Tag: Nirmala Chennappa

  • ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಆಗುತ್ತೆ!

    ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಆಗುತ್ತೆ!

    ಬೆಂಗಳೂರು: ಬಿಗ್‍ಬಾಸ್ ಮನೆ ಎಂದರೆ ಹೈ ಡ್ರಾಮಾ ಎಂದು ಗೊತ್ತು. ಪ್ರತಿಯೊಬ್ಬರು ಒಂದೊಂದು ಮುಖವಾಡ ತೊಟ್ಟು ನಾಟಕವಾಡುತ್ತಾರೆ ಅಂತ ಅಲ್ಲಿಯವರೇ ಹೇಳುತ್ತಿರುತ್ತಾರೆ. ಒಬ್ಬೊಬ್ಬರ ಮುಖವಾಡ ಕಳಚಿ ಬೀಳುತ್ತಿದೆ. ಹೀಗಿರುವಾಗ ಮನೆಯವರ ದೃಷ್ಟಿಯಲ್ಲಿ ನಿರ್ಮಲಾ ಎಂದರೆ ಕೊಂಚ ವಿಭಿನ್ನ. ಇವರ ಕುರಿತಾಗಿ ಅವರದ್ದೇ ಟೀಮ್‍ನವರು ಮಾತನಾಡಿಕೊಂಡಿದ್ದಾರೆ.

    ಕೊರೊನಾ ವೈರಸ್ ಥೀಮ್‍ನಲ್ಲೊಂದು ಆಟವನ್ನು ಆಡಿಸಲಾಗುತ್ತಿದೆ. ವೈರಸ್ ಹಾಗೂ ಮನುಷ್ಯರ ಎಂದು ಆಟವಾಡುತ್ತಿದ್ದಾರೆ. ಆಟದ ವೇಳೆ ನಿರ್ಮಲಾ ಗಾಯಗೊಂಡಿದ್ದಾರೆ. ಆದರೆ ನಾನು ಆಟವಾಡುತ್ತೇನೆ ಎಂದು ಅವರ ತಂಡವದರ ಬಳಿ ನಿರ್ಮಲಾ ಕೇಳಿದ್ದಾರೆ. ಈ ವೇಳೆ ಶಂಕರ್ ಅಶ್ವಥ್, ನಿಧಿ ಸುಬ್ಬಯ್ಯ, ರಘು, ರಾಜೀವ್ ಅವರು ನಿರ್ಮಲಾ ಅವರ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

    ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಮಾಡುತ್ತಿದ್ದಾರೆ..!
    ನಿರ್ಮಲಾ ಅವರು ತಲೆಯನ್ನು ಯಾರೋ ಆಪರೇಟ್ ಮಾಡುತ್ತಿದ್ದಾರೆ. ಯಾರೋ ಕ್ರೇಜಿ ಅವರು ಎಂದು ಹೇಳಿ ನಕ್ಕಿದ್ದಾರೆ. ನಿರ್ಮಲಾ ಅವರು ಸಖತ್ ಟ್ಯಾಲೆಂಟ್. ಏನಾದರೂ ಹೇಳಿ ಸುಮ್ಮನಾಗಲ್ಲ ಕೈ ಬಾಯಿ ಆಡಿಸುತ್ತಾರೆ. ಆದರೆ ಜಗತ್ತಿನಲ್ಲಿ ಮುಖ್ಯವಾಗಿ ಕೈ, ಬಾಯಿ ಹಿಡಿತ ಇರಬೇಕು ಎಂದು ಹೇಳಿ ರಘು ಹೇಳಿದ್ದಾರೆ.

    ನಿರ್ಮಲಾನಂತೆ ಮಿಮಿಕ್ರಿ ಮಾಡಿದ ಶಂಕರ್ ಅಶ್ವಥ್!
    ಹೋಗು ಮನೆಗೆ ನಿನ್ನ ಹಣೆಬರ ಮನೆಗೆ ಹೋಗಬೇಕು ಎಂದೆ ಇದೆ, ದೇವರು ಇಲ್ಲಿವರೆಗೂ ಕರೆದುಕೊಂಡು ಬಂದು ಬಿಟ್ಟಿದ್ದಾನೆ. ಮನಸ್ಸು ಒಳ್ಳೆಯದು ಆದರೆ ಏನೊ ಹೊಸ ತರ ಮಾಡಲು ಹೋಗುತ್ತಾರೆ. ಈ ವೇಳೆ ನಿನ್ನ ಹೆಸರು ಏನು ಎಂದು ನಿರ್ಮಲಾ ಬಳಿ ಕೇಳಿದರೆ ಅವರ ಹೇಗೆ ಮತನಾಡುತ್ತಾರೆ ಎಂಬುದನ್ನು ಆ್ಯಕ್ಟ್ ಮಾಡಿ ಶಂಕರ್ ತೋರಿಸಿದ್ದಾರೆ ಈ ವೇಳೆ ಅಲ್ಲಿದ್ದ ವೈರಸ್ ಟೀಮ್ ತಂಡದ ಸದಸ್ಯರು ಅವರದ್ದೇ ಸದಸ್ಯರ ಕುರಿತಾಗಿ ಮಾತನಾಡಿ ಜೋರಾಗಿ ನಕ್ಕಿದ್ದಾರೆ.

    ಬಿಗ್ ಬಾಸ್ ಮನೆ ಒಂದು ವಾರ ಶಾಂತವಾಗಿತ್ತು. ಯಾವುದೇ ಜಗಳ ಎಂದು ಇರಲಿಲ್ಲಲ. ಆದರೆ ಬಿಗ್‍ಬಾಸ್ ಅಸಲಿ ಆಟ ಶುರುವಾಗಿದೆ. ಎಲ್ಲರ ನಗುಮುಖದ ಹಿಂದಿರುವ ಮುಖವಾಡ ಒಂದೊಂದಾಗಿಯೇ ಹೊರ ಬರುತ್ತಿದೆ. ಈ ಎಲ್ಲರ ನಗು, ಜಗಳ, ಆಟದ ಹಿಂದೆ ಇರುವವರು ಬಿಗ್‍ಬಾಸ್

  • ಬಿಗ್ ಮನೆಯಲ್ಲಿ ನಡೀತು ಜಡೆ ಜಗಳ..!

    ಬಿಗ್ ಮನೆಯಲ್ಲಿ ನಡೀತು ಜಡೆ ಜಗಳ..!

    ಬೆಂಗಳೂರು: ಬಿಗ್ ಮನೆಯಲ್ಲಿರುವ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಮುಖವಾಡಗಳಿವೆ. ಕೆಲವು ವಿಚಾರಗಳಲ್ಲಿ ಅವರ ಮುಖವಾಡ ಕಳಚಿ ಬೀಳುತ್ತದೆ. ಬಣ್ಣ ಬಣ್ಣದ ಮುಖವಾಡವನ್ನು ಕಳಚುವ ಕೆಲಸವನ್ನು ಬಿಗ್‍ಬಾಸ್ ಮಾಡುತ್ತಾರೆ. ಚಂದ್ರಕಲಾ ಮೋಹನ್, ನಿರ್ಮಲ ಚೆನ್ನಪ್ಪ ಅಡುಗೆ ಮನೆ ವಿಚಾರವಾಗಿ ಕಿತ್ತಾಡಿಕೊಂಡು ಸುದ್ದಿಯಾಗಿದ್ದಾರೆ.

    ರೂಲ್ಸ್ ಬ್ರೇಕ್ ಮಾಡಿದ ಚಂದ್ರಕಲಾ ಮೋಹನ್..!

    ಬಿಗ್‍ಬಾಸ್ ಮನೆಯಲ್ಲಿ ಕೆಲವು ರೂಲ್ಸ್ ಇರುತ್ತದೆ. ಅವುಗಳನ್ನು ಬ್ರೇಕ್ ಮಾಡಿದರೆ ತಪ್ಪಿಗೆ ತಕ್ಕ ಶಿಕ್ಷೆಯನ್ನು ಬಿಗ್‍ಬಾಸ್ ನೀಡುತ್ತಾರೆ. ಧನುಶ್ರೀ ಬಿಗ್‍ಬಾಸ್ ಮನೆಯ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಅವರಿಂದಲೆ ಅಡುಗಗೆ ಬೇಕಾದ ತರಕಾರಿಗಳನ್ನು ಕಟ್ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಆದರೆ ಚಂದ್ರಕಲಾ ತಾವೇ ತರಕಾರಿ ಕಟ್ ಮಾಡಿ ರೂಲ್ಸ್ ಬ್ರೇಕ್ ಮಾಡಿದ್ದರು. ಈ ತಪ್ಪಿಗೆ ಮನೆಯಲ್ಲಿರುವ ಕೆಲವು ತರಕಾರಿಗಳನ್ನು ಬಿಗ್ ಬಾಸ್ ವಾಪಸ್ ಪಡೆದಿದ್ದರು.

    ಈ ವಿಚಾರವಾಗಿ ಮನೆಯವರ ಮನಸ್ಸಲ್ಲಿ ಕೊಂಚ ಬೇಸರವಿತ್ತು. ಆದರೆ ಯಾರು ಕೂಡ ಆ ಬೇಸರವನ್ನು ತೋರಿಸಿಕೊಳ್ಳದೆ ಸಮಾಧಾನ ಮಾಡಿಕೊಂಡಿದ್ದರು. ಆದರೆ ಚಂದ್ರಕಲಾ ಮೋಹನ್ ತಮ್ಮ ತಪ್ಪನ್ನು ನಿರ್ಮಲ ಚೆನ್ನಪ್ಪ ಮೇಲೆ ಎತ್ತಿ ಹಾಕುವ ಪ್ರಯತ್ನವನ್ನು ಮಾಡಿದ್ದಾರೆ. ನಿರ್ಮಲಾ ನೀನು ಅಡುಗೆಗೆ ಬರುವುದಿಲ್ಲ. ಹೀಗಾಗಿ ನಾನೊಬ್ಬಳೇ ಅಡುಗೆ ಮಾಡುವ ಗಡಿಬಿಡಿಯಲ್ಲಿ ಹೀಗೆ ಆಯಿತು ಎಂದು ಅವರನ್ನು ಬಚಾವ್ ಮಾಡಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ.

    ತನ್ನದಲ್ಲದ ತಪ್ಪಿಗೆ ಕ್ಷಮೆ ಕೇಳಿದ ನಿರ್ಮಲಾ..!

    ನಿರ್ಮಲ ಅವರು ಕ್ಷಮೆ ಕೇಳಿದ್ದಾರೆ. ಆದರೂ ಕೂಡಾ ಚಂದ್ರಕಲಾ ಮೋಹನ್ ಏರು ಧ್ವನಿಯಲ್ಲಿ ಮಾತನಾಡಿದ್ದರು. ಈ ವಿಚಾರವನ್ನು ವಾರದ ಕಟ್ಟೆ ಪಂಚಾಯ್ತಿಯಲ್ಲಿ ಸುದೀಪ್ ಮಾತನಾಡಿದ್ದಾರೆ. ನಮ್ಮ ಮಾತುಗಳು ನಮ್ಮ ಸಣ್ಣತನವನ್ನು ಪ್ರದರ್ಶಿಸುತ್ತದೆ ಎಂದು ಕೆಲವು ಬುದ್ಧಿ ಮಾತುಗಳನ್ನು ಹೇಳಿ ಸಮಾಧಾನ ಮಾಡಿದ್ದಾರೆ.

    ಬಿಗ್‍ಬಾಸ್ ಮನೆ ಎಂದರೆ ಜಗಳ ಕಾಮನ್. ಒಬ್ಬರು ತಪ್ಪನ್ನು ಇನ್ನೊಬ್ಬರ ಮೇಲೆ ಬೆರಳು ಮಾಡಿ ತೋರಿಸುತ್ತಿರುವುದು ಹೊಸದೇನಲ್ಲ. ಆದರೆ ಯಾರು ತಪ್ಪು ಮಾಡಿದರೂ ಗುರುತಿಸಿ ಶಿಕ್ಷೆ ನೀಡುವವರು ಬಿಗ್‍ಬಾಸ್.