Tag: natives

  • ಈ ಚಿತ್ರದಲ್ಲಿ ಎಷ್ಟು ಹುಲಿಗಳಿವೆ?- ಲಾಕ್‍ಡೌನ್ ವೇಳೆ ನೆಟ್ಟಿಗರ ತಲೆ ಕೆಡಿಸಿದ ಫೋಟೋ

    ಈ ಚಿತ್ರದಲ್ಲಿ ಎಷ್ಟು ಹುಲಿಗಳಿವೆ?- ಲಾಕ್‍ಡೌನ್ ವೇಳೆ ನೆಟ್ಟಿಗರ ತಲೆ ಕೆಡಿಸಿದ ಫೋಟೋ

    – ಬಾಲಿವುಡ್ ಮಂದಿಗೂ ಸವಾಲ್ ಆಯ್ತು ಹುಲಿಗಳ ಸಂಖ್ಯೆ

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಹುಲಿಗಳಿರುವ ಒಂದು ಚಿತ್ರ ಟ್ರೆಂಡ್ ಹುಟ್ಟುಹಾಕುತ್ತಿದ್ದು, ಈ ಫೋಟೋದಲ್ಲಿ ಎಷ್ಟು ಹುಲಿಗಳಿವೆ ಎಂದು ನೆಟ್ಟಿಗರು ಸಖತ್ ತಲೆಕೆಡಿಸಿಕೊಂಡಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ನಡುವೆ ಮನೆಯಲ್ಲೇ ಕುಳಿತಿರುವ ಸಾಮಾನ್ಯ ಜನರು ಮತ್ತು ಸೆಲೆಬ್ರಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿವಾಗಿ ಇದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಹುಲಿಗಳಿರುವ ಒಂದು ಫೋಟೋ ಸಖತ್ ಶೇರ್ ಆಗುತ್ತಿದ್ದು, ಅದರಲ್ಲಿ ಎಷ್ಟು ಹುಲಿಗಳಿವೆ ಎಂದು ಕಂಡು ಹಿಡಿಯಲು ನೆಟ್ಟಿಗರು ತುಂಬ ಕಷ್ಟಪಡುತ್ತಿದ್ದಾರೆ.

    ಮೊದಲಿಗೆ ಟ್ವಿಟ್ಟರ್ ಬಳಕೆದಾರ ಶರ್ಮಾ ನೀರ್ ಎಂಬುವವರು ಬುಧವಾರ ಈ ಚಿತ್ರವನ್ನು ಹಂಚಿಕೊಂಡು ಇದರಲ್ಲಿ ಎಷ್ಟು ಹುಲಿಗಳಿವೆ ಕಂಡುಹಿಡಿಯಿರಿ ಎಂದು ಚಾಲೆಂಜ್ ಮಾಡಿದ್ದಾರೆ. ಈ ಚಿತ್ರದಲ್ಲಿ ಮೊದಲ ನೋಡಲು ಎರಡು ದೊಡ್ಡ ಹುಲಿಗಳು ಮತ್ತು ಎರಡು ಹುಲಿ ಮರಿಗಳು ಕಾಣುತ್ತವೆ. ಆದರೆ ಇದನ್ನೂ ಹತ್ತಿರದಿಂದ ಗಮನಿಸಿ ನೋಡಿದರೆ ಬಹಳ ಹುಲಿಗಳ ಚಿತ್ರ ನಮಗೆ ಕಂಡು ಬರುತ್ತವೆ. ಸದ್ಯ ಟ್ವಿಟ್ಟರ್ ನಲ್ಲಿ ಈ ಚಿತ್ರ ನೆಟ್ಟರಿಗರ ಕುತೂಹಲಕ್ಕೆ ಕಾರಣವಾಗಿದೆ.

    ಈ ಚಿತ್ರದ ಕುತೂಹಲದ ಕಥೆ ಬಾಲಿವುಡ್ ಮಂದಿಯ ತಲೆಯನ್ನು ಕೆಡಿಸಿದ್ದು, ಈ ಚಿತ್ರವನ್ನು ನೋಡಿದ ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್ ಕೂಡ ಚಿತ್ರದಲ್ಲಿರುವ ಹುಲಿಗಳನ್ನು ಎಣಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಗ್‍ಬಿ ಈ ಚಿತ್ರದಲ್ಲಿ 11 ಹುಲಿಗಳಿವೆ ಎಂದು ಬರೆದುಕೊಂಡಿದ್ದಾರೆ. ಬಿಗ್‍ಬಿ ನಂತರ ಬಾಲಿವುಡ್ ನಟಿ ದಿಯಾ ಮಿರ್ಜಾ ಕೂಡ ಹುಲಿಗಳನ್ನು ಎಣಿಸಿದ್ದು, ಇದರಲ್ಲಿ 16 ಹುಲಿಗಳಿವೇ ಎಂದು ಕಮೆಂಟ್ ಮಾಡಿದ್ದಾರೆ.

    https://twitter.com/Ajay_Singh56/status/1253155513472253952

    ದಿಯಾ ಮಿರ್ಜಾ ಅವರ ಸಂಖ್ಯೆಯನ್ನು ಒಪ್ಪಿಕೊಂಡಿರುವ ಬಾಲಿವುಡ್‍ನ ಮೊತ್ತೋರ್ವ ನಟಿ ಪ್ರಾಚಿ ದೇಸಾಯಿ, ಹೌದು ಈ ಚಿತ್ರದಲ್ಲಿ 16 ಹುಲಿಗಳು ಇವೆ ಇದೆ ಕಮೆಂಟ್ ಮಾಡಿದ್ದಾರೆ. ಆದರೆ ಟ್ವಿಟ್ಟರ್ ಬಳಕೆದಾರರು ಈ ಚಿತ್ರವನ್ನು ನೋಡಿ ತಮ್ಮದೇ ಅದ ಉತ್ತರಗಳನ್ನು ನೀಡುತ್ತಿದ್ದು, ಕೆಲವರು 20 ಹುಲಿಗಳಿವೆ 18 ಹುಲಿಗಳು ಇದ್ದಾವೆ ಎಂದು ಫೋಟೋವನ್ನು ಮಾರ್ಕ್ ಮಾಡಿ ಟ್ವೀಟ್ ಮಾಡಿದ್ದಾರೆ.

  • ನೆಲಮಂಗಲದ ಡೆಡ್ಲಿ ಸ್ಪಾಟ್- ವಾಹನ ಸವಾರರು ಸ್ವಲ್ಪ ಯಾಮಾರಿದ್ರು ಪ್ರಾಣಕ್ಕೆ ಕುತ್ತು!

    ನೆಲಮಂಗಲದ ಡೆಡ್ಲಿ ಸ್ಪಾಟ್- ವಾಹನ ಸವಾರರು ಸ್ವಲ್ಪ ಯಾಮಾರಿದ್ರು ಪ್ರಾಣಕ್ಕೆ ಕುತ್ತು!

    ಬೆಂಗಳೂರು: ಸಿಲಿಕಾನ್ ಸಿಟಿಯ ಹೊರವಲಯದಲ್ಲೊಂದು ಡೆಡ್ಲಿ ಸ್ಪಾಟ್ ಇದೆ. ಈ ಮಾರ್ಗದಲ್ಲಿ ಪ್ರಯಾಣಿಸುವವರು ಕೊಂಚ ಯಾಮಾರಿದರೂ ಪ್ರಾಣಾಪಾಯ ಕಟ್ಟಿಟ್ಟಬುತ್ತಿ.

    ಹೌದು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡು ರಾಯರಪಾಳ್ಯ ಗ್ರಾಮವಿದೆ. ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಇಲ್ಲಿನ ಬಸ್ ನಿಲ್ದಾಣದ ಬಳಿ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇವೆ. ಆದ್ದರಿಂದ ನೆಲಮಂಗಲ ಮುಖಾಂತರ ತುಮಕೂರಿಗೆ ಪ್ರಯಾಣಿಸುವ ಈ ರಸ್ತೆಯಲ್ಲಿ ಸಂಚರಿಸುವಾಗ ಪ್ರಯಾಣಿಕರು ಜೀವವನ್ನ ಕೈಯಲ್ಲಿ ಹಿಡಿದು ಚಲಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

    ಇಲ್ಲಿ ನಡೆದ ಕೆಲವು ಡೆಡ್ಲಿ ಆಕ್ಸಿಡೆಂಟ್ಸ್ ಗಳು ಡಾಬಾವೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನ ನೋಡಿದರೆ ಒಮ್ಮೆ ಎದೆ ಝಲ್ ಎನ್ನಿಸುತ್ತದೆ. ಅಲ್ಲದೆ ಇಲ್ಲಿನ ಗ್ರಾಮಸ್ಥರು ಪ್ರತಿದಿನ ಅಪಘಾತಗಳನ್ನು ನೋಡಿ ನೋಡಿ ಬೇಸರವಾಗಿದ್ದಾರೆ. ಒಂದೇ ಸ್ಥಳದಲ್ಲಿ ಹಲವಾರು ಅಪಘಾತಗಳಗಿದ್ದು, ಹಲವರು ಸಾವನ್ನಪ್ಪಿದ್ದರೇ, ಕೆಲವರು ಗಾಯಾಳುಗಳಾಗಿ ಈಗಲೂ ತಮ್ಮ ಜೀವನವನ್ನು ಕಷ್ಟದಲ್ಲೇ ಕಳೆಯುತ್ತಿದ್ದಾರೆ.

    ರಾಯರಪಾಳ್ಯ ಗ್ರಾಮದ ಬಸ್ ನಿಲ್ದಾಣದ ಬಳಿಯೇ ರಸ್ತೆ ತಿರುವು ಇರುವುದರಿಂದ ಇಲ್ಲಿ ವಾಹನಗಳು ರಸ್ತೆ ದಾಟುವಾಗ ಅಥವಾ ವಾಹನವನ್ನು ತಿರುಗುಸಿಕೊಂಡು ಹೋಗುವಾಗ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಸ್ಥಳೀಯರು ಸೂಕ್ತವಾದ ಅಂಡರ್‍ಪಾಸ್ ಅಥವಾ ಸ್ಕೈ ವಾಕರ್ ಗಳನ್ನು ನಿರ್ಮಾಣ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.