Tag: Nizamuddin Jamaat

  • ದೆಹಲಿ ಸಭೆಯಲ್ಲಿ ಭಾಗವಹಿಸಿದ್ದವರು ಸೂಸೈಡ್ ಬಾಂಬರ್ ಗಳಾ: ಈಶ್ವರಪ್ಪ ಪ್ರಶ್ನೆ

    ದೆಹಲಿ ಸಭೆಯಲ್ಲಿ ಭಾಗವಹಿಸಿದ್ದವರು ಸೂಸೈಡ್ ಬಾಂಬರ್ ಗಳಾ: ಈಶ್ವರಪ್ಪ ಪ್ರಶ್ನೆ

    ಶಿವಮೊಗ್ಗ: ದೆಹಲಿಯ ನಿಜಾಮುದ್ದೀನ್ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಒಟ್ಟು 24 ಮಂದಿ ಸಂಬಂಧ ಹೊಂದಿದ್ದಾರೆ. ಇದರಲ್ಲಿ ಒಟ್ಟು 10 ನೇರವಾಗಿ ಭಾಗವಹಿಸಿದ್ದರೆ, ಉಳಿದ 14 ಮಂದಿ ಸೆಕೆಂಡರಿ ಸಂಬಂಧ ಹೊಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

    ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 24 ಮಂದಿಯಲ್ಲಿ ಈಗಾಗಲೇ 10 ಮಂದಿ ಕ್ವಾರಂಟೈನ್ ಮುಗಿದು ಹೋಗಿದೆ. ಉಳಿದ 11 ಮಂದಿ ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದು, ಎಲ್ಲರದ್ದೂ ನೆಗೆಟಿವ್ ಬಂದಿದೆ. ಇನ್ನೂಳಿದ ಮೂರು ಮಂದಿ ಬೇರೆ ಬೇರೆ ಜಿಲ್ಲೆಯಲ್ಲಿ ಇದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ.

    ದೆಹಲಿಯಲ್ಲಿ ಸಭೆ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿರುವ ಸಚಿವ ಈಶ್ವರಪ್ಪ ಕೊರೊನಾ ವೈರಸ್ ಸೋಂಕು ತಗಲುವ ಭೀತಿ ಇದ್ದರೂ ಸಭೆ ನಡೆಸುವ ಸಂದರ್ಭ ಇತ್ತಾ. ಎಷ್ಟು ಜನ ಹೋಗಿದ್ದರು. ಯಾಕೆ ಹೋಗಿದ್ದರು ಎಂಬುದು ತಿಳಿಯಬೇಕಿದೆ. ಎಷ್ಟು ಜನರಿಗೆ ಅನುಮತಿ ತೆಗೆದುಕೊಂಡಿದ್ದರು ಅನ್ನೋದು ಗೊತ್ತಾಗಬೇಕಿದೆ. ಇವರೇನು ಸೂಸೈಡ್ ಬಾಂಬರ್ ಗಳ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದ್ದಾರೆ.

    ನಿಜಾಮುದ್ದೀನ್ ಸಮಸ್ಯೆ ಆಗದೇ ಇದ್ದಿದ್ದರೆ, ಈ ಕೊರೊನಾ ಸಮಸ್ಯೆ ದಿನೇ ದಿನೇ ಕಡಿಮೆಯಾಗುತ್ತಿತ್ತು. ಆದರೆ ಇದೊಂದು ಆತಂಕ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ರಾಜಕಾರಣ ಮಾಡಲು ಹೋಗಬಾರದು. ಧರ್ಮವನ್ನು ಎತ್ತಿಕಟ್ಟುವ ಜನರಿದ್ದಾರೆ. ಇವರ ಬಗ್ಗೆ ಹುಷಾರಾಗಿರಬೇಕು. ಇದು ದೊಡ್ಡ ಪ್ರಕರಣವಾಗಬಾರದು. ಇದನ್ನು ಮಧ್ಯದಲ್ಲಿ ತರಲು ನಾವು ಬಿಡುವುದಿಲ್ಲ. ಸಭೆಗೆ ಹೋದವರು ತಪ್ಪು ಮಾಡಿ ಎಲ್ಲರಿಗೂ ಸಮಸ್ಯೆ ಉಂಟು ಮಾಡಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.