Tag: November 1

  • ನವೆಂಬರ್ 1ರಂದು ಎಂಇಎಸ್ ಆಚರಿಸೋ ಕರಾಳ ದಿನಕ್ಕೆ ಬ್ರೇಕ್ ಹಾಕ್ತಾರಾ ಸಿಎಂ?

    ನವೆಂಬರ್ 1ರಂದು ಎಂಇಎಸ್ ಆಚರಿಸೋ ಕರಾಳ ದಿನಕ್ಕೆ ಬ್ರೇಕ್ ಹಾಕ್ತಾರಾ ಸಿಎಂ?

    ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಕುಂದಾನಗರಿ ಬೆಳಗಾವಿಯಲ್ಲಿ ಎಂಇಎಸ್ ಕಿರಿಕ್ ಆರಂಭವಾಗುತ್ತದೆ. ಕರಾಳ ದಿನಾಚರಣೆ ಸೇರಿದಂತೆ ಇನ್ನಿಲ್ಲದ ನಾಡ ವಿರೋಧಿ ಕೃತ್ಯಕ್ಕೆ ಕೈ ಹಾಕುತ್ತದೆ. ಇದಕ್ಕೆ ಪುಷ್ಟಿ ಎನ್ನುವಂತೆ ಬೆಳಗಾವಿ ಜಿಲ್ಲಾಡಳಿತ ಕಡೆ ಕ್ಷಣದವರೆಗೆ ಕಾದು ನೋಡುವ ತಂತ್ರ ಅನುಸರಿಸಿ ಕಡೆಗೆ ಕರಾಳ ದಿನಾಚರಣೆ ಅನುಮತಿ ನೀಡುತ್ತಾರೆ.

    ಗಡಿ ಜಿಲ್ಲೆ ಬೆಳಗಾವಿ ಸಿಹಿ ಸಿಹಿ ಕುಂದಾಗೆ ಎಷ್ಟು ಫೇಮಸ್ಸೋ ಭಾಷಾ ವಿವಾದ, ಗಡಿ ಗಲಾಟೆಗೂ ಅಷ್ಟೇ ಹೆಸರುವಾಸಿ. ಕ್ಯಾಲೆಂಡರ್‍ನಲ್ಲಿ ನವೆಂಬರ್ 1 ಬರುತ್ತಿದ್ದಂತೆ ಬೆಳಗಾವಿಯಲ್ಲಿ ಎಂಇಎಸ್ ಸಭೆ ಮೇಲೆ ಸಭೆ ನಡೆಸುತ್ತದೆ. ಮೇಲಿಂದ ಮೇಲೆ ಡಿಸಿ ಕಚೇರಿಗೆ ಬಂದು ನಾಡ ವಿರೋಧಿ ಚಟುವಟಿಕೆಗೆ ಅನುಮತಿ ಕೇಳುತ್ತಾರೆ. ನಮ್ಮ ಅಧಿಕಾರಿಗಳು ಸಹ ಯಾರದ್ದೋ ಒತ್ತಡಕ್ಕೆ ಮಣಿದು ನಾಡು ನುಡಿ ಎಂಬ ಅಭಿಮಾನ ಮರೆತು ಕರಾಳ ದಿನಾಚರಣೆಗೆ ಪರವಾನಿಗೆ ನೀಡುತ್ತಾರೆ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದ್ರೆ ಈ ಕುರಿತು ಏನನ್ನು ನಿರ್ಧಾರ ಮಾಡಿಲ್ಲ. ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತೇವೆ. ನೊಡೋಣ ಎಂಬ ರೆಡಿಮೇಡ್ ಉತ್ತರ ನೀಡ್ತಾರೆ.

    ನಾಡ ಹಬ್ಬವನ್ನು ಆಚರಿಸಲು ಜಿಲ್ಲೆಯ ಮೂಲೆ ಮೂಲೆಗಳಿಂದ ಕನ್ನಡಿಗರು, ಕನ್ನಡ ಪರ ಜನರು, ಹೋರಾಟಗಾರರು ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಾರೆ. ತಮ್ಮದೇ ಶೈಲಿಯಲ್ಲಿ ದಿನವಿಡೀ ಬೆಳಗಾವಿ ಮಹಾನಗರದಲ್ಲಿ ನಡೆಯುವ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ವಿಪರ್ಯಾಸ ಅಂದ್ರೆ ಇಷ್ಟೆಲ್ಲಾ ಸರ್ಕಾರಗಳು ಬಂದರೂ ಕರಾಳ ದಿನಾಚರಣೆಗೆ ಪರವಾನಿಗೆ ಕೊಡುವುದು ಮಾತ್ರ ನಿಂತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಇದಕ್ಕೆ ಬ್ರೇಕ್ ಹಾಕ್ತಾರಾ ಎಂಬುವುದು ಮುಂದಿನ ದಿಗಳಲ್ಲಿ ತಿಳಿಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 62ನೇ ಕನ್ನಡ ರಾಜ್ಯೋತ್ಸವ ಸಂಭ್ರಮ- ಲಹರಿ ಸಂಗೀತ ಸಂಸ್ಥೆಯಿಂದ `ಅಮ್ಮಾ ಕಾವೇರಿ` ಹಾಡು ಸಮರ್ಪಣೆ

    62ನೇ ಕನ್ನಡ ರಾಜ್ಯೋತ್ಸವ ಸಂಭ್ರಮ- ಲಹರಿ ಸಂಗೀತ ಸಂಸ್ಥೆಯಿಂದ `ಅಮ್ಮಾ ಕಾವೇರಿ` ಹಾಡು ಸಮರ್ಪಣೆ

    ಬೆಂಗಳೂರು: ಕನ್ನಡ ಎನ್ನುವುದು ಬರೀ ಭಾಷೆ ಮಾತ್ರ ಅಲ್ಲ. ಇಲ್ಲಿಯ ನೆಲ, ಜಲ ಕನ್ನಡದ ಜೊತೆಜೊತೆಗೆ ಬಂದು ನಿಲ್ಲುತ್ತವೆ. ಕನ್ನಡ ಮಾತಾಡುವುದು, ಕನ್ನಡ ಉಳಿಸುವುದು ಮತ್ತು ಬೆಳೆಸುವುದು ಎಷ್ಟು ಮುಖ್ಯವೋ ಅದೇ ರೀತಿ ಇಲ್ಲಿಯ ನೆಲ-ಜಲವನ್ನು ರಕ್ಷಣೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ.

    ಕಾವೇರಿ ರಾಜ್ಯದ ದಕ್ಷಿಣ ಭಾಗದಲ್ಲಿದ್ದರೂ ಇದು ಇಡೀ ಕನ್ನಡ ನಾಡಿಗೆ ತಾಯಿಯಿದ್ದಂತೆ. ರಾಜ್ಯೋತ್ಸವದ ದಿನವಾದ ಇಂದು ‘ಅಮ್ಮಾ ಕಾವೇರಿ’ ಹಾಡು ಪಬ್ಲಿಕ್ ಟಿವಿ ಮೂಲಕ ಬಿಡುಗಡೆಯಾಗಿದೆ. ಹಾಡಿನಲ್ಲಿ ಕಾವೇರಿಯ ನದಿಯ ವರ್ಣನೆ ಮಾಡಲಾಗಿದ್ದು, ನದಿಯ ವಿಹಂಗಮ ನೋಟವನ್ನು ನೋಡಬಹುದಾಗಿದೆ.

    ಪ್ರತಿಷ್ಟಿತ ಗ್ರ್ಯಾಮಿ ಪ್ರಶಸ್ತಿ ಪುರಸ್ಕøತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಈ ಗೀತೆಗೆ ಸಂಗೀತ ಸಂಯೋಜಿಸಿದ್ದಾರೆ. ಸಂಗೀತ ಸರಸ್ವತಿ ಎಂ.ಡಿ.ಪಲ್ಲವಿ ಹಾಡಿಗೆ ಧ್ವನಿಯಾಗಿದ್ದಾರೆ. ಖ್ಯಾತ ಕವಿ ಎಚ್‍ಎಸ್ ವೆಂಕಟೇಶ್ ಮೂರ್ತಿ ಅವರ ಸಾಹಿತ್ಯವಿದೆ. ಕನ್ನಡದ ಪ್ರತಿಷ್ಠಿತ ಲಹರಿ ಸಂಗೀತ ಸಂಸ್ಥೆ ಈ ವಿಡಿಯೋ ಆಲ್ಬಂ ಹೊರತಂದಿದೆ.