Tag: Nigeria

  • ನೈಜೀರಿಯಾದಿಂದ ತಂದ ಚೀತಾಗಳಿಂದ ದೇಶಾದ್ಯಂತ ಲಂಪಿ ವೈರಸ್‌ ಹರಡುತ್ತಿದೆ: ನಾಲಿಗೆ ಹರಿಬಿಟ್ಟ ಕೈ ನಾಯಕ ನಾನಾ ಪಾಟೋಲೆ

    ನೈಜೀರಿಯಾದಿಂದ ತಂದ ಚೀತಾಗಳಿಂದ ದೇಶಾದ್ಯಂತ ಲಂಪಿ ವೈರಸ್‌ ಹರಡುತ್ತಿದೆ: ನಾಲಿಗೆ ಹರಿಬಿಟ್ಟ ಕೈ ನಾಯಕ ನಾನಾ ಪಾಟೋಲೆ

    ಮುಂಬೈ: ಕಳೆದ ಕೆಲ ತಿಂಗಳಿಂದ ದೇಶದ ಜಾನುವಾರುಗಳನ್ನು ಲಂಪಿ ವೈರಸ್(Lumpy Virus) ಇನ್ನಿಲ್ಲದಂತೆ ಕಾಡುತ್ತಿದೆ. ಈ ಚರ್ಮ ರೋಗದ ಕುರಿತಾಗಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಾಟೋಲೆ(Nana Patole) ಹೇಳಿರುವ ಮಾತು ಈಗ ವಿವಾದಕ್ಕೆ ಕಾರಣವಾಗಿದೆ.

    ನೈಜೀರಿಯಾದಿಂದ ತರಲಾದ ಚೀತಾಗಳಿಂದಾಗಿಯೇ(Nigerian’ Cheetahs) ದೇಶಾದ್ಯಂತ ಲಂಪಿ ವೈರಸ್ ಹಬ್ಬುತ್ತಿದ್ದು, ಸಾವಿರಾರು ಪಶುಗಳು ಸಾವನ್ನಪ್ಪುತ್ತಿವೆ ಎಂದು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೇ ದೇಶದ ರೈತರಿಗೆ ನಷ್ಟ ಉಂಟು ಮಾಡಬೇಕೆಂಬ ದುರುದ್ದೇಶದಿಂದಲೇ ಈ ಚೀತಾಗಳನ್ನು ಕೇಂದ್ರ ಸರ್ಕಾರ ಭಾರತಕ್ಕೆ ತಂದಿದೆ ಎಂದು ಹೇಳಿ ನಾಲಿಗೆ ಹರಿಬಿಟ್ಟಿದ್ದಾರೆ.

    ಈ ಹೇಳಿಕೆಯ ಬೆನಲ್ಲೇ ನಾನಾ ಪಾಟೋಲೆ ಮೇಲೆ ಬಿಜೆಪಿ ಮುಗಿಬಿದ್ದಿದೆ. ನಾನಾ ಪಾಟೋಲೆಗೆ ಕನಿಷ್ಠ ನೈಜೀರಿಯಾ ಮತ್ತು ನಮೀಬಿಯಾಗೆ ಇರುವ ವ್ಯತ್ಯಾಸ ಕೂಡ ಗೊತ್ತಿಲ್ಲ. ಅವರು ಮಹಾರಾಷ್ಟ್ರದ ರಾಹುಲ್ ಗಾಂಧಿ ಇದ್ದಂತೆ ಎಂದು ಲೇವಡಿ ಮಾಡಿದೆ. ಇದನ್ನೂ ಓದಿ: ಚುನಾವಣೆ ವೇಳೆ ಉಚಿತ ಕೊಡುಗೆ ಆಫರ್ – ಪಕ್ಷಗಳಿಗೆ ಶಾಕ್, ಆಯೋಗದ ನಿರ್ಧಾರಕ್ಕೆ ವಿಪಕ್ಷಗಳು ಕಿಡಿ

    ಸುಳ್ಳು ಸುದ್ದಿ, ತಪ್ಪು ತಪ್ಪಾಗಿ ಅಪಪ್ರಚಾರ ಮಾಡುವುದು ಕಾಂಗ್ರೆಸ್‍ಗೆ ಹೊಸದಲ್ಲ. ಕೋವಿಡ್‌ ಸಮಯದಲ್ಲೂ ಹೀಗೆ ಮಾಡಿತ್ತು ಎಂದು ಬಿಜೆಪಿ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ. ಸುಳ್ಳು ಸುದ್ದಿ ಹಬ್ಬಿಸುವ ಇಂಥವರ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಳ್ಳುತ್ತಾ ಎಂದು ಸವಾಲು ಹಾಕಿದೆ.

    ಬಿಜೆಪಿ ಶಾಸಕ ರಾಮ್‌ ಕದಮ್‌ ಅವರು, ಚೀತಾವನ್ನು ತಂದಿದ್ದರಿಂದ ಭಾರತದಲ್ಲಿ ಲಂಪಿ ವೈರಸ್‌ ಹರಡುತ್ತಿದೆ ಎಂದು ಸಂಶೋಧನೆ ಮಾಡಿದ ನಾನಾ ಪಾಟೋಲೆಗೆ ನೊಬೆಲ್‌ ಪ್ರಶಸ್ತಿ(Nobel Award) ನೀಡಬೇಕೆಂದು ವ್ಯಂಗ್ಯವಾಡಿದ್ದಾರೆ.

    ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಭಾರತಕ್ಕೆ ಚೀತಾಗಳನ್ನು ತರಲಾಗಿತ್ತು. ಜುಲೈ ತಿಂಗಳಿನಲ್ಲಿ ಮೊದಲ ಬಾರಿಗೆ ಲಂಪಿ ವೈರಸ್‌ ಭಾರತದಲ್ಲಿ ಪತ್ತೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಚರ್ಚ್‍ನಲ್ಲಿ ಹತ್ಯಾಕಾಂಡ – 50 ಮಂದಿಯನ್ನು ಗುಂಡಿಟ್ಟು ಕೊಂದ

    ಚರ್ಚ್‍ನಲ್ಲಿ ಹತ್ಯಾಕಾಂಡ – 50 ಮಂದಿಯನ್ನು ಗುಂಡಿಟ್ಟು ಕೊಂದ

    ಅಬುಜಾ: ನೈರುತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್ ಮೇಲೆ ಬಂದೂಕುಧಾರಿಯೋರ್ವ ಸಾಮೂಹಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 50 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಗಾಯಗೊಂಡಿದ್ದಾರೆ.

    ಭಾನುವಾರ ಬೆಳಗಿನ ಜಾವ ಚರ್ಚ್‍ನಲ್ಲಿ ಪ್ರಾರ್ಥನೆ ಮಾಡಲು ಅನೇಕ ಮಂದಿ ಆಗಮಿಸಿದ್ದರು. ಈ ವೇಳೆ ಮುತ್ತಿಗೆ ಹಾಕಿ ಬಂದೂಕುಧಾರಿ ಆರಂಭದಲ್ಲಿ ಹೊರಗಡೆ ದಾಳಿ ನಡೆಸಿ ನಂತ ಒಳಗಡೆ ದಾಳಿ ನಡೆಸಿದ್ದಾನೆ. ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಮನೆಬಂದಂತೆ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ:  ಬೆಂಗಳೂರಿನಲ್ಲಿ 16 ದಿನಗಳ ಬಳಿಕ ಕೊರೊನಾಗೆ ಮಹಿಳೆ ಬಲಿ

    ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಒಂಡೋ ರಾಜ್ಯದ ಪೊಲೀಸ್ ವಕ್ತಾರ ಫನ್ಮಿಲಾಯೊ ಇಬುಕುನ್ ಒಡುನ್ಲಾಮಿ, ಬಂದೂಕುಧಾರಿ ಚರ್ಚ್ ಕಟ್ಟಡದ ಹೊರಗೆ ಮತ್ತು ಒಳಗೆ ಜನರ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿ ಯಾರು ಎನ್ನುವುದು ತಿಳಿದು ಬಂದಿಲ್ಲ ಇದನ್ನೂ ಓದಿ: ಕೇರಳದಲ್ಲಿ ಎರಡು ನೊರೊವೈರಸ್ ಪ್ರಕರಣ ಪತ್ತೆ

    ನಂತರ ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಒಂಡೋ ರಾಜ್ಯ ಗವರ್ನರ್ ಅರಕುನ್ರಿನ್ ಒಲುವರೊಟಿಮಿ ಅಕೆರೆಡೊಲು ಅವರು, ಇದೊಂದು ದೊಡ್ಡ ಹತ್ಯಾಕಾಂಡ ಎಂದು ಹೇಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

  • ಕಾಲ್ತುಳಿತಕ್ಕೆ ಗರ್ಭಿಣಿ, ಮಕ್ಕಳು ಸೇರಿ 31 ಜನ ಸಾವು

    ಕಾಲ್ತುಳಿತಕ್ಕೆ ಗರ್ಭಿಣಿ, ಮಕ್ಕಳು ಸೇರಿ 31 ಜನ ಸಾವು

    ಅಬುಜಾ: ಕಾಲ್ತುಳಿತದಲ್ಲಿ 31 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ನೈಜೀರಿಯಾದ ಚರ್ಚ್ ಚಾರಿಟಿ ಕಾರ್ಯಕ್ರಮವೊಂದರಲ್ಲಿ ನಡೆದಿದೆ.

    ರಿವರ್ಸ್ ಸ್ಟೇಟ್‍ನಲ್ಲಿರುವ ಕಿಂಗ್ಸ್ ಅಸೆಂಬ್ಲಿ ಪೆಂಟೆಕೋಸ್ಟಲ್ ಚರ್ಚ್ ಆಯೋಜಿಸಿದ್ದ ವಾರ್ಷಿಕ ಶಾಪ್ ಫಾರ್ ಫ್ರೀ ಚಾರಿಟಿ ಕಾರ್ಯಕ್ರಮಕ್ಕೆ ಜನರು ಬಂದಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಇದರಿಂದಾಗಿ ಗರ್ಭಿಣಿ ಹಾಗೂ ಹಲವು ಮಕ್ಕಳು ಸೇರಿದಂತೆ 31 ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಅನೇಕರಿಗೆ ಗಂಭೀರ ಗಾಯಗಳಾಗಿವೆ.

    crime

    ದತ್ತಿ ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಬೇಕಿತ್ತು. ಆದರೆ ಸರತಿ ಸಾಲಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಜನರು ಬೆಳಗ್ಗೆ 5 ಗಂಟೆಗೆ ಜನರು ಆಗಮಿಸಿದ್ದರು. ಇದಾದ ಬಳಿಕ ಗೇಟ್‍ಗೆ ಬೀಗ ಹಾಕಿದ್ದನ್ನು ಒಡೆದು ನೂಕುನುಗ್ಗಲು ಉಂಟಾಯಿತು. ಇದರಿಂದಾಗಿ ಕಾಲ್ತುಳಿತವಾಗಿದೆ. ಇದನ್ನೂ ಓದಿ: ನಾಲ್ಕೈದು ದಿನ ತಿರುಪತಿ ಭೇಟಿಯನ್ನು ಮುಂದೂಡಿ: ಟಿಟಿಡಿ ಮನವಿ

    ಸರ್ಕಾರದ ಅಂಕಿಅಂಶಗಳ ಪ್ರಕಾರ 80 ಮಿಲಿಯನ್‍ಗಿಂತಲೂ ಹೆಚ್ಚು ಜನರು ಬಡತನದಲ್ಲಿ ವಾಸಿಸುವ ಆಫ್ರಿಕಾದ ಅತಿದೊಡ್ಡ ಆರ್ಥಿಕತೆಯಾದ ನೈಜೀರಿಯಾದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದೆ. ಇದನ್ನೂ ಓದಿ: ವಿದೇಶದಿಂದ 3,500 ರೂ.ಗೆ ಯೂರಿಯಾ ಖರೀದಿಸಿ ರೈತರಿಗೆ 350 ರೂ.ಗೆ ವಿತರಣೆ : ಮೋದಿ

    ಕಾಲ್ತುಳಿತದ ನಂತರ ಸಂತ್ರಸ್ತರ ಸಂಬಂಧಿಕರು ಕೆಲವು ಚರ್ಚ್ ಸದಸ್ಯರ ಮೇಲೆ ದಾಳಿ ಮಾಡಿದ್ದಾರೆ. ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಲು ಚರ್ಚ್ ನಿರಾಕರಿಸಿದೆ. ಘಟನೆ ಸಂಬಂಧಿಸಿ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ನೈಜಿರಿಯಾ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಸ್ಫೋಟ-100ಕ್ಕೂ ಅಧಿಕ ಜನ ಸಾವು

    ನೈಜಿರಿಯಾ ತೈಲ ಸಂಸ್ಕರಣಾಗಾರದಲ್ಲಿ ಭಾರೀ ಸ್ಫೋಟ-100ಕ್ಕೂ ಅಧಿಕ ಜನ ಸಾವು

    ಪೋರ್ಟ್ ಹಾರ್ಕೋಟ್: ನೈಜಿರಿಯಾ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಭಾರೀ ಸ್ಫೋಟ 100ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

    ದಕ್ಷಿಣ ನೈಜಿರಿಯಾದ ಇಮೋ ರಾಜ್ಯದ ನಡುವಿನ ಗಡಿಯಲ್ಲಿ ಘಟನೆ ಸಂಭವಿಸಿದೆ. ಸ್ಫೋಟದಲ್ಲಿ 100ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇದು ಆಫ್ರಿಕಾದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕವಾಗಿದೆ. ನೈಜಿರಿಯಾದಲ್ಲಿ ಇತ್ತೀಚಿಗೆ ನಡೆದ ಅತಿದೊಡ್ಡ ಸ್ಫೋಟವಾಗಿದೆ.

    ಅಕ್ರಮ ಸಂಸ್ಕರಣಾಗಾರದ ಸ್ಥಳದಲ್ಲಿ ನಿರ್ವಾಹಕರು ಮತ್ತು ಪೋಷಕರು ವ್ಯಾಪಾರಕ್ಕಾಗಿ ಒಟ್ಟುಗೂಡಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳ ಬಳಿ ಚಿನ್ನ ಖರೀದಿ ಮಾಡದಂತೆ ಅಭಿಯಾನ

    ಅಕ್ರಮ ಕಚ್ಚಾ ತೈಲ ಸಂಸ್ಕರಣೆಯು ದಕ್ಷಿಣ ನೈಜಿರಿಯಾದ ತೈಲ ಪ್ರದೇಶದಲ್ಲಿ ಸಾಮಾನ್ಯವಾಗಿದೆ. ಅಲ್ಲಿ ತೈಲ ಕಳ್ಳರು ಕಚ್ಚಾ ತೈಲವನ್ನು ಕದಿಯಲು ಪೈಪ್‍ಲೈನ್‍ಗಳನ್ನು ಹಾಳುಮಾಡುತ್ತಾರೆ. ಅದನ್ನು ಅವರು ಬ್ಲಾಕ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಂಸ್ಕರಿಸುತ್ತಾರೆ.ಈ ಕಳ್ಳ ಸಾಗಣಿಕೆಯನ್ನು ತಡೆಯಲು ಸರ್ಕಾರ ಮಿಲಿಟರಿ ಪಡೆಯನ್ನು ನೇಮಿಸಿದೆ. ಆದರೂ ಯಾವುದೇ ಪ್ರಯೋಜವಾಗುತ್ತಿಲ್ಲ. ಇದನ್ನೂ ಓದಿ: ಗೋಡ್ಸೆ ಸಿದ್ಧಾಂತವನ್ನು ಮೋದಿ ಬೆಂಬಲಿಸುತ್ತಿದ್ದಾರೆ: ಕೆಟಿಆರ್

  • ನೈಜೀರಿಯಾ ಪ್ರಜೆ ಅರೆಸ್ಟ್ – 70 ಲಕ್ಷರೂ. ಮೌಲ್ಯದ ಡ್ರಗ್ಸ್ ವಶ

    ನೈಜೀರಿಯಾ ಪ್ರಜೆ ಅರೆಸ್ಟ್ – 70 ಲಕ್ಷರೂ. ಮೌಲ್ಯದ ಡ್ರಗ್ಸ್ ವಶ

    ಬೆಂಗಳೂರು: ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯಿಂದ 70 ಲಕ್ಷ ಬೆಲೆ ಬಾಳುವ ಡ್ರಗ್ಸ್ ಮತ್ತು 800 ಗ್ರಾಂ ತೂಕದ ಎಂಡಿಎಂಎ, ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ. ಪ್ರತಿ 5 ಸಾವಿರದಿಂದ 8 ಸಾವಿರಕ್ಕೆ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದನು.

    ಆರೋಪಿಯು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದನು. ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಏಕಕಾಲದಲ್ಲಿ 6 ಪತ್ನಿಯರು ಗರ್ಭಿಣಿ – ಮತ್ತೆ ಸುದ್ದಿಯಾದ ಪ್ಲೇಬಾಯ್  ಸ್ಟಾರ್

    ಏಕಕಾಲದಲ್ಲಿ 6 ಪತ್ನಿಯರು ಗರ್ಭಿಣಿ – ಮತ್ತೆ ಸುದ್ದಿಯಾದ ಪ್ಲೇಬಾಯ್ ಸ್ಟಾರ್

    ಲಾಗೋಸ್: ನೈಜೀರಿಯಾದ ವ್ಯಕ್ತಿಯೊಬ್ಬ ತನ್ನ ಆರು ಪತ್ನಿಯರನ್ನು ಏಕಕಾಲದಲ್ಲಿ ಗರ್ಭಿಣಿಯರನ್ನಾಗಿ ಮಾಡುವ ಮೂಲಕವಾಗಿ ಸುದ್ದಿಯಲ್ಲಿದ್ದಾನೆ.

    ನೈಜೀರಿಯಾದ ಪ್ಲೇಬಾಯ್ ಎಂದೇ ಪ್ರಸಿದ್ಧವಾಗಿರುವ ಪ್ರೆಟ್ಟಿ ಮೈಕ್ ಸದಾ ಸುದ್ಧಿಯಲ್ಲಿರುತ್ತಾನೆ.. ಇದೀಗ ಈತನ 6 ಪತ್ನಿಯರು ಒಟ್ಟಿಗೆ ಗರ್ಭಧರಿಸಿದ್ದಾರೆ.

    ಮೈಕ್ ಈ ರೀತಿಯ ವಿಚಿತ್ರ ರೀತಿಯಿಂದ ಸುದ್ದಿಯಾಗುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಯುವತಿಯರನ್ನು ಕುದುರೆಗಳಂತೆ ಕಟ್ಟಿ, ತಾನು ಸಾರಥಿಯಂತೆ ನಿಂತು ಫೋಸ್ ಕೊಟ್ಟ ಫೋಟೋ ಹಂಚಿಕೊಂಡಿದ್ದನು. ಮಹಿಳೆಯರನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದಾನೆ ಎಂದು ಈತನ ಮೇಲೆ ಪೊಲೀಸ್ ಪ್ರಕರಣವೂ ದಾಖಲಾಗಿತ್ತು.

    ಇದೀಗ ಪ್ರೆಟ್ಟಿ ಮೈಕ್ ಇತ್ತೀಚೆಗೆ ತನ್ನ 6 ಹೆಂಡತಿಯರನ್ನು ಕರೆದುಕೊಂಡು ಸ್ನೇಹಿತನೊಬ್ಬನ ಮದುವೆಗೆ ಹೋಗಿದ್ದನು. ಮದುವೆಗೆ ಹೋಗುವಾಗ ಈತನ 6 ಪತ್ನಿಯರು ಒಂದೇ ತೆರನಾದ ಬಟ್ಟೆಯನ್ನು ಹಾಕಿಕೊಂಡಿದ್ದರು. ಮತ್ತೊಂದು ವಿಶೇಷವೆಂದರೆ ಇವನ ಆರು ಪತ್ನಿಯರು ಗರ್ಭಿಣಿಯರಾಗಿದ್ದರು.

    ಮದುವೆ ಮನೆಯಲ್ಲಿ ತನ್ನ 6 ಪತ್ನಿಯರನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾನೆ. ಜೊತೆಯಲ್ಲಿ ಅವರ ಹೊಟ್ಟೆಯಲ್ಲಿರುವ ಮಗುವಿಗೆ ನಾನೇ ಅಪ್ಪ ಎಂದು ಹೇಳಿಕೊಂಡಿದ್ದಾನೆ. ಮದುವೆ ಮನೆಗೆ ಬಂದಿದ್ದ ಜನರು ವಧು-ವರರನ್ನು ನೋಡುವುದು ಬಿಟ್ಟು ಮೈಕ್‍ನ ಕುಟುಂಬವನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.

  • ನೈಜಿರಿಯಾದಲ್ಲಿ ಕನ್ನಡಿಗರ ಪರದಾಟ- ರಾಜ್ಯದ 500ಕ್ಕೂ ಹೆಚ್ಚು ಮಂದಿ ಲಾಕ್

    ನೈಜಿರಿಯಾದಲ್ಲಿ ಕನ್ನಡಿಗರ ಪರದಾಟ- ರಾಜ್ಯದ 500ಕ್ಕೂ ಹೆಚ್ಚು ಮಂದಿ ಲಾಕ್

    – ಮರಳಿ ಕರೆಸಿಕೊಳ್ಳುವಂತೆ ಮನವಿ

    ಧಾರವಾಡ: ರಾಜ್ಯದ 500ಕ್ಕೂ ಹೆಚ್ಚು ಮಂದಿ ನೈಜಿರಿಯಾದಲ್ಲಿ ಲಾಕ್ ಆಗಿದ್ದು, ಇದೀಗ ಮರಳಿ ಕರೆಸಿಕೊಳ್ಳುವಂತೆ ಕನ್ನಡಿಗರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ನೈಜಿರಿಯಾದಲ್ಲಿ ದಿನೇ ದಿನೇ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಕನ್ನಡಿಗರು ಭಯಭೀತರಾಗಿದ್ದು, ನೈಜಿರಿಯಾ ಕನ್ನಡ ಸಂಘ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತು ರಾಯಭಾರಿ ಕಚೇರಿಗೆ ನಿರಂತರ ಒತ್ತಡ ಹಾಕುತ್ತಿದೆ.

    ಧಾರವಾಡ ಸೇರಿದಂತೆ ರಾಜ್ಯದ 500ಕ್ಕೂ ಹೆಚ್ಚು ಮಂದಿ ನೈಜಿರಿಯಾದಲ್ಲಿ ಲಾಕ್ ಆಗಿದ್ದು, ಆದಷ್ಟು ಬೇಗ ಇಂಡಿಯಾಗೆ ಕರೆಸಿಕೊಂಡು ಬಿಡಿ ಎಂದು ಕನ್ನಡ ಸಂಘದವರು ಅಳಲು ತೋಡಿಕೊಳ್ಳುತ್ತಿದ್ದಾರೆ.

    ಈ ಬಗ್ಗೆ ಸಂಘದ ಕಾರ್ಯದರ್ಶಿ ರಾಮ್ ವಿಡಿಯೋ ಮಾಡಿ, ನೈಜಿರಿಯಾದಲ್ಲಿ ಕರ್ನಾಟಕದ 500ರಿಂದ 600 ಮಂದಿ ಇದ್ದೇವೆ. ಈ ದೇಶದಲ್ಲಿ ಕೋವಿಡ್ 19 ವೇಗವಾಗಿ ಹರಡುತ್ತಿದೆ. ಲೆಗೋಸ್ ಎಂಬ ಸಣ್ಣ ರಾಜ್ಯದಲ್ಲಿ ನಾವೆಲ್ಲ ಸಂಕಷ್ಟದಲ್ಲಿದ್ದೇವೆ. ಲೆಗೋಸ್ ರಾಜ್ಯದಲ್ಲಿ 997 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾದಿಂದ ಈಗಾಗಲೇ 40 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಸಾಧ್ಯವಾದಷ್ಟು ಬೇಗ ಪ್ರಧಾನಿ ಮತ್ತು ಮುಖ್ಯಮಂತ್ರಿ ನಮ್ಮನ್ನು ಕರೆಯಿಸಿಕೊಳ್ಳಬೇಕು ಎಂದು ಆಗ್ರಹ ಮತ್ತು ಮನವಿ ಮಾಡಿಕೊಂಡಿದ್ದಾರೆ.

  • ಮೂತ್ರ ವಿಸರ್ಜನೆಗೆ ಬ್ಯಾಟನ್ನು ಬಿಟ್ಟು ಮೈದಾನ ತೊರೆದು ಓಡಿದ ಆಟಗಾರ – ವಿಡಿಯೋ

    ಮೂತ್ರ ವಿಸರ್ಜನೆಗೆ ಬ್ಯಾಟನ್ನು ಬಿಟ್ಟು ಮೈದಾನ ತೊರೆದು ಓಡಿದ ಆಟಗಾರ – ವಿಡಿಯೋ

    ಅಬುಧಾಬಿ: ಟಿ20 ವಿಶ್ವಕಪ್ ಕ್ರಿಕೆಟ್ ಅರ್ಹತಾ ಪಂದ್ಯದಲ್ಲಿ ಆಟಗಾರನೊಬ್ಬ ಮೂತ್ರ ವಿಸರ್ಜನೆ ಮಾಡಲು ಬ್ಯಾಟನ್ನು ಬಿಟ್ಟು ಮೈದಾನದಿಂದಲೇ  ಓಡಿದ ಪ್ರಸಂಗ ನಡೆದಿದೆ.

    ಅಬುಧಾಬಿಯ ಶೇಖ್ ಝಾಯದ್ ಕ್ರೀಡಾಂಗಣದಲ್ಲಿ ಕೆನಡಾ ಮತ್ತು ನೈಜೀರಿಯಾ ನಡುವೆ ಟಿ20 ಕ್ರಿಕೆಟ್ ಪಂದ್ಯ ನಡೆಯುತಿತ್ತು. ಕೆನಡಾ ನೀಡಿದ 160 ರನ್ ಗಳ ಗುರಿಯನ್ನು ಬೆನ್ನತ್ತಿದ ನೈಜೀರಿಯಾ 7 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 38 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಕ್ರೀಸ್ ನಲ್ಲಿದ್ದ ಸುಲೇಮಾನ್ ರನ್ಸೀವಿ ಇದ್ದಕ್ಕಿದ್ದಂತೆ ಬ್ಯಾಟನ್ನು ಬಿಟ್ಟು ಓಡಿಕೊಂಡು ಮೈದಾನವನ್ನು ತೊರೆದಿದ್ದಾರೆ.

    ಇದ್ದಕ್ಕಿದ್ದಂತೆ ಯಾರಿಗೂ ಹೇಳದೇ ರನ್ಸೀವಿ ಓಡಿದ್ದನ್ನು ನೋಡಿ ಅಂಪೈರ್ ಮತ್ತು ಆಟಗಾರರು ಆ ಕ್ಷಣ ದಂಗಾಗಿ ಬಿಟ್ಟಿದ್ದಾರೆ. ಓಡಿದ್ದು ಯಾಕೆ ಎನ್ನುವುದು ತಿಳಿಯದ ಪರಿಣಾಮ ಕೊನೆಗೆ ಆಟ ಮುಂದುವರಿಸಲು ಮೊತ್ತೊಬ್ಬ ಆಟಗಾರ ಮೈದಾನಕ್ಕೆ ಇಳಿಯಲು ಮುಂದಾಗುತ್ತಾನೆ. ಈ ಸಮಯದಲ್ಲಿ ರನ್ಸೀವಿ ಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡು ತೊಡೆಯ ಗಾರ್ಡ್ ಗಳನ್ನು ಸರಿ ಮಾಡಿಕೊಂಡು ಓಡಿಕೊಂಡು ಮೈದಾನವನ್ನು ಪ್ರವೇಶಿಸುತ್ತಾರೆ.

    ರನ್ಸೀವಿ ಓಡಿಕೊಂಡು ಮೈದಾನವನ್ನು ಪ್ರವೇಶಿಸುವುದನ್ನು ನೋಡಿ ಇತರೇ ನೈಜೀರಿಯಾ ಆಟಗಾರರು ಬಿದ್ದು ಬಿದ್ದು ನಕ್ಕಿದ್ದಾರೆ. ವಿಷಯ ತಿಳಿದು ಅಂಪೈರ್ ಸಹ ನಗೆ ಬೀರಿದ್ದಾರೆ. ಈ ಅರ್ಹತಾ ಪಂದ್ಯವನ್ನು ಕೆನಡಾ 50 ರನ್ ಗಳಿಂದ ಗೆದ್ದುಕೊಂಡಿದೆ.

  • ದಿಢೀರ್ ಎಂಟ್ರಿ ಕೊಟ್ಟು ಗೌರವ ದಂಡವನ್ನು ಎತ್ತಿಕೊಂಡು ಹೋದ: ಸಂಸತ್ ಕಲಾಪದಲ್ಲಿ ಅಲ್ಲೋಲ ಕಲ್ಲೋಲ

    ದಿಢೀರ್ ಎಂಟ್ರಿ ಕೊಟ್ಟು ಗೌರವ ದಂಡವನ್ನು ಎತ್ತಿಕೊಂಡು ಹೋದ: ಸಂಸತ್ ಕಲಾಪದಲ್ಲಿ ಅಲ್ಲೋಲ ಕಲ್ಲೋಲ

    ಲಾಗೋಸ್: ನೈಜೀರಿಯಾದ ಸಂಸತ್ ಕಲಾಪದ ವೇಳೆ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಒಳಪ್ರವೇಶಿಸಿ ಸದನದ ಸ್ಪೀಕರ್ ಮುಂದುಗಡೆ ಇದ್ದ ಗೌರವ ದಂಡವನ್ನು ಎತ್ತಿಕೊಂಡು ಪರಾರಿಯಾಗಲು ಯತ್ನಿಸಿರುವ ಘಟನೆ ಬುಧವಾರ ನಡೆದಿದೆ.

    ಸಂಸತ್ ಭವನದಲ್ಲಿ ಭದ್ರತಾ ಸಿಬ್ಬಂದಿಗಳ ಮುಂದೆಯೇ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ವೇಳೆ ವ್ಯಕ್ತಿಯನ್ನು ತಡೆಯಲು ಅಧಿಕಾರಿಗಳು ಯತ್ನಿಸಿದರೂ ಆತ ಅದನ್ನು ತೆಗೆದುಕೊಂಡು ಪರಾರಿಯಾಗಿದ್ದ. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿ ಗೌರವ ದಂಡವನ್ನು ಮರಳಿ ಪಡೆದಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಸತ್ ವಕ್ತಾರರೊಬ್ಬರು, ಸಂಸತ್ ನಿಂದ ಅಮಾನತುಗೊಂಡಿದ್ದ ಸದಸ್ಯರ ಬೆಂಬಲದೊಂದಿಗೆ ಈ ವ್ಯಕ್ತಿ ಕೃತ್ಯ ನಡೆಸಿದ್ದಾನೆ. ಸರ್ಕಾರವನ್ನು ಉರುಳಿಸುವ ತಂತ್ರವಾಗಿ ಆತ ಈ ಕೆಲಸ ಮಾಡಿದ್ದಾನೆ. ಇದೊಂದು ದೇಶದ್ರೋಹದ ಕೃತ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

    ಈ ಗೌರವ ದಂಡ ಇಲ್ಲದೇ ನೈಜೀರಿಯಾ ಸಂಸತ್ ನಲ್ಲಿ ಯಾವುದೇ ಕಾನೂನು ಪಾಸ್ ಮಾಡಬಾರದು ಎನ್ನುವ ನಿಯಮವಿದೆ. ಈ ಘಟನೆಯ ಬಳಿಕ ಸಂಸತ್ ಕಲಾಪವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ 109 ಸದಸ್ಯರು ಕಲಾಪ ಮುಂದುವರಿಸುವಂತೆ ಪಟ್ಟುಹಿಡಿದಿದ್ದರು. ಹೀಗಾಗಿ ಮತ್ತೊಂದು ಗೌರವ ದಂಡವನ್ನು ಇಡುವ ಮೂಲಕ ಸದನದ ಕಲಾಪ ಮುಂದುವರಿಯಿತು.

    https://www.youtube.com/watch?v=OStFIHPD42w&feature=youtu.be&t=70&has_verified=1&utm_source=inshorts&utm_medium=referral&utm_campaign=fullarticle

  • ಬೆಂಗ್ಳೂರಲ್ಲಿ ವಿದೇಶಿ ಪ್ರಜೆಯಿಂದ ಕಿಡ್ನಿ ಮಾರಾಟ ಜಾಲ

    ಬೆಂಗ್ಳೂರಲ್ಲಿ ವಿದೇಶಿ ಪ್ರಜೆಯಿಂದ ಕಿಡ್ನಿ ಮಾರಾಟ ಜಾಲ

    ಬೆಂಗಳೂರು: ವಿದೇಶಿ ಪ್ರಜೆಯೊಬ್ಬ ಬೆಂಗಳೂರಲ್ಲಿ ಕಿಡ್ನಿ ಮಾರಾಟ ಮಾಡಿ ಮೂರು ಕೋಟಿ ರೂ. ದುಡ್ಡು ಮಾಡಿರೋ ಬಗ್ಗೆ ಬೆಳಕಿಗೆ ಬಂದಿದೆ.

    ನೈಜೀರಿಯಾ ಪ್ರಜೆ ಡೇವಿಡ್ ಉಜ್ಮಾ ಉಭಾ ಬೆಂಗಳೂರಲ್ಲಿ ಕಿಡ್ನಿ ಕೊಡಿಸುತ್ತಾನಂತೆ. ಕೊತ್ತನೂರಿನ ನಾಗೇನಹಳ್ಳಿಯಲ್ಲಿ ವಾಸ ಮಾಡುತ್ತಿರೋ ಇವನು ಕಿಡ್ನಿ ಮಾರಾಟ ಜಾಲ ನಡೆಸುತ್ತಿದ್ದ ಅನ್ನೋ ಮಾಹಿತಿಯ ಆಧಾರದ ಮೇಲೆ ಕೊತ್ತನೂರು ಪೊಲೀಸರು ಈತನನ್ನ ವಶಕ್ಕೆ ಪಡೆದಿದ್ದಾರೆ.

    ಖಚಿತ ಮಾಹಿತಿ ಆಧಾರದ ಮೇಲೆ ಈತ ಬಾಡಿಗೆಗೆ ಇದ್ದ ಮನೆ ಮೇಲೆ ರೇಡ್ ಮಾಡಿದ ಪೊಲೀಸರು, ಕಿಡ್ನಿ ಮಾರಾಟ ಜಾಲದ ಹಲವಾರು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ. ಅಲ್ಲದೇ ಈ ರಾಕೆಟ್‍ನಲ್ಲಿ ಹಲವಾರು ಮಂದಿಯಿದ್ದು ವಿಚಾರಣೆಗಾಗಿ ಈತನನ್ನು ಪೊಲೀಸ್ ಕಸ್ಟಡಿಗೆ ಕೂಡ ಪಡೆಯಲಾಗಿದೆ.

    ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕಿಡ್ನಿಯನ್ನು ಕಸಿ ಮಾಡೋದಾಗಿ ಹಲವಾರು ಮಂದಿಯಿಂದ ಹಣ ಪಡೆದಿದ್ದಾನೆ. ಅಲ್ಲದೇ ಪ್ರತಿಷ್ಠಿತ ಆಸ್ಪತ್ರೆಗಳ ರೆಕಾಡ್ರ್ಸ್ ಕೂಡ ಈತನ ಮನೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.