ ಹಳೇ ನೋಟುಗಳು ಪತ್ತೆಯಾಗಿದ್ದು ವಿಶೇಷವಾಗಿತ್ತು. ಅಂದರೆ ಜನರು ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಬೇರೆ ಕಡೆ ಕೊಡಲು ಸಾಧ್ಯವಾಗದೇ ಈ ರೀತಿಯಾಗಿ ದೇವರ ಹುಂಡಿಯಲ್ಲಿ ಹಾಕುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳೇ ನೋಟು ಸಂಗ್ರಹಿಸೋ ಖತರ್ನಾಕ್ ಗ್ಯಾಂಗ್ ಬಂಧನ- 1.95 ಕೋಟಿ ರೂ. ವಶ

    ಹಳೇ ನೋಟು ಸಂಗ್ರಹಿಸೋ ಖತರ್ನಾಕ್ ಗ್ಯಾಂಗ್ ಬಂಧನ- 1.95 ಕೋಟಿ ರೂ. ವಶ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500 ರೂ., 1 ಸಾವಿರ ರೂ. ನೋಟು ಬ್ಯಾನ್ ಮಾಡಿ ಸರಿಸುಮಾರು 2 ವರ್ಷ ಆಗುತ್ತಿದ್ದರೂ ನಗರದಲ್ಲಿ ಹಳೇ ನೋಟು ಬದಲಾವಣೆ ದಂಧೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಇದರಂತೆ ನಗರದಲ್ಲಿ ನೋಟು ಬದಲಾವಣೆ ಮಾಡುತ್ತಿದ್ದ ಗ್ಯಾಂಗನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ರಮೇಶ್, ಸಕಾರಕ್, ಪ್ರಕಾಶ್, ವೆಂಕಟರಾಮ್ ಬಂಧಿತ ಆರೋಪಿಗಳು. ಮಡಿಕೇರಿ ಮೂಲದ ವ್ಯಕ್ತಿಯೊಬ್ಬರಿಂದ ಹಳೇ ನೋಟು ತಂದಿದ್ದ ನಾಲ್ವರು ಇಪ್ಪತ್ತು ಪರ್ಸೆಂಟ್ ಕಮೀಷನ್‍ಗೆ ಹಳೇ ನೋಟು ಕೊಟ್ಟು ಹೊಸ ನೋಟು ಪಡೆಯುತ್ತಿದ್ದರು.

    ನೋಟು ಬದಲಾವಣೆ ದಂಧೆ ಮಾಡುತ್ತಿದ್ದ ಆರೋಪಿಗಳು ಬಿಜೆಪಿ ಸರ್ಕಾರದ ಅವಧಿ ಮುಗಿದ ಬಳಿಕ ಮತ್ತೆ ಹಳೇ ನೋಟು ಚಲಾವಣೆಗೆ ಬರುತ್ತೆ ಎಂದು ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದರು. ಈಗಾಗಲೇ ಹಲವು ಮಂದಿಗೆ ಇದೇ ರೀತಿ ಹೇಳಿ ಮೋಸ ಮಾಡಿದ್ದ ಈ ಗ್ಯಾಂಗ್, ಹಳೆ ನೋಟುಗಳನ್ನು ತೆಗೆದುಕೊಳ್ಳಲು ಸಾಕಷ್ಟು ಗಿರಾಕಿಗಳನ್ನು ಹೊಂದಿದ್ದರು ಎನ್ನಲಾಗಿದೆ.

    ನಗರದ ನಂದಿನಿ ಲೇಔಟ್ ಬಸ್ ನಿಲ್ದಾಣದ ಬಳಿ 1,95 ಕೋಟಿ ರೂ. ಹಣ ಬದಲಾವಣೆಗಾಗಿ ಕಾದು ಕುಳಿತಿದ್ದ ವೇಳೆ ಖಚಿತ ಮಾಹಿತಿ ಪಡೆದ ಪೊಲೀಸರು ನಗದು ಸಮೇತ ಬಂಧಿಸಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ಈ ಗ್ಯಾಂಗಿನ ಪ್ರಮುಖ ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಇಂತಹ ಗ್ಯಾಂಗ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಿಷೇಧವಾಗಿದ್ದರೂ ಬರೋಬ್ಬರಿ 500, 1 ಸಾವಿರ ಮುಖಬೆಲೆಯ 3 ಕೋಟಿ ರೂ. ಪತ್ತೆ!

    ನಿಷೇಧವಾಗಿದ್ದರೂ ಬರೋಬ್ಬರಿ 500, 1 ಸಾವಿರ ಮುಖಬೆಲೆಯ 3 ಕೋಟಿ ರೂ. ಪತ್ತೆ!

    ಪುಣೆ: ನೋಟು ನಿಷೇಧವಾಗಿ ಸುಮಾರು ಒಂದೂವರೆ ವರ್ಷವಾದ್ರೂ 500 ಮತ್ತು 1,000 ರೂ. ಮುಖಬೆಲೆಯ ಬರೋಬ್ಬರಿ 3 ಕೋಟಿ ರೂ.ವನ್ನು ಶುಕ್ರವಾರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

    ಖಾದಕ್ ಪೊಲೀಸರು ಈ ಕಾರ್ಯಚರಣೆ ನಡೆಸಿದ್ದು, ಶುಕ್ರವಾರ ರಾತ್ರಿ ಕಾಂಗ್ರೆಸ್ ಶಾಸಕ ಸೇರಿದಂತೆ ಐದು ಜನರನ್ನು ಬಂಧಿಸಿದ್ದಾರೆ. ಶಾಸಕ ಗಜೇಂದ್ರ ಅಹ್ಹಂಗ್, ಸಂಗನ್ಮರ್ ಮುನಿಸಿಪಲ್ ಕೌನ್ಸಿಲ್ ನ ಕಾರ್ಪೊರೇಟರ್ ಎಂದು ತಿಳಿದುಬಂದಿದೆ. ಇತರರನ್ನು ವಿಜಯ್ ಶಿಂಧೆ (38), ಆದಿತ್ಯ ಘಾನ್ (25) ಮತ್ತು ನವನಾಥ್ ಭಂಡಾಗೆಲ್ (28) ಇವರು ಮೂಲತಃ ಪುಣೆಯವರಾಗಿದ್ದು, ಮತ್ತೊಬ್ಬ ಸತಾರಾ ಜಿಲ್ಲೆಯ ಸುರಾಜ್ ಜಗ್ತಾಪ್ (40) ಎಂದು ಗುರುತಿಸಲಾಗಿದೆ.

    ಈ ಐದು ಬಂಧಿತ ಆರೋಪಿಗಳು ಶುಕ್ರವಾರ ರಾತ್ರಿ ರವಿವರ್ ಪೆಥ್ ಪ್ರದೇಶದಲ್ಲಿ ಹಳೆಯ ನೋಟುಗಳನ್ನು ವಿನಿಮಯ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೇವಲ 48 ಸಾವಿರ ರೂ.ವನ್ನು ಮಾತ್ರ ಹಳೆಯ ನೋಟಿನಿಂದ ನವೀಕರಣ ಮಾಡಲಾಗಿತ್ತು. ಇನ್ನುಳಿದ 2.99 ಕೋಟಿ ರೂ.ಗಳು ಹಳೆಯ 500 ಮತ್ತು 1,000 ರೂ. ನೋಟುಗಳಿದ್ದವು. ಸದ್ಯಕ್ಕೆ ಈ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ತಿಳಿದಿದ್ದು, ಅವರು ಸ್ಥಳಕ್ಕೆ ಬಂದು ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಶಪಡಿಸಿಕೊಂಡಿರುವ ಹಣವು ಯಾರದು ಎಂದು ತಿಳಿದುಕೊಳ್ಳಲು ತನಿಖೆಯನ್ನು ಮುಂದುವರೆಸಿದ್ದೇವೆ.

  • ನೋಟ್‍ಬ್ಯಾನ್ ಆಗಿ ವರ್ಷವಾದ್ರೂ ಬೆಂಗ್ಳೂರಿನ ದೇಗುಲಗಳಲ್ಲಿ ಧೂಳು ತಿನ್ನುತ್ತಿರೋ ಲಕ್ಷ ಲಕ್ಷ ಹಳೇ ನೋಟು

    ನೋಟ್‍ಬ್ಯಾನ್ ಆಗಿ ವರ್ಷವಾದ್ರೂ ಬೆಂಗ್ಳೂರಿನ ದೇಗುಲಗಳಲ್ಲಿ ಧೂಳು ತಿನ್ನುತ್ತಿರೋ ಲಕ್ಷ ಲಕ್ಷ ಹಳೇ ನೋಟು

    ಬೆಂಗಳೂರು: ಮೋದಿ ಸರ್ಕಾರ ಕಪ್ಪು ಹಣದ ವಿರುದ್ಧ ಸಮರ ಸಾರಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ಮೋಟುಗಳನ್ನ ಬ್ಯಾನ್ ಮಾಡಿ ವರ್ಷವೇ ಕಳೆದಿದೆ. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಾಲಯಗಳಲ್ಲಿ ಹಳೆಯ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಧೂಳು ತಿನ್ನುತ್ತಿವೆ.

    ಹೆಚ್ಚಿನ ದೇವಾಲಯಗಳು ಹಳೆಯ ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಿ ದೇವಾಲಯದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಂಡಿದ್ದರು. ಆದರೆ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ದೇವಾಲಯಗಳಲ್ಲಿ ಮಾತ್ರ ಹಳೇ ನೋಟುಗಳು ಧೂಳು ತಿನ್ನುತ್ತಾ ಬಿದ್ದಿವೆ.

    ಬೆಂಗಳೂರಿನ ಶ್ರೀ ಮಹಾಗಣಪತಿ ಮತ್ತು ಸಮೂಹ ದೇವಸ್ಥಾನ, ಶ್ರೀ ರಾಯರಾಯ ಕಲ್ಯಾಣ ಮಂಟಪ ಮತ್ತು ಸಮೂಹ ದೇವಾಲಯಗಳು, ಬನಶಂಕರಿ, ಪ್ರಸನ್ನ ವೀರಾಂಜನೇಯ ಸ್ವಾಮಿ, ದೊಡ್ಡಗಣಪತಿ ಸೇರಿದಂತೆ ಒಟ್ಟು 54 ದೇವಾಲಯಗಳಲ್ಲಿ ಕಳೆದ ಮಾರ್ಚ್ 27ರಂದು ಅಧಿಕಾರಿಗಳು ಹುಂಡಿ ತೆರೆದಿದ್ದರು. ಈ ವೇಳೆ 20 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಹಳೇ ನೋಟುಗಳು ಪತ್ತೆಯಾಗಿದ್ದವು. ಆದರೆ ಅಧಿಕಾರಿಗಳು ಈ ನೋಟುಗಳನ್ನು ಬ್ಯಾಂಕಿಗೆ ಹಾಕದೆ ಸ್ಟ್ರಾಂಗ್ ರೂಮ್‍ನಲ್ಲಿ ಧೂಳು ಹಿಡಿಯಲು ಬಿಟ್ಟಿದ್ದಾರೆ. ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಧಾರ್ಮಿಕ ದತ್ತಿ ಇಲಾಖೆಯಿಂದ ಆರ್ ಟಿಐ ಕಾಯ್ದೆ ಅಡಿ ಪಡೆದ ಮಾಹಿತಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಬಹಿರಂಗವಾಗಿದೆ.

    ಬೆಂಗಳೂರಿನ ಒಟ್ಟು 54 ದೇವಾಲಯಗಳ ಹುಂಡಿಗಳಲ್ಲಿ 20 ಲಕ್ಷ ರೂಪಾಯಿ ಹಳೇ ನೋಡು ಕೊಳೆಯುತ್ತಾ ಬಿದ್ದಿದೆ. ದೇವಾಲಯಗಳ ಅಭಿವೃದ್ಧಿಗೆ ಈ ಹಣವನ್ನ ಬಳಸಬಹುದಿತ್ತು. ಅಷ್ಟು ದುಡ್ಡಿಗೆ ಬೆಲೆನೇ ಇಲ್ವಾ? ಮುಜರಾಯಿ ಸಚಿವರು, ಅಧಿಕಾರಿಗಳೇ ಇದಕ್ಕೆ ಕಾರಣ. ಅವರೇ ಇದಕ್ಕೆ ಉತ್ತರ ಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ರವಿ ಆಗ್ರಹಿಸಿದ್ದಾರೆ.

  • ಮೋದಿ ಸರ್ಕಾರಕ್ಕೆ ಶಾಕ್ ಕೊಟ್ಟ ಖದೀಮರು- 12 ಲಕ್ಷ ರೂ. ಹಳೇ ನೋಟು ಪತ್ತೆ

    ಮೋದಿ ಸರ್ಕಾರಕ್ಕೆ ಶಾಕ್ ಕೊಟ್ಟ ಖದೀಮರು- 12 ಲಕ್ಷ ರೂ. ಹಳೇ ನೋಟು ಪತ್ತೆ

    ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೇ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟ್ ಬ್ಯಾನ್ ಮಾಡಿ ಒಂದು ವರ್ಷವೇ ಕಳೆದರೂ ಹಳೆ ನೋಟ್‍ಗಳ ಬದಲಾವಣೆ ಮಾಡುವ ಮಾಫಿಯಾ ಇನ್ನೂ ಕಾರ್ಯಾಚರಣೆ ನಡೆಸುತ್ತಲೇ ಇದೆ. ಇದಕ್ಕೆ ತಾಜಾ ಉದಾರಣೆ ಎಂಬಂತೆ ಗದಗ ನಗರದಲ್ಲಿ ಹಳೇ ನೋಟ್ ಗಳನ್ನು ಆಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

    ಬಂಧಿತರಲ್ಲಿ ಇಬ್ಬರು ಗದಗ ನಗರ ನಿವಾಸಿಗಳಾಗಿದ್ದು ಮತ್ತಿಬ್ಬರು ಗದಗ ತಾಲೂಕಿನ ನಾಗಾವಿ ಮತ್ತು ಮಲ್ಲಸಮುದ್ರ ಗ್ರಾಮದ ನಿವಾಸಿಗಳಾಗಿದ್ದಾರೆ. ಗದಗ ರಾಧಾಕೃಷ್ಣ ನಗರದ ಮಾಬುಸುಬಾನಿ ಸವಡಿ(40), ನಗರದ ಗಂಗಿಮಡಿ ಕಾಲೋನಿ ನಿವಾಸಿ ಮಹಮದ್ ಯುಷುಫ್ ಗುಳಗುಂದಿ (26) ಹಾಗೂ ತಾಲೂಕಿನ ಮಲ್ಲಸಮುದ್ರ ಗ್ರಾಮದ ಸುರೇಶ್ ಹಳ್ಳಿಕೇರಿ(45), ನಾಗಾವಿ ಗ್ರಾಮದ ಮುತ್ತಪ್ಪ ಮಲ್ಲಮ್ಮ ನವರ್ (36) ಬಂಧಿತ ಆರೋಪಿಗಳು.

    ಹಳೇ ನೋಟುಗಳನ್ನು ಸಾಗಣೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಗದಗ ಬೆಟಗೇರಿ ಬಡಾವಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಗರದ ರೈಲ್ವೇ ಕ್ವಾಟ್ರಸ್ ಬಳಿ ಬೈಕ್ ಮೇಲೆ ಹಣ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಸುಮಾರು 12 ಲಕ್ಷ ರೂ. ಮೌಲ್ಯದ ಹಳೇ ನೋಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.

    ಆರೋಪಿಗಳನ್ನು ಪೋಲಿಸರು ಬಂಧಿಸಿದ ನಂತರ ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಮೂಡಿದೆ. ಈ ಹಣ ಯಾರದ್ದು? ಹಳೇ ನೋಟುಗಳನ್ನ ಇನ್ನೂ ಎಕ್ಸ್‍ಚೆಂಜ್ ಮಾಡುವ ಕುಳಗಳು ಯಾರು? ಬ್ಲಾಕ್ ಮನಿ ವೈಟ್ ಮನಿ ಮಾಡೊಕೆ ಸಜ್ಜಾಗಿದ್ದಾರಾ ಕಪ್ಪು ಕುಳಗಳು? ಆ ಹಳೇನೋಟನ್ನು ಈಗಲೂ ಸ್ವೀಕರಿಸ್ತಾರೆ ಅಂದರೆ ಅದರ ಹಿಂದಿರುವ ಕೈವಾಡವಾದರು ಎಂತಹದ್ದು? ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸ್ ವಿಚಾರಣೆ ನಂತರವಷ್ಟೇ ಉತ್ತರ ಸಿಗಲಿದೆ.