ಬೆಂಗಳೂರು: ಬಿಗ್ಬಾಸ್ ಸೀಸನ್-8ರ ಸ್ಪರ್ಧಿ ನಿಧಿ ಸುಬ್ಬಯ್ಯ ಹಿಮಾಚಲ ಪ್ರದೇಶಕ್ಕೆ ಹಾರಿದ್ದು, ಬೆಂಗಳೂರಿಗೆ ಬಂದು ಮಂಜು ಪಾವಗಡ ಅವರನ್ನು ಭೇಟಿಯಾಗಿದ್ದಾರೆ.

ಬಿಗ್ಬಾಸ್ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಿಧಿ ತಮ್ಮ ದಿನನಿತ್ಯದ ಅಪ್ಡೇಟ್ ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇಂದು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ, ನಾನು ಮತ್ತೆ ಬೆಂಗಳೂರಿಗೆ ಬಿಗ್ಬಾಸ್ ವಿನ್ನರ್ ಮಂಜು ಪಾವಗಡ ಜೊತೆ ಬಂದಿದ್ದು, ನಮ್ಮನ್ನು ಬಿಟ್ಟ ಶುಭಾಗೆ ಧನ್ಯವಾದ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಶುಭಾ ಇದಕ್ಕೆ ಪ್ರತಿಕ್ರಿಯಿಸಿದ್ದು, ಮುಂದಿನ ಬಾರಿ ಬಿಡುವುದು ಮಾತ್ರವಲ್ಲ, ಬೇಗ ಸಿಗೋಣ ನಾನು ಕಾಯುತ್ತಿದ್ದೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಫರಾ ಖಾನ್ಗೆ ಕೊರೊನಾ – ದೀಪಿಕಾ, ಅಮಿತಾಭ್ ಬಗ್ಗೆ ಅಭಿಮಾನಿಗಳ ಪ್ರಶ್ನೆ
View this post on Instagram
ಬಿಗ್ಬಾಸ್ ನಂತರ ನಿಧಿ ಸುಮಾರು 22 ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿದ್ದು, ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದನ್ನು ನೋಡಿದ ಅವರ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ: 22 ದಿನ ಹಿಮಾಚಲ ಪ್ರದೇಶದಲ್ಲಿ ನಿಧಿ ಸುಬ್ಬಯ್ಯ ಮಾಡಿದ್ದೇನು?

ಮದುವೆಯ ನಂತರ ನಿಧಿ ಸಿನಿಮಾಗಳಿಗೆ ಬ್ರೇಕ್ ತೆಗೆದುಕೊಂಡಿದ್ದರು. ಬಿಗ್ಬಾಸ್ ನಂತರ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಯಾವ ರೀತಿಯ ಪಾತ್ರಗಳನ್ನು ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.











ಹೌದು ಬಿಗ್ಬಾಸ್ ಮನೆಯಲ್ಲಿ ರೇಶನ್ ಒಂದು ಅಳತೆಯಲ್ಲಿ ಬರುತ್ತದೆ. ಬೇಕಾ ಬಿಟ್ಟಿಯಾಗಿ ಖರ್ಚು ಮಾಡುವಂತಿಲ್ಲ. ಮಾಡಿದರೆ ಅವರೆ ಮುಂದೆ ಮತ್ತೆ ರೇಶನ್ ಬರುವವರೆಗೂ ಅದೇ ಸಾಮಾಗ್ರಿಗಳಲ್ಲಿ ಅಡುಗೆ ಮಾಡಿಕೊಂಡು ಹೋಗಬೇಕು. ಆದರೆ ಒಂಟಿ ಮನೆಯ ಸದಸ್ಯರು ತುಪ್ಪ ಖಾಲಿ ಆಗಿದೆ ಎಂದು ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ.




ದಿವ್ಯಾ ಅವರು ಬೇಸರದಿಂದ ಕೂತಿದ್ದರು. ನಾನು ಹೋಗಿ ಏಕೆ ಏನಾಯಿತ್ತು ಎಂದು ವಿಚಾರಿಸಿದೆ. ಆಗ ದಿವ್ಯಾ ಸುರೇಶ್ ಈಗ ದಿವ್ಯಾ ಉರುಡುಗ ಅವರದ್ದೇ ಹೈಲೈಟ್ ಆಗ್ತಾ ಇದೇ ಅಲ್ಲವಾ ಎಂದು ಹೇಳಿದರು. ನಾನು ನೀವು ಮತ್ತೆ ಮಂಜು ಹೈಲೈಟ್ ಆಗುತ್ತಿಲ್ಲ ಎಂದು ಬೇಜಾರಾ ಎಂದು ಹೇಳಿದೆ. ಅವರು ತುಂಬಾ ಬುದ್ಧಿವಂತರು ಎಂದು ನಿಧಿ ಹೇಳಿದ್ದಾರೆ. ಈ ವೇಳೆ ಶುಭಾ ಹೌದು ನಾನು ನೋಡಿದೆ ದಿವ್ಯಾ ಸುರೇಶ್ ಬೇಜಾರ್ ಆಗಿದ್ದಾರೆ ಎಂದು ಹೇಳುತ್ತಾ ಇಬ್ಬರು ಸೇರಿ ನಕ್ಕಿದ್ದಾರೆ.


ನಾವು ಎಲ್ಲವನ್ನು ಒಂದು ಕಡೆ ಬಿಟ್ಟು ಕೊಡುತ್ತಿದ್ದೇವೆ. ನಮಗೆ ಯಾರು ಇಷ್ಟ ಎಂದು ಕೇಳಿದರೆ ನಾವು ಪುರುಷರ ಹೆಸರನ್ನೇ ಸೂಚಿಸುತ್ತೇವೆ. ಮಂಜು, ರಾಘು, ಅರವಿಂದ್ ಎಂದು ಹೇಳುತ್ತೇವೆ. ಅಷ್ಟೇ ನಮ್ಮ ಪ್ರಪಂಚವಾಗಿದೆ. ಒಂದು ಬಾರಿಯಾದರೂ ನಮ್ಮ ಹೆಸರನ್ನು ಅವರೂ ಹೇಳಿದ್ದಾರಾ ಎಂದು ಶುಭ ಪ್ರಶ್ನಿಸಿದ್ದಾರೆ. ಅಲ್ಲಿಯೇ ಇದ್ದ ನಿಧಿ ಸುಬ್ಬಯ್ಯ ಹೌದು ಅವರು ಯಾವಾಗಲೂ ಟಾಸ್ಕ್ ಅನ್ವಯವಾಗಿ ದಿವ್ಯಾ ಸುರೇಶ್, ದಿವ್ಯಾ ಉರುಡುಗ ಎಂದು ಹೆಸರನ್ನು ಸೂಚಿಸುತ್ತಾರೆ. ಬೇರೆ ಯಾರು ಕಾಣುವುದಿಲ್ಲ ಎಂದು ಮನೆಯವರ ನಡುವಳಿಕೆ ಕುರಿತಾಗಿ ಶುಭ ಪೂಂಜಾ ಹಾಗೂ ನಿಧಿ ಸುಬ್ಬಯ್ಯ ಮಾತನಾಡಿಕೊಂಡಿದ್ದಾರೆ.
ಮನೆಯ ಸ್ಪರ್ಧಿಗಳ ಆಟ ಪ್ರಾರಂಭವಾಗಿದೆ. ತಮ್ಮನ್ನೂ ತಾವು ಬಚಾವ್ ಮಾಡಿಕೊಳ್ಳಲು ಹೊಸ ರೀತಿಯ ಉಪಾಯವನ್ನು ಹುಡುಕುತ್ತಿದ್ದಾರೆ. ನಾವು ಗೆಲ್ಲಲೇ ಬೇಕು ಎಂದು ಮನೆಯ ಹೆಂಗಳೆಯರು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದಾರೆ. ಮನೆಯಲ್ಲಿರುವ ಸೆಲೆಬ್ರಿಟಿ ಮಹಿಳಾ ಮಣಿಗಳು ಹೇಗೆ ಆಡುತ್ತಾರೆ. ಏನೆಲ್ಲಾ ಚಮತ್ಕಾರಗಳನ್ನು ಮಾಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.