Tag: officer

  • ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ- ಕಂಗ್ರಾಟ್ಸ್ ಸರ್ ಅಂದಿದ್ದಕ್ಕೆ ಥ್ಯಾಂಕ್ಯೂ ಅಂದ್ರು ಕೆಂಪಯ್ಯ

    ಎಸಿಬಿ ಬಲೆಗೆ ಸಿಕ್ಕಿಬಿದ್ದ ಅಧಿಕಾರಿ- ಕಂಗ್ರಾಟ್ಸ್ ಸರ್ ಅಂದಿದ್ದಕ್ಕೆ ಥ್ಯಾಂಕ್ಯೂ ಅಂದ್ರು ಕೆಂಪಯ್ಯ

    ಚಾಮರಾಜನಗರ: ಭ್ರಷ್ಟಾಚಾರ ಮಾಡಿ ಎಸಿಬಿ ಅವರಿಗೆ ಸಿಕ್ಕಿ ಬಿದ್ರೆ ಅಧಿಕಾರಿಗಳು ಮುಖ ಮುಚ್ಚಿಕೊಂಡು ಹೋಗ್ತಾರೆ. ಆದ್ರೆ ಚಾಮರಾಜನಗರದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಭ್ರಷ್ಟಾಚಾರ ಮಾಡಿರುವುದನ್ನೇ ಸಾಧನೆ ಮಾಡಿರುವ ರೀತಿಯಲ್ಲಿ ಜನರಿಗೆ ಅಭಿನಂದನೆ ಹೇಳ್ತಾ ಇದಾರೆ.

    ಶುಕ್ರವಾರ ಸಂಜೆ ಅಭಿವೃದ್ಧಿ ನಿಗಮದ ಅಧಿಕಾರಿ ಎನ್.ಕೆಂಪಯ್ಯ ಲಂಚ ಸ್ವೀಕರಿಸುವ ವೇಳೆ ಎಸಿಬಿಗೆ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ಕೆಂಪಯ್ಯನನ್ನು ಎಸಿಬಿ ಅವರು ಕರೆದೊಯ್ಯುವಾಗ ಸಾರ್ವಜನಿಕನೋರ್ವ ಕಂಗ್ರಾಜ್ಯುಲೇಷನ್ ಸರ್, ಕೆಂಪಯ್ಯ ಸರ್ ನಮ್ಮಂತವರಿಗೆ ಅಯ್ಯೊ ಅನ್ನಿಸಿದರ ಪ್ರತಿಫಲ ಇದು ಅಂತಾ ಹೇಳಿದ್ದಾನೆ. ಈ ವೇಳೆ ಎಸಿಬಿಗೆ ಅಂದರ್ ಆದ ಕೆಂಪಯ್ಯ ನನ್ನನ್ನು ಹೊಗಳುತ್ತಿದ್ದಾರೆ ಎಂಬಂತೆ ಥ್ಯಾಂಕ್ಯೂ ಥ್ಯಾಂಕ್ಯೂ ಅಂತ ಹೇಳಿ ಹೋಗಿ ಜೀಪ್ ಹತ್ತಿದ್ದಾರೆ.

    ಇದನ್ನು ಸ್ಥಳದಲ್ಲಿದ್ದವರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ಈ ವಿಡಿಯೋ ಪಬ್ಲಿಕ್ ಟಿವಿಗೆ ಲಭಿಸಿದೆ.

  • ನಾಗರಹಾವು ಕೊರಳಲ್ಲಿ ಹಾಕಿಕೊಂಡು ತಹಶೀಲ್ದಾರ್ ಕಚೇರಿಗೆ ಎಂಟ್ರಿಕೊಟ್ಟು ಪ್ರತಿಭಟನೆ!

    ನಾಗರಹಾವು ಕೊರಳಲ್ಲಿ ಹಾಕಿಕೊಂಡು ತಹಶೀಲ್ದಾರ್ ಕಚೇರಿಗೆ ಎಂಟ್ರಿಕೊಟ್ಟು ಪ್ರತಿಭಟನೆ!

    ಗದಗ: ಜೀವಂತ ನಾಗರ ಹಾವನ್ನು ಕೊರಳಿಗೆ ಸುತ್ತಿಕೊಂಡು ವ್ಯಕ್ತಿಯೊಬ್ಬರು ರೋಣ ತಾಲೂಕು ಅಧಿಕಾರಿಗಳ ಕಚೇರಿಯನ್ನು ಪ್ರವೇಶಿಸಿ ಪ್ರತಿಭಟಿಸಿದ್ದಾರೆ.

    ಮಕ್ತುಮಸಾಬ್ ರಾಜೇಖಾನ್ (65) ನಿಂದ ವಿಭಿನ್ನ ಪ್ರತಿಭಟನೆ ನಡೆಸಿದ ವ್ಯಕ್ತಿ. ರಾಜೇಖಾನ್ ಅವರಿಗೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಮನೆಯಿಂದ ಅವರನ್ನು ಹೊರ ಹಾಕಿದ್ದಾರೆ. ಅದ್ದರಿಂದ ಅಂಗವಿಕಲರಾದ ಕಾರಣ ಸರ್ಕಾರದಿಂದ ಬರುವ ಸಹಾಯದ ಹಣವನ್ನು ಪಡೆಯಲು ಕಳೆದ ಆರು ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ಅಧಿಕಾರಿಗಳ ಹಿಂದೆ ಸುತ್ತುತ್ತಿದ್ದಾರೆ.

    ಸದ್ಯ ರಾಜೇಖಾನ್ ಮನೆಯ ಬಳಿಯ ಪ್ರತ್ಯೇಕ ಕೊಣೆಯೊಂದರಲ್ಲಿ ವಾಸವಿದ್ದು, ಯಾವುದೇ ಕೆಲಸ ಮಾಡಿ ಹಣ ಸಂಪಾದನೆ ಮಾಡಲು ಆಗದೇ ಊಟಕ್ಕಾಗಿ ಸಮಸ್ಯೆ ಎದುರಿಸುತ್ತಾರೆ. ಈ ಕುರಿತು ಅಧಿಕಾರಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರಕ್ಕಾಗಿ ವಿನಂತಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ನಿರ್ಲಕ್ಷವಹಿಸಿ ಮಾತನಾಡಿದ್ದು ಇದರಿಂದ ಬೇಸತ್ತ ರಾಜೇಖಾನ್ ಇಂದು ಜೀವಂತ ಹಾವು ಕೊರಳಿಗೆ ಸುತ್ತಿಕೊಂಡು ನೇರ ತಹಶೀಲ್ದಾರ್ ಹಾಗೂ ಉಪಖಜಾನೆ ಅಧಿಕಾರಿಗಳ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ.

  • ನಿವೃತ್ತ ಅಧಿಕಾರಿಯ ಸಂಧಾನದಿಂದಾಗಿ ರೇವಣ್ಣರ `ಎರಡು ಕನಸು’ ಭಗ್ನ!

    ನಿವೃತ್ತ ಅಧಿಕಾರಿಯ ಸಂಧಾನದಿಂದಾಗಿ ರೇವಣ್ಣರ `ಎರಡು ಕನಸು’ ಭಗ್ನ!

    ಬೆಂಗಳೂರು: ನಿವೃತ್ತ ಅಧಿಕಾರಿಯೊಬ್ಬರ ಮಾತು ಕೇಳಿ ಎಚ್ ಡಿ ರೇವಣ್ಣ ಅವರು ಇಂಧನ ಸಚಿವ ಸ್ಥಾನವನ್ನು ಕಾಂಗ್ರೆಸ್ಸಿಗೆ ಬಿಟ್ಟು ಕೊಟ್ಟಿದ್ದಾರೆ.

    ಹೌದು. ಸೋಮವಾರ ಮೂರು ಗಂಟೆಗಳ ಕಾಲ ದೇವೇಗೌಡ, ರೇವಣ್ಣ ಮತ್ತು ನಿವೃತ್ತ ಅಧಿಕಾರಿ ನಡುವೆ ಮಾತುಕತೆ ನಡೆದಿದೆ. ಈ ಮಾತುಕತೆಯ ವೇಳೆ ನಿವೃತ್ತ ಅಧಿಕಾರಿಯ ಮಾತಿಗೆ ಒಪ್ಪಿ ರೇವಣ್ಣ ಇಂಧನ ಖಾತೆಯಿಂದ ಹಿಂದೆ ಸರಿದಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ಕುಟುಂಬದ ನಂಬಿಕಸ್ಥ ವ್ಯಕ್ತಿಯಾಗಿರುವ ನಿವೃತ್ತ ಅಧಿಕಾರಿ, ದೇವೇಗೌಡರ ಆಪ್ತರು ಕೂಡ ಆಗಿದ್ದು, ಎಚ್‍ಡಿಡಿ ಕುಟುಂಬದ ಜತೆ ಪ್ರತಿ ಹಂತದಲ್ಲೂ ಜತೆಗಿದ್ದರು. ಹೀಗಾಗಿ ರೇವಣ್ಣ ಅವರು ಯಾವಾಗಲೂ ಆ ನಿವೃತ್ತ, ನಂಬಿಕಸ್ಥ ಅಧಿಕಾರಿಯ ಮಾತು ಕೇಳುತ್ತಾರೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಎಚ್ ಡಿ ರೇವಣ್ಣ ಅವರು ನಿವೃತ್ತ ಅಧಿಕಾರಿಯ ಕಿವಿಮಾತನ್ನು ಕೇಳಿದ್ದಾರೆ.

    ಮೂವರ ಮಧ್ಯೆ ಸುದೀರ್ಘ ಮಾತುಕತೆ ನಡೆದ ನಂತರ ದೇವೇಗೌಡರ ಮುಂದೆಯೇ ಇಂಧನ ಖಾತೆ ಬಿಟ್ಟುಕೊಡಲು ರೇವಣ್ಣ ಒಪ್ಪಿದ್ದಾರೆ. ಸಂಧಾನ ಮಾತುಕತೆಯ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಮ್ಮ ನಿರ್ಧಾರ ತಿಳಿಸಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಇಂಧನ ಖಾತೆ ನನಗೆ ಬೇಕೆಂದು ಪಟ್ಟು ಹಿಡಿದಿದ್ದ ರೇವಣ್ಣ, ನನಗೆ ಇಂಧನ ಖಾತೆ ನನಗೆ ಬೇಡ, ಲೋಕೋಪಯೋಗಿ ಸಾಕು ಎಂದು ಹೇಳಿದಾಗ ಸಹೋದರ ಎಚ್‍ಡಿಕೆ ಆಶ್ಚರ್ಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

  • ಚಿರತೆಯೊಂದಿಗೆ ಹೋರಾಡಿ ಮಗಳನ್ನು ಕಾಪಾಡಿಕೊಂಡ ತಾಯಿ

    ಚಿರತೆಯೊಂದಿಗೆ ಹೋರಾಡಿ ಮಗಳನ್ನು ಕಾಪಾಡಿಕೊಂಡ ತಾಯಿ

    ಕೊಯಂಬತ್ತೂರು: ಚಿರತೆಯೊಂದಿಗೆ ಮಹಿಳೆಯೊಬ್ಬರು ಸೆಣಸಾಡಿ ತನ್ನ 11 ವರ್ಷದ ಮಗಳನ್ನು ಕಾಪಾಡಿಕೊಂಡ ಘಟನೆ ವಾಲ್ಪಾರೈ ನಲ್ಲಿ ನಡೆದಿದೆ.

    30 ವರ್ಷ ವಯಸ್ಸಿನ ಮುತ್ತುಲಕ್ಷ್ಮೀ ಎಂಬವರು ಮಗಳನ್ನು ಕಾಪಾಡಿಕೊಂಡ ಧೈರ್ಯವಂತ ತಾಯಿ. ಮುತ್ತುಲಕ್ಷ್ಮೀ ಮಗಳು ಸತ್ಯಾ ಜೊತೆ ಕಳೆದ ರಾತ್ರಿ ಹಿತ್ತಲಿನಲ್ಲಿ ಮರದ ಕಡ್ಡಿಗಳನ್ನು ಆಯುತ್ತಿದ್ದರು. ತಕ್ಷಣ ಪ್ರತ್ಯಕ್ಷವಾದ ಚಿರತೆಯೊಂದು ಸತ್ಯಳ ಮೇಲೆ ಹಾರಿ ಕುತ್ತಿಗೆಗೆ ಬಾಯಿ ಹಾಕಿ ಹಿಡಿದು ಎಳೆದಾಡಿದೆ.

    ಇದನ್ನು ಕಂಡ ಮುತ್ತುಲಕ್ಷ್ಮಿ ಧೈರ್ಯದಿಂದ ಕೈಯ್ಯಲಿದ್ದ ಕಟ್ಟಿಗೆಯಿಂದಲೇ ಚಿರತೆಗೆ ಬಾರಿಸಿದ್ದಾರೆ. ಏಟು ತಿಂದ ಚಿರತೆ ಸ್ಥಳದಿಂದ ಓಡಿಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗಾಯಗೊಂಡಿರುವ ಸತ್ಯಳನ್ನು ಪೊಲ್ಲಾಚಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಮುಂದಾಗಿದ್ದಾರೆ. ಕಳೆದ 10 ದಿನಗಳಿಂದ ಅದೇ ಪ್ರದೇಶದಲ್ಲಿ ಚಿರತೆ ಸುತ್ತಾಡುತ್ತಿದೆ ಎಂದು ವರದಿಯಾಗಿದೆ.

  • ಉದ್ರಿಕ್ತ ಗುಂಪಿನಿಂದ ಮುಸ್ಲಿಂ ಯುವಕನನ್ನು ರಕ್ಷಿಸಿದ ಸಿಖ್ ಪೊಲೀಸ್

    ಉದ್ರಿಕ್ತ ಗುಂಪಿನಿಂದ ಮುಸ್ಲಿಂ ಯುವಕನನ್ನು ರಕ್ಷಿಸಿದ ಸಿಖ್ ಪೊಲೀಸ್

    ರಾಮನಗರ್: ಸಿಖ್ ಪೊಲೀಸ್ ಅಧಿಕಾರಿಯೊಬ್ಬರು ಉದ್ರಿಕ್ತ ಜನರು ಗುಂಪೊಂದು ಮುಸ್ಲಿಂ ಯುವಕನಿಗೆ ಥಳಿಸುತ್ತಿದ್ದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಅತನನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

    ಗಗನ್ ದೀಪ್ ಸಿಂಗ್ ಯುವಕನ ಜೀವ ಉಳಿಸಿದ ಪೊಲೀಸ್ ಅಧಿಕಾರಿ. ಉತ್ತರಾಖಂಡದ ರಾಮನಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳವಾರ ಕರ್ತವ್ಯದ ವೇಳೆ ಠಾಣೆಗೆ ಕರೆ ಬಂದ ತಕ್ಷಣ ಪ್ರತಿಕ್ರಿಯಿಸಿದ ಗಗನದೀಪ್ ಸಿಂಗ್ ಯವಕನನ್ನು ರಕ್ಷಿಸಿದ್ದಾರೆ.

    ಏನಿದು ಘಟನೆ: ಮುಸ್ಲಿಂ ವ್ಯಕ್ತಿಯೊಬ್ಬ ಅನ್ಯಕೋಮಿನ ಯುವತಿಯೊಂದಿಗೆ ಮಾತನಾಡುತ್ತಿದ್ದ ವೇಳೆ ಒಂದು ಕೋಮಿನ ಜನರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಸಾಕಷ್ಟು ಜನ ವ್ಯಕ್ತಿಯ ಸುತ್ತಲು ಸೇರಿ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು.

    ಈ ಕುರಿತು ಮಾಹಿತಿ ಪಡೆದ ಪೊಲೀಸ್ ಅಧಿಕಾರಿ ಗಗನ್‍ದೀಪ್ ಸಿಂಗ್ ಸ್ಥಳಕ್ಕೆ ಧಾವಿಸಿ ಉದ್ರಿಕ್ತ ಗುಂಪಿನ ಮಧ್ಯೆ ನುಗ್ಗಿ ಯುವಕನನ್ನು ರಕ್ಷಿಸಿದ್ದಾರೆ. ಈ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಕರ್ತವ್ಯ ಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

    https://twitter.com/akdwaaz/status/999687129797050370?

  • ಕಥುವಾ ರೇಪ್ ಪ್ರಕರಣ- ಬಾಲಕಿಯನ್ನು ಕೊಂದಿದ್ದು ಒಳ್ಳೆದಾಯಿತೆಂದ ಬ್ಯಾಂಕ್ ಮ್ಯಾನೇಜರ್ ಅಮಾನತು

    ಕಥುವಾ ರೇಪ್ ಪ್ರಕರಣ- ಬಾಲಕಿಯನ್ನು ಕೊಂದಿದ್ದು ಒಳ್ಳೆದಾಯಿತೆಂದ ಬ್ಯಾಂಕ್ ಮ್ಯಾನೇಜರ್ ಅಮಾನತು

    ಕೊಚ್ಚಿ: ದೇಶದೆಲ್ಲೆಡೆ ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವೇಳೆ ಬಾಲಕಿಯನ್ನು ಕೊಂದಿದ್ದು ಒಳ್ಳೆದಾಯಿತೆಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದ ಕೇರಳ ಖಾಸಗಿ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಅಮಾನತು ಮಾಡಲಾಗಿದೆ.

    ಕೇರಳದ ಕೊಚ್ಚಿಯ ಕೋಟಕ್ ಮಹೀಂದ್ರ ಬ್ಯಾಂಕ್ ಶಾಖೆಯ ಮ್ಯಾನೇಜರ್ ಆಗಿರುವ ವಿಷ್ಣು ನಂದಕುಮಾರ್ ಕೆಲಸ ಕಳೆದುಕೊಂಡ ವ್ಯಕ್ತಿ. ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಈತ ನೀಡಿರುವ ಪ್ರತಿಕ್ರಿಯೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

    ಜಮ್ಮು ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರರಕಣದ ಸಂಬಂಧ ವಿಷ್ಣು ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದ. ಚಿಕ್ಕ ವಯಸ್ಸಿನಲ್ಲೇ ಆಕೆಯನ್ನು ಕೊಲೆ ಮಾಡಿರುವುದು ಒಳ್ಳೆದಾಯಿತು, ಇಲ್ಲವಾದರೆ ಆಕೆ ದೊಡ್ಡವಳಾದ ಮೇಲೆ ಭಾರತದ ಮೇಲೆ ಬಾಂಬ್ ಎಸೆಯುತ್ತಿದ್ದಳು ಎಂದು ತನ್ನ ಕಾಮೆಂಟ್ ನಲ್ಲಿ ಬರೆದುಕೊಂಡಿದ್ದ. ಈತ ಎಂದು ಈ ಕಾಮೆಂಟ್ ಮಾಡಿದ್ದ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಆತನ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ತನ್ನ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದಾನೆ ಎಂದು ವರದಿಯಾಗಿದೆ.

    ಬಾಲಕಿಯ ಕುರಿತು ವಿಷ್ಣು ಮಾಡಿದ್ದ ಕಾಮೆಂಟ್ ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು, ಅಲ್ಲದೇ ಆತನನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಆಕ್ರೋಶ ವ್ಯಕ್ತವಾಗಿತ್ತು. ಟ್ವಿಟ್ಟರ್ ನಲ್ಲೂ ಆತನ ವಿರುದ್ಧ ವ್ಯಾಪಕ ಟೀಕೆ ಮಾಡಿ ಹಲವರು ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ #Dismiss_your_manager ಎಂದು ಟ್ರೆಂಡ್ ಮಾಡಿ ಟ್ರೋಲ್ ಮಾಡಿದ್ದರು.

    ಘಟನೆ ತೀವ್ರತೆ ಕುರಿತು ಎಚ್ಚೆತ್ತ ಕೋಟಕ್ ಬ್ಯಾಂಕ್ ಆಡಳಿತ ಮಂಡಳಿ ಶುಕ್ರವಾರ ಸಂಜೆ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಏಪ್ರಿಲ್ 11 ಕ್ಕೆ ಅನ್ವಯ ಆಗುವಂತೆ ವಿಷ್ಣು ನಂದಕುಮಾರ್ ನನ್ನು ಸೇವೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ನೀಡಿ ತೆಗೆದು ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೇ ಆತನ ಹೇಳಿಕೆಯನ್ನು ಖಂಡಿಸುತ್ತಿರುವುದಾಗಿ ತಿಳಿಸಿದೆ.

    https://www.facebook.com/KotakBank/photos/a.214267861951331.59019.210520628992721/1949907218387378/?type=3&theater

  • ಕಾರು ನಿಲ್ಲಿಸದ ಯುಪಿ ಅಧಿಕಾರಿ, 4 ಕಿ.ಮೀ ವರೆಗೂ ಬಾನೆಟ್‍ಗೆ ಜೋತು ಬಿದ್ದ ಯುವಕ – ವಿಡಿಯೋ ವೈರಲ್

    ಕಾರು ನಿಲ್ಲಿಸದ ಯುಪಿ ಅಧಿಕಾರಿ, 4 ಕಿ.ಮೀ ವರೆಗೂ ಬಾನೆಟ್‍ಗೆ ಜೋತು ಬಿದ್ದ ಯುವಕ – ವಿಡಿಯೋ ವೈರಲ್

    ಲಕ್ನೋ: ಶೌಚಾಲಯ ನಿರ್ಮಾಣಕ್ಕಾಗಿ 2ನೇ ಕಂತಿನ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಯುವಕನೊಬ್ಬ ಬ್ಲಾಕ್ ಅಭಿವೃದ್ಧಿ ಅಧಿಕಾರಿ ವಾಹನದ ಬಾನೆಟ್ ಹಿಡಿದುಕೊಂಡು ಸುಮಾರು ನಾಲ್ಕು ಕಿಲೋ ಮೀಟರ್ ಪ್ರಯಾಣ ಮಾಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಪೂರ್ವ ಉತ್ತರ ಪ್ರದೇಶ ರಾಮ್ ನಗರ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ರಾಮ್ ನಗರ್ ಪಟ್ಟಣದಲ್ಲಿ ಸ್ಥಳೀಯ ಜಿಲ್ಲಾಡಳಿತ ಶೌಚಾಲಯಗಳ ನಿರ್ಮಾಣ ಮಾಡಿತ್ತು. ಆದರೆ ಈ ಸಂಬಂಧ ಕಾರ್ಮಿಕರಿಗೆ ಬಾಕಿ ಹಣ ಪಾವತಿ ಮಾಡುವಲ್ಲಿ ವಿಳಂಬ ಮಾಡುತ್ತಿತ್ತು. ಅಧಿಕಾರಿಗಳ ಈ ಧೋರಣೆಯಿಂದ ಕಾರ್ಮಿಕರು ಬೇಸತ್ತಿದ್ದರು.

    ಇತ್ತೀಚೆಗೆ ರಾಮನಗರ್ ಜಿಲ್ಲೆಯ ಅಭಿವೃದ್ಧಿ ಅಧಿಕಾರಿ ಪಂಕಜ್ ಕುಮಾರ್ ಗೌತಮ್ ಅವರ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು. ಈ ವೇಳೆ ಅಧಿಕಾರಿ ಪಂಕಜ್ ಕುಮಾರ್ ಅಲ್ಲಿಂದ ನುಣುಚಿಕೊಳ್ಳಲು ಯತ್ನಿಸಿದ್ದರು.  ಪಂಕಜ್ ಕುಮಾರ್ ಗೌತಮ್ ಬಳಿ ಬ್ರಿಜ್ ಪಾಲ್ ತೆರಳಿ ಶೌಚಾಲಯ ನಿರ್ಮಾಣಕ್ಕಾಗಿ 2ನೇ ಕಂತಿನ ಹಣ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರು. ಆದರೆ ಅಧಿಕಾರಿ ಮಾತ್ರ ಏನು ಉತ್ತರ ಕೊಡದೆ ಕಾರ್ ಏರಿ ಹೊರಡಲು ಸಿದ್ಧರಾಗಿದ್ದರು.

    ಪಂಕಜ್ ಕುಮಾರ್ ಕಾರು ಹತ್ತುತ್ತಿದ್ದಂತೆಯೇ ಪ್ರತಿಭಟನಾಕಾರರು ಅವರ ಕಾರನ್ನು ತಡೆಯುವ ಪ್ರಯತ್ನ ನಡೆಸಿದ್ದಾರೆ. ಈ ವೇಳೆ ಕಪ್ಪು ಅಂಗಿ ತೊಟ್ಟು ಪ್ರತಿಭಟನೆ ನಡೆಸುತ್ತಿದ್ದ ಬ್ರಿಜ್ ಪಾಲ್ ಕಾರಿನ ಬಾನೆಟ್ ಹತ್ತಿದ್ದಾನೆ. ಇದರಿಂದ ಆಕ್ರೋಶಗೊಂಡ ಪಂಕಜ್ ಕುಮಾರ್ ಕೆಳಗೆ ಇಳಿಯುವಂತೆ ಆತನಿಗೆ ಹೇಳಿದ್ದಾರೆ. ಆದರೆ ಅಧಿಕಾರಿ ಮಾತ್ರ ಕಾರು ನಿಲ್ಲಿಸದೇ ಸುಮಾರು 4 ಕಿ.ಮೀ ದೂರದವರೆಗೂ ಕಾರಿನ ಬಾನೆಟ್ ಮೇಲೆಯೇ ಹೊತ್ತೊಯ್ದಿದ್ದಾರೆ. ವಾಹನ ನಿಲ್ಲಿಸುವಂತೆ ಯುವಕ ಕೇಳಿಕೊಂಡರೂ ಆಕ್ರೋಶಗೊಂಡ ಪಂಕಜ್ ಕುಮಾರ್ ಹಾಗೆಯೇ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೇ ಅದನ್ನು ವಿಡಿಯೋ ಕೂಡ ಮಾಡಿದ್ದಾರೆ.

    ಕಾರು ಸುಮಾರು 4 ಕಿ.ಮೀ ದೂರ ಸಾಗಿದ ಬಳಿಕ ಸ್ಪೀಡ್ ಬ್ರೇಕರ್ ಬಂದಾಗ ಕಾರು ನಿಂತಿದೆ. ಈ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಬ್ರಿಜ್ ಪಾಲ್ ಇಳಿದು ಹೋಗಿದ್ದಾರೆ. ಅದೃಷ್ಟವಶಾತ್ ಆತನಿಗೇನು ಆಗಿಲ್ಲ. ಆದರೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಅಧಿಕಾರಿಯ ವರ್ತನೆಗೆ ಜನರು ಖಂಡನೆ ವ್ಯಕ್ತಪಡಿಸಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಇದರ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ವೀರೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

    https://www.youtube.com/watch?v=eiLiCGc8yLM

  • ಮೈಸೂರು ಮೃಗಾಲಯದ ಅಧಿಕಾರಿಗಳಿಗೆ ತಲೆನೋವಾಗಿದೆ 6 ಹೆಚ್ಚುವರಿ ಹುಲಿಗಳ ಪೋಷಣೆ

    ಮೈಸೂರು ಮೃಗಾಲಯದ ಅಧಿಕಾರಿಗಳಿಗೆ ತಲೆನೋವಾಗಿದೆ 6 ಹೆಚ್ಚುವರಿ ಹುಲಿಗಳ ಪೋಷಣೆ

    ಮೈಸೂರು: ಮೃಗಾಲಯಕ್ಕೆ ಹುಲಿಗಳು ದೊಡ್ಡ ತಲೆನೋವು ತಂದಿಟ್ಟಿವೆ. ತನ್ನ ಸಾಮಥ್ರ್ಯಕ್ಕಿಂತ ಹೆಚ್ಚು ಹುಲಿಗಳನ್ನು ಪೋಷಿಸುವ ಅನಿವಾರ್ಯತೆಗೆ ಮೈಸೂರು ಮೃಗಾಲಯ ಸಿಲುಕಿದ್ದು ಹೆಚ್ಚುವರಿಯಾಗಿರುವ ಹುಲಿಗಳನ್ನು ಎಲ್ಲಿಗೆ ಬಿಡಬೇಕು, ಯಾರಿಗೆ ಕೊಡಬೇಕು ಅನ್ನೋ ಚಿಂತೆಯಲ್ಲಿ ಅಧಿಕಾರಿಗಳು ಮುಳುಗಿದ್ದಾರೆ.

    ಒಂದು ಮೃಗಾಲಯದಲ್ಲಿ 10 ಹುಲಿಗಳಿರಬೇಕು. ಸದ್ಯ ಮೈಸೂರು ಮೃಗಾಲಯದಲ್ಲಿ 16 ಹುಲಿಗಳಿವೆ. ಹೆಚ್ಚೆಂದರೆ 3 ಹುಲಿಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಳ್ಳಬಹುದು. ಆದ್ರೆ 6 ಹುಲಿಗಳನ್ನು ಪೋಷಿಸುವ ಅನಿವಾರ್ಯತೆಯಲ್ಲಿ ಮೈಸೂರು ಮೃಗಾಲಯ ಸಿಲುಕಿದೆ.

    ಮೃಗಾಲಯದಲ್ಲೀಗ 6 ಹುಲಿಗಳ ಪೋಷಣೆ ಮಾಡುತ್ತಿದ್ದು, ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ 10 ಹುಲಿಗಳ ಪೋಷಣೆ ಮಾಡಲಾಗುತ್ತಿದೆ. ಮೈಸೂರು ಭಾಗದಲ್ಲಿ ಮಾನವ-ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚಾಗಿ ನಾಡಿನತ್ತ ಹುಲಿಗಳು ಬರುತ್ತಿವೆ. ಹೀಗೆ ಬಂದ ಹುಲಿಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಮೃಗಾಲಯಕ್ಕೆ ನೀಡುತ್ತಿದೆ. ಹೀಗೆ ನೀಡುವ ಹುಲಿಗಳನ್ನು ಬೇಡವೆನ್ನಲಾಗದೆ ಮೈಸೂರು ಮೃಗಾಲಯ ಪೋಷಿಸುತ್ತಿದೆ.

  • ಖಡಕ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಬೆಂಗಳೂರಿಗೆ ವರ್ಗಾವಣೆ

    ಖಡಕ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಬೆಂಗಳೂರಿಗೆ ವರ್ಗಾವಣೆ

    ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೆ ಸರ್ಕಾರ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ನೀಡಿದೆ ಎಂಬ ಮಾಹಿತಿ ಲಭಿಸಿದೆ.

    ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ರವಿ ಡಿ ಚೆನ್ನಣ್ಣನವರ್ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗದ ಅನುಚೇತ್ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಈಶಾನ್ಯ ವಿಭಾಗದ ಗಿರೀಶ್ ಅವರಿಗೆ ಮಂಡ್ಯ ಎಸ್ಪಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.

    ಚುನಾವಣಾ ಆಯೋಗದ ನೀಡಿರುವ ನಿರ್ದೇಶನ ಮೇರೆಗೆ ವರ್ಗಾವಣೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಕೈಗೊಳ್ಳಲಾಗಿದೆ ಎನ್ನಲಾಗಿದೆ. ನ್ಯಾಯ ಸಮ್ಮತ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಈ ವರ್ಗಾವಣೆ ಕೈಗೊಳ್ಳಲಾಗಿದೆ. ಸೋಮವಾರ ಬೆಳಗ್ಗೆ ಅಧಿಕಾರಿಗಳ ವರ್ಗಾವಣೆಗೆ ಅಧಿಕೃತ ವರ್ಗಾವಣೆ ಪತ್ರ ಲಭಿಸುವ ಸಾಧ್ಯತೆ ಎಂದು ಮೂಲಗಳು ಖಚಿತ ಪಡಿಸಿದೆ.

    ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ:
    ಗೃಹ ಕಾರ್ಯದರ್ಶಿ – ಉಮೇಶ್ ಕುಮಾರ್
    ರವಿ ಚನ್ನಣ್ಣನವರ್ – ಡಿಸಿಪಿ, ಪಶ್ಚಿಮ ಬೆಂಗಳೂರು
    ಅಮಿತ್ ಸಿಂಗ್ – ಮೈಸೂರು ಎಸ್ಪಿ.
    ಗಿರೀಶ್ – ಮಂಡ್ಯ ಎಸ್ಪಿ.
    ಜಗದೀಶ್ – ಬಳ್ಳಾರಿ ಎಸ್ಪಿ
    ಬಳ್ಳಾರಿ ವಲಯ ಐಜಿಪಿ – ಎಸ್.ರವಿ.
    ಕೇಂದ್ರ ವಲಯ ಐಜಿಪಿ – ದಯಾನಂದ್.
    ಸೌಮೇಂದ್ರ ಮುಖರ್ಜಿ – ದಕ್ಷಿಣ ವಲಯ ಐಜಿಪಿ
    ಅನುಚೇತ್ – ಸಿಐಡಿ
    ಶಿವಪ್ರಸಾದ್- ಕೆಎಸ್‍ಆರ್  ಟಿಸಿ ವಿಜಿಲೆನ್ಸ್
    ಅಮೃತಪೌಲ್- ಐಜಿಪಿ, ಆಡಳಿತ
    ಕುಲ್‍ದೀಪ್ ಜೈನ್ – ಕೆಎಸ್‍ಆರ್  ಟಿಸಿ, ಕಮಾಂಡೆಂಟ್
    ರಾಧಿಕ – ಎಸ್‍ಪಿ, ಎಸಿಪಿ
    ಅನುಪ್ ಶೆಟ್ಟಿ – ಎಸ್‍ಪಿ, ಗುಪ್ತಚರ ಇಲಾಖೆ
    ರೇಣುಕ ಸುಕುಮಾರ್- ಎಸ್‍ಪಿ, ಕೊಪ್ಪಳ
    ಕಲಾ ಕೃಷ್ಣಮೂರ್ತಿ – ಡಿಸಿಪಿ, ಈಶಾನ್ಯ ಬೆಂಗಳೂರು
    ಚೇತನ್ – ಎಸ್‍ಪಿ, ದಾವಣಗೆರೆ

    https://www.youtube.com/watch?v=ZRLxRuJJEi4

  • ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ನವದೆಹಲಿ: ಪಾಕಿಸ್ತಾನದ ಗೂಢಚಾರಿಕಾ ಸಂಸ್ಥೆ ಐಎಸ್‍ಐ ಗೆ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಭಾರತೀಯ ವಾಯುಪಡೆಯ ಅಧಿಕಾರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ವಾಯುಪಡೆ ವಿಂಗ್ ಕಾಮಾಂಡರ್ ಆರುಣ್ ಮರ್ವಾಹಾ (51) ಬಂಧಿತ ಅಧಿಕಾರಿ. ಪಾಕಿಸ್ತಾನ ಐಎಸ್‍ಐ ನ ಇಬ್ಬರು ಏಜೆಂಟ್‍ಗಳು ತಾವು ಮಹಿಳೆಯರೆಂದು ಬಿಂಬಿಸಿ ಹನಿಟ್ರ್ಯಾಪ್ ಮಾಡಿ ವಾಟ್ಸಪ್ ಮೂಲಕ ವಾಯುಪಡೆಯ ಪ್ರಮುಖ ದಾಖಲೆಗಳನ್ನ ಪಡೆದಿದ್ದಾರೆ ಎಂದು ವರದಿಯಾಗಿದೆ.

    ಕಾಮಾಂಡರ್ ಆರುಣ್ ದೆಹಲಿಯ ಐಎಎಫ್ ಮುಖ್ಯಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಇವರ ವಿರುದ್ಧ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಗಳಿದೆ. ಆರುಣ್ ಮುಂದಿನ ವರ್ಷ ಕೆಲಸದಿಂದ ನಿವೃತ್ತಿ ಹೊಂದಬೇಕಿತ್ತು ಎಂದು ವರದಿಯಾಗಿದೆ.

    ಮಹಿಳೆಯರ ಹೆಸರಲ್ಲಿ ನಕಲಿ ಖಾತೆ ಹೊಂದಿದ್ದ ಪಾಕಿಸ್ತಾನದ ಐಎಸ್‍ಐ ಏಜೆಂಟ್‍ಗಳ ಜೊತೆ ಅಧಿಕಾರಿ ಫೇಸ್‍ಬುಕ್ ನಲ್ಲಿ ಕೆಲ ತಿಂಗಳ ಹಿಂದೆ ಸ್ನೇಹ ಬೆಳೆಸಿಕೊಂಡಿದ್ದರು. ನಂತರ ವಾಟ್ಸಪ್‍ನಲ್ಲಿ ನಿರಂತರ ಚಾಟ್ ಮಾಡುತ್ತಿದ್ದರು. ಸಲಿಗೆಯ ಸಂದೇಶಗಳನ್ನ ವಿನಿಮಯ ಮಾಡಿಕೊಂಡಿದ್ದರು. ಏಜೆಂಟ್‍ಗಳು ಅಧಿಕಾರಿಯ ವಿಶ್ವಾಸ ಗಳಿಸಿದ ಬಳಿಕ, ಅಶ್ಲೀಲ ಫೋಟೋಗಳಿಗೆ ಬದಲಿಯಾಗಿ ರಹಸ್ಯ ಮಾಹಿತಿಯುಳ್ಳ ದಾಖಲೆಗಳನ್ನ ಅಧಿಕಾರಿಯಿಂದ ಪಡೆದಿದ್ದಾರೆ. ಅಧಿಕಾರಿ ಹಂಚಿಕೊಂಡ ಮಾಹಿತಿ ಸೈಬರ್ ವಾರ್ ಫೇರ್, ಸ್ಪೇಸ್ ಮತ್ತು ವಿಶೇಷ ಕಾರ್ಯಾಚರಣೆಗಳದ್ದಾಗಿದೆ ಎಂದು ವರದಿಯಾಗಿದೆ.

    ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ಕೆಲವು ವಾರಗಳ ಹಿಂದೆ ಈ ಬಗ್ಗೆ ಪತ್ತೆ ಮಾಡಿದ ನಂತರ ಆಂತರಿಕ ತನಿಖೆಗೆ ಆದೇಶಿಸಿದ್ದರು. ಇದರಲ್ಲಿ ಆರುಣ್ ಅವರ ಪಾತ್ರವಿರುವುದು ಸಾಬೀತಾದ ಬಳಿಕ ವಾಯುಪಡೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ. 10 ದಿನಗಳ ವಿಚಾರಣೆಯ ಬಳಿಕ ವಾಯುಪಡೆಯ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಪ್ರಕರಣವನ್ನ ಪೊಲೀಸರಿಗೆ ಹಸ್ತಾಂತರಿಸಿದೆ.

    ಗುರುವಾರ ಆರುಣ್ ರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ, ಅರುಣ್ ಅವರನ್ನ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಕಟ್ಟಡದೊಳಗೆ ಮೊಬೈಲ್ ಬಳಕೆ ನಿಷೇಧವಿದ್ದರೂ ಬಂಧನದ ವೇಳೆ ಅರುಣ್ ಮೊಬೈಲ್‍ನೊಂದಿಗೆ ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದರು. ಪಾಕಿಸ್ತಾನದ ಇನ್ನೂ ದೊಡ್ಡ ಬೇಹುಗಾರಿಕೆಯಲ್ಲಿ ಅರುಣ್ ಪಾತ್ರವಿದೆಯಾ ಎಂಬ ಬಗ್ಗೆ ವಾಯುಪಡೆಯ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಪರಿಶೀಲನೆ ನಡೆಸುತ್ತಿದೆ.