Tag: officers

  • ನೋಡೋ ನನ್ ಫೋನ್ ಹೇಗಿದೆ, ನಿನ್ ಮೊಬೈಲ್ ಹೇಗಿದೆ: ಅಧಿಕಾರಿಗಳಿಗೆ ಅಶೋಕ್ ಕ್ಲಾಸ್

    ನೋಡೋ ನನ್ ಫೋನ್ ಹೇಗಿದೆ, ನಿನ್ ಮೊಬೈಲ್ ಹೇಗಿದೆ: ಅಧಿಕಾರಿಗಳಿಗೆ ಅಶೋಕ್ ಕ್ಲಾಸ್

    ಹುಬ್ಬಳ್ಳಿ: ನಗರದಲ್ಲಿ ಇಂದು ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಚಿವ ಆರ್ ಅಶೋಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಹುಬಳ್ಳಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸುವ ಮುನ್ನ ಕಂದಾಯ ಸಚಿವ ಅಧಿಕಾರಿಗಳ ಬಳಿ ಸಚಿವರು ಮಾಹಿತಿ ಕೇಳಿದರು. ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸಚಿವರಿಗೆ ಸಮರ್ಪಕವಾದ ಮಾಹಿತಿ ನೀಡಲಿಲ್ಲ. ಹೀಗಾಗಿ ಅಧಿಕಾರಿಗಳ ಬಳಿ ಮಾಹಿತಿ ಪಡೆಯಲು ಸಚಿವ ಅಶೋಕ್ ಸುಮಾರು ಅರ್ಧ ಗಂಟೆ ಕಾಲ ಕಾದು ಬಳಿಕ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

    ಕ್ಯಾಮೆರಾ ಕಣ್ಣು ತಪ್ಪಿಸಿ ಪ್ರವಾಸಿ ಮಂದಿರದಲ್ಲಿ ವಾಕಿಂಗ್ ಮಾಡುತ್ತಲೇ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸರಿಯಾದ ಮಾಹಿತಿ ನೀಡದ ಜಂಟಿ ಕೃಷಿ ನಿರ್ದೇಶಕ ಅಬೀದ್‍ರಿಗೆ, ಸರಿಯಾದ ಮಾಹಿತಿ ತೆಗೆದುಕೊಂಡು ಬರಬೇಕು. ನೋಡು ನಿನ್ನ ಫೋನ್ ಹೇಗಿದೆ. ನನ್ನ ಬಳಿ ಹೇಗಿದೆ ಫೋನ್ ಎಂದು ತಮ್ಮ ಬಳಿಯಿರುವ ಸಾದಾ ಫೋನ್ ತೋರಿಸುವ ಮೂಲಕ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.

    ಪ್ರವಾಹ ಪರಿಸ್ಥಿತಿ ನಿರ್ವಹಣೆ ಹಾಗೂ ಪರಿಹಾರ ವಿತರಣೆಗೆ ಕೇಂದ್ರ ಸರ್ಕಾರ ನಿಯಮಾವಳಿಗಳ ಬಗ್ಗೆ ಅಧಿಕಾರಿಗಳ ಬಳಿ ದಾಖಲೆ, ಮಾಹಿತಿ ಕೇಳಿದರು. ಈ ವೇಳೆ ಅಧಿಕಾರಿಗಳು ಇಲ್ಲ ಎಂದಾಗ ಸಚಿವ ಅಶೋಕ್ ಎಲ್ಲ ತೆಗೆದುಕೊಂಡು ಬರಬೇಕು, ಸರಿಯಾದ ಮಾಹಿತಿ ಇಟ್ಟುಕೊಳ್ಳಬೇಕು ಎಂದು ಗರಂ ಆದರು. ಈ ವೇಳೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಸಚಿವ ಅಶೋಕರಿಗೆ ಮಾಹಿತಿ ನೀಡಿ ಸುದ್ದಿಗೋಷ್ಠಿಗೆ ಕರೆದುಕೊಂಡು ಹೋದರು.

  • ಬಿಬಿಎಂಪಿ ಟೆಂಡರ್ ಶ್ಯೂರ್ ಕಾಮಗಾರಿ – ಬೇಕಾಬಿಟ್ಟಿ ಗುಂಡಿ ಅಗೆದು ಅವಾಂತರ

    ಬಿಬಿಎಂಪಿ ಟೆಂಡರ್ ಶ್ಯೂರ್ ಕಾಮಗಾರಿ – ಬೇಕಾಬಿಟ್ಟಿ ಗುಂಡಿ ಅಗೆದು ಅವಾಂತರ

    ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗೆ ಒಂದು ಕಾಲುವೆ ತೆಗೆಯಲಾಗಿದೆ. ಈ ಕಾಲುವೆಯನ್ನು ನೋಡಿದ ತಕ್ಷಣ ಇಲ್ಲಿ ಕಾವೇರಿ ನೀರು ಬರುತ್ತಾ ಎಂದು ಪ್ರಶ್ನೆಹುಟ್ಟುತ್ತದೆ. ಆದರೆ ಖಂಡಿತ ಇದು ನೀರು ಹರಿಸೋ ಕಾಲುವೆಯಲ್ಲ ಬದಲಿಗೆ ಬಿಬಿಎಂಪಿ ಟೆಂಡರ್ ಶ್ಯೂರ್ ಕಾಮಗಾರಿ.

    ಹೌದು. ಈ ಕಾಲುವೆ ನೋಡಿ ಯಾವುದೋ ಕಾವೇರಿ ನದಿಯನ್ನ ಬೆಂಗಳೂರಿಗೆ ಹರಿಸೋಕೆ ಅಗೆದಿದ್ದಾರೆ ಅಂತ ಜನರು ಅಂದುಕೊಳ್ಳುತ್ತಾರೆ. ಆದರೆ ಇದು ಬಿಬಿಎಂಪಿ ಟೆಂಡರ್ ಶ್ಯೂರ್ ಕಾಮಗಾರಿ. ಬೇಕಾಬಿಟ್ಟಿ ಮಣ್ಣನ್ನು ಅಗೆದು ಕಂಠೀರವ ಕ್ರೀಡಾಂಗಣದಿಂದ ಬಿಬಿಎಂಪಿಗೆ ಹೋಗೋ ಮುಖ್ಯ ರಸ್ತೆಯಲ್ಲಿ ಅವಾಂತರ ಸೃಷ್ಟಿಸಿಟ್ಟಿದ್ದಾರೆ. ಅವೈಜ್ಞಾನಿಕವಾಗಿ ಪೈಪ್ ಅಳವಡಿಕೆ ಮಾಡಲು, ಜೆಸಿಬಿ ಮೂಲಕ ಮಣ್ಣನ್ನು ಅಗೆಸಿ ಕಾಲುವೆಯನ್ನಾಗಿಸಿದ್ದಾರೆ. ಕೆಲಸ ಮುಗಿದ ಬಳಿಕ ಸೋಲಾರ್, ವಿದ್ಯುತ್ ಪೋಲ್‍ಗಳನ್ನು ತೆರವುಗೊಳಿಸದೇ ಕಸ ಬಿಸಾಡುವ ರೀತಿ ಅದನ್ನು ಹಾಗೆಯೇ ಬಿಟ್ಟು ಬಿಬಿಎಂಪಿ ಬೇಜವಾಬ್ದಾರಿ ಮೆರೆದಿದೆ.

    ಇತ್ತ ಬೆಂಗಳೂರಿನಲ್ಲಿ ಮಳೆಗಾಲದಂತೆ ಬೇಸಿಗೆಯಲ್ಲೂ ಮರಗಳು ದರೆಗೆ ಉರುಳುತ್ತಿವೆ. ಈ ರೀತಿ ಅವೈಜ್ಞಾನಿಕವಾಗಿ ಗುಂಡಿ ತೆಗೆದಿರುವುದರಿಂದ ಬೇರುಗಳು ಮರದ ಜೊತೆಗಿನ ಸಂಬಂಧವನ್ನೇ ಕಳೆದುಕೊಳ್ಳುತ್ತಿವೆ. ಹೀಗಾಗಿ ಮರ ಧರೆಗುರುಳುತ್ತಿವೆ ಎಂದು ವೃಕ್ಷ ತಜ್ಞರು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಯರ್ ಗೌತಮ್ ಕುಮಾರ್ ಅವರು, ಸಂಬಂಧಪಟ್ಟ ಅಧಿಕಾರಿಯ ಜೊತೆ ಈ ಬಗ್ಗೆ ಮಾತನಾಡಿ ಸರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಆದರೆ ಪೈಪ್‍ಲೈನ್ ಹಾಕಲು ಬೇಕಾಬಿಟ್ಟಿ ಮಣ್ಣು ಅಗೆದು ಗುಂಡಿಗಳನ್ನು ಕಾಲುವೆ ರೀತಿ ತೆಗೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  • ಡಿಸಿಎಂ ಜೊತೆಗಿನ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್‍ನಲ್ಲಿ ಬ್ಯುಸಿ

    ಡಿಸಿಎಂ ಜೊತೆಗಿನ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್‍ನಲ್ಲಿ ಬ್ಯುಸಿ

    ರಾಮನಗರ: ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಅವರ ನೇತೃತ್ವದಲ್ಲಿ ನಡೆದ ರಾಮನಗರ ಜಿಲ್ಲಾ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್ ನಲ್ಲಿ ತಲ್ಲೀನರಾಗಿದ್ದಾರೆ. ಡಿಸಿಎಂ ಸಭೆಯಲಿಬ್ಯುಸಿಯಾಗಿದ್ದರೆ, ಅಧಿಕಾರಿಗಳು ಮೊಬೈಲ್‍ನಲ್ಲಿ ಯೂಟ್ಯೂಬ್ ನೋಡುವುದರಲ್ಲಿ ಅವರಿಗಿಂತ ಬ್ಯುಸಿಯಾಗಿದ್ದರು.

    ಇಂದು ರಾಮನಗರದ ಜಿ.ಪಂ ಭವನದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಕೆಡಿಪಿ ನಡೆದಿದ್ದು, ಸಭೆಯಲ್ಲಿ ಚರ್ಚೆ ನಡೆಯುತ್ತಿರುವ ವೇಳೆಯೇ ಡಿಸಿಎಂ ಭಾಗವಹಿಸಿದ್ದಾರೆ ಎನ್ನವುದನ್ನೂ ಮರೆತು ಅಧಿಕಾರಿಗಳು ಮೊಬೈಲ್‍ನಲ್ಲಿ ತಲ್ಲೀನರಾಗಿದ್ದರು.

    ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ನಗರಸಭೆ ಆಯುಕ್ತರು ಸೇರಿದಂತೆ ಬಹುತೇಕ ಅಧಿಕಾರಿಗಳು ಮೊಬೈಲ್‍ನಲ್ಲಿ ತಲ್ಲೀನರಾಗಿದ್ದರು. ವಾಟ್ಸಪ್ ಚಾಟಿಂಗ್, ವಾಟ್ಸಪ್ ಸ್ಟೇಟಸ್ ನ ಡ್ಯಾನ್ಸ್ ವಿಡಿಯೋಗಳು, ಯೂಟ್ಯೂಬ್ ನೋಡುವುದರಲ್ಲಿ ನಿರತರಾಗಿದ್ದರು. ಅಧಿಕಾರಿಗಳು ಮೊಬೈಲ್ ನೋಡುವುದರಿಂದ ಬೇಸತ್ತು ಸಭೆ ಬಳಿಕ ಉಪಮುಖ್ಯಮಂತ್ರಿ ಕಾರ್ಯದರ್ಶಿಯವರು ಅಶ್ವತ್ಥ ನಾರಾಯಣ ಗಮನಕ್ಕೆ ತಂದಿದ್ದಾರೆ.

  • ಕತ್ತೆ ಕಾಯೋಕ್ಕಿದ್ದೀರಾ? ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಧುಸ್ವಾಮಿ ಕ್ಲಾಸ್

    ಕತ್ತೆ ಕಾಯೋಕ್ಕಿದ್ದೀರಾ? ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಧುಸ್ವಾಮಿ ಕ್ಲಾಸ್

    ತುಮಕೂರು: ಇಂದು ನಡೆದ ತುಮಕೂರು ಜಿ.ಪಂ. ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳ ವಿರುದ್ಧ ಫುಲ್ ಗರಂ ಆಗಿದ್ದರು. ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಗೆ ಗೈರಾಗಿ, ಸಹಾಯಕ ಅಧಿಕಾರಿಗಳನ್ನು ಕಳುಹಿಸಿದಕ್ಕೆ ಸಿಡಿಮಿಡಿಗೊಂಡಿದ್ದಾರೆ.

    ಸಭೆಗೆ ಹಾಜರಾಗಿದ್ದ ಸಹಾಯಕ ಅಧಿಕಾರಿಗಳನ್ನು, ಸಭೆಯಿಂದ ಜಾಗ ಖಾಲಿ ಮಾಡಿ ಎಂದು ವಾರ್ನ್ ಮಾಡಿದ್ದಾರೆ. ಕಾರ್ಮಿಕ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿ ಇಲ್ಲದೇ ಸಹಾಯಕ ಅಧಿಕಾರಿ ಬಂದಿದ್ದಕ್ಕೆ ಕೋಪಗೊಂಡ ಮಾಧುಸ್ವಾಮಿ, ತಕ್ಷಣ ನೀವ್ಯಾರು ಎಂದು ಪ್ರಶ್ನೆ ಕೇಳಿದ್ದಾರೆ.

    ಸಚಿವರ ಪ್ರಶ್ನೆಗೆ ನಾನು ಅವರ ಅಸಿಸ್ಟೆಂಟ್ ಎಂದಾಗ ಯಾತಕ್ಕೆ ಇದ್ದೀರ ಇಲ್ಲಿ? ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಬಿಟ್ಟು ಯಾವುದೇ ಕಾರಣಕ್ಕೂ ಅಸಿಸ್ಟೆಂಟ್‍ಗಳನ್ನು ಕಳುಹಿಸಬಾರದು ಎಂದು ನಾನು ಈ ಮುಂಚೆಯೇ ಕ್ಲಿಯರ್ ಆಗಿ ಡಿಸಿ ಅವರ ಮೀಟಿಂಗ್ ಕರೆದು ಹೇಳಿದ್ದೇನೆ. ಜಿಲ್ಲಾ ಮಟ್ಟದ ಆಫೀಸರ್ಸ್ ಮಾಹಿತಿ ನೀಡಬೇಕು. ನೀಡಿ ಇಲ್ಲಾ ಅಂದರೆ ಆಚೆ ಹೋಗಿ. ಕತ್ತೆ ಕಾಯೋಕಿದ್ದೀರ ಜಿಲ್ಲಾಮಟ್ಟದ ಅಧಿಕಾರಿಗಳು ಎಂದು ಚಳಿ ಬಿಡಿಸಿದ್ದಾರೆ.

    ಇದೇ ವೇಳೆ ಮನವಿ ಸಲ್ಲಿಸಲು ಬಂದಿದ್ದ ಮಾಜಿ ಜೆಡಿಎಸ್ ಶಾಸಕ ನಿಂಗಪ್ಪ ಅವರನ್ನು ಲೇವಡಿ ಮಾಡಿದ ಮಾಧುಸ್ವಾಮಿ, ನಿಂಗಪ್ಪ ತಮ್ಮ ನಾಲ್ಕು ಮನವಿ ಇದೆ ಎಂದಾಗ ಒಂದು ದೆಹಲಿ ಬೇಕು, ಇನ್ನೂಂದು ಏರುಪೋರ್ಟ್ ಬೇಕು, ಇನ್ನೂಂದು ವಿಧಾನ ಸೌಧ ನಿಮಗೆ ಬಿಟ್ಟುಕೊಡ ಬೇಕಾ ಎಂದು ಹೇಳಿದರು. ಇದಕ್ಕೆ ಕೋಪಗೊಂಡ ಜೆಡಿಎಸ್ ಕಾರ್ಯಕರ್ತರು ವಿಧಾನಸೌಧ ಕೇಳಲು ನಾವು ಇಲ್ಲಿಗೆ ಬಂದಿಲ್ಲ, ನೀರು ಕೊಡಿ ಸಾಕು ಎಂದು ತಿರುಗೇಟು ಕೊಟ್ಟರು.

    ಜೆಡಿಎಸ್ ಕಾರ್ಯಕರ್ತರು ಮಾತಿಗೆ ಉತ್ತರಿಸಿದ ಮಾಧುಸ್ವಾಮಿ, ನಾನು ನಿಂಗಪ್ಪ ಬಹಳ ಕಾಲದ ಸ್ನೇಹಿತರು ಆ ಸಲುಗೆಯಿಂದ ಹಾಗೇ ಅಂದೆ ಎಂದು ಹೇಳಿದರು. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ನಮಗೆ ಯಾವುದು ಬೇಡ ನೀರು ಬೇಕು ಎಂದು ಪ್ರತಿಭಟನೆ ಮಾಡಿದರು. ಗ್ರಾಮಾಂತರ ಪ್ರದೇಶಕ್ಕೆ ಹೇಮಾವತಿ ನೀರು ಹರಿಸುಂತೆ ಮನವಿ ಸಲ್ಲಿಸಿದರು.

  • ಸಿಂಹದ ಆವರಣ ಪ್ರವೇಶಿಸಿ ಮೃಗಾಲಯದಲ್ಲಿ ವ್ಯಕ್ತಿಯ ಹೈಡ್ರಾಮಾ – ವಿಡಿಯೋ ನೋಡಿ

    ಸಿಂಹದ ಆವರಣ ಪ್ರವೇಶಿಸಿ ಮೃಗಾಲಯದಲ್ಲಿ ವ್ಯಕ್ತಿಯ ಹೈಡ್ರಾಮಾ – ವಿಡಿಯೋ ನೋಡಿ

    ನವದೆಹಲಿ: ವ್ಯಕ್ತಿಯೊಬ್ಬ ದೆಹಲಿ ಮೃಗಾಲಯದಲ್ಲಿ ಸಿಂಹವಿರುವ ಆವರಣಕ್ಕೆ ಹಾರಿದ್ದು, ಸಿಂಹದ ಬಳಿಯೇ ಹಲವು ನಿಮಿಷಗಳನ್ನು ಕಳೆದಿದ್ದಾನೆ.

    ವ್ಯಕ್ತಿ ಮೃಗಾಲಯದಲ್ಲಿ ಸಿಂಹವಿರುವ ಆವರಣಕ್ಕೆ ಬಿದ್ದಿದ್ದು, ಸ್ವಲ್ಪ ಹೊತ್ತು ಆವರಣದ ಒಳಗಡೆಯೇ ಕಾಲ ಕಳೆದಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ಎಲ್ಲೆಡೆ ಆಶ್ಚರ್ಯ ವ್ಯಕ್ತವಾಗುತ್ತಿದೆ. ದೆಹಲಿ ಮೃಗಾಲಯಕ್ಕೆ ತೆರಳಿದ ಈತ ಸಿಂಹವಿರುವ ಆವರಣಕ್ಕೆ ಜಿಗಿದು ಅದರ ಹತ್ತಿರವೇ ಕುಳಿತಿದ್ದಾನೆ. ಹಲವು ನಿಮಿಷಗಳನ್ನು ಅಲ್ಲಿಯೇ ಕಳೆದಿದ್ದು, ನಂತರ ವ್ಯಕ್ತಿಯನ್ನು ಮೃಗಾಲಯದ ಸಿಬ್ಬಂದಿ ಸುರಕ್ಷಿತವಾಗಿ ಹೊರಗೆ ಕರೆ ತಂದಿದ್ದಾರೆ.

    ಸಿಂಹ ವ್ಯಕ್ತಿಯನ್ನು ನೋಡಿದರೂ ಸಹ ಏನೂ ಮಾಡಿಲ್ಲ, ಮಾನವ ಮತ್ತು ಪ್ರಾಣಿಗಳ ನಡುವೆ ನಡೆಯುತ್ತಿರುವ ಸಂಘರ್ಷಗಳ ಮಧ್ಯೆ ಸಿಂಹ ಏನೂ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ.

    ಆವರಣದೊಳಗೆ ಬಿದ್ದ ನಂತರ ವ್ಯಕ್ತಿ ಕೂಗಲು ಪ್ರಾರಂಭಿಸುತ್ತಾನೆ, ಆಗ ಅಲ್ಲಿದ್ದ ಸಾರ್ವಜನಿಕರು ಸಿಂಹದಿಂದ ದೂರ ಇರುವಂತೆ ಆತನಿಗೆ ಸೂಚಿಸುತ್ತಾರೆ. ಅಲ್ಲದೆ ಸಿಂಹವನ್ನೂ ವ್ಯಕ್ತಿಯಿಂದ ದೂರ ಉಳಿಯುವಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಕೆಲವು ನಿಮಿಷಗಳ ನಂತರ ವ್ಯಕ್ತಿಯನ್ನು ಮೃಗಾಲಯದ ಅಧಿಕಾರಿಗಳು ರಕ್ಷಿಸಿ ಹೊರಗೆ ಕರೆ ತಂದಿದ್ದಾರೆ.

    ಇತ್ತೀಚಿನ ಮಾಹಿತಿ ಪ್ರಕಾರ, ವ್ಯಕ್ತಿಯನ್ನು ಬಂಧಿಸಿ ಸಿಂಹದ ಆವರಣದೊಳಗೆ ಹೇಗೆ, ಏಕೆ ಹೋದ ಎಂಬುದರ ಕುರಿತು ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ವಿಡಿಯೋದಲ್ಲಿರುವ ವ್ಯಕ್ತಿ ಬಿಹಾರ ಮೂಲದವನು ಹಾಗೂ ಪ್ರವಾಸಿಗನಾಗಿದ್ದ, ಈತನ ಹೆಸರು ರೆಹನ್ ಖಾನ್ ಎಂದು ಗುರುತಿಸಲಾಗಿದೆ.

  • ನೆರೆ ಪರಿಹಾರಕ್ಕಾಗಿ ಬರುವ ರೈತರ ಬಳಿ ಲಂಚ ಪೀಕುತ್ತಿದ್ದಾರೆ ಅಧಿಕಾರಿಗಳು

    ನೆರೆ ಪರಿಹಾರಕ್ಕಾಗಿ ಬರುವ ರೈತರ ಬಳಿ ಲಂಚ ಪೀಕುತ್ತಿದ್ದಾರೆ ಅಧಿಕಾರಿಗಳು

    ಹುಬ್ಬಳ್ಳಿ: ಒಂದೆಡೆ ನೆರೆ ಪರಿಹಾರ ಸರಿಯಾಗಿ ಸಿಗತ್ತಿಲ್ಲ ಎಂದು ಸಂತ್ರಸ್ತರು ಪರದಾಡುತ್ತಿದ್ದರೆ, ಇತ್ತ ಅಧಿಕಾರಿಗಳು ಪರಿಹಾರಕ್ಕಾಗಿ ದಾಖಲೆ ನೀಡಲು ಬರುವ ರೈತರ ಬಳಿ ಹಣ ವಸೂಲಿಗೆ ಇಳಿದಿದ್ದಾರೆ.

    ಹೌದು. ಸಂತ್ರಸ್ತರಿಗೆ ಪರಿಹಾರ ಕೊಡಲು ಗ್ರಾಮ ಲೆಕ್ಕಾಧಿಕಾರಿಯೊಬ್ಬರು ರೈತರ ಬಳಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಕುಂದಗೋಳದಲ್ಲಿ ಬಯಲಿಗೆ ಬಂದಿದೆ. ಪರಿಹಾರಕ್ಕಾಗಿ ದಾಖಲೆಗಳ ಸಲ್ಲಿಕೆ ಮಾಡಲು ರೈತರು ಬಂದಾಗ ಅವರ ಬಳಿ ಗ್ರಾಮ ಲೆಕ್ಕಾಧಿಕಾರಿ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಹಣಿ ಪತ್ರ ಪಡೆಯುವುದರ ಜೊತೆಗೆ ಲಂಚ ಪಡೆಯುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಸಹಾಯಕ ಸುಬ್ಬಣ್ಣ ಪ್ರತಿಯೋರ್ವ ರೈತರಿಂದ 20 ರೂ. ಲಂಚ ಪಡೆಯುವ ವಿಡಿಯೋ ಇದೀಗ ವೈರಲ್ ಆಗಿದೆ. ಬೆಳೆ ಪರಿಹಾರ ಪಡೆಯಲು ಪ್ರತಿ ವರ್ಷ ಲಂಚ ಕೊಡುತ್ತಿರಲ್ಲ, ಹಾಗೆಯೇ ಈ ಬಾರಿಯೂ ಲಂಚ ಕೊಡಲೇಬೇಕೆಂದು ಗ್ರಾಮ ಲೆಕ್ಕಾಧಿಕಾರಿ ರೈತರ ಬಳಿ ಹಣ ವಸೂಲಿ ಮಾಡುತ್ತಿದ್ದಾರೆ. ಅಲ್ಲದೇ ಹಣ ಕೊಡದಿದ್ದರೆ ನಾನು ದಾಖಲೆಗಳನ್ನ ಮೇಲಾಧಿಕಾರಿಗಳಿಗೆ ಕಳುಹಿಸುವುದಿಲ್ಲ ಎಂದು ಬೆದರಿಕೆ ಹಾಕಿ ರೈತರಿಂದ ಹಣ ಪೀಕುತ್ತಿದ್ದಾರೆ.

    ಮೊದಲೇ ಭೀಕರ ಪ್ರವಾಹಕ್ಕೆ ರೈತರು ಬೆಳೆ ಹಾನಿಯಾಗಿದೆ ಎಂದು ಕಂಗಾಲಾಗಿದ್ದಾರೆ. ಈ ನಡುವೆ ನೆರೆ ಪರಿಹಾರ ನೀಡಲು ಅಧಿಕಾರಿಗಳು ಲಂಚ ಕೇಳುತ್ತಿರುವುದು ತಪ್ಪು. ಕೇವಲ 20 ರೂ. ತಾನೇ ಕೊಟ್ಟು ಕೆಲಸ ಮಾಡಿಸಿಕೊಳ್ಳೋಣ ಎಂದು ವಿಧಿ ಇಲ್ಲದೆ ರೈತರು ಅಧಿಕಾರಿಗಳಿಗೆ ಹಣ ಕೊಡುತ್ತಿದ್ದಾರೆ. ಆದರೆ ಕೆಲವೊಬ್ಬರ ಬಳಿ ಲಂಚ ನೀಡಲು 20 ರೂ. ಕೂಡ ಇರುವುದಿಲ್ಲ. ಅಂಥವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಕಂಡ ಕಂಡಲ್ಲಿ ದಾಳಿ ನಡೆಸಿ ದಂಡ ಹಾಕೋ ಬಿಬಿಎಂಪಿಯಲ್ಲೇ ಹೆಚ್ಚಿದೆ ಪ್ಲಾಸ್ಟಿಕ್ ಬಳಕೆ

    ಕಂಡ ಕಂಡಲ್ಲಿ ದಾಳಿ ನಡೆಸಿ ದಂಡ ಹಾಕೋ ಬಿಬಿಎಂಪಿಯಲ್ಲೇ ಹೆಚ್ಚಿದೆ ಪ್ಲಾಸ್ಟಿಕ್ ಬಳಕೆ

    ಬೆಂಗಳೂರು: ನಿಯಮ ರೂಪಿಸಿದವರೇ ನಿಯಮವನ್ನು ಗಾಳಿಗೆ ತೂರಿದ್ದು, ಊರಿಗೇ ನ್ಯಾಯ ಹೇಳುವ ಹಾಗೂ ಪ್ಲಾಸ್ಟಿಕ್ ಬಳಕೆಗೆ ದಂಡ ವಿಧಿಸುವ ಬಿಬಿಎಂಪಿಯಲ್ಲೇ ಪ್ಲಾಸ್ಟಿಕ್ ಬಳಕೆ ಹೆಚ್ಚಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

    ಸಿಲಿಕಾನ್ ಸಿಟಿಯಾದ್ಯಂತ ಒಂದು ಬಾರಿ ಬಳಸುವ ಪ್ಲಾಸ್ಟಿಕ್‍ನ್ನು ಬಿಬಿಎಂಪಿ ನಿಷೇಧ ಮಾಡಿದೆ. ಆದರೆ ಈ ನಿಯಮ ಇಂದಿರಾ ಕ್ಯಾಂಟೀನಿಗೆ ಮಾತ್ರ ಅನ್ವಯವಾಗುವುದಿಲ್ಲ. ಪೌರ ಕಾರ್ಮಿಕರಿಗೆ ನೀಡುವ ಇಂದಿರಾ ಕ್ಯಾಂಟೀನ್ ಆಹಾರದ ಬಾಕ್ಸ್ ಗೆ ಪ್ಲಾಸ್ಟಿಕ್ ಕವರ್ ಬಳಸಲಾಗುತ್ತಿದೆ. ಅಲ್ಲದೆ, ಇಂದಿರಾ ಕ್ಯಾಂಟೀನ್ ವಿವಿಧ ಕೆಲಸಗಳಲ್ಲಿಯೂ ಸಹ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಇದನ್ನು ಕಂಡ ಸಾರ್ವಜನಿಕರು ಪ್ಲಾಸ್ಟಿಕ್ ನಿಷೇಧ ಜನ ಸಾಮಾನ್ಯರಿಗೆ ಮಾತ್ರವೇ ಬಿಬಿಎಂಪಿಗೆ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.

    ಕಂಡ ಕಂಡಲ್ಲಿ ದಾಳಿ ಮಾಡಿ ಪ್ಲಾಸ್ಟಿಕ್ ಬಳಸುತ್ತಿರುವ ವರ್ತಕರಿಗೆ ದಂಡ ವಿಧಿಸಿ, ಪ್ಲಾಸ್ಟಿಕ್ ಪರಿಕರಗಳನ್ನು ಬಿಬಿಎಂಪಿ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ಆದರೆ ಇನ್ನೊಂದೆಡೆ ತಾವೇ ರಾಜಾರೋಷವಾಗಿ ಪ್ಲಾಸ್ಟಿಕ್ ಕವರ್ ಗಳನ್ನು ಬಳಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್‍ನಿಂದ ಪೌರ ಕಾರ್ಮಿಕರಿಗೆ ಪ್ರತಿನಿತ್ಯ ಬಾಕ್ಸ್ ಗಳಲ್ಲಿ ಊಟ ಕಳುಹಿಸುತ್ತಾರೆ. ಈ ಬಾಕ್ಸ್ ಗಳನ್ನು ಮುಚ್ಚಲು ಮುಚ್ಚಳಗಳನ್ನು ಬಳಸುವ ಬದಲು, ಬಿಬಿಎಂಪಿ ಅಧಿಕಾರಿಗಳು ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪೌರ ಕಾರ್ಮಿಕರು ಇಂದಿರಾ ಕ್ಯಾಂಟೀನ್ ಊಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ನಮಗೆ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಊಟದಲ್ಲಿ ರುಚಿಯಿಲ್ಲ, ಅದನ್ನು ತಿನ್ನಲು ಆಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಜೊತೆಗೆ ಅಕ್ಟೋಬರ್ 1ರಿಂದ ಇಂದಿರಾ ಕ್ಯಾಂಟೀನ್ ಊಟಕ್ಕೆ ಬ್ರೇಕ್ ಹಾಕಲು ಪೌರ ಕಾರ್ಮಿಕರ ಗುತ್ತಿಗೆದಾರರು ಮುಂದಾಗಿದ್ದಾರೆ. ಆ ಊಟದಲ್ಲಿ ಏನೂ ರುಚಿಯೇ ಇರಲ್ಲ, ಸಂಬಾರ್ ನೀರಿನಂತಿರುತ್ತದೆ. ಅದನ್ನು ನಾವು ತಿನ್ನುವುದೇ ಇಲ್ಲ ಮನೆಯಿಂದ ಊಟ ತರುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಪ್ಲಾಸ್ಟಿಕ್ ಬಳಸಿದ್ದಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಪ್ಲಾಸ್ಟಿಕ್ ಬಳಸಿದ್ದಕ್ಕೆ ತಪ್ಪು ಒಪ್ಪಿಕೊಂಡು ಮೇಯರ್ ಕ್ಷಮೆಯಾಚಿಸಿದ್ದರು. ಅಲ್ಲದೆ, ದಂಡ ಪಾವತಿಸುವುದಾಗಿಯೂ ಸಹ ತಿಳಿಸಿದ್ದರು. ಇಷ್ಟಾದರೂ ಸಹ ಬಿಬಿಎಂಪಿ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆ ಕುರಿತು ಎಚ್ಚೆತ್ತುಕೊಂಡಿಲ್ಲ.

  • ಎಂಪಿ ಹನಿ ಟ್ರ್ಯಾಪ್ – ರಾಜಕಾರಣಿಗಳು, ಅಧಿಕಾರಿಗಳ ಸಾವಿರಕ್ಕೂ ಅಧಿಕ ವಿಡಿಯೋಗಳು ಪತ್ತೆ

    ಎಂಪಿ ಹನಿ ಟ್ರ್ಯಾಪ್ – ರಾಜಕಾರಣಿಗಳು, ಅಧಿಕಾರಿಗಳ ಸಾವಿರಕ್ಕೂ ಅಧಿಕ ವಿಡಿಯೋಗಳು ಪತ್ತೆ

    ಭೋಪಾಲ್: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸುತ್ತಿರುವ ಮಧ್ಯಪ್ರದೇಶದ ಹನಿ ಟ್ರ್ಯಾಪ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಅಚ್ಚರಿಯ ಮಾಹಿತಿ ಬಹಿರಂಗವಾಗುತ್ತಿದೆ. ಇನ್ನೂ ಭಯಾನಕ ವಿಷಯವೆಂದರೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಒಟ್ಟು 1,000 ವಿಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

    ಒಟ್ಟು ಮೂರು ರಾಜ್ಯಗಳಲ್ಲಿರುವ ಈ ಗ್ಯಾಂಗ್‍ನ ಸದಸ್ಯರ ಬಳಿ ಈ ಒಂದು ಸಾವಿರಕ್ಕೂ ಅಧಿಕ ವಿಡಿಯೋಗಳಿದ್ದು, ಮಧ್ಯಪ್ರದೇಶ, ಛತ್ತಿಸ್‍ಗಡ ಹಾಗೂ ಮಹಾರಾಷ್ಟ್ರಗಳಲ್ಲಿನ ಸದಸ್ಯರ ಬಳಿ ಇವೆ ಎಂದು ಎಸ್‍ಐಟಿ ತನಿಖೆ ವೇಳೆ ಬಹಿರಂಗವಾಗಿದೆ. ಈ ಹನಿ ಟ್ರ್ಯಾಪ್ ಗ್ಯಾಂಗ್ ಸುಲಿಗೆ ಮಾಡಿದ್ದಲ್ಲದೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸಹಾಯದಿಂದ ಸರ್ಕಾರದ ಪ್ರಮುಖ ಗುತ್ತಿಗೆಗಳನ್ನು ಪಡೆದುಕೊಂಡಿದೆ ಎಂದು ಪೊಲೀಸರು ಮಾಹಿತಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿಯರು ಬೇಡ, ಕಾಲೇಜ್‍ ಹುಡುಗಿಯರು ಬೇಕು – ಬಯಲಾಯ್ತು ರಾಜಕಾರಣಿಗಳ ಮುಖ 

    ಮಾಜಿ ಮುಖ್ಯಮಂತ್ರಿ, ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಜನ ಹನಿ ಟ್ರ್ಯಾಪ್‍ಗೆ ಬಲಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ 6 ಜನರನ್ನು ಎಸ್‍ಐಟಿ ಬಂಧಿಸಿದೆ.

    ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳೊಂದಿಗೆ ಸೇರಿ ಹಲವಾರು ಭೋಪಾಲ್ ಮೂಲದ ಪತ್ರಕರ್ತರು ಸಹ ಭಾಗಿಯಾಗಿದ್ದಾರೆ ಎಂಬ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಹಿಂದಿ ಪತ್ರಿಕೆಯೊಂದರ ಸ್ಥಾನಿಕ ಸಂಪಾದಕ, ಸುದ್ದಿ ವಾಹಿನಿಯ ಕ್ಯಾಮೆರಾಮೆನ್ ಹಾಗೂ ಸ್ಥಳೀಯ ವಾಹಿನಿಯ ಮಾಲೀಕ ಸಹ ಭಾಗಿಯಾಗಿದ್ದಾರೆ ಎಂದು ಎಸ್‍ಐಟಿ ಪತ್ತೆ ಹಚ್ಚಿದೆ. ಪತ್ರಕರ್ತರು ಹನಿ ಟ್ರ್ಯಾಪ್‍ನ ಕಿಂಗ್ ಪಿನ್ ಶ್ವೇತಾ ಜೈನ್, ರಾಜಕಾರಣಿಗಳು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ.

    ಪ್ರಕರಣದಲ್ಲಿ ಪತ್ರಕರ್ತರೂ ಬಾಗಿಯಾಗಿರುವ ಕುರಿತು ಆಡಳಿತಾರೂಢ ಕಾಂಗ್ರೆಸ್‍ನ ವಕ್ತಾರ ಕೆ.ಕೆ.ಮಿಶ್ರಾ ಪ್ರತಿಕ್ರಿಯಿಸಿದ್ದು, ಎಸ್‍ಐಟಿ ಸಾಕ್ಷ್ಯಗಳನ್ನು ಸಂಗ್ರಹಿಸಿದ ಕೂಡಲೇ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಎಸ್‍ಐಟಿ ಇಲ್ಲಿಯವರೆಗೆ ಯಾವುದೇ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಪ್ರಕರಣದ ಕಿಂಗ್ ಪಿನ್‍ಗಳಾದ ಶ್ವೇತಾ ಜೈನ್ ಹಾಗೂ ಅವಳ ಸಹವರ್ತಿ ಆರತಿ ದಯಾಳ್ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಕೆಲವು ಪತ್ರಕರ್ತರನ್ನು ಬಳಸಿಕೊಂಡಿರುವ ಕುರಿತು ಎಸ್‍ಐಟಿ ಮಾಹಿತಿ ನೀಡಿದೆ ಎಂದು ಹೇಮಂತ್ ಶರ್ಮಾ ತಿಳಿಸಿದ್ದಾರೆ.

    ಎಸ್‍ಐಟಿ ಮೂಲಗಳು ಈ ಕುರಿತು ಮಾಹಿತಿ ನೀಡಿದ್ದು, ಪ್ರಸ್ತುತ ತನಿಖೆಯನ್ನು ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಹೊಂದಿದ್ದ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಪಾತ್ರ ಕಂಡುಹಿಡಿಯುವಲ್ಲಿ ಕೇಂದ್ರೀಕರಿಸಲಾಗಿದೆ. ಈಗಾಗಲೇ ದಂಧೆಯ ಮಾಸ್ಟರ್ ಮೈಂಡ್ ಶ್ವೇತಾ ಜೈನ್, ಅವಳ ಪತಿ ಸ್ವಪ್ನಿಲ್ ಜೈನ್ ಹಾಗೂ ಶ್ವೇತಾ ಸಹವರ್ತಿ ಆರತಿ ದಯಾಳ್ ಇವರನ್ನು ಬಂಧಿಸಲಾಗಿದೆ. ಇವರನ್ನು ವಿಚಾರಣೆ ನಡೆಸಿದಾಗ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳು ಹನಿ ಟ್ರ್ಯಾಪ್‍ಗೆ ಬಲಿಪಶು ಆಗಿದ್ದಾರೆ. ಅಲ್ಲದೆ, ಅವರ ಎನ್‍ಜಿಓ ಮೂಲಕ ಹಣ ಹಾಗೂ ಸರ್ಕಾರದ ಗುತ್ತಿಗೆ ಪಡೆದಿರುವ ಮಾಹಿತಿ ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.

    ಈ ಕುರಿತು ಎಸ್‍ಐಟಿ ಮುಖ್ಯಸ್ಥ ಸಂಜೀವ್ ಶಮಿ ಮಾಹಿತಿ ನೀಡಿ, ಶ್ವೇತಾ ಜೈನ್ ಹನಿ ಟ್ರ್ಯಾಪ್‍ಗೆ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಪಲಿಪಶುಗಳನ್ನಾಗಿ ಮಾಡುವ ಮೂಲಕ ಕೋಟ್ಯಂತರ ರೂ. ಸರ್ಕಾರಿ ಗುತ್ತಿಗೆಗಳನ್ನು ತಮ್ಮ ಎನ್‍ಜಿಓ ಮೂಲಕ ಬೇರೆ ಕಂಪನಿಗಳಿಗೆ ಕೊಡಿಸಿದ್ದಾಳೆ ಎಂದು ತಿಳಿದುಬಂದಿದೆ. ಇಂತಹ ಒಪ್ಪಂದಗಳ ದಾಖಲೆ ದಾಖಲೆ ಪತ್ತೆಹಚ್ಚಿದಲ್ಲಿ ಖಂಡಿತವಾಗಿಯೂ ಅಂತಹ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಲ್ಲದೆ, ಭೋಪಾಲ್‍ನಲ್ಲಿ ಕಳೆದ 7-8 ವರ್ಷಗಳೂ ಹಿಂದಿನಿಂದಲೂ ಲೈಂಗಿಕ ಅಪರಾಧಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

    ನೂರಾರು ಕೋಟಿ ರೂ.ಗಳ ಸರ್ಕಾರಿ ಗುತ್ತಿಗೆಗಳನ್ನು ಪಡೆಯುವುದೇ ಈ ಗ್ಯಾಂಗ್‍ನ ಪ್ರಮುಖ ಉದ್ದೇಶವಾಗಿತ್ತು. ತಮ್ಮ ಎನ್‍ಜಿಓಗಳಿಂದ ಇದನ್ನು ನಿರ್ವಹಿಸುತ್ತಿದ್ದರು. ಇದಕ್ಕಾಗಿ ಪ್ರಮುಖ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ. ಈ ಕುರಿತು ಸಾಕ್ಷ್ಯಾಧಾರಗಳು ಸಿಕ್ಕಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಧಿಕಾರಿಗಳು ಹಾಗೂ ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

  • ಬಾಲಿವುಡ್ ನಟಿಯರು ಬೇಡ, ಕಾಲೇಜ್‍ ಹುಡುಗಿಯರು ಬೇಕು – ಬಯಲಾಯ್ತು ರಾಜಕಾರಣಿಗಳ ಮುಖ

    ಬಾಲಿವುಡ್ ನಟಿಯರು ಬೇಡ, ಕಾಲೇಜ್‍ ಹುಡುಗಿಯರು ಬೇಕು – ಬಯಲಾಯ್ತು ರಾಜಕಾರಣಿಗಳ ಮುಖ

    – ಮಧ್ಯಮ ವರ್ಗದ ಹುಡುಗಿಯರಿಗೆ ಐಷಾರಾಮಿ ಜೀವನದ ಆಮಿಷ
    – ಪೋಷಕರಿಗೆ ತಿಳಿಸದಂತೆ ಬ್ಲ್ಯಾಕ್‍ಮೇಲ್
    – ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲೂ ಕಿಂಗ್‍ಪಿನ್ ಭಾಗಿ

    ಭೋಪಾಲ್: ಮಧ್ಯಪ್ರದೇಶದ ರಾಜಕಾರಣಿಗಳು, ಉನ್ನತ ಅಧಿಕಾರಿಗಳಿಗೆ ಖೆಡ್ಡಾ ತೋಡಿ ದೇಶದಲ್ಲೇ ಭಾರೀ ಸಂಚಲನ ಮೂಡಿಸುತ್ತಿರುವ ಹನಿಟ್ರ್ಯಾಪ್ ಪ್ರಕರಣದ ತನಿಖೆಯ ವೇಳೆ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗುತ್ತಿದೆ. ಇದೀಗ ಇನ್ನೂ ಅಚ್ಚರಿ ಮಾಹಿತಿ ಬಹಿರಂಗವಾಗಿದ್ದು, ರಾಜಕಾರಣಿಗಳನ್ನು ಮೋಹಿಸಲು ಎರಡು ಡಜನ್‍ಗೂ ಅಧಿಕ ಕಾಲೇಜಿನ ಹುಡುಗಿಯರನ್ನು ಬಳಸಿಕೊಳ್ಳಲಾಗಿದೆ ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದುಬಂದಿದೆ.

    ಈ ಪ್ರಕರಣದಲ್ಲಿ ಪ್ರಸ್ತುತ 12 ಉನ್ನತ ಹುದ್ದೆಯ ಅಧಿಕಾರಿಗಳು ಹಾಗೂ ಮಧ್ಯಪ್ರದೇಶದ ಎಂಟು ಮಾಜಿ ಮಂತ್ರಿಗಳು ಭಾಗಿಯಾಗಿದ್ದು, ವಿಡಿಯೋಗಳು ಲೀಕ್ ಆದರೆ ಭಾರೀ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹಗರಣದ ಕಿಂಗ್‍ಪಿನ್ ಶ್ವೇತಾ ಜೈನ್ ಎಸ್‍ಐಟಿ ಮುಂದೆ ತಪ್ಪೊಪ್ಪಿಕೊಂಡಿದ್ದು, ರಾಜಕಾರಣಿಗಳನ್ನು ಸೆಳೆಯಲು ಕನಿಷ್ಠ ಎರಡು ಡಜನ್‍ಗಿಂತಲೂ ಅಂದರೆ ಸುಮಾರು 24 ಜನ ಕಾಲೇಜು ಹುಡುಗಿಯರನ್ನು ಬಳಸಿಕೊಳ್ಳಲಾಗಿದೆ ಎಂದು ಬಾಯ್ಬಿಟ್ಟಿದ್ದಾಳೆ. ಮಧ್ಯಮ ವರ್ಗ ಹಾಗೂ ಕೆಳ ವರ್ಗದ ಕುಟುಂಬಗಳ ಹುಡುಗಿಯರನ್ನು ಬಳಸಿಕೊಳ್ಳಲಾಗಿದೆ ಎಂದು ಇಂದೋರ್ ನಲ್ಲಿ ಎಸ್‍ಐಟಿ ನಡೆಸುತ್ತಿರುವ ವಿಚಾರಣೆ ವೇಳೆ ತಿಳಿಸಿದ್ದಾಳೆ. ಇದನ್ನೂ ಓದಿ: ಮಾಜಿ ರಾಜ್ಯಪಾಲರು, ಮಾಜಿ ಸಿಎಂ, ಅಧಿಕಾರಿಗಳ ಸ್ಕ್ಯಾಂಡಲ್ – 40 ಕಾಲ್ ಗರ್ಲ್ಸ್‌ಗಳಿಂದ ಹನಿಟ್ರ್ಯಾಪ್

    ವಿಐಪಿಗಳಿಂದ ಸರ್ಕಾರದ ನೂರಾರು ಕೋಟಿ ರೂ.ಗಳ ಗುತ್ತಿಗೆಗಳನ್ನು ಪಡೆಯುವುದೇ ಹನಿಟ್ರ್ಯಾಪ್‍ನ ಮೂಲ ಉದ್ದೇಶವಾಗಿತ್ತು. ಹೆಚ್ಚಿನ ಗುತ್ತಿಗೆಗಳನ್ನು ಪ್ರತಿಷ್ಠಿತ ಕಂಪನಿಗಳಿಗೆ ನಾನು ಹಾಗೂ ನನ್ನ ಸಹವರ್ತಿ ಆರತಿ ದಯಾಳ್ ಇಬ್ಬರೂ ಸಹ ಕಮಿಷನ್ ಆಧಾರದ ಮೇಲೆ ಕೊಡಿಸುತ್ತಿದ್ದೆವು. ಈ ಗುತ್ತಿಗೆಗಳನ್ನು ಕೊಡಿಸುವುದರ ಜೊತೆಗೆ ನಾನು ಹಲವಾರು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಎಲ್ಲಿ ಹುದ್ದೆ ನೀಡಬೇಕು ಎನ್ನುವುದನ್ನು ಸಹ ನಿರ್ವಹಿಸುತ್ತಿದ್ದೆ ಎಂದು ಪ್ರಕರಣದ ಕಿಂಗ್‍ಪಿನ್ ಶ್ವೇತಾ ಜೈನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ.

    ಬೇಡಿಕೆ ಮೇರೆಗೆ ಅನೇಕ ಕಾಲೇಜು ಹುಡುಗಿಯರನ್ನು ಆಮಿಷವೊಡ್ಡಿ, ಅಂತಿಮವಾಗಿ ಅಧಿಕಾರಿಗಳು, ರಾಜಕಾರಣಿಗಳ ಜೊತೆಗೆ ಮಲಗಲು ಒತ್ತಾಯಿಸುತ್ತಿದ್ದೆವು. ಮಲಗಿದ ಪುರುಷರೆಲ್ಲ ಹುಡುಗಿಯರ ತಂದೆಯ ವಯಸ್ಸಿನವರು ಎಂದು ಶ್ವೇತಾ ತಿಳಿಸಿದ್ದಾಳೆ.

    ವಿದ್ಯಾರ್ಥಿನಿಯರಿಗೆ ಆಮಿಷ:
    ಹನಿ ಟ್ರ್ಯಾಪ್ ಕಹಾನಿ ಕುರಿತು ಕಾಲೇಜು ಹುಡುಗಿ ಮೋನಿಕಾ ಎಸ್‍ಐಟಿಗೆ ಮಾಹಿತಿ ನೀಡಿದ್ದು, ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಕೊಡಿಸುವಂತೆ ಕೇಳಿಕೊಂಡು ಶ್ವೇತಾಳನ್ನು ಸಂಪರ್ಕಿಸಿದ್ದೆ. ಆಗ ಶ್ವೇತಾ ಈ ಕುರಿತು ನನಗೆ ತಿಳಿಸಿದ್ದಳು. ನಾನು ಮೊದಲು ನಿರಾಕರಿಸಿದ್ದೆ. ಬಳಿಕ ಭೋಪಾಲಿನಲ್ಲಿ ನನ್ನನ್ನು ಮನವೊಲಿಸಲು, ಶ್ವೇತಾ ಭೋಪಾಲಿನ ಸಚಿವಾಲಯಕ್ಕೆ ಕರೆದೊಯ್ದಿದ್ದಳು. ಅಲ್ಲಿ ಕಾರ್ಯದರ್ಶಿ ದರ್ಜೆಯ ಮೂವರು ಐಎಎಸ್ ಅಧಿಕಾರಿಗಳೊಂದಿಗೆ ಪರಿಚಯಿಸಲಾಗಿತ್ತು. ಅಲ್ಲದೆ ಇಂದೋರ್ ಹಾಗೂ ಭೋಪಾಲ್ ನಡುವೆ ಸಂಚರಿಸಲು ನನಗೆ ಆಡಿ ಕಾರ್ ನೀಡಿದ್ದಳು ಎಂದು ತಿಳಿಸಿದ್ದಾಳೆ.

    ಶ್ವೇತಾಳ ಮಾತಿಗೆ ಮೋನಿಕಾ ಆರಂಭದಲ್ಲಿ ನಿರಾಕರಿಸಿ ನರಸಿಂಗ್‍ಘರ್‍ನಲ್ಲಿರುವ ಪೋಷಕರ ಮನೆಗೆ ತೆರಳಿದ್ದಳು. ಇದಾದ ಬಳಿಕ ಶ್ವೇತಾಳ ಸ್ನೇಹಿತೆ ಆರತಿ ಮೋನಿಕಾ ಮನೆಗೆ ಬಂದು, ಮೋನಿಕಾಳ ಶಿಕ್ಷಣದ ಎಲ್ಲ ವೆಚ್ಚವನ್ನು ನಮ್ಮ ಎನ್‍ಜಿಓ ಭರಿಸಲಿದೆ ಎಂದು ಮನವೊಲಿಸಿ ಮೋನಿಕಾಳನ್ನು ಕರೆ ತಂದಿದ್ದಾಳೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದಕ್ಕೆ ತಂದೆ ಮೋನಿಕಾಳನ್ನು ಭೋಪಾಲ್‍ಗೆ ಕಳುಹಿಸಿದ್ದರು. ಮೋನಿಕಾಳನ್ನು ಕರೆತಂದ ಮೇಲೆ ಅಧಿಕಾರಿಯೊಂದಿಗೆ ಶ್ವೇತಾ ಲೈಂಗಿಕ ಸಂಪರ್ಕ ನಡೆಸುತ್ತಿದ್ದ ವಿಡಿಯೋವನ್ನು ತೋರಿಸಿದ್ದಾಳೆ. ನಂತರ ಆರತಿ ಮೋನಿಕಾಗೆ ಉನ್ನತ ಮಟ್ಟವನ್ನು ತಲುಪಲು ಇಂತಹ ಕೆಲಸವನ್ನು ಮಾಡಬೇಕು ಎಂದು ತಲೆ ಕೆಡಿಸಿದ್ದಾಳೆ ಎಂದು ಎಸ್‍ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

    ಶ್ವೇತಾ ಹಾಗೂ ಆರತಿ ಎನ್‍ಜಿಓ ಹೆಸರಿನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಹುಡುಗಿಯರನ್ನು ಟಾರ್ಗೆಟ್ ಮಾಡಿ, ಉದ್ಯೋಗ ಹಾಗೂ ಕಾಲೇಜಿನ ಆಮಿಷವೊಡ್ಡಿ, ಅವರ ಬ್ರೇನ್ ವಾಶ್ ಮಾಡಿ ಹನಿ ಟ್ರ್ಯಾಪ್ ದಂಧೆಗೆ ಕರೆ ತರುತ್ತಿದ್ದರು ಎಂದು ಎಸ್‍ಐಟಿ ತಿಳಿಸಿದೆ.

    ಆಗಸ್ಟ್ 30ರಂದು ಆರತಿ ಹಾಗೂ ಆಕೆಯ ಸಹವರ್ತಿ ರೂಪಾ ಐಷಾರಾಮಿ ಕಾರಿನಲ್ಲಿ ನನ್ನನ್ನು ಇಂದೋರ್‍ಗೆ ಕರೆತಂದರು. ನಂತರ ಇನ್ಫಿನಿಟಿ ಹೋಟೆಲ್‍ನಲ್ಲಿ ತಂಗಿದ್ದೆವು. ಮರುದಿನ ಸಂಜೆ ಸರ್ಕಾರಿ ಎಂಜಿನಿಯರ್ ಹರ್ಭಜನ್ ಸಿಂಗ್(60)ಅವರನ್ನು ಪರಿಚಯಿಸಿದರು. ನಂತರ ಆತನೊಂದಿಗೆ ಒಂದು ರಾತ್ರಿ ಕಳೆಯಬೇಕಾಯಿತು. ನಾನು ಹರ್ಭಜನ್ ಜೊತೆ ಮಲಗಿದ್ದ ವಿಡಿಯೋವನ್ನು ಆರತಿ ರೆಕಾರ್ಡ್ ಮಾಡಿದ್ದಾಳೆ ಎಂದು ಮೋನಿಕಾ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾಳೆ.

    ಈ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದಂತೆ, ಅದರ ಆಧಾರದ ಮೇಲೆ ಶ್ವೇತಾ ಹರ್ಭಜನ್ ಸಿಂಗ್ ಬಳಿ 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾಳೆ. ಈ ಕುರಿತು ಪೋಷಕರಿಗೆ ಮಾಹಿತಿ ನೀಡಿದರೆ ವಿಡಿಯೋವನ್ನು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡುತ್ತೇನೆ ಎಂದು ನನಗೂ ಬೆದರಿಕೆ ಹಾಕಿದ್ದಳು ಎಂದು ಮೋನಿಕಾ ವಿವರಿಸಿದ್ದಾಳೆ.

    ಕಾಲೇಜು ಹುಡುಗಿಯರಿಗೆ ಐಶಾರಾಮಿ ಜೀವನದ ಆಸೆ ತೋರಿಸಿ ಅವರ ಬ್ರೇನ್ ವಾಶ್ ಮಾಡಿ, ಹನಿಟ್ರ್ಯಾಪ್ ದಂಧೆಗೆ ಕರೆತರುತ್ತಾರೆ. ಮೊದಲು 5 ಸ್ಟಾರ್ ಹೋಟೆಲ್, ಗ್ಲಾಮರ್ ಮೂಲಕ ಕಾಲೇಜು ಹುಡುಗಿಯರನ್ನು ಸೆಳೆಯುತ್ತಿದ್ದರು. ಈ ಮೂಲಕ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯನ್ನೂ ಒಳಗೊಂಡಂತೆ, ಸಚಿವರು, ಉನ್ನತ ಅಧಿಕಾರಿಗಳನ್ನು ಹನಿಟ್ರ್ಯಾಪ್‍ಗೆ ಬಲಿಪಶುಗಳನ್ನಾಗಿ ಮಾಡಿದ್ದಾರೆ. ಇದಕ್ಕಾಗಿ 40 ಕಾಲ್ ಗರ್ಲ್ಸ್, ಕಾಲೇಜು ಹುಡುಗಿಯರನ್ನು ಬಳಸಿಕೊಳ್ಳುತ್ತಿದ್ದರು ಎಂದು ಇಂದೋರ್‍ನ ಮಹಿಳಾ ಎಸ್‍ಎಸ್‍ಪಿ ರುಚಿ ವರ್ಧನ್ ಸಿಂಗ್ ತಿಳಿಸಿದ್ದಾರೆ.

    ಹೇಗೆ ಬೆಳಕಿಗೆ ಬಂತು?
    ಕರೆ ಮಾಡಿ 3 ಕೋಟಿ ರೂ. ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಎಂಜಿನಿಯರ್ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಪೊಲೀಸರು ವ್ಯೂಹ ರಚಿಸಿಕೊಂಡಿದ್ದಾರೆ. ನಂತರ ಎಂಜಿನಿಯರ್ ರಿಂದ ಕರೆ ಮಾಡಿಸಿ ಮೊದಲ ಹಂತದಲ್ಲಿ 50 ಲಕ್ಷ ನೀಡುವುದಾಗಿ ಹೇಳುವಂತೆ ಸೂಚಿಸಿದ್ದಾರೆ. ನಂತರ ಹಣ ನೀಡಲು ನಿಗದಿತ ಸ್ಥಳಕ್ಕೆ ಬರುವಂತೆ ಆರೋಪಿಗಳಿಗೆ ತಿಳಿಸಿದ್ದಾರೆ. ಹೀಗೆ ಬಂದಿಳಿದವರಿಗೆ ಎಂಜಿನಿಯರ್ ಹಣ ನೀಡುವ ವೇಳೆ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದರು. ಇವರನ್ನು ವಿಚಾರಣೆ ನಡೆಸಿದಾಗ ಬಹೃತ್ ಹನಿಟ್ರ್ಯಾಪ್ ಜಾಲ ಬೆಳಕಿಗೆ ಬಂದಿದೆ.

  • ವರ್ಗಾವಣೆ ಪರ್ವ- ಸಿಎಂ ಆಪರೇಷನ್ ಕಾರ್ಯಾಚರಣೆ ಹಿಂದಿದೆ ರಹಸ್ಯ

    ವರ್ಗಾವಣೆ ಪರ್ವ- ಸಿಎಂ ಆಪರೇಷನ್ ಕಾರ್ಯಾಚರಣೆ ಹಿಂದಿದೆ ರಹಸ್ಯ

    ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಬಂದಾಗಿನಿಂದ ವರ್ಗಾವಣೆ ಸದ್ದು ಮಾಡುತ್ತಿದೆ. ಸಿಎಂ ಸಚಿವಾಲಯ ಸೇರಿದಂತೆ ಬೇರೆ ಇಲಾಖೆಗಳಲ್ಲಿ ವರ್ಗಾವಣೆ ಪರ್ವ ಮುಂದುವರಿದಿದೆ. ಈಗಾಗಲೇ 250ಕ್ಕೂ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸಿಎಂ ಆಯಾ ಸ್ಥಳಕ್ಕೆ ಹೊಸಬರನ್ನು ತಂದಿದ್ದಾರೆ. ಸಿಎಂ ಸಚಿವಾಲಯ, ಆಯಕಟ್ಟಿನ ಸ್ಥಳಗಳು, ಬೇರೆ ಬೇರೆ ಇಲಾಖೆಗಳಲ್ಲಿ ವರ್ಗಾವಣೆ ನಡೆಯುತ್ತಿದೆ.

    ಸಿದ್ದರಾಮಯ್ಯ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿ ನೇಮಕಗೊಂಡಿರುವ ಸಿಬ್ಬಂದಿಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ವರ್ಗಾವಣೆ ಮಾಡುತ್ತಿದ್ದಾರಂತೆ. ಈ ಎಲ್ಲ ಅಧಿಕಾರಿಗಳು ಮಾಜಿ ಸಿಎಂಗಳ ನಿಕಟ ಸಂಪರ್ಕದಲ್ಲಿದ್ದು, ಆಡಳಿತದ ರಹಸ್ಯಗಳನ್ನು ವಿಪಕ್ಷಗಳಿಗೆ ನೀಡಿದ್ರೆ ಹೇಗೆ ಎಂಬ ಪ್ರಶ್ನೆ ಯಡಿಯೂರಪ್ಪರಿಗೆ ತಲೆ ನೋವಾಗಿದೆ ಎಂದು ತಿಳಿದು ಬಂದಿದೆ.

    ಮಾಜಿ ಸಿಎಂಗಳ ಕಾಲಾವಧಿಯಲ್ಲಿ ಕಾರ್ಯನಿರ್ವಹಿಸಿರುವ ಸಿಬ್ಬಂದಿ ವಿಪಕ್ಷ ನಾಯಕರಿಗೆ ರಹಸ್ಯ ಮಾಹಿತಿದಾರರಾಗಿ ಕೆಲಸ ಮಾಡಿದ್ರೆ ಹೇಗೆ ಎಂಬ ಅನುಮಾನ ಯಡಿಯೂರಪ್ಪರನ್ನ ಕಾಡುತ್ತಿದೆ. ಇತ್ತ ಅನುಮಾನ ಬಂದ ಅಧಿಕಾರಿಗಳನ್ನು ಸಿಎಂ ವರ್ಗಾವಣೆ ಮೂಲಕ ಕೊಕ್ ಕೊಡುತ್ತಿದ್ದಾರೆ. ಸದ್ಯ ನೇಮಕಗೊಂಡಿರುವ ಸಿಬ್ಬಂದಿಯ ಮೇಲೆಯೂ ಸಿಎಂ ರಹಸ್ಯ ಕಣ್ಣಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.