Tag: Novelist S.L. Bhyrappa

  • 64 ವರ್ಷಗಳಿಂದ ನಾನು ಭೈರಪ್ಪರನ್ನು ಬಲ್ಲೆ: ಸುಧಾ ಮೂರ್ತಿ

    64 ವರ್ಷಗಳಿಂದ ನಾನು ಭೈರಪ್ಪರನ್ನು ಬಲ್ಲೆ: ಸುಧಾ ಮೂರ್ತಿ

    ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ದಿಗ್ಗಜರನ್ನು ಕಳೆದುಕೊಂಡ ನೋವಾಗಿದೆ. ಕನ್ನಡ ಸಾಹಿತ್ಯಕ್ಕೆ ಅವರು ಕೊಟ್ಟ ಕೊಡುಗೆ ಅಪಾರ ಎಂದು ಲೇಖಕಿಯೂ ಆದ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ (Sudha Murthy) ನೆನಪಿಸಿಕೊಂಡಿದ್ದಾರೆ.

    ಎಸ್‌.ಎಲ್.ಭೈರಪ್ಪ (S.L.Bhyrappa) ಅವರ ನಿಧನ ಸುದ್ದಿ ಕೇಳಿ ಸುಧಾಮೂರ್ತಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾವಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಇದನ್ನೂ ಓದಿ: ಭೈರಪ್ಪರ ಸಾಹಿತ್ಯದಲ್ಲಿ ಬೇರೆ ಸಾಹಿತಿಗಳಂತೆ ಕಾಲ್ಪನಿಕತೆ ಇರಲಿಲ್ಲ, ವಸ್ತುನಿಷ್ಠತೆ ಇತ್ತು: ಪ್ರತಾಪ್‌ ಸಿಂಹ

    ನಾನು 11 ವರ್ಷದವಳು ಆಗಿದ್ದಾಗಿನಿಂದಲೂ ಭೈರಪ್ಪನವರ ಪರಿಚಯವಿತ್ತು. ಕಳೆದ 64 ವರ್ಷಗಳಿಂದ ಅವರನ್ನು ನಾನು ಬಲ್ಲೆ. ನಮ್ಮ ಹುಬ್ಬಳ್ಳಿಯ ಕಾಡುಸಿದ್ದೇಶ್ವರ ಕಾಲೇಜಿನ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ಆಗ ನಮ್ಮ ಮನೆಯ ಹಿಂದುಗಡೆಯೇ ಇದ್ದರು ಎಂದು ಸುಧಾಮೂರ್ತಿ ಮಾತನಾಡಿದ್ದಾರೆ.

    ಭೈರಪ್ಪ ಅವರ ಎಲ್ಲಾ ಕಾದಂಬರಿಗಳು ಶ್ರೇಷ್ಠವಾಗಿವೆ. ನನಗೆ ಅನೇಕ ಕಾದಂಬರಿಗಳು ಪ್ರಿಯವಾಗಿವೆ. ಅವರ ಸಾಕಷ್ಟು ಕೃತಿಗಳನ್ನು ಓದಿದ್ದೇನೆ. ಇನ್ನೊಬ್ಬರ ಮನಸ್ಸಿನ ಒಳಗೆ ಹೋಗಿ, ಆ ಭಾವನೆಗಳನ್ನು ಲೇಖನ ರೂಪದಲ್ಲಿ ಅಭಿವ್ಯಕ್ತಿಸಿದ ಸಾಹಿತಿಗಳು ಬಹಳ ಕಡಿಮೆ ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ ಎಸ್‌ಎಲ್‌ ಭೈರಪ್ಪ ಇನ್ನಿಲ್ಲ

    ಒಳ್ಳೆಯ ಕಲಾವಿದರು, ವಿದ್ವಾಂಸರು, ನೇರ ನುಡಿಯ ವ್ಯಕ್ತಿತ್ವದವರು. ಬಹಳ ದುಃಖದಿಂದ ಭೈರಪ್ಪನವರಿಗೆ ನಾವು ವಿದಾಯ ಹೇಳುತ್ತಿದ್ದೇವೆ ಎಂದು ಮಾತನಾಡಿದ್ದಾರೆ.

  • ತಿಂಗಳಿಗೆ 5 ರೂ. ಸಂಬಳಕ್ಕೆ ಸಿನಿಮಾ ಟಾಕೀಸ್‌ನಲ್ಲಿ ಗೇಟ್‌ ಕೀಪರ್‌ ಆಗಿದ್ರು ಭೈರಪ್ಪ

    ತಿಂಗಳಿಗೆ 5 ರೂ. ಸಂಬಳಕ್ಕೆ ಸಿನಿಮಾ ಟಾಕೀಸ್‌ನಲ್ಲಿ ಗೇಟ್‌ ಕೀಪರ್‌ ಆಗಿದ್ರು ಭೈರಪ್ಪ

    ಸಾಹಿತಿ ಎಸ್‌.ಎಲ್.ಭೈರಪ್ಪ (S.L.Bhyrappa) ಅವರು ಬಾಲ್ಯದಲ್ಲೇ ಕಡುಕಷ್ಟದ ಜೀವನ ಕಂಡವರು. ಒಪ್ಪೊತ್ತಿನ ಊಟ ಮತ್ತು ಶಿಕ್ಷಣಕ್ಕೆ ಯಾರ ನೆರವೂ ಇಲ್ಲದಂತಹ ಪರಿಸ್ಥಿತಿ. ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸಿದ್ದರು.

    ಭೈರಪ್ಪ ಅವರು ಬಾಲ್ಯದಲ್ಲೇ ಮಾರಕ ಪ್ಲೇಗ್‌ಗೆ ಅಣ್ಣ-ಅಕ್ಕ, ತಾಯಿ, ತಂಗಿ, ತಮ್ಮನನ್ನು ಕಳೆದುಕೊಂಡರು. ಇದು ಬದುಕಿನಲ್ಲಿ ಅವರಿಗೆ ದೊಡ್ಡ ಆಘಾತ ನೀಡಿತು. ಅಕ್ಷರಶಃ ಬದುಕು ಬೀದಿಗೆ ಬಿದ್ದಿತು. ಆರಂಭದಲ್ಲಿ ಶಿಕ್ಷಣಕ್ಕಾಗಿ ಸೋದರ ಮಾವನನ್ನು ಅವಲಂಬಿಸಬೇಕಾಯಿತು. ಬಳಿಕ ಅಲ್ಲಿಂದ ನುಗ್ಗೆಹಳ್ಳಿಗೆ ಬಂದು ಸ್ವಾಮಿ ಮೇಷ್ಟ್ರು ಮತ್ತು ಶ್ರೀನಿವಾಸ ಅಯ್ಯಂಗಾರ್‌ ಅವರಿಂದ ಶಿಕ್ಷಣ ಕಲಿತರು. ಈ ಮಧ್ಯೆ ಸ್ವಾಮಿ ಮೇಷ್ಟ್ರಿಗೆ ಗೊರೂರಿಗೆ ವರ್ಗವಾಯಿತು. ಆಗ ಎಸ್‌.ಎಲ್.ಭೈರಪ್ಪ ಅವರು ಚನ್ನರಾಯಪಟ್ಟಣಕ್ಕೆ ಹಿಂತಿರುಗಿ ಬಂದರು. ಇದನ್ನೂ ಓದಿ: ತಮ್ಮ ಅಕ್ಷರಗಳಿಂದ ಆತ್ಮವನ್ನು ಕಲಕಿ, ಭಾರತದ ಅಧ್ಯಯನ ಮಾಡಿದ್ದ ಮಹಾನ್ ಧೀಮಂತ – ಮೋದಿ ಸಂತಾಪ

    ಊಟ ಮತ್ತು ಶಿಕ್ಷಣಕ್ಕಾಗಿ ತುಂಬಾ ಕಡೆ ಅಲೆದಾಡಿದರು. ಬದುಕಿನ ಹೋರಾಟ ನಡೆಸಿದರು. ಚನ್ನರಾಯಪಟ್ಟಣದಲ್ಲಿ ನಿತ್ಯದ ಖರ್ಚು ಹುಟ್ಟಿಸಿಕೊಳ್ಳಲು ತಿಂಗಳಿಗೆ 5 ರೂಪಾಯಿ ಸಂಬಳದ ಮೇಲೆ ಸಿನಿಮಾ ಟಾಕಿಸ್‌ ಗೇಟ್‌ ಕೀಪರ್‌ ಆಗಿ ಕೂಡ ಭೈರಪ್ಪ ಅವರು ಕೆಲಸ ಮಾಡಿದ್ದಾರೆ.

    ಜೀವನಕ್ಕಾಗಿ ಹಲವು ಕಡೆ ಅಲೆದಾಟ ಕೂಡ ನಡೆಸಿದ್ದರು. ಹಾಸನ, ಮೈಸೂರು, ಮುಂಬೈಗೆ ನಿರಂತರವಾಗಿ ಅಲೆದಿದ್ದರು. ಮುಂಬೈನಲ್ಲಿ ರೈಲ್ವೆ ಪೋರ್ಟರ್‌ ಆಗಿ ಕೂಡ ಕೆಲಸ ಮಾಡಿದ್ದರು. ಬಳಿಕ ಸಾಧು-ಸಂತರ ಗುಂಪು ಸೇರಿಕೊಂಡು ಅಧ್ಯಾತ್ಮದ ಕಡೆ ಆಸಕ್ತಿ ಬೆಳೆಸಿಕೊಂಡರು. ಇದನ್ನೂ ಓದಿ: ಭೈರಪ್ಪನವರ ಬದುಕು ಕೊನೆಯಿಲ್ಲದ ʻಯಾನʼ – ನಟ ಅನಂತನಾಗ್‌ ಭಾವುಕ

  • ನಮಗೆ ನಷ್ಟವಾದರೂ, ಲಾಭವಾದರೂ ತಮಿಳುನಾಡಿಗೆ ನೀರು ಬೇಕು – ಇದು ಯಾವ ನ್ಯಾಯ: ಸಿಎಂಗೆ ಭೈರಪ್ಪ ಪತ್ರ

    ನಮಗೆ ನಷ್ಟವಾದರೂ, ಲಾಭವಾದರೂ ತಮಿಳುನಾಡಿಗೆ ನೀರು ಬೇಕು – ಇದು ಯಾವ ನ್ಯಾಯ: ಸಿಎಂಗೆ ಭೈರಪ್ಪ ಪತ್ರ

    ಮೈಸೂರು: ಕೊಡಗು ಜಲಪ್ರಳಯದ ಕುರಿತು ತಮಿಳುನಾಡು ಸರ್ಕಾರ ಮೌನ ಧೋರಣೆ ತೋರಿಸಿದ್ದಕ್ಕೆ ಕಾದಂಬರಿಕಾರ ಹಾಗೂ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಕಿಡಿಕಾರಿದ್ದಾರೆ.

    ಈ ವಿಚಾರವಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಅವರು ಕಾವೇರಿ ನೀರಿಗಾಗಿ ಪ್ರತಿ ವರ್ಷವೂ ಒಂದಿಲ್ಲೊಂದು ರೀತಿಯಲ್ಲಿ ತಮಿಳುನಾಡು ತಗಾದೆ ತೆಗೆಯುತ್ತಲೇ ಇರುತ್ತದೆ. ಆದರೆ ಈಗ ಕೊಡಗಿನಲ್ಲಿ ಆಗಿರುವ ನಷ್ಟಕ್ಕೆ ಮಾತ್ರ ಪ್ರತಿಕ್ರಿಯೇ ನೀಡದೇ ಮೌನವಾಗಿ ಕುಳಿತಿದೆ. ನಮಗೆ ನಷ್ಟವಾದರೂ, ಲಾಭವಾದರೂ ಅವರಿಗೆ ನೀರು ಬೇಕು. ಇದು ಎಂತಹ ನ್ಯಾಯ ಎನ್ನುವ ಎಂದು ಪ್ರಶ್ನಿಸಿ ಚಾಟಿ ಬೀಸಿದ್ದಾರೆ.

    ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವ ಕರ್ತವ್ಯ ಕರ್ನಾಟಕದ್ದು. ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದ್ದು. ಇದೊಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ ಎಂದು ತಮ್ಮ ಸಲಹೆ ಮತ್ತು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಮೂಲಕ ಹೊಸ ತಂತ್ರ ಬಳಸಿ ಕಾವೇರಿ ನೀರಿಗಾಗಿ ತಮಿಳುನಾಡಿನ ತಗಾದೆಗೆ ಹೇಗೆ ಪ್ರತಿತಂತ್ರ ರೂಪಿಸಬಹುದು ಎಂದು ಎಸ್.ಎಲ್.ಭೈರಪ್ಪ ಅವರು, ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿಸಿ ಹೇಳಿದ್ದಾರೆ.

    ಪತ್ರದಲ್ಲಿ ಏನಿದೆ?:
    ಒಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ. ಹೆಚ್ಚು ಮಳೆ ಮತ್ತು ಬಿರುಗಾಳಿಯಿಂದಾಗಿ ಕೊಡಗಿನಲ್ಲಿ ಭಾರೀ ಹಾನಿಯಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರ ಮಾಡಬೇಕಾಗಿರುವ ಸಾವಿರಾರು ಕೋಟಿ ರೂ. ಖರ್ಚು ಹಾಗೂ ಸಾರ್ವಜನಿಕರು ಕೊಡುತ್ತಿರುವ ದೇಣಿಗೆಗಳು ಸರ್ವವಿಧಿತ. ಹೆಚ್ಚು ಮಳೆಯಾಗಲಿ, ಸಾಧಾರಣ ಮಳೆಯಾದರೂ ತಮಿನಾಡು ಸರ್ಕಾರ ಕಾದು ಕುಳಿತು, ತಗಾದೆ ತೆಗೆಯುವ ಮೂಲಕ ನೀರನ್ನು ಕಬಳಿಸುತ್ತದೆ. ಆಗದೇ ಇದ್ದಾಗ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯವನ್ನು ಒತ್ತಾಯಿಸುತ್ತದೆ.

    ಕೊಡಗಿನ ನೀರು ಬೇಕು, ಆದರೆ ಅದರ ಹಾನಿಯನ್ನು ತುಂಬಲು ತನ್ನ ಯಾವ ಕರ್ತವ್ಯವೂ ಇಲ್ಲವೆಂಬಂತೆ ತೆಪ್ಪಗಿದೆ. ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವ ಕರ್ತವ್ಯ ಕರ್ನಾಟಕದ್ದು. ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದ್ದು. ಈ ಅಂಶಗಳನ್ನು ಒಳಗೊಂಡು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕಾಗಲಿ, ಸಂಬಂಧಿಸಿದ ಟ್ರಿಬ್ಯೂನಲ್ ಅಥವಾ ನ್ಯಾಯಾಲಯಕ್ಕಾಗಲಿ ಹಕ್ಕೊತ್ತಾಯ ಮಾಡುವುದು ಅತ್ಯಗತ್ಯವೆಂದು ನನ್ನ ಭಾವನೆ.

    ಮೇಲಿನವರು ನಮ್ಮ ಹಕ್ಕೊತ್ತಾಯವನ್ನು ಈಗ ಮನ್ನಿಸದೇ ಇದ್ದರೂ ನಮ್ಮ ಪಾಲಿನ ನೀರಿನ ಹಕ್ಕೊತ್ತಾಯ ಮಾಡುವಾಗ ಈ ಅಂಶವನ್ನು ಸೇರಿಸಲು ಇದು ಆಧಾರವಾಗುತ್ತದೆ. ಈ ಬಗೆಗೆ ತಾವು ತಕ್ಷಣ ಕಾರ್ಯೋನ್ಮುಖರಾಗುವಿರೆಂಬ ಭರವಸೆಯಿಂದ ಈ ಪತ್ರ ಬರೆದಿದ್ದೇನೆ ಎಂದು ಎಸ್.ಎಲ್.ಭೈರಪ್ಪ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews