Tag: north korea

  • ಅಮೆರಿಕ, ಕೊರಿಯಾದಂತೆ ಪಾಕ್, ಭಾರತ ಯಾಕೆ ಮಾತುಕತೆ ನಡೆಸಬಾರದು: ಶರೀಫ್ ಸಹೋದರ ಟ್ವೀಟ್

    ಅಮೆರಿಕ, ಕೊರಿಯಾದಂತೆ ಪಾಕ್, ಭಾರತ ಯಾಕೆ ಮಾತುಕತೆ ನಡೆಸಬಾರದು: ಶರೀಫ್ ಸಹೋದರ ಟ್ವೀಟ್

    ನವದೆಹಲಿ: ಉತ್ತರ ಕೊರಿಯಾ ಹಾಗೂ ಅಮೆರಿಕ ಪರಸ್ಪರ ಮಾತುಕತೆ ನಡೆಸಿದಂತೆ ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಡೆಸಲಿ ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ರ ಸಹೋದರ ಶಹಬಾಜ್ ಶರೀಫ್ ಹೇಳಿದ್ದಾರೆ.

    ಏಳು ದಶಕಗಳ ವೈರತ್ವವನ್ನು ಬದಿಗೊತ್ತಿ ಅಮೆರಿಕ-ಉತ್ತರ ಕೊರಿಯಾ ಪರಸ್ಪರ ಮಾತುಕತೆಗೆ ಬಂದಿವೆ. ಹಲವು ವರ್ಷಗಳ ಕಾಲ ತಮ್ಮ ಶಕ್ತಿ ಪ್ರದರ್ಶನಗಳಲ್ಲಿಯೇ ನಿಂತರೂ ಸದ್ಯ ಎರಡು ರಾಷ್ಟ್ರಗಳು ಚರ್ಚೆ ನಡೆಸಿದ ಮಾದರಿಯಲ್ಲೇ ಭಾರತ ಹಾಗೂ ಪಾಕಿಸ್ತಾನ ಯಾಕೆ ಮಾತುಕತೆ ನಡೆಸಬಾರದು ಎಂದು ಅವರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಶಹಬಾಜ್ ಶರೀಫ್, ಮತ್ತೊಮ್ಮೆ ಭಾರತವನ್ನು ಗುರಿ ಮಾಡಿರುವ ಅವರು ಭಾರತ ಜಮ್ಮು ಕಾಶ್ಮೀರ ಪ್ರದೇಶ ಮೇಲೆ ಆಕ್ರಮಣ ಮಾಡಿದೆ. ಇದನ್ನ ಕಾಶ್ಮೀರದ ಜನರು ವಿರೋಧಿಸಿದ್ದಾರೆ ಎಂದು ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಕಾಶ್ಮೀರ ಭಾಗದಲ್ಲಿ ಶಾಂತಿ ಕಾಪಾಡುವುದು ಅಗತ್ಯವಾಗಿದ್ದು, ಜಗತ್ತಿನ ಸಮುದಾಯವು ಇನ್ನು ಗಮನಿಸಬೇಕಾಗಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಒಳಪಟ್ಟಂತೇ ಹಲವು ವರ್ಷಗಳಿಂದ ಇರುವ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ನಿಯಮಗಳಂತೆ ಬಗೆಹರಿಸಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಸಿಂಗಾಪುರದಲ್ಲೇ ಟ್ರಂಪ್-ಕಿಮ್ ಭೇಟಿಯಾಗಿದ್ದು ಯಾಕೆ?

  • ಸಿಂಗಾಪುರದಲ್ಲೇ ಟ್ರಂಪ್-ಕಿಮ್ ಭೇಟಿಯಾಗಿದ್ದು ಯಾಕೆ?

    ಸಿಂಗಾಪುರದಲ್ಲೇ ಟ್ರಂಪ್-ಕಿಮ್ ಭೇಟಿಯಾಗಿದ್ದು ಯಾಕೆ?

    ಸಿಂಗಾಪುರ: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಂಗಾಪುರದಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದು, ಆದರೆ ಎರಡು ದೇಶಗಳ ಗಣ್ಯರ ಭೇಟಿಗೆ ಸಿಂಗಾಪುರ ಆಯ್ಕೆ ಆಗಿದ್ದು ಮಾತ್ರ ಮಹತ್ವದಾಗಿದೆ.

    ಸತತ 7 ದಶಕಗಳ ಬಳಿಕ ಅಮೆರಿಕ ಹಾಗೂ ಉತ್ತರ ಕೊರಿಯಾ ನಡುವೆ ಮಾತುಕತೆ ನಡೆದಿದ್ದು, ವಿಶ್ವದ ಗಮನವನ್ನು ಸೆಳೆದಿದೆ. ಆದರೆ ಎರಡು ದೇಶಗಳ ನಾಯಕರ ಭೇಟಿಗೆ ಈ ಹಿಂದೆ ಹಲವು ರಾಷ್ಟ್ರಗಳ ಹೆಸರುಗಳು ಕೇಳಿ ಬಂದಿತ್ತು. ಅಂತಿಮವಾಗಿ ಐತಿಹಾಸಿಕ ಘಟನೆಗೆ ಸಿಂಗಾಪುರ ಸಾಕ್ಷಿಯಾಗಿದೆ.

    ಈ ಮೊದಲು ದಕ್ಷಿಣ ಕೊರಿಯಾದ ಮಿಲಿಟರಿ ಚಟುವಟಿಕೆ ನಿಷೇಧಿತ ಪ್ರದೇಶವನ್ನು (Korean Demilitarized Zone) ನಾಯಕರ ಸೂಕ್ತ ಭದ್ರತೆಯ ಸ್ಥಳವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಬಳಿಕ ಈ ಪಟ್ಟಿಯಲ್ಲಿ ಸ್ವೀಡನ್, ಮಂಗೋಲಿಯಾ, ಜಿನೀವಾ ಹೆಸರು ಕೇಳಿ ಬಂದಿತ್ತು. ಆದರೆ ಅಂತಿಮವಾಗಿ ಪಟ್ಟಿಯಲ್ಲಿ ಇಲ್ಲದ ಸಿಂಗಾಪುರ ಕಾರ್ಯಕ್ರಮದ ಜವಾಬ್ದಾರಿ ಪಡೆಯಿತು.

    ಸಿಂಗಾಪುರವೇ ಯಾಕೆ?
    ಸಿಂಗಾಪುರ ಭೇಟಿಯ ಹಿಂದೆ ಹಲವು ರಾಜತಾಂತ್ರಿಕ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಲಾಗಿದ್ದು, ವಿಶ್ವದ ಅತ್ಯಂತ ಸುರಕ್ಷಿತಾ ಸ್ಥಳ ಎಂಬ ಕಾರಣಕ್ಕೆ ಆಯ್ಕೆ ಮಾಡಲಾಗಿತ್ತು. ಸಿಂಗಾಪುರ ಕೊರಿಯಾದೊಂದಿಗೆ ಕಳೆದ 4 ದಶಕಗಳಿಂದ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ. ಅಲ್ಲದೇ ಅಮೆರಿಕದೊಂದಿಗೆ ಉತ್ತಮ ವ್ಯಾಪಾರಿ ಸಂಬಂಧವನ್ನು ಹೊಂದಿದ್ದು, ತಜ್ಞರ ಅಭಿಪ್ರಾಯದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ.

    ಇದೇ ಮೊದಲಲ್ಲ: ಸಿಂಗಾಪುರ ಭಾರತ ಹಾಗೂ ಚೀನಾ ನಡುವಿನ ಶಾಂಘಿಲಾ ಸಭೆಯನ್ನು ಸಹ ಯಶಸ್ವಿಯಾಗಿ ಆಯೋಜಿಸಿತ್ತು. ಅಲ್ಲದೇ 2015 ರಲ್ಲಿ ಚೀನಾ ಬದ್ಧ ವೈರಿ ತೈವಾನ್ ಅಧ್ಯಕ್ಷ ಹಾಗೂ ಕ್ಸಿ ಜಿನ್ ಪಿಂಗ್ ರ ದ್ವಿಪಕ್ಷೀಯ ಸಭೆಯನ್ನು ಏರ್ಪಡಿಸಿತ್ತು.

    ಬದ್ಧ ವೈರಿಗಳಾಗಿ ಗುರುತಿಸಿಕೊಂಡಿದ್ದ ಎರಡು ರಾಷ್ಟ್ರಗಳ ನಾಯಕರ ಭೇಟಿ ಹಲವು ರಾಷ್ಟ್ರಗಳ ಗಮನಸೆಳೆದಿದೆ. ಸದ್ಯ ಸಿಂಗಾಪುರದ ಐತಿಹಾಸಿಕ ಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಿಮ್ ಜಾಂಗ್ ಉನ್ ನಮ್ಮ ಇಂದಿನ ಭೇಟಿ ಅಷ್ಟು ಸುಲಭದ ಮಾತಲ್ಲ, ಈ ಹಿಂದಿನ ಹಳೆಯ ಅಡೆತಡೆಗಳನ್ನು ಮೀರಿ ಬಂದಿದ್ದಾಗಿ ಹೇಳಿದ್ದಾರೆ.

    ಇಬ್ಬರ ಮಾತುಕತೆಯ ವೇಳೆ ಅಣ್ವಸ್ತ್ರ ಯೋಜನೆಯ ಹಾಗೂ ಪರಸ್ಪರ ಸಹಕಾರ, ಆರ್ಥಿಕ ಬಂಧನ ಕುರಿತು ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದ್ದು, ನಾಲ್ಕು ಮಹತ್ವದ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಇದರಲ್ಲಿ ಕಿಮ್ ಮಹತ್ವದ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಕುರಿತ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದ್ದು ಅಧಿಕೃತ ಮಾಹಿತಿ ಲಭಿಸಬೇಕಿದೆ.

  • ಉತ್ತರ ಕೊರಿಯಾ ಅಧ್ಯಕ್ಷನ ಹುಚ್ಚು ಅಣ್ವಸ್ತ್ರ ಪರೀಕ್ಷೆಗೆ 200 ಕಾರ್ಮಿಕರು ಬಲಿ

    ಉತ್ತರ ಕೊರಿಯಾ ಅಧ್ಯಕ್ಷನ ಹುಚ್ಚು ಅಣ್ವಸ್ತ್ರ ಪರೀಕ್ಷೆಗೆ 200 ಕಾರ್ಮಿಕರು ಬಲಿ

    ಟೋಕಿಯೋ: ಇಡೀ ವಿಶ್ವವನ್ನೇ ಬೆದರಿಸಲು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಪದೇ ಪದೇ ನಡೆಸುತ್ತಿರುವ ಹುಚ್ಚಾಟದ ಪರಮಾಣು ಬಾಂಬ್ ಪರೀಕ್ಷೆಗೆ 200 ಮಂದಿ ಅಮಾಯಕ ಕಾರ್ಮಿಕರು ಬಲಿಯಾಗಿದ್ದಾರೆ.

    ಅಕ್ಟೋಬರ್ 10 ರಂದು ಉತ್ತರ ಕೊರಿಯಾ ಪುಂಗ್ಯೆ-ಹಿ ಪರಮಾಣು ಪರೀಕ್ಷಾ ಸ್ಥಳದ ಬಳಿ 23 ಕಿ.ಮೀ ನೆಲದಾಳದಲ್ಲಿ ಉತ್ತರ ಕೊರಿಯಾ ಪರಮಾಣು ಬಾಂಬ್ ಪರೀಕ್ಷೆ ನಡೆಸಿತ್ತು. ಇದಾದ ಕೆಲ ದಿನಗಳ ಬಳಿಕ ಅಲ್ಲಿ ಸುರಂಗ ಕುಸಿದಿದ್ದು ಈ ದುರಂತದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಜಪಾನ್ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

    ಸುರಂಗ ಕುಸಿದು ಆರಂಭದಲ್ಲೇ 100 ಜನ ಮೃತಪಟ್ಟಿದ್ದರೆ, ನಂತರ ನಡೆದ ರಕ್ಷಣಾ ಕಾರ್ಯಾಚರಣೆ ವೇಳೆ 100 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಭೂಮಿಯೊಳಗಡೆ ನಡೆಸಿರುವ ಈ ಅಣ್ವಸ್ತ್ರ ಪರೀಕ್ಷೆಯಿಂದ ಬೆಟ್ಟಗುಡ್ಡಗಳು ಅಲುಗಾಡಿದರ ಪರಿಣಾಮ ಸುರಂಗ ಕುಸಿದು ಬಿದ್ದಿದೆ ಎಂದು ಉಪಗ್ರಹ ಚಿತ್ರಗಳು ತಿಳಿಸಿವೆ. ಅಷ್ಟೇ ಅಲ್ಲದೇ ವಿಕಿರಣಗಳು ಸೋರಿಕೆಯಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಪರಮಾಣು ಬಾಂಬ್ ಪರೀಕ್ಷೆಯಿಂದ ಉಂಟಾದ ಭೂಕಂಪದ ತೀವ್ರತೆ ಎಷ್ಟಿತ್ತು ಎಂದರೆ ರಿಕ್ಟರ್ ಮಾಪನದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿತ್ತು. ಎರಡನೇ ಮಹಾ ಯುದ್ಧದಲ್ಲಿ ಜಪಾನ್ ಮೇಲೆ ಅಮೆರಿಕ ಪ್ರಯೋಗಿಸಿದ ಅಣು ಬಾಂಬ್ ಗಿಂತ ಐದು ಪಟ್ಟು ಹೆಚ್ಚು ಹೆಚ್ಚಿನ ಶಕ್ತಿಯನ್ನು ಈ ಬಾಂಬ್ ಹೊಂದಿತ್ತು ಎಂದು ವರದಿ ಮಾಡಿದೆ.

    ಇದನ್ನೂ ಓದಿ: ವಿಶ್ವದ ಡೆಡ್ಲಿ ವೆಪನ್: 10 ಮಿಲಿ ಗ್ರಾಂ ವಿಎಕ್ಸ್ ರಾಸಾಯನಿಕ ದೇಹಕ್ಕೆ ಸೇರಿದ್ರೆ ಸಾವು ನಿಶ್ಚಿತ!

  • ಮಹಿಳೆಯರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ

    ಮಹಿಳೆಯರಿಗೆ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ

    ಬೆಂಗಳೂರು: ದುಬಾರಿಯಾಗಿ ಬಲು ಭಾರವಾಗಿದ್ದ ಚಿನ್ನದ ದರ ಈಗ ಕೊಂಚ ಇಳಿಕೆಯಾಗಿ ರಿಲೀಫ್ ಮೂಡಿಸಿದೆ. ಕಳೆದ ಮೂರು ದಿನದಲ್ಲಿ ಬರೋಬ್ಬರಿ 2,000 ರೂ. ಏರಿಕೆಯಾಗಿದ್ದ ಚಿನ್ನ ಇಂದು ಏಕಾಏಕಿ ಹತ್ತು ಗ್ರಾಂಗೆ 1200 ರೂ ಕುಸಿತ ಕಂಡಿದೆ.

    24 ಕ್ಯಾರೆಟ್ ಚಿನ್ನದ ಹಿಂದಿನ ದರ 31,900 ರೂ. ಆಗಿತ್ತು. ಆದರೆ ಇಂದು 1,270 ರೂ. ಕಡಿಮೆಯಾಗಿ 30,630 ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಹಿಂದಿನ ದರ 28,750 ರೂ. ಆಗಿತ್ತು. ಆದರೆ ಈಗ 300 ರೂ. ಕಡಿಮೆಯಾಗಿದ್ದು 28,450 ರೂ. ಆಗಿದೆ.

    ಸಪ್ಟೆಂಬರ್ 8 ರಂದು ಒಂದೇ ದಿನ 990 ರೂ. ಏರಿಕೆಯಾಗಿತ್ತು. ಇದರಿಂದಾಗಿ 10 ಗ್ರಾಂ ಚಿನ್ನದ ಬೆಲೆ 31,350 ರೂ.ಗಳಿಗೆ ನೆಗೆದಿತ್ತು. ಈ ಬೆಲೆ ಕಳೆದ ಒಂದು ವರ್ಷಕ್ಕೂ ಮೀರಿದ ಅವಧಿಯಲ್ಲಿ ಚಿನ್ನ ಕಂಡಿರುವ ಗರಿಷ್ಠ ಏರಿಕೆ ಎಂದು ಮಾಧ್ಯಮಗಳು ವರದಿ ಮಾಡಿತ್ತು.

    ಇದನ್ನೂ ಓದಿ: 2.5 ಲಕ್ಷದ ಚಿನ್ನದ ಸರ ಕದ್ದು ಮತ್ತೊಂದು ಅಂಗಡಿಯಲ್ಲಿ ಬಟ್ಟೆ ಎಗರಿಸಿದ್ರು: ಕಾರ್ಕಳ ಕಳ್ಳಿಯರ ಕೈ ಚಳಕ ವಿಡಿಯೋ ನೋಡಿ

    ಉತ್ತರ ಕೊರಿಯ ತನ್ನ ಪರಮಾಣು ಶಕ್ತಿಯ ದುಸ್ಸಾಹಸದ ಪ್ರದರ್ಶನಕ್ಕೆ ಇಳಿದಿದ್ದು ಮತ್ತು ಅಮೆರಿಕದಲ್ಲಿ ಉದ್ಯೋಗ ಅಂಕಿ ಅಂಶಗಳು ನಿರೀಕ್ಷೆಗಿಂತ ದುರ್ಬಲವಾಗಿ ದಾಖಲಾಗಿದ್ದ ಹಿನ್ನೆಲೆಯಲ್ಲಿ ಚಿನ್ನದ ದರ ಭಾರೀ ಏರಿಕೆಯಾಗಿತ್ತು.

    ಇದನ್ನೂ ಓದಿ: ಗಂಡನ ಬಳಿಯೇ 1 ಕೆಜಿ ಚಿನ್ನಾಭರಣ ಕದ್ದ ಖತರ್ನಾಕ್ ಹೆಂಡತಿ ಅರೆಸ್ಟ್

  • ಮೇ 13ರಿಂದ ಮೂರನೇ ಮಹಾಯುದ್ಧ ಆರಂಭ: ದಾರ್ಶನಿಕ ಹೇಳಿದ್ದು ಸತ್ಯವಾಗುತ್ತಾ?

    ಮೇ 13ರಿಂದ ಮೂರನೇ ಮಹಾಯುದ್ಧ ಆರಂಭ: ದಾರ್ಶನಿಕ ಹೇಳಿದ್ದು ಸತ್ಯವಾಗುತ್ತಾ?

    ಲಂಡನ್: ಅಮೆರಿಕ, ರಷ್ಯಾ, ಉತ್ತರ ಕೊರಿಯಾಗಳ ನಡುವೆ ಯುದ್ಧದ ಮಾತುಕತೆ ಕೇಳಿ ಬರುತ್ತಿರುವಾಗಲೇ ಮೂರನೇ ಮಹಾಯುದ್ಧ ಮೇ 13ರಿಂದ ಆರಂಭವಾಗಲಿದೆ ಎಂದು ಟೆಕ್ಸಸ್ ದಾರ್ಶನಿಕ ಹೊರಶಿಯೋ ವಿಲೇಗಾಸ್ ಭವಿಷ್ಯ ನುಡಿದಿದ್ದಾರೆ.

    2015ರಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಆಯ್ಕೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಹೊರಶಿಯೋ ವಿಲೇಗಾಸ್ ಮೂರನೇ ಮಹಾಯುದ್ಧದಲ್ಲಿ ವಿಶ್ವದ ಹಲವು ಕಡೆ ಅಣುಬಾಂಬ್ ಬೀಳಲಿದೆ ಎಂದು ಹೇಳಿದ್ದಾರೆ.

    ಇಂಗ್ಲೆಂಡಿನ ಡೈಲಿಸ್ಟಾರ್ ಪತ್ರಿಕೆ ಹೊರಶಿಯೋ ವಿಲೇಗಾಸ್ ಭವಿಷ್ಯವಾಣಿಗೆ ಸಂಬಂಧಿಸಿದ ಸುದ್ದಿ ಪ್ರಕಟಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಭವಿಷ್ಯವಾಣಿ ಏನು?
    ಮೂರನೇ ಮಹಾಯುದ್ದದ ವೇಳೆ ಅಪಾಯದಿಂದ ಪಾರಾಗಲು ಜನ ವಿಶ್ವದೆಲ್ಲೆಡೆ ವಲಸೆ ಹೋಗುತ್ತಾರೆ. ಈ ಅವಧಿಯಲ್ಲಿ ಹಲವು ನಗರಗಳ ಮೇಲೆ ಅಣ್ವಸ್ತ್ರ ದಾಳಿ ನಡೆಯಲಿದೆ. ಅಕ್ಟೋಬರ್‍ನಲ್ಲಿ ಯದ್ಧ ಅಂತ್ಯಗೊಳ್ಳುತ್ತದೆ. ಅಮೆರಿಕ, ರಷ್ಯಾ, ಸಿರಿಯಾ, ಕೊರಿಯಾಗಳ ನಡುವೆ ಆರಂಭದಲ್ಲಿ ಯುದ್ಧ ಪ್ರಾರಂಭವಾಗುತ್ತದೆ. ಇದಾದ ಬಳಿಕ ಚೀನಾವೂ ಇದಕ್ಕೆ ಸೇರ್ಪಡೆಯಾಗುತ್ತದೆ. ಅಮೆರಿಕದ ಹಿಟ್‍ಲಿಸ್ಟ್ ನಲ್ಲಿ ಈಗ ಉತ್ತರ ಕೊರಿಯಾ ಇದೆ ಎಂದು ಹೇಳಿದ್ದಾರೆ.

    ಮೇ 13 ರಂದೇ ಯಾಕೆ?
    ಈ ವರ್ಷ ಮೇ 13 – ಕ್ರಿಸ್ತನ ತಾಯಿ, ವರ್ಜಿನ್ ಮೇರಿ , ಅಂದರೆ ಅವರ್ ಲೇಡಿ ಆಫ್ ಫಾತಿಮಾ ಭೂಮಿಗೆ ಇಳಿದು ಬಂದ ನೂರನೇ ವರ್ಷಾಚರಣೆಯ ದಿನ. ಅಂದು ಮೂರನೇ ಮಹಾ ಯುದ್ಧ ಆರಂಭವಾಗಲಿದೆ ಎಂದು ಹೇಳಿದ್ದಾರೆ.

    ಭವಿಷ್ಯವಾಣಿ ನಿಜವಾಗುತ್ತಾ?
    ಟೆಕ್ಸಾಸ್‍ನಲ್ಲಿ ವಾಸವಾಗಿರುವ ಕ್ಯಾಥೋಲಿಕ್ ಅನುಯಾಯಿ ಹೊರಶಿಯೋ ವಿಲೇಗಾಸ್ 10 ವರ್ಷದ ಹಿಂದೆ ಪುಸ್ತಕ ಪ್ರಕಟಿಸಿದ್ದು, ಇದರಲ್ಲಿ ಮುಂದೆ ಜಗತ್ತಿನಲ್ಲಿ ಏನೇನು ಆಗಲಿದೆ ಎನ್ನುವುದನ್ನು ವಿವರಿಸಿದ್ದಾರೆ. ಸಿರಿಯಾದ ಮೇಲೆ ಆರಂಭದಲ್ಲಿ ದಾಳಿ ಆಗುತ್ತದೆ ನಂತರ ಮೂರನೇ ಮಹಾಯುದ್ಧ ಸಂಭವಿಸಲಿದೆ ಎಂದು ಅವರು ಹೇಳಿದ್ದಾರೆ.

    ಅಷ್ಟೇ ಅಲ್ಲದೇ ಅಮೆರಿಕವನ್ನು ಶತಕೋಟಿ ಡಾಲರ್‍ಗಳ ಒಡೆಯ ಆಳಲಿದ್ದಾರೆ ಎಂದು ಈ ಹಿಂದೆ ಹೇಳಿದ್ದರು. ಟ್ರಂಪ್ ಅಧ್ಯಕ್ಷರಾಗುತ್ತಾರೆ ಎಂದು ನಾನು ಫಲಿತಾಂಶ ಬರುವ 15 ತಿಂಗಳ ಮೊದಲೇ ಹೇಳಿದ್ದರೂ ಜನ ಯಾರೂ ನಂಬಲಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ಬೈಬಲ್ ಮತ್ತು ವಿಶ್ವದ ಇತರ ಕೆಲವು ಧರ್ಮಗ್ರಂಥಗಳನ್ನು ಓದಿ ಅಧ್ಯಯನ ನಡೆಸಿದ್ದೇನೆ. ಈ ಕಾರಣದಿಂದಾಗಿ ಯಾವ ದಿನಾಂಕ ಪರಮಾಣು ಯುದ್ಧ ಆರಂಭವಾಗುತ್ತದೆ ಎನ್ನುವುದು ನನಗೆ ತಿಳಿದಿದೆ ಎಂದು ಅವರು ಹೇಳಿದ್ದಾರೆ.

    ಪ್ರಸ್ತುತ ವಿಶ್ವದಲ್ಲಿ ಏನಾಗ್ತಿದೆ?
    ಸಿರಿಯಾ ನಡೆಸಿದ ಕೆಮಿಕಲ್ ದಾಳಿಗೆ ಪ್ರತಿಯಾಗಿ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಈ ವೈಮಾನಿಕ ದಾಳಿಯನ್ನು ರಷ್ಯಾ ಖಂಡಿಸಿದೆ. ಅಮೆರಿಕದ ಜೊತೆ ತಾನು ಯುದ್ಧಕ್ಕೆ ತಯಾರಾಗಿದ್ದೇನೆ ಎಂದು ತೋರಿಸಿಕೊಡಲು ಉತ್ತರ ಕೊರಿಯಾದ ಎರಡನೇ ಪ್ರಭಾವಿ ಅಧಿಕಾರಿ ಚೊ ಯಾಂಗ್, ಅಮೆರಿಕದ ಯಾವುದೇ ದಾಳಿಯನ್ನು ತಡೆದು ತಿರುಗೇಟು ನೀಡಲು ನಮ್ಮ ಸೇನೆ ಸಮರ್ಥವಾಗಿದೆ ಎಂದು ಅವರು ಹೇಳಿದ್ದಾರೆ. ಉತ್ತರ ಕೊರಿಯಾದ ಮೇಲೆ ಅಮೆರಿಕ ದಾಳಿ ನಡೆಸಬಹದು ಎನ್ನುವ ಕಾರಣಕ್ಕೆ ಚೀನಾ ಮತ್ತು ರಷ್ಯಾ ಉತ್ತರ ಕೊರಿಯಾಗೆ ಹೊಂದಿಕೊಂಡಿರುವಗಡಿ ಭಾಗಕ್ಕೆ ಸೇನಾಪಡೆ ಹಾಗೂ ಯುದ್ಧ ಸಾಮಗ್ರಿಗಳನ್ನು ರವಾನಿಸಿದೆ.

    ಮೊದಲ ಮಹಾಯುದ್ಧ 1914 ಜುಲೈ 28ರಿಂದ ಆರಂಭವಾಗಿ 1918ರ ನವೆಂಬರ್ 11ಕ್ಕೆ ಮುಕ್ತಾಯವಾಗಿತ್ತು. ಎರಡನೇ ಮಹಾಯುದ್ಧ, ಎರಡನೇ ಮಹಾಯುದ್ಧ 1939ರ ಸೆಪ್ಟೆಂಬರ್ 1ರಿಂದ ಆರಂಭವಾಗಿ 1945 ಸೆಪ್ಟೆಂಬರ್ 2ರಂದು ಕೊನೆಯಾಗಿತ್ತು.

    https://twitter.com/cassandra17lina/status/854689953724469248

    https://twitter.com/nukewarnews/status/853057591164809216

    https://twitter.com/EmekaGift/status/853938291543916544

  • ವಿಶ್ವದ ಡೆಡ್ಲಿ ವೆಪನ್: 10 ಮಿಲಿ ಗ್ರಾಂ ವಿಎಕ್ಸ್ ರಾಸಾಯನಿಕ ದೇಹಕ್ಕೆ ಸೇರಿದ್ರೆ ಸಾವು ನಿಶ್ಚಿತ!

    ವಿಶ್ವದ ಡೆಡ್ಲಿ ವೆಪನ್: 10 ಮಿಲಿ ಗ್ರಾಂ ವಿಎಕ್ಸ್ ರಾಸಾಯನಿಕ ದೇಹಕ್ಕೆ ಸೇರಿದ್ರೆ ಸಾವು ನಿಶ್ಚಿತ!

    ಮಲೇಷ್ಯಾದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಹೋದರ ಕಿಮ್ ಜಾಂಗ್ ನಾಮ್ ಕೊಲೆ ನಡೆದಿದೆ. ಯುದ್ಧದಲ್ಲಿ ಬಳಸುವ ‘ವಿಎಕ್ಸ್’ ಹೆಸರಿನ ಪ್ರಬಲ ವಿಷವನ್ನು ಬಳಸಿ ಈ ಹತ್ಯೆ ನಡೆಸಲಾಗಿದೆ. ಹೀಗಾಗಿ ಇಲ್ಲಿ ಈ ಹತ್ಯೆ ಹೇಗಾಯ್ತು ಮತ್ತು ಈ ವಿಷದ ವಿಶೇಷತೆ ಏನು ಎನ್ನುವ ಮಾಹಿತಿಯನ್ನು ನೀಡಲಾಗಿದೆ.

    ಅಂದು ಏನಾಯ್ತು?
    ಫೆಬ್ರವರಿ 13ರಂದು ರಾಜಧಾನಿ ಕೌಲಾಲಂಪುರದಿಂದ ಕಿಮ್ ಜಾಂಗ್ ನಾಮ್ ಚೀನಾದ ಆಡಳಿತಕ್ಕೊಳಪಟ್ಟ ಮಕಾವ್ ಪ್ರದೇಶಕ್ಕೆ ಹೋಗಬೇಕಾಗಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಿಕೆಟ್ ಖರೀದಿಸಲು ಮುಂದಾಗುತ್ತಿದ್ದಾಗ ಇದ್ದಕ್ಕಿಂದಂತೆ ನಾಮ್ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಇಬ್ಬರು ಅಪರಿಚಿತ ಮಹಿಳೆಯರು ಏನೋ ಸ್ಪ್ರೇ ಮಾಡಿದರು ಎಂದು ಕೊನೆಯದಾಗಿ ಹೇಳಿದ್ದರು.

    ವಿಷ ಬಳಸಿ ಹತ್ಯೆ:
    ಮರಣೋತ್ತರ ಪರೀಕ್ಷೆಯಲ್ಲಿ ಬಳಿಕ ಕಿಮ್ ಜಾಂಗ್ ನಾಮ್ ಅವರನ್ನು ರಾಸಾಯನಿಕ ಯುದ್ಧದಲ್ಲಿ ಬಳಸುವ ವಿಎಕ್ಸ್ ಹೆಸರಿನ ವಿಷವನ್ನು ಸಿಂಪಡಿಸಿ ಹತ್ಯೆ ಮಾಡಲಾಗಿದೆ ಎಂದು ಮಲೇಷ್ಯಾ  ಪೊಲೀಸರು ಅಧಿಕೃತವಾಗಿ ಹೇಳಿದರು. ಪೊಲೀಸರ ಹೇಳಿಕೆಯಿಂದಾಗಿ ಈಗ ವಿಶ್ವದಲ್ಲಿ ಈ ಕೊಲೆ ಕೇಸ್ ಭಾರೀ ಸದ್ದು ಮಾಡುತ್ತಿದೆ.

    ಏನಿದು ವಿಎಕ್ಸ್?
    Venomous Agent X ಹೃಸ್ವರೂಪವೇ ವಿಎಕ್ಸ್. ಇದೊಂದು ರಾಸಾಯನಿಕ ಅಸ್ತ್ರವಾಗಿದ್ದು ದ್ರವ, ಗ್ಯಾಸ್, ಕ್ರೀಂ ರೂಪದಲ್ಲಿ ಬಳಸಬಹುದು. ಈ ರಾಸಾಯನಿಕ ವಿಷ ಮನುಷ್ಯನ ದೇಹ ಸೇರಿದರೆ ನೇರವಾಗಿ ನರಮಂಡಲವನ್ನು ಶಿಥಿಲಗೊಳಿಸಿ ಆತನ ಸಾವಿಗೆ ಕಾರಣವಾಗುತ್ತದೆ. ಈ ಕಾರಣಕ್ಕೆ ಇಂಗ್ಲಿಷಿನಲ್ಲಿ ಇದನ್ನು ವಿಎಕ್ಸ್ ನರ್ವ್ ಏಜೆಂಟ್ಸ್ ಎಂದು ಕರೆಯಲಾಗುತ್ತದೆ.

    ಎಷ್ಟು ಪವರ್‍ಫುಲ್ ?
    ವಿಎಕ್ಸ್ ರಾಸಾಯನಿಕ ಅಸ್ತ್ರ ಎಷ್ಟು ಪವರ್‍ಫುಲ್ ಅಂದ್ರೆ ದೇಹದ ಒಳಗಡೆ ಸೇರಿದ 20 ನಿಮಿಷದಲ್ಲಿ ವ್ಯಕ್ತಿ ಮೃತಪಡುತ್ತಾನೆ. ಕೇವಲ 10 ಮಿಲಿ ಗ್ರಾಂ ವಿಎಕ್ಸ್ ದೇಹಕ್ಕೆ ಸೇರಿದರೂ ಆತನ ಸಾವು ನಿಶ್ಚಿತ. ಮೃತ ವ್ಯಕ್ತಿಯ ಮುಖ ಮತ್ತು ಕಣ್ಣುಗಳಲ್ಲಿ ವಿಎಕ್ಸ್ ರಾಸಾಯನಿಕ ಬಳಸಿದ ಕುರುಹುಗಳನ್ನು ಪತ್ತೆಯಾಗುತ್ತದೆ.

     ಬಳಕೆ ಹೇಗೆ?
    ಸಾಧಾರಣವಾಗಿ ವ್ಯಕ್ತಿಯ ಮುಖ ಅಥವಾ ದೇಹದ ಮೇಲೆ ಸಿಂಪಡಿಸಿ ಹತ್ಯೆ ಮಾಡಲಾಗುತ್ತದೆ. ಇಲ್ಲದಿದ್ದಲ್ಲಿ ವ್ಯಕ್ತಿ ಆಹಾರ ಮತ್ತು ಪಾನೀಯದಲ್ಲಿ ಮಿಶ್ರಣ ಮಾಡಿ ನೀಡಲಾಗುತ್ತದೆ.

     ಸಂಶೋಧಿಸಿದ್ದು ಯಾರು?
    ಇಂಗ್ಲೆಂಡಿನ ಐಸಿಐ ಕಂಪೆನಿಯ ವಿಜ್ಞಾನಿಗಳು ಈ ರಾಸಾಯನಿಕವನ್ನು ಮೊದಲು ಕಂಡುಹಿಡಿದರು. ಕೀಟನಾಶಕ ಕಂಪೆನಿಗೆ ಕೆಲಸ ಮಾಡುತ್ತಿದ್ದಾಗ ಈ ವಿಷವನ್ನು ಅಭಿವೃದ್ಧಿ ಪಡಿಸಿದರು. ಇದಾದ ಬಳಿಕ ಇಂಗ್ಲೆಂಡ್ ಅಮೆರಿಕಕ್ಕೆ ಈ ವಿಷದ ಮಾಹಿತಿಯನ್ನು ನೀಡಿತು. ಇದಾದ ಬಳಿಕ ರಷ್ಯಾ ಈ ವಿಷವನ್ನು ಬಳಸತೊಡಗಿತು. ಇರಾಕ್ ಸರ್ವಾಧಿಕಾರಿ ಸದ್ದಾ ಹುಸೇನ್ ಈ ವಿಷವನ್ನು ಬಳಸಿ ತನ್ನ ವಿರೋಧಿಗಳನ್ನು ಹತ್ಯೆ ಮಾಡುತ್ತಿದ್ದ. 1995ರಲ್ಲಿ ಜಪಾನ್ ಟೋಕಿಯೋ ಸಬ್‍ವೇಯಲ್ಲಿ ಗುಂಪೊಂದು ಈ ರಾಸಾಯನಿಕವನ್ನು ಬಳಸಿ 12 ಜನರನ್ನು ಹತ್ಯೆ ಮಾಡಿತ್ತು.

    ರಾಸಾಯನಿಕ ಯುದ್ಧದಲ್ಲಿ ಬಳಕೆ ಹೇಗೆ?
    ಆರ್ಟಿಲರಿ ಶೆಲ್, ರಾಕೆಟ್, ಕ್ಷಿಪಣಿ ಸಿಡಿತಲೆ, ವಿಮಾನದಿಮದ ಹಾಕುವ ಬಾಂಬ್, ಸ್ಪ್ರೇ ಟ್ಯಾಂಕ್ ಗಳಲ್ಲಿ ವಿಎಕ್ಸ್ ರಾಸಾಯನಿಕ ಅಸ್ತ್ರವನ್ನು ಬಳಸಲಾಗುತ್ತದೆ.

    ತಯಾರಿಕೆ ಸುಲಭವೇ?
    ಈ ವಿಷವನ್ನು ಸುಲಭವಾಗಿ ತಯಾರಿಸಲು ಸಾಧ್ಯವಿಲ್ಲ. ದೀರ್ಘಾವಧಿಗೆ ಇದನ್ನು ಸಂಗ್ರಹಿಸುವುದು ಕಷ್ಟದ ಕೆಲಸ. ತಯಾರಿಕೆಗೆ ಭಾರೀ ಪ್ರಮಾಣದ ಹಣ ಬೇಕಾಗುತ್ತದೆ.

    ಅಂತಾರಾಷ್ಟ್ರೀಯ ಕಾನೂನು ಏನು ಹೇಳುತ್ತೆ?
    ವಿಶ್ವಸಂಸ್ಥೆಯ ಸಮೂಹ ನಾಶಕ ಆಯುಧಗಳ ಪಟ್ಟಿಯಲ್ಲಿ ವಿಎಕ್ಸ್  ಹೆಸರಿದ್ದು ಇದರ ಬಳಕೆಯನ್ನು ನಿಷೇಧಿಸಲಾಗಿದೆ. ಆದರೆ ವಿಎಕ್ಸ್ ವಿಷ ಸೇರಿದಂತೆ 5,000 ಟನ್‍ಗಳಷ್ಟು ರಾಸಾಯನಿಕ ಅಸ್ತ್ರಗಳನ್ನು ಉತ್ತರ ಕೊರಿಯಾ ದಾಸ್ತಾನು ಮಾಡಿಕೊಂಡಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಕೊಲೆ ಮಾಡಿದವರು ಯಾರು?
    ಉತ್ತರ ಕೊರಿಯಾದಿಂದ ಗಡಿಪಾರು ಆಗಿದ್ದ ಹಿನ್ನೆಲೆಯಲ್ಲಿ ಜಾಂಗ್ ನಾಮ್ ದೇಶದ ಹೊರಗಡೆ ಜೀವಿಸುತ್ತಿದ್ದರು. ಕಿಮ್ ಜಾಂಗ್ ನಾಮ್ ಉತ್ತರ ಕೊರಿಯಾದ ಅಧ್ಯಕ್ಷರಾಗಬೇಕು ಎನ್ನುವ ಮಾತುಗಳು ಈ ಹಿಂದಿನಿಂದಲೇ ಕೇಳಿ ಬಂದಿತ್ತು. ತಮ್ಮ ಕಿಮ್ ಜಾಂಗ್ ಉನ್ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸುತ್ತಿದ್ದರು. ಈ ಮಧ್ಯೆ ತಮ್ಮನನ್ನು ಇಳಿಸಿ ಅಧ್ಯಕ್ಷರಾಗಲು ಕಿಮ್ ಜಾಂಗ್ ಹೊರಟಿದ್ದರು ಎಂದು ಹೇಳಲಾಗುತ್ತಿದೆ. ಈ ಕಾರಣಕ್ಕಾಗಿ ಅಣ್ಣನನ್ನು ವಿಎಕ್ಸ್ ವಿಷದ ಮೂಲಕ ಕಿಮ್ ಜಾಂಗ್ ನಮ್ ಹತ್ಯೆ ಮಾಡಿರಬಹುದು ಎನ್ನುವ ಆರೋಪ ಕೇಳಿ ಬಂದಿದೆ.

    ಚಲನ ಚಿತ್ರ ಬಂದಿವೆ:
    ಈ ವಿಎಕ್ಸ್ ವಿಷವನ್ನು ಕೇಂದ್ರವಾಗಿಟ್ಟುಕೊಂಡು ಚಲನಚಿತ್ರ ಮತ್ತು ಸಾಕ್ಷ್ಯಚಿತ್ರಗಳು ಬಂದಿವೆ. 1996ರಲ್ಲಿ ಹಾಲಿವುಡ್‍ನಲ್ಲಿ ದಿ ರಾಕ್ ಚಿತ್ರ ತಯಾರಾಗಿದೆ. ಬಿಬಿಸಿ, ಹಿಸ್ಟರಿ ವಾಹಿನಿಗಳು ಈ ವಿಷದ ಬಗ್ಗೆ ಸಾಕ್ಷ್ಯಚಿತ್ರಗಳನ್ನು ತಯಾರಿಸಿವೆ.

    ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್