Tag: New Jersey

  • ಹಾವಿನ ವಿಷವೇ ಈತನಿಗೆ ಆಹಾರ – ʻಸ್ನೇಕ್‌ ಮ್ಯಾನ್‌ʼ ಜೀವನ ಕಥೆಯೇ ರೋಚಕ!

    ಹಾವಿನ ವಿಷವೇ ಈತನಿಗೆ ಆಹಾರ – ʻಸ್ನೇಕ್‌ ಮ್ಯಾನ್‌ʼ ಜೀವನ ಕಥೆಯೇ ರೋಚಕ!

    ಹಾವಿನ ದ್ವೇಷ 12 ವರ್ಷ ಅನ್ನುವ ಮಾತಿದೆ. ಇದು ಸತ್ಯವೋ ಸುಳ್ಳೋ ಬೇರೆ ಪ್ರಶ್ನೆ. ಆದ್ರೆ ಕೆಲವು ಜಾಗಗಳಲ್ಲಿ ಹಾವುಗಳು ಪದೇ ಪದೇ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣಗಳನ್ನೂ ಜನರು ಊಹಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಶೇ. 70ರಷ್ಟು ಹಾವು (Snake) ಕಡಿತದ ಪ್ರಕರಣಗಳಲ್ಲಿ ವಿಷ ಏರುವುದಿಲ್ಲ ಎಂದು ಉರಗ ತಜ್ಞರು ಹೇಳುತ್ತಾರೆ. ಕಚ್ಚಿದ ಹಾವಿನಲ್ಲಿ ವಿಷವಿಲ್ಲದಿರುವುದು, ಕುಟುಕಿದಾಗ ಅಪಾಯಕಾರಿ ಆಗುವಷ್ಟು ಪ್ರಮಾಣದ ವಿಷ ದೇಹ ಸೇರದೇ ಇರುವುದು ಮುಂತಾದ ಹಲವು ಕಾರಣಗಳು ಇದ್ದಿರಬಹುದು. ಕೆಲವೊಮ್ಮೆ ಹಾವು ಕುಟುಕಿದಾಕ್ಷಣ ದೇಹದ ಆ ಭಾಗ ಕೆಂಪಾಗಿ ಊತ, ನೋವು ಕಾಣಬಹುದು, ರಕ್ತ ಹರಿಯಲೂಬಹುದು. ಆದರೆ ಕೆಲ ಜಾತಿಯ ಹಾವುಗಳು ಕಚ್ಚಿದಾಗ ಇಂಥ ಯಾವ ಬಾಹ್ಯ ಲಕ್ಷಣಗಳೂ ಕಾಣದೇ ಹೊಟ್ಟೆ ನೋವು ಬರಬಹುದು.

    ಉತ್ತರ ಪ್ರದೇಶದಲ್ಲಿ (Uttar Pradesh) ಇತ್ತೀಚೆಗೆ ವಿಚಿತ್ರ ಪ್ರಕರಣವೊಂದು ವರದಿಯಾಗಿತ್ತು. 24 ವರ್ಷದ ಯುವಕನೊಬ್ಬನನ್ನ ಹಾವು ಬೆನ್ನತ್ತಿತ್ತು. ಫತೇಹ್‌ಪುರದ ವಿಕಾಸ್ ದುಬೆ ಎಂಬ ವ್ಯಕ್ತಿಗೆ ಕಳೆದ 40 ದಿನಗಳಲ್ಲಿ ಏಳು ಬಾರಿ ಹಾವು ಕಚ್ಚಿತ್ತು. ಇದು ವೈದ್ಯರನ್ನೂ ಕಳವಳಕ್ಕೀಡುಮಾಡಿದೆ. ಇನ್ನೂ ನೂರಾರು ಹಾವುಗಳಿಂದ ನೂರಾರು ಬಾರಿ ವ್ಯಕ್ತಿಯೊಬ್ಬ ಕಚ್ಚಿಸಿಕೊಂಡಿದ್ದರು ಅಂದ್ರೆ ನೀವು ನಂಬುತ್ತೀರಾ? ಪ್ರತಿ ದಿನ ಸುಮಾರು 30 ಹಾವುಗಳ ವಿಷವನ್ನಾ ಆಹಾರದಂತೆ ಸೇವಿಸುತ್ತಿದ್ದರು ಅನ್ನೂದನ್ನ ಊಹಿಸಲು ಸಾಧ್ಯವೇ? ನಂಬಲಸಾಧ್ಯವಾದರೂ ಇದು ನಿಜ.

    ಅಮೆರಿಕದ ಸ್ನೇಕ್‌ ಮ್ಯಾನ್‌ (USA SnakeMan) ಎಂದೇ ಖ್ಯಾತಿಯಾಗಿದ್ದ ವ್ಯಕ್ತಿಯೊಬ್ಬ 173 ಬಾರಿ ವಿವಿಧ ಬಗೆಯ ಹಾವುಗಳಿಂದ ಕಚ್ಚಿಸಿಕೊಂಡಿದ್ದರು. ಪ್ರತಿದಿನ ಸುಮಾರು 30ಕ್ಕೂ ಹೆಚ್ಚು ಸರ್ಪಗಳ ವಿಷ ಸೇವಿಸುತ್ತಿದ್ದರಂತೆ. ಆದರೂ ಅವರು ಬದುಕುಳಿದಿದ್ದೇ ಪವಾಡವೆನ್ನಿಸಿತ್ತು. ಅಷ್ಟಕ್ಕೂ ಅಮೆರಿಕದ ಸ್ನೇಕ್‌ ಮ್ಯಾನ್‌ ಯಾರು? ಹಾವಿನ ವಿಷ ಸೇವನೆ ಮಾಡಿದರೂ ಆತ ಬದುಕುಳಿದಿದ್ದು ಹೇಗೆ? ಅದಕ್ಕಾಗಿ ಆತ ಮಾಡುತ್ತಿದ್ದದ್ದು ಏನು? ಎಂಬ ರೋಚಕ ಸಂಗತಿಗಳನ್ನು ತಿಳಿಯೋಣ…

    ಅಮೆರಿಕದ ಸ್ನೇಕ್‌ ಮ್ಯಾನ್‌ ಯಾರು?

    ಹಾವುಗಳ ಪ್ರಪಂಚವೇ ನಿಗೂಢ, ಕೆಲ ಹಾವುಗಳು ಕಚ್ಚಿದ ಕೆಲವೇ ಕ್ಷಣಗಳಲ್ಲಿ ಸಾವು ಸಂಭವಿಸಿದರೆ, ಇನ್ನು ಕೆಲ ಹಾವುಗಳು ಕಚ್ಚಿದ ನಂತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಚಿಕಿತ್ಸೆ ಪಡೆಯದಿದ್ದರೇ ನಿಧಾನಗತಿಯಲ್ಲಿ ಸಾವನ್ನು ತರುತ್ತವೆ. ಆದ್ರೆ ಅಮೆರಿಕದ ಸ್ನೇಕ್‌ ಮ್ಯಾನ್‌ ಎಂದೇ ಖ್ಯಾತಿಯಾಗಿದ್ದ ʻಬಿಲ್ ಹಾಸ್ಟ್ ಅಕಾʼ (Bill Haast  Aka) ಎಂಬ ವ್ಯಕ್ತಿ ನೂರಾರು ಬಾರಿ ಹಾವುಗಳಿಂದ ಕಚ್ಚಿಸಿಕೊಂಡರೂ ಬದುಕುಳಿದಿರುವುದು ಪವಾಡವೇ ಸರಿ. ಅಲ್ಲದೇ ಈತ ರಕ್ತದಾನ ಮಾಡಿ ಅನೇಕ ಜೀವಗಳನ್ನೂ ಉಳಿಸಿದ್ದಾನೆ. 173 ಬಾರಿ ಅತ್ಯಂತ ವಿಷಕಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದ ಸ್ನೇಕ್‌ ಮ್ಯಾನ್‌ ತಮ್ಮ ಜೀವಿತಾವಧಿಯಲ್ಲಿ 30 ಲಕ್ಷಕ್ಕೂ ಹೆಚ್ಚು ಹಾವುಗಳನ್ನು ನೋಡಿದ್ದರಂತೆ.

    ಹಾವುಗಳ ಬಗ್ಗೆ ಆಸಕ್ತಿ ಹುಟ್ಟಿದ್ದೇಗೆ?

    ಸ್ನೇಕ್‌ಮ್ಯಾನ್‌ ಖ್ಯಾತಿಯ ಬಿಲ್‌ ಹಾಸ್ಟ್‌ ಅಕಾ 1910 ರಲ್ಲಿ ನ್ಯೂಜೆರ್ಸಿಯಲ್ಲಿ ಜನಿಸಿದರು. ಶಾಲಾ ದಿನಗಳಲ್ಲಿ ಸ್ಕೌಟ್‌ ಶಿಬಿರಕ್ಕೆ ಸೇರಿದ್ದರು. ಒಂದೊಮ್ಮೆ ಕಾಡಿನಲ್ಲಿ ಕ್ಯಾಂಪ್‌ ಮಾಡುವ ವೇಳೆ ಹಾವು ಅಕಸ್ಮಾತಾಗಿ ಹಾವು ಕಚ್ಚಿತ್ತು. ಆದ್ರೆ ಹಾಸ್ಟ್‌ಗೆ ಪ್ರಾಣಾಪಾಯ ಸಂಭವಿಸಲಿಲ್ಲ. ಕೆಲ ಗಂಟೆಗಳ ಬಳಿಕ ಹಾವು ಕಚ್ಚಿದ ಕೈ ಭಾಗ ಊದಿಕೊಂಡಿತ್ತು. ಅದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು. ಇದಾದ ಸ್ವಲ್ಪ ಸಮಯದಲ್ಲೇ ಕಾಪರ್ಹೆಡ್‌ ಎಂಬ ವಿಷಕಾರಿ ಹಾವು ಕಚ್ಚಿತ್ತು. ವಿಷ ಏರಿದ್ದ ಕಾರಣ ಒಂದು ವಾರ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಈತನಿಗೆ ಹಾವುಗಳ ಬಗ್ಗೆ ಆಕರ್ಷಣೆ ಹೆಚ್ಚಾಯಿತು. ಇದರಿಂದ ಅವುಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಬೆಳೆಸಿಕೊಂಡರು. ವಿವಿಧ ಬಗೆಯ ಹಾವುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು, ಜೊತೆಗೆ ಹಾವುಗಳಿಂದ ಸ್ಟಂಟ್‌ ಮಾಡಿಸಲು ಪ್ರಾರಂಭಿಸಿ, ಹಾವಿನ ಪ್ರಯೋಗಾಲಯವೊಂದನ್ನು ಆರಂಭಿಸಿದರು.

    ಹಾವಿನ ಪ್ರಯೋಗಾಲಯದ ಸೀಕ್ರೆಟ್‌:

    ಹಾವುಗಳ ಅಧ್ಯಯನ ಮಾಡಲು ತೊಡಗಿದ್ದ ಸ್ನೇಕ್‌ ಮ್ಯಾನ್‌ ವಿಶೇಷ ಪ್ರಯೋಗಾಲಯವೊಂದನ್ನು ಆರಂಭಿಸಿದ್ದರು. ಹಾವುಗಳ ವಿಷ ಹೊರ ತೆಗೆಯುವುದು ಹಾಗೂ ಅದನ್ನು ಸಂಶೋಧನೆಗಾಗಿ ಆಸ್ಪತ್ರೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಕಳುಹಿಸುವ ಕೆಲಸ ಇಲ್ಲಿ ಆಗುತ್ತಿತ್ತು. ಈ ಪ್ರಯೋಗಾಲಯದಲ್ಲಿ ವಿಶ್ವದ ಅನೇಕ ಬಗೆಯ ಹಾವುಗಳಿದ್ದವು. ಅವುಗಳ ವಿಷದ ಪ್ರಬೇಧಗಳೂ ವಿಭಿನ್ನವಾಗಿದ್ದವು. ಅದರಲ್ಲೂ ಕೆಲ ಹಾವುಗಳ ವಿಷ ಎಷ್ಟು ಅಪಾಯಕಾರಿಯಾಗಿತ್ತೆಂದರೆ, ಕಚ್ಚಿದ ಒಂದೇ ನಿಮಿಷದಲ್ಲಿ ಪ್ರಾಣ ತೆಗೆಯುವಷ್ಟು ಅಪಾಯಕಾರಿಯಾಗಿರುತ್ತಿದ್ದವು. 90ರ ದಶದ ವರೆಗೆ ಹಾಸ್ಟ್‌ ಅವರ ಈ ಪ್ರಯೋಗಾಲಯ ವಿವಿಧ ವೈದ್ಯಕೀಯ ಉದ್ದೇಶಗಳಿಗಾಗಿ ಪ್ರತಿ ವರ್ಷ ಸುಮಾರು 36 ಸಾವಿರ ವಿಷದ ಮಾದರಿಗಳನ್ನು ಒದಗಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.

    ವಿಷ ಹೊರತೆಗೆಯುತ್ತಿದ್ದದ್ದು ಹೇಗೆ?

    ನೂರಾರು ಹಾವುಗಳಿಂದ ಕಚ್ಚಿಸಿಕೊಂಡಿದ್ದ ಹಾಸ್ಟ್‌ನ ಜೀವನ ಶೈಲಿಯೂ ಅಷ್ಟೇ ಸ್ವಾರಸ್ಯಕರವಾಗಿತ್ತು. ನ್ಯೂಯಾರ್ಕ್‌ ಟೈಮ್ಸ್‌ ವರದಿಯ ಪ್ರಕಾರ, ಹಾಸ್ಟ್‌ ಪ್ರತಿದಿನ ಸುಮಾರು 30 ಹಾವುಗಳ ವಿಷವನ್ನು ಆಹಾರದ ರೀತಿ ಸೇವನೆ ಮಾಡುತ್ತಿದ್ದ. ಜೊತೆಗೆ ಹಾವಿನ ವಿಷ ಹೊರ ತೆಗೆಯುವಾಗಲೂ ಬರಿಗೈನಿಂದಲೇ ಕೆಲಸ ಮಾಡುತ್ತಿದ್ದ. ನಾಗರಹಾವು, ಕಾಳಿಂಗ ಸರ್ಪಗಳಂತಹ ವಿಷಪೂರಿತ ಹಾವುಗಳು ಹಲವಾರು ಬಾರಿ ಕಚ್ಚಿದರೂ ಬದುಕಿರುವುದರ ಹಿಂದೆ ವಿಶೇಷ ಕಾರಣವಿತ್ತು. ಅವರ ಜೀವನದ ಆರು ದಶಕಗಳವರೆಗೆ, ಹಾಸ್ಟ್ ನಿರಂತರವಾಗಿ 32 ಹಾವುಗಳ ವಿಷವನ್ನು ಸಂಯೋಜನೆ ಮಾಡಿ ಸೇವಿಸುತ್ತಿದ್ದರು. ಇದರಿಂದ ಹಾಸ್ಟ್‌ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟು ಆತ ಭಯಂಕರವಾಗಿ ಸಾಯುತ್ತಾನೆ ಎಂದೇ ವೈದ್ಯರು ಬಹಳಷ್ಟು ಸಲ ಎಚ್ಚರಿಕೆ ನೀಡಿದ್ದರು. ಮಧ್ಯೆ ಮಧ್ಯೆ ಹೊಟ್ಟೆ ನೋವು, ಕಣ್ಣುಗಳ ಸೌರ್ಬಲ್ಯದಿಂದ ನಿದ್ರೆ ಮತ್ತು ಮಾನಸಿಕ ಅಸಮತೋಲನ ಕಾಣಿಸಿಕೊಂಡರೂ ವೈದ್ಯಲೋಕಕ್ಕೆ ಸೆಡ್ಡು ಹೊಡೆದು ಪವಾಡ ಪುರುಷನಂತೆ ಹಾಸ್ಟ್‌ ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕಿದ್ದರು ಎಂದು ವರದಿಗಳು ಹೇಳಿವೆ.

    ಹಾವುಗಳಿಗಾಗಿ ಸೇನೆಯ ಕೆಲಸವನ್ನೇ ಬಿಟ್ಟ ಸ್ನೇಕ್‌ ಮ್ಯಾನ್‌:

    ಹಾಸ್ಟ್‌ ಅಮೆರಿಕದ ಸೇನೆಯಲ್ಲಿ ಫ್ಲೈಟ್‌ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಜೊತೆಗೆ ವೃತ್ತಿಪರ ಕೋರ್ಸ್‌ಗಳನ್ನೂ ಮಾಡಿಕೊಂಡಿದ್ದರು. ಆದ್ರೆ ಹಾವುಗಳ ಸಾಕಾಣಿಕೆ ಮತ್ತು ಅವುಗಳ ಅಧ್ಯಯನದ ಗುರಿಯಿಂದ ಸೇನೆಯ ಕೆಲಸವನ್ನೇ ಬಿಟ್ಟರು. ಅಮೆರಿಕನ್‌ ಸ್ನೇಕ್‌ಮ್ಯಾನ್‌ನ ಹಾವುಗಳ ಮೇಲಿನ ಉತ್ಸಾಹದಿಂದ ಅವನ ಮೊದಲ ಮದುವೆ ಮುರಿದುಹೋಯಿತು. ನಂತರ ಅವರು ಎರಡು ಬಾರಿ ವಿವಾಹವಾಗಿದ್ದರು.

    21 ಜೀವಗಳನ್ನ ಉಳಿಸಿದ್ದ ಸ್ನೇಕ್‌ ಮ್ಯಾನ್‌:

    ನಿರಂತರ ಹಾವುಗಳ ವಿಷ ಸೇವನೆಯಿಂದ ಬದುಕಿ ಪವಾಡವನ್ನೇ ಸೃಷ್ಟಿಸಿದ್ದ ಸ್ನೇಕ್‌ ಮ್ಯಾನ್‌ 21 ಜೀವಗಳನ್ನೂ ಉಳಿಸಿದ್ದರು ಎಂಬುದು ಗಮನಾರ್ಹ. ಹೌದು. ಅವರು ಸೇವಿಸುತ್ತಿದ್ದ ವಿಷವೇ ರೋಗ ನಿರೋಧಕ ಶಕ್ತಿಯಾಗಿ ಮಾರ್ಪಟ್ಟಿತ್ತು. ಹಾಗಾಗಿ ಹಾವು ಕಡಿತದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದವರಿಗೆ ರಕ್ತ ಕೊಟ್ಟು ಕಾಪಾಡಿದ್ದರು. ನಂತರ ಪ್ರಪಂಚದ ಅನೇಕ ದೇಶಗಳಲ್ಲಿ ತುರ್ತು ರಕ್ತದಾನಕ್ಕಾಗಿ ಹಾಸ್ಟ್ ಅನ್ನು ಕರೆಯಲಾಯಿತು. ವಿಷಪೂರಿತ ಹಾವು ಕಡಿತದಿಂದ ಸಾವಿನ ಹಂತ ತಲುಪಿದ್ದ 21 ರೋಗಿಗಳಿಗೆ ಅವರು ತಮ್ಮ ರಕ್ತವನ್ನ ದಾನ ಮಾಡಿದರು. ಇದಕ್ಕಾಗಿಯೇ ವೆನೆಜುವೆಲಾ ಅವರಿಗೆ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನೂ ನೀಡಿತ್ತು ಎಂದು ವರದಿಗಳು ಉಲ್ಲೇಖಿಸಿವೆ.

  • ಕಾರಿನಲ್ಲೇ ವಿದ್ಯಾರ್ಥಿ ಜೊತೆ ರಾಸಲೀಲೆ – ಬೆತ್ತಲೆಯಾಗಿ ಸಿಕ್ಕಿಬಿದ್ದ ಇಂಗ್ಲಿಷ್ ಶಿಕ್ಷಕಿ ಅರೆಸ್ಟ್

    ಕಾರಿನಲ್ಲೇ ವಿದ್ಯಾರ್ಥಿ ಜೊತೆ ರಾಸಲೀಲೆ – ಬೆತ್ತಲೆಯಾಗಿ ಸಿಕ್ಕಿಬಿದ್ದ ಇಂಗ್ಲಿಷ್ ಶಿಕ್ಷಕಿ ಅರೆಸ್ಟ್

    ನ್ಯೂಯಾರ್ಕ್: ಅಮೆರಿಕದ (America) ನ್ಯೂಜೆರ್ಸಿಯ (New Jersey) ವಿವಾಹಿತ ಶಿಕ್ಷಕಿಯೊಬ್ಬಳು (School Teacher) ಅಸ್ಸನ್‍ಪಿಂಕ್ ವನ್ಯಜೀವಿ ನಿರ್ವಹಣಾ ಪ್ರದೇಶದ ವಿದ್ಯಾರ್ಥಿಯೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ (Sexually Assaulting) ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

    ಶಿಕ್ಷಕಿ ಜೆಸ್ಸಿಕಾ ಸಾವಿಕಿ (37) ಟ್ರೆಂಟನ್‍ನ ಹ್ಯಾಮಿಲ್ಟನ್ ಹೈಸ್ಕೂಲ್‌ನ ಇಂಗ್ಲಿಷ್ ಶಿಕ್ಷಕಿ ಎಂದು ಗುರುತಿಸಲಾಗಿದೆ. ಸಾವಿಕಿ ಮತ್ತು ಶಾಲಾ ವಿದ್ಯಾರ್ಥಿಯನ್ನು ನ್ಯೂಜೆರ್ಸಿಯ ವನ್ಯಜೀವಿ ಪರಿವೀಕ್ಷಕರು ನಗ್ನ ಸ್ಥಿತಿಯಲ್ಲಿ ಪತ್ತೆ ಹಚ್ಚಿದ್ದಾರೆ. ವನ್ಯಜೀವಿ ನಿರ್ವಹಣಾ ಪ್ರದೇಶದಲ್ಲಿ ಕಾರಿನ ಹಿಂಬದಿ ಸೀಟ್‍ನಲ್ಲಿ 16 ವರ್ಷದ ವಿದ್ಯಾರ್ಥಿಯೊಂದಿಗೆ ಶಾಲಾ ಶಿಕ್ಷಕಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ ಎಂದು ಸಾಕ್ಷಿಗಳು ಸಿಕ್ಕಿವೆ. ಅಲ್ಲದೇ ಆಕೆ ವಿಚಾರಣೆ ವೇಳೆ ವಿದ್ಯಾರ್ಥಿಯೊಂದಿಗೆ ಐದು ಬಾರಿ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ – ಪತ್ನಿಯ ಉಸಿರುಗಟ್ಟಿಸಿ ಹತ್ಯೆಗೈದ ಪತಿ

    ಆರೋಪಿ ಶಿಕ್ಷಕಿಯನ್ನು ಸೋಮವಾರ ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮುಂದಿನ ವಿಚಾರಣೆಯವರೆಗೂ ಮಾನ್‍ಮೌತ್ ಕೌಂಟಿ ಸಂಸ್ಥೆಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಲಾ ಆಡಳಿತ ಮಂಡಳಿ, ಆರೋಪಿಯ ನಡವಳಿಕೆ ಶಾಲಾ ವೃತ್ತಿಪರ ಮಾನದಂಡಗಳಿಗೆ ವಿರುದ್ಧವಾಗಿದೆ. ಉದ್ಯೋಗಿಯ ವೈಯಕ್ತಿಕ ನಡವಳಿಕೆಯಿಂದ ಶಾಲೆ ದೂರ ಉಳಿಯಲಿದೆ. ನಮ್ಮ ವಿದ್ಯಾರ್ಥಿಗಳಿಗೆ ಹಾನಿಯುಂಟು ಮಾಡುವ ಯಾವುದೇ ಅಪರಾಧಗಳನ್ನು ನಾವು ಸಹಿಸುವುದಿಲ್ಲ ಎಂದು ತಿಳಿಸಿದೆ.

    ಆಕೆಯ ಬಂಧನದ ನಂತರ ಶಿಕ್ಷಕಿಯ ಪ್ರೊಫೈಲ್‌ನ್ನು  ಶಾಲೆಯ ವೆಬ್‍ಸೈಟ್‌ನ ಶಿಕ್ಷಕರ ಡೈರೆಕ್ಟರಿಯಿಂದ ತೆಗೆದುಹಾಕಲಾಗಿದೆ. ಆಕೆ ಏಳು ವರ್ಷಗಳಿಂದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಿನಲ್ಲೇ ನೇಣಿಗೆ ಶರಣು

  • ಅಮೆರಿಕದಲ್ಲಿ ಅತಿ ದೊಡ್ಡ ಹಿಂದೂ ದೇವಾಲಯ ಉದ್ಘಾಟನೆ

    ಅಮೆರಿಕದಲ್ಲಿ ಅತಿ ದೊಡ್ಡ ಹಿಂದೂ ದೇವಾಲಯ ಉದ್ಘಾಟನೆ

    ವಾಷಿಂಗ್ಟನ್: ಭಾರತದ ಹೊರಗಿನ ಅತಿ ದೊಡ್ಡ ಹಿಂದೂ ದೇವಾಲಯ ಅಮೆರಿಕದಲ್ಲಿ ಉದ್ಘಾಟನೆಗೊಂಡಿದೆ. BAPS ಸ್ವಾಮಿನಾರಾಯಣ ಅಕ್ಷರಧಾಮ (BAPS Swaminarayan Akshardham) ದೇವಾಲಯವು ಅಮೆರಿಕದ (America) ನ್ಯೂಜೆರ್ಸಿಯಲ್ಲಿ ಭಾನುವಾರ ಭಕ್ತಾದಿಗಳಿಗೆ ಬಾಗಿಲು ತೆರೆಯಿತು.

    ನ್ಯೂಜೆರ್ಸಿಯ (New Jersey) ರಾಬಿನ್ಸ್‌ವಿಲ್ಲೆ ನಗರದಲ್ಲಿರುವ ಈ ದೇವಾಲಯವು ಆಧುನಿಕ ಯುಗದಲ್ಲಿ ಭಾರತದ ಹೊರಗಿನ ಅತಿದೊಡ್ಡ ಹಿಂದೂ ದೇವಾಲಯವಾಗಿದೆ ಎಂದು ಹೇಳಲಾಗುತ್ತದೆ. ಬಿಎಪಿಎಸ್‌ ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ‘ವಿಶ್ವದಾದ್ಯಂತ ಅಪಾರ ಸಂಖ್ಯೆಯ ಭಕ್ತರಿಗೆ ಇದು ಆಧ್ಯಾತ್ಮಿಕ ಮಹತ್ವದ ಸಂದರ್ಭವಾಗಿದೆ’ ಎಂದು ಮೋದಿ ಬಣ್ಣಿಸಿದ್ದಾರೆ. ಇದನ್ನೂ ಓದಿ: ಕಳೆದ 14 ವರ್ಷಗಳಿಂದ ಇದ್ದು, ಭಯ ಇಲ್ಲ: ಇಸ್ರೇಲಿನಲ್ಲಿದ್ದ ಕನ್ನಡಿಗನ ಮಾತು

    ಈ ದೇವಾಲಯವನ್ನು ಇಟಲಿ ಮತ್ತು ಬಲ್ಗೇರಿಯಾದ ವಿಧದ ಅಮೃತಶಿಲೆಯಿಂದ ರಚಿಸಲಾಗಿದೆ. ಈ ವಾಸ್ತುಶಿಲ್ಪದ ದೇವಾಲಯವು ವಿಶಾಲವಾದ 126 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ದೇವಾಲಯದ ಗೋಡೆಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಮತ್ತು ಅಬ್ರಹಾಂ ಲಿಂಕನ್ ಸೇರಿದಂತೆ ಐತಿಹಾಸಿಕ ವ್ಯಕ್ತಿಗಳ ಪ್ರತಿರೂಪವನ್ನು ಕೆತ್ತನೆ ಮಾಡಲಾಗಿದೆ ಎಂದು ದೇವಾಲಯದ ಸ್ವಯಂಸೇವಕ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಧಾರ್ಮಿಕ ವಿದ್ವಾಂಸ ಯೋಗಿ ತ್ರಿವೇದಿ ತಿಳಿಸಿದ್ದಾರೆ.

    2011 ರಲ್ಲಿ ಅಕ್ಷರಧಾಮ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಪ್ರಪಂಚದಾದ್ಯಂತದ 12,500 ಸ್ವಯಂಸೇವಕರು ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಇದನ್ನೂ ಓದಿ: ಹಮಾಸ್ ರಾಕೆಟ್ ದಾಳಿಯಿಂದ ಕೇರಳದ ಶೀಜಾ ಆನಂದ್‍ಗೆ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಅಮೆರಿಕದಲ್ಲಿ ನಿಗೂಢ ಸಾವು

    ಭಾರತ ಮೂಲದ ಒಂದೇ ಕುಟುಂಬದ ನಾಲ್ವರು ಅಮೆರಿಕದಲ್ಲಿ ನಿಗೂಢ ಸಾವು

    ವಾಷಿಂಗ್ಟನ್: ಭಾರತ ಮೂಲದ (Indian Origin) ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದ (America) ನ್ಯೂಜೆರ್ಸಿಯಲ್ಲಿ (New Jersey) ನಡೆದಿದೆ.

    ತೇಜ್ ಪ್ರತಾಪ್ ಸಿಂಗ್ (43), ಸೋನಾಲ್ ಪರಿಹಾರ್ (42) ಮತ್ತು ಈ ದಂಪತಿಯ 10 ಹಾಗೂ 6 ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅನುಮಾನಾಸ್ಪದವಾಗಿ ನಾಲ್ವರ ಶವ ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

    ಕುಟುಂಬ ವಾಸಿಸುತ್ತಿದ್ದ ನೆರೆಹೊರೆಯವರು ಅಕ್ಟೋಬರ್ 4 ರಂದು ಸಂಜೆ ಪೊಲೀಸರಿಗೆ ಕರೆ ಮಾಡಿ, ಅವರ ಯೋಗಕ್ಷೇಮದ ಬಗ್ಗೆ ಅನುಮಾನ ಮೂಡುತ್ತಿರುವುದಾಗಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಅವರ ಮನೆಗೆ ತೆರಳಿ ಪರಿಶೀಲಿಸಿದಾಗ ನಾಲ್ವರು ಕೂಡಾ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯ – ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಖಡಕ್ ಸೂಚನೆ

    ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ಸಾವನ್ನಪ್ಪಿರುವ ಬಗ್ಗೆ ಮಾತನಾಡಿರುವ ಪ್ಲೇನ್ಸ್‌ಬೊರೊ ಮೇಯರ್ ಪೀಟರ್ ಕ್ಯಾಂಟು, ನಮ್ಮ ಸಮುದಾಯದಲ್ಲಿ ಏನಾಗಿದೆ ಎಂಬುದು ಗ್ರಹಿಕೆಗೆ ಮೀರಿದೆ. ಈ ದುರಂತ ಘಟನೆಯಿಂದ ನಾವು ದುಃಖಿತರಾಗಿದ್ದೇವೆ ಎಂದು ತಿಳಿಸಿದ್ದಾರೆ.

    ದಂಪತಿಯಿಬ್ಬರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಅವರಲ್ಲಿ ಒಬ್ಬರು ಸಂಪನ್ಮೂಲ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ತೇಜ್ ಪ್ರತಾಪ್ ಸಿಂಗ್ ಮೊದಲು ತನ್ನ ಕುಟುಂಬವನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ದಂಪತಿ ಸಂತೋಷವಾಗೇ ಇದ್ದರು, ಈ ರೀತಿ ಆಗಲು ಸಾಧ್ಯವೇ ಇಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ಗಾಜಾಪಟ್ಟಿಯಿಂದ 5,000 ರಾಕೆಟ್ ದಾಳಿ – ಯುದ್ಧ ಘೋಷಿಸಿದ ಇಸ್ರೇಲ್

    ಪ್ರಕರಣ ಕೊಲೆಯೋ ಆತ್ಮಹತ್ಯೆಯೋ ಎಂಬುದನ್ನು ತಿಳಿದುಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೆಂಟಿಲೇಟರ್‌ನಲ್ಲಿ ಸಲ್ಮಾನ್ ರಶ್ದಿ – ಆರೋಗ್ಯ ಸ್ಥಿತಿ ಗಂಭೀರ, ಕಣ್ಣು ಕಳೆದುಕೊಳ್ಳುವ ಸಾಧ್ಯತೆ

    ವೆಂಟಿಲೇಟರ್‌ನಲ್ಲಿ ಸಲ್ಮಾನ್ ರಶ್ದಿ – ಆರೋಗ್ಯ ಸ್ಥಿತಿ ಗಂಭೀರ, ಕಣ್ಣು ಕಳೆದುಕೊಳ್ಳುವ ಸಾಧ್ಯತೆ

    ವಾಷಿಂಗ್ಟನ್‌: ಪಶ್ಚಿಮ ನ್ಯೂಯಾರ್ಕ್‍ನಲ್ಲಿ ನಿನ್ನೆ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೇಖಕ ಸಲ್ಮಾನ್ ರಶ್ದಿ (75) ಆರೋಗ್ಯ ಗಂಭೀರವಾಗಿದ್ದು, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

    ಅಮೆರಿಕದ ನ್ಯೂಯಾರ್ಕ್‍ನಲ್ಲಿ ನಿನ್ನೆ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿ ತಮ್ಮನ್ನು ಪರಿಚಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ದಾಳಿಕೋರ ಕುತ್ತಿಗೆ ಮತ್ತು ಹೊಟ್ಟೆಗೆ 15 ರಿಂದ 20 ಬಾರಿ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ಕುಸಿತಗೊಂಡಿದ್ದ ರಶ್ದಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಶ್ದಿ ಪ್ರಸ್ತುತ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಶ್ದಿ ಅವರ ಕುತ್ತಿಗೆ, ಹೊಟ್ಟೆ ಮತ್ತು ಕಣ್ಣುಗಳಿಗೆ ಚಾಕು ಇರಿತವಾಗಿದ್ದು, ಅವರು ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಖ್ಯಾತ ಕಾದಂಬರಿಕಾರ ಸಲ್ಮಾನ್‌ ರಶ್ದಿ ಮೇಲೆ ದುಷ್ಕರ್ಮಿಗಳಿಂದ ಚಾಕು ಇರಿತ

    ಆಸ್ಪತ್ರೆ ಮೂಲಗಳ ಪ್ರಕಾರ ಸಲ್ಮಾನ್ ರಶ್ದಿ ಅವರ ತೋಳಿನಲ್ಲಿ ನರಗಳು ತುಂಡಾಗಿದ್ದು, ಅವರ ಯಕೃತ್ತಿಗೆ ಹಾನಿಯಾಗಿದೆ. ಕಣ್ಣುಗಳಿಗೆ ಗಂಭೀರ ಹಾನಿಯಾಗಿದ್ದು, ಕಣ್ಣುಗಳು ಶಾಶ್ವತವಾಗಿ ಕಾರ್ಯನಿರ್ವಹಿಸದೇ ಇರಬಹುದು ಎಂಬ ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅಮೆರಿಕದ ಲೇಖಕ ಆಂಡ್ರ್ಯೂ ವೈಲಿ ಮಾಹಿತಿ ಹಂಚಿಕೊಂಡಿದ್ದು, ಸಲ್ಮಾನ್ ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದು, ಅವರ ತೋಳಿನ ನರಗಳು ತುಂಡಾಗಿದೆ. ಯಕೃತ್ತಿಗೆ ಚಾಕು ಇರಿತವಾಗಿದ್ದು, ಗಂಭೀರವಾಗಿ ಹಾನಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ

    https://twitter.com/disclosetv/status/1558111458201899008

    ದಾಳಿಕೋರನ ಗುರುತು ಪತ್ತೆ:
    ಸಲ್ಮಾನ್ ರಶ್ದಿ ಮೇಲೆ ದಾಳಿ ಮಾಡಿದ ದಾಳಿಕೋರನನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದು, ದಾಳಿಕೋರನನ್ನು 24 ವರ್ಷದ ಹದಿ ಮಾತರ್ ಎಂದು ಗುರುತಿಸಲಾಗಿದ್ದು, ಈತ ನ್ಯೂಜೆರ್ಸಿಯ ನಿವಾಸಿ ಎನ್ನಲಾಗಿದೆ. ರಶ್ದಿ ಅವರ ಮೇಲೆ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಸೈದ್ದಾಂತಿಕ ವಿರೋಧಗಳು ದಾಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 18ರ ಯುವತಿ ಆರ್ಯ ವಾಲ್ವೇಕರ್‌ಗೆ ಮಿಸ್ ಇಂಡಿಯಾ USA-2022 ಕಿರೀಟ; ಈಕೆ ಯಾರು ಗೊತ್ತಾ?

    18ರ ಯುವತಿ ಆರ್ಯ ವಾಲ್ವೇಕರ್‌ಗೆ ಮಿಸ್ ಇಂಡಿಯಾ USA-2022 ಕಿರೀಟ; ಈಕೆ ಯಾರು ಗೊತ್ತಾ?

    ವಾಷಿಂಗ್ಟನ್: ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ 40ನೇ ವಾರ್ಷಿಕೋತ್ಸವ ಸ್ಪರ್ಧೆಯಲ್ಲಿ ವರ್ಜೀನಿಯಾದ 18ರ ಯುವತಿ (ಭಾರತೀಯ ಅಮೆರಿಕನ್) ಆರ್ಯ ವಾಲ್ವೇಕರ್ `ಮಿಸ್ ಇಂಡಿಯಾ USA-2022′ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

    ಯುಎಸ್‌ನ 30 ರಾಜ್ಯಗಳಿಂದ 74 ಸ್ಪರ್ಧಿಗಳು ಮಿಸ್ ಇಂಡಿಯಾ ಯುಎಸ್‌ಎ, ಮಿಸೆಸ್ ಇಂಡಿಯಾ ಯುಎಸ್‌ಎ ಹಾಗೂ ಮಿಸ್ ಟೀನ್ ಇಂಡಿಯಾ ಯುಎಸ್‌ಎ ವಿಭಾಗಗಳಲ್ಲಿ ಭಾಗವಹಿಸಿದ್ದರು. ವಾಷಿಂಗ್ಟನ್‌ನ ಅಕ್ಷಿ ಜೈನ್ ಮಿಸೆಸ್ ಇಂಡಿಯಾ ಯುಎಸ್‌ಎ, ನ್ಯೂಯಾರ್ಕ್ನ ತನ್ವಿ ಗ್ರೂವರ್ ಮಿಸ್ ಟೀನ್ ನ್ಯೂಯಾರ್ಕ್ ಕಿರೀಟ ಧರಿಸಿದರೆ ಭಾರತೀಯ ಅಮೆರಿಕನ್ನರಾದ ವಾಲ್ಟೇಕರ್ ಮಿಸ್ ಇಂಡಿಯಾ ಕಿರೀಟ ಧರಿಸಿದ್ದಾರೆ. ಇದನ್ನೂ ಓದಿ: 9 ವರ್ಷಗಳ ಹಿಂದೆ ಕಿಡ್ನ್ಯಾಪ್‌ ಆಗಿದ್ದ ಬಾಲಕಿ ಪೋಸ್ಟರ್ ಸಹಾಯದಿಂದ ಹೆತ್ತವರ ಮಡಿಲಿಗೆ

    ಈ ವೇಳೆ ತನ್ನ ಖುಷಿಯನ್ನು ಹಂಚಿಕೊಂಡಿರುವ ವಾಲ್ಟೇಕರ್, `ನನ್ನನ್ನು ಬೆಳ್ಳಿ ತೆರೆಯಲ್ಲಿ ನೋಡುವುದು, ಚಲನಚಿತ್ರ ಹಾಗೂ ಟಿವಿಯಲ್ಲಿ ಕೆಲಸ ಮಾಡುವುದು ನನ್ನ ಕನಸಾಗಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ. ಈ ಕುರಿತ ಫೋಟೋಗಳನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

    ಪ್ರಪಂಚದಾದ್ಯಂತ ಇರುವ ಭಾರತೀಯ ಸಮುದಾಯಕ್ಕೆ, ಅವರು ನೀಡಿದ ಸಹಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: CWG 2022: ಟ್ರಿಪಲ್ ಜಂಪ್‍ನಲ್ಲಿ ಡಬಲ್ ಧಮಾಕ – ಎಲ್ದೋಸ್ ಪೌಲ್‍ಗೆ ಚಿನ್ನ, ಅಬ್ದುಲ್ಲಾ ಅಬೂಬಕರ್‌ಗೆ ಕಂಚು

    ಯಾರಿದು ವಾಲ್ಟೇಕರ್?
    ವರ್ಜೀನಿಯಾದ ಬ್ರಿಯಾರ್ ವುಡ್ಸ್ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ ಆರ್ಯ ವಾಲ್ವೇಕರ್ 18 ವರ್ಷದ ಯುವತಿ. ಈಕೆ ವಿವಿಧ ಜಾಗೃತಿ ಅಭಿಯಾನಗಳನ್ನ ಮಾಡಿದ್ದು, ಟಿಇಡಿಎಕ್ಸ್ ಕಾರ್ಯಕ್ರಮಗಳಲ್ಲಿ ಆರೋಗ್ಯಕರ ಮರುಚಿಂತನೆಯ ಉಪನ್ಯಾಸ ನೀಡಿದ್ದಾರೆ. ಯುಫೋರಿಯಾ ಡ್ಯಾನ್ಸ್ ಸ್ಟುಡಿಯೋದ ಸಂಸ್ಥಾಪಕರಾಗಿರುವ ವಾಲ್ವೇಕರ್, ಸ್ಥಳೀಯ ಮಕ್ಕಳಿಗೆ ಕಡಿಮೆ ಶುಲ್ಕದಲ್ಲೇ ನೃತ್ಯ ಹೇಳಿಕೊಡುತ್ತಿದ್ದಾರೆ.

    18 ವರ್ಷದ ವಾಲ್ವೇಕರ್ ಶಾಲೆ ಮತ್ತು ಸಮುದಾಯ ರಂಗಭೂಮಿ ಚಟುವಟಿಕೆಗಳಲ್ಲೂ ಭಾಗವಹಿಸಿದ್ದಾರೆ. ಮಕ್ಕಳ ನಾಟಕಗಳಿಗೆ ನಿರ್ದೇಶಕರಾಗಿ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದಾರೆ. ಅಡುಗೆ ಮಾಡುವುದು, ಚರ್ಚೆ ಮಾಡುವುದು ಇವರ ಹವ್ಯಾಸವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಅಮೆರಿಕದಲ್ಲಿ ಅಪ್ಪು ಬರ್ತ್ ಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ

    ಅಮೆರಿಕದಲ್ಲಿ ಅಪ್ಪು ಬರ್ತ್ ಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ

    ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ವಿಶೇಷವಾಗಿ ಆಚರಿಸಿದ್ದಾರೆ. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯರಲ್ಲೂ ಒಟ್ಟಾಗಿ ಜೇಮ್ಸ್ ಜಾತ್ರೆ ಮತ್ತು ಅಪ್ಪು ಹುಟ್ಟುವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ. ಮಾರ್ಚ್ 19 ರಂದು ನ್ಯೂಜೆರ್ಸಿ ನಾರ್ಥ್ ಬ್ರನ್ಸ್ವಿಕ್ ಉದ್ಯಾನವನದಲ್ಲಿ ಜರುಗಿದ ಅಪ್ಪು ಅಭಿಮಾನಿ ಸಂಘದ ಈ ಕಾರ್ಯಕ್ರಮಕ್ಕೆ ಪುನೀತ್ ಅವರ ಹಿರಿಯ ಪುತ್ರ ದ್ರಿತಿ ಮುಖ್ಯ ಅಥಿಯಾಗಿ ಆಗಮಿಸಿದ್ದರು. ದೀಪ ಬೆಳಗುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಮೆರಿಕಾದ ನಾನಾ ಭಾಗಗಳಿಂದ ಈ ಕಾರ್ಯಕ್ರಮಕ್ಕೆ ಅಪ್ಪು ಅಭಿಮಾನಿಗಳು ಆಗಮಿಸಿದ್ದರು. ಇದನ್ನೂ ಓದಿ : ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಅಪ್ಪು ಅವರ ಭಾವಚಿತ್ರ, ಅವರ ಹಾಡಿಗೆ ಅಲ್ಲಿನ ಮಕ್ಕಳ ನೃತ್ಯ ಮಾಡಿದರು. ನಾಗೇಶ್ ಕೆಂಪಯ್ಯನವರ ನೇತೃತ್ವದಲ್ಲಿ ಡೊಳ್ಳು ವಾದ್ಯ, ಹಲವು ಬಗೆಯ ಜಾನಪದ ಕುಣಿತ ಹೀಗೇ ಊರಿಗೆ ಹಬ್ಬ, ಜಾತ್ರೆಗಳಂತೆಯೇ ಹುಟ್ಟು ಹಬ್ಬವನ್ನು ಸಡಗರದಿಂದ ಅಲ್ಲಿನ ಅಭಿಮಾನಿಗಳು ಆಚರಿಸಿದರು.

    ಅಪ್ಪು ಅಮೆರಿಕಾಗೆ ಹೋದಾಗಲೆಲ್ಲ ಹಲವರನ್ನು ಭೇಟಿ ಮಾಡುತ್ತಿದ್ದರು. ಅಲ್ಲದೇ, ಮೊರ್ಗನ್ವಿಲ್ಲೆಯಲ್ಲಿರುವ ಕೃಷ್ಣ ದೇವಸ್ಥಾನದಲ್ಲಿ ಕೊಡುವ ಬಾದುಷಾ ಅಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಅಪ್ಪು ಅಮೆರಿಕಾಗೆ ಬಂದಿದ್ದಾರೆ ಅಂದರೆ, ದೇವಸ್ಥಾನದ ರಂಗಾ ಭಟ್ಟರು ಬಾದುಷಾ ಮಾಡಿ ಕೊಡುತ್ತಿದ್ದರು. ಹಾಗಾಗಿ ಈ ಹುಟ್ಟು ಹಬ್ಬದಂದು ರಂಗಾ ಭಟ್ಟರು ಬಾದುಷಾ ಮಾಡಿ ಕಳುಹಿಸಿದ್ದರು. ಅದೇ ತಿಂಡಿಯನ್ನೇ ಅಲ್ಲಿ ಎಲ್ಲರಿಗೂ ಹಂಚಲಾಯಿತು. ಇದನ್ನೂ ಓದಿ : ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ

    ನಂತರ ನೂರೈವತ್ತಕ್ಕೂ ಹೆಚ್ಚು ಕಾರುಗಳ ಮೆರವಣಿಗೆ ಕೂಡ ನಡೆಯಿತು. ರಸ್ತೆಯುದ್ದಕ್ಕೂ ಕಾರು ಚಲಾಯಿಸಿಕೊಂಡು ಅಪ್ಪುಗೆ ಗೌರವ ಸೂಚಿಸಿದರು. ಕೇವಲ ಅಮೆರಿಕಾದಲ್ಲಿರುವ ಭಾರತೀಯರು ಮಾತ್ರ ವಲ್ಲ, ಅಮೆರಿಕಾ ಪ್ರಜೆಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ಕೊಹ್ಲಿ ಸೇನೆಯ ನ್ಯೂಲುಕ್- ರೆಟ್ರೋ ಥೀಮ್ ಜೆರ್ಸಿಯಲ್ಲಿ ಟೀಂ ಇಂಡಿಯಾ

    ಕೊಹ್ಲಿ ಸೇನೆಯ ನ್ಯೂಲುಕ್- ರೆಟ್ರೋ ಥೀಮ್ ಜೆರ್ಸಿಯಲ್ಲಿ ಟೀಂ ಇಂಡಿಯಾ

    ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಸುದೀರ್ಘ ಟೂರ್ನಿ ನವೆಂಬರ್ ಅಂತ್ಯದಲ್ಲಿ ಆರಂಭವಾಗಲಿದ್ದು, ಟೀಂ ಇಂಡಿಯಾ ಆಟಗಾರರು ಟೂರ್ನಿಯಲ್ಲಿ ರೆಟ್ರೋ ಥೀಮ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಸ್ಪೋರ್ಟ್ಸ್ ಔಟ್ ಲುಕ್ ವರದಿ ಮಾಡಿದೆ.

    ಆಸೀಸ್ ವಿರುದ್ಧ ಟೂರ್ನಿಗಾಗಿ ಈಗಾಗಲೇ ದುಬೈನಿಂದ ಹೋರಾಟಿರುವ ಟೀಂ ಇಂಡಿಯಾ ಆಟಗಾರರು ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಬಳಿಕ ನೆಟ್ ತರಬೇತಿ ಆರಂಭಿಸಲಿದ್ದಾರೆ. ಆಸೀಸ್ ಪ್ರವಾಸ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ಹೊಸ ಪಿಪಿಇ ಕಿಟ್ ಧರಿಸಿ ಆಟಗಾರರು ಆಸೀಸ್ ಗೆ ಪ್ರಯಾಣಿಸಿದ ಫೋಟೋಗಳನ್ನು ಬಿಸಿಸಿಐ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇತ್ತ ಹೊಸ ಜೆರ್ಸಿ ರೆಟ್ರೋ ಥೀಮ್‍ನಲ್ಲಿ ಸಿದ್ಧಪಡಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಟೀಂ ಇಂಡಿಯಾ ಮಾಜಿ ಕ್ರಿಕೆಟ್ ಆಟಗಾರರು ಧರಿಸಿದ್ದ ಜೆರ್ಸಿಯ ಲುಕ್‍ಗೆ ಮೆರುಗು ನೀಡಿ 70 ದಶಕದ ಸ್ಫೂರ್ತಿಯೊಂದಿಗೆ ಹೊಸ ಜೆರ್ಸಿಯನ್ನು ಸಿದ್ಧಪಡಿಸಲಾಗಿದೆ. ನೀಲಿ ಬಣ್ಣದಲ್ಲಿದ್ದ ಜೆರ್ಸಿ ಕಡು ನೀಲಿಬಣ್ಣಕ್ಕೆ ಬದಲಾಗಿದ್ದು, ಭುಜದ ಭಾಗದಲ್ಲಿ ಮೊದಲು ಬಿಳಿ, ಕೆಂಪು, ಹಸಿರು, ನೀಲಿ ಬಣ್ಣಗಳ ಪಟ್ಟಿಗಳನ್ನು ಕಾಣಬಹುದಾಗಿದೆ. ಜೆರ್ಸಿಯ ಮೇಲೆ ಎಂಪಿಎಲ್ ಸ್ಪೋರ್ಟ್ಸ್ ಹೆಸರನ್ನು ಮುದ್ರಿಸಲಾಗಿದೆ. ಟೀಂ ಇಂಡಿಯಾ ಆಟಗಾರರಿಗೆ ಹೊಸ ಪ್ರಯೋಜಕತ್ವ ನೀಡುತ್ತಿರುವ ಎಂಪಿಎಲ್ ಸ್ಪೋರ್ಟ್ಸ್ ಹೊಸ ಕಿಟ್‍ಗಳನ್ನು ನೀಡುತ್ತಿದೆ.

    ಇದೇ ಟೂರ್ನಿಯಲ್ಲಿ ಆಸೀಸ್ ತಂಡ ಕೂಡ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯುತ್ತಿದೆ. ಆಸೀಸ್‍ನ ಸ್ಥಳೀಯ ಅಂಶಗಳನ್ನು ಸಾರಿ ಹೇಳುವಂತೆ ಹೊಸ  ಜೆರ್ಸಿಯನ್ನು ವಿನ್ಯಾಸ ಮಾಡಲಾಗಿದೆ. ಅಲ್ಲದೇ 1868ರ ಕ್ರಿಕೆಟ್ ತಂಡದ ಕಥೆಯನ್ನು ಈ ಸಮವಸ್ತ್ರ ಹೇಳುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಟಿ20 ಸರಣಿಯಲ್ಲಿ ಆಸೀಸ್ ಪಡೆ ಹೊಸ ಜೆರ್ಸಿಯನ್ನು ಧರಿಸಲಿದೆ.

    ಐಪಿಎಲ್ ಟೂರ್ನಿಯಂತೆ ಸಂಪೂರ್ಣ ಬಯೋಸೆಕ್ಯೂರ್ ವಾತಾವರಣದಲ್ಲೇ ಟೂರ್ನಿ ನಡೆಯಲಿದೆ. ನ.27 ರಿಂದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಆ ಬಳಿಕ ಟಿ20 ಹಾಗೂ ಟೆಸ್ಟ್ ಪಂದ್ಯಗಳು ನಡೆಯಲಿದೆ. ಟೂರ್ನಿಯ ವಿಶೇಷವಾಗಿ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವೆ ಡಿಸೆಂಬರ್ 17 ರಂದು ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಇತ್ತಂಡಗಳ ನಡುವೆ ನಡೆಯುತ್ತಿರುವ ಮೊದಲ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ಇದಾಗಿದೆ.

    ಟಿ20 ತಂಡ: ಕೊಹ್ಲಿ, ಧವನ್, ಮಯಾಂಕ್, ಕೆಎಲ್ ರಾಹುಲ್, ಶ್ರೇಯಾಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಜಡೇಜಾ, ವಾಷಿಂಗ್ಟನ್ ಸುಂದರ್, ಚಹಲ್, ಬುಮ್ರಾ, ಶಮಿ, ಶೈನಿ, ದೀಪಕ್ ಚಹರ್, ನಟರಾಜನ್.

    ಏಕದಿನ ತಂಡ: ವಿರಾಟ್ ಕೊಹ್ಲಿ, ಧವನ್, ಶುಭ್‍ಮನ್ ಗಿಲ್, ಕೆಎಲ್ ರಾಹುಲ್, ಶ್ರೇಯಾಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಂಕ್, ಜಡೇಜಾ, ಚಹಲ್, ಕುಲ್ದೀಪ್ ಯಾದವ್, ಬುಮ್ರಾ, ಶಮಿ, ಶೈನಿ, ಶಾರ್ದೂಲ್ ಠಾಕೂರ್, ಸಂಜು ಸ್ಯಾಮ್ಸನ್.

    ಟೆಸ್ಟ್ ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮಯಾಂಕ್, ಪೃಥ್ವಿ ಶಾ, ಕೆಎಲ್ ರಾಹುಲ್, ಚೇತೇಸ್ವರ ಪೂಜಾರಾ, ರಹಾನೆ, ಹನುಮ ವಿಹಾರಿ, ಶುಭ್‍ಮನ್ ಗೀಲ್, ವೃದ್ಧಿಮಾನ್ ಸಹಾ, ರಿಷಬ್ ಪಂತ್, ಬುಮ್ರಾ, ಶಮಿ, ಉಮೇಶ್ ಯಾದವ್, ಶೈನಿ, ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್.

  • ಡಿನ್ನರ್ ವೇಳೆ ಕುಟುಂಬಕ್ಕೆ ಸೋಂಕಿದ ಕೊರೊನಾ – ತಾಯಿ, ಇಬ್ಬರು ಮಕ್ಕಳು ಸಾವು

    ಡಿನ್ನರ್ ವೇಳೆ ಕುಟುಂಬಕ್ಕೆ ಸೋಂಕಿದ ಕೊರೊನಾ – ತಾಯಿ, ಇಬ್ಬರು ಮಕ್ಕಳು ಸಾವು

    – ಒಂದೇ ಕುಟುಂಬದ 7 ಮಂದಿಗೆ ತಟ್ಟಿದ ಕೊರೊನಾ
    – ಕುಟುಂಬದ ಸಂಪರ್ಕದಲ್ಲಿದ್ದ 20 ಮಂದಿಗೆ ಗೃಹಬಂಧನ

    ವಾಷಿಂಗ್ಟನ್: ಸಂಬಂಧಿಕರೊಂದಿಗೆ ಡಿನ್ನರ್ ಮಾಡುವಾಗ ನ್ಯೂಜೆರ್ಸಿಯ ಕುಟುಂಬವೊಂದಕ್ಕೆ ಕೊರೊನಾ ತಗುಲಿದ್ದು, ಸೋಂಕಿನಿಂದ ಬಳಲುತ್ತಿದ್ದ ಒಂದೇ ಕುಟುಂಬದ 7 ಮಂದಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

    ಗ್ರೇಸ್ ಫಸ್ಕೋ(73), ರೀಟಾ(55) ಹಾಗೂ ಕಾರ್ಮಿನ್ ಫಸ್ಕೋ ಕೊರೊನಾದಿಂದ ಸಾವನ್ನಪ್ಪಿದ ದುರ್ದೈವಿಗಳು. ಸಂಬಂಧಿಕರ ಜೊತೆ ಡಿನ್ನರ್ ಮಾಡಿದ ಬಳಿಕ ಗ್ರೇಸ್ ಅವರ ಮನೆಮಂದಿಗೆಲ್ಲಾ ಸೋಂಕು ತಗುಲಿತ್ತು. ಒಟ್ಟು 7 ಮಂದಿಗೆ ಸೋಂಕು ತಗುಲಿತ್ತು. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

    ದುರಾದೃಷ್ಟವಶಾತ್ ಸೋಂಕು ಹೆಚ್ಚಾಗಿ ಕೆಳೆದ 5 ದಿನಗಳ ಹಿಂದೆ ಗ್ರೇಸ್ ಅವರ ಮಗಳು ರೀಟಾ ಸಾವನ್ನಪ್ಪಿದ್ದರು. ಆ ಬಳಿಕ ಬುಧವಾರ ಕಾರ್ಮಿನ್ ಅವರು ಸೋಂಕಿಗೆ ಬಲಿಯಾಗಿದ್ದರು. ಈ ವಿಚಾರ ತಾಯಿ ಗ್ರೇಸ್‍ಗೆ ತಿಳಿದಿರಲಿಲ್ಲ. ಮಗ ತೀರಿಹೋದ ಕೆಲ ಗಂಟೆಗಳಲ್ಲೇ ತಾಯಿಯನ್ನು ಕೂಡ ಕೊರೊನಾ ಬಲಿಪಡೆದಿದೆ. ಹೀಗೆ ಒಂದೇ ಕುಟುಂಬ ಮೂವರು ಒಬ್ಬರ ಮೇಲೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ.

    ಗ್ರೇಸ್ ಅವರ ಉಳಿದ 4 ಮಂದಿ ಮಕ್ಕಳಿಗೂ ಸೋಂಕು ತಗುಲಿದ್ದು, ಈ ಕುಟುಂಬದ ಸಂಪರ್ಕದಲ್ಲಿದ್ದ ಸುಮಾರು 20 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಶಂಕೆ ಇರುವ ಕಾರಣಕ್ಕೆ 20 ಮಂದಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಬಗ್ಗೆ ಫಸ್ಕೋ ಅವರ ಸಹೋದರಿ ಮಾತನಾಡಿ, ಇದು ವಿನಾಶಕಾರಿ ವಿಚಾರ ನನ್ನ ಸಹೋದರಿ, ಸಹೋದರ, ತಾಯಿಯನ್ನು ಕಳೆದುಕೊಂಡು ಬಹಳ ದುಃಖವಾಗುತ್ತಿದೆ. ನಮ್ಮ ಕುಟುಂಬಕ್ಕೆ ಸಹಾಯ ಬೇಕಿದೆ, ಸಹಾಯ ಮಾಡಿ ಎಂದು ಕೋರಿಕೊಂಡಿದ್ದಾರೆ.

    ಕುಟುಂಬದ ಇತರೆ ಸದ್ಯಸರನ್ನು ತಪಾಸಣೆ ಮಾಡಿ ಗೃಹಬಂಧನದಲ್ಲಿ ಇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಅದರಲ್ಲೂ ಸೋಂಕು ಶಂಕಿತ ವ್ಯಕ್ತಿಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಜಗತ್ತಿನಾದ್ಯಂತ 2,18,000 ಮಂದಿಗೆ ಸೋಂಕು ತಗುಲಿದ್ದು, 8 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಅಮೆರಿಕದಲ್ಲಿ 50 ರಾಜ್ಯದಲ್ಲಿ ಸೋಂಕು ಹರಡಿದ್ದು, 150 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 9,400 ಕೊರೊನಾ ದೃಢಪಟ್ಟ ಪ್ರಕರಣಗಳು ವರದಿಯಾಗಿದೆ.