Tag: nirbhaya case

  • ಬೆಂಗ್ಳೂರಿನಲ್ಲೊಂದು ನಿರ್ಭಯಾ ಪ್ರಕರಣ – ಅತ್ಯಾಚಾರಗೈದು ಗುಪ್ತಾಂಗಕ್ಕೆ ಬಾಟಲ್ ಇರಿಸಿ ವಿಕೃತಿ!

    ಬೆಂಗ್ಳೂರಿನಲ್ಲೊಂದು ನಿರ್ಭಯಾ ಪ್ರಕರಣ – ಅತ್ಯಾಚಾರಗೈದು ಗುಪ್ತಾಂಗಕ್ಕೆ ಬಾಟಲ್ ಇರಿಸಿ ವಿಕೃತಿ!

    – ಅಸ್ಸಾಂ, ಬಾಂಗ್ಲಾದಲ್ಲಿ ವಿಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ
    – ಬಾಂಗ್ಲಾ ಮೂಲದ ಯುವತಿ ಮೇಲೆ ಪರಿಚಿತ ಯುವಕರಿಂದ ಅತ್ಯಾಚಾರ
    – ನಾಲ್ವರು ಕಾಮುಕರಿಗೆ ಇಬ್ಬರು ಯುವತಿಯರ ಸಾಥ್

    ಬೆಂಗಳೂರು: ರಾಜಧಾನಿಯಲ್ಲಿ ನಿರ್ಭಯಾ ರೀತಿಯ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟೆಲ್ ಇರಿಸಿ ವಿಕೃತಿ ಮರೆದಿದ್ದಾರೆ. 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ನಾಲ್ವರು ಕಾಮುಕರಿಗೆ ಇಬ್ಬರು ಯುವತಿಯರು ಸಾಥ್ ನೀಡಿದ್ದಾರೆ.

    ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹಕೀಲ್ ಬಂಧಿತ ಆರೋಪಿಗಳು. ಆರೋಪಿಗಳು ಬಾಂಗ್ಲಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸಂತ್ರಸ್ಥೆ ಸೇರಿದಂತೆ ಆರೋಪಿಗಳು ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ನಲ್ಲಿ ವಾಸವಾಗಿದ್ದರು. ಯುವತಿಯನ್ನು ಅತ್ಯಾಚಾರಗೈದು, ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ಘಟನೆಯನ್ನು ಕಿರಾತಕರು ವೀಡಿಯೋ ಮಾಡಿದ್ದಾರೆ. ಯುವತಿಯ ಮೇಲೆ ದ್ವೇಷಕ್ಕಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಅತ್ಯಾಚಾರದ ವೀಡಿಯೋ ವೈರಲ್ ಆಗಿತ್ತು. ಅಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಸ್ಸಾಂ ರಾಜ್ಯದ ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ. ವೀಡಿಯೋದಲ್ಲಿ ಬಾಂಗ್ಲಾ ಪ್ರಜೆಗಳು ಭಾಗಿಯಾಗಿದ್ದರಿಂದ ಅಲ್ಲಿನ ಪೊಲೀಸರಿಗೂ ಮಾಹಿತಿ ರವಾನಿಸಲಾಗಿತ್ತು. ಆ ಬಳಿಕ ಬಾಂಗ್ಲಾ ಪೊಲೀಸರು ಸಂತ್ರಸ್ತೆಯ ಕುಟುಂಬಸ್ಥರನ್ನ ಪತ್ತೆ ಮಾಡಿದ್ದಾರೆ. ಆ ನಂತರ ಘಟನೆ ಬೆಂಗಳೂರಿನಲ್ಲಿ ನಡೆದಿರೋದ ಬಗ್ಗೆ ತಿಳಿದು ಬಂದಿದೆ.

    ಆರೋಪಿಗಳು ಬೆಂಗಳೂರಿನ ಆವಲಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದರು. ಸದ್ಯ ರಾಮಮೂರ್ತಿ ನಗರ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ನಾಲ್ವರನ್ನು ಬಂಧಿಸಿರುವ ಪೊಲೀಸರು ಇನ್ನಿಬ್ಬರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಆರೋಪಿಗಳು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.

  • ನಿರ್ಭಯಾ ದೋಷಿಗಳನ್ನ ಕೈಯಾರ ಗಲ್ಲಿಗೇರಿಸಿದ್ದು ಖುಷಿ ತಂದಿದೆ: ಪವನ್ ಜಲ್ಲಾದ್

    ನಿರ್ಭಯಾ ದೋಷಿಗಳನ್ನ ಕೈಯಾರ ಗಲ್ಲಿಗೇರಿಸಿದ್ದು ಖುಷಿ ತಂದಿದೆ: ಪವನ್ ಜಲ್ಲಾದ್

    – ಅಪರಾಧಿಗಳನ್ನು ಗಲ್ಲಿಗೇರಿಸಿದ್ದನ್ನು ವಿವರಿಸಿದ ಪವನ್
    – ನನ್ನ ಮಕ್ಕಳು ಗಲ್ಲಿಗೇರಿಸುವ ವೃತ್ತಿಗೆ ಬರುವುದು ನನಗಿಷ್ಟವಿಲ್ಲ

    ಲಕ್ನೋ: ನಾನು ನನ್ನ ಧರ್ಮವನ್ನು ಪಾಲಿಸಿದ್ದೇನೆ. ಇದು ನಮ್ಮ ಪೂರ್ವಜರ ಕೆಲಸ. ಅಪರಾಧಿಗಳನ್ನು ನೇಣಿಗೆ ಹಾಕುವ ಮುನ್ನ ಪಶ್ಚಾತ್ತಾಪ ಪಡಬೇಕಿತ್ತು. ಆದರೆ ಹಾಗೆ ಮಾಡಲಿಲ್ಲ ಎಂದು ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ ಪವನ್ ಜಲ್ಲಾದ್ ಹೇಳಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ 5:30ಕ್ಕೆ ಗಲ್ಲಿಗೇರಿಸಲಾಯಿತು. ನೇಣು ಹಾಕುವ ಮನೆಯಲ್ಲಿ ಮಾತನಾಡಲು ಯಾರಿಗೂ ಅವಕಾಶವಿಲ್ಲ. ಆದ್ದರಿಂದ ಕೆಲಸವು ಸನ್ನೆಗಳ ಮೂಲಕ ಮಾತ್ರ ನಡೆಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: “ನಾಲ್ವರಲ್ಲಿ ಕೊನೆಯಾಸೆ ಹೇಳಿದ್ದು ವಿನಯ್ ಮಾತ್ರ”

    ನಾನು ಮಾರ್ಚ್ 17ರಂದು ತಿಹಾರ್ ಜೈಲಿಗೆ ಹೋಗಿದ್ದೆ. ಬಳಿಕ ಅಪರಾಧಿಗಳನ್ನು ಗಲ್ಲಿಗೇರಿಸಲು ಸಿದ್ಧತೆ ನಡೆಸಲಾಯಿತು. ಗುರುವಾರ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ನೇಣುಗಳನ್ನು ಸರಿಪಡಿಸಲಾಗಿತ್ತು. ಬಳಿಕ ಅಪರಾಧಿಗಳನ್ನು ಅಲ್ಲಿಗೆ ತಂದು ನಿಲ್ಲಿಸಲಾಗಿತ್ತು. ಮೊದಲು ಅಕ್ಷಯ್ ಮತ್ತು ಮುಖೇಶ್, ನಂತರ ಪವನ್ ಹಾಗೂ ವಿನಯ್‍ನನ್ನು ಹಲಗೆಯ ಮೇಲೆ ಕರೆದೊಯ್ಯಲಾಗಿತ್ತು. ಬಳಿಕ ಅಧಿಕಾರಿಗಳು ಸನ್ನೆಯ ಮೂಲಕ ಆಜ್ಞೆ ನೀಡಿದಾಗ ನೇಣು ಹಾಕಲಾಯಿತು ಎಂದು ಪವನ್ ಜಲ್ಲಾದ್ ವಿವರಿಸಿದ್ದಾರೆ.

    ನನ್ನ ಮಟ್ಟಿಗೆ, ಅಪರಾಧಿಗಳನ್ನು ನೇಣಿಗೆ ಹಾಕುವುದು ಸಮಾಜದಿಂದ ಕೆಟ್ಟ ಜನರನ್ನು ತೆಗೆದುಹಾಕುವ ದೊಡ್ಡ ವೃತ್ತಿಯಾಗಿದೆ. ನಾನು ಕೂಡ ಓರ್ವ ಮಗಳ ತಂದೆ. ಆದ್ದರಿಂದ ಯುವತಿಯ ಮೇಲೆ ಅತ್ಯಾಚಾರಿ ಎಸಗಿ, ಕೊಲೆಗೈದವರನ್ನು ಗಲ್ಲಿಗೇರಿಸಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿರ್ಭಯಾ ಪ್ರಕರಣದ ಅಪರಾಧಿಗಳು ಸಿಕ್ಕಿಬಿದ್ದಿದ್ದು ಹೇಗೆ?

    ಗಲ್ಲು ಶಿಕ್ಷೆ ಅಪರಾಧಿಗಳಿಗೆ ನೇಣು ಹಾಕುವ ಕೆಲಸವನ್ನು ಮಾಡುತ್ತಿರುವ ಪವನ್ ಜಲ್ಲಾದ್ ಅವರ ಕುಟುಂಬದಲ್ಲಿ ಮೂರನೇ ವ್ಯಕ್ತಿ. ಈ ಕುರಿತು ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಹತ್ಯೆಗೈದಿದ್ದವರಿಗೆ ನಮ್ಮ ಅಜ್ಜ ನೇಣು ಹಾಕಿದ್ದರು. ಅವರು ಕೊನೆಯದಾಗಿ ಅಪರಾಧಿಯೊಬ್ಬನನ್ನು 1989ರ ಜನವರಿಯಲ್ಲಿ ಗಲ್ಲಿಗೇರಿಸಿದ್ದರು. ಬಳಿಕ ನಮ್ಮ ತಂದೆ ಮಮ್ಮು ಜುಲ್ಲಾದ್ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಅಫ್ಜಲ್‍ಗೆ ನೇಣುಹಾಕಲು ಉತ್ಸುಕರಾಗಿದ್ದರು. ಆದರೆ ದುರದೃಷ್ಟವಶಾತ್ ಅಫ್ಜಲ್ ಮರಣದಂಡನೆಗೂ ಒಂಬತ್ತು ತಿಂಗಳ ಮೊದಲು ಅವರು ಫೆಬ್ರವರಿ 2013ರಲ್ಲಿ ನಿಧನರಾಗಿದ್ದರು. ನನ್ನ ತಂದೆ ತಮ್ಮ 47 ವರ್ಷಗಳ ಸೇವೆಯಲ್ಲಿ 12 ಕೈದಿಗಳನ್ನು ಗಲ್ಲಿಗೇರಿಸಿದ್ದಾರೆ ಎಂದು ತಿಳಿಸಿದ್ದಾರೆ.

    ‘ಭಾರತದಲ್ಲಿ ನೇಣು ಹಾಕುವ ವ್ಯಕ್ತಿಗಳಲ್ಲಿ ಹೆಚ್ಚಿನವರು ತಲಾತಲಾಂತದಿಂದ ಬಂದವರಾಗಿದ್ದಾರೆ. ಆದರೆ ನನ್ನ ಮಕ್ಕಳು ನನ್ನ ಹೆಜ್ಜೆಗಳನ್ನು ಅನುಸರಿಸಬೇಕೆಂದು ನಾನು ಬಯಸುವುದಿಲ್ಲ ಎಂದು ಪವನ್ ಜಲ್ಲಾದ್ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಮಗನನ್ನು ಜೈಲಿನಲ್ಲಿಯೇ ಸುರಕ್ಷಿತವಾಗಿ ನೋಡಿಕೊಳ್ಳಿ: ವೈರಲ್ ಆಯ್ತು ಅಪರಾಧಿ ತಾಯಿಯ ವಿಡಿಯೋ

  • ಅತ್ಯಾಚಾರದಂತಹ ಅಪರಾಧ ತಡೆಯಲು ಯೋಗ, ನೈತಿಕ ಶಿಕ್ಷಣ ಪಠ್ಯದ ಭಾಗವಾಗಬೇಕು: ಬಾಬಾ ರಾಮ್‍ದೇವ್

    ಅತ್ಯಾಚಾರದಂತಹ ಅಪರಾಧ ತಡೆಯಲು ಯೋಗ, ನೈತಿಕ ಶಿಕ್ಷಣ ಪಠ್ಯದ ಭಾಗವಾಗಬೇಕು: ಬಾಬಾ ರಾಮ್‍ದೇವ್

    – ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು
    – ಪೋಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು

    ನವದೆಹಲಿ: ಮಹಿಳೆಯರ ಮೇಲಿನ ಹಲ್ಲೆ ಹಾಗೂ ಅತ್ಯಾಚಾರದಂತಹ ಭೀಕರ ಅಪರಾಧಗಳನ್ನು ತಡೆಯಲು ಸರ್ಕಾರ ಯೋಗ ಮತ್ತು ನೈತಿಕ ಶಿಕ್ಷಣವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಯೋಗ ಗುರು ಬಾಬಾ ರಾಮ್‍ದೇವ್ ಅಭಿಪ್ರಾಯಪಟ್ಟಿದ್ದಾರೆ.

    ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅತ್ಯಾಚಾರದಂತಹ ಅಪರಾಧಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಬೇಕಾದಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಯೋಗ ಮತ್ತು ನೈತಿಕ ಶಿಕ್ಷಣವನ್ನು ಪಠ್ಯದ ಭಾಗವಾಗಿಸಬೇಕು. ಪೋಷಕರು ಸಹ ತಮ್ಮ ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.

    ನರಭಕ್ಷಕರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ನ್ಯಾಯಾಂಗವು ಇತಿಹಾಸ ನಿರ್ಮಿಸಿದೆ. ಇಂತಹ ಕೃತ್ಯ ಎಸಗಿದವರಿಗೆ ಯಾವ ರೀತಿಯ ಶಿಕ್ಷೆಯಾಗುತ್ತದೆ ಎಂಬುದನ್ನು ತೋರಿಸಿದೆ. ಅಲ್ಲದೆ ಮುಂದೆ ಯಾರಾದರೂ ಇಂತಹ ಘೋರ ಅಪರಾಧಗಳನ್ನು ಮಾಡುವವರಿಗೆ ಭಯ ಹುಟ್ಟಿಸುವಂತೆ ಮಾಡಿದೆ. ಈ ಪ್ರಕರಣವು ವಿಶ್ವ ಮಟ್ಟದಲ್ಲಿ ನಮ್ಮ ದೇಶದ ಚಿತ್ರಣವನ್ನು ಬಿಂಬಿಸಿದೆ ಎಂದು ಬಾಬಾ ರಾಮ್‍ದೇವ್ ಅಭಿಪ್ರಾಯಪಟ್ಟಿದ್ದಾರೆ.

    2012ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ದೊರಕಿದೆ. ನಿರ್ಭಯಾ ಪ್ರಕರಣದ ದೋಷಿಗಳಿಗೆ ಇಂದು ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ.

    ಇಂದು ಬೆಳಗಿನ ಜಾವ ಮೂರು ಗಂಟೆವರೆಗೂ ದೋಷಿಗಳು ಡೆತ್ ವಾರೆಂಟ್ ಮುಂದೂಡಲು ಪ್ರಯತ್ನಿಸಿದ್ದರು. ಪಟಿಯಾಲಾ ಹೌಸ್ ಕೋರ್ಟ್ ನೀಡಿರುವ ಡೆತ್ ವಾರೆಂಟ್ ಗೆ ತಡೆ ನೀಡುವಂತೆ ಗುರುವಾರ ರಾತ್ರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನಲ್ಲಿ ಅರ್ಜಿ ವಜಾಗೊಳ್ಳುತ್ತಿದ್ದಂತೆ ಮಧ್ಯರಾತ್ರಿ ಸುಪ್ರೀಂಕೋರ್ಟಿಗೆ ಹೋಗಿ ತುರ್ತು ಅರ್ಜಿ ವಿಚಾರಣೆ ನಡೆಸಬೇಕೆಂದು ದೋಷಿಗಳು ಮನವಿ ಮಾಡಿಕೊಂಡಿದ್ದರು.

    ಮಧ್ಯರಾತ್ರಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿತು. ತದನಂತರ ಅರ್ಜಿಯನ್ನು ವಜಾಗೊಳಿಸಿತು. ಇತ್ತ ಅರ್ಜಿ ವಜಾಗೊಳ್ಳುತ್ತಿದ್ದಂತೆ ತಿಹಾರ್ ಜೈಲಿನ ಮುಂದೆ ಜನ ಸೇರಲು ಆರಂಭಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ತಿಹಾರ ಜೈಲಿನ ಆವರಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.

  • ನಾನು ನಿರ್ಭಯಾ ತಾಯಿ ಪಾತ್ರ ಮಾಡ್ತೇನೆ: ಮಾಳವಿಕಾ

    ನಾನು ನಿರ್ಭಯಾ ತಾಯಿ ಪಾತ್ರ ಮಾಡ್ತೇನೆ: ಮಾಳವಿಕಾ

    – ಇಂದಿನ ರಾಷ್ಟ್ರೀಯ ಹೀರೋ ಆಶಾದೇವಿ

    ಬೆಂಗಳೂರು: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಯಾರಾದರೂ ಸಿನಿಮಾ ಮಾಡಿದರೆ ಹೇಳಿ ನಾನು ನಿರ್ಭಯಾ ತಾಯಿ ಪಾತ್ರವನ್ನು ಮಾಡುತ್ತೇನೆ ಎಂದು ಹಿರಿಯ ನಟಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.

    ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು. ಇಂದು ನಿರ್ಭಯಾ ದೋಷಿಗಳಿಗೆ ಮರಣದಂಡನೆ ಆಗಿದೆ. ನಿರ್ಭಯಾಳಿಗೆ ಇಂದು ನ್ಯಾಯ ಸಿಕ್ಕಿದೆ. ಇದು ದೇಶದ ಪ್ರತಿಯೊಬ್ಬ ಮಗಳ ಗೆಲವು ಎಂದು ನಿರ್ಭಯಾ ತಾಯಿ ಆಶಾದೇವಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದರು. ಇದೀಗ ನಿರ್ಭಯಾ ತಾಯಿ ಮಾತಿಗೆ ನಟಿ ಮಾಳವಿಕಾ ಅವಿನಾಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಿರ್ಭಯಾ ಪ್ರಕರಣದ ಅಪರಾಧಿಗಳು ಸಿಕ್ಕಿಬಿದ್ದಿದ್ದು ಹೇಗೆ?

    ಮಾಳವಿಕಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ನಿರ್ಭಯಾ ದೋಷಿಗಳ ಗಲ್ಲು ಶಿಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಯಾರಾದರೂ ಸಿನಿಮಾ ಮಾಡುತ್ತಿದ್ದರೆ ಹೇಳಿ, ನಾನು ನಿರ್ಭಯಾ ತಾಯಿ ಆಶಾದೇವಿ ಪಾತ್ರ ಮಾಡುತ್ತೇನೆ. ಇಂದಿನ ರಾಷ್ಟ್ರೀಯ ಹೀರೋ ಅವರು. ಎಂತಹ ತಾಯಿ” ಎಂದು ಮಾಳವಿಕಾ ನಿರ್ಭಯಾ ತಾಯಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಮಗನನ್ನು ಜೈಲಿನಲ್ಲಿಯೇ ಸುರಕ್ಷಿತವಾಗಿ ನೋಡಿಕೊಳ್ಳಿ: ವೈರಲ್ ಆಯ್ತು ಅಪರಾಧಿ ತಾಯಿಯ ವಿಡಿಯೋ 

    ನಿರ್ಭಯಾ ತಾಯಿ ಹೇಳಿದ್ದೇನು?
    ಹಂತಕರಿಗೆ ಗಲ್ಲು ಆಗುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಆಶಾದೇವಿ, ನಿರ್ಭಯಾಳಿಗೆ ಇಂದು ನ್ಯಾಯ ಸಿಕ್ಕಿದೆ. ಇದು ದೇಶದ ಪ್ರತಿಯೊಬ್ಬ ಮಗಳ ಗೆಲವು. ಸರ್ಕಾರ, ರಾಷ್ಟ್ರಪತಿ ಮತ್ತು ದೇಶದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ. ಅಪರಾಧಿಗಳು ಪದೇ ಪದೇ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಮೂರು ಬಾರಿ ಡೆತ್ ವಾರೆಂಟ್ ಮುಂದೂಡಿಕೆಯಾಗಿತ್ತು. ಹಾಗಾಗಿ ನ್ಯಾಯ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಎದ್ದಿತ್ತು. ಇಂದು ಏಕಕಾಲದಲ್ಲಿ ನಾಲ್ವರಿಗೂ ಗಲ್ಲಿಗೆ ಹಾಕಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನಿರ್ಭಯಾ ಪ್ರಕರಣ- 2012ರಿಂದ 2020ರವರೆಗೆ ಏನೇನಾಯ್ತು?

    ನಿರ್ಭಯಾ ತಂದೆ ಹೇಳಿದ್ದೇನು?
    ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಭಯಾ ತಂದೆ ಬದ್ರಿನಾಥ್ ಸಿಂಗ್, ಅಪರಾಧಿಗಳು ಕೊನೆಯವರೆಗೆ ಹೋರಾಟ ಮಾಡಿದ್ದಾರೆ. ಆದರೆ ನಮ್ಮ ವಕೀಲರು ಕೂಡ ಪ್ರತಿ ಕ್ಷಣ, ಪ್ರತಿ ನಿಮಿಷ ಹೋರಾಡಿದ್ದಾರೆ. ನಾವು ಇದ್ದ ಕಡೆ ಅವರು ಇರುತ್ತಿದ್ದರು. ಆದರೆ ಕೊನೆಯದಾಗಿ ನಮಗೆ ಜಯವಾಯಿತು. ಏಕೆಂದರೆ ನಾವು ಸತ್ಯದ ಕಡೆ ಇದ್ದವು ಎಂದು ಪ್ರತಿಕ್ರಿಯಿಸಿದರು.

    2012ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ದೊರಕಿದೆ. ನಿರ್ಭಯಾ ಪ್ರಕರಣದ ದೋಷಿಗಳಿಗೆ ಇಂದು ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ. ಇಂದು ಬೆಳಗಿನ ಜಾವ ಮೂರು ಗಂಟೆವರೆಗೂ ದೋಷಿಗಳು ಡೆತ್ ವಾರೆಂಟ್ ಮುಂದೂಡಲು ಪ್ರಯತ್ನಿಸಿದ್ದರು. ಪಟಿಯಾಲಾ ಹೌಸ್ ಕೋರ್ಟ್ ನೀಡಿರುವ ಡೆತ್ ವಾರೆಂಟ್‍ಗೆ ತಡೆ ನೀಡುವಂತೆ ಗುರುವಾರ ರಾತ್ರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.

    ಹೈಕೋರ್ಟಿನಲ್ಲಿ ಅರ್ಜಿ ವಜಾಗೊಳ್ಳುತ್ತಿದ್ದಂತೆ ಮಧ್ಯರಾತ್ರಿ ಸುಪ್ರೀಂಕೋರ್ಟಿಗೆ ಹೋಗಿ ತುರ್ತು ಅರ್ಜಿ ವಿಚಾರಣೆ ನಡೆಸಬೇಕೆಂದು ದೋಷಿಗಳು ಮನವಿ ಮಾಡಿಕೊಂಡಿದ್ದರು. ಮಧ್ಯರಾತ್ರಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿತು. ತದನಂತರ ಅರ್ಜಿಯನ್ನು ವಜಾಗೊಳಿಸಿತ್ತು.

  • ನಿರ್ಭಯಾ ಪ್ರಕರಣದ ಅಪರಾಧಿಗಳು ಸಿಕ್ಕಿಬಿದ್ದಿದ್ದು ಹೇಗೆ?

    ನಿರ್ಭಯಾ ಪ್ರಕರಣದ ಅಪರಾಧಿಗಳು ಸಿಕ್ಕಿಬಿದ್ದಿದ್ದು ಹೇಗೆ?

    ನವದೆಹಲಿ: ನಿರ್ಭಯಾಳನ್ನು ಅತ್ಯಾಚಾರಿಗಳು ಎಷ್ಟರ ಮಟ್ಟಿಗೆ ಕ್ರೌರ್ಯ ಮೆರೆದಿದ್ದರೆಂದರೆ, ಆಕೆಯ ಬಟ್ಟೆಗಳನ್ನು ಕಳಚಿ ಬಸ್ ಅನ್ನು ಸ್ವಚ್ಛಗೊಳಿಸಿದ್ದರು. ಆಗ ಬಟ್ಟೆ ಹರಿದು ಹೋಗಿತ್ತು. ಅಷ್ಟೇ ಅಲ್ಲದೆ ದೋಷಿಗಳು ಯುವತಿ ಮತ್ತು ಸ್ನೇಹಿತನ ಎಲ್ಲ ವಸ್ತುಗಳನ್ನು ಸಹ ಲೂಟಿ ಮಾಡಿದ್ದರು. ಕೆಲವು ವಸ್ತುಗಳು ಬಿಹಾರದ ಔರಂಗಾಬಾದ್‍ನಿಂದ ಮತ್ತು ಕೆಲವು ರಾಜಸ್ಥಾನದ ಕರೌಲಿ ಗ್ರಾಮದಲ್ಲಿ ಪೊಲೀಸರಿಗೆ ದೊರೆತಿದ್ದವು. ಜೊತೆಗೆ ದೆಹಲಿಯ ಕೊಳೆಗೇರಿಯಲ್ಲಿರುವ ರವಿದಾಸ್ ಶಿಬಿರದಿಂದ ಪೊಲೀಸರು ಅನೇಕ ವಿಷಯಗಳನ್ನು ವಶಪಡಿಸಿಕೊಂಡಿದ್ದರು.

    ಯಾರೋ ಫೋನ್ ಇಟ್ಟುಕೊಂಡ್ರೆ, ಯಾರೋ ಶೂ ತೆಗೆದುಕೊಂಡ್ರು:
    16 ಡಿಸೆಂಬರ್ 2012ರಂದು ಯುವತಿ ತನ್ನ ಸ್ನೇಹಿತನೊಂದಿ ರಾತ್ರಿ 9 ಗಂಟೆಗೆ ಬಸ್ ಹತ್ತಿದ ಕೂಡಲೇ ದುಷ್ಕರ್ಮಿಗಳು ಅವರನ್ನು ಸ್ನೇಹಿತರು ಅವಳನ್ನು ನಿಂದಿಸಲು ಪ್ರಾರಂಭಿಸಿದ್ದರು. ಎಲ್ಲಾ 6 ಅಪರಾಧಿಗಳು ಆ ರಾತ್ರಿ ಹೆಚ್ಚು ಮಾದಕ ವ್ಯಸನಿಯಾಗಿದ್ದರು. ಓರ್ವ ಯುವತಿಯ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದ. ಮತ್ತೊಬ್ಬ ಯುವತಿಯನ್ನು ಹಿಡಿದ್ದ. ನಂತರ ಎಲ್ಲರೂ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಷ್ಟೇ ಅಲ್ಲದೆ ಅಪರಾಧಿಗಳು ಅವರಿಂದ ಎಲ್ಲವನ್ನೂ ದೋಚಿದ್ದರು.

    ಹಣ, ಚಿನ್ನಾಭರಣ ಸೇರಿದಂತೆ ಅನೇಕ ವಸ್ತುಗಳನ್ನು ದೋಚಿದ್ದ ಕ್ರೂರಿಗಳು ಯುವತಿ ಹಾಗೂ ಸ್ನೇಹಿತನನ್ನು ಬಸ್ಸಿನಿಂದ ಕೆಳಕ್ಕೆ ಎಸೆದಿದ್ದರು. ನಂತರ ಎಲ್ಲಾ ವಸ್ತುಗಳನ್ನು ತಮ್ಮೊಳಗೆ ಹಂಚಿಕೊಂಡಿದ್ದರು. ಅಪರಾಧಿ ಅಕ್ಷಯ್ ಯುವತಿಯ ಸ್ನೇಹಿತನ ಬೆಳ್ಳಿ ಮತ್ತು ಚಿನ್ನದ ಉಂಗುರದೊಂದಿಗೆ ಬಿಹಾರಕ್ಕೆ ಹೋಗಿದ್ದ. ಮುಖೇಶ್ ಸಿಂಗ್ ಯುವಕನ ಸ್ಮಾರ್ಟ್ ಫೋನ್ ತೆಗೆದುಕೊಂಡು ರಾಜಸ್ಥಾನದ ಕರೌಲಿಯಲ್ಲಿರುವ ತನ್ನ ಹಳ್ಳಿಗೆ ತೆರಳಿದ್ದ. ಮುಖ್ಯ ಅಪರಾಧಿ ರಾಮ್ ಸಿಂಗ್ ಯುವತಿಯ ತಾಯಿಯ ಡೆಬಿಟ್ ಕಾರ್ಡ್ ಇಟ್ಟುಕೊಂಡಿದ್ದರೆ, ಅಪ್ರಾಪ್ತ ಅತ್ಯಾಚಾರಿ ಯುವತಿಯ ಬಳಿಯಿದ್ದ ಹಣವನ್ನು ಇಟ್ಟುಕೊಂಡಿದ್ದ. ಮತ್ತೊರ್ವ ಅಪರಾಧಿ ವಿನಯ್ ಶರ್ಮಾ ಯುವಕನ ಶೂ, ಯುವತಿಯ ನೋಕಿಯಾ ಮೊಬೈಲ್ ಫೋನ್ ಹಾಗೂ ಪವನ್ ಗುಪ್ತಾ ಯುವಕನ ಸೊನಾಟಾ ವಾಚ್ ಮತ್ತು 1,000 ರೂ. ಇಟ್ಟುಕೊಂಡಿದ್ದ.

    ಸಾಮೂಹಿಕ ಅತ್ಯಾಚಾರದ ಮೂರು ದಿನಗಳ ನಂತರ ಅಂದ್ರೆ 2012ರ ಡಿಸೆಂಬರ್ 19ರಂದು ಮಧ್ಯಾಹ್ನ 3:30 ಕ್ಕೆ ಯುವತಿಯ ಸ್ನೇಹಿತ ತನ್ನ ಹೇಳಿಕೆಯನ್ನು ದಾಖಲಿಸಿದ್ದ. ತನ್ನ ಹೇಳಿಕೆಯಲ್ಲಿ ಯುವಕ, ‘ಅಪರಾಧಿಗಳು ಆತನಿಂದ ಸ್ಯಾಮ್‍ಸಂಗ್ ಸ್ಮಾರ್ಟ್‍ಫೋನ್‍ಗಳು, 1000 ರೂ. ಇದ್ದ ವ್ಯಾಲೆಟ್, ಸಿಟಿಬ್ಯಾಂಕ್‍ನ ಕ್ರೆಡಿಟ್ ಕಾರ್ಡ್, ಐಸಿಐಸಿಐ ಬ್ಯಾಂಕಿನ ಡೆಬಿಟ್ ಕಾರ್ಡ್, ಕಂಪನಿ ಐಡಿ ಕಾರ್ಡ್, ದೆಹಲಿ ಮೆಟ್ರೊದ ಸ್ಮಾರ್ಟ್ ಕಾರ್ಡ್ ಅನ್ನು ಕಿತ್ತುಕೊಂಡಿದ್ದಾರೆ. ಇದರೊಂದಿಗೆ ಚಿನ್ನ ಮತ್ತು ಬೆಳ್ಳಿಯ ಉಂಗುರ, ಬಟ್ಟೆ ಮತ್ತು ಶೂಗಳನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಸ್ನೇಹಿತೆಯ ನೋಕಿಯಾ ಮೊಬೈಲ್ ಮತ್ತು ಪರ್ಸ್ ಅನ್ನು ದುಷ್ಕರ್ಮಿಗಳು ಕಸಿದುಕೊಂಡಿದ್ದಾರೆ’ ಎಂದು ತಿಳಿಸಿದ್ದ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿ ಮೊಬೈಲ್ ಫೋನ್ ಟ್ರ್ಯಾಪ್ ಮಾಡಿದ್ದಾಗ ಅಪರಾಧಿಗಳು ಸಿಕ್ಕಿಬಿದ್ದಿದ್ದರು. ಬಳಿಕ ಅಪರಾಧಿಗಳಿಂದ ಯುವತಿ ಹಾಗೂ ಆಕೆಯ ಸ್ನೇಹಿತನಿಂದ ದೋಚಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

  • ನಿರ್ಭಯಾ ಪ್ರಕರಣ- 2012ರಿಂದ 2020ರವರೆಗೆ ಏನೇನಾಯ್ತು?

    ನಿರ್ಭಯಾ ಪ್ರಕರಣ- 2012ರಿಂದ 2020ರವರೆಗೆ ಏನೇನಾಯ್ತು?

    ನವದೆಹಲಿ: 2012ರ ಡಿಸೆಂಬರ್ 16ರಂದು ಸ್ನೇಹಿತನ ಜೊತೆ ಸಿನಿಮಾ ನೋಡಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಬರುವ ವೇಳೆ ಘೋರ ದುರಂತ ನಡೆದಿತ್ತು. ಇಬ್ಬರಿಗೆ ಡ್ರಾಪ್ ನೀಡುವ ನೆಪದಲ್ಲಿ ಕಾಮುಕುರನ್ನ ಬಸ್ ಗೆ ಹತ್ತಿಸಿಕೊಂಡಿದ್ದಾರೆ. ಕೆಲ ಸಮಯದ ಬಳಿಕ ಬಸ್ ನಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಸಂತ್ರಸ್ತೆಯ ಗುಪ್ತಾಂಗಕ್ಕೆ ರಾಡ್‍ನಿಂದ ಚುಚ್ಚಿ ಹಿಂಸೆ ಕೊಟ್ಟಿದ್ದರು. ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಬಸ್ ನಿಂದ ತಳ್ಳಿ ಕಾಮುಕರು ಪರಾರಿಯಾಗಿದ್ರು. ಯುವತಿ ಮತ್ತು ಸ್ನೇಹಿತನನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

    ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 13 ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿದ್ದ ಯುವತಿ, ಚಿಕಿತ್ಸೆ ಫಲಿಸದೇ ಡಿ. 29ರಂದು ಸಾವನ್ನಪ್ಪಿದ್ದರು. ಇದನ್ನೂ ಓದಿ: ನಿರ್ಭಯಾ ಆತ್ಮಕ್ಕೆ ಮುಕ್ತಿ- ಕೊನೆಗೂ ಗಲ್ಲು ಆಯ್ತು ಹಂತಕರಿಗೆ

    ಘಟನೆ ನಡೆದ 72 ಗಂಟೆಯಲ್ಲಿ ಪೊಲೀಸರು ಕಾಮುಕನ್ನು ಬಂಧಿಸಿದ್ದರು. ಡಿಸೆಂಬರ್ 17, 2012ರಂದು 17 ವರ್ಷದ ಓರ್ವ ಅಪ್ರಾಪ್ತ ಸೇರಿ 6 ಆರೋಪಿಗಳ ಗುರುತು ಪತ್ತೆಯಾಗಿತ್ತು. ಡಿಸೆಂಬರ್ 18ರಂದು ಅಪ್ರಾಪ್ತ ಬಾಲಕ ಸೇರಿ ಆರು ಆರೋಪಿಗಳ ಬಂಧನವಾಗಿತ್ತು. ದೆಹಲಿಯಲ್ಲಿ ಬಾಲಾಪರಾದಿ, ಹರಿಯಾಣ, ಬಿಹಾರದಲ್ಲಿ ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಡಿಸೆಂಬರ್ 20 ನಿರ್ಭಯಾ ಸ್ನೇಹಿತ ಮತ್ತು ಡಿಸೆಂಬರ್ 21ರಂದು ಸಂತ್ರಸ್ತೆಯ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಇದನ್ನೂ ಓದಿ: ಹಂತಕರಿಗೆ ಗಲ್ಲು-ದೋಷಿಗಳ ಪರ ವಕೀಲ ಎ.ಪಿ.ಸಿಂಗ್ ಮೊದಲ ಪ್ರತಿಕ್ರಿಯೆ

    ಜನವರಿ 3, 2013ರಂದು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಮಾರ್ಚ್ 11, 2013ರಂದು ಪ್ರಕರಣದಲ್ಲಿ ಅಪರಾಧಿಯಾಗಿದ್ದ ರಾಮ್‍ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಆಗಸ್ಟ್ 31, 2013ರಂದು ಬಾಲಾಪರಾಧಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ ಬಾಲಮಂದಿರಕ್ಕೆ ರವಾನೆ ಮಾಡಲಾಗಿತ್ತು. ಸೆಪ್ಟೆಂಬರ್ 13, 2013ಕ್ಕೆ ಉಳಿದ ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ದೆಹಲಿಯ ಸಾಕೇತ್ ನ್ಯಾಯಾಲಯ ಆದೇಶ ನೀಡಿತ್ತು. ಮಾ.15, 2014ರಂದು ಕೆಳ ನ್ಯಾಯಾಲಯದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು. ಇನ್ನು ಶಿಕ್ಷೆಗೆ ಗುರಿಯಾಗಿದ್ದ ಬಾಲಾಪರಾಧಿ ಡಿ.18, 2015ರಂದು ಬಿಡುಗಡೆ ಹೊಂದಿದ್ದನು. ಇದನ್ನೂ ಓದಿ: ನಿರ್ಭಯಾ ಬದುಕಿದ್ದರೆ ಹೆಚ್ಚು ಖುಷಿಯಾಗುತ್ತಿತ್ತು: ವಕೀಲೆ ಸೀಮಾ

    ಏ.3, 2016 ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ವಿಚಾರಣೆ ಕೈಗೆತ್ತಿಕೊಂಡಿತ್ತು. ಈ ಪೀಠದಲ್ಲಿ ಕರ್ನಾಟಕದ ಇಬ್ಬರು ಜಡ್ಜ್‍ಗಳು (ವಿ.ಗೋಪಾಲ ಗೌಡ ಹಾಗೂ ಕುರಿಯನ್ ಜೋಸೆಫ್) ಇದ್ದರು. ಜುಲೈ 11, 2016ರಲ್ಲಿ ನ್ಯಾಯಾಪೀಠದ ಬದಲಾವಣೆ ಆಯ್ತು. ನ್ಯಾ. ದೀಪಕ್ ಮಿಶ್ರಾ, ಆರ್.ಭಾನುಮತಿ, ಅಶೋಕ್ ಭೂಷಣ್ ಒಳಗೊಂಡ ಹೊಸ ಸಮಿತಿ ನೇಮಕಗೊಂಡಿತು. ಇದನ್ನೂ ಓದಿ: ಗಲ್ಲು ವಿಧಿಸುವ ಪ್ರಕ್ರಿಯೆ ಹೇಗಿತ್ತು? ಗಲ್ಲು ಶಿಕ್ಷೆಗೆ ಒಳಗಾದವರ್ಯಾರು?

    ಸೆಪ್ಟೆಂಬರ್ 2, 2016 ಡಿಫೆನ್ಸ್ ಅಡ್ವೊಕೇಟ್ ಎಂ.ಎಲ್. ಶರ್ಮಾ ಅಹವಾಲು ಸಲ್ಲಿಕೆಯಾಯ್ತು. ಮಾ.6, 2017ಕ್ಕೆ ಆರೋಪಿಗಳಿಂದ ಹೆಚ್ಚುವರಿ ಅಫಡವಿಟ್ ಸಲ್ಲಿಕೆ. ಮಾರ್ಚ್ 27, 2017ಕ್ಕೆ ವಿಚಾರಣೆ ಮುಕ್ತಾಯಗೊಳಿಸಿ ತೀರ್ಪನ್ನು ಕಾಯ್ದಿರಿಸಲಾಯ್ತ. ಮೇ 5, 2017ರಂದ ಸುಪ್ರೀಂ ಅಪರಾಧಿಗಳಿಗೆ ಮರಣ ದಂಡನೆ ಕಾಯಂಗೊಳಿಸಿ ತೀರ್ಪು ನೀಡಿತು. ನವೆಂಬರ್ 13, 2017ಕ್ಕೆ ದೋಷಿಗಳು ಸುಪ್ರೀಂಗೆ ಮರುಪರಿಶೀಲನಾ ಅರ್ಜಿ ಸಲ್ಲಿದರು. ಜುಲೈ 9, 2018ಕ್ಕೆ ಪುನರ್ ಪರಿಶೀಲನಾ ಅರ್ಜಿ ತಿರಸ್ಕೃತಗೊಳಿಸಿ ನ್ಯಾಯಾಲಯ ಗಲ್ಲು ಖಾಯಂಗೊಳಿಸ್ತು. ಡಿಸೆಂಬರ್ 6, 2019 ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕøತಗೊಳಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇಂದು ನಾಲ್ವರನ್ನು ಏಕಕಾಲದಲ್ಲಿ ಗಲ್ಲಿಗೆ ಏರಿಸಲಾಯ್ತು. ಇದನ್ನೂ ಓದಿ: ನ್ಯಾಯ ಸಿಕ್ಕಿದೆ ಎಂದು ನಾವು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ: ನಿರ್ಭಯಾ ತಂದೆ

  • ಹಂತಕರಿಗೆ ಗಲ್ಲು-ದೋಷಿಗಳ ಪರ ವಕೀಲ ಎ.ಪಿ.ಸಿಂಗ್ ಮೊದಲ ಪ್ರತಿಕ್ರಿಯೆ

    ಹಂತಕರಿಗೆ ಗಲ್ಲು-ದೋಷಿಗಳ ಪರ ವಕೀಲ ಎ.ಪಿ.ಸಿಂಗ್ ಮೊದಲ ಪ್ರತಿಕ್ರಿಯೆ

    ನವದೆಹಲಿ: ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಆಗಿದೆ. ಮೊದಲ ಬಾರಿಗೆ ಏಕಕಾಲದಲ್ಲಿ ನಾಲ್ವರನ್ನು ಗಲ್ಲು ಶಿಕ್ಷೆಗೆ ಒಳಪಡಿಸಲಾಗಿದೆ. ಸುಪ್ರೀಂಕೋರ್ಟ್ ನಲ್ಲಿ ದೋಷಿಗಳ ಅರ್ಜಿ ವಜಾಗೊಳ್ಳುತ್ತಿದ್ದಂತೆ ಅಪರಾಧಿಗಳ ಪರ ವಾದ ಮಂಡಿಸಿದ್ದ ವಕೀಲ ಎ.ಪಿ.ಸಿಂಗ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದರು.

    ಸಂವಿಧಾನ ಅನುಗುಣವಾಗಿ ಎಲ್ಲ ಕಾರ್ಯಗಳು ನಡೆಬೇಕಿತ್ತು. ಹಾಗಾಗಿ ರಾತ್ರಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮುಂದೆ ಹೋಗಿ ಜೀವ ಉಳಿಸುವ ಕೆಲಸ ಮಾಡಲಾಯ್ತು. ನ್ಯಾಯಾಲಯದ ಮುಂದೆ ನಾನು ಹೊಸ ವಾದವನ್ನೇ ಮಂಡಿಸಿದ್ದೇನೆ. ದೋಷಿ ಅಕ್ಷಯ್ ಪುತ್ರ ತಂದೆಯನ್ನು ಕಾಣಲು ಬಿಹಾರದಿಂದ ಬಂದಿದ್ದಾನೆ. ತಂದೆಯ ಭೇಟಿಗೆ ಅವಕಾಶ ನೀಡಬೇಕಿತ್ತು. ಮುಖೇಶ್ ಕುಟುಂಬಸ್ಥರು ದೆಹಲಿಯ ನಿವಾಸಿಗಳು. ಆದ್ರೆ ಅಕ್ಷಯ್ ಕುಟುಂಬ ಬಿಹಾರನ ನಕ್ಸಲ್ ಪೀಡಿತ ಪ್ರದೇಶದಲ್ಲಿದೆ. ಎಂಟು ವರ್ಷದ ಮಗನಿಗೆ ತಂದೆಯನ್ನ ನೋಡುವ ಅವಕಾಶ ಸಿಗಲಿಲ್ಲ.

    ಒಂದು ಮಗು ತಂದೆಯನ್ನ ನೋಡಿದ್ರೆ ಏನು ಆಗುತ್ತಿತ್ತು. ಮಗನಿಗೆ ತಂದೆಯ ಭೇಟಿಗೆ ಅವಕಾಶ ನೀಡದಿರೋದು ಇತಿಹಾಸದಲ್ಲಿ ಇರಲಿದೆ. ಇಂದು ಬಾಲ ವಿಕಾಸ ಇಲಾಖೆಗೆ ನಾಚಿಕೆ ಆಗಬೇಕು. ಅಕ್ಷಯ್ ನನ್ನು ನೀವು ಬಲತ್ಕಾರಿ, ಹಂತಕ ಎಂದು ಹೇಳುತ್ತೀರಿ. ಇಲ್ಲಿ ಆತನ ಪುತ್ರನ ತಪ್ಪೇನಿದೆ. ಮುಂದೊಂದು ದಿನ ಅಕ್ಷಯ್ ಪುತ್ರ ದೊಡ್ಡವನಾಗಿ ಸಂವಿಧಾನ ಓದಿದ್ರೆ, ಈ ವ್ಯವಸ್ಥೆ, ಜೈಲು ನಿಯಮ, ಮಾಧ್ಯಮ ತಂದೆಯ ಭೇಟಿಗೆ ಅವಕಾಶ ಕಲ್ಪಿಸಲಿಲ್ಲ ಎಂಬ ಭಾವನೆ ಮೂಡುತ್ತದೆ. ನಿನ್ನೆ ಹೋದರೆ ಕೊರೊನಾ ಎಂದು ಹೇಳಿದರು. ಇಂದು ಕೋರ್ಟ್ ನತ್ತ ತಿರುಗಾಡುವ ಕೆಲಸವೇ ಆಯ್ತು. ಪವನ್ ತಾಯಿ ಅಂಗವಿಕಲೆಯಾಗಿದ್ದು, ಪುತ್ರನ ಭೇಟಿಗಾಗಿ ಕಾಯುತ್ತಿದ್ದಾರೆ. ಒಬ್ಬ ತಾಯಿಯ ನೋವನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಒಬ್ಬ ತಾಯಿ ಹಿಂದೆ ಎಲ್ಲರೂ ಓಡುತ್ತಿದ್ದಾರೆ. ಹಾಗಾದ್ರೆ ಪವನ್ ತಾಯಿಗೆ ಯಾವುದೇ ಬೆಲೆ ಇಲ್ವಾ? ಎಂಟು ವರ್ಷಗಳಿಂದ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳು ಇರಲಿಲ್ಲ ಎಂದು ದೋಷಿ ಪರ ವಕೀಲ ಎ.ಪಿ.ಸಿಂಗ್ ಹೇಳಿದ್ದಾರೆ.

  • ನಿರ್ಭಯಾ ಹಂತಕರಿಗೆ ಗಲ್ಲು- ಆಶಾದೇವಿ ಮೊದಲ ಪ್ರತಿಕ್ರಿಯೆ

    ನಿರ್ಭಯಾ ಹಂತಕರಿಗೆ ಗಲ್ಲು- ಆಶಾದೇವಿ ಮೊದಲ ಪ್ರತಿಕ್ರಿಯೆ

    ನವದೆಹಲಿ: ನಿರ್ಭಯಾಳಿಗೆ ಇಂದು ನ್ಯಾಯ ಸಿಕ್ಕಿದೆ. ಇದು ದೇಶದ ಪ್ರತಿಯೊಬ್ಬ ಮಗಳ ಗೆಲವು ಎಂದು ನಿರ್ಭಯಾ ತಾಯಿ ಆಶಾದೇವಿ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ಹಂತಕರಿಗೆ ಗಲ್ಲು ಆಗುತ್ತಿದ್ದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಆಶಾದೇವಿ, ಸರ್ಕಾರ, ರಾಷ್ಟ್ರಪತಿ ಮತ್ತು ದೇಶದ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ. ಅಪರಾಧಿಗಳು ಪದೇ ಪದೇ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಮೂರು ಬಾರಿ ಡೆತ್ ವಾರೆಂಟ್ ಮುಂದೂಡಿಕೆಯಾಗಿತ್ತು. ಹಾಗಾಗಿ ನ್ಯಾಯ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಎದ್ದಿತ್ತು. ಇಂದು ಏಕಕಾಲದಲ್ಲಿ ನಾಲ್ವರಿಗೂ ಗಲ್ಲಿಗೆ ಹಾಕಿದ್ದಾರೆ ಎಂದು ಹೇಳಿದರು.

    ಹಂತಕರ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ವಜಾಗೊಳ್ಳುತ್ತಿದ್ದ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಭಯಾ ತಾಯಿ ಆಶಾ ದೇವಿ, ಜೀತೇಂದ್ರ ಮತ್ತು ಸೀಮಾಜೀ ವಕೀಲಿ ವೃತ್ತಿ ಜೊತೆ ತಮ್ಮ ಕೆಲಸ ಮಾಡಿದರು. ನಮ್ಮ ನ್ಯಾಯ ಸಿಗಲಿದೆ ಎಂಬ ಭರವಸೆಯನ್ನು ನೀಡಿದ್ದರು. ಇಂದು ಕೊನೆಗೂ ನಮಗೆ ನ್ಯಾಯ ಸಿಕ್ಕಿದೆ ಎಂದರು.

    ನಿರ್ಭಯಾ ಹಂತಕರು ದೆಹಲಿ ಹೈಕೋರ್ಟ್ ತಮ್ಮ ಅರ್ಜಿಯನ್ನು ವಜಾಗೊಳಿಸುತ್ತಿದ್ದಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮಧ್ಯರಾತ್ರಿ ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು.

  • ನಿರ್ಭಯಾ ಆತ್ಮಕ್ಕೆ ಮುಕ್ತಿ- ಕೊನೆಗೂ ಗಲ್ಲು ಆಯ್ತು ಹಂತಕರಿಗೆ

    ನಿರ್ಭಯಾ ಆತ್ಮಕ್ಕೆ ಮುಕ್ತಿ- ಕೊನೆಗೂ ಗಲ್ಲು ಆಯ್ತು ಹಂತಕರಿಗೆ

    ನವದೆಹಲಿ: 2012ರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ದೊರಕಿದೆ. ನಿರ್ಭಯಾ ಪ್ರಕರಣದ ದೋಷಿಗಳಿಗೆ ಇಂದು ಬೆಳಗ್ಗೆ 5.30ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ.

    ಇಂದು ಬೆಳಗಿನ ಜಾವ ಮೂರು ಗಂಟೆವರೆಗೂ ದೋಷಿಗಳು ಡೆತ್ ವಾರೆಂಟ್ ಮುಂದೂಡಲು ಪ್ರಯತ್ನಿಸಿದ್ದರು. ಪಟಿಯಾಲಾ ಹೌಸ್ ಕೋರ್ಟ್ ನೀಡಿರುವ ಡೆತ್ ವಾರೆಂಟ್ ಗೆ ತಡೆ ನೀಡುವಂತೆ ಗುರುವಾರ ರಾತ್ರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ನಲ್ಲಿ ಅರ್ಜಿ ವಜಾಗೊಳ್ಳುತ್ತಿದ್ದಂತೆ ಮಧ್ಯರಾತ್ರಿ ಸುಪ್ರೀಂಕೋರ್ಟ್ ಗೆ ಹೋಗಿ ತುರ್ತು ಅರ್ಜಿ ವಿಚಾರಣೆ ನಡೆಸಬೇಕೆಂದು ದೋಷಿಗಳು ಮನವಿ ಮಾಡಿಕೊಂಡಿದ್ದರು.

    ಮಧ್ಯರಾತ್ರಿ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ-ಪ್ರತಿವಾದವನ್ನು ಆಲಿಸಿತು. ತದನಂತರ ಅರ್ಜಿಯನ್ನು ವಜಾಗೊಳಿಸಿತು. ಇತ್ತ ಅರ್ಜಿ ವಜಾಗೊಳ್ಳುತ್ತಿದ್ದಂತೆ ತಿಹಾರ್ ಜೈಲಿನ ಮುಂದೆ ಜನ ಸೇರಲು ಆರಂಭಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ತಿಹಾರ ಜೈಲಿನ ಆವರಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.

  • ಮಧ್ಯರಾತ್ರಿ ನಿರ್ಭಯಾ ಹಂತಕರ ಹೈಡ್ರಾಮಾ-ಹೈಕೋರ್ಟ್ ಬಳಿಕ ಸುಪ್ರೀಂ ಮುಂದೆ

    ಮಧ್ಯರಾತ್ರಿ ನಿರ್ಭಯಾ ಹಂತಕರ ಹೈಡ್ರಾಮಾ-ಹೈಕೋರ್ಟ್ ಬಳಿಕ ಸುಪ್ರೀಂ ಮುಂದೆ

    ನವದೆಹಲಿ: ನಿರ್ಭಯಾ ಹಂತಕರು ದೆಹಲಿ ಹೈಕೋರ್ಟ್ ತಮ್ಮ ಅರ್ಜಿಯನ್ನು ವಜಾಗೊಳಿಸುತ್ತಿದ್ದಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಮಧ್ಯರಾತ್ರಿ ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತು.

    ದೋಷಿಗಳ ಪರ ವಕೀಲ ಎ.ಪಿ.ಸಿಂಗ್ ನ್ಯಾಯಾಲಯದ ಮುಂದೆ ಅಪರಾಧಿ ಪವನ್ ಗುಪ್ತಾ ಪ್ರೌಢನಾಗಿರಲಿಲ್ಲ ಎಂಬ ಅಂಶವನ್ನಿಟ್ಟು ವಾದ ಆರಂಭಿಸಿದ್ದರು. ಹೀಗೆ ಈ ಹಿಂದೆ ಉಲ್ಲೇಖಿಸಿದ್ದ ಹಲವು ವಿಚಾರಗಳನ್ನೇ ಎ.ಪಿ.ಸಿಂಗ್ ನ್ಯಾಯಾಧೀಶರ ಮುಂದೆ ಇಟ್ಟು ವಾದ ಆರಂಭಿಸಿದ್ದರು. ತಡರಾತ್ರಿ ಸುಪ್ರೀಂನಲ್ಲಿ ನಡೆದ ವಾದ-ಪ್ರತಿವಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

    ಸುಪ್ರೀಂನಲ್ಲಿ ನಡೆದ ವಾದ-ಪ್ರತಿವಾದ
    * ಜಡ್ಜ್ : ನಿರ್ಭಯಾ ಅಪರಾಧಿ ಪವನ್ ಗುಪ್ತಾ ಪ್ರೌಢನಾಗಿರಲಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಈ ಹಿಂದೆ ವಿಚಾರಣೆಗೆ ಪರಿಗಣಿಸಿತ್ತು. ಈ ವಿಚಾರವನ್ನು ನ್ಯಾಯಾಲಯ ತಿರಸ್ಕರಿಸಿದ ನಂತರವೂ ಪ್ರಸ್ತಾಪಿಸುವುದರಲ್ಲಿ ಯಾವುದೇ ಅರ್ಥವಿಲ್ಲ
    * ಎ.ಪಿ.ಸಿಂಗ್, ದೋಷಿಗಳ ಪರ ವಕೀಲ : ಲೆಫ್ಟಿನೆಂಟ್ ಜನರಲ್ ಎದುರು ಕ್ಷಮಾದಾನ ಅರ್ಜಿ ಬಾಕಿಯಿದೆ

    * ಜಡ್ಜ್ : ಈ ವಿಚಾರವನ್ನು ನೀವು ಮಧ್ಯಾಹ್ನವೇ ಹೇಳಿದ್ದಿರಿ
    * ಎ.ಪಿ.ಸಿಂಗ್, ದೋಷಿಗಳ ಪರ ವಕೀಲ : ದೆಹಲಿಯ ಲೆಫ್ಟಿನೆಂಟ್ ಜನರಲ್ ಮತ್ತು ಮುಖ್ಯಮಂತ್ರಿ ಎದುರು ಕ್ಷಮಾದಾನದ ಅರ್ಜಿ ಬಾಕಿಯಿದೆ. ಅವರು ಕ್ಷಮಾದಾನ ಕೊಟ್ಟರೆ ಗಲ್ಲು ಶಿಕ್ಷೆಗೆ ಯಾವುದೇ ಅರ್ಥವಿರುವುದಿಲ್ಲ ಎಂದು ವಕೀಲ ವಾದ ಮಂಡನೆ.

    * ಜಡ್ಜ್ : ಈ ವಿಚಾರವನ್ನು ಪರಿಗಣಿಸಲು ಆಗುವುದಿಲ್ಲ
    * ಜಡ್ಜ್ : ಗುರುವಾರವಷ್ಟೇ ಸುಪ್ರೀಂಕೋರ್ಟ್ ಅಕ್ಷಯ್ ಕ್ಷಮಾದಾನ ಅರ್ಜಿ ತಿರಸ್ಕರಿಸಿತ್ತು. ಈಗ ಯಾವುದರ ಆಧಾರದ ಮೇಲೆ ಎರಡನೇ ಕ್ಷಮಾದಾನ ಅರ್ಜಿಯ ತಿರಸ್ಕಾರದ ವಿಚಾರವನ್ನು ಪ್ರಶ್ನಿಸುತ್ತಿದ್ದೀರಿ. ಈಗಾಗಲೇ ಮಂಡಿಸಿರುವ ವಾದವನ್ನೇ ನೀವು ಮತ್ತೆ ಮಂಡಿಸುತ್ತಿದ್ದೀರಿ

    * ಎ.ಪಿ.ಸಿಂಗ್, ದೋಷಿಗಳ ಪರ ವಕೀಲ : ಆತುರದ ನ್ಯಾಯತೀರ್ಮಾನವಾಗಿದೆ. ಅಕ್ಷಯ್ ಕ್ಷಮಾದಾನ ಅರ್ಜಿ ತಿರಸ್ಕಾರ ಪ್ರಶ್ನಿಸಿರುವ ಮರುಪರಿಶೀಲನಾ ಅರ್ಜಿ ಸುಪ್ರೀಂನಲ್ಲಿ ಬಾಕಿಯಿದೆ ಎಂಬ ಮಾಹಿತಿ ನೀಡಿದ ನಂತರವೂ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಡೆ ನೀಡದೆ ಇರಲು ಹೇಗೆ ಸಾಧ್ಯ..?

    * ಜಡ್ಜ್ : ನೀವು ಈ ಎಲ್ಲಾ ಅಂಶಗಳನ್ನು ಹಿಂದೆಯೇ ಹಲವು ಬಾರಿ ಪ್ರಸ್ತಾಪಿಸಿದ್ದೀರಿ. ಅವು ಇಂದು ಹೇಗೆ ಪ್ರಸ್ತುತವಾಗಲಿವೆ?
    * ಎ.ಪಿ.ಸಿಂಗ್, ದೋಷಿಗಳ ಪರ ವಕೀಲ : ಪವನ್ ಗುಪ್ತಾ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಬಚ್ಚಿಡಲಾಗಿತ್ತು. ಅತಿ ಮುಖ್ಯ ಮಾಹಿತಿಗಳಿದ್ದ ದಾಖಲೆಗಳನ್ನೂ ಅಧಿಕಾರಿಗಳು ಕಣ್ಮರೆ ಮಾಡಿದ್ದರು.

    * ತುಷಾರ್ ಮೆಹ್ತಾ, ಸಾಲಿಸಿಟರ್ ಜನರಲ್ : ಈಗ ಅಪರಾಧಿಗಳ ಪರ ವಕೀಲರು ಪ್ರಸ್ತಾಪಿಸುತ್ತಿರುವ ಅಂಶಗಳು ಈ ಹಿಂದೆಯೂ ಹಲವು ಬಾರಿ, ಹಲವು ಹಂತದ ನ್ಯಾಯಾಲಯಗಳಲ್ಲಿ ಮತ್ತು ಕ್ಷಮಾದಾನ ಅರ್ಜಿಗಳಲ್ಲಿ ಪ್ರಸ್ತಾಪವಾಗಿದೆ.
    * ಜಡ್ಜ್ : ನಿಮಗೆ ಬೇಕು ಎಂದಾಗ ಪ್ರಕರಣಗಳನ್ನು ಮತ್ತೊಮ್ಮೆ ಮಗದೊಮ್ಮೆ ಮರು ವಿಚಾರಣೆ ನಡೆಸಲು ಆಗುವುದಿಲ್ಲ. ರಾಷ್ಟ್ರಪತಿಗಳು ಎರಡನೇ ಬಾರಿಗೆ ಕ್ಷಮಾದಾನ ಮನವಿ ತಳ್ಳಿಹಾಕಿದ್ದನ್ನು ಈ ಆಧಾರದಲ್ಲಿ ಪ್ರಶ್ನಿಸಲು ಆಗುವುದಿಲ್ಲ
    * ಜಡ್ಜ್ : ಎಪಿ ಸಿಂಗ್ ಅವರೇ ನೀವು ತೀರ್ಪು ಮರುಪರೀಶಲನೆ ಮಾಡಬೇಕೆಂದು ಹೇಳುತ್ತಿದ್ದೀರಾ..? ಅರ್ಜಿ ವಜಾ

    ದೆಹಲಿ ಹೈಕೋರ್ಟ್ ನಲ್ಲಿ ನಡೆದ ವಾದ-ಪ್ರತಿವಾದ

    ದೋಷಿಗಳ ಪರ ವಕೀಲ ಎ.ಪಿ ಸಿಂಗ್ : ಪಟಿಯಾಲ ಕೋರ್ಟ್‍ನಲ್ಲಿ ನಮ್ಮ ಅರ್ಜಿ ವಜಾ ಆಗಿದೆ. ಹಾಗಾಗಿ ನೀವು ಅರ್ಜಿ ವಿಚಾರಣೆ ನಡೆಸಬೇಕು
    ಜಡ್ಜ್ : ನಿಮ್ಮ ಎಲ್ಲಾ ಕಾನೂನು ಹೋರಾಟ ಅಂತ್ಯವಾಗಿದೆ
    ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ : ಹೈಕೋರ್ಟ್ ಮುಂದೆ ಡೆತ್ ವಾರೆಂಟ್‍ಗೆ ತಡೆ ಕೇಳುವಂತಿಲ್ಲ. ಸುಪ್ರೀಂನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು
    ದೋಷಿಗಳ ಪರ ವಕೀಲ ಎ.ಪಿ ಸಿಂಗ್ : ದೋಷಿಗಳಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ನನ್ನ ಹತ್ತಿರ ದಾಖಲೆ ಇದೆ. ಕೊರೋನಾ ವೈರಸ್ ಭೀತಿ ಹಿನ್ನೆಲೆ, ಜೆರಾಕ್ಸ್ ಅಂಗಡಿ ತೆರೆದಿಲ್ಲ, ಆದ್ದರಿಂದ ಕೋರ್ಟ್‍ಗೆ ದಾಖಲೆ ನೀಡಲು ಆಗ್ತಿಲ್ಲ.
    ಜಡ್ಜ್ : ಇದೊಂದು ಅಡಿಪಾಯ ಇರದ ಅರ್ಜಿ, ಗಲ್ಲು ಶಿಕ್ಷೆ ತಡೆಯಲು ಬೇಕಾಗುವ ಅಂಶ ಹೇಳಿ.
    ದೋಷಿಗಳ ಪರ ವಕೀಲ ಎ.ಪಿ ಸಿಂಗ್ : ದೋಷಿಗಳ ಕುಟುಂಬವನ್ನೊಮ್ಮೆ ನೋಡಿ. ಹಿಂದಿನ ಎಲ್ಲಾ ವಿಚಾರಣೆಯಲ್ಲೂ ಭಾಗಿಯಾಗಿದ್ದೇವೆ.
    ಜಡ್ಜ್: ಸುಪ್ರೀಂಕೋರ್ಟ್ ಆದೇಶವನ್ನು ಬದಿಗಿರಿಸಬೇಕೆ?

    ದೋಷಿಗಳ ಪರ ವಕೀಲ ಎ.ಪಿ ಸಿಂಗ್: ದಾಖಲೆಗಳನ್ನು ಒದಗಿಸಲು ಎರಡ್ಮೂರು ದಿನ ಅವಕಾಶ ಕೊಡಿ.
    ಜಡ್ಜ್: ಅರ್ಜಿಯಲ್ಲಿ ಪ್ರಮುಖ ಅಂಶಗಳನ್ನು ಉಲ್ಲೇಖಿಸದೆ ನೀವು ತಡೆ ಕೇಳುವಂತಿಲ್ಲ, ನಿಮ್ಮ ವಾದಕ್ಕೂ ಅರ್ಜಿಯಲ್ಲಿರುವ ಮನವಿಗೂ ಸಂಬಂಧವಿಲ್ಲ.
    ಜಡ್ಜ್ : ನಿಮ್ಮ ಕಕ್ಷಿದಾರರು ಇನ್ನು ಕೆಲವೇ ಹೊತ್ತಿನಲ್ಲಿ ದೇವರನ್ನು ಭೇಟಿ ಮಾಡಲಿದ್ದಾರೆ. ನೀವು ಅರ್ಜಿಯಲ್ಲಿನ ಹೊಸ ಅಂಶಗಳ ಬಗ್ಗೆ ಹೇಳದಿದ್ದರೆ ಕೊನೆ ಕ್ಷಣದಲ್ಲಿ ನಾವೂ ಏನೂ ಮಾಡಲಾಗದು.
    ದೆಹಲಿ ಸರ್ಕಾರದ ಪರ ವಕೀಲ ರಾಹುಲ್ ಮೆಹ್ರಾ: ದೋಷಿಗಳು ಸಲ್ಲಿಸಿರುವ ಅರ್ಜಿಯಲ್ಲಿ ಹುರುಳಿಲ್ಲ. ಈ ಅರ್ಜಿಯನ್ನು ವಜಾ ಮಾಡಿ
    ( ಅತ್ಯಾಚಾರಿಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಜಾ. ಶುಕ್ರವಾರ ಬೆಳಗ್ಗೆ 5.30ಕ್ಕೆ ಗಲ್ಲು ಜಾರಿ )