Tag: Nikhil Kumar

  • ಸೀತಾರಾಮ ಕಲ್ಯಾಣ: ಹರ್ಷ ಎಂಟನೇ ಹಾದಿ ತುಂಬಾ ಸ್ಪೆಷಲ್!

    ಸೀತಾರಾಮ ಕಲ್ಯಾಣ: ಹರ್ಷ ಎಂಟನೇ ಹಾದಿ ತುಂಬಾ ಸ್ಪೆಷಲ್!

    ಬೆಂಗಳೂರು: ನೃತ್ಯ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಎ ಹರ್ಷ. ನೃತ್ಯ ನಿರ್ದೇಶಕರಾಗಿ ಬಹು ಬೇಡಿಕೆಯಲ್ಲಿರುವಾಗಲೇ ನಿರ್ದೇಶನಕ್ಕಿಳಿದಿದ್ದ ಹರ್ಷ ಅವರದ್ದು ನಿಜಕ್ಕೂ ಕಲರ್ ಫುಲ್ ಜರ್ನಿ. ಯುವ ಆವೇಗದ ಕಥಾ ಹಂದರದಿಂದಲೇ ಗೆಲ್ಲುತ್ತಾ ಬಂದಿರೋ ಹರ್ಷ ಪಾಲಿಗೆ ನಿರ್ದೇಶಕರಾಗಿ ಸೀತಾರಾಮ ಕಲ್ಯಾಣ ಎಂಟನೇ ಸಿನಿಮಾ.

    ಇದುವರೆಗೂ ಮಾಸ್ ಶೈಲಿಯ ಸಿನಿಮಾಗಳನ್ನೇ ನಿರ್ದೇಶನ ಮಾಡಿರುವವರು ಹರ್ಷ. ಅವರು ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ಮೊದಲ ಬಾರಿಗೆ ಫ್ಯಾಮಿಲಿ ಕಥಾನಕವೊಂದನ್ನ ಹೇಳ ಹೊರಟಿದ್ದಾರೆ. ಈ ಮೂಲಕವೇ ಅವರ ಪಾಲಿಗೆ ತಮ್ಮ ಎಂಟನೇ ಚಿತ್ರ ಬಲು ಮಹತ್ವದ್ದು.

    ಸೀತಾರಾಮ ಕಲ್ಯಾಣ ಮಾಸ್ ಮತ್ತು ಫ್ಯಾಮಿಲಿ ಎಂಟರ್‍ಟೈನರ್ ಚಿತ್ರ. ಇದೇ ಮೊದಲ ಸಲ ಹರ್ಷ ಎಮೋಷನಲ್ ಸನ್ನಿವೇಶಗಳ ಮೂಲಕ ಹೊಸಾ ಬಗೆಯ ಪಾತ್ರಗಳನ್ನು ಕಟ್ಟಿದ್ದಾರಂತೆ. ಹೆಸರೇ ಸೀತಾರಾಮ ಕಲ್ಯಾಣ ಅಂತಿರೋದರಿಂದ ಇದು ಲವ್, ಮದುವೆ ಸುತ್ತಮುತ್ತ ನಡೆಯೋ ಕಥೆ ಅಂತ ಬಹುತೇಕರು ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಸೀತಾರಾಮನ ಕಥೆ ಕಲ್ಯಾಣದಾಚೆಗೂ ಹಬ್ಬಿಕೊಂಡಿದೆ.

    ಮೊದಲ ಸಿನಿಮಾ ಜಾಗ್ವಾರ್ ನಲ್ಲಿ ನಿಖಿಲ್ ಸಕಲ ತಯಾರಿ ಮಾಡಿಕೊಂಡು ಅಖಾಡಕ್ಕಿಳಿದಿದ್ದರು. ಸೀತಾರಾಮ ಕಲ್ಯಾಣದ ಪಾತ್ರದ ಮೂಲಕ ಅವರು ತಾನೋರ್ವ ಅದ್ಭುತ ಪರ್ಫಾರ್ಮರ್ ಅನ್ನೋದನ್ನೂ ಸಾಬೀತು ಪಡಿಸಿದ್ದಾರಂತೆ. ಫ್ಯಾಮಿಲಿ, ಮಾಸ್ ಮತ್ತು ಎಮೋಷನಲ್ ಸನ್ನಿವೇಶಗಳಿಗೆಲ್ಲ ನಿಖಿಲ್ ಬೆರಗಾಗುವಂತೆ ಜೀವ ತುಂಬಿದ್ದಾರಂತೆ. ಇನ್ನು ಈವರೆಗೆ ಒಂದು ವೆರೈಟಿ ಪಾತ್ರಗಳಿಗೆ ಹೆಸರಾಗಿದ್ದ ನಟ ನಟಿಯರನೇಕರು ಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ.

    ಇಂಥಾ ನಾನಾ ವಿಶೇಷತೆಗಳೊಂದಿಗೆ ಮೂಡಿ ಬಂದಿರೋ ಸೀತಾರಾಮ ಪ್ರೇಕ್ಷಕರಿಗೆ ಕ್ಷಣ ಕ್ಷಣವೂ ಸರ್‍ಪ್ರೈಸ್ ಕೊಡೋವಂತೆ ಮೂಡಿ ಬಂದಿದೆ ಅನ್ನೋದು ಹರ್ಷ ಭರವಸೆ.

    https://www.youtube.com/watch?v=IgY3WB1V1wM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವರಾಜ ನಿಖಿಲ್ ಸಿನಿಮಾ ಹೇಗಿರಬಹುದು?

    ಯುವರಾಜ ನಿಖಿಲ್ ಸಿನಿಮಾ ಹೇಗಿರಬಹುದು?

    ಬೆಂಗಳೂರು: ಜಾಗ್ವಾರ್ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ್ದ ನಿಖಿಲ್ ಕುಮಾರ್ ಎರಡನೇ ಚಿತ್ರ ಸೀತಾರಾಮ ಕಲ್ಯಾಣ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ಕಡೆಗೂ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಇದೇ ಜನವರಿ 25ರಂದು ಸೀತಾರಾಮ ಕಲ್ಯಾಣ ಬಿಡುಗಡೆಯಾಗಲಿದೆ. ಸೀತಾರಾಮ ಕಲ್ಯಾಣ ಈಗಾಗಲೇ ಹಾಡು, ಟೀಸರ್ ಸೇರಿದಂತೆ ಹಲವಾರು ರೀತಿಯಲ್ಲಿ ಸುದ್ದಿ ಮಾಡಿದೆ. ಎ ಹರ್ಷ ಮತ್ತು ನಿಖಿಲ್ ಕಾಂಬಿನೇಷನ್ನಿನ ಈ ಚಿತ್ರ ಎಲ್ಲರನ್ನೂ ಚಕಿತಗೊಳಿಸೋದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಿದೆ ಗಾಂಧಿನಗರ.

    ಮೊದಲ ಚಿತ್ರ ಜಾಗ್ವಾರ್ ಮೂಲಕವೇ ನಿಖಿಲ್ ಕುಮಾರ್ ನಟನೆಯ ಬಗ್ಗೆ ತಮ್ಮ ಬದ್ಧತೆ ಎಂಥಾದ್ದೆಂಬುದನ್ನು ಸಾಬೀತು ಪಡಿಸಿದ್ದರು. ಡ್ಯಾನ್ಸ್, ಸಾಹಸ, ಅಭಿನಯ ಎಲ್ಲದರಲ್ಲಿಯೂ ತರಬೇತಿ ಪಡೆದೇ ಅವರು ಕ್ಯಾಮೆರಾ ಮುಂದೆ ಬಂದು ನಿಂತಿದ್ದರು. ಜಾಗ್ವಾರ್ ಬಿಡುಗಡೆಯಾದ ದಿನವೇ ಮಾಧ್ಯಮದ ಮಂದಿ `ಸ್ಟಾರ್ ಈಸ್ ಬಾರ್ನ್’ ಅಂತಾ ಷರಾ ಬರೆದಿದ್ದವು. ಅದು ಸುಮ್ಮನೇ ದಕ್ಕುವಂಥದ್ದಲ್ಲ. ಒಬ್ಬ ನಟ ತೆರೆ ಮೇಲೆ ಎಲ್ಲ ರೀತಿಯಲ್ಲೂ ಆಕರ್ಷಿಸಿದರೆ ಮಾತ್ರ `ಸ್ಟಾರ್’ ಎನ್ನಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಟಿಸಿದ ಮೊಟ್ಟಮೊದಲ ಸಿನಿಮಾದಲ್ಲೇ ಸ್ಕೋರು ಮಾಡಿದ್ದ ನಿಖಿಲ್ ಎರಡನೇ ಸಿನಿಮಾದ ಕುರಿತು ಸಹಜವಾಗಿಯೇ ನಿರೀಕ್ಷೆಗಳು ಗರಿಗೆದರಿವೆ.

    ನೃತ್ಯ ನಿರ್ದೇಶಕರಾಗಿ ಎಂಟ್ರಿ ಕೊಟ್ಟು ನಂತರ ಕನ್ನಡದ ಬಹುತೇಕ ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶಿಸಿರುವ ಎ. ಹರ್ಷ ಈ ವರೆಗೆ ಕೈಗೆತ್ತಿಕೊಂಡ ಸಿನಿಮಾಗಳನ್ನೆಲ್ಲಾ ಗೆಲ್ಲಿಸಿ ಇವತ್ತು ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಸೀತಾರಾಮ ಕಲ್ಯಾಣದಲ್ಲಿ ಹರ್ಷ ನಿಖಿಲ್ ಕುಮಾರ್ ರನ್ನು ಮತ್ತಷ್ಟು ಹೊಸ ರೀತಿಯಲ್ಲಿ ಕಂಗೊಳಿಸುವಂತೆ ಮಾಡಿದ್ದಾರಂತೆ. ಯುವರಾಜ ನಿಖಿಲ್ ಸಿನಿಮಾಗಾಗಿ ಜನ ಕಾತರದಿಂದ ಕಾದಿದ್ದಾರೆ. ಅದರ ಅಸಲಿ ಮಜಾ ಏನೆಂಬುದು ಜನವರಿ 25ರಂದು ತಿಳಿಯಲಿದೆ.

    https://www.youtube.com/watch?v=3pYwtl-VD-Y

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇರೋ ಒಬ್ಬ ಮಗನ ಮೇಲಾಣೆ ಸಾಲಮನ್ನಾ ಮಾಡ್ತೀನಿ: ಸಿಎಂ

    ಇರೋ ಒಬ್ಬ ಮಗನ ಮೇಲಾಣೆ ಸಾಲಮನ್ನಾ ಮಾಡ್ತೀನಿ: ಸಿಎಂ

    – ನನಗೆ ಕೊಡೋ ಶಕ್ತಿಯನ್ನು ಧಾರೆಯೆರೆಯುತ್ತೇನೆ

    ಬಾಗಲಕೋಟೆ: ರೈತರ ಸಾಲಮನ್ನಾ ವಿಚಾರವಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಮಗನ ಮೇಲೆ ಆಣೆ ಮಾಡಿದ್ದಾರೆ.

    ನಗರದಲ್ಲಿ ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ವಿತರಣೆ ವೇಳೆ ಮಾತನಾಡಿದ ಸಿಎಂ, ನನಗೆ ಇರುವುದು ಒಬ್ಬ ಮಗ. ಅವನ ಮೇಲೆ ಆಣೆ ಮಾಡ್ತೇನೆ. ನಾನು ರೈತರ ಸಾಲಮನ್ನಾ ಮಾಡ್ತೇನೆ. ನಾನು ಎಲ್ಲೂ ಹೋಗಲ್ಲ, ಸರ್ಕಾರ ಬೀಳಲ್ಲ, ನಿಮ್ಮ ಸಾಲಮನ್ನಾ ಮಾಡಿಯೇ ತೀರುತ್ತೇನೆ. ಸಾಲಮನ್ನಾ ವಿಚಾರದಲ್ಲಿ ನಿಮಗೆ ಮೋಸ ಮಾಡೋದಿಲ್ಲ ಅಂತ ಅಭಯ ಕೊಟ್ಟರು. ಅಲ್ಲದೇ ಸರ್ಕಾರ ನಡೆಸುವ ಶಕ್ತಿ ನೀವು ಕೊಟ್ಟಿದ್ದೀರಿ. ಫೆಬ್ರವರಿಯಲ್ಲಿ ಬಜೆಟ್ ಮಂಡಣೆ ಮಾಡಲಾಗುವುದು ಎಂದು ತಿಳಿಸಿದರು.

    ಮುಂದಿನ ವರ್ಷದಿಂದ ನಿಮ್ಮ ಬೆಳೆಗೆ ನಿಖರವಾದ ಬೆಲೆ ಸಿಗಬೇಕು. ಮಹಾರಾಷ್ಟ್ರ ಮಾದರಿ ಮಾಡಿ ಅಂತ ಕಬ್ಬು ಬೆಳೆಗಾರರು ಹೇಳ್ತಾರೆ. ನೀವೇ ಹೋಗಿ ನೋಡಿ ಮಹಾರಾಷ್ಟ್ರಕ್ಕೆ ಏನಾಗಿದೆ ಅಂತಾ ಗೊತ್ತಾಗುತ್ತೆ. ಗುರುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದೆ. ಅವರು ಇನ್ನು ಮೇಲೆ ಹೊಸ ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ ಕೊಡಬೇಡಿ ಅಂತಾ ತಿಳಿಸಿದ್ರು. ನೀವು ನಮಗೆ ಶಕ್ತಿ ಕೊಡಿ. ಅದೇ ಶಕ್ತಿಯನ್ನು ವಾಪಸ್ ಧಾರೆ ಎರೆಯುತ್ತೇನೆ ಅಂತಾ ಸಿಎಂ ಭರವಸೆ ಕೊಟ್ಟರು.

    ಋಣಮುಕ್ತ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಬಾಗಲಕೋಟೆ-96, ಬದಾಮಿ-422, ಹುನಗುಂದ-274, ಜಮಖಂಡಿ-1198, ಮುಧೋಳ-450, ಬೀಳಗಿ-356 ಒಟ್ಟು 2796 ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಖಿಲ್ ಭವಿಷ್ಯಕ್ಕಾಗಿ ಅನಿತಾ ಕುಮಾರಸ್ವಾಮಿ ಹೊಸ ಯಾಗ

    ನಿಖಿಲ್ ಭವಿಷ್ಯಕ್ಕಾಗಿ ಅನಿತಾ ಕುಮಾರಸ್ವಾಮಿ ಹೊಸ ಯಾಗ

    ಬೆಂಗಳೂರು: ಮಕ್ಕಳ ಉಜ್ವಲ ಭವಿಷ್ಯಕ್ಕೋಸ್ಕರ ತಂದೆ- ತಾಯಿ ಮಾಡುವಂತಹ ಯಾಗ ಮತ್ತು ತ್ಯಾಗದ ಬಗ್ಗೆ ಒಂದು ಲೈನ್‍ನಲ್ಲಿ ಹೇಳಿ ಮುಗಿಸೋದಕ್ಕೆ ಆಗೋದಿಲ್ಲ. ಅಂತೆಯೇ ನಿಖಿಲ್ ಕುಮಾರಸ್ವಾಮಿಗೋಸ್ಕರ ಅವರ ತಂದೆ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ ಕಠಿಣ ಯಾಗವನ್ನೇ ಕೈಗೊಂಡಿದ್ದಾರೆ.

    ಹೌದು. ಪುತ್ರನ ಉಜ್ವಲ ಭವಿಷ್ಯಕ್ಕಾಗಿ ಕುಮಾರ ದಂಪತಿ ಮನೆದೇವರಿಗೆ ಹರಕೆ ಕಟ್ಟಿಕೊಳ್ಳುವುದಲ್ಲದೇ, ಅದೇನೆ ಆಗಲಿ ಸುಪುತ್ರನಿಗಾಗಿ ನಾವು ಕೆಲಸ ಮಾಡಲೇಬೇಕು ಅಂತ ಪಣ ತೊಟ್ಟಿದ್ದಾರೆ. ಸದ್ಯಕ್ಕೆ ಸೀತಾರಾಮ ಕಲ್ಯಾಣ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಇದನ್ನ ಹೊರತುಪಡಿಸಿದರೆ ನಿಖಿಲ್ ಬೇರೆ ಯಾವ ಸಿನಿಮಾದಲ್ಲಿ ತೊಡಗಿಸಿಕೊಂಡಿಲ್ಲ. ಜಾಗ್ವಾರ್ ಬಾಯ್‍ನ ಅರಸಿಕೊಂಡು ಕೆಲವೊಂದು ಸಿನಿಮಾಗಳ ಆಫರ್ ಬಂದಿತ್ತಾದ್ರೂ ನಿಖಿಲ್ ಯಾವ ಸಿನಿಮಾವನ್ನ ಒಪ್ಪಿಕೊಂಡಿಲ್ಲ. ಹೀಗಾಗಿ ತಮ್ಮ ಬ್ಯಾನರ್‍ನಲ್ಲಿ ಸರಣಿ ಸಿನಿಮಾಗಳನ್ನ ಶುರುಮಾಡಬೇಕು ಅನ್ನೋದು ಕುಮಾರಣ್ಣನ ಮಹದಾಸೆ. ಅದಕ್ಕಾಗಿ ಅನಿತಾ ಕುಮಾರಸ್ವಾಮಿ ಅವರಿಗೆ 5 ಸಿನಿಮಾಗಳ ನಿರ್ಮಾಣದ ಜವಾಬ್ದಾರಿಯನ್ನ ಹೊರಿಸಿದ್ದಾರೆ. 5 ಸಿನಿಮಾಗಳನ್ನ ಏಕಕಾಲದಲ್ಲಿ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತೆರೆಗೆ ತರೋದಕ್ಕೆ ಪ್ಲಾನ್ ಮಾಡಿದ್ದಾರೆ ಎಂಬ ಸುದ್ದಿಯೊಂದು ಚಂದನವನದಲ್ಲಿ ಹರಿದಾಡುತ್ತಿದೆ.

    ನಿಖಿಲ್ ಲೈಫ್ ಸೆಟ್ಲ್ ಮಾಡಬೇಕು ಅನ್ನೋದು ಕುಮಾರ ದಂಪತಿಯ ಮುಂದಿರುವ ಮಹಾಕನಸು. ಒಳ್ಳೆಯ ಹುಡುಗಿ ಹುಡುಕಿ ಮದುವೆ ಮಾಡಬೇಕು ಅನ್ನೋದು ಒಂದು ಕನಸು ಆದ್ರೆ, ಗಂಧದ ಗುಡಿಯಲ್ಲಿ ನಮ್ಮ ಹುಡುಗ ಗಟ್ಟಿಯಾಗಿ ನಿಲ್ಲಬೇಕು ಅನ್ನೋದು ಮತ್ತೊಂದು ಮಹಾಬಯಕೆ. ಬಣ್ಣದ ಲೋಕದಲ್ಲಿ ಮಗನನ್ನ ಗಟ್ಟಿಯಾಗಿ ನಿಲ್ಲಿಸಲು ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಇಬ್ಬರು ಈ ಮಹಾನ್ ತೀರ್ಮಾನಕ್ಕೆ ಬಂದಿದ್ದಾರೆ.

    ಪರಭಾಷೆಯಲ್ಲಿ ಇತ್ತೀಚೆಗೆ ಬಂದಿರುವ ಎಲ್ಲಾ ಹಿಟ್ ಸಿನಿಮಾಗಳನ್ನ ನೋಡು. ಅದರಲ್ಲಿ ಯಾವ ಸಿನಿಮಾ ನಿನಗೆ ಇಷ್ಟವಾಗುತ್ತೋ, ಆ ಸಿನಿಮಾದ ನಿರ್ದೇಶಕರಿಂದ ನಿಖಿಲ್‍ಗೆ ಆಕ್ಷನ್ ಕಟ್ ಹೇಳಿಸೋಣ ಎಂದಿದಾರಂತೆ ಕುಮಾರಣ್ಣ. ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ನಡೆಸುತ್ತಿರುವ ಕುಮಾರಸ್ವಾಮಿಯವರು. ಅಷ್ಟೇ ವೇಗದಲ್ಲಿ ತಮ್ಮ ಮಗನ ಬಣ್ಣದ ಜಗತ್ತಿನ ಲೈಫ್‍ನ ಸೆಟಲ್ ಮಾಡೋದಕ್ಕೆ ಪಣ ತೊಟ್ಟಿರುವುದು ವಿಶೇಷ.

    ಈಗಾಗಲೇ ಹುಡುಗಿ ಹುಡುಕಾಟದಲ್ಲಿ ದೊಡ್ಡಗೌಡ್ರ ಕುಟುಂಬ ನಿರತವಾಗಿದೆ. ತಮ್ಮ ಮನೆತನಕ್ಕೆ ಒಪ್ಪುವ ದೊಡ್ಡ ಮನೆತನದ ಹುಡುಗಿಯನ್ನ ಸೊಸೆಯಾಗಿ ಬರಮಾಡಿಕೊಳ್ಳೋದಕ್ಕೆ ತಯಾರಿ ನಡೆಸುತ್ತಿದೆ. ಇತ್ತ ಸೀತಾರಾಮ ಕಲ್ಯಾಣ ಸ್ಯಾಂಡಲ್‍ವುಡ್ ನಲ್ಲಿ ಹೊಸ ಭರವಸೆಯನ್ನು ಮೂಡಿಸಿದ್ದು, ಸದ್ಯದಲ್ಲೇ ಚಿತ್ರ ತೆರೆಕಾಣಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ಯಾಕೆ ಕಾಣಿಸಿಕೊಂಡಿಲ್ಲ?- ರಚಿತಾ ರಾಮ್ ಸ್ಪಷ್ಟನೆ

    ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ಯಾಕೆ ಕಾಣಿಸಿಕೊಂಡಿಲ್ಲ?- ರಚಿತಾ ರಾಮ್ ಸ್ಪಷ್ಟನೆ

    ಬೆಂಗಳೂರು: ಚಂದನವನದಲ್ಲಿ ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್ ಮಾಡಿದೆ. ಆದ್ರೆ ಟೀಸರ್‍ನಲ್ಲಿ ಗುಳಿಕೆನ್ನೆಯ ಮುದ್ದಾದ ಬೆಡಗಿ ರಚಿತಾ ರಾಮ್ ಕಾಣಿಸಿಕೊಂಡಿರಲಿಲ್ಲ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ರಚಿತಾ ರಾಮ್ ತಾವು ಏಕೆ ಕಾಣಿಸಿಕೊಂಡಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ಟೀಸರ್‍ನಲ್ಲಿ ಯಾರು ಕಾಣಿಸಿಕೊಂಡಿದ್ದಾರೆ ಎಂಬುದು ಮುಖ್ಯವಲ್ಲ. ಸಿನಿಮಾದಲ್ಲಿ ನಾನು ನಟಿಸಿದ್ದೇನೆ ಎಂಬುದು ಮುಖ್ಯ. ಚಿತ್ರದ ಟೀಸರ್ ಚೆನ್ನಾಗಿ ಮೂಡಿ ಬರಲಿ ಎಂದು ನಿಖಿಲ್ ಕುಮಾರ್ ಪಾತ್ರದ ಪರಿಚಯವನ್ನು ಅಲ್ಲಿ ತಿಳಿಸಲಾಗಿದೆ. ಟೀಸರ್ ಬಿಡುಗಡೆಯಾದಾಗ ಬಹಳ ಜನರು ನನ್ನನ್ನು ಈ ಪ್ರಶ್ನೆ ಕೇಳಿದ್ದರು ಅಂತ ಹೇಳಿದ್ರು.

    ಸೀತಾರಾಮ ಕಲ್ಯಾಣದಲ್ಲಿ ಎಲ್ಲ ಭಾಷೆಯ ಕಲಾವಿದರು ಇದ್ದಾರೆ. ಎಲ್ಲರೂ ತಮ್ಮ ಭಾಷೆಯಲ್ಲಿ ದೊಡ್ಡ ಸಾಧನೆ ಮಾಡಿದವರು. ಪ್ರತಿಯೊಂದು ಸೀನ್‍ಗಳನ್ನು ಮಾಡುವಾಗ ತುಂಬಾ ಚಾಲೆಂಜಿಂಗ್ ಆಗಿರುತ್ತದೆ. ಆದ್ರೆ ಪ್ರತಿಯೊಂದು ಶೂಟ್‍ನಲ್ಲಿ ಎಲ್ಲರಿಂದಲೂ ಕಲಿಯುವ ಅವಕಾಶ ಲಭಿಸಿದೆ. ಇನ್ನೇನು ಕೆಲವು ದಿನಗಳಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಟೀಸರ್ ಬಿಡುಗಡೆ ಬಳಿಕ ಚಂದನವನದಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಯೂಟ್ಯೂಬ್‍ನಲ್ಲಿ ನಂಬರ್ 01 ಟ್ರೆಂಡಿಂಗ್‍ನಲ್ಲಿ ನಮ್ಮ ಟೀಸರ್ ಇತ್ತು. ಜನರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಚಿತ್ರತಂಡ ಹಾಗು ನನ್ನ ಪರವಾಗಿ ಎಲ್ಲ ಅಭಿಮಾನಿಗಳಿಗೆ ರಚಿತಾ ರಾಮ್ ಧನ್ಯವಾದ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

    https://www.youtube.com/watch?v=vmW64rkvPiU&feature=youtu.be

    https://www.youtube.com/watch?v=3pYwtl-VD-Y&feature=youtu.be

  • ಕುರುಕ್ಷೇತ್ರದಲ್ಲಿ ನಿಖಿಲ್ ಶೂಟಿಂಗ್: ಅದ್ಧೂರಿ ಹಾಡಿನ ಸೆಟ್ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು ಗೊತ್ತೆ?

    ಕುರುಕ್ಷೇತ್ರದಲ್ಲಿ ನಿಖಿಲ್ ಶೂಟಿಂಗ್: ಅದ್ಧೂರಿ ಹಾಡಿನ ಸೆಟ್ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು ಗೊತ್ತೆ?

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ 50ನೇ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ಈ ಚಿತ್ರದ ಒಂದು ಹಾಡಿಗೆ ನಿರ್ಮಾಪಕ ಮುನಿರತ್ನ ನಾಲ್ಕು ಬೇರೆ ಬೇರೆ ಸೆಟ್ ಹಾಕಿ ಬರೋಬ್ಬರಿ ಒಂದು ಕೋಟಿ ರೂ. ಸುರಿದಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

    ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಮತ್ತು ಉತ್ತರೆ ನಡುವೆ ನಡೆಯುವ ಈ ಹಾಡಿಗೆ ಒಂದು ಕೋಟಿ ಖರ್ಚು ಮಾಡಿ ಅದ್ಧೂರಿ ಸೆಟ್ ಹಾಕಲು ಚಿತ್ರತಂಡ ಮುಂದಾಗಿದೆ. ಈ ಹಾಡಿನಲ್ಲಿ ಜಾಗ್ವಾರ್ ಚಿತ್ರದ ನಾಯಕ ನಿಖಿಲ್ ಕುಮಾರ್ ಕಾಣಿಸಿಕೊಂಡು ಅವರ ಜೊತೆಯಾಗಿ ನಟಿ ಅದಿತಿ ಆರ್ಯ ಕಾಣಿಸಿಕೊಳ್ಳಲಿದ್ದಾರೆ.

    ಈ ಹಾಡಿಗೆ ನಾಲ್ಕು ಬೇರೆ ಬೇರೆ ರೀತಿಯ ಅದ್ಧೂರಿ ಸೆಟ್ ಹಾಕಿ, ಆರು ಕ್ಯಾಮೆರಾಗಳಲ್ಲಿ ಈ ಹಾಡನ್ನು ಚಿತ್ರಿಕರಣ ಮಾಡಲಿದ್ದಾರೆ. ಟಾಲಿವುಡ್ ನ ಡ್ಯಾನ್ಸ್ ಮಾಸ್ಟರ್ ಶೇಖರ್ ಈ ಹಾಡಿಗೆ ನೃತ್ಯ ಹೇಳಿಕೊಡುತ್ತಿದ್ದು, 2 ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

    ಮುನ್ನಿರತ್ನ ಅವರ ಕನಸಿನ ಸಿನಿಮಾ `ಕುರುಕ್ಷೇತ್ರ’ ಬರೋಬ್ಬರಿ 50 ರಿಂದ 60ಕೋಟಿ ವೆಚ್ಚದಲ್ಲಿ ವೃಷಭಾದ್ರಿ ಪ್ರೋಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ನೂತನ ತಂತ್ರಜ್ಞಾನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಲಿದೆ.

    ಈ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ, ಸೋನು ಸೂದ್ ಹಾಗೂ ಪ್ರಣಯ ರಾಜ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ನೀರ್ ದೋಸೆ ಬೆಡಗಿ ಹರಿಪ್ರಿಯಾ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.