Tag: odanadi

  • ತನಿಖಾಧಿಕಾರಿಗಳ ತಪ್ಪಿನಿಂದ ಮುರುಘಾ ಶ್ರೀಗೆ ಜಾಮೀನು: ಒಡನಾಡಿ ಸ್ಟ್ಯಾನ್ಲಿ ಪರಶು

    ತನಿಖಾಧಿಕಾರಿಗಳ ತಪ್ಪಿನಿಂದ ಮುರುಘಾ ಶ್ರೀಗೆ ಜಾಮೀನು: ಒಡನಾಡಿ ಸ್ಟ್ಯಾನ್ಲಿ ಪರಶು

    ಮೈಸೂರು: ತನಿಖಾಧಿಕಾರಿಗಳ ತಪ್ಪಿನಿಂದ ಮುರುಘಾ ಶ್ರೀಗೆ (Murugha shree) ಜಾಮೀನು ಸಿಕ್ಕಿದೆ ಎಂದು ಒಡನಾಡಿ (Odanadi) ಸಂಸ್ಥೆಯ ಮುಖ್ಯಸ್ಥ ಪರಶು ಅವರು ಆರೋಪಿಸಿದ್ದಾರೆ.

    ಮೈಸೂರಿನಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆ ಆಗಿದ್ದರೆ ಇಷ್ಟು ಬೇಗ ಜಾಮೀನು ಸಿಗುತ್ತಿರಲಿಲ್ಲ. ಇವತ್ತು ಸ್ವಾಮೀಜಿ ಪರ ಅವರ ಭಕ್ತರು ಜಯ ಘೋಷ ಮೊಳಗಿಸಿರುವುದು ಸಂತ್ರಸ್ತ ಮಕ್ಕಳಲ್ಲಿ ಭಯ ಹುಟ್ಟಿಸುವಂತಿದೆ ಎಂದಿದ್ದಾರೆ. ಇದನ್ನೂ ಓದಿ: ಪೋಕ್ಸೋ ಕೇಸ್‌ – ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ

    ಸಂಸ್ಥೆಯ ಸ್ಟ್ಯಾನ್ಲಿಯವರು ಮಾತನಾಡಿ, ಮುರುಘಾ ಶ್ರೀ ಜಾಮೀನು ರದ್ದಿಗೆ ಕಾನೂನು ಹೋರಾಟ ಮಾಡುತ್ತೇವೆ. ಸ್ವಾಮೀಜಿ ಬಿಡುಗಡೆ ವಿಚಾರ ಕೇಳಿ ಸಂತ್ರಸ್ತ ಮಕ್ಕಳು ಭಯಕ್ಕೆ ಒಳಗಾಗಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.

    ಕಳೆದ 13 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು ಚಿತ್ರದುರ್ಗ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ. ಪೋಕ್ಸೋ (Pocso Case) ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಶ್ರೀಗಳಿಗೆ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಹೋಟೆಲಿನಲ್ಲಿ ಸ್ಕ್ರೂಡ್ರೈವರ್‌ನಿಂದ 41 ಬಾರಿ ಇರಿದು ಪತ್ನಿಯ ಹತ್ಯೆಗೈದ ಪತಿ

  • ಸ್ಯಾಂಟ್ರೋ ರವಿ ವಿರುದ್ಧ 6 ತಿಂಗಳ ಹಿಂದೆಯೇ ಡಿಜಿ -ಐಜಿಪಿಗೆ ದೂರು ನೀಡಲು ಮುಂದಾಗಿದ್ದ ಒಡನಾಡಿ ಸಂಸ್ಥೆ

    ಸ್ಯಾಂಟ್ರೋ ರವಿ ವಿರುದ್ಧ 6 ತಿಂಗಳ ಹಿಂದೆಯೇ ಡಿಜಿ -ಐಜಿಪಿಗೆ ದೂರು ನೀಡಲು ಮುಂದಾಗಿದ್ದ ಒಡನಾಡಿ ಸಂಸ್ಥೆ

    ಬೆಂಗಳೂರು: ಸದ್ಯ ರಾಜ್ಯದಲ್ಲಿ ಭಾರೀ ಸುದ್ದಿಯಲ್ಲಿರುವ ಸ್ಯಾಂಟ್ರೋ ರವಿ(Santro Ravi) ಸಂಬಂಧ ಒಂದೊಂದೇ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ.

    ಸ್ಯಾಂಟ್ರೋ ರವಿ ವಿಚಾರ ಸಾರ್ವಜನಿಕವಾಗಿ ಬೆಳಕಿಗೆ ಬರುವ ಮುನ್ನವೇ ಮೈಸೂರಿನ ಒಡನಾಡಿ ಸಂಸ್ಥೆ ರವಿಯ, ಅನೈತಿಕ ವ್ಯವಹಾರ ಗಳ ಬಗ್ಗೆ ಮಹತ್ವದ ಮಾಹಿತಿಗಳನ್ನು ಕಲೆಹಾಕಿತ್ತು. ಈ ಸಂಬಂಧ ಡಿಜಿ – ಐಜಿಪಿ ಪ್ರವೀಣ್ ಸೂದ್ (Praveen Sood) ಗೆ ಭೇಟಿಯಾಗಿ ನೇರವಾಗಿ ದೂರು ನೀಡಲು ಮುಂದಾಗಿತ್ತು.

    ಈ ಸಂಬಂಧ ಹಲವು ಬಾರಿ ಭೇಟಿಗೆ ಅವಕಾಶ ಕೇಳಿ ಮೇಲ್ ಮಾಡಿದ್ರು, ಯಾವುದೇ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಡಿಜಿಯವರು ಫೋನ್ ಕರೆಗೂ ಸಿಕ್ಕಿರಲಿಲ್ಲ. ಭೇಟಿಗೆ ಅವಕಾಶ ಕೇಳಿ ಕಳೆದ ಜೂನ್ ನಲ್ಲೇ ಅನುಮತಿ ಕೇಳಿದ್ದ ಮೇಲ್ ವೊಂದು ವೈರಲ್ ಆಗ್ತಿದೆ. ಇದನ್ನೂ ಓದಿ: ಪತ್ನಿ ವಿರುದ್ಧ ಸುಳ್ಳು ಕೇಸ್‌ – ಸ್ಯಾಂಟ್ರೋ ರವಿಯ ಷಡ್ಯಂತ್ರಕ್ಕೆ ಇನ್‌ಸ್ಪೆಕ್ಟರ್‌ ಸಾಥ್‌

    ಸ್ಯಾಂಟ್ರೋ ರವಿ ಮಾನವ ಕಳ್ಳಸಾಗಣೆ, ಅಕ್ರಮ ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆ, ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಒಡನಾಡಿ ಸಂಸ್ಥೆ ಮಾಹಿತಿ ಕಲೆಹಾಕಿತ್ತು. ಈ ಎಲ್ಲಾ ಮಾಹಿತಿಗಳ ಜೊತೆಗೆ ಸೂಕ್ತ ಸಾಕ್ಷಿಗಳನ್ನು ಕೂಡ ಒಡನಾಡಿ ಸಂಸ್ಥೆ ಕಲೆಹಾಕಿತ್ತು.

    ಯಾವಾಗ ಸ್ಯಾಂಟ್ರೋ ರವಿ ವಿಚಾರ ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬಂತೋ, ಈಗ ಆತನ ವಿರುದ್ಧ ಪೊಲೀಸ್ ಇಲಾಖೆ ಸಿರಿಯಸ್ ಆಗಿ ಹುಡುಕಾಟ ನಡೆಸುತ್ತಿದೆ. ಆದರೆ ಈ ಹಿಂದೆ ರವಿ ಸಂಬಂಧ ದೂರು ನೀಡಿದ್ರೆ ಯಾರು ಕೂಡ ಸಿರಿಯಸ್ ಆಗಿ ಪರಿಗಣಿಸದೇ ಇರೋದು ಬೇಸರದ ಸಂಗತಿ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k