Tag: netrani island

  • ಅರಬ್ಬಿ ಸಮುದ್ರದ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

    ಅರಬ್ಬಿ ಸಮುದ್ರದ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ರು ಅಪ್ಪು

    ಕಾರವಾರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕನಸಿನ ಗಂಧದ ಗುಡಿ ಟೀಸರ್ ಇಂದು ಬಿಡುಗಡೆಯಾಗಿದ್ದು, ಈ ದೃಶ್ಯಗಳ ಚಿತ್ರೀಕರಣಕ್ಕಾಗಿ ಅಪ್ಪು ಅರಬ್ಬಿ ಸಮುದ್ರದ ಹತ್ತು ಮೀಟರ್ ಆಳದಲ್ಲಿ ಸ್ಕೂಬಾ ಡೈವ್ ಮಾಡಿದ್ದರು.

    ಅಪ್ಪು ಗಂಧದ ಗುಡಿ ಚಿತ್ರೀಕರಣಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ, ಜೋಯಿಡಾ, ದಾಂಡೇಲಿ ಭಾಗದ ಅರಣ್ಯ ಹಾಗೂ ಸಮುದ್ರದಾಳದ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಹಿನ್ನೆಲೆ ಪುನೀತ್ ಅವರು ಸಮುದ್ರದಾಳದಲ್ಲಿ ಸ್ಕೂಬಾ ಡೈವ್ ಮಾಡುವ ಮೂಲಕ ಅಪರೂಪದ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಇದಕ್ಕಾಗಿ ಮುರಡೇಶ್ವರದ ನೇತ್ರಾಣಿ ಅಡ್ವೇಂಚರ್ ಸಂಸ್ಥೆಯಲ್ಲಿ ಸ್ಕೂಬಾ ಡೈವ್ ತರಬೇತಿ ಪಡೆದುಕೊಂಡಿದ್ದರು ಎಂಬ ಸುದ್ದಿ ಈಗ ಬೆಳಕಿಗೆ ಬಂದಿದೆ. ಇದನ್ನೂ ಓದಿ:  ‘ಅಪ್ಪುಶ್ರೀ’ ಪ್ರಶಸ್ತಿ ನೀಡುವಂತೆ ಆಗ್ರಹಿಸಿ ಬರಿಗಾಲಲ್ಲಿ ಪಾದಯಾತ್ರೆ 

    ಅರಬ್ಬಿ ಸಮುದ್ರದ ನೇತ್ರಾಣಿ ದ್ವೀಪದ ಹತ್ತು ಮೀಟರ್ ಆಳದಲ್ಲಿ ಪುನೀತ್ ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಂಡು ಸ್ಕೂಬಾ ಡೈವ್ ಮಾಡಿದ್ದಾರೆ. ಎರಡು ದಿನ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವ್ ಮಾಡಿದ್ದ ಅವರು, ಸಮುದ್ರದಾಳದಲ್ಲಿ ಗಂಟೆಗಳ ಕಾಲ ಈಜಾಡಿ ಸಮುದ್ರ ಗರ್ಭದಲ್ಲಿರುವ ಅಪರೂಪದ ಹವಳದ ದಿಬ್ಬಗಳು, ಮೀನುಗಳನ್ನು ಚಿತ್ರೀಕರಿಸಿದ್ದಾರೆ.

    ಈ ಕುರಿತು ಪುನೀತ್ ಅವರಿಗೆ ತರಬೇತಿ ನೀಡಿದ ಹಾಗೂ ಅವರೊಂದಿಗೆ ಸ್ಕೂಬಾ ಡೈ ಮಾಡಿದ ನೇತ್ರಾಣಿ ಅಡ್ವೇಂಚರ್ ತರಬೇತುದಾರ ಗಣೇಶ್ ಹರಿಕಾಂತ್ರ ಅವರು ಪುನೀತ್ ಅವರ ಸಮುದ್ರದಾಳದ ಸಾಹಸ ಕುರಿತು ಹಂಚಿಕೊಂಡಿದ್ದಾರೆ. ಅವರಿಗಿದ್ದ ಪರಿಸರ ಪ್ರೇಮ ಹಾಗೂ ತಮ್ಮ ಕನಸನ್ನು ಅವರು ತಿಳಿಸಿದ್ದರು. ಅವರು ಪ್ರವಾಸೋದ್ಯಮ ಅಭಿವೃದ್ಧಿ ಕನಸು ಕಂಡಿದ್ದರು ಎಂದು ಹಿಂದೆ ಪುನೀತ್ ಅವರು ಹೇಳಿದ ಮಾತುಗಳನ್ನು ನೆನಪಿಸಿಕೊಂಡರು. ಇದನ್ನೂ ಓದಿ:  ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

  • ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ- 8 ಮಂದಿ ಮೀನುಗಾರರ ರಕ್ಷಣೆ

    ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ- 8 ಮಂದಿ ಮೀನುಗಾರರ ರಕ್ಷಣೆ

    ಕಾರವಾರ: ಅರಬ್ಬಿ ಸಮುದ್ರದಲ್ಲಿ ಬೋಟ್ ಒಂದು ಮುಳುಗಡೆಯಾಗಿದ್ದು, 8 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಮುರಡೇಶ್ವರ ಸಮೀಪದ ನೇತ್ರಾಣಿ ದ್ವೀಪದ ಬಳಿ ಈ ಘಟನೆ ಸಂಭವಿಸಿದೆ. ಮಂಗಳೂರು ಮೂಲದ ಬೋಟ್ ಇದಾಗಿದ್ದು, ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗಾಗಿ ಬೋಟ್ ತೆರಳಿತ್ತು. ಮೀನುಗಾರಿಕೆಯಿಂದ ಮರಳಿ ಮಂಗಳೂರಿಗೆ ವಾಪಸ್ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

    ನೇತ್ರಾಣಿ ದ್ವೀಪದ ಸಮೀಪ ಬೋಟ್ ಬರುತ್ತಿದ್ದಾಗ ಅಲ್ಲಿ ಕಲ್ಲು ಬಂಡೆಗೆ ಬೋಟ್ ಗುದ್ದಿದೆ. ಪರಿಣಾಮ ಬೋಟಿಗೆ ಹಾನಿಯಾಗಿ, ಸಮುದ್ರದಲ್ಲಿ ಮುಳುಗಿದೆ. ಬೋಟ್ ಮುಳುಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೀನುಗಾರರು ಬೋಟ್‍ನಿಂದ ನೀರಿಗೆ ಹಾರಿ ದ್ವೀಪದ ದಡ ಸೇರಲು ಮುಂದಾಗಿದ್ದಾರೆ. ಈ ವೇಳೆ ಅವರನ್ನು ಕಂಡ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿ ಸಹಾಯ ಮಾಡಿದ್ದಾರೆ.

    ಈ ಬೋಟ್ ಸಮುದ್ರದಲ್ಲಿ ಮುಳುಗುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ಬೋಟಿನಲ್ಲಿದ್ದ ಮೀನುಗಾರರು ಮೂಲತಃ ತಮಿಳುನಾಡಿನವರು ಎಂಬ ಮಾಹಿತಿ ಲಭ್ಯವಾಗಿದ್ದು, ಸದ್ಯ ಎಲ್ಲಾ ಮೀನುಗಾರರು ಸುರಕ್ಷಿತವಾಗಿದ್ದಾರೆ. ಸ್ಥಳಕ್ಕೆ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಬಂದು ಈ ಸಂಬಂಧ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದ್ದು, ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

  • ಕರ್ನಾಟಕದಲ್ಲೇ ಫಸ್ಟ್- ಈಗ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಬಹುದು

    ಕರ್ನಾಟಕದಲ್ಲೇ ಫಸ್ಟ್- ಈಗ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಬಹುದು

    ಕಾರವಾರ: ಭಾರತೀಯ ನೌಕಾದಳ ಸಮರಾಭ್ಯಾಸ ನೆಡೆಸುತ್ತಿದ್ದ ದ್ವೀಪ ಈಗ ಕರ್ನಾಟಕದಲ್ಲೇ ಮೊದಲ ಜಲಕ್ರೀಡಾ ಸಾಹಸ ಸ್ಥಳವಾಗಿದ್ದು ದೇಶ ವಿದೇಶಿಗರನ್ನ ಸೆಳೆಯುತ್ತಿದೆ.

    ಇದ್ಯಾವುದೋ ವಿದೇಶದ ದೃಶ್ಯ ಅಂದ್ಕೊಬೇಡಿ. ಇದು ನಮ್ಮ ಉತ್ತರಕನ್ನಡ ಜಿಲ್ಲೆಯ ದೃಶ್ಯ. ಭಟ್ಕಳ ತಾಲೂಕಿನ ಮುರುಡೇಶ್ವರದ ನಡುಗುಡ್ಡೆ ನೇತ್ರಾಣಿ ಈಗ ಪ್ರವಾಸಿಗರ ಹಾಟ್‍ಸ್ಪಾಟ್. ನೌಕಾದಳದ ಸಮಸರಾಭ್ಯಾಸದಿಂದ ಜೀವವೈವಿಧ್ಯಕ್ಕೆ ಕಂಟಕ ಎದುರಾಗಿದ್ದ ನೇತ್ರಾಣಿಯಲ್ಲಿ ಸಾರ್ವಜನಿಕ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿತ್ತು. ಆದ್ರೆ ಎರಡು ತಿಂಗಳ ಹಿಂದೆ ಜಿಲ್ಲಾಡಳಿತ ಇಲ್ಲಿ ಜಲಕ್ರೀಡೆಗಳಿಗೆ ಅವಕಾಶ ಕಲ್ಪಿಸಿದೆ. ನೇತ್ರಾಣಿ ಅಡ್ವೆಂಚರ್ ಸಂಸ್ಥೆ ಜಲಸಾಹಸ ಕ್ರೀಡೆಗಳನ್ನ ನಡೆಸ್ತಿದೆ.

    ಸ್ಕೂಬಾ ಡೈವ್ ಮಾಡಲು ಈ ಹಿಂದೆ ಅಂಡಮಾನ್-ನಿಕೋಬಾರ್ ಆಥವಾ ವಿದೇಶಗಳಿಗೆ ಹೋಗಬೇಕಿತ್ತು. ಇದೀಗ ಮುರುಡೇಶ್ವರದಿಂದ 19 ಕಿಲೋಮೀಟರ್ ದೂರದಲ್ಲಿರುವ ಈ ಚಿಕ್ಕ ದ್ವೀಪಕ್ಕೆ ಬೋಟ್‍ನಲ್ಲಿ ತೆರಳಿದರೆ ಸಾಕು.

    ಇಲ್ಲಿನ ಸಮುದ್ರ ಭಾಗ ಹವಳಗಳಿಂದ ಕೂಡಿದೆ. ಅಲ್ಲದೇ ಸಾವಿರಾರು ಜಾತಿಯ ಮೀನುಗಳ ವಾಸಸ್ಥಳವಾಗಿದೆ. ಹೀಗಾಗಿ ನೇತ್ರಾಣಿ ಸಾಹಸಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳ. ನೀವೂ ಒಮ್ಮೆ ಭೇಟಿ ಕೊಡಿ.