Tag: Old age people

  • ಲಸಿಕೆಗಾಗಿ ಆವಾಜ್ – ಆರೋಗ್ಯ ಸಿಬ್ಬಂದಿ ಜೊತೆ ಕಾಂಗ್ರೆಸ್ ಮುಖಂಡನ ವಾಗ್ವಾದ

    ಲಸಿಕೆಗಾಗಿ ಆವಾಜ್ – ಆರೋಗ್ಯ ಸಿಬ್ಬಂದಿ ಜೊತೆ ಕಾಂಗ್ರೆಸ್ ಮುಖಂಡನ ವಾಗ್ವಾದ

    ಬೆಂಗಳೂರು: ಲಸಿಕೆ ಪಡೆಯಲು ಕಾಂಗ್ರೆಸ್ ಮುಖಂಡ ಮಾಜಿ ಪುರಸಭಾ ಸದಸ್ಯ ಲಸಿಕಾ ಕೇಂದ್ರಕ್ಕೆ ಬಂದು ಆರೋಗ್ಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

    ಕೊರೊನಾ ವ್ಯಾಕ್ಸಿನ್ ಗಾಗಿ ಜನ ಪರದಾಡುತ್ತಿದ್ದು, ಕೊರೊನಾ ಲಸಿಕೆ ಪಡೆಯಲು ಆನೇಕಲ್ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಲಸಿಕಾ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಲ್ಲಿ ನಿಂತು ವಯ್ಯೋವೃದ್ದರು ಕಾಯುತ್ತಿದ್ದರು. ಈ ವೇಳೆ ಲಸಿಕೆ ಪಡೆಯಲು ಕಾಂಗ್ರೆಸ್ ಮುಖಂಡ ಮಾಜಿ ಪುರಸಭಾ ಸದಸ್ಯ ಮಲ್ಲಿಕಾರ್ಜುನ್ ಲಸಿಕಾ ಕೇಂದ್ರಕ್ಕೆ ಬಂದು ಆರೋಗ್ಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

    ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ್ ಸರತಿ ಸಾಲಲ್ಲಿ ನಿಂತಿದ್ದವರನ್ನು ಬಿಟ್ಟು ತಮಗೆ ವ್ಯಾಕ್ಸಿನ್ ನೀಡುವಂತೆ ಲಸಿಕಾ ಕೇಂದ್ರದ ಸಿಬ್ಬಂದಿಯನ್ನು ಕೇಳಿದ್ದು, ಸಿಬ್ಬಂದಿ ಸಾಲಿನಲ್ಲಿ ಬರುವಂತೆ ತಿಳಿಸಿದ್ದಾರೆ. ಈ ವೇಳೆ ತಾನು ಹಿರಿಯ ವೈದ್ಯರಿಗೆ ಹೇಳಿದ್ದೇನೆ ಎಂದು ತಿಳಿಸಿದ್ದೇನೆ ಲಸಿಕೆ ಕೊಡಿ ಅಂದು ವಾಗ್ವಾದ ತೆಗೆದಿದ್ದಾರೆ. ಈ ನಡುವೆ ಪೊಲೀಸರು ಆರೋಗ್ಯ ಸಿಬ್ಬಂದಿ ಹಾಗೂ ಮಲ್ಲಿಕಾರ್ಜುನ್ ನಡುವೆ ಮಾತಿನ ಚಕಮಕಿ ನಡೆದಿದೆ.

    ಜೊತೆಗೆ ಕಳೆದ ಒಂದು ವಾರದಿಂದ ಇದೇ ರೀತಿ ಗಲಾಟೆ ಮಾಡುತ್ತಿದ್ದಾರೆ. ಇನ್ನು ಆನೇಕಲ್ ಲಸಿಕಾ ಕೇಂದ್ರದಲ್ಲಿ ಲಸಿಕಾ ಅಭಿಯಾನ ನಡೆಸುತ್ತಿದ್ದು, ಆರೋಗ್ಯ ಪೊಟರ್ಲ್ ನಲ್ಲಿ ನೊಂದಣಿ ಮಾಡಿಕೊಂಡವರು ಬರುತ್ತಿರುವಸರಿಂದ ಸ್ಥಳೀಯರಿಗೆ ಲಸಿಕೆ ಕೊರತೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಇನ್ನೂ ಸಂಬಂಧಪಟ್ಟ ಸಚಿವರು ವ್ಯಾಕ್ಸಿನ್ ಹೆಚ್ಚು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

  • ವೃದ್ಧಾಪ್ಯ ವೇತನ ನೆಪದಲ್ಲಿ ದೋಚುತ್ತಾನೆ ಚಿನ್ನಾಭರಣ- ಬೆಂಗ್ಳೂರಲ್ಲೊಬ್ಬ ಖತರ್ನಾಕ್ ಕಳ್ಳ

    ವೃದ್ಧಾಪ್ಯ ವೇತನ ನೆಪದಲ್ಲಿ ದೋಚುತ್ತಾನೆ ಚಿನ್ನಾಭರಣ- ಬೆಂಗ್ಳೂರಲ್ಲೊಬ್ಬ ಖತರ್ನಾಕ್ ಕಳ್ಳ

    ಬೆಂಗಳೂರು: ಮನೆಯಲ್ಲಿ ವೃದ್ಧ ತಂದೆ ತಾಯಿಗಳಿದ್ರೆ ಜೋಪಾನವಾಗಿರಿ. ಯಾಕಂದರೆ ಓಲ್ಡ್ ಏಜ್ ಪೆನ್ಷನ್ ನೆಪದಲ್ಲಿ ಲೂಟಿಕೋರನೊಬ್ಬ ಬಂದಿದ್ದಾನೆ.

    ಈ ಲೂಟಿಕೋರ ಮಂಜೇಶ್ ವೃದ್ಧಾಪ್ಯ ವೇತನ ಕೊಡಿಸೋದಾಗಿ ನಂಬಿಸಿ ಚಿನ್ನಾಭರಣ ದೋಚುತ್ತಿದ್ದಾನೆ. ಸುಮಾರು ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳಿಗೂ ಈತ ಚಿರಪರಿಚಿತನಾಗಿದ್ದು, ಸೈಲೆಂಟಾಗಿ ಬಂದು ವೃದ್ಧರನ್ನೇ ಟಾರ್ಗೆಟ್ ಮಾಡುತ್ತಿದ್ದಾನೆ.

    ಆಸ್ಪತ್ರೆ, ಮಂದಿರ-ಮಸೀದಿಗಳೇ ಈತನ ಹಾಟ್ ಫೇವರೇಟ್ ಸ್ಪಾಟ್ ಆಗಿದೆ. ವೃದ್ಧಾಪ್ಯ ವೇತನ ಕೊಡಿಸೋದಾಗಿ ಮೊದಲಿಗೆ ನಂಬಿಸುತ್ತಾನೆ. ಅದಕ್ಕಾಗಿ ನಿಮ್ಮದೊಂದು ಫೋಟೋ ಬೇಕೆಂದು ಸ್ಟುಡಿಯೋಗೆ ಕರೆದುಕೊಂಡು ಹೋಗುತ್ತಾನೆ. ಈ ವೇಳೆ ಹೀಗೆಲ್ಲ ಒಡವೆ ಹಾಕಿಕೊಂಡರೆ ಓಲ್ಡ್ ಪೆನ್ಷನ್ ಕೊಡಲ್ಲ. ನಿಮ್ಮನ್ನು ಶ್ರೀಮಂತರು ಅಂದುಕೊಂಡು ಬಿಡುತ್ತಾರೆ. ಹೀಗಾಗಿ ಎಲ್ಲಾ ಬಿಚ್ಚಿಡಿ ಎಂದು ಹೇಳುತ್ತಾನೆ. ಹೀಗೆ ಗಿಮಿಕ್ ಮಾಡಿ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿ ಪರಾರಿಯಾಗುತ್ತಾನೆ.

    ಭಾನುವಾರವೂ ವೃದ್ಧರೊಬ್ಬರನ್ನ ನಂಬಿಸಿ ಮಂಜೇಶ್ ಚಿನ್ನಾಭರಣ ದೋಚಿದ್ದಾನೆ. ಬೆಂಗಳೂರಿನ ಬಗಲುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಮಂಜೇಶ್ ತನ್ನ ಕೈ ಚಳಕ ತೋರಿದ್ದಾನೆ. ಆರೋಪಿ ವಂಚನೆಗೊಳಗಾದವರನ್ನ ತನ್ನ ಬೈಕ್ ನಲ್ಲಿ ಕರೆದೊಯ್ತಿರೋ ಸಿಸಿ ಟಿವಿ ದೃಶ್ಯಾವಳಿ ಲಭ್ಯವಾಗಿದೆ.

    ಬಗಲುಗುಂಟೆ ಪೊಲೀಸರಿಂದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.