Tag: Nissar Ahmed

  • ನಿಸಾರ್ ಅಹಮದ್ ದಸರಾ ಉದ್ಘಾಟಿಸಿದಾಗ ಕೋರ್ಟ್‌ಗೆ ಹೋಗಿಲ್ಲ ಯಾಕೆ?: ಸಿಂಹಗೆ ಸಿಎಂ ತಿರುಗೇಟು

    ನಿಸಾರ್ ಅಹಮದ್ ದಸರಾ ಉದ್ಘಾಟಿಸಿದಾಗ ಕೋರ್ಟ್‌ಗೆ ಹೋಗಿಲ್ಲ ಯಾಕೆ?: ಸಿಂಹಗೆ ಸಿಎಂ ತಿರುಗೇಟು

    ವಿಜಯಪುರ: ನಿಸಾರ್ ಅಹಮದ್ (Nissar Ahmed) ದಸರಾ ಉದ್ಘಾಟನೆ ಮಾಡಿದಾಗ ಯಾಕೆ ನ್ಯಾಯಾಲಯಕ್ಕೆ (Court) ಹೋಗಿಲ್ಲ ಎಂದು ಸಿದ್ದರಾಮಯ್ಯ (CM Siddaramaiah) ತಿರುಗೇಟು ನೀಡಿದ್ದಾರೆ.

    ಮೈಸೂರು ದಸರಾ (Mysuru Dasara) ಉದ್ಘಾಟನೆಯನ್ನು ಬಾನು ಮುಷ್ತಾಕ್ (Banu Mushtaq) ಮಾಡುತ್ತಿರುವುದನ್ನು ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್‌ ಸಿಂಹ (Pratap Simha) ಹೈಕೋರ್ಟ್‌ನಲ್ಲಿ (High Court) ಅರ್ಜಿ ಸಲ್ಲಿಸಿದ ವಿಚಾರಕ್ಕೆ ಅವರು ಆಲಮಟ್ಟಿ ಜಲಾಶಯದ ಬಳಿ ಪ್ರತಿಕ್ರಿಯಿಸಿದರು.

    ಪ್ರತಾಪ್ ಸಿಂಹ ಕೋರ್ಟ್‌ ಮೆಟ್ಟಿಲೇರಿದ್ದು ಬಹಳ ಸಂತೋಷ. ನಮ್ಮ ನಿರ್ಧಾರವನ್ನು ಕೋರ್ಟ್‌ ತೀರ್ಮಾನ ಮಾಡುತ್ತದೆ. ಈ ಅರ್ಜಿಗೆ ಕೋರ್ಟ್‌ ಪ್ರೋತ್ಸಾಹ ನೀಡುವುದಿಲ್ಲ ಎಂದರು. ಇದನ್ನೂ ಓದಿ:  ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

     

    ಬಾನು ಮುಷ್ತಾಕ್ ಬರೆದ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ (Booker Award) ಬಂದಿದೆ. ಬೂಕರ್ ಪ್ರಶಸ್ತಿಯನ್ನ ಅನುವಾದಕರು ಬರಹಗಾರಿಗೆ ಹಂಚಲಾಗಿದೆ. ಬಿಜೆಪಿಯವರು ರಾಜಕೀಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮೈಸೂರು | ಬಿಜೆಪಿಗೂ ಮುನ್ನವೇ ಹಿಂದೂ ಜಾಗರಣ ವೇದಿಕೆಯಿಂದ ʻಚಾಮುಂಡಿ ಬೆಟ್ಟ ಚಲೋ’ ಯಾತ್ರೆ

    ಬಾನು ಮುಷ್ತಾಕ್ ಕನ್ನಡಾಂಬೆಗೆ, ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂಬ ಪ್ರಶ್ನೆಗೆ ಸಾಕ್ಷ್ಯ ಎಲ್ಲಿ ಎಂದು ಪ್ರಶ್ನಿಸಿ ಲೇಖಕಿಯ ಆಯ್ಕೆಯನ್ನು ಸಮರ್ಥಿಸಿಕೊಂಡರು.

  • ನಿತ್ಯೋತ್ಸವ ಕವಿ ಪುತ್ರನ ಚಿಕಿತ್ಸೆಗೆ 10 ಲಕ್ಷ ರೂ. ನೀಡಿದ ಬಿಬಿಎಂಪಿ

    ನಿತ್ಯೋತ್ಸವ ಕವಿ ಪುತ್ರನ ಚಿಕಿತ್ಸೆಗೆ 10 ಲಕ್ಷ ರೂ. ನೀಡಿದ ಬಿಬಿಎಂಪಿ

    ಬೆಂಗಳೂರು: ನಿತ್ಯೋತ್ಸವ ಕವಿ ಪ್ರೊ. ನಿಸ್ಸಾರ್ ಅಹಮದ್ ಅವರ ಪುತ್ರನ ಚಿಕಿತ್ಸೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವತಿಯಿಂದ 10 ಲಕ್ಷ ರೂ. ಚೆಕ್ ನೀಡಲಾಗಿದೆ.

    ಪ್ರೊ. ನಿಸ್ಸಾರ್ ಅಹಮದ್ ಅವರ ಪುತ್ರ ನವೀದ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ 15 ದಿನಗಳಿಂದ ಬನ್ನೇರಘಟ್ಟ ಮುಖ್ಯರಸ್ತೆಯಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೀದ್ ಅವರ ಅನಾರೋಗ್ಯದ ಬಗ್ಗೆ ತಿಳಿದು ಬಿಬಿಎಂಪಿ ಅವರ ಚಿಕಿತ್ಸೆಗಾಗಿ 10 ಲಕ್ಷ ರೂ. ಚೆಕ್ ನೀಡಿದೆ. ಜೊತೆಗೆ ಶೀಘ್ರವೇ ಇನ್ನೂ 10 ಲಕ್ಷ ರೂ. ಬಿಬಿಎಂಪಿ ವತಿಯಿಂದ ನವೀದ್ ಚಿಕಿತ್ಸೆಗೆ ನೀಡಲಾಗುತ್ತದೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

    ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಅವರು ಪಾಲಿಕೆ ವತಿಯಿಂದ 10 ಲಕ್ಷ ರೂ. ಚೆಕ್ ಅನ್ನು ಅಪೋಲೋ ಆಸ್ಪತ್ರೆಯಲ್ಲಿಯೇ ನವೀದ್ ಅವರಿಗೆ ವಿತರಣೆ ಮಾಡಿದರು. ಈ ವೇಳೆ ಉಪಮೇಯರ್ ರಾಮ ಮೋಹನ ರಾಜು, ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್ ಉಪಸ್ಥಿತರಿದ್ದರು.