Tag: non veg

  • ಘಮ ಘಮಿಸುವ ಚಿಕನ್ ಮಸಾಲ ಮಾಡುವ ವಿಧಾನ

    ಘಮ ಘಮಿಸುವ ಚಿಕನ್ ಮಸಾಲ ಮಾಡುವ ವಿಧಾನ

    ಚಿಕನ್ ಕರಿಯನ್ನು ನಾವು ಬೇರೆ ಬೇರೆ ಸ್ಟೈಲ್‍ನಲ್ಲಿ ತಯಾರಿಸಿ ಸೇವಿಸುತ್ತೇವೆ. ನಾವು ಇಂದು ಹೇಳಲು ಹೊರಟಿರುವ ಮಾಂಸದ ಅಡುಗೆ ಸಖತ್ ಸರಳವಾಗಿದೆ ಮತ್ತು ಅಷ್ಟೆ ರುಚಿಯಾಗಿಯು ಇರುತ್ತದೆ. ಖಾರವಾದ ಅಡುಗೆ ಇಷ್ಟ ಪಡುವವರಿಗೆ ಈ ರೆಸಿಪಿ ಇಷ್ಟವಾಗದೆ ಇರಲು ಸಾಧ್ಯವೇ ಇಲ್ಲ.

    ಈ ಕರಿಯನ್ನು ಚಪಾತಿ, ಅನ್ನ ಹಾಗೂ ರಾಗಿ ಮುದ್ದೆಯೊಂದಿಗೂ ಸವಿಯಬಹುದು. ನೀವು ಮನೆಯಲ್ಲಿ ಸುಲಭ ಹಾಗೂ ಸರಳ ವಿಧಾನದಲ್ಲಿ ಮಾಡಲು ಬೇಕಾಗುವ ಸಾಮಗ್ರಿಗಳ ಪಟ್ಟಿಯೊಂದಿಗೆ ಮಾಡುವ ವಿಧಾನ ಈ ಕೆಳಗಿನಂತಿದೆ.  ಇದನ್ನೂ ಓದಿ:  ಬಿದಿರು ಕಳಲೆ ಸಾಂಬಾರ್ ಸೂಪರ್ ಟೇಸ್ಟ್

    ಬೇಕಾಗುವ ಸಾಮಗ್ರಿಗಳು:
    * ಕೋಳಿ ಮಾಂಸ – ಅರ್ಧ ಕೆಜಿ
    * ಇರುಳ್ಳಿ_ 2
    * ಶುಂಠಿ ಪೇಸ್ಟ್- 2 ಟೀ ಸ್ಪೂನ್
    * ಕಾಳು ಮೆಣಸು – 2 ಟೀ ಸ್ಪೂನ್
    * ಲವಂಗ, ಚಕ್ಕೆ- ಸ್ವಲ್ಪ
    * ಗಸೆಗಸೆ- ಅರ್ಧ ಸ್ಪೂನ್
    * ತೆಂಗಿನಕಾಯಿ- ಅರ್ಧ ಕಪ್
    * ಪಲಾವ್ ಎಲೆ-1
    * ಏಲಕ್ಕಿ- 2
    * ಜೀರಿಗೆ- 1 ಟೀ ಸ್ಪೂನ್
    * ಕೊತ್ತಂಬರಿ ಬೀಜ- 3 ಟೀ ಸ್ಪೂನ್
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲು ಒಂದು ಬಾಣಲೆಯಲ್ಲಿ ಎಣ್ಣೆ ಬಳಸದೆ ಕಾಳು ಮೆಣಸು, ಲವಂಗ, ದಾಲ್ಚಿನ್ನಿ ಸೇರಿಸಿ ಹುರಿದುಕೊಳ್ಳಬೇಕು.- ಸಂಪೂರ್ಣವಾಗಿ ಆರಿದ ಬಳಿಕ ಮಿಕ್ಸರ್ ಪಾತ್ರೆಗೆ ಸೇರಿಸಿ ರುಬ್ಬಿಕೊಳ್ಳಬೇಕು.
    * ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿ ಈರುಳ್ಳಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ.
    * ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದು, ಈರುಳ್ಳಿ ಮಿಶ್ರಣಕ್ಕೆ ಸೇರಿಸಿ. ಸ್ವಲ್ಪ ಉಪ್ಪನ್ನು ಸೇರಿಸಿ, 15 ನಿಮಿಷಗಳ ಕಾಲ ಬೇಯಿಸಬೇಕು.

    * ಪ್ರತ್ಯೇಕ ಬಾಣಲೆಯಲ್ಲಿ ಎಣ್ಣೆ, ಈರುಳ್ಳಿ, ತೆಂಗಿನ ತುರಿ, ಜೀರಿಗೆ ಉಳಿದ ಮಸಾಲೆ ಸಾಮಾಗ್ರಿಯನ್ನು ಸೇರಿಸಿ ಸ್ವಲ್ಪ ಬೇಯುವವರೆಗೆ ಹುರಿಯಬೇಕು.
    * ಕೊತ್ತಂಬರಿ ಬೀಜವನ್ನು ಎಣ್ಣೆ ಹಾಕದೆಯೇ 2 ನಿಮಿಷಗಳ ಕಾಲ ಹಿರಿಯಿರಿ. ನಂತರ ದಾಲ್ಚಿನ್ನಿ ಮತ್ತು ಲವಂಗದೊಂದಿಗೆ ಮಿಕ್ಸರ್ ಪಾತ್ರೆಗೆ ಸೇರಿಸಿ, ಪುಡಿ ಮಾಡಬೇಕು.

    * ನಂತರ ಕೋಳಿ ಮಾಂಸ ಇರುವ ಪಾತ್ರೆಗೆ ಈ ಮೊದಲೆ ತಯಾರಿಸಿದ ರುಬ್ಬಿದ ಮಸಾಲೆ, ಮತ್ತು ಹುರಿದಿಟ್ಟ ಇರುಳ್ಳಿ, ಅರಿಶಿಣ, ಏಲಕ್ಕಿ, ಕೆಂಪುಮೆಣಸು ಕೊತ್ತಂಬರಿ ಸೇರಿಸಿ ಚೆನ್ನಾಗಿ ಬೇಯಿಸಿದರೆ ಚಿಕನ್ ಗ್ರೇವಿ ಸವಿಯಲು ಸಿದ್ಧವಾಗುತ್ತದೆ.

  • ಭಾನುವಾರದ ಬಾಡೂಟಕ್ಕೆ ಫಟಾಫಟ್ ಮಾಡಿ ಸಿಗಡಿ ಫ್ರೈ

    ಭಾನುವಾರದ ಬಾಡೂಟಕ್ಕೆ ಫಟಾಫಟ್ ಮಾಡಿ ಸಿಗಡಿ ಫ್ರೈ

    ಮಾಂಸಾಹಾರದಲ್ಲಿ ಅತ್ಯಂತ ಆರೋಗ್ಯಕರವಾದ ಆಹಾರವೆಂದರೆ ಸಾಗರೋತ್ಪನ್ನಗಳು. ಸಿಗಡಿ ಎಲ್ಲರ ಪ್ರಥಮ ಆಯ್ಕೆಯಾಗಿದೆ. ಸಿಗಡಿಯನ್ನು ಬಳಸಿ ಸಾವಿರಾರು ವಿಧಾನದ ಅಡುಗೆಗಳನ್ನು ಮಾಡಬಹುದು. ಒಂದು ವೇಳೆ ಮಸಾಲೆಯುಕ್ತ ಮತ್ತು ಗರಿಗರಿಯಾದ ಸಿಗಡಿಯನ್ನು ನೀವು ತಿನ್ನ ಬಯಸಿದರೆ ಇಂದು ಮಸಾಲೆ ಸಿಗಡಿ ಫ್ರೈಯನ್ನೇಕೆ ಪ್ರಯತ್ನಿಸಬಾರದು? ನಿಮ್ಮ ಮನೆಗೆ ಅತಿಥಿಗಳು ಆಗಮಿಸಿದ್ದರೆ ಈ ಖಾದ್ಯ ಔತಣದ ಪ್ರಮುಖ ಆಕರ್ಷಣೆಯಾಗುವುದರಲ್ಲಿ ಅನುಮಾನವೇ ಇಲ್ಲ.

    ಬೇಕಾಗುವ ಸಾಮಗ್ರಿಗಳು:
    * ಸಿಗಡಿ: ಅರ್ಧ ಕೆಜಿ
    * ಮೆಣಸಿನ ಪುಡಿ – 2 ಟೀ ಸ್ಪೂನ್
    * ಅರಿಶಿನ ಪುಡಿ – 1 ಟೀ ಸ್ಪೂನ್
    * ಎಣ್ಣೆ – ಅರ್ಧ ಕಪ್
    * ದನಿಯ ಪುಡಿ – 2 ಟೀ ಸ್ಪೂನ್
    * ರುಚಿಗೆ ತಕ್ಕಷ್ಟು ಉಪ್ಪು
    * ಬೆಳ್ಳುಳ್ಳಿ-ಶುಂಠಿ ಪೇಸ್ಟ್ – 3 ಟೀ ಸ್ಪೂನ್
    * ಈರುಳ್ಳಿ – 1
    * ಕರಿಬೇಬಿನ ಎಲೆಗಳು – 7-8
    * ಲಿಂಬೆರಸ – 1 ಟೀ ಸ್ಪೂನ್
    * ಕೊತ್ತಂಬರಿ ಸೊಪ್ಪು- ಸ್ವಲ್ಪ

    ಮಾಡುವ ವಿಧಾನ:
    * ಒಂದು ಚಿಕ್ಕ ಪಾತ್ರೆಯಲ್ಲಿ ಸಿಗಡಿ, ಉಪ್ಪು, ಮೆಣಸಿನ ಪುಡಿ, ದನಿಯ ಪುಡಿ, ಅರಿಶಿನ ಪುಡಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸುಮಾರು ಹತ್ತು ನಿಮಿಷ ಹಾಗೇ ಬಿಡಿ. ಇದನ್ನೂ ಓದಿ: ಹಬ್ಬಕ್ಕೆ ಮಾಡಿ ಗೋಧಿ ಹಿಟ್ಟಿನ ಲಡ್ಡು


    * ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ ಈರುಳ್ಳಿ ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಬಳಿಕ ಮೊದಲ ಪಾತ್ರೆಯಿಂದ ಸಿಗಡಿಯನ್ನು ಹಾಕಿ ಇದರ ಜೊತೆಗೆ ಕರಿಬೇವಿನ ಎಲೆಗಳನ್ನು ಹಾಕಿ ಮಿಶ್ರಣ ಮಾಡಿ.

    * ಬಳಿಕ ನೀರು ಹಾಕಿ ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಸುಮಾರು ಐದರಿಂದ ಎಂಟು ನಿಮಿಷಗಳವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ.


    *ಬಳಿಕ ಮುಚ್ಚಳವನ್ನು ತೆರೆದು ಚೆನ್ನಾಗಿ ತಿರುವುತ್ತಾ ಸಿಗಡಿಯ ಎಲ್ಲಾ ಭಾಗಗಳು ಸರಿಯಾಗಿ ಬೇಯುವಂತೆ ಇನ್ನಷ್ಟು ಹುರಿಯಿರಿ. ತುಂಬಾ ಒಣಗಿದ್ದಂತೆ ಕಂಡುಬಂದರೆ ಕೊಂಚ ಎಣ್ಣೆಯನ್ನು ಸೇರಿಸಬಹುದು. ಇದಕ್ಕೆ ಕೊಂಚ ಲಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿದರೆ ಇದೀಗ ಸಿಗಡಿ ಫ್ರೈ ಸವಿಯಲು ಸಿದ್ಧವಾಗುತ್ತದೆ.

  • ಮಂಗಳೂರು ಸ್ಟೈಲಿನಲ್ಲಿ ಮಾಡಿ ಖಡಕ್ ಬಂಗುಡೆ ಪುಳಿಮುಂಚಿ

    ಮಂಗಳೂರು ಸ್ಟೈಲಿನಲ್ಲಿ ಮಾಡಿ ಖಡಕ್ ಬಂಗುಡೆ ಪುಳಿಮುಂಚಿ

    ಪ್ರಕೃತಿ ನಮಗೆ ನೀಡಿರುವಂತಹ ಆರೋಗ್ಯಕರ ಆಹಾರಗಳಲ್ಲಿ ಮೀನು ಕೂಡ ಒಂದಾಗಿದೆ. ಮೀನು ಮಾಂಸಹಾರಿಗಳಿಗೆ ತುಂಬಾ ಪ್ರಿಯ ಆಹಾರ. ಅದರಲ್ಲೂ ಕರಾವಳಿ ತೀರದವರಿಗೆ ಮೀನು ಪಂಚಪ್ರಾಣ. ಮೀನಿನಲ್ಲಿ ಪ್ರೋಟೀನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೋಸ್ಫರಸ್ ಲಭ್ಯವಿದೆ. ಮೀನಿನಲ್ಲಿ ಕಬ್ಬಿನ, ಸತು, ಮೆಗ್ನಿಶಿಯಂ, ಐಯೋಡಿನ್ ಮತ್ತು ಪೊಟಾಶಿಯಂನಂತಹ ಖನಿಜಾಂಶಗಳಿವೆ. ಮೀನು ಕೇವಲ ರುಚಿಕರವಾಗಿರೋದು ಮಾತ್ರವಲ್ಲ ಹೃದಯ ಸಮಸ್ಯೆ, ಮಹಿಳೆಯರ ಋತುಸ್ರಾವ ಸಮಸ್ಯೆ ನಿವಾರಿಸಲು ಸಹ ಮೀನು ಸಹಾಯಕ. ಅಲ್ಲದೆ ಹಲವು ರೋಗಗಳಿಗೆ ಮೀನು ರಾಮಬಾಣವೂ ಹೌದು. ಇದುವರೆಗೆ ನೀವು ಮೀನಿನ ಸಾರು, ಮೀನು ಫ್ರೈ ತಿಂದಿರ್ತೀರಾ. ಹೀಗಾಗಿ ಇಲ್ಲಿ ನಿಮಗೆ ರುಚಿ ರುಚಿಯಾದ ಖಡಕ್ ಬಂಗುಡೆ ಪುಳಿಮುಂಚಿ ಮಾಡುವ ಸುಲಭ ವಿಧಾನವನ್ನು ಹೇಳಿಕೊಡಲಾಗಿದೆ.

    ಬೇಕಾಗುವ ಸಾಮಗ್ರಿಗಳು:
    * ಬಂಗುಡೆ(ಐಲೆ)- ಅರ್ಧ ಕೆ.ಜಿ
    * ಬ್ಯಾಡಗಿ ಮೆಣಸು- 20 (10 ನಿಮಿಷ ಬಿಸಿನೀರಿನಲ್ಲಿ ನೆನೆಸಿಡಿ)
    * ಕೊತ್ತಂಬರಿ ಬೀಜ- 2 ಚಮಚ
    * ಜೀರಿಗೆ- ಅರ್ಧ ಚಮಚ
    * ಬೆಳ್ಳುಳ್ಳಿ- 4 ಎಸಳು
    * ಚಿಕ್ಕ ಈರುಳ್ಳಿ- 1
    * ಶುಂಠಿ- ಒಂದೂವರೆ ಇಂಚು
    * ಹುಣಸೆ ಹಣ್ಣು- ಸಣ್ಣ ತುಂಡು
    * ಅರಿಶಿಣ- ಕಾಲು ಚಮಚ
    * ಎಣ್ಣೆ

    ಮಾಡುವ ವಿಧಾನ:
    * ಮೊದಲು ಮೀನನ್ನು ಕ್ಲೀನ್ ಮಾಡಿಕೊಂಡು ನಂತರ ಮಸಾಲೆ ಎಳೆದುಕೊಳ್ಳುವಂತೆ ಅದರ ಮೇಲೆ ಗೆರೆಗಳನ್ನು ಹಾಕಬೇಕು.
    * ಇತ್ತ ಬ್ಯಾಡಗಿ ಮೆಣಸನ್ನು 10 ನಿಮಿಷ ಬಿಸಿನೀರಿನಲ್ಲಿ ನೆನೆಸಿಡಿ. (ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ನ್ಯೂಸ್ ಅಥವಾ ವಿನೇಗರ್ ಕೂಡ ಹಾಕಬಹುದು. ಇದು ಹಾಕಿದರೆ ಮಸಾಲೆ ಇನ್ನಷ್ಟು ಸಾಫ್ಟ್ ಆಗುತ್ತದೆ).
    * ನಂತರ ಮಿಕ್ಸ್ ಜಾರಿಗೆ ನೆನೆಸಿಟ್ಟ ಮೆಣಸು, ಕೊತ್ತಂಬರಿ ಕಾಳು, ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಹುಣಸೆ ಹಣ್ಣು ಹಾಗೂ ಅರಿಶಿಣ ಹಾಕಿ ಕಡಿಮೆ ನೀರು ಬಳಸಿ ನುಣ್ಣಗೆ ರುಬ್ಬಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಬಳಸಿಕೊಳ್ಳಿ.
    * ಇತ್ತ ಒಂದು ಪ್ಲೇಟ್ ಗೆ 4 ಟೀ ಸ್ಪೂನ್ ನಷ್ಟು ಮಸಾಲೆ ತೆಗೆದು ಸಪರೇಟ್ ಆಗಿ ಇಟ್ಕೊಳ್ಳಿ. (ಬೇಕೆಂದರೆ ಮಾತ್ರ ಈ ಮಸಾಲೆ 1 ಚಮಚ ಕಾನ್ ಫ್ಲವರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕಾನ್ ಫ್ಲವರ್ ಹಾಕಿದ್ರೆ ಮಸಾಲೆ ಮೀನಿಗೆ ಚೆನ್ನಾಗಿ ಅಂಟಿಕೊಳ್ಳುತ್ತೆ ಹಾಗೆಯೇ ಕ್ರಿಪ್ಸಿ ಆಗುತ್ತದೆ).

    * ಈಗ ಮೀನಿನ ಮೇಲೆ ಈ ಮಸಾಲೆಯನ್ನು ಹಾಕಿ ಚೆನ್ನಾಗಿ ಅಂಟಿಸಿ ಅರ್ಧ ಗಂಟೆ ಹಾಗೆಯೇ ಬಿಡಿ ( ಫ್ರಿಡ್ಜ್ ಅಥವಾ ಹೊರಗಡೆಯೂ ಇಡಬಹುದು).
    * ಇತ್ತ ಸ್ಟೌ ಮೇಲೆ ಒಂದು ತವಾವನ್ನು ಬಿಸಿ ಮಾಡಲು ಬಿಡಿ. ತವಾ ಬಿಸಿಯಾದ ಬಳಿಕ ಫ್ರೈ ಮಾಡಲು ಬೇಕಾದಷ್ಟು ತೆಂಗಿನ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ.
    * ಎಣ್ಣೆ ಕಾದ ಬಳಿಕ ಮಸಾಲೆ ಮಿಶ್ರಿತ ಮೀನನ್ನು ಎಣ್ಣೆಯಲ್ಲಿ ಬಿಡಿ. ನಂತರ ಎರಡೂ ಕಡೆನೂ ಚೆನ್ನಾಗಿ ಬೇಯಿಸಿ. ಬಳಿಕ ಮೀನನ್ನು ತೆಗೆದು ಅದೇ ಎಣ್ಣೆಗೆ ಸ್ವಲ್ಪ ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ. ನಂತರ ಅದರ ಮೇಲೆ ಆಗಲೇ ತೆಗೆದಿಟ್ಟಿದ್ದ ಮಸಾಲೆಯನ್ನು ಪೂರ್ತಿಯಾಗಿ ಹಾಕಿ ಕಂದು ಬಣ್ಣ ಬರುವವರೆಗೂ ರೋಸ್ಟ್ ಮಾಡಿ.
    * ಮಸಾಲೆ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಈಗಾಗಲೇ ಫ್ರೈ ಮಾಡಿಟ್ಟ ಮೀನನ್ನು ಮಸಾಲೆ ಜೊತೆ ಬೆರೆಸಿ ಚೆನ್ನಾಗಿ ಕೋಟ್ ಮಾಡಿದರೆ ಮಸಾಲೆ ಫಿಶ್ ಫ್ರೈ ಸವಿಯಲು ರೆಡಿ.

  • ಎರಡನೇ ದಿನದ ವೀಕೆಂಡ್ ಲಾಕ್‍ಗೆ ಸಂಪೂರ್ಣ ಸ್ತಬ್ಧವಾದ ಕೊಡಗು

    ಎರಡನೇ ದಿನದ ವೀಕೆಂಡ್ ಲಾಕ್‍ಗೆ ಸಂಪೂರ್ಣ ಸ್ತಬ್ಧವಾದ ಕೊಡಗು

    – ಮಾಂಸದಂಗಡಿಗಳಿಗೆ ನಗರಸಭೆಯಿಂದ ಬೀಗ

    ಮಡಿಕೇರಿ: ನಾಡಿನಾದ್ಯಂತ ಮಹಾವೀರ ಜಯಂತಿಯನ್ನು ಅಚರಣೆ ಮಾಡುತ್ತಿರುವ ವೇಳೆಯಲ್ಲಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ನಗರಸಭೆಯ ಸಿಬ್ಬಂದಿ ದಾಳಿ ನಡೆಸಿ ಅಂಗಡಿಗಳಿಗೆ ಬೀಗ ಹಾಕಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.

    ವಾರಾಂತ್ಯದ ಲಾಕ್‍ಡೌನ್ ಇರುವುದರಿಂದ ಇಂದು ಮಾಂಸ ಪ್ರಿಯರು ಚಿಕನ್ ಹಾಗೂ ಮಟನ್ ಅಂಗಡಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಮಾಂಸ ಮಾರಾಟ ಮಾಡುತ್ತಿರುವ ವ್ಯಾಪಾರಸ್ಥರು ಎಂದಿನಂತೆ ಬೆಳಗ್ಗೆ ಅಂಗಡಿಗಳನ್ನು ತೆರೆದಿದ್ದರು. ಅದರೆ ಮಹಾವೀರ ಜಯಂತಿ ಇದ್ದರೂ ಅದರ ಅರಿವು ಇಲ್ಲದೆ ಎಂದಿನಂತೆ ವ್ಯಾಪಾರಿಗಳು ವ್ಯಾಪಾರ ಮಾಡಲು ಮುಂದಾಗಿದ್ದ ವೇಳೆಯಲ್ಲಿ ನಗರಸಭೆಯ ಸಿಬ್ಬಂದಿಗಳು ದಾಳಿ ನಡೆಸಿದರು. ನಗರದ ಮಾರ್ಕೆಟ್ ಕೊಯಿನೂರ್ ರಸ್ತೆ. ಪೋಸ್ಟ್ ಅಫೀಸ್ ರಸ್ತೆ ಸೇರಿದಂತೆ 10 ಕ್ಕೂ ಹೆಚ್ಚು ಅಂಗಡಿಗಳಿಗೆ ದಾಳಿ ನಡೆಸಿ ಬೀಗ ಹಾಕಿ, ಅಂಗಡಿ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇಂದು ಭಾನುವಾರ ಅಗಿರುವುದರಿಂದ ಮಾಂಸ ತೆಗೆದುಕೊಂಡು ಹೋಗುವುದಕ್ಕೆ ಬಂದ ನಾನ್‍ವೆಜ್ ಪ್ರಿಯರು ನಿರಾಸೆಯಿಂದ ಮನೆ ವಾಪಸ್ ಹೋದರು.

    ಕೊಡಗು ಸ್ತಬ್ಧ: ವಿಕೇಂಡ್ ಬಂತು ಅಂದ್ರೆ ದಕ್ಷಿಣ ಕಾಶ್ಮೀರ ಕೊಡಗಿನ ಪ್ರವಾಸಿ ತಾಣಗಳನ್ನು ನೋಡುವುದಕ್ಕೆ ಜನ ತುಂಬಿ ತುಳುಕುತ್ತಿದರು. ಆದರೆ ರಾಜ್ಯದಾದ್ಯಂತ ವಿಕೇಂಡ್ ಲಾಕ್‍ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎರಡನೇ ದಿನವಾದ ಭಾನುವಾರ ಕೊಡಗು ಸಂಪೂರ್ಣ ಸ್ಥಬ್ಧವಾಗಿದೆ. ಯಾವುದೇ ರಸ್ತೆಗಳಲ್ಲೂ ಒಂದೇ ಒಂದು ವಾಹನಗಳ ಓಡಾಟವಿಲ್ಲ. ಪ್ರವಾಸಿಗರ ಮಾತಿರಲಿ, ಸ್ಥಳೀಯರು ಸೇರಿದಂತೆ ವಾಹನ ಚಾಲಕರು ಕೂಡ ಮನೆಬಿಟ್ಟು ಹೊರಗೆ ಕಾಲಿಡಲಿಲ್ಲ. ಹೀಗಾಗಿ ಭಾನುವಾರದಂದು ಪ್ರವಾಸಿಗರ ಹಾಟ್ ಸ್ಪಾಟ್ ಎಂದು ಪ್ರಸಿದ್ಧಿಯಾಗಿರುವ ಮಡಿಕೇರಿ ಸಂಪೂರ್ಣ ಮೌನಕ್ಕೆ ಜಾರಿತ್ತು.

    ನಿನ್ನೆ ಕೆಲ ಸಾರ್ವಜನಿಕರು ಕುತೂಹಲಕ್ಕೆಂದು ನಗರ ಪ್ರದೇಶಗಳಿಗೆ ಬಂದು ವೀಕ್ಷಣೆ ಮಾಡಿ ಹೋಗುತ್ತಿದ್ದರು. ಅದರೆ ಇಂದು ಒಬ್ಬರೆ ಒಬ್ಬರು ರಸ್ತೆಗೆ ಇಳಿಯಲಿಲ್ಲ. ಬೆಳಗ್ಗೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋದ ಸಾರ್ವಜನಿಕರು ಮತ್ತೆ ಮನೆಯಿಂದ ಹೊರ ಬಾರದೆ ಇರುವುದರಿಂದ ರಸ್ತೆಗಳೆಲ್ಲ. ಸಂಪೂರ್ಣವಾಗಿ ಖಾಲಿ ಖಾಲಿ ಯಾಗಿತ್ತು. ಕೊಡಗಿನ ವಾಣಿಜ್ಯ ನಗರಿ ಕುಶಾಲನಗರ. ಸೋಮವಾರಪೇಟೆ. ವಿರಾಜಪೇಟೆ. ಪೊನ್ನಂಪೇಟೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಪೂರ್ಣ ವಾರಾಂತ್ಯದ ಲಾಕ್‍ಡೌನ್ ಯಶಸ್ವಿಯಾಗಿದೆ.

  • ಕೋಲ್ಕತ್ತಾ ಶೈಲಿಯ ರೇಜಲಾ ಚಿಕನ್ ಗ್ರೇವಿ ಮಾಡುವ ವಿಧಾನ

    ಕೋಲ್ಕತ್ತಾ ಶೈಲಿಯ ರೇಜಲಾ ಚಿಕನ್ ಗ್ರೇವಿ ಮಾಡುವ ವಿಧಾನ

    ಳೆದ ವಾರ ದೀಪಾವಳಿ ಸಂಭ್ರಮದಲ್ಲಿ ಸಿಹಿಯೂಟ ಮಾಡಿರುತ್ತೀರಿ. ನಾಳೆ ಭಾನುವಾರ ರಜೆ ಬಾಡೂಟ ಇರಲೇಬೇಕು. ಚಿಕನ್ ನಲ್ಲಿಯೇ ಏನಾದ್ರೂ ವೆರೈಟಿ ಟ್ರೈ ಮಾಡಬೇಕು ಅಂತಾ ಪ್ಲಾನ್ ಮಾಡಿದ್ದೀರಾ ? ಹಾಗಾದ್ರೆ ಕೋಲ್ಕತ್ತಾ ಶೈಲಿಯ ರೇಜನಾ ಚಿಕನ್ ಗ್ರೇವಿ ಮಾಡಿ.

    ಬೇಕಾಗುವ ಸಾಮಾಗ್ರಿಗಳು
    ಚಿಕನ್ – 1 ಕೆಜಿ
    ಮೊಸರು – 1 ಕಪ್
    ಬೆಳ್ಳುಳ್ಳಿ, ಶುಂಠಿ ಪೇಸ್ಟ್- 3 ಟೀ ಸ್ಪೂನ್
    ಗ್ರೀನ್ ಚಿಲ್ಲಿ ಪೇಸ್ಟ್ – 2 ಟೀ ಸ್ಪೂನ್ (ಮೂರು)
    ಪೆಪ್ಪರ್ ಪೌಡರ್- 1/2 ಟೀ ಸ್ಪೂನ್
    ಉಪ್ಪು – 2 ಟೀ ಸ್ಪೂನ್
    ತುಪ್ಪ- 2 ಟೀ ಸ್ಪೂನ್
    ಗಸಗಸೆ- 2 ಟೀ ಸ್ಪೂನ್
    ಗೋಡಂಬಿ- 10 ರಿಂದ 12
    ಎಣ್ಣೆ- 5 ರಿಂದ 6 ಟೀ ಸ್ಪೂನ್
    ಏಲಕ್ಕಿ – 5
    ಲವಂಗ – 2
    ಕಾಳು ಮೆಣಸು – 5
    ಒಣ ಮೆಣಸಿನಕಾಯಿ – 5
    ಎರಡು ಈರುಳ್ಳಿ ಪೇಸ್ಟ್
    ಕೇವರಾ ವಾಟರ್ – 1 ಟೀ ಸ್ಪೂನ್ (ಬೇಕಿದ್ದಲ್ಲಿ ಮಾತ್ರ ಬಳಸಬಹುದು)

    ಮಾಡುವ ವಿಧಾನ
    * ಮೊದಲಿಗೆ ಮಿಕ್ಸಿಂಗ್ ಬೌಲ್ ನಲ್ಲಿ ಚೆನ್ನಾಗಿ ತೊಳೆದುಕೊಂಡಿರುವ ದೊಡ್ಡ ದೊಡ್ಡ ಪೀಸ್ ಗಳ ಚಿಕನ್ ಹಾಕಿಕೊಳ್ಳಿ
    * ಚಿಕನ್ ಹಾಕಿರೋ ಮಿಕ್ಸಿಂಗ್ ಬೌಲ್ ಗೆ ಮೊಸರು, ಬೆಳ್ಳುಳ್ಳಿ-ಪೇಸ್ಟ್, ಗ್ರೀನ್ ಚಿಲ್ಲಿ ಪೇಸ್ಟ್, ಪೆಪ್ಪರ್ ಪೌಡರ್, ಉಪ್ಪು ಮತ್ತು ತುಪ್ಪ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತಟ್ಟೆ ಮುಚ್ಚಿ ಎರಡು ಗಂಟೆ ಎತ್ತಿಡಿ. ಮಿಶ್ರಣವೆಲ್ಲ ಚಿಕನ್ ಗೆ ಚೆನ್ನಾಗಿ ಮೆತ್ತಿಕೊಳ್ಳುತ್ತದೆ.

    * ಮಿಕ್ಸಿ ಜಾರಿಗೆ ಎರಡು ಟೇಬಲ್ ಸ್ಪೂನ್ ಗಸಗಸೆ ಮತ್ತು 10 ರಿಂದ 12 ಗೋಡಂಬಿ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬುವಾಗ ಮೂರರಿಂದ ನಾಲ್ಕು ಟೀ ಸ್ಪೂನ್ ನೀರು ಸೇರಿಸಿದ್ರೆ ಪೇಸ್ಟ್ ಚೆನ್ನಾಗಿ ಆಗುತ್ತದೆ.
    * ಈಗ ಸ್ಟೌವ್ ಮೇಲೆ ಪ್ಯಾನ್ ಇರಿಸಿ 5 ರಿಂದ 6 ಟೀ ಸ್ಪೂನ್ ಎಣ್ಣೆ ಹಾಕಿ. (ಎಣ್ಣೆ ಬದಲಾಗಿ ತುಪ್ಪ ಬಳಸಬಹುದು)
    * ಎಣ್ಣೆ ಬಿಸಿ ಆಗುತ್ತಿದ್ದಂತೆ ಏಲಕ್ಕಿ, ಲವಂಗ, ಒಣ ಮೆಣಸಿನಕಾಯಿ ಮತ್ತು ಕಾಳು ಮೆಣಸು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.

    * ಇದೇ ಪ್ಯಾನ್ ಗೆ ಈರುಳ್ಳಿ ಪೇಸ್ಟ್ ಮಿಕ್ಸ್ ಮಾಡಿ, ಹಸಿ ವಾಸನೆ ಹೋಗುವರೆಗೂ 8 ರಿಂದ 10 ನಿಮಿಷ ಫ್ರೈ ಮಾಡಿಕೊಳ್ಳಬೇಕು.
    * ಮಸಾಲೆ ಘಮ ಘಮ ಎಂದು ಬರುತ್ತಿದ್ದಂತೆ ಮಿಶ್ರಣದಲ್ಲಿರುವ ಚಿಕನ್ ಪೀಸ್ ಗಳನ್ನು ಒಂದೊಂದಾಗಿ ಹಾಕಿ ಪ್ಲಿಪ್ ಮಾಡುತ್ತಿರಬೇಕು.
    * ಚಿಕನ್ ಹಾಕಿದ ನಂತರ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿದ ನಂತರ ಈ ಮೊದಲು ರುಬ್ಬಿಟ್ಟಿಕೊಂಡಿರುವ ಗೋಡಂಬಿ ಮತ್ತು ಗಸಗಸೆ ಪೇಸ್ಟ್ ಹಾಕಿ ಕಲಕಿ.
    * ನಂತರ 1 ಕಪ್ ನಷ್ಟು ನೀರು ಹಾಕಿ 10 ರಿಂದ 12 ನಿಮಿಷ ಕುದಿಸಿದ್ರೆ ಕೇವರಾ ವಾಟರ್ ಬೆರಸಿದ್ರೆ ಕೋಲ್ಕತ್ತಾ ಶೈಲಿಯ ರೇಜಲಾ ಚಿಕನ್ ಗ್ರೇವಿ ಸವಿಯಲು ಸಿದ್ಧ.

  • ಕಡಿಮೆ ಪದಾರ್ಥ ಬಳಸಿ ಮಾಡುವ ನಾಟಿ ಚಿಕನ್ ಫ್ರೈ ಮಸಾಲ

    ಕಡಿಮೆ ಪದಾರ್ಥ ಬಳಸಿ ಮಾಡುವ ನಾಟಿ ಚಿಕನ್ ಫ್ರೈ ಮಸಾಲ

    ಸಂಡೇ ಇವತ್ತು ರಜೆ. ಹೊರಗಡೆ ಬಾಡೂಟ ಮಾಡೋಣ ಅಂದ್ರೆ ಕೊರೊನಾ ಭಯ. ಇತ್ತ ಊರು ನೆನಪು ಆಗ್ತಿರುತ್ತೆ. ಅದೇ ಅನ್ನ-ಸಾಂಬಾರ್ ತಿಂದು ಬೇಜಾರು ಆಗಿರುತ್ತೆ. ಇನ್ನು ಚಿಕನ್ ಮಾಡೋಣ ಅಂದ್ರೆ ಬ್ಯಾಚೂಲರ್ ಗಳ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಎಲ್ಲ ವ್ಯವಸ್ಥೆ ಇರಲ್ಲ. ಕಡಿಮೆ ಪದಾರ್ಥ ಬಳಸಿ ಹೆಚ್ಚು ಶ್ರಮವಿಲ್ಲದೇ ನಾಟಿ ಚಿಕನ್ ಫ್ರೈ ಮಸಾಲ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    ನಾಟಿ ಚಿಕನ್ – 1 ಕೆಜಿ
    ಈರುಳ್ಳಿ- 1 (ಮಧ್ಯಮ ಗಾತ್ರದ್ದು)
    ಕೆಂಪು ಮೆಣಸಿನಕಾಯಿ- 8 ರಿಂದ 10
    ಬೆಳ್ಳುಳ್ಳಿ- 8
    ಶುಂಠಿ- ಒಂದು ಇಂಚು
    ಏಲಕ್ಕಿ- 4
    ಧನಿಯಾ- 2 ಟಿ ಸ್ಪೂನ್
    ಗರಂ ಮಸಾಲ- 1 ಟೀ ಸ್ಪೂನ್
    ಚಕ್ಕೆ- ಸ್ವಲ್ಪ
    ಕರಿಬೇವು- 5 ರಿಂದ 6 ದಳ
    ಉಪ್ಪು – ರುಚಿಗೆ ತಕ್ಕಷ್ಟು
    ಅರಿಶಿನ- ಚಿಟಿಕೆ
    ಎಣ್ಣೆ

    ಮಾಡುವ ವಿಧಾನ
    * ಮೊದಲಿಗೆ ಬಿಸಿ ನೀರಿನಲ್ಲಿ ಎರಡು ಬಾರಿ ಚಿಕನ್ ತೊಳೆದು ಎತ್ತಿಟ್ಟುಕೊಳ್ಳಿ.
    * ಬೆಳ್ಳುಳ್ಳಿ ಮತ್ತು ಶುಂಠಿಯನ್ನ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.
    * ನಂತರ ಧನಿಯಾ, ಚಕ್ಕೆ, ಏಲಕ್ಕಿ, ಕೆಂಪು ಮೆಣಸಿನಕಾಯಿ ಹುರಿದುಕೊಂಡು ಮಿಕ್ಸಿ ಬೌಲ್ ಗೆ ಹಾಕಿ ಸಣ್ಣಗೆ ರುಬ್ಬಿಕೊಳ್ಳಿ.
    * ಇದೀಗ ಸ್ಟೌವ್ ಆನ್ ಪ್ಯಾನ್ ಇಟ್ಟುಕೊಳ್ಳಿ. ಪ್ಯಾನ್ ಬಿಸಿಯಾಗ್ತಿದ್ದಂತೆ ಎರಡರಿಂದ ಮೂರು ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾಗ್ತಿದ್ದಂತೆ ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ.


    * ಇದೇ ಪ್ಯಾನ್‍ಗೆ ಸಣ್ಣದಾಗಿ ಕತ್ತಿರಿಸಿಕೊಂಡಿರುವ ಈರುಳ್ಳಿ ಮತ್ತು ಕರಿಬೇವು ಮಿಕ್ಸ್ ಮಾಡಿ. ಈರುಳ್ಳಿ ಗೋಲ್ಡನ್ ಕಲರ್ ಬರೋವರೆಗೂ ಕಡಿಮೆ ಉರಿಯಲ್ಲಿ ಫ್ರೈ ಮಾಡಬೇಕು.
    * ತದನಂತರ ರುಬ್ಬಿಕೊಂಡಿರುವ ಮಸಲಾವನ್ನ ಮಿಕ್ಸ್ ಮಾಡಿ, ಚೆನ್ನಾಗಿ ಕಲಕಿದ ನಂತರ ಚಿಕನ್ ಸೇರಿಸಿ 4 ರಿಂದ 5 ನಿಮಿಷ ಪ್ಲಿಪ್ ಮಾಡುತ್ತಿರಬೇಕು.
    * ಮಸಲಾದಲ್ಲಿ ಚಿಕನ್ ಡಿಪ್ ಆಗ್ತಿದ್ದಂತೆ ಚಿಟಿಕೆ ಅರಿಶಿನ, ಒಂದು ಟೀ ಸ್ಪೂನ್ ಗರಂ ಮಸಲಾ, ಕೋತಂಬರಿ ಸೊಪ್ಪು ಸೇರಿಸಿ 4 ರಿಂದ 5 ನಿಮಿಷ ಬೇಯಿಸಿದ್ರೆ ನಾಟಿ ಚಿಕನ್ ಫ್ರೈ ರೆಡಿ.

  • ನಾನ್ ವೆಜ್ ಅಂಗಡಿಗಳ ಮುಂದೆ ಫುಲ್ ಕ್ಯೂ

    ನಾನ್ ವೆಜ್ ಅಂಗಡಿಗಳ ಮುಂದೆ ಫುಲ್ ಕ್ಯೂ

    ಬೆಂಗಳೂರು: ಭಾನುವಾರ ನಾನ್‍ವೆಜ್ ಪ್ರಿಯರಿಗೆ ವಿಶೇಷ ದಿನವಾಗಿದ್ದು, ಬೆಳ್ಳಂಬೆಳಗ್ಗೆ ನಾನ್ ವೆಜ್ ಅಂಗಡಿಗಳ ಮುಂದೆ ಜನರು ಸಾಲಾಗಿ ಕ್ಯೂ ನಿಂತಿದ್ದಾರೆ.

    ಇಂದು ಲಾಕ್‍ಡೌನ್ ಜಾರಿಯಾಗಿ ಐದನೇ ದಿನವಾಗಿದೆ. ಜೊತೆಗೆ ಇಂದು ಸಂಡೇ ಲಾಕ್‍ಡೌನ್ ಕೂಡ ಆಗಿದೆ. ಹೀಗಾಗಿ ಮುಂಜಾನೆಯಿಂದಲೇ ನಾನ್ ವೆಜ್ ಖರೀದಿಗೆ ಜನರು ಮುಗಿ ಬಿದ್ದಿದ್ದಾರೆ. ಶಿವಾಜಿನಗರ ಮಾಂಸ ಮಾರುಕಟ್ಟೆಯಲ್ಲಿ ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಮಟನ್, ಚಿಕನ್, ಫಿಶ್ ಖರೀದಿಯಲ್ಲಿ ಮಾಂಸ ಪ್ರಿಯರು ತೊಡಗಿದ್ದು, ಇದರಿಂದ ಐದನೇ ದಿನದ ಲಾಕ್‍ಡೌನ್‍ನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.

    ಇತ್ತ ಮೈಸೂರು ರಸ್ತೆಯ ಮಟಾನ್ ಸ್ಟಾಲ್ ಮುಂದೆ ಬೆಳ್ಳಂಬೆಳಗ್ಗೆ ಮಟಾನ್ ಖರೀದಿಗೆ ಜನರು ಫುಲ್ ಕ್ಯೂನಲ್ಲಿ ನಿಂತಿದ್ದಾರೆ. ಅಲ್ಲದೇ ಸದಾಶಿವನಗರ ಮಟನ್, ಚಿಕನ್ ಅಂಗಡಿಗಳ ಮುಂದೆಯೂ ಜನರು ಕ್ಯೂ ನಿಂತಿದ್ದಾರೆ. ಮಧ್ಯಾಹ್ನ 12 ಗಂಟೆ ವರೆಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಜನರು ಸಾಲಿನಲ್ಲಿ ನಿಂತು ಮಟನ್, ಚಿಕನ್ ಖರೀದಿ ಮಾಡುತ್ತಿದ್ದಾರೆ.

    ರಾಜ್ಯದಲ್ಲಿ ಕೊರೊನಾ ರುದ್ರ ತಾಂಡವ ಮುಂದುವರಿದಿದ್ದು, ಶನಿವಾರ 4,537 ಹೊಸ ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ ಸಹ 2 ಸಾವಿರದ ಗಡಿ ದಾಟಿದ್ದು, 2,125 ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಶನಿವಾರ 49 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಕಳೆದ ದಿನ 93 ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ.

  • ನಾನು ನಾನ್‍ವೆಜ್, ಕೊರೊನಾಗೂ ಚಿಕನ್‍ಗೂ ಸಂಬಂಧವಿಲ್ಲ: ಸಿಟಿ ರವಿ

    ನಾನು ನಾನ್‍ವೆಜ್, ಕೊರೊನಾಗೂ ಚಿಕನ್‍ಗೂ ಸಂಬಂಧವಿಲ್ಲ: ಸಿಟಿ ರವಿ

    – ನಾನ್‍ವೆಜ್ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

    ಚಿಕ್ಕಮಗಳೂರು: ನಗರದ ಹನುಮಂತಪ್ಪ ವೃತ್ತದ ಸಮೀಪವಿರುವ ಕತ್ರಿಮಾರಮ್ಮ ದೇವಸ್ಥಾನದ ಬಳಿಯ ಟೆಂಡರ್ ಚಿಕನ್ ಸೆಂಟರ್ ನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಎರಡು ಕೆಜಿ ಚಿಕನ್ ಖರೀದಿಸಿದ್ದಾರೆ.

    ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕನ್‍ಗೂ ಕೊರೊನಾಗೂ ಯಾವುದೇ ಸಂಬಂಧವಿಲ್ಲ. ನಾನು ಬೇಸಿಕಲಿ ನಾನ್ ವೆಜ್. ಆದರೆ ಕಡಿಮೆ ತಿನ್ನುತ್ತೇನೆ. ನಾನ್ ವೆಜ್‍ನವರು ಚಿಕನ್, ಫಿಶ್ ಹಾಗೂ ಕೋಳಿ ಮೊಟ್ಟೆಯನ್ನು ತಿನ್ನಬಹುದು ಎಂದರು.

    ಇವುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂದು ಆಹಾರ ತಜ್ಞರೇ ಹೇಳಿದ್ದಾರೆ. ಹಾಗಾಗಿ ಯಾವುದೇ ಆತಂಕವಿಲ್ಲದೆ ಇವುಗಳನ್ನು ತಿಂದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದರು.

    ಮಾಂಸಾಹಾರಿಗಳು ಚಿಕನ್, ಫಿಶ್, ಕೋಳಿ ಮೊಟ್ಟೆ ತಿಂದರೆ, ಸಸ್ಯಾಹಾರಿಗಳು ಬಾಳೆಹಣ್ಣು, ತರಕಾರಿ ತಿನ್ನಬಹುದು ಎಂದಿದ್ದಾರೆ.

  • ನಾನ್‍ವೆಜ್ ಪ್ರಿಯರಿಗೂ ಕೊರೊನಾ ಭೀತಿ- ಕಾರವಾರದಲ್ಲಿ ಮೀನು, ಮಾಂಸದ ಬೆಲೆ ಭಾರೀ ಇಳಿಕೆ

    ನಾನ್‍ವೆಜ್ ಪ್ರಿಯರಿಗೂ ಕೊರೊನಾ ಭೀತಿ- ಕಾರವಾರದಲ್ಲಿ ಮೀನು, ಮಾಂಸದ ಬೆಲೆ ಭಾರೀ ಇಳಿಕೆ

    ಕಾರವಾರ: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಎಲ್ಲೆಡೆ ಹರಡುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ. ಕೊರೊನಾ ವೈರಸ್ ಭೀತಿ ಮತ್ಸ್ಯ ಪ್ರಿಯ ಕರಾವಳಿ ಜನರಲ್ಲಿಯೂ ಆತಂಕ ಮನೆ ಮಾಡಿದ್ದು, ಮಾಂಸಹಾರದ ಬೇಡಿಕೆ ಇಳಿಮುಖವಾಗಿದೆ. ಮೀನು, ಮಾಂಸವನ್ನು ಕೊಳ್ಳುವವರೇ ಇಲ್ಲದಂತಾಗಿದೆ.

    ಕರಾವಳಿ ಮೀನುಪ್ರಿಯರಿಗೆ ಮೆಚ್ಚಿನ ತಾಣ. ಇಲ್ಲಿ ಸಿಗುವ ಮೀನುಗಳ ರುಚಿ ಸವಿದವರಿಗೇ ಗೊತ್ತು. ಇಲ್ಲಿನ ಮೀನುಗಳು ಕೇವಲ ರಾಜ್ಯಕ್ಕೆ ಮಾತ್ರವಲ್ಲದೇ ಹೊರ ರಾಜ್ಯ, ವಿದೇಶಕ್ಕೂ ರಫ್ತಾಗುತ್ತದೆ. ಆದರೆ ಕೊರೊನಾ ವೈರಸ್ ಜಲಚರ ಜೀವಿಗಳನ್ನು ಹಾಗೂ ಮಾಂಸಹಾರ ಮಾಡುವುದರಿಂದಾಗಿ ಹರಡುತ್ತದೆ ಎಂಬುದು ದೃಢಪಟ್ಟಿದೆ. ಭಾರತೀಯ ಆಹಾರ ಸಂರಕ್ಷಣಾ ಇಲಾಖೆ ಕರಾವಳಿ ಭಾಗದ ಮಾಂಸದ ಅಂಗಡಿಗಳಿಗೆ, ಮೀನಿನ ಹೋಟೆಲ್‍ಗಳಿಗೆ ಶುಚಿತ್ವ ಕಾಪಾಡುವಂತೆ ನೋಟಿಸ್ ನೀಡಿದೆ. ಇದರ ಜೊತೆಯಲ್ಲಿ ಜಿಲ್ಲಾ ಆಹಾರ ಇಲಾಖೆ ಸಹ ಮೀನುಗಳನ್ನು ಕುದಿಸಿದ ನೀರಲ್ಲಿ ಬೇಯಿಸಿ ಸೇವಿಸುವಂತೆ ಮಾಂಸಪ್ರಿಯರಿಗೆ ತಿಳಿಹೇಳುತ್ತಿದ್ದಾರೆ. ಜಿಲ್ಲಾಡಳಿತ ಕೂಡ ಮಾಂಸದ ಅಂಗಡಿಗಳಿಗೆ, ಹೋಟಲ್‍ಗಳಿಗೆ ಜಾಗೃತಿ ಮೂಡಿಸುತ್ತಿದ್ದು ಜನ ಮಾಂಸ, ಮೀನು ಭಕ್ಷಿಸಲು ಭಯಪಡುತ್ತಿದ್ದಾರೆ.

    ಕರಾವಳಿ ಭಾಗದಲ್ಲಿ ಆಹಾರ ಇಲಾಖೆ ಎಚ್ಚರಿಕೆ ನೀಡುತ್ತಿದ್ದಂತೆ ಮಾಂಸಪ್ರಿಯರು ಸಸ್ಯಹಾರಿಗಳಾಗಿ ಬದಲಾಗಿದ್ದಾರೆ. ಪ್ರತಿ ದಿನ ಮೀನು, ಮಾಂಸ ತಿನ್ನುವವರು ಈಗ ಬಂದ್ ಮಾಡಿದ್ದಾರೆ. ಇದರ ಪರಿಣಾಮವೀಗ ಮೀನು ಮಾರುಕಟ್ಟೆಗಳ ಮೇಲೆ ಹಾಗೂ ಕೋಳಿ ಮಾಂಸದ ಮಾರುಕಟ್ಟೆಯ ಮೇಲೆ ಬಿದ್ದಿದೆ. ಮೀನುಗಳಿಗೆ ಉತ್ತಮ ದರವಿದ್ದರೂ ಮೀನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರಿಲ್ಲದೇ ದರ ಇಳಿಸುವಂತಾಗಿದ್ದು ಬಿಕೋ ಎನ್ನುತಿದ್ರೆ, ಕೋಳಿ ಮಾಂಸದ ಅಂಗಡಿಗಳಿಗೆ ಗ್ರಾಹಕರಿಲ್ಲದೆ ದರವನ್ನು ದೊಡ್ಡ ಮಟ್ಟದಲ್ಲಿ ಕಡಿತಗೊಳಿಸಿದ್ದು, ಗ್ರಾಹಕರಿಲ್ಲದೆ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.

    ಸದ್ಯ ಕರಾವಳಿ ಭಾಗದಲ್ಲಿ ಮೀನಿನ ದರ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ. ಲೆಪ್ಪೆ-80 ರಿಂದ 50 ರೂ., ಚಟ್ಲೆ (ಸಿಗಡಿ)-180 ರಿಂದ 150ರೂ., ಪಾಂಪ್ಲೆಟ್-800 ರಿಂದ 600ರೂ., ಏಡಿ -120 ರಿಂದ 50ರೂ. ಇಳಿಕೆ ಕಂಡಿದೆ. ಆದರೆ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಕೋಳಿ ಮಾಂಸ ಕೆಜಿ ಒಂದಕ್ಕೆ 200 ರೂ. ಇದ್ದಿದ್ದು ಕಳೆದ ಎರಡು ದಿನದಿಂದ 120 ರಿಂದ 159ರ ಒಳಗೆ ಇಳಿಮುಖವಾಗಿದೆ. ಕರಾವಳಿ ಭಾಗದ ಮಾಂಸ ಪ್ರಿಯರಿಗೆ ಕೊರೊನಾ ಭೀತಿ ಮಾಂಸಹಾರಕ್ಕೆ ಬ್ರೇಕ್ ಹಾಕಿದ್ದು ಸಸ್ಯಹಾರಿಗಳನ್ನಾಗಿ ಬದಲಿಸಿದೆ.

  • ಸಸ್ಯಾಹಾರಿ ದಂಪತಿಗೆ ಮಾಂಸಾಹಾರ ತಿನ್ನಿಸಿದ ಸಿಬ್ಬಂದಿ – ವಿಮಾನ ಸಂಸ್ಥೆಗೆ 20 ಸಾವಿರ ದಂಡ

    ಸಸ್ಯಾಹಾರಿ ದಂಪತಿಗೆ ಮಾಂಸಾಹಾರ ತಿನ್ನಿಸಿದ ಸಿಬ್ಬಂದಿ – ವಿಮಾನ ಸಂಸ್ಥೆಗೆ 20 ಸಾವಿರ ದಂಡ

    ಬೆಂಗಳೂರು: ಸಸ್ಯಾಹಾರ ಬದಲಿಗೆ ಬೆಂಗಳೂರು ಮೂಲದ ದಂಪತಿಗೆ ಮಾಂಸಾಹಾರ ನೀಡಿದ್ದಕ್ಕೆ ಕೋರ್ಟ್ ದುಬೈ ಮೂಲದ ಎಮಿರೇಟ್ಸ್ ವಿಮಾನಯಾನ ಸಂಸ್ಥೆಗೆ 20 ಸಾವಿರ ರೂ. ದಂಡ ವಿಧಿಸಿದೆ.

    ಲಂಡನ್ ನಲ್ಲಿ ನೆಲೆಸಿರುವ ದಂಪತಿ ಬೆಂಗಳೂರಿಗೆ ಆಗಮಿಸಿದ್ದರು. 2 ತಿಂಗಳು ನಗರದಲ್ಲಿದ್ದ ದಂಪತಿ ಮರಳಿ ಲಂಡನ್ ಗೆ ತೆರಳಲು ಎಮಿರೇಟ್ಸ್ ಕಂಪನಿಯ ವಿಮಾನ ಟಿಕೆಟ್ ಬುಕ್ ಮಾಡಿದ್ದರು.

    ಬುಕ್ಕಿಂಗ್ ವೇಳೆ ಯಾವ ರೀತಿಯ ಆಹಾರ ಬೇಕು ವಿಭಾಗದಲ್ಲಿ  ‘ಸಸ್ಯಾಹಾರ’ ಆಯ್ಕೆ ಮಾಡಿಕೊಂಡಿದ್ದರು. ಆದರೆ ವಿಮಾನ ಪ್ರಯಾಣದ ಸಂದರ್ಭದಲ್ಲಿ ಸಿಬ್ಬಂದಿ ಮಾಂಸಾಹಾರ ನೀಡಿದ್ದಾರೆ. ಆರಂಭದಲ್ಲಿ ಪತ್ನಿ ಆಹಾರ ಸೇವಿಸಿದ್ದಾರೆ. ನಂತರ ಪತಿ ಆಹಾರ ಸೇವಿಸುತ್ತಿದ್ದಾಗ ಅನುಮಾನ ಬಂದು ಸಿಬ್ಬಂದಿ ಜೊತೆ ಪ್ರಶ್ನಿಸಿದ್ದಾರೆ.

    ಈ ವೇಳೆ ಮಿಸ್ ಆಗಿ ನಾನ್ ವೆಜ್ ಆಹಾರ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ. ಇಷ್ಟು ಹೊತ್ತಿಗೆ ಪತ್ನಿ ಊಟ ಸೇವಿಸಿದ್ದರೆ ಪತಿ ಕೂಡ ಸ್ವಲ್ಪ ಊಟ ಸೇವಿಸಿದ್ದರು. ಯಾವಾಗ ಇದು ನಾನ್ ವೆಜ್ ಅಂತಾ ಗೊತ್ತಾಯ್ತೋ ದಂಪತಿ ಅಲ್ಲೇ ಪ್ರಶ್ನೆ ಮಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಲ್ಲಿಯವರೆಗೂ ನಾವು ನಾನ್ ವೆಜ್ ತಿಂದಿಲ್ಲ, ನಾವು ಶುದ್ಧ ಸಸ್ಯಹಾರಿಗಳು. ನಿಮ್ಮ ಎಡವಟ್ಟಿನಿಂದ ನಾನ್ ವೆಜ್ ತಿನ್ನುವಂತಾಯ್ತು ಎಂದು ಆರೋಪಿಸಿ ದಂಪತಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ನೀಡಿದ್ದರು. ಅರ್ಜಿ ವಿಚಾರಣೆ ನಡೆಸಿದ  ವೇದಿಕೆ ಎಮಿರೇಟ್ಸ್ ಸಂಸ್ಥೆಗೆ 20 ಸಾವಿರ ರೂ. ದಂಡ ಹಾಕಿ ಆದೇಶ ಪ್ರಕಟಿಸಿದೆ.