‘ಅನಿಮಲ್’ ಸಿನಿಮಾದ ಸಕ್ಸಸ್ ಬಳಿಕ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್ನಲ್ಲಿ ಬೇಡಿಕೆ ಹೆಚ್ಚಾಗಿದೆ. ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಜೋಡಿಯಾಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮೊದಲ ಬಾರಿಗೆ ಆಯುಷ್ಮಾನ್ ಮತ್ತು ರಶ್ಮಿಕಾ ಜೊತೆಯಾಗಿ ನಟಿಸುತ್ತಿದ್ದಾರೆ. 14ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಚಿತ್ರದ ಕಥೆ ಒಳಗೊಂಡಿದೆ. ಈ ಚಿತ್ರಕ್ಕೆ ಸದ್ಯ ತಂಬಾ ಎಂದು ಟೈಟಲ್ ಇಡಲಾಗಿದ್ದು, ಸಿನಿಮಾದಲ್ಲಿ ಆಯುಷ್ಮಾನ್ ಮತ್ತು ರಶ್ಮಿಕಾಗೆ ನವಾಜುದ್ದೀನ್ ಸಿದ್ಧಿಕಿ ಅವರು ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:‘ಪುಷ್ಪ 3’ ಬರೋದು ಖಚಿತ ಎಂದ ನಿರ್ಮಾಪಕ ರವಿಶಂಕರ್
ಈಗಾಗಲೇ ಬದ್ಲಾಪುರ, ಕಿಕ್ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿ ಸೈ ಎನಿಸಿಕೊಂಡಿರುವ ನವಾಜುದ್ದೀನ್ ಈ ಚಿತ್ರದಲ್ಲೂ ಖಳನಟನಾಗಿ ನಟಿಸಿದ್ರೆ ಸೂಕ್ತ ಎಂದು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ. ನಟನ ಜೊತೆ ಕೂಡ ಒಂದು ಮಾತುಕತೆ ಕೂಡ ಮಾಡಿದೆಯಂತೆ. ಇದು ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಚಿತ್ರತಂಡ ಅಧಿಕೃತವಾಗ ಅನೌನ್ಸ್ ಮಾಡುವವರೆಗೂ ಕಾದುನೋಡಬೇಕಿದೆ.
ಇನ್ನೂ ‘ತಂಬಾ’ (Thamba) ಚಿತ್ರದ ಶೂಟಿಂಗ್ ಈ ವರ್ಷದ ಅಂತ್ಯದಲ್ಲಿ ಶುರುವಾಗಲಿದೆ. ಮುಂಬೈ ಮಾತ್ರವಲ್ಲ, ಕರ್ನಾಟಕದ ಹಂಪಿಯಲ್ಲೂ ಶೂಟಿಂಗ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ. ಇನ್ನೂ ರಶ್ಮಿಕಾ ಸದ್ಯ ನಟಿಸಿರುವ ‘ಪುಷ್ಪ 2’ ಮತ್ತು ‘ಛಾವಾ’ ಎರಡು ಚಿತ್ರಗಳು ಡಿಸೆಂಬರ್ನಲ್ಲಿ ರಿಲೀಸ್ ಆಗುತ್ತಿದೆ. ಶ್ರೀವಲ್ಲಿ ನಟನೆ ನೋಡೋಕೆ ಫ್ಯಾನ್ಸ್ ಕಾಯುತ್ತಿದ್ದಾರೆ.
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಆಲಿಯಾ ಸಿದ್ದಿಕಿ (Aaliya Siddiqui) ಸಂಸಾರದ ರಂಪಾಟ ಕಳೆದ ವರ್ಷ ಭಾರೀ ಸುದ್ದಿಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಲೈವ್ಗೆ ಬಂದು ಪತಿ ಬಗ್ಗೆ ಆಲಿಯಾ ದೂರಿನ ಪಟ್ಟಿಯನ್ನೇ ಇಟ್ಟಿದ್ದರು. ಪತಿ ನವಾಜುದ್ದೀನ್ ಸಿದ್ದಿಕಿ ಜೊತೆ ಆಲಿಯಾ ಒಂದಾಗುವ ಸುಳಿವು ನೀಡಿದ್ದಾರೆ.
ಇದೀಗ ಆಲಿಯಾ ಸಿದ್ದಿಕಿ ಮದುವೆಯಾಗಿ 14 ವರ್ಷ ಪೂರೈಸಿದ್ದು, ಇದೀಗ ಪತಿಗೆ ವಿಶೇಷವಾಗಿ ಶುಭಕೋರಿದ್ದಾರೆ. 14 ವರ್ಷಗಳ ದಾಂಪತ್ಯದ ಸಂಭ್ರಮ ಎಂದು ಅಡಿಬರಹ ನೀಡಿ, ಪತಿ ಮತ್ತು ಮಕ್ಕಳ ಜೊತೆಗಿನ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನನಗೂ ನಟಿಸೋಕೆ ಅವಕಾಶ ಕೊಡಿ: ಆಶಿಷ್ ವಿದ್ಯಾರ್ಥಿ ಅಳಲು
ಇಬ್ಬರ ದಾಂಪತ್ಯ ಸರಿಯಿಲ್ಲ (Wedding) ಎಂಬುದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಪತಿ ಜೊತೆಗಿನ ಮನಸ್ತಾಪದ ಬಳಿಕ ಮಕ್ಕಳ ಜೊತೆ ಆಲಿಯಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದೀಗ ಆ್ಯನಿವರ್ಸರಿ ಕುರಿತು ಪೋಸ್ಟ್ ಶೇರ್ ಮಾಡುತ್ತಿದ್ದಂತೆ, ಇಬ್ಬರೂ ಒಂದಾಗುವ ಸೂಚನೆ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಖುಷಿಪಡುತ್ತಿದ್ದಾರೆ.
ಕಳೆದ ವರ್ಷ ಡಿವೋರ್ಸ್ಗಾಗಿ ಕೋರ್ಟ್ ಮೆಟ್ಟಿಲೇರಿದ್ದರು ನವಾಜುದ್ದೀನ್- ಆಲಿಯಾ ಜೋಡಿ. ಆದರೆ ಈಗ ಮಕ್ಕಳಿಗಾಗಿ ಒಂದಾಗುವ ಸುಳಿವು ನೀಡಿದ್ದಾರೆ. ಈ ಸುದ್ದಿ ನಿಜನಾ? ಇಬ್ಬರ ಕಡೆಯಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.
ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಪತ್ನಿ ಅಲಿಯಾ ಸಿದ್ದಿಕಿ, ಖ್ಯಾತ ನಟಿ ಕಂಗನಾ ರಣಾವತ್ (Kangana Ranaut) ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಂಗನಾ ವಿರುದ್ಧ ಸಿಡಿಮಿಡಿಗೊಳ್ಳುವುದಕ್ಕೂ ಕಾರಣವಿದೆ. ಈ ಹಿಂದೆ ನವಾಜುದ್ದೀನ್ ಸಿದ್ದಿಕಿ ಪರ ಕಂಗಣಾ ಬ್ಯಾಟಿಂಗ್ ಮಾಡಿದ್ದರು. ಅಲಿಯಾ ವಿರುದ್ಧ ಮಾತನಾಡಿದ್ದರು. ನವಾಜುದ್ದೀನ್ ಮತ್ತು ಅಲಿಯಾ ದಾಂಪತ್ಯದಲ್ಲಿ ಬಿರುಕು ಬಿದ್ದಾಗ, ಅಲಿಯಾ ವಿರೋಧಿಸಿ ಕಂಗನಾ ಮಾತನಾಡಿದ್ದರು. ಇದೀಗ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ ಅಲಿಯಾ.
ಕಂಗನಾ ರಣಾವತ್ ಎಲ್ಲದಕ್ಕೂ ಮೂಗು ತೂರಿಸುತ್ತಾರೆ. ಅವರ ಬದುಕಿನಲ್ಲೇ ನಾನಾ ತಪ್ಪುಗಳಿವೆ. ಅವುಗಳನ್ನು ತಿದ್ದಿಕೊಂಡರೆ ಸಾಕು. ಬೇರೆಯವರ ವಿಷಯದಲ್ಲಿ ಕಂಗನಾ ಬಾಯಿ ಹಾಕುವುದು ಒಳ್ಳೆಯದಲ್ಲ. ಕಂಗನಾ ಏನು ಸುಪ್ರೀಂ ಅಲ್ಲಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ. ಬೇರೆಯವರ ವಿಷಯದಲ್ಲಿ ಕಂಗನಾ ಮೂಗು ತೂರಿಸುವುದರ ಬದಲು, ಒಳ್ಳೊಳ್ಳೆ ಕೆಲಸಗಳನ್ನು ಮಾಡಲಿ ಎಂದು ಸಲಹೆಯನ್ನೂ ನೀಡಿದ್ದಾರೆ. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್ ಮಾಡಲ್ಲ- ಪ್ರಿಯಾಮಣಿ ಖಡಕ್ ಉತ್ತರ
ಅಲಿಯಾ (Alia Siddiqui) ಈ ರೀತಿ ತಿರುಗಿ ಬೀಳುವುದು ಹೊಸದೇನೂ ಅಲ್ಲ. ಮೊನ್ನೆಯಷ್ಟೇ ಬಿಗ್ ಬಾಸ್ ಮನೆಯಿಂದ ಹೊರ ಬೀಳುತ್ತಿದ್ದಂತೆಯೇ ಆ ಕಾರ್ಯಕ್ರಮವನ್ನು ನಿರೂಪಿಸುವ ಸಲ್ಮಾನ್ ಖಾನ್ ವಿರುದ್ಧವೂ ಬಾಂಬ್ ಸಿಡಿಸಿದ್ದರು. ಬಿಗ್ ಬಾಸ್ (Big Boss) ಶೋ ಮೇಲೆಯೇ ಪಕ್ಷಪಾತದ ಆರೋಪ ಮಾಡಿದ್ದರು. ನನ್ನೊಳಗಿನ ಹಲವು ಸತ್ಯಗಳು ಆಚೆ ಬರುತ್ತಿದ್ದವು. ಅದು ಸಲ್ಮಾನ್ ಖಾನ್ ಗೆ ಇಷ್ಟವಿರಲಿಲ್ಲ. ಹಾಗಾಗಿ ಎರಡನೇ ವಾರಕ್ಕೆ ನನ್ನನ್ನು ಮನೆಯಿಂದ ಆಚೆ ಹಾಕಿದರು ಎಂದು ನೇರವಾಗಿಯೇ ಆರೋಪ ಮಾಡಿದ್ದರು.
ಆಲಿಯಾ ಸಿದ್ದಿಕಿ ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಅವರ ಮಾಜಿ ಪತ್ನಿ. ನವಾಜುದ್ದೀನ್ ಅವರು ಸಲ್ಮಾನ್ ಖಾನ್ (Salman Khan)ಗೆ ತೀರಾ ಆಪ್ತರು. ಬಿಗ್ ಬಾಸ್ ಮನೆಯಲ್ಲಿ ಪತಿ ನವಾಜುದ್ದೀನ್ ಬಗ್ಗೆ ಹಲವಾರು ವಿಚಾರಗಳನ್ನು ಮಾತನಾಡುವುದಕ್ಕೆ ಶುರು ಮಾಡಿದ್ದರು. ತಮ್ಮ ಪತಿ ಎಂಥವರು ಎನ್ನುವ ವಿಚಾರವನ್ನು ಹೇಳಿಕೊಳ್ಳಲು ಹೊರಟಿದ್ದರು. ಅದನ್ನು ತಡೆಯುವುದಕ್ಕಾಗಿಯೇ ತಮ್ಮನ್ನು ಮನೆಯಿಂದ ಆಚೆ ಹಾಕಲಾಗಿದೆ ಎಂದು ಆಲಿಯಾ ಮಾತನಾಡಿದ್ದಾರೆ
ನವಾಜುದ್ದೀನ್ ಜೊತೆಗಿನ ಬಾಂಧವ್ಯವನ್ನು ಮುರಿದುಕೊಂಡು ಆಲಿಯಾ ದೂರವಿದ್ದಾರೆ. ಈಗಾಗಲೇ ಪತಿಯ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಅವೆಲ್ಲವನ್ನೂ ಆಲಿಯಾ ದೊಡ್ಮನೆಯಲ್ಲಿ ಹೇಳಿಕೊಳ್ಳುತ್ತಿದ್ದರು. ಮೊದಲ ದಿನವೇ ಒಂದಷ್ಟು ಸಂಗತಿಗಳನ್ನು ಬಹಿರಂಗ ಪಡಿಸಿದ್ದರು. ಇನ್ನೂ ಹಲವು ವಿಷಯಗಳನ್ನು ಹಂಚಿಕೊಳ್ಳುವುದಾಗಿಯೂ ಅವರು ತಿಳಿಸಿದ್ದರು.
ನವಾಜುದ್ದೀನ್ ವಿಷಯಗಳು ಆಚೆ ಬರುತ್ತವೆ ಎನ್ನುವ ಕಾರಣದಿಂದಾಗಿಯೇ ಸಲ್ಮಾನ್ ಖಾನ್ ಮಧ್ಯ ಪ್ರವೇಶ ಮಾಡಿ ತಮ್ಮನ್ನು ಮನೆಯಿಂದ ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಂತ ನಾನು ಸುಮ್ಮನೆ ಇರಲಾರೆ. ಆಚೆ ಬಂದರೂ, ನನ್ನ ಜೀವನದಲ್ಲಿ ನಡೆದ ಸಂಗತಿಗಳನ್ನು ತಿಳಿಸುತ್ತಲೇ ಇರುತ್ತೇನೆ ಅಂದಿದ್ದಾರೆ ಆಲಿಯಾ. ಇಂತಹ ಪಕ್ಷಪಾತಗಳು ಶೋಗಳಲ್ಲಿ ಇರಬಾರದು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ.
ಬಿಗ್ ಬಾಸ್ (Big Boss) ಶೋ ಮೇಲೆಯೇ ಪಕ್ಷಪಾತದ ಆರೋಪ ಮಾಡಿದ್ದಾರೆ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿ ಆಲಿಯಾ ಸಿದ್ದಿಕಿ (Alia Siddiqui). ಅವರು ನೇರವಾಗಿ ಸಲ್ಮಾನ್ ಖಾನ್ ಮೇಲೆಯೇ ಗೂಬೆ ಕೂರಿಸಿದ್ದು, ನನ್ನೊಳಗಿನ ಹಲವು ಸತ್ಯಗಳು ಆಚೆ ಬರುತ್ತಿದ್ದವು. ಅದು ಸಲ್ಮಾನ್ ಖಾನ್ ಗೆ ಇಷ್ಟವಿರಲಿಲ್ಲ. ಹಾಗಾಗಿ ಎರಡನೇ ವಾರಕ್ಕೆ ನನ್ನನ್ನು ಮನೆಯಿಂದ ಆಚೆ ಹಾಕಿದರು ಎಂದು ನೇರವಾಗಿಯೇ ಆರೋಪ ಮಾಡಿದ್ದಾರೆ.
ಆಲಿಯಾ ಸಿದ್ದಿಕಿ ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರ ಮಾಜಿ ಪತ್ನಿ. ನವಾಜುದ್ದೀನ್ ಅವರು ಸಲ್ಮಾನ್ ಖಾನ್ (Salman Khan)ಗೆ ತೀರಾ ಆಪ್ತರು. ಬಿಗ್ ಬಾಸ್ ಮನೆಯಲ್ಲಿ ಪತಿ ನವಾಜುದ್ದೀನ್ ಬಗ್ಗೆ ಹಲವಾರು ವಿಚಾರಗಳನ್ನು ಮಾತನಾಡುವುದಕ್ಕೆ ಶುರು ಮಾಡಿದ್ದರು. ತಮ್ಮ ಪತಿ ಎಂಥವರು ಎನ್ನುವ ವಿಚಾರವನ್ನು ಹೇಳಿಕೊಳ್ಳಲು ಹೊರಟಿದ್ದರು. ಅದನ್ನು ತಡೆಯುವುದಕ್ಕಾಗಿಯೇ ತಮ್ಮನ್ನು ಮನೆಯಿಂದ ಆಚೆ ಹಾಕಲಾಗಿದೆ ಎಂದು ಆಲಿಯಾ ಮಾತನಾಡಿದ್ದಾರೆ. ಇದನ್ನೂ ಓದಿ:ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಜೊತೆ ಕನ್ನಡಿಗ ಡ್ಯಾನಿಶ್ ನಟನೆ
ನವಾಜುದ್ದೀನ್ ಜೊತೆಗಿನ ಬಾಂಧವ್ಯವನ್ನು ಮುರಿದುಕೊಂಡು ಆಲಿಯಾ ದೂರವಿದ್ದಾರೆ. ಈಗಾಗಲೇ ಪತಿಯ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಅವೆಲ್ಲವನ್ನೂ ಆಲಿಯಾ ದೊಡ್ಮನೆಯಲ್ಲಿ ಹೇಳಿಕೊಳ್ಳುತ್ತಿದ್ದರು. ಮೊದಲ ದಿನವೇ ಒಂದಷ್ಟು ಸಂಗತಿಗಳನ್ನು ಬಹಿರಂಗ ಪಡಿಸಿದ್ದರು. ಇನ್ನೂ ಹಲವು ವಿಷಯಗಳನ್ನು ಹಂಚಿಕೊಳ್ಳುವುದಾಗಿಯೂ ಅವರು ತಿಳಿಸಿದ್ದರು.
ನವಾಜುದ್ದೀನ್ ವಿಷಯಗಳು ಆಚೆ ಬರುತ್ತವೆ ಎನ್ನುವ ಕಾರಣದಿಂದಾಗಿಯೇ ಸಲ್ಮಾನ್ ಖಾನ್ ಮಧ್ಯ ಪ್ರವೇಶ ಮಾಡಿ ತಮ್ಮನ್ನು ಮನೆಯಿಂದ ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಂತ ನಾನು ಸುಮ್ಮನೆ ಇರಲಾರೆ. ಆಚೆ ಬಂದರೂ, ನನ್ನ ಜೀವನದಲ್ಲಿ ನಡೆದ ಸಂಗತಿಗಳನ್ನು ತಿಳಿಸುತ್ತಲೇ ಇರುತ್ತೇನೆ ಅಂದಿದ್ದಾರೆ ಆಲಿಯಾ. ಇಂತಹ ಪಕ್ಷಪಾತಗಳು ಶೋಗಳಲ್ಲಿ ಇರಬಾರದು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ.
ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಅವರ ಪತ್ನಿ ಆಲಿಯಾ (Aaliya) ಅವರು ಬಿಗ್ ಬಾಸ್ ಹಿಂದಿ ಒಟಿಟಿ 2ಗೆ (Bigg Boss Ott2) ಕಾಲಿಟ್ಟಿದ್ದರು. ಜೂನ್ 17ಕ್ಕೆ ಆರಂಭವಾದ ಈ ಶೋ ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಮೂಡಿ ಬರುತ್ತಿದೆ. ಬಿಗ್ ಬಾಸ್ ಒಟಿಟಿಯಲ್ಲಿನ ಆಲಿಯಾ ಸಿದ್ಧಿಕಿ ಆಟಕ್ಕೆ ಈಗ ಬ್ರೇಕ್ ಬಿದ್ದಿದೆ. ದೊಡ್ಮನೆಗೆ ಕಾಲಿಟ್ಟ 2ನೇ ವಾರಕ್ಕೆ ಆಲಿಯಾ ಔಟ್ ಆಗಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾ ಮುನ್ನ ಫ್ಯಾಮಿಲಿ ಜೊತೆ ರಾಜಮೌಳಿ ಟ್ರಿಪ್
ಹಿಂದಿ ಸಿನಿಮಾರಂಗದ ಪ್ರತಿಭಾನ್ವಿತ ನಟ ನವಾಜುದ್ದೀನ್ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಿಂತ ಪತ್ನಿ ಆಲಿಯಾ ಜೊತೆಗಿನ ಸಂಸಾರದ ಗಲಾಟೆ ಮೂಲಕವೇ ಸುದ್ದಿಯಲ್ಲಿದ್ರು. ನವಾಜುದ್ದೀನ್ ತಮಗೆ ಹಿಂಸೆ ಮಾಡುತ್ತಾರೆ. ಮನೆಯಿಂದ ಹೊರ ದಬ್ಬಿದ್ದಾರೆ ಎಂದು ನಟನ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಗೋಗರೆದಿದ್ರು. ಡಿವೋರ್ಸ್ ಆಗುವ ಹಂತದಲ್ಲಿದೆ ಎಂದು ಹೇಳಾಗುತ್ತಿದೆ. ಇದೀಗ ಬಿಗ್ ಬಾಸ್ ಶೋಗೆ ಬಂದು ಏನೋ ಸಾಬೀತು ಮಾಡಲು ಹೋಗಿ ಆಲಿಯಾ ಮುಖಭಂಗ ಅನುಭವಿಸಿದ್ದಾರೆ.
ಆಲಿಯಾ ಸಿದ್ಧಿಕಿ ಅವರು ನಿರ್ಮಾಪಕಿ ಕೂಡ ಹೌದು. ಆದರೆ ಅವರಿಗೆ ತಮ್ಮದೇ ಆದಂತಹ ಐಡೆಂಟಿಟಿ ಇರಲಿಲ್ಲ. ಕೇವಲ ಸ್ಟಾರ್ ನಟನ ಪತ್ನಿ ಎಂದು ಅವರನ್ನು ಗುರುತಿಸಲಾಗಿತ್ತು. ಅಲ್ಲದೇ ಗಂಡನ ಜೊತೆ ಕಿರಿಕ್ ಮಾಡಿಕೊಂಡ ಬಳಿಕ ಅವರಿಗೆ ಬೇರೆ ಐಡೆಂಟಿಟಿ ಪಡೆಯುವುದು ಅನಿವಾರ್ಯ ಆಗಿತ್ತು. ಆ ಕಾರಣಕ್ಕಾಗಿ ಅವರು ಬಿಗ್ ಬಾಸ್ ಒಟಿಟಿ 2 ಶೋಗೆ ಬಂದಿದ್ದರು. ಈ ವೇದಿಕೆಯಲ್ಲಿ ತಮ್ಮ ಜೀವನದ ವಿವರಗಳನ್ನು ಜನರಿಗೆ ತಿಳಿಸಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಆದರೆ ಈಗ ಆಲಿಯಾ ಮಿಡ್ ಮೀಕ್ನಲ್ಲಿ ಎಲಿಮಿನೇಟ್ (Elimination) ಆಗಿದ್ದಾರೆ. ಹಾಗಾಗಿ ಅವರ ಯೋಜನೆಗೆ ಬ್ರೇಕ್ ಬಿದ್ದಿದೆ.
ನವಾಜುದ್ದೀನ್ ಜೊತೆಗಿನ ಮನಸ್ತಾಪದ ನಂತರ ಹೊಸ ಬಾಯ್ಫ್ರೆಂಡ್ ಜೊತೆ ಆಲಿಯಾ ಎಂಗೇಜ್ ಆಗುತ್ತಿದ್ದಾರೆ. ನವಾಜುದ್ದೀನ್ ಜೊತೆಗಿನ ದಾಂಪತ್ಯಕ್ಕೆ ಡಿವೋರ್ಸ್ ಸಿಕ್ಕ ಮೇಲೆ ಬಾಯ್ಫ್ರೆಂಡ್ ಜೊತೆ ಆಲಿಯಾ ಮದುವೆ ಎಂದು ಹೇಳಲಾಗುತ್ತಿದೆ.
ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ (Nawazuddin Siddiqui) ಅವರು ಸಾಕಷ್ಟು ವಿಭಿನ್ನ ಪಾತ್ರಗಳ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅವರ ಮನೋಜ್ಞ ನಟನೆಗೆ ಬಿಟೌನ್ ಭೇಷ್ ಎಂದಿದ್ದು ಇದೆ. ಈಗ ‘ಟೀಕು ವೆಡ್ಸ್ ಶೇರು’ (Tiku Weds Sheru) ಚಿತ್ರದ ಮೂಲಕ ಸದ್ದು ಮಾಡ್ತಿರೋ ನವಾಜುದ್ದೀನ್ ಮೇಲೆ ಅಭಿಮಾನಿಗಳು ಕಿಡಿಕಾರಿದ್ದಾರೆ. ಮಗಳ ವಯಸ್ಸಿನ ಹುಡುಗಿ ಜೊತೆ ರೊಮ್ಯಾನ್ಸ್, ಮತ್ತು ಲಿಪ್ಲಾಕ್ ಮಾಡಿರೋ ನವಾಜುದ್ದೀನ್ಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
ನವಾಜುದ್ದೀನ್ ಸಿದ್ಧಿಕಿ ಅವರು ಇತ್ತೀಚಿಗೆ ತಮ್ಮ ವೈಯಕ್ತಿಕ ವಿಷ್ಯವಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಕುಟುಂಬಿಕ ಕಲಹ ಬೀದಿಯಲ್ಲಿ ರಂಪಾಟ ಆಗುತ್ತಿದೆ. ಇದರ ನಡುವೆ ಅವರ ನಟನೆಯ ಸಿನಿಮಾದ ಟ್ರೈಲರ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ‘ಟೀಕು ವೆಡ್ಸ್ ಶೇರು’ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನವಾಜುದ್ದೀನ್ ಅವರು ಶೇರು ಎಂಬ ಜ್ಯೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದಾರೆ. ಬಾಲಿವುಡ್ನಲ್ಲಿ ಸೆಟ್ಲ್ ಆಗಬೇಕು ಎಂಬುದು ಶೇರು ಕನಸಾಗಿರುತ್ತದೆ. ಟೀಕು (ಅವ್ನೀತ್) ಕೂಡ ಹೀರೋಯಿನ್ ಆಗಬೇಕು ಎಂದು ಕನಸು ಕಂಡವಳು. ಶೇರುನ ಮದುವೆ ಆದರೆ ಭೋಪಾಲ್ ಬಿಟ್ಟು ಮುಂಬೈ ಸೇರಬಹುದು, ಸಿನಿಮಾ ಆಫರ್ ಪಡೆಯಬಹುದು ಎಂಬುದು ಟೀಕು ಆಲೋಚನೆ. ಈ ಕಾರಣಕ್ಕೆ ಆಕೆ ಮದುವೆಗೆ ಒಪ್ಪಿಕೊಳ್ಳುತ್ತಾಳೆ. ಇದು ಟ್ರೈಲರ್ನಲ್ಲಿ ತೋರಿಸಿರುವ ಅಂಶವಾಗಿದೆ. ಇದನ್ನೂ ಓದಿ:ಮಾಡ್ರನ್ ಅವತಾರ ಬದಿಗಿಟ್ಟು ಲೆಹೆಂಗಾದಲ್ಲಿ ಮಿಂಚಿದ ‘ಪುಟ್ಟಗೌರಿ’- ಸೊಂಟ ಸೂಪರ್ ಎಂದ ನೆಟ್ಟಿಗರು
ನವಾಜುದ್ದೀನ್, ಅವ್ನೀತ್ ಕೌರ್ ಲಿಪ್ ಲಾಕ್ ದೃಶ್ಯ ಇದೆ. ನವಾಜುದ್ದೀನ್ ವಯಸ್ಸು 49. ಅವ್ನೀತ್ಗೆ 21 ವರ್ಷ. ಮಗಳ ವಯಸ್ಸಿನ ಹುಡುಗಿಯ ಜೊತೆ ನವಾಜುದ್ದೀನ್ ಲಿಪ್ ಲಾಕ್ ಮಾಡಿದ್ದು ಎಷ್ಟು ಸರಿ ಎಂಬುದು ಅನೇಕರ ಪ್ರಶ್ನೆಯಾಗಿದೆ. ಈ ಬಗ್ಗೆ ಸಾಕಷ್ಟು ಟೀಕೆ ಕೇಳಿ ಬಂದಿದೆ. 21 ವರ್ಷದ ಯುವತಿ ಜೊತೆ ರೊಮ್ಯಾನ್ಸ್ ಮಾಡೋ ಅವಶ್ಯಕತೆ ಇದ್ಯಾ.? ಇಬ್ಬರಿಗೂ ವಯಸ್ಸಿನ ಅಂತರ ಎಷ್ಟಿದೆ ಗೊತ್ತಾ ಅಂತಾ ಸಿನಿಮಾ ತಂಡಕ್ಕೂ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ಟೀಂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಓಟಿಟಿ ಮೂಲಕ ಈ ಸಿನಿಮಾ ಜೂನ್ 23ರಂದು ರಿಲೀಸ್ ಆಗಲಿದೆ.
ನಟ ನವಾಜುದ್ದೀನ್ ಬಾಲಿವುಡ್ನ ಖ್ಯಾತ ನಟ, ವಿಭಿನ್ನ ಪಾತ್ರ, ಕಥೆಯ ಮೂಲಕ ಬಿಟೌನ್ನಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ರಿಲೀಸ್ಗಿರೋ ‘ಟೀಕು ವೆಡ್ಸ್ ಶೇರು’ ಅದೆಷ್ಟರ ಮಟ್ಟಿಗೆ ಸಿನಿಮಾ ಸೌಂಡ್ ಮಾಡುತ್ತೆ ಅಂತಾ ಕಾದುನೋಡಬೇಕಿದೆ.
ಬಾಲಿವುಡ್ (Bollywood) ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಅವರು ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರ ಸಾಕಷ್ಟು ಸುದ್ದಿಯಾಗ್ತಿದ್ದಾರೆ. ನವಾಜುದ್ದೀನ್ ಅವರ ಮನೆ ಕಲಹ ಬೀದಿ ರಂಪಾಟವಾಗಿದೆ. ನಟನ ವಿರುದ್ಧ ಪತ್ನಿ ಕಿರುಕುಳ ಕೇಸ್ ದಾಖಲಿಸಿದ್ದರು. ಈ ಬೆನ್ನಲ್ಲೇ ನವಾಜುದ್ದೀನ್ ಅವರು ಶೆಹನಾಜ್ಗೆ ಸಂದರ್ಶನವೊಂದರಲ್ಲಿ ಪ್ರೀತಿ ಪಾಠ ಮಾಡಿದ್ದಾರೆ. ನನ್ನ ಪ್ರೀತಿ ಶುದ್ಧ ಎಂದು ನಟ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ
ಇತ್ತೀಚಿಗೆ ನವಾಜುದ್ದೀನ್ ಅವರು ಶೆಹನಾಜ್ ಗಿಲ್ (Shehnaaz Gill Show) ಅವರ ಟಾಕ್ ಶೋನಲ್ಲಿ ಭಾಗವಹಿಸಿದ್ದಾರೆ. ಶೆಹನಾಜ್ ಜೊತೆ ಸಿನಿಮಾ ಜರ್ನಿ, ವೈಯಕ್ತಿಕ ವಿಚಾರ, ಪ್ರೀತಿ, ಸಿನಿಮಾ ಸೋಲು-ಗೆಲುವಿನ ಬಗ್ಗೆ ಹೀಗೆ ಸಾಕಷ್ಟು ವಿಚಾರಗಳನ್ನ ಶೇರ್ ಮಾಡಿದ್ದಾರೆ. ಈ ಕುರಿತ ಪ್ರೋಮೋ ಕೂಡ ನಟಿಯ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸದ್ದು ಮಾಡ್ತಿದೆ. ಪ್ರೀತಿಯ (Love) ಬಗ್ಗೆ ನಟ ಮಾತನಾಡಿದ್ದಾರೆ.
ನಾನು ಫ್ರಾಡ್ ಇರಬಹುದು. ನಾನು ಅನೇಕ ಬಾರಿ ಸುಳ್ಳುಗಳನ್ನು ಹೇಳಿರಬಹುದು. ಆದರೆ, ನನ್ನ ಪ್ರೀತಿ ಯಾವಾಗಲೂ ಶುದ್ಧ. ಕಣ್ಣುಗಳ ಮಧ್ಯೆ ಅರಳೋದು ಪ್ರೀತಿ ಎಂದಿದ್ದಾರೆ ನವಾಜುದ್ದೀನ್. ಸಾಕಷ್ಟು ದೂರ ಸಾಗಬೇಕು ಎಂದರೆ ಗಿಮಿಕ್ ಮಾಡಬಾರದು. ಬದಲಿಗೆ ಕಷ್ಟಪಡಬೇಕು. ನಾನು ಸ್ವಲ್ಪ ಗಿಮಿಕ್ ಮಾಡಿದ್ದೇನೆ ಎಂದು ನವಾಜುದ್ದೀನ್ ಒಪ್ಪಿಕೊಂಡಿದ್ದಾರೆ. ನೀವು ಜೀವನದಲ್ಲಿ ಏನಾಗಬೇಕು ಎಂದುಕೊಂಡಿದ್ದೀರಿ ಎಂದು ನವಾಜುದ್ದೀನ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿರುವ ಶೆಹನಾಜ್, ಗಾಯನ, ನಟನೆ, ಫ್ಯಾಷನ್. ಇದೆಲ್ಲವನ್ನೂ ಮಿಕ್ಸ್ ಮಾಡಿದ್ದೇನೆ ಎಂದಿದ್ದಾರೆ.
ಸದ್ಯ ಈ ಪ್ರೋಮೋ ವೈರಲ್ ಸಖತ್ ಸದ್ದು ಮಾಡ್ತಿದೆ. ಅನೇಕರು ಪೂರ್ತಿ ಎಪಿಸೋಡ್ ನೋಡಲು ಕಾಯುತ್ತಿದ್ದಾರೆ. ಶೆಹನಾಜ್ ಅವರು ‘ಬಿಗ್ ಬಾಸ್’ ಮೂಲಕ ಫೇಮಸ್ ಆದವರು. ಇತ್ತೀಚೆಗೆ ತೆರೆಗೆ ಬಂದ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ಅವರು ನಟಿಸಿದ್ದರು.
ಬಾಲಿವುಡ್ ಕಂಡ ಅತ್ಯದ್ಭುತ ನಟರಲ್ಲಿ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಕೂಡ ಒಬ್ಬರು. ಯಾವುದೇ ಪಾತ್ರ ಕೊಟ್ಟರು ಲೀಲಾಜಾಲವಾಗಿ ಅಭಿನಯಿಸುವ, ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದಿರುವ ಸಿದ್ದಿಕಿ ಸೈಂಧವ್ (Saindhav) ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟ್ರೀಯತ್ತ ಹೆಜ್ಜೆ ಇಟ್ಟಿದ್ದಾರೆ.
ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ (Victory Venkatesh) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’. ಶೈಲೇಶ್ (Shailesh) ಕೋಲನು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ವಿಲನ್ ಆಗಿ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಕ್ಯಾರೆಕ್ಟರ್ ಪೋಸ್ಟರ್ ರಿಲೀಸ್ ಮಾಡಿದೆ. ವಿಕಾಸ್ ಮಲಿಕ್ ಎಂಬ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ, ದುಬಾರಿ ಕಾರಿನ ಬಾನೆಟ್ ಮೇಲೆ ಕುಳಿತು ಬೀಡಿ ಸೇದುತ್ತಾ ಸಖತ್ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ.
ಶ್ರದ್ಧಾ ಶ್ರೀನಾಥ್ ಮನೋಜ್ಞ ಎಂಬ ಪಾತ್ರದಲ್ಲಿ, ಡಾ ರೇಣು ಪಾತ್ರದಲ್ಲಿ ರುಹಾನಿ ಶರ್ಮಾ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲಾ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ. ಇದನ್ನೂ ಓದಿ:ಕಾಲೆಳೆದ ನಟಿಗೆ ಸ್ನೇಹದ ಹಸ್ತಚಾಚಿದ ರಶ್ಮಿಕಾ ಮಂದಣ್ಣ
ನಿಹಾರಿಕಾ ಎಂಟರ್ಟೈನ್ಮೆಂಟ್ ಅಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂಧವ್ ಚಿತ್ರಕ್ಕೆ ಕಿಶೋರ್ ತಲ್ಲೂರ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸೈಂಧವ ಪ್ಯಾನ್ ಇಂಡಿಯಾ ಚಲನಚಿತ್ರವಾಗಿದ್ದು, ಡಿಸೆಂಬರ್ 22 ರಂದು ಕ್ರಿಸ್ಮಸ್ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಬಾಲಿವುಡ್ (Bollywood) ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಹಾಗೂ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ (Rishabh Shetty) ಜೊತೆಗಿನ ಸ್ನೇಹ ತೀರಾ ಹಳೆಯದು ಎನ್ನುವ ಮೂಲಕ ನವಾಜುದ್ದೀನ್ ಸಿದ್ಧಿಕಿ ಅಚ್ಚರಿಯ ಸಂದೇಶವೊಂದನ್ನು ರವಾಣಿಸಿದ್ದಾರೆ. ಕಾಂತಾರ (Kantara) ಸಿನಿಮಾದ ಯಶಸ್ಸಿನ ನಂತರ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ನವಾಜುದ್ದೀನ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅದೊಂದು ಆಕಸ್ಮಿಕ ಭೇಟಿ ಎಂದು ಹೇಳಲಾಗಿತ್ತು.
ಕಾಂತಾರ ಯಶಸ್ಸಿನ ಬೆನ್ನಲ್ಲೇ ತಮ್ಮ ಮನೆಗೆ ರಿಷಬ್ ಮತ್ತು ಟೀಮ್ ಕರೆಯಿಸಿಕೊಂಡಿದ್ದ ನವಾಜುದ್ದೀನ್ ಕಾಂತಾರ ಟೀಮ್ ಗೆ ಗೌರವ ಸೂಚಿಸಿದ್ದರು. ರಜನಿಕಾಂತ್ ಸೇರಿದಂತೆ ಹಲವರು ಇದೇ ರೀತಿಯಲ್ಲೇ ಗೌರವ ನೀಡಿದ್ದರಿಂದ, ನವಾಜುದ್ದೀನ್ ಭೇಟಿ ಕೂಡ ಹಾಗೆಯೇ ಎಂದು ನಂಬಲಾಗಿತ್ತು. ಆದರೆ, ನವಾಜುದ್ದೀನ್ ಮತ್ತು ರಿಷಬ್ ಹಲವು ವರ್ಷಗಳ ಸ್ನೇಹಿತರು (Friends) ಎನ್ನುವುದನ್ನು ಸ್ವತಃ ನವಾಜುದ್ದೀನ್ ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ‘ಖುಷಿ’ಯ ಹಾಡು ರಿಲೀಸ್
ರಿಷಬ್ ಮತ್ತು ನಾನು ಹಳೆಯ ಸ್ನೇಹಿತರು. ರಂಗಭೂಮಿಯಲ್ಲಿ ನಮ್ಮಿಬ್ಬರಿಗೂ ಒಬ್ಬರೇ ಗುರುಗಳು. ಅವರು ರಂಗಭೂಮಿಯಲ್ಲಿ ಸಾಕಷ್ಟು ಸಕ್ರೀಯರಾಗಿದ್ದಾರೆ. ಆದರೆ, ನಾನು ಅಲ್ಲಿಂದ ಬಂದು ಸಿನಿಮಾ ರಂಗದಲ್ಲಿ ತೊಡಗಿಕೊಂಡು ಬಿಟ್ಟೆ. ನನಗೂ ಮತ್ತು ರಿಷಬ್ ಯೋಜನೆಗಳಿಗೂ ಸಾಕಷ್ಟು ಸಾಮಿಪ್ಯವಿದೆ. ಹಾಗಾಗಿ ಒಟ್ಟಿಗೆ ಕೂತು ಕೆಲ ಹೊತ್ತು ಹರಟೆ ಹೊಡೆದೆವು ಎಂದು ನವಾಜುದ್ದೀನ್ ಹೇಳಿಕೊಂಡಿದ್ದಾರೆ.
ಕಾಂತಾರ 2 ಸಿನಿಮಾದಲ್ಲಿ ನವಾಜುದ್ದೀನ್ ನಟಿಸಲಿದ್ದಾರೆ ಎನ್ನುವ ಸುದ್ದಿಯಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸಿನಿಮಾ ಶುರುವಾಗಲು ಇನ್ನೂ ಟೈಮ್ ಇದೆ. ನನಗೆ ಅದರಲ್ಲಿ ಪಾತ್ರವಿದೆಯೋ ಇಲ್ಲವೋ ಗೊತ್ತಿಲ್ಲ. ಇದ್ದರೆ, ಅವರು ಕರೆದರೆ ಕಂಡಿತಾ ಹೋಗಿ ನಟಿಸುತ್ತೇನೆ ಎಂದು ತಿಳಿಸಿದ್ದಾರೆ.
ಯೂಟರ್ನ್ ಸಿನಿಮಾ ಮೂಲಕ ಕನ್ನಡ ಸಿನಿಪ್ರೇಕ್ಷಕರನ್ನು ರಂಜಿಸಿದ್ದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ (Shraddha Srinath) ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಾಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಸಕ್ರಿಯರಾಗಿರುವ ಶ್ರದ್ಧಾ ಕೈ ತುಂಬಾ ಅವಕಾಶಗಳಿವೆ. ಇದೀಗ ಅವರು ಪ್ಯಾನ್ ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ ‘ಸೈಂಧವ್’ ಭಾರೀ ನಿರೀಕ್ಷೆ ಹೆಚ್ಚಿಸಿದೆ. ಶೈಲೇಶ್ ಕೋಲನು ಸಾರಥ್ಯದಲ್ಲಿ ಮೂಡಿ ಬರ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಸದ್ಯ ವೈಜಾಗ್ ನಲ್ಲಿ ಎರಡನೇ ಹಂತದ ಶೂಟಿಂಗ್ ನಡೆಯುತ್ತಿದೆ. ನಿಹಾರಿಕಾ ಎಂಟರ್ ಟೈನ್ಮೆಂಟ್ ನಡಿ ವೆಂಕಟ್ ಬೋಯನಪಲ್ಲಿ ನಿರ್ಮಿಸುತ್ತಿರುವ ಸೈಂಧವ್ ಗೆ ಕನ್ನಡತಿ ಶ್ರದ್ಧಾ ಶ್ರೀನಾಥ್ ಎಂಟ್ರಿ ಕೊಟ್ಟಿದ್ದಾರೆ. ವಿಕ್ಟರಿಗೆ ವೆಂಕಟೇಶ್ ಗೆ ಜೋಡಿಯಾಗಿ ನಟಿಸ್ತಿರುವ ಮೂಗುತಿ ಸುಂದರಿಯ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ.
ಸೈಂಧವ್ ಸಿನಿಮಾದಲ್ಲಿ ಶ್ರದ್ಧಾ ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಅವರ ಫಸ್ಟ್ ಲುಕ್ ನೋಡುಗರ ಗಮನಸೆಳೆಯುತ್ತಿದೆ. ಸೀರೆಯುಟ್ಟು ಹೋಮ್ಲಿ ಲುಕ್ ಕಾಣಿಸಿಕೊಂಡಿರುವ ಶ್ರದ್ದಾ, ಕೈಯಲ್ಲಿ ಟಿಫನ್ ಬಾಕ್ಸ್ ಹಿಡಿದು ಗಂಭೀರ ಆಲೋಚನೆಯಲ್ಲಿ ತೊಡಗಿದ್ದಾರೆ. ಜೆರ್ಸಿ ಸಿನಿಮಾದಲ್ಲಿ ಅದ್ಭುತ ಅಭಿಯನದ ಪ್ರದರ್ಶಿಸಿದ್ದ ಶ್ರದ್ದಾ ಶ್ರೀನಾಥ್, ಸೈಂಧವ್ ಸಿನಿಮಾದಲ್ಲಿ ಮತ್ತೊಮ್ಮೆ ಎಲ್ಲರ ಗಮನಸೆಳೆಯಲಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್ಟಿಆರ್ ಎದುರು ಅಬ್ಬರಿಸಲಿದ್ದಾರೆ ಸೈಫ್ ಅಲಿ ಖಾನ್
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್ ಸಿನಿರಂಗ ಪ್ರವೇಶಿಸಿದ್ದಾರೆ. ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರುವ ಸೈಂಧವ್ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸ ಮಾಡಿದ್ದು, ಕಿಶೋರ್ ತಲ್ಲೂರ್ ಸಹ ನಿರ್ಮಾಪಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶೀಘ್ರದಲ್ಲೇ ಇತರ ಪಾತ್ರವರ್ಗ ರಿವೀಲ್ ಮಾಡಲಿರುವ ಚಿತ್ರತಂಡ, ಸೈಂಧವ್ ಸಿನಿಮಾವನ್ನು ಡಿಸೆಂಬರ್ 22 ರಂದು ಕ್ರಿಸ್ಮಸ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.