Tag: nirmala seetharam

  • ಕೊರೊನಾ ಬಿಕ್ಕಟ್ಟು ದೈವೇಚ್ಛೆ: ನಿರ್ಮಲಾ ಸೀತಾರಾಮನ್

    ಕೊರೊನಾ ಬಿಕ್ಕಟ್ಟು ದೈವೇಚ್ಛೆ: ನಿರ್ಮಲಾ ಸೀತಾರಾಮನ್

    -ಜಿಎಸ್‍ಟಿ ಸಂಗ್ರಹದಲ್ಲಿ ಭಾರೀ ಇಳಿಕೆ

    ನವದೆಹಲಿ: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ 41ನೇ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕೊರೊನಾ ಬಿಕ್ಕಟ್ಟು ದೈವೇಚ್ಛೆ ಆಗಿದ್ದು, ಜಿಎಸ್‍ಟಿ ಸಂಗ್ರಹದ ಮೊತ್ತದಲ್ಲಿ ಭಾರೀ ಇಳಿಕೆಯಾಗಿದೆ ಎಂದಿದ್ದಾರೆ.

    ಆರ್ಥಿಕ ವರ್ಷ 2020-21ರಲ್ಲಿ 2.35 ಲಕ್ಷ ಕೋಟಿ ರೂಪಾಯಿಯಷ್ಟು ಜಿಎಸ್‍ಟಿ ಸಂಗ್ರಹ ಕೊರತೆಯಾಗುವ ಅನುಮಾನಗಳಿವೆ. ಕೊರೊನಾ ದೇಶದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ನೀಡಿದೆ. ಹಾಗಾಗಿ ಈ ವರ್ಷ ಅಸಾಧಾರಣ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಈ ವರ್ಷ ಆರ್ಥಿಕ ಬಿಕ್ಕಟ್ಟು ಸಹ ಕಾಣಬಹುದಾಗಿದೆ.

    2020ರಲ್ಲಿ ಕೇಂದ್ರ ಸರ್ಕಾರ 1.65 ಲಕ್ಷ ಕೋಟಿ ರೂ. ಜಿಎಸ್‍ಟಿ ಪರಿಹಾರ ಬಿಡುಗಡೆ ಮಾಡಿದೆ. ಮಾರ್ಚ್ ನಲ್ಲಿ 13,806 ಕೋಟಿ ರೂ. ರಿಲೀಸ್ ಮಾಡಿದ್ದು, ಆದ್ರೆ ಈ ಅವಧಿಯಲ್ಲಿ ಸೆಸ್ ಕೇವಲ 95,444 ಕೋಟಿ ರೂ. ಸಂಗ್ರಹವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.

    ಇಂದು ನಡೆದ ಸಭೆಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಗಳು ಹೆಚ್ಚಿನ ಜಿಎಸ್‍ಟಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಆದ್ರೆ ಜಿಎಸ್‍ಟಿ ಸಂಗ್ರಹದ ಕೊರತೆ ಹಿನ್ನೆಲೆ ಪರಿಹಾರ ನೀಡುವದರ ಬಗ್ಗೆ ಕೇಂದ್ರ ಸ್ಪಷ್ಟಪಡಿಸಿಲ್ಲ. ಆರ್ಥಿಕ ಕೊರತೆಯನ್ನು ಸರಿದೂಗಿಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಸಾಲ ಪಡೆಯವಂತೆ ಸಲಹೆ ನೀಡಿವೆ ಎನ್ನಲಾಗಿದೆ. ಆದ್ರೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

    ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ರಾಜ್ಯಗಳಲ್ಲಿ ಉಂಟಾಗಿರುವ ಆದಾಯದ ಕೊರತೆಯನ್ನು ಸರಿದೂಗಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪಕ್ಷಗಳು ರಾಜ್ಯಗಳ ಆರ್ಥಿಕ ಕೊರತೆ ನೀಗಿಸುವುದು ಕೇಂದ್ರ ಸರ್ಕಾರ ಶಾಸನಬದ್ಧ ಕರ್ತವ್ಯವಾಗಿದೆ ಎಂದು ಹೇಳಿವೆ. ಸಭೆಯಲ್ಲಿ ಪಶ್ಚಿಮ ಬಂಗಾಳ, ಪಂಜಾಬ್, ಕೇರಳ ಮತ್ತು ದೆಹಲಿ ಸರ್ಕಾರಗಳು ಆರ್ಥಿಕ ಕೊರತೆ ನೀಗಿಸವಂತೆ ಒತ್ತಡ ಹೇರಿವೆ.

    ಈ ವೇಳೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅಭಿಪ್ರಾಯ ಉಲ್ಲೇಖಿಸಿ ಮಾತನಾಡಿರುವ ಸೀತಾರಾಮನ್, ಜಿಎಸ್‍ಟಿ ಸಂಗ್ರಹದಲ್ಲಿ ಕೊರತೆಯಾದ ಹಿನ್ನೆಲೆ ಕೇಂದ್ರ ತನ್ನ ರಾಜಸ್ವದಿಂದ ರಾಜ್ಯದ ಬೊಕ್ಕಸದ ಕೊರತೆಯನ್ನ ಪೂರೈಸಲು ಕಾನೂನುಬದ್ಧವಾಗಿ ಬಾಧ್ಯತೆ ಹೊಂದಿರಲ್ಲ ಎಂದು ಹೇಳಿದ್ದಾರೆ.

  • 7 ಮೀನುಗಾರರು ನಾಪತ್ತೆಯಾಗಿ 100 ದಿನ – ರಕ್ಷಣಾ ಸಚಿವೆ ಕಂಡು ಕಣ್ಣೀರು ಹಾಕಿದ್ರು ಪತ್ನಿಯರು

    7 ಮೀನುಗಾರರು ನಾಪತ್ತೆಯಾಗಿ 100 ದಿನ – ರಕ್ಷಣಾ ಸಚಿವೆ ಕಂಡು ಕಣ್ಣೀರು ಹಾಕಿದ್ರು ಪತ್ನಿಯರು

    ಉಡುಪಿ: ಡಿಸೆಂಬರ್ ತಿಂಗಳಲ್ಲಿ ಮೀನುಗಾರಿಕೆಗೆ ಹೊರಟು ಬೋಟ್ ಸಮೇತ ನಾಪತ್ತೆಯಾಗಿದ್ದ ಮೀನುಗಾರರ ಮನೆಗಳಿಗೆ ಇಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಭೇಟಿ ಕೊಟ್ಟು, ಅವರ ಕುಟುಂಬಕ್ಕೆ ಸಮಾಧಾನ ಹೇಳಿದ್ದಾರೆ.

    ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಜೊತೆ ನಿರ್ಮಲಾ ಸೀತಾರಾಮನ್ ಅವರು ಮಲ್ಪೆಯಲ್ಲಿರುವ ಮೀನುಗಾರರ ಮನೆಗೆ ಭೇಟಿ ಕೊಟ್ಟಾಗ ಬಂಧುಗಳ ಕಣ್ಣೀರ ಕಟ್ಟೆ ಒಡೆಯಿತು.

    ಮೂರು ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ ಮೀನುಗಾರರ ಹುಡುಕಾಟ ಇನ್ನೂ ನಡೆಯುತ್ತಲೇ ಇದೆ. ಕುಟುಂಬಸ್ಥರು ಇವತ್ತು ಬರ್ತಾರೆ ನಾಳೆ ಬರ್ತಾರೆ ಎಂದು ಕಾಯುತ್ತಲೇ ಇದ್ದಾರೆ. ಕಾಣೆಯಾದ ಚಂದ್ರಶೇಖರ, ದಾಮೋದರ ಅವರ ಮನೆಗಳಿಗೆ ಭೇಟಿ ನೀಡಿದಾಗ ಅವರಿಬ್ಬರ ಪತ್ನಿಯರ ಆಕ್ರಂದನ ನೋಡಿ ರಕ್ಷಣಾ ಸಚಿವೆ ಅಸಹಾಯಕರಾದರು.

    ಕೊನೆಗೆ ದುಃಖಿತರನ್ನು ಸಮಾಧಾನಪಡಿಸಿ, ನಾಪತ್ತೆಯಾದ ಮೀನುಗಾರರನ್ನು ಆದಷ್ಟು ಬೇಗ ಹುಡುಕಿ ಕೊಡುತ್ತೇವೆ. ಘಟನೆ ನಡೆದ ದಿನದಿಂದ ಮೀನುಗಾರರನ್ನು ಹುಡುಕಲು ಕಾರ್ಯಪ್ರವೃತರಾಗಿದ್ದೇವೆ ಎಂದು ದುಃಖತಪ್ತ ಕುಟುಂಬಕ್ಕೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

  • ಇಂದು ಮಡಿಕೇರಿಗೆ ನಿರ್ಮಲಾ ಸೀತಾರಾಮನ್- ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಘೋಷಣೆ?

    ಇಂದು ಮಡಿಕೇರಿಗೆ ನಿರ್ಮಲಾ ಸೀತಾರಾಮನ್- ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಘೋಷಣೆ?

    ಮಡಿಕೇರಿ: ಪ್ರವಾಸಿಗರ ತಾಣವಾದ ಮಂಜಿನನಗರಿಯಲ್ಲಿ ಅವರಿಸಿದ ಜಲಪ್ರಳಯದಿಂದಾಗಿ ಅಕ್ಷರಶಃ ಬದುಕು ನರಕ ಸದೃಶ್ಯವಾಗಿದೆ. ಕೊಡಗಿನಲ್ಲಿ ಮಳೆ ಅಲ್ಪವಿರಾಮ ನೀಡಿದ್ದರೂ, ಯಾತನೆಗೆ ಮಾತ್ರ ವಿರಾಮವಿಲ್ಲದಂತಾಗಿದೆ. ಈ ಮಧ್ಯೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರವಾಹ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಲು ಕೊಡಗಿಗೆ ಆಗಮಿಸುತ್ತಿದ್ದಾರೆ.

    ಮೈಸೂರಿನಿಂದ ಕುಶಾಲನಗರಕ್ಕೆ ತೆರಳಿ ಅಲ್ಲಿ ಕುವೆಂಪು ಬಡಾವಣೆ, ಸಾಯಿ ಬಡಾವಣೆಗೆ ಭೇಟಿ ನೀಡಲಿದ್ದಾರೆ. ನಂತರ ಭೂಕುಸಿತವಾಗಿರುವ ಮಾದಾಪುರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಮಡಿಕೇರಿಯ ಮೈತ್ರಿ ಹಾಲ್ ನಲ್ಲಿರುವ ಸಂತ್ರಸ್ತರನ್ನ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

    ಇದೇ ವೇಳೆ ನಿರ್ಮಲಾ ಸೀತಾರಾಮನ್, ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಣೆ ಮಾಡುವ ಸಾಧ್ಯತೆಯಿದೆ.

    ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಮಂಜಿನ ನಗರಿ ಮಡಿಕೇರಿಯಲ್ಲೀಗ ಹಸಿರು ಕಳೆಗುಂದಿದೆ. ಮಳೆ ಅಲ್ಪ ವಿರಾಮ ನೀಡಿದ್ದರಿಂದ ಕೊಡಗು ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿಎಲ್ಲಿ ನೋಡಿದ್ರೂ ಅವಶೇಷಗಳೇ ಕಂಡುಬರುತ್ತಿವೆ. ಹಲವೆಡೆ ಊರಿಗೆ ಊರುಗಳೇ ಕೊಚ್ಚಿ ಹೋಗಿವೆ. ಅಲ್ಲೊಂದು ಊರು ಇತ್ತಾ ಅಂತ ಕೇಳೋ ಪರಿಸ್ಥಿತಿ ಬಂದಿದೆ. ಹಟ್ಟಿಹೊಳೆಯ 20ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿವೆ. ಊರಿನಲ್ಲಿ ಪುಟ್ಟದಾದ ಹೊಳೆ ಹರಿದು ಹೋಗ್ತಿದೆ. ಮಳೆ ನಿಂತರೂ ಕೊಚ್ಚಿಹೋದ ಊರಿನೊಳಗೆ ಈಗ ತೊರೆಯದ್ದೇ ಸದ್ದಾಗಿದೆ.

    ಇತ್ತ ಜೋಡುಪಾಲ ದುರಂತದ ಪ್ರದೇಶದಲ್ಲೀಗ ನೀರವ ಮೌನ ಆವರಿಸಿದೆ. ಭೂಕುಸಿತದಿಂದ ಕೊಚ್ಚಿಹೋದ ರಸ್ತೆಗಳು, ಮಣ್ಣಿನಡಿಗೆ ಬಿದ್ದ ಮನೆಗಳು ಅಲ್ಲಿನ ಕರುಣಾಜನಕ ಸ್ಥಿತಿಗೆ ಕನ್ನಡಿ ಹಿಡಿಯುತ್ತೆ. ಜೋಡುಪಾಲದಲ್ಲಿ ಸಂತ್ರಸ್ತ ಜನರ ಸ್ಥಿತಿ ಒಂದ್ಕಡೆಯಾದರೆ, ಮೂಕಪ್ರಾಣಿಗಳ ಸ್ಥಿತಿ ಶೋಚನೀಯವಾದೆ. ಇನ್ನು ಆಗಸ್ಟ್ 17ರಂದು ಕಣ್ಮರೆಯಾಗಿದ್ದ ಹೆಬ್ಬಟ್ಟಗೇರಿ ಗ್ರಾಮದ ವೃದ್ದೆ ಉಮ್ಮವ್ವರ ಮೃತದೇಹ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ. ಇತ್ತ ಸಾಕುನಾಯಿ, ಬೆಕ್ಕು, ಜಾನುವಾರುಗಳಿಗೆ ಆಹಾರ ಇಲ್ಲದೆ ಸಂಕಷ್ಟ ಎದುರಾಗಿದೆ.

    ನಿರಾಶ್ರಿತರಿಗೆ ಮನೆ ನಿರ್ಮಾಣ ಮಾಡುವುದು ಸರ್ಕಾರದ ಕರ್ತವ್ಯ. 76 ಶಾಲೆಗಳು ರಿಪೇರಿಯಾಗಬೇಕಿದೆ. ಮಕ್ಕಳನ್ನು ಪಕ್ಕದೂರಿನ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ನಿರಾಶ್ರಿತ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲೇ ಶಿಕ್ಷಣ ನೀಡಲಾಗುವುದು. ಇನ್ನೆರಡು ದಿನದಲ್ಲಿ ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.

    ಸುಳ್ಯಕ್ಕೆ ಮಡಿಕೇರಿ, ಭಾಗಮಂಡಲ, ಕರಿಕೆ, ಪಾಣತ್ತೂರು, ಆಲೆಟ್ಟಿ ಮಾರ್ಗವಾಗಿ ಏಳು ಬಸ್‍ಗಳನ್ನು ಮಡಿಕೇರಿ ಡಿಪೋದಿಂದ ಹಾಕಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv