Tag: Non Veg Food

  • ಚಿಕನ್ ಡ್ರಮ್ ಸ್ಟಿಕ್ ಮನೆಯಲ್ಲೇ ಮಾಡೋದು ಹೀಗೇ…

    ಚಿಕನ್ ಡ್ರಮ್ ಸ್ಟಿಕ್ ಮನೆಯಲ್ಲೇ ಮಾಡೋದು ಹೀಗೇ…

    ಕೆಲವೊಮ್ಮೆ ನಾನ್ ವೆಜ್ ತಿನ್ನಬೇಕೆಂದು ತುಂಬಾ ಆಸೆ ಇರುತ್ತದೆ. ಆದರೆ ನಾನ್ ವೆಜ್ ಮಾಡುವುದೆಂದರೆ ಒಂದು ದೊಡ್ಡ ಕೆಲಸ. ವಿವಿಧ ರೀತಿಯ ಸಾಮಗ್ರಿಗಳು, ತುಂಬಾ ಸಮಯ ತೆಗೆದುಕೊಂಡು ಮಾಡೋದೇ ಬೇಡ ಎನಿಸುತ್ತದೆ. ಹೀಗಿರುವಾಗ ಕಡಿಮೆ ಸಾಮಗ್ರಿಗಳನ್ನು ಉಪಯೋಗಿಸಿ ಸುಲಭವಾಗಿ ಈ ನಾನ್ ವೆಜ್ ಪದಾರ್ಥವನ್ನು ತಯಾರಿಸಬಹುದು. ಸುಲಭವಾಗಿ ಕಡಿಮೆ ಸಮಯದಲ್ಲಿ ಚಿಕನ್ ಡ್ರಮ್ ಸ್ಟಿಕ್ ಈ ರೀತಿಯಾಗಿ ಮಾಡಿ.

    ಬೇಕಾಗುವ ಸಾಮಗ್ರಿಗಳು:
    ಚಿಕನ್ ಲೆಗ್ ಪೀಸ್
    ಮೊಸರು
    ಧನಿಯಾ ಪುಡಿ
    ಅರಿಶಿಣ
    ಕೆಂಪು ಖಾರದಪುಡಿ
    ಕಾಶ್ಮೀರಿ ಮಿರ್ಚಿ ಪುಡಿ
    ಗರಂ ಮಸಾಲ
    ಉಪ್ಪು
    ಎಣ್ಣೆ
    ಟೊಮೆಟೊ ಕೆಚಪ್

    ಮಾಡುವ ವಿಧಾನ:
    ಮೊದಲಿಗೆ ಚಿಕನ್ ಲೆಗ್ ಪೀಸ್ ಗಳನ್ನು ಚೆನ್ನಾಗಿ ತೊಳೆದು ಇಡಿ. ಒಂದು ಬಟ್ಟಲಿಗೆ ಮೊಸರು, ಅರಿಶಿಣ, ಕೆಂಪು ಖಾರದ ಪುಡಿ, ಕಾಶ್ಮೀರಿ ಮಿರ್ಚಿ ಪುಡಿ, ಗರಂ ಮಸಾಲ, ಧನಿಯ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಟೊಮೆಟೊ ಕೆಚಪ್ ಹಾಕಿ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ತೊಳೆದಿಟ್ಟ ಚಿಕನ್ ಲೆಗ್ ಪೀಸ್ ಗಳನ್ನು ಮಧ್ಯದಲ್ಲಿ ಚಾಕುವಿನಿಂದ ಚೆನ್ನಾಗಿ ಕತ್ತರಿಸಿಕೊಳ್ಳಿ.

    ಬಳಿಕ ತಯಾರಿಸಿಟ್ಟ ಮೊಸರಿನ ಮಿಶ್ರಣವನ್ನು ಚಿಕನ್ ಮೇಲೆ ಹಾಕಿ ಅದಕ್ಕೆ ಸ್ವಲ್ಪ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ. ಚಿಕನ್ ಮಿಶ್ರಣವನ್ನು 90 ನಿಮಿಷ ಪಕ್ಕಕ್ಕಿರಿಸಿ. ಅದಾದ ಬಳಿಕ ಒಂದು ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ ಅದರ ಮೇಲೆ ಚಿಕನ್ ಲೆಗ್ ಪೀಸ್ ಗಳನ್ನು ಇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

    ಆಗ ಬಿಸಿ ಬಿಸಿಯಾದ ಚಿಕನ್ ಡ್ರಮ್ ಸ್ಟಿಕ್ ತಯಾರಾಗುತ್ತದೆ. ಇದನ್ನು ನೀವು ಸಾಸ್ ಅಥವಾ ಮಯೋನಿಸ್ ಜೊತೆಗೆ ಸೇವಿಸಬಹುದು.

  • ಬಾಕ್ಸ್‌ನಲ್ಲಿ ಬಿರಿಯಾನಿ ತಂದ ಕಾರಣಕ್ಕೆ ನರ್ಸರಿ ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ಪ್ರಾಂಶುಪಾಲ

    ಬಾಕ್ಸ್‌ನಲ್ಲಿ ಬಿರಿಯಾನಿ ತಂದ ಕಾರಣಕ್ಕೆ ನರ್ಸರಿ ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ಪ್ರಾಂಶುಪಾಲ

    ಲಕ್ನೋ: ಶಾಲೆಗೆ ಊಟದ ಬಾಕ್ಸ್‌ನಲ್ಲಿ ಬಿರಿಯಾನಿ ತಂದ ಆರೋಪದ ಮೇಲೆ ನರ್ಸರಿ ವಿದ್ಯಾರ್ಥಿಯನ್ನು ಪ್ರಾಂಶುಪಾಲರು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಅಮ್ರೋಹಾದ (Amroha) ಖಾಸಗಿ ಶಾಲೆಯಲ್ಲಿ ನಡೆದಿದೆ. ಪ್ರಾಂಶುಪಾಲರ ಜೊತೆಗೆ ಮಗುವಿನ ತಾಯಿ ತೀವ್ರ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

    ನಮ್ಮ ದೇವಸ್ಥಾನಗಳನ್ನು ಕೆಡವಿ ಶಾಲೆಗೆ ನಾನ್ ವೆಜ್ ತರುವ ಇಂತಹ ಮಕ್ಕಳಿಗೆ ನೈತಿಕತೆಯನ್ನು ಕಲಿಸಲು ನಾವು ಬಯಸುವುದಿಲ್ಲ ಎಂದು ಪ್ರಾಂಶುಪಾಲರು ತಾಯಿಗೆ ಹೇಳುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಎಲ್ಲರಿಗೂ ನಾನ್ ವೆಜ್ ತಿನ್ನಿಸಿ ಅವರನ್ನು ಇಸ್ಲಾಂಗೆ ಪರಿವರ್ತಿಸುವ ಬಗ್ಗೆ ಬಾಲಕ ಮಾತನಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.ಇದನ್ನೂ ಓದಿ: ಮಂತ್ರಾಲಯ ಗುರುರಾಯರ ಮೊರೆ ಹೋದ ನಟ ದರ್ಶನ್‌ ಪತ್ನಿ

    ಮಹಿಳೆ ಪ್ರಾಂಶುಪಾಲರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತನ್ನ ಮಗನಂತಹ 7 ವರ್ಷದ ಹುಡುಗ ಅಂತಹ ವಿಷಯಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಅದಕ್ಕೆ ಪ್ರಾಂಶುಪಾಲರು ಮಗು ಮನೆಯಲ್ಲಿ ಎಲ್ಲವನ್ನೂ ಕಲಿಯುತ್ತದೆ, ಅವರ ಪೋಷಕರು ಕಲಿಸುತ್ತಾರೆ. ಇತರ ವಿದ್ಯಾರ್ಥಿಗಳ ಪೋಷಕರಿಗೆ ಸಮಸ್ಯೆ ಇದ್ದ ಕಾರಣ ಶಾಲೆಯ ರಿಜಿಸ್ಟರ್‌ನಿಂದ ವಿದ್ಯಾರ್ಥಿಯ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ.

    ಪ್ರಾಂಶುಪಾಲರ ಹೇಳಿಕೆಗೆ ಮಗುವಿನ ತಾಯಿ, ಶಾಲೆಯಲ್ಲಿ ವಿದ್ಯಾರ್ಥಿಗಳು ದೇಶದ ಹಿಂದೂ-ಮುಸ್ಲೀಂ ಸಮಸ್ಯೆಗಳ ಬಗ್ಗೆ ವಾದಿಸುತ್ತಾರೆ. ಮತ್ತೊಂದು ವಿದ್ಯಾರ್ಥಿ ತಮ್ಮ ಮಗನಿಗೆ ಹೊಡೆದು ಆಗಾಗ್ಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ನನ್ನನ್ನು, ದೇವೇಗೌಡರನ್ನು ಮುಗಿಸೋಕೆ ಯಾರಿಂದಲೂ ಆಗಲ್ಲ: ಹೆಚ್.ಡಿ.ರೇವಣ್ಣ

    ಈ ವೇಳೆ ಪ್ರಾಂಶುಪಾಲರು, ಮಹಿಳೆ ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಆರೋಪ-ಪ್ರತ್ಯಾರೋಪಗಳನ್ನು ಮಾಡುವ ಮೂಲಕ ಶಾಲೆಯನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾಳೆ ಎಂದು ಹೇಳಿದ್ದಾರೆ.

    ಸುಮಾರು 7 ನಿಮಿಷಗಳ ಅವಧಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಮ್ರೋಹಾ ಪೊಲೀಸರು, ಜಿಲ್ಲಾ ಶಾಲಾ ಇನ್ಸ್‌ಪೆಕ್ಟರ್‌ (DIS) ಕ್ರಮಕ್ಕೆ ಮುಂದಾಗಿದ್ದಾರೆ ಮತ್ತು ಈ ವಿಷಯದಲ್ಲಿ ತನಿಖೆ ಮತ್ತು ಮುಂದಿನ ಕ್ರಮ ತೆಗೆದುಕೊಳ್ಳಲು ಮೂರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್‌ ತಾಯಿ ಹೇಳಿದ್ದೇನು?

    ಶ್ರೀಕೃಷ್ಣನ ಮೇಲಿನ ನಂಬಿಕೆಯಿಂದ ಮಾಂಸಾಹಾರ ತ್ಯಜಿಸಿದ್ರಾ ವೇಗಿ? – ಮಯಾಂಕ್‌ ತಾಯಿ ಹೇಳಿದ್ದೇನು?

    ಬೆಂಗಳೂರು: ಇತ್ತೀಚೆಗಷ್ಟೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ನಡೆದ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಯುವ ವೇಗಿ ಮಯಾಂಕ್‌ ಯಾದವ್‌ (Mayank Yadav) ಅಮೋಘ ಸಾಧನೆ ಮಾಡಿದ್ದಾರೆ. ಇಡೀ ಕ್ರಿಕೆಟ್‌ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಅತೀ ವೇಗದ ಬೌಲರ್ (Fastest Bowlers) ಎನಿಸಿಕೊಂಡಿದ್ದಾರೆ. ಮಗನ ಸಾಧನೆಯನ್ನು ಕಂಡ ತಾಯಿ ತಮ್ಮ ಖುಷಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಯಾಂಕ್‌ ಯಾದವ್‌ ಅವರ ಫಿಟ್‌ನೆಸ್‌ (Fitness) ಗುಟ್ಟನ್ನೂ ಬಿಟ್ಟುಕೊಟ್ಟಿದ್ದಾರೆ.

    ಮಯಾಂಕ್‌ ತಾಯಿ ಹೇಳಿದ್ದೇನು?
    ಸಂದರ್ಶನವೊಂದರಲ್ಲಿ ಮಾತನಾಡಿದ ಮಯಾಂಕ್‌ ಅವರ ತಾಯಿ ಮಮತಾ ಯಾದವ್‌, ಕಳೆದ 2 ವರ್ಷಗಳಿಂದ ನನ್ನ ಮಗ ಸಸ್ಯಾಹಾರಿಯಾಗಿ ಬದಲಾಗಿದ್ದಾನೆ. ಅದಕ್ಕೂ ಮುನ್ನ ಮಾಂಸಾಹಾರ ಸೇವನೆ ಮಾಡುತ್ತಿದ್ದ. ಪ್ರತಿದಿನ ಡಯಟ್‌ ಚಾರ್ಟ್‌ ಆಧಾರದಲ್ಲಿ ಏನು ಮಾಡಬೇಕು ಅಂತ ಅವನೇ ನಮಗೆ ಹೇಳುತ್ತಾನೆ. ಅವನು ಕೇಳಿದ್ದನ್ನ ನಾವು ಮಾಡಿಕೊಡ್ತೇವೆ. ಮಾಂಸಾಹಾರ ಸೇವಿಸುತ್ತಿದ್ದಾಗ ದಾಲ್, ರೊಟ್ಟಿ, ಅನ್ನ, ಹಾಲು, ತರಕಾರಿಗಳು ಇತ್ಯಾದಿ ಏನನ್ನೂ ತಿನ್ನುತ್ತಿರಲಿಲ್ಲ. ಆದ್ರೆ ಬಳಿಕ ಸಸ್ಯಾಹಾರಕ್ಕೆ (Vegetarian) ಬದಲಾದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಿಸ್ಟರ್‌-360 ಸೂರ್ಯಕುಮಾರ್‌ ಕಂಬ್ಯಾಕ್‌ – ಮುಂಬೈ ತಂಡಕ್ಕಿನ್ನು ಆನೆ ಬಲ!

    ಮಯಾಂಕ್‌ ಮಾಂಸಾಹಾರ ತ್ಯಜಿಸಿದ್ದೇಕೆ?
    ಮಯಾಂಕ್‌ ಏಕೆ ಮಾಂಸಾಹಾರ ತ್ಯಜಿಸಿದ್ದಾನೆ ಎಂಬುದಕ್ಕೂ ಅವರ ತಾಯಿ ಉತ್ತರ ಕೊಟ್ಟಿದ್ದಾರೆ. ಹೌದು. ಮಯಾಂಕ್‌ ಮಾಂಸಾಹಾರ ತ್ಯಜಿಸಲು ಎರಡು ಮುಖ್ಯ ಕಾರಣಗಳಿವೆ. ಅವರು, ಶ್ರೀಕೃಷ್ಣನಲ್ಲಿ ಅಪಾರ ನಂಬಿಕೆಯಿಟ್ಟಿದ್ದರು ಮತ್ತು ಮಾಂಸಾಹಾರ (Non Veg Food) ದೇಹಕ್ಕೆ ಸರಿಹೊಂದುತ್ತಿರಲಿಲ್ಲ. ಆದ್ರೆ ನಮಗೆ ಅವನ ಕ್ರೀಡೆ ಮತ್ತು ದೇಹಕ್ಕೆ ಅಗತ್ಯವಾದುದ್ದನ್ನೇ ಅವನು ಮಾಡುತ್ತಿದ್ದಾನೆ ಅನ್ನಿಸಿತು ಎಂಬುದಾಗಿ ತಾಯಿ ಮಮತಾ ಹೇಳಿದ್ದಾರೆ. ಇದೇ ವೇಳೆ ಶೀಘ್ರದಲ್ಲೇ ತಮ್ಮ ಮಗ ಟೀಂ ಇಂಡಿಯಾ ಜರ್ಸಿ ಧರಿಸಿ ಆಡುವುದನ್ನು ನೋಡಲು ಬಯಸುತ್ತೇವೆ ಎಂದು ಬಯಕೆ ವ್ಯಕ್ತಪಡಿಸಿದ್ದಾರೆ.

    ಐಪಿಎಲ್‌ನಲ್ಲಿ ಮಯಾಂಕ್‌ ದಾಖಲೆ:
    21 ವರ್ಷ ವಯಸ್ಸಿನ ಮಯಾಂಕ್‌ ಯಾದವ್‌ ಗಂಟೆಗೆ 156.7 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಹೊಸ ದಾಖಲೆಯನ್ನೂ ಬರೆದಿದ್ದಾರೆ. 150 ಕಿಮೀಗಿಂತಲೂ ಅಧಿಕ ವೇಗದಲ್ಲಿ ಬೌಲಿಂಗ್‌ ಮಾಡಿದ 4ನೇ ಬೌಲರ್‌ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಯಾಂಕ್‌ ವೇಗಕ್ಕೆ ಐಪಿಎಲ್‌ನಲ್ಲಿ ದಾಖಲೆಗಳು ಪುಡಿ ಪುಡಿ!

    ವೇಗದ ಬೌಲಿಂಗ್‌ ಮಾಡಿದ ಟಾಪ್‌-5 ಆಟಗಾರರು:
    * ಶಾನ್‌ ಟೈಟ್‌ – 2011ರಲ್ಲಿ – 157.7 ಕಿಮೀ
    * ಲಾಕಿ ಫರ್ಗೂಸನ್‌ – 2022ರಲ್ಲಿ – 157.3 ಕಿಮೀ
    * ಉಮ್ರಾನ್‌ ಮಲಿಕ್‌ – 2022ರಲ್ಲಿ – 157.0 ಕಿಮೀ
    * ಮಯಾಂಕ್‌ ಯಾದವ್‌ – 2024ರಲ್ಲಿ – 156.7 ಕಿಮೀ
    * ಅನ್‌ರಿಚ್‌ ನಾರ್ಟೆ – 2020ರಲ್ಲಿ – 156.2 ಕಿಮೀ