Tag: neem tree

  • ಓಮಿಕ್ರಾನ್ ಬಾರದಂತೆ ಬೇವಿನ ಮರಕ್ಕೆ ಭರ್ಜರಿ ಪೂಜೆ

    ಓಮಿಕ್ರಾನ್ ಬಾರದಂತೆ ಬೇವಿನ ಮರಕ್ಕೆ ಭರ್ಜರಿ ಪೂಜೆ

    -ಗಾಳಿ ಸುದ್ದಿ ನಂಬಿ ಗ್ರಾಮೀಣ ಭಾಗದಲ್ಲಿ ಮೌಢ್ಯತೆ ಆಚರಣೆ

    ಯಾದಗಿರಿ: ದೇಶದಲ್ಲಿ ಕೊರೊನಾ ಮೂರನೇ ಅಲೆ ಮತ್ತು ಓಮಿಕ್ರಾನ್ ವೈರಸ್ ಆತಂಕದ ಹೆಚ್ಚಾಗಿದೆ. ಓಮಿಕ್ರಾನ್ ತಡೆಗಟ್ಟಲು ಇಡೀ ವೈದ್ಯಕೀಯ ಲೋಕವೆ ತಲೆ ಕೆಡಿಸಿಕೊಂಡಿದೆ. ಆದರೆ ಯಾದಗಿರಿಯಲ್ಲಿ ಮಾತ್ರ ಓಮಿಕ್ರಾನ್ ಬಾರದಂತೆ ಬೇವಿನ ಮರಕ್ಕೆ ಭರ್ಜರಿ ಪೂಜೆ ಮಾಡಲಾಗಿದೆ.

    ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಓಮಿಕ್ರಾನ್ ಮಾರಮ್ಮ ಬಾರದಂತೆ ಇಂದು, ಬೇವಿನ ಮರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ. ಕೋವಿಡ್ ಮೂರನೇ ಅಲೆ ಬಾರದಂತೆ ಬೇವಿನ ಮರಕ್ಕೆ ಪೂಜೆ ಮಾಡಲು ಗ್ರಾಮೀಣ ಜನ ಮುಂದಾಗಿದ್ದಾರೆ. ಬೇವಿನ ಮರಕ್ಕೆ ಪೂಜೆ ಮಾಡಿ ಹೊಳಿಗೆ ಎಡೆಯಿಡಲಾಯಿತ್ತು. ಇದನ್ನೂ ಓದಿ  ಕೊರೊನಾ ಆತಂಕ- ಯಾದಗಿರಿಯಲ್ಲಿ ಸಿದ್ಧವಾಯ್ತಿ ಹೈಟೆಕ್ ಐಸಿಯು ವಾರ್ಡ್

    ಓಮಿಕ್ರಾನ್ ಮಕ್ಕಳಿಗೆ ಬರಬೇಕಿತ್ತು, ಆದರೆ ಬೇವಿನ ಮರಕ್ಕೆ ಬಂದಿದೆ. ಬೇವಿನ ಮರ ಓಮಿಕ್ರಾನ್ ರೋಗವನ್ನು ತಾನು ತೆಗೆದುಕೊಂಡು, ಮನುಷ್ಯ ಕುಲವನ್ನು ಉಳಿಸಿದೆ ಅಂತ ಯಾರೋ ಸ್ವಾಮೀಜಿ ಹೇಳಿದ್ದಾರೆಂಬ ಗಾಳಿ ಸುದ್ದಿ ಹಬ್ಬಿದೆ. ಈ ಗಾಳಿ ಸುದ್ದಿ ನಂಬಿ ಜನರು ಈ ರೀತಿಯ ಮೌಢ್ಯತೆ ಆಚರಣೆಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ವಿಚ್ಛೇದನದ ಬಳಿಕ ಕುಗ್ಗಿಹೋಗಿ, ಸಾಯುವ ಹಂತ ತಲುಪುತ್ತೇನೆ ಎಂದುಕೊಂಡಿದ್ದೆ: ಸಮಂತಾ

  • ಬೀದರ್: ಬೇವಿನ ಮರದಲ್ಲಿ ಹಾಲಿನಂತ ದ್ರವ – ಸ್ಥಳೀಯರಿಂದ ಪೂಜೆ

    ಬೀದರ್: ಬೇವಿನ ಮರದಲ್ಲಿ ಹಾಲಿನಂತ ದ್ರವ – ಸ್ಥಳೀಯರಿಂದ ಪೂಜೆ

    ಬೀದರ್: ಪ್ರಕೃತಿ ವಿಸ್ಮಯಕ್ಕೆ ಸಾಕ್ಷಿಯಾಗಿದೆ ಗಡಿ ಜಿಲ್ಲೆ ಬೀದರ್ ಸಾಕ್ಷಿಯಾಗಿದ್ದು, ಬೇವಿನ ಮರದಿಂದ ನಿರಂತರವಾಗಿ ಹಾಲಿನಂತಹ ದ್ರವ ಸುರಿಯುತ್ತಿದೆ.

    ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹುಡುಗಿ ಗ್ರಾಮದ ಹೊಡ್ಡರ ಹೊಣಿಯಲ್ಲಿ ಘಟನೆ ನಡೆದಿದ್ದು, ಬೇವಿನ ಮರದಲ್ಲಿ ಹಲವು ದಿನಗಳಿಂದ ಬಿಳಿ ಬಣ್ಣದ ಹಾಲಿನಂತ ದ್ರವ ನಿರಂತರವಾಗಿ ಹೊರ ಹರಿಯುತ್ತಿದೆ.

    ಪ್ರಕೃತಿಯ ವಿಸ್ಮಯವನ್ನು ನೋಡಲು ಪ್ರತಿದಿನ ಜಿಲ್ಲೆಯ ಮೂಲೆ ಮೂಲೆಗಳಿಂದ ನೂರಾರು ಜನ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ದೈವರ ಪವಾಡವೆಂದು ನಂಬಿರುವ ಕೆಲವರು ಮರಕ್ಕೆ ಪೂಜೆ ಮಾಡುತ್ತಿದ್ದಾರೆ. ಸಾಲದಕ್ಕೆ ಬೇವಿನ ಮರಕ್ಕೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರ ಹಾಕಿ ವಿಸ್ಮಯ ನೋಡಲು ಬಂದ ಎಲ್ಲರಿಗೂ ತೀರ್ಥ, ಪ್ರಸಾದಗಳನ್ನು ನೀಡುತ್ತಿದ್ದಾರೆ.

    ಈ ಬಗ್ಗೆ ವಿಜ್ಞಾನಿಗಳು ಹೇಳೋದು ಏನು?
    ಸಾಮಾನ್ಯವಾಗಿ ಎಲ್ಲ ಮರಗಳ ಬೇರು ಕೆಳಗಿನಿಂದ ಮೇಲಕ್ಕೆ ನೀರು ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ಇದರಲ್ಲಿ ಕೋಶಗಳಿದ್ದು, ಮರದ ಎಲ್ಲ ಕೊಂಬೆಗಳಿಗೆ ನೀರನ್ನು ರವಾನಿಸುತ್ತದೆ. ನೀರು ಪೂರೈಸುವ ಕೋಶಗಳು ನಾಶವಾದಾಗ ಈ ರೀತಿಯ ಘಟನೆಗಳು ನಡೆಯುತ್ತದೆ. ಕೋಶಗಳು ತನ್ನ ಕೆಲಸವನ್ನು ಕಡಿಮೆ ಮಾಡಿದಾಗ ಮರದೊಳಗೆ ಇರುವ ನೀರು ಹೊರಬರುತ್ತದೆ. ಮರದಲ್ಲಿ ಸಹಜವಾಗಿ ನೊರೆ ಇರುವುದರಿಂದ ನೊರೆ ಮಿಶ್ರಿತ ನೀರು ಹಾಲಾಗಿ ಕಾಣುತ್ತದೆ. ಕೋಶಗಳು ನಾಶವಾದರೆ ನೀರು ಮೇಲಕ್ಕೆ ಬಂದು ಹಾಲಿನಂತೆ ಸುರಿಯಲು ಶುರುವಾಗುತ್ತದೆ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರಿವುದರಿಂದ ಹಾಲಿನಂತಿರುವ ನೀರು ಸಿಹಿ ಅನುಭವ ನೀಡುತ್ತದೆ.

  • ಬೇವಿನ ಮರದಿಂದ ನಿರಂತರವಾಗಿ ಸುರಿಯುತ್ತಿರುವ ಹಾಲು- ಸ್ಥಳೀಯರಿಂದ ಪೂಜೆ

    ಬೇವಿನ ಮರದಿಂದ ನಿರಂತರವಾಗಿ ಸುರಿಯುತ್ತಿರುವ ಹಾಲು- ಸ್ಥಳೀಯರಿಂದ ಪೂಜೆ

    ಬೀದರ್: ಭೀಕರ ಬರಗಾಲದಿಂದ ಬೆಂದು ಹೋಗಿರುವ ಬಿಸಿಲುನಾಡು ಬೀದರ್ ನಲ್ಲಿ ಪ್ರಕೃತಿ ವಿಸ್ಮಯ ತೊರಿಸಿದೆ. ಬೇವಿನ ಮರದಿಂದ ಹಾಲು ನಿರಂತರವಾಗಿ ಹರಿಯುತ್ತಿದ್ದು ಸ್ಥಳೀಯರು ಇದು ದೈವಲೀಲೆ ಎಂದು ದೇವಾರಾಧನೆ ಮಾಡುತ್ತಿದ್ದಾರೆ.

    ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದ ಹೊಲವೊಂದರ ಬೇವಿನ ಮರದಿಂದ ಕಳೆದ ಒಂದು ವಾರದಿಂದ ಬಿಳಿ ಬಣ್ಣದ ಹಾಲಿನ ರೂಪದ ದ್ರವ ನಿರಂತರವಾಗಿ ಹೊರ ಹರಿಯುತ್ತಿದೆ. ಇದನ್ನು ಕಂಡ ಸ್ಥಳೀಯರು ದೈವಲೀಲೆ ಎಂದು ಭಕ್ತಿಯಿಂದ ಮರಕ್ಕೆ ಪೂಜೆ ಪುನಸ್ಕಾರ ಮಾಡಿ ಆರಾಧನೆ ಮಾಡುತ್ತಿದ್ದಾರೆ.

    ನಿರಂತರವಾಗಿ ಹಾಲಿನ ಮಾದರಿಯ ದ್ರವ ಹೊರ ಸೂಸುವ ಮರದ ಈ ನೋಟ ನೋಡಲು ಸುತ್ತ ಮುತ್ತಲಿನ ಗ್ರಾಮಗಳ ಜನರು ತಂಡೊಪತಂಡವಾಗಿ ಮದಕಟ್ಟಿ ಗ್ರಾಮಕ್ಕೆ ಬರುತ್ತಿದ್ದಾರೆ. ಮರದಿಂದ ಬರುತ್ತಿರುವ ಹಾಲು ಸಿಹಿಯಾಗಿದ್ದು, ಜನರು ಅದನ್ನು ಕುಡಿದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ಮರದಿಂದ ದ್ರವ ಹೊರ ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಈ ಬಗ್ಗೆ ವಿಜ್ಞಾನಿಗಳು ಹೇಳೋದು ಏನು?
    ಸಾಮಾನ್ಯವಾಗಿ ಎಲ್ಲ ಮರಗಳ ಬೇರು ಕೆಳಗಿನಿಂದ ಮೇಲಕ್ಕೆ ನೀರು ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತದೆ. ಇದರಲ್ಲಿ ಕೋಶಗಳಿದ್ದು, ಮರದ ಎಲ್ಲ ಕೊಂಬೆಗಳಿಗೆ ನೀರನ್ನು ರವಾನಿಸುತ್ತದೆ. ನೀರು ಪೂರೈಸುವ ಕೋಶಗಳು ನಾಶವಾದಾಗ ಈ ರೀತಿಯ ಘಟನೆಗಳು ನಡೆಯುತ್ತದೆ. ಕೋಶಗಳು ತನ್ನ ಕೆಲಸವನ್ನು ಕಡಿಮೆ ಮಾಡಿದಾಗ ಮರದೊಳಗೆ ಇರುವ ನೀರು ಹೊರಬರುತ್ತದೆ. ಮರದಲ್ಲಿ ಸಹಜವಾಗಿ ನೊರೆ ಇರುವುದರಿಂದ ನೊರೆ ಮಿಶ್ರಿತ ನೀರು ಹಾಲಾಗಿ ಕಾಣುತ್ತದೆ. ಕೋಶಗಳು ನಾಶವಾದರೆ ನೀರು ಮೇಲಕ್ಕೆ ಬಂದು ಹಾಲಿನಂತೆ ಸುರಿಯಲು ಶುರುವಾಗುತ್ತದೆ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರಿವುದರಿಂದ ಹಾಲಿನಂತಿರುವ ನೀರು ಸಿಹಿ ಅನುಭವ ನೀಡುತ್ತದೆ.

  • ಧರೆಗುರುಳಿತು ಕಾಲೇಜ್ ಆವರಣದಲ್ಲಿದ್ದ ಬೃಹತ್ ಬೇವಿನ ಮರ – ವಿದ್ಯಾರ್ಥಿನಿಯರು ಬಚಾವ್

    ಧರೆಗುರುಳಿತು ಕಾಲೇಜ್ ಆವರಣದಲ್ಲಿದ್ದ ಬೃಹತ್ ಬೇವಿನ ಮರ – ವಿದ್ಯಾರ್ಥಿನಿಯರು ಬಚಾವ್

    ತುಮಕೂರು: ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬೇವಿನ ಮರವೊಂದು ಧರೆಗುರುಳಿದ್ದು, ಅದೃಷ್ಟವಶಾತ್ ಅದರ ಕೆಳಗೆ ಇದ್ದ ನೂರಾರು ವಿದ್ಯಾರ್ಥಿನಿಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕಾಲೇಜು ಆವರಣದಲ್ಲಿ ಸುಮಾರು 100 ವರ್ಷ ಹಳೆಯ ಬೃಹತ್ ಗಾತ್ರದ ಬೇವಿನ ಮರವಿತ್ತು. ಈ ಮರ ಇಂದು ಧರೆಗುರುಳಿದ್ದು, ಈ ಮರದ ಕೆಳಗಡೆಯೇ ಇದ್ದ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬೀಳುತ್ತಿರುವ ಶಬ್ಧ ಕೇಳಿ ಮರದ ಕೆಳಗಿದ್ದ ವಿದ್ಯಾರ್ಥಿನಿಯರು ದಿಕ್ಕಪಾಲಾಗಿ ಓಡಿದ್ದಾರೆ. ವಿದ್ಯಾರ್ಥಿನಿಯರು ಮರದ ಆಸುಪಾಸಿನಿಂದ ದೂರ ಓಡಿಬಂದ ಬಳಿಕ ಮರ ಉರುಳಿ ಬಿದ್ದಿದೆ.

    ಮರ ಬೀಳುತ್ತಿರುವ ದೃಶ್ಯ ಹಾಗೂ ವಿದ್ಯಾರ್ಥಿನಿಯರು ಭಯದಿಂದ ದಿಕ್ಕಾಪಾಲಾಗಿ ಓಡಿದ ದೃಶ್ಯಗಳು ಕಾಲೇಜಿನ ಆವರಣದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮರ ಬಿದ್ದ ತಕ್ಷಣ ಯಾರಾದರೂ ಅದರಡಿಗೆ ಸಿಲುಕಿದ್ದಾರಾ ಎಂದು ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ಹಾಗೂ ಇತರೆ ವಿದ್ಯಾರ್ಥಿನಿಯರು ಮರದ ಬಳಿ ಹೋಗಿ ನೋಡುತ್ತಿರುವ ದೃಶ್ಯಗಳು ಕೂಡ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ.

    ಸದ್ಯ ಸ್ಥಳಕ್ಕೆ ಎನ್‍ಇಪಿಎಸ್(ನ್ಯೂ ಎಕ್ಸಟೆಕ್ಷನ್ ಪೊಲೀಸ್ ಠಾಣೆ) ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಮರವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

  • ಬಳ್ಳಾರಿ: ಬೇವಿನ ಮರದಲ್ಲಿ ಗುಬ್ಬಚ್ಚಿಯನ್ನು ನುಂಗಲೆತ್ನಿಸಿದ ಹಸಿರು ಹಾವು – ವಿಡಿಯೋ ನೋಡಿ

    ಬಳ್ಳಾರಿ: ಬೇವಿನ ಮರದಲ್ಲಿ ಗುಬ್ಬಚ್ಚಿಯನ್ನು ನುಂಗಲೆತ್ನಿಸಿದ ಹಸಿರು ಹಾವು – ವಿಡಿಯೋ ನೋಡಿ

    ಬಳ್ಳಾರಿ: ಹಾವುಗಳು ಕಪ್ಪೆ, ಇಲಿ ಮೀನುಗಳನ್ನು ನುಂಗುವುದನ್ನು ಕೇಳಿರ್ತೀರ. ಆದ್ರೆ ಹಸಿರು ಹಾವೊಂದು ಗುಬ್ಬಚ್ಚಿಯನ್ನು ನುಂಗುವ ವಿಡಿಯೋವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಹೊಸಪೇಟೆ ತಾಲೂಕಿನ ಹಂಪಿ ಪವರ್ ಹೌಸ್ ಕ್ಯಾಂಪ್‍ನಲ್ಲಿ ಬೇವಿನ ಮರದಲ್ಲಿದ್ದ ಹಸಿರು ಹಾವೊಂದು ಗುಬ್ಬಿಯನ್ನು ನುಂಗಿದ ಅಪರೂಪದ ದೃಶ್ಯ ಮೊಬೈಲ್‍ನಲ್ಲಿ ಸೆರೆ ಸಿಕ್ಕಿದೆ. ಬೇವಿನಮರದಲ್ಲಿದ್ದ ಹಾವು ಗುಬ್ಬಚ್ಚಿಯನ್ನು ನುಂಗುತ್ತಿದ್ದಂತೆ ಗುಬ್ಬಚ್ಚಿ ಅರಚುವುದನ್ನು ಸ್ಥಳೀಯರು ನೋಡಿದ್ದು, ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಹಾವು ಸುಮಾರು ಒಂದು ಗಂಟೆ ಕಾಲ ಗುಬ್ಬಚ್ಚಿ ನುಂಗಲು ಪ್ರಯತ್ನಪಟ್ಟರೂ ಸಂಪೂರ್ಣವಾಗಿ ಗುಬ್ಬಚ್ಚಿಯನ್ನು ನುಂಗಲು ಸಾಧ್ಯವಾಗಿಲ್ಲ.

    https://www.youtube.com/watch?v=9lRnoN7wHl8