Tag: nikhil maliyakkal

  • ಬಿಗ್‌ ಬಾಸ್‌ ತೆಲುಗು ಸೀಸನ್‌ 8; ಕರ್ನಾಟಕ ಮೂಲದ ನಿಖಿಲ್‌ ವಿನ್ನರ್‌

    ಬಿಗ್‌ ಬಾಸ್‌ ತೆಲುಗು ಸೀಸನ್‌ 8; ಕರ್ನಾಟಕ ಮೂಲದ ನಿಖಿಲ್‌ ವಿನ್ನರ್‌

    ಟಾಲಿವುಡ್‌ ಸೂಪರ್‌ ಸ್ಟಾರ್‌ ನಾಗಾರ್ಜುನ (Nagarjuna) ನಡೆಸಿಕೊಡುತ್ತಿದ್ದ ಬಿಗ್‌ ಬಾಸ್‌ ತೆಲುಗು ಸೀಸನ್‌ 8 (Bigg Boss Telugu 8) ಕ್ಕೆ ತೆರೆ ಬಿದ್ದಿದೆ. ಕರ್ನಾಟಕದ ಮೈಸೂರು ಮೂಲದ ನಿಖಿಲ್‌ ಮಲಿಯಕ್ಕಲ್‌ (Nikhil Maliyakkal) ಬಿಗ್‌ ಬಾಸ್‌ ವಿನ್ನರ್‌ ಆಗಿ ಹೊರಹೊಮ್ಮಿದ್ದಾರೆ.

    ತೆಲುಗು ಟಿವಿ ಧಾರಾವಾಹಿಗಳ ಮೂಲಕ ಖ್ಯಾತಿ ಗಳಿಸಿದ ಕರ್ನಾಟಕ ಮೂಲದ ನಿಖಿಲ್‌, ಬಿಗ್‌ ಬಾಸ್‌ ಶೋ ಆರಂಭದ ಮೊದಲ ದಿನದಿಂದ ಮನೆಯಲ್ಲಿದ್ದರು. ಫೈನಲ್‌ನಲ್ಲಿ ಅವರು ಗೌತಮ್ ಕೃಷ್ಣ ಅವರನ್ನು ಸೋಲಿಸಿದ್ದಾರೆ. ಗೌತಮ್ ಸೀಸನ್ 7 ರಲ್ಲಿ ಭಾಗವಹಿಸಿದ್ದರು. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಈ ಸೀಸನ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ಈಗ ರನ್ನರ್‌ ಅಪ್‌ ಆಗಿದ್ದಾರೆ. ಇದನ್ನೂ ಓದಿ: ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಟ್ಟ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

    ರಿಯಾಲಿಟಿ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ಮುಖ್ಯ ಅತಿಥಿಯಾಗಿ ನಟ ರಾಮ್‌ ಚರಣ್‌ ಆಗಮಿಸಿದ್ದರು. ವಿನ್ನರ್‌ ನಿಖಿಲ್‌ಗೆ ಬಿಗ್‌ ಬಾಸ್‌ ಟ್ರೋಫಿ, 55 ಲಕ್ಷ ರೂ. ನಗದು ಮತ್ತು ಮಾರುತಿ ಸುಜುಕಿ ಡಿಜೈರ್ ಕಾರನ್ನು ಬಹುಮಾನವಾಗಿ ನೀಡಿ ಅಭಿನಂದಿಸಿದರು.

    ಅಲ್ಲದೇ, ಹೆಚ್ಚುವರಿಯಾಗಿ ಶೋ ಸಮಯದಲ್ಲಿ ನಿಖಿಲ್‌ಗೆ ಸಂಭಾವನೆಯಾಗಿ ದಿನಕ್ಕೆ 32,143 ರೂ.ನಂತೆ ವಾರಕ್ಕೆ 2.25 ಲಕ್ಷ ರೂ. ಬಂದಿದೆ. ಇದನ್ನೂ ಓದಿ: ಭಾವಿ ಪತ್ನಿ ಜೊತೆ ಆಗಮಿಸಿ ಸಿಎಂಗೆ ಮೊದಲ ಮದುವೆ ಆಮಂತ್ರಣ ನೀಡಿದ ಡಾಲಿ

    ನಿಖಿಲ್ ಮಳಿಯಕ್ಕಲ್ ಕರ್ನಾಟಕದ ಮೈಸೂರು ಮೂಲದವರು. ಅವರ ತಂದೆ ಶಶಿ ಅಲ್ವಿನ್ ಮತ್ತು ತಾಯಿ ಸುಲೇಖಾ ಮಲಿಯಕ್ಕಲ್. ನಿಖಿಲ್‌ಗೆ ದಿಶಾಂಕ್ ಮಳಿಯಕ್ಕಲ್ ಎಂಬ ಕಿರಿಯ ಸಹೋದರನಿದ್ದಾನೆ.

  • ತೆಲುಗಿನ ಬಿಗ್ ಬಾಸ್‌ನಲ್ಲಿ ಕನ್ನಡದ ಕಲರವ- ಅಮ್ಮ, ಮಗನ ಬಾಂಧವ್ಯ ಕಂಡು ವೀಕ್ಷಕರು ಭಾವುಕ

    ತೆಲುಗಿನ ಬಿಗ್ ಬಾಸ್‌ನಲ್ಲಿ ಕನ್ನಡದ ಕಲರವ- ಅಮ್ಮ, ಮಗನ ಬಾಂಧವ್ಯ ಕಂಡು ವೀಕ್ಷಕರು ಭಾವುಕ

    ತೆಲುಗಿನ ಬಿಗ್ ಬಾಸ್ ಸೀಸನ್ 8ರಲ್ಲಿ (Bigg Boss Telugu 8)  ಕನ್ನಡದ ಕಲರವ ಕೇಳಿ ಬಂದಿದೆ. ಈ ಶೋನಲ್ಲಿ ಮೈಸೂರು ಮೂಲದ ಕನ್ನಡದ ನಟ ನಿಖಿಲ್ ಮಳಿಯಕ್ಕಲ್ (Nikhil Maliyakkal) ಅಧ್ಬುತವಾಗಿ ಆಟವಾಡುತ್ತಿದ್ದಾರೆ. ಬಿಗ್ ಬಾಸ್‌ನಲ್ಲಿರುವ ಮಗ ನಿಖಿಲ್‌ಗೆ ತಾಯಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ಅಮ್ಮನ ಪತ್ರ ಕಂಡು ನಿಖಿಲ್ ಕಣ್ಣೀರಿಟ್ಟಿದ್ದಾರೆ.


    ಬಿಗ್ ಬಾಸ್‌ನಲ್ಲಿ ನಿಖಿಲ್ ಬೇಸರಕ್ಕೆ ಒಳಗಾಗಿ ನಾನು ನಿಮ್ಮನ್ನ ನೋಡದೇ ಇರುವುದಕ್ಕೆ ಆಗುತ್ತಿಲ್ಲ ಎಂದು ತಾಯಿಗೆ ಪತ್ರ ಬರೆದಿದ್ದರು. ಇದಕ್ಕಾಗಿ ಶೋನಲ್ಲಿ ತಾಯಿ ಬರೆದ ಪತ್ರವನ್ನು ಪ್ರಕಟಿಸಲಾಯಿತು. ನೀನು ಹೇಗಿದೆಯೋ ಹಾಗೇ ಇರು. ಬೇರೆಯವರಿಗಾಗಿ ಚೇಂಜ್ ಮಾಡಿಕೊಳ್ಳಬೇಡ. ಎಮೋಷನಲ್ ಆಗಬೇಡ. ಎಲ್ಲರೂ ನಿನ್ನ ಜೊತೆ ರೇಸ್‌ನಲ್ಲಿದ್ದಾರೆ. ನೀನು ಆಡುತ್ತಿರುವುದು ನನಗೆ ಸಖತ್ ಇಷ್ಟ ಆಗುತ್ತಿದೆ. ಕಪ್ ಲಿಫ್ಟ್ ಮಾಡುವುದನ್ನ ನೋಡಲು ಕಾಯುತ್ತಿದ್ದೇವೆ. ಐ ಲವ್ ಯು ಕಂದ ಎಂದು ಹೇಳಿದ್ದಾರೆ. ಈ ಪತ್ರವನ್ನು ಪ್ರೇರಣಾ ಓದಿ ಹೇಳಿದ್ದಾರೆ. ಅದನ್ನು ಕೇಳಿ ನಿಖಿಲ್ ಭಾವುಕರಾಗಿದ್ದಾರೆ. ಈ ಕುರಿತ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ದೊಡ್ಮನೆಯ ಮೊದಲ ಎಲಿಮಿನೇಷನ್- ಪ್ರಬಲ ಸ್ಪರ್ಧಿಯೇ ಔಟ್?

    ಈ ಶೋನಲ್ಲಿ ನಿಖಿಲ್ ಜೊತೆ ಕನ್ನಡದವರೇ ಆದ ಪ್ರೇರಣಾ ಕಂಬಂ, ಪೃಥ್ವಿರಾಜ್ ಶೆಟ್ಟಿ, ಯಶಮಿ ಗೌಡ ಕೂಡ ಭಾಗಿಯಾಗಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಈ ಪ್ರತಿಭೆಗಳು ಇದೀಗ ತೆಲುಗಿನಲ್ಲಿ ಸದ್ದು ಮಾಡುತ್ತಿದ್ದಾರೆ.